Tag: Election Staff

  • ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ಪುರಸಭೆ ಕಚೇರಿಗೆ ಕೋತಿ ಎಂಟ್ರಿ ಕೊಟ್ಟಿದೆ.

    ಪಟ್ಟಣದಲ್ಲಿ ಪುರಸಭೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ವೇಳೆ ಮಂಗವೊಂದು ಪುರಸಭೆ ಕಚೇರಿಗೆ ನುಗ್ಗಿ ಟೇಬಲ್ ಮೇಲೆ ಕುಳಿತು ಚೇಷ್ಟೆ ಮಾಡಿದೆ. ಅಲ್ಲದೆ ಅಧಿಕಾರಿಗಳ ಕೈ ಎಳೆದು, ಮೊಬೈಲ್ ಹಿಡಿದು ಟೇಬಲ್ ಮೇಲೆ ಕುಳಿತು, ಕಚೇರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ತನ್ನ ದರ್ಬಾರ್ ನಡೆಸಿದೆ.

    ಹೊರಗಡೆ ಪೊಲೀಸರ ಕಂಗಾವಲಿನಲ್ಲೇ ಚುನಾವಣೆ ಕಚೇರಿಗೆ ಕೋತಿ ನುಗ್ಗಿ ತನ್ನ ತುಂಟಾಟ ನಡೆಸಿದೆ. ನಂತರ ತುಂಟ ಕಪಿರಾಯನಿಗೆ ಚುನಾವಣಾ ಸಿಬ್ಬಂದಿ ಚಹಾ ಕುಡಿಸಿ ಕಳುಹಿಸಿದ್ದಾರೆ. ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ಬಿಸಿಲಿನಿಂದ ಹೈರಾಣಾದ ಚುನಾವಣಾ ಸಿಬ್ಬಂದಿ ನೆರವಿಗೆ ಬಂದ ಜಿಲ್ಲಾಡಳಿತ

    ಬಿಸಿಲಿನಿಂದ ಹೈರಾಣಾದ ಚುನಾವಣಾ ಸಿಬ್ಬಂದಿ ನೆರವಿಗೆ ಬಂದ ಜಿಲ್ಲಾಡಳಿತ

    – ವಿಶೇಷ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿಗೆ ಶ್ಲಾಘನೆ

    ಬಳ್ಳಾರಿ: ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೆ ಬಿಸಿಲಿನ ತಾಪ ಬಲುಜೋರಾಗಿದೆ. ಚುನಾವಣಾ ಸಿಬ್ಬಂದಿ ಸಾಕಪ್ಪ ಸಾಕು ಈ ಬಿಸಿಲು ಎಂದಿದ್ದಾರೆ. ಹೀಗಾಗಿಯೇ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಸಿಬ್ಬಂದಿಗೆ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿದೆ.

    ಈಗ ಎಲ್ಲೆಡೆ ದಿನೇ ದಿನೇ ಚುನಾವಣೆ ಬಿಸಿ ಏರುತ್ತಿದೆ. ಆದ್ರೆ ಬಳ್ಳಾರಿಯಲ್ಲಿ ಮಾತ್ರ ಚುನಾವಣಾ ಬಿಸಿಗಿಂತಲೂ ಬಿಸಿಲಿನ ಬಿಸಿ ಜೋರಾಗುತ್ತಿದೆ. ಬಿಸಿಲಿನ ಬೇಗೆಗೆ ಹಗಲಿರುಳು ಕೆಲಸ ಮಾಡೋ ಚುನಾವಣಾ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ. ಸೂರ್ಯನ ಪ್ರಪಾತ ಕಂಡು ಸಾಕಪ್ಪ ಸಾಕು ಈ ಬಿಸಿಲು ಬೇಗೆ ಅಂತಿದ್ದಾರೆ. ಆದ್ರೆ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಚುನಾವಣಾ ಸಿಬ್ಬಂದಿಗೆ ಬಳ್ಳಾರಿ ಜಿಲ್ಲಾಡಳಿತ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಿಬ್ಬಂದಿಯ ನೆರವಿಗೆ ಧಾವಿಸಿದೆ ಎಂದು ಕರ್ತವ್ಯ ನಿರತ ಪೊಲೀಸ್ ಪೇದೆ ಮುದುಕಯ್ಯ ತಿಳಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪವಿದೆ. ಹಗಲು ಹೊತ್ತಿನಲ್ಲಿ ಹೊರಬರಲಾಗದಷ್ಟು ಬಿಸಿಲಿನ ಬೇಗೆ ಹೆಚ್ಚಳವಾಗಿರುವುದರಿಂದ ಚೆಕ್‍ಪೊಸ್ಟ್ ಗಳಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಹೈರಣಾಗಿ ಹೋಗಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ವಿಶೇಷ ಕಾಳಜಿ ತೆಗೆದುಕೊಳ್ಳುವ ಮೂಲಕ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ಹಾಗೂ ತಣ್ಣೀರಿನ ಗಡಿಗೆಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲಾಡಳಿತದ ಈ ವ್ಯವಸ್ಥೆಯಿಂದ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಅನೂಕೂಲವಾಗಿದೆ ಎಂದು ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ರಾಜಶೇಖರ್ ಹೇಳುತ್ತಾರೆ.

    ಹಗಲು ರಾತ್ರಿಯೆನ್ನದೆ ಚೆಕ್‍ಪೊಸ್ಟ್ ಗಳಲ್ಲಿ ಕರ್ತವ್ಯನಿರ್ವಹಿಸುವ ಸಿಬ್ಬಂದಿಗೆ ಜಿಲ್ಲಾಡಳಿತ ಏರ್ ಕೂಲರ್ ವ್ಯವಸ್ಥೆ ಮಾಡಿರುವುದರಿಂದ ಸಿಬ್ಬಂದಿಗೆ ಖುಷಿ ತಂದಿದೆ. ಹೀಗಾಗಿ ಬಳ್ಳಾರಿ ಜಿಲ್ಲಾಡಳಿತದ ಈ ಕಾರ್ಯಕ್ಕೆ ಚುನಾವಣಾ ಸಿಬ್ಬಂದಿ ಶಾಘ್ಲನೆ ವ್ಯಕ್ತಪಡಿಸುವ ಮೂಲಕ ಹುರುಪಿನಿಂದ ಚುನಾವಣಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

  • ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಮುಗಿದಿದೆ. ಆದರೆ ಎಲೆಕ್ಷನ್ ಡ್ಯೂಟಿ ಮುಗಿಸಿ ಏಕಕಾಲಕ್ಕೆ ಹೊರಟಿದ್ದರಿಂದ ಬೆಳಗಾವಿಯ ರಾಯಬಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ತಾಲೂಕಿನ ವಿವಿಧೆಡೆಗಳಿಂದ ಚುನಾವಣೆ ಕರ್ತವ್ಯ ಮುಗಿಸಿ ಏಕಕಾಲಕ್ಕೆ ಬಂದಿದ್ದರಿಂದ ಬಸ್ ಹಾಗೂ ವಾಹನಗಳಿಂದ ಸಂಚಾರ ದಟ್ಟಣೆಯುಂಟಾಗಿತ್ತು. ಆದ್ದರಿಂದ ಕುಡಚಿ ಹಾಗೂ ರಾಯಬಾಗ ಕ್ಷೇತ್ರಗಳಲ್ಲಿ ಕರ್ತವ್ಯ ಮುಗಿಸಿ ಬಂದ ಚುನಾವಣಾ ಸಿಬ್ಬಂದಿ ಮತ ಯಂತ್ರಗಳನ್ನು ಹಸ್ತಾಂತರಿಸಲು ವಿಳಂಬವಾಗಿದ್ದು, ಸಂಚಾರ ದಟ್ಟಣೆಯಿಂದ ಚುನಾವಣಾ ಸಿಬ್ಬಂದಿ ಹೈರಾಣಾಗಿದ್ದಾರೆ.

    ಟ್ರಾಫಿಕ್ ಜಾಮ್‍ನಿಂದ ಸಿಬ್ಬಂದಿ ಪಟ್ಟಣದ ಹೊಸ ಸಂಯುಕ್ತ ಪದವಿ ಪೂರ್ವ ಕಾಲೇಜುವರೆಗೆ ನಡೆದುಕೊಂಡು ಹೋಗಿದ್ದಾರೆ. ಸುಮಾರು ಮೂರು ಕಿಲೋಮೀಟರ್  ವರೆಗೆ ಮತಯಂತ್ರಗಳನ್ನು ಹೊತ್ತುಕೊಂಡೇ ಹೋಗಿದ್ದಾರೆ.

    ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಸತತ 3 ಗಂಟೆಗಳ ಕಾಲ ಹರಸಾಹಸಪಟ್ಟರು.