Tag: electionResult 2017

  • ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಬಾಗಲಕೋಟೆ: ಬಿಜೆಪಿಯಿಂದ ಇವಿಎಂ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಮತ್ತು ಅತಿಯಾದ ಸುಳ್ಳುಗಳೇ ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದ್ದಾರೆ.

    ಚುನಾವಣಾ ಫಲಿತಾಂಶದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಹಿಮಾಚಲಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದ ಸೋಲಾಗಿರೋದು ನಿಜ. ಗುಜರಾತ್ ದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳಿದ್ದು, ಬಿಜೆಪಿಯಿಂದ ಇವಿಎಮ್ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಹಾಗೂ ಬಿಜೆಪಿಯ ಅತಿಯಾದ ಸುಳ್ಳುಗಳೇ ಕಾಂಗ್ರೆಸ್ ಹಿನ್ನಡೆಗೆ ಕಾರಣ ಅಂತ ಅವರು ಗಂಭೀರ ಆರೋಪ ಮಾಡಿದ್ರು.

    ಆದ್ರೆ ಈ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2018ರ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಪಕ್ಷ. ಇವುಗಳ ಮಧ್ಯೆ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷಕ್ಕೆ ಹೋಗಲ್ಲ. ಒಂದು ವೇಳೆ ಹೋದ್ರೆ ರಾತ್ರಿ ನೀರಿಲ್ಲದ ಬಾವಿ ಕಂಡು ಹಗಲು ಬಿದ್ದಂತೆ ಅಂತ ಅವರು ಹೇಳಿದ್ರು.