Tag: egypt

  • ಈಜಿಪ್ಟ್‌ನಲ್ಲಿ ನಡೆಯಲಿರುವ ಫ್ಯಾಶನ್ ಶೋಗೆ ಧಾರವಾಡದ ಯುವತಿ ಆಯ್ಕೆ

    ಈಜಿಪ್ಟ್‌ನಲ್ಲಿ ನಡೆಯಲಿರುವ ಫ್ಯಾಶನ್ ಶೋಗೆ ಧಾರವಾಡದ ಯುವತಿ ಆಯ್ಕೆ

    ಧಾರವಾಡ: ಧಾರವಾಡ ಯುವತಿಯೊಬ್ಬರು ಈಜಿಪ್ಟ್‌ನಲ್ಲಿ ನಡೆಯಲಿರುವ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

    Dharwad

    ನಗರದ ಏಕನಾಥ ಟಿಕಾರೆ ಹಾಗೂ ಶೈಲಾ ದಂಪತಿಯ ಹಿರಿಯ ಪುತ್ರಿಯಾಗಿರುವ ಖುಷಿ ಪಿಯುಸಿ ಓದುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದೇ ಡಿಸೆಂಬರ್ 10 ರಿಂದ 21 ರವರೆಗೆ ಈಜಿಪ್ಟ್ ದೇಶದ ಲುಕ್ಸಾನ್‍ನಲ್ಲಿ ನಡೆಯಲಿರುವ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಈ ಬಾರಿ ಭಾರತದಿಂದ ಖುಷಿ ಆಯ್ಕೆಯಾಗಿದ್ದಾರೆ. ಒಟ್ಟು 35 ದೇಶಗಳ ಸ್ಪರ್ಧಿಗಳು ಫ್ಯಾಶನ್ ಶೋನಲ್ಲಿ ಭಾಗವಹಿಸಲಿದ್ದಾರೆ.  ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ

    Dharwad women

    ಇತ್ತೀಚೆಗೆ ಬೆಂಗಳೂರಿನ ಆರ್ಕಿಡ್ ಇಂಟರ್ ನ್ಯಾಷನಲ್ ಆರ್ಗನೈಝೇಶನ್ ನಡೆಸಿದ್ದ ಸ್ಪರ್ಧೆಯಲ್ಲಿ ಖುಷಿ ಪ್ರಥಮ ಸ್ಥಾನ ಪಡೆದು ಈ ಹಂತಕ್ಕೆ ಏರಿದ್ದಾರೆ. ಈ ಸ್ಪರ್ಧೆಯಲ್ಲಿ ಫಿಟ್ ನೆಸ್ ರೌಂಡ್, ಟ್ಯಾಲೆಂಟ್ ರೌಂಡ್, ಇಕೋ ಡ್ರೆಸ್ ರೌಂಡ್ ಸೇರಿ ಅನೇಕ ಸುತ್ತುಗಳಿವೆ. ಜೊತೆಗೆ ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಡ್ರೆಸ್ ಧರಿಸಿ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿದ್ದು ಪ್ರತಿಯೊಬ್ಬ ಸ್ಪರ್ಧಿಯೂ ಪರಿಸರಕ್ಕೆ ಸಂಬಂಧಿಸಿದ ಒಂದೊಂದು ವಿಷಯ ವಸ್ತುವನ್ನು ಹೊಂದಿರಬೇಕು. ಈ ವಿಚಾರವಾಗಿ ಖುಷಿ ಸುಸ್ಥಿರ ಪರಿಸರ ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ

    Dharwad women

    ಖುಷಿ ತಂದೆ ಟೈಲರ್ ಆಗಿದ್ದು, ಮಧ್ಯಮ ವರ್ಗದ ಕುಟುಂಬದ ಯುವತಿಯೊಬ್ಬರು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದು, ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳುತ್ತಿರುವ ವಿಚಾರ ಹೆತ್ತವರಿಗೆ ಬಹಳ ಸಂತಸತಂದಿದೆ.

  • ಮೊಬೈಲ್ ನುಂಗಿ ಆರು ತಿಂಗಳು ಕಾಲ ಕಳೆದ ವ್ಯಕ್ತಿ – ಮುಂದೆನಾಯ್ತು ಗೊತ್ತಾ?

    ಮೊಬೈಲ್ ನುಂಗಿ ಆರು ತಿಂಗಳು ಕಾಲ ಕಳೆದ ವ್ಯಕ್ತಿ – ಮುಂದೆನಾಯ್ತು ಗೊತ್ತಾ?

    ಕೈರೋ: ವ್ಯಕ್ತಿಯೋರ್ವ ಮೊಬೈಲ್ ಫೋನ್  ನುಂಗಿ ನಂತರ ಅದು ವಿಸರ್ಜನೆ ಮೂಲಕ ನೈಸರ್ಗಿಕವಾಗಿ ಹಾದು ಹೋಗುತ್ತದೆ ಅಂತ 6 ತಿಂಗಳು ಹಾಗೆಯೇ ಕಾಲ ಕಳೆದಿರುವ ವಿಚಿತ್ರವಾದ ಘಟನೆ ಈಜಿಪ್ಟಿನಲ್ಲಿ ನಡೆದಿದೆ.

    ಹೌದು ವ್ಯಕ್ತಿಯೋರ್ವ ಮೊಬೈಲ್ ಫೋನ್ ಅನ್ನು ನುಂಗಿ ಅದು ವಿಸರ್ಜನೆ ಮೂಲಕ ಹಾದು ಹೋಗಿ ಸರಿಹೋಗುತ್ತದೆ ಎಂದು ಭಾವಿಸಿ ವೈದ್ಯರನ್ನು ಭೇಟಿಯಾಗಿರಲಿಲ್ಲ. ಆದರೆ ಸೇವಿಸಿದ ಆಹಾರ ದೇಹದೊಳಗೆ ಹಾದು ಹೋಗಲು ಸಾಧ್ಯವಾಗದೇ ಕೊನೆಗೆ ವ್ಯಕ್ತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ

    ನಂತರ ತಕ್ಷಣ ವೈದ್ಯರನ್ನು ಭೇಟಿ ಮಾಡಿದ್ದಾನೆ. ಈ ವೇಳೆ ವೈದ್ಯರು ಆತನ ಹೊಟ್ಟೆಯನ್ನು ಎಕ್ಸ್-ರೇ, ಸ್ಕ್ಯಾನಿಂಗ್ ಮಾಡಿದಾಗ, ಆತನ ಹೊಟ್ಟೆಯೊಳಗೆ ಫೋನ್ ಇರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ನಂತರ ವೈದ್ಯರು ಅಸ್ವಾನ್ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಕರಳು ಮತ್ತು ಕಿಬ್ಬೊಟ್ಟೆಯನು ಪರೀಕ್ಷಿಸಿ, ಶಸ್ತ್ರ ಚಿಕಿತ್ಸೆ ಮೂಲಕ ಫೋನ್ ಅನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    ಈ ಕುರಿತಂತೆ ಮಾತನಾಡಿದ ಅಸ್ವಾನ್ ಯೂನಿವರ್ ಸಿಟಿ ಹಾಸ್ಪಿಟಲ್‍ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಶ್ರಫ್ ಮಾಬಾದ್, ವ್ಯಕ್ತಿ ಮೊಬೈಲ್ ನುಂಗಿರುವುದು ಇದೇ ಮೊದಲ ಪ್ರಕರಣವಾಗಿದೆ. ರೋಗಿ ಆರು ತಿಂಗಳ ಹಿಂದೆ ನುಂಗಿದ ಮೊಬೈಲ್ ಇದೀಗ ಆತನು ಸೇವಿಸಿದ ಆಹಾರ ದೇಹದೊಳಗೆ ಹಾದುಹೋಗದಂತೆ ತಡೆದಿದೆ. ಆದರೆ ಸದ್ಯ ಶಸ್ತ್ರ ಚಿಕಿತ್ಸೆ ಮೂಲಕ ಮೊಬೈಲ್ ಅನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ ಮತ್ತು ಆದಷ್ಟು ಬೇಗ ವ್ಯಕ್ತಿ ಚೇತರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.

  • ಬೆಲೆ ಹೆಚ್ಚಿದ್ದರೂ ಈಜಿಪ್ಟ್ ಈರುಳ್ಳಿಗಿಲ್ಲ ಡಿಮ್ಯಾಂಡ್

    ಬೆಲೆ ಹೆಚ್ಚಿದ್ದರೂ ಈಜಿಪ್ಟ್ ಈರುಳ್ಳಿಗಿಲ್ಲ ಡಿಮ್ಯಾಂಡ್

    ಬೆಂಗಳೂರು: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಅಮದು ಮಾಡಿಕೊಳ್ಳಲಾದ ಈಜಿಪ್ಟ್ ಈರುಳ್ಳಿಗೆ ಮಾತ್ರ ಡಿಮ್ಯಾಂಡ್ ಇಲ್ಲವಾಗಿದೆ.

    ದೇಶದ ಇತಿಹಾಸದಲ್ಲೇ ಈರುಳ್ಳಿಯ ಬೆಲೆ ದಾಖಲೆ ಬರೆದಿದೆ. ದರ ಏರಿಕೆಯ ಮಾಸ್ಟರ್ ಸ್ಟ್ರೋಕ್ ಕೊಟ್ಟಿರುವ ಈರುಳ್ಳಿಗೆ ಫುಲ್ ಡಿಮ್ಯಾಂಡು. ಹಾಗಾಗಿ ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡ ಹಿನ್ನೆಲೆ, ನಗರಕ್ಕೆ ಈಜಿಪ್ಟ್ ಈರುಳ್ಳಿ ಲಗ್ಗೆಯಿಟ್ಟಿದೆ. ಆದರೆ ಗ್ರಾಹಕರು ಮಾತ್ರ ಈಜಿಪ್ಟ್ ಈರುಳ್ಳಿಯನ್ನು ಖರೀದಿಸೋಕೆ ಮನಸ್ಸು ಮಾಡುತ್ತಿಲ್ಲ.

    ಮಾರುಕಟ್ಟೆಯಲ್ಲಿ ಕೆಜಿಗೆ 110-120 ರೂಪಾಯಿ ಇರುವ ಈ ಈರುಳ್ಳಿಗೆ ಅಷ್ಟೇನೂ ಬೇಡಿಕೆಯಿಲ್ಲ. ಈ ಕೆಂಪು ಈರುಳ್ಳಿ, ಹೆಚ್ಚು ಘಾಟು, ನೀರಿನಾಂಶ ಹೊಂದಿದ್ದು, ಹೇಳಿಕೊಳ್ಳುವಷ್ಟು ರುಚಿನೇ ಇಲ್ಲ ಎಂದು ಗ್ರಾಹಕರು ಈಜಿಪ್ಟ್ ಈರುಳ್ಳಿಯನ್ನು ಕೊಂಡುಕೊಳ್ಳುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯ ನಿರೀಕ್ಷೆಯನ್ನು ಈಜಿಪ್ಟ್ ಈರುಳ್ಳಿ ಹುಸಿಗೊಳಿಸಿದೆ.

    ಜನ ಅಷ್ಟೇ ಅಲ್ಲದೇ ಹೊಟೇಲ್, ರೆಸ್ಟೋರೆಂಟ್ ಮಾಲೀಕರು ಕೂಡ ಈಜಿಪ್ಟ್ ಈರುಳ್ಳಿಯನ್ನು ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ಈರುಳ್ಳಿಯ ಬೇಡಿಕೆ ಕೊರತೆಯನ್ನು ನೀಗಿಸಲು ಈಜಿಪ್ಟ್ ಈರುಳ್ಳಿಯನ್ನ ಅಮದು ಮಾಡಿಕೊಂಡರು ಕೂಡ ದೇಸಿ ಈರುಳ್ಳಿಗೆ ಮಾತ್ರ ಬೇಡಿಕೆ ಕಮ್ಮಿಯಾಗಿಲ್ಲ.

  • ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

    ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

    – ಬೆಂಗ್ಳೂರಿಗೆ ಬಂತು ಈಜಿಪ್ಟ್ ಈರುಳ್ಳಿ

    ಬೆಂಗಳೂರು: ದಿನೇ ದಿನೇ ದುಬಾರಿ ಆಗ್ತಿರೋ ಈರುಳ್ಳಿಯ ರೇಟ್ ಕೇಳಿ ಜನ ಸುಸ್ತಾಗಿದ್ದು, ಮುಂಬರುವ ದಿನಗಳಲ್ಲಿ ಕೆ.ಜಿ ಈರುಳ್ಳಿಗೆ 200 ರೂ.ದಾಟಲಿದೆ.

    ಹಾಪ್ ಕಾಮ್ಸ್ ನಲ್ಲಿ ಕೆ.ಜಿ ಈರುಳ್ಳಿಗೆ 160 ರೂಪಾಯಿ ಇದ್ದರೆ, ಶುಕ್ರವಾರದವರೆಗೂ ಕೆ.ಜಿ ಈರುಳ್ಳಿಗೆ 142 ರೂ ಇತ್ತು. ಎಪಿಎಂಸಿ ಯಾರ್ಡ್‍ನಲ್ಲೇ ಕೆ.ಜಿ ಫೈನ್ ಈರುಳ್ಳಿಗೆ 180 ರೂಪಾಯಿಗೆ ಏರಿಕೆಯಾಗಿದೆ.

    ಗದಗ, ಬಾಗಲಕೋಟೆಯಿಂದ ಟನ್ ಗಟ್ಟಲೆ ಈರುಳ್ಳಿಯನ್ನ ಲಾರಿಗೆ ರೈತರು ತುಂಬಿಸಿಕೊಂಡು ಬರುತ್ತಿದ್ದಾರೆ. ಆದರೆ ರೈತರಿಗೆ ಕ್ವಿಂಟಾಲ್ ಈರುಳ್ಳಿಗೆ ಸಿಗೋದು 8 ರಿಂದ 14 ಸಾವಿರ ಮಾತ್ರ. ಮಧ್ಯವರ್ತಿಗಳ ಹಾವಳಿಯಿಂದ ಅಂಗಡಿಗಳಲ್ಲಿ ಈರುಳ್ಳಿ ದರ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ.

    ಈರುಳ್ಳಿ ದರ ಏರಿಕೆಯಿಂದಾಗಿ ಜನರಲ್ಲಿ ಆತಂಕ ಮೂಡಿದ್ದು, 1-2 ಕೆ.ಜಿ ಈರುಳ್ಳಿ ತೆಗೆದುಕೊಳ್ಳುತ್ತಿರುವವರು, ಈಗ ಕಾಲು ಕೆಜಿ ಖರೀದಿಸುವ ಪರಸ್ಥಿತಿ ನಿರ್ಮಾಣವಾಗಿದೆ. ಈ ದರ ಹೆಚ್ಚಳ, ಹೋಟೆಲ್ ಉದ್ಯಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಸಣ್ಣ-ಪುಟ್ಟ ಹೋಟೆಲ್‍ಗಳು ಈಗಾಗಲೇ ನಷ್ಟ ಅನುಭವಿಸುತ್ತಿವೆ. ಬೆಂಗಳೂರು ನಗರಕ್ಕೆ ಈರುಳ್ಳಿ ಪೂರೈಕೆಯಲ್ಲಿ ಗಣನೀಯ ಕಡಿತವಾಗಿದೆ. ದಾವಣಗೆರೆ, ಗದಗ, ಹುಬ್ಬಳ್ಳಿಯಿಂದ ಈರುಳ್ಳಿ ಬರುತ್ತಿಲ್ಲ. ಇದರಿಂದ ನಗರದಲ್ಲಿ ಮುಂದಿನ ವಾರ ಈರುಳ್ಳಿ ಬೆಲೆ 200 ರೂ. ಗಡಿ ದಾಟಿದರೂ ಅಚ್ಚರಿ ಪಡಬೇಕಿಲ್ಲ. ಇದನ್ನೂ ಓದಿ: 500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

    ಬೆಲೆ ಏರಿಕೆಗೆ ಕಾರಣಗಳೇನು?
    ನೆರೆಯಿಂದಾಗಿ ಕೆಲವು ಕಡೆಗಳಲ್ಲಿ ಈರುಳ್ಳಿ ಕೊಚ್ಚಿ ಹೋಗಿದೆ. ಮತ್ತೆ ಹಲವು ಕಡೆ ಮಳೆ ಕಡಿಮೆಯಾಗಿ ಈರುಳ್ಳಿ ಬೆಳೆ ಚೆನ್ನಾಗಿ ಬೆಳೆದಿಲ್ಲ. ಕರ್ನಾಟಕದ ಮಾರುಕಟ್ಟೆಗೆ ಇನ್ನೂ ಹೊಸ ಈರುಳ್ಳಿ ಎಂಟ್ರಿ ಕೊಟ್ಟಿಲ್ಲ. ಇದಲ್ಲದೆ ಈರುಳ್ಳಿ ಬೆಲೆ ಏರಿಕೆ ಡಿಸೆಂಬರ್ ಕೊನೆಯವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಬೆಂಗಳೂರಿಗೆ ಈಜಿಪ್ಟ್ ಈರುಳ್ಳಿ:
    ಅತ್ತ ಮಂಗಳೂರಿಗೆ ಟರ್ಕಿ ಈರುಳ್ಳಿ ಬಂದಿಳಿದಿದ್ದರೆ ಇತ್ತ ಸಿಲಿಕಾನ್ ಸಿಟಿಗೆ ಈಜಿಪ್ಟ್ ದೇಶದ ಈರುಳ್ಳಿ ಲಗ್ಗೆಯಿಟ್ಟಿದೆ. ನಗರದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈಜಿಪ್ಟ್ ನಿಂದ ಬೆಂಗಳೂರಿಗೆ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಕಡಲ ನಗರಿ ಮಂಗ್ಳೂರಿಗೆ ಬಂದಿಳಿಯಿತು ಟರ್ಕಿ ಈರುಳ್ಳಿ

    ಮುಂಜಾನೆಯೇ ಯಶವಂತಪುರದ ಈರುಳ್ಳಿ ಮಂಡಿಗೆ ಆಮದಾಗಿದ್ದು, ಈಜಿಪ್ಟ್ ಈರುಳ್ಳಿಗೆ ರೇಟ್ ಫಿಕ್ಸ್ ಮಾಡೋದಷ್ಟೇ ಬಾಕಿ ಇದೆ. ವಿದೇಶದ ಈರುಳ್ಳಿ ನೋಡಲು ವ್ಯಾಪಾರಿಗಳು ಮುಗಿಬಿದ್ದ ಪ್ರಸಂಗವೂ ನಡೆದಿದೆ. 50 ಟನ್ ಈರುಳ್ಳಿ ಆಮದಾಗಿದೆ. 110-120 ರೂಪಾಯಿ ಬೆಲೆ ಬಾಳುವ ಈರುಳ್ಳಿ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈರುಳ್ಳಿ ರೇಟ್‍ನಲ್ಲಿ ಇಳಿಕೆಯಾಗುವ ಸಾಧ್ಯತೆಗಳೂ ಇವೆ. ಇದನ್ನೂ ಓದಿ:  ಈರುಳ್ಳಿ ಬೆಲೆ ಏರಿಕೆಯಿಂದ ಸಾಲ ಮುಕ್ತರಾದ ರೈತರು

    https://www.youtube.com/watch?v=bcPxJ_UqTCg

  • ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಕೈರೋ: ಮದುವೆ ಹಿಂದಿನ ದಿನ ವರನ ಜೊತೆ ಸ್ನೇಹಿತರು ಸಂಭ್ರಮಾಚರಣೆ ಮಾಡೋ ಸಂದರ್ಭದಲ್ಲಿ ಅತೀ ಉತ್ಸಾಹದಲ್ಲಿ ಸ್ನೇಹಿತನೊಬ್ಬ ವರನ ಮರ್ಮಾಂಗಕ್ಕೆ ಗುಂಡೇಟು ಹೊಡೆದಿರುವ ಘಟನೆ ಈಜಿಪ್ಟ್‍ನಲ್ಲಿ ನಡೆದಿದೆ.

    28 ವರ್ಷದ ವರ ಓಮರ್ ಅಲ್ ಅಲ್‍ಸೈದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಓಮರ್ ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯ ಸಂಭ್ರಮದಲ್ಲಿದ್ದ. ಈ ವೇಳೆ ಸ್ನೇಹಿತರಲ್ಲೊಬ್ಬ ಸಂಭ್ರಮಾಚರಣೆಗೆ ಗುಂಡು ಹಾರಿಸಿದ್ದ. ಉತ್ಸಾಹದಲ್ಲಿ ಗುಂಡು ಹಾರಿಸಿದ ಸ್ನೇಹಿತನಿಗೆ ಗನ್ ಮೇಲಕ್ಕೆ ಗುರಿಯಿಡಬೇಕು ಅನ್ನೋದು ಮರೆತುಹೋಗಿತ್ತು. ಪರಿಣಾಮ ಗುಂಡು ವರನ ಮರ್ಮಾಂಗಕ್ಕೆ ತಗುಲಿದೆ.

    ಘಟನೆಯಿಂದ ಓಮರ್‍ನ ಮರ್ಮಾಂಗ, ತೊಡೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ತಾನು ಮಾಡಿದ ಎಡವಟ್ಟಿನಿಂದ ಸ್ನೇಹಿತ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಅತ್ತ ಗಾಯಗೊಂಡ ಓಮರ್ ಇನ್ನೂ ಬ್ಯಾಚುಲರ್ ಆಗಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಓಮರ್‍ನ ಭಾವಿ ಪತ್ನಿಗೆ ಮುಂದೆ ಆತನನ್ನು ಮದುವೆಯಾಗೋ ಯೋಚನೆ ಇದೆಯಾ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಈಜಿಪ್ಟ್‍ನ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ. ಗನ್ ಸರಿಯಾಗಿ ಹಿಡಿಯಲು ಬಾರದ ವರನ ಸ್ನೇಹಿತನ ಬಗ್ಗೆ ಜನ ಟೀಕಿಸಿದ್ದಾರೆ.

    ಈಜಿಪ್ಟ್ ನಲ್ಲಿ ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿ ಅನಾಹುತವಾಗಿರೋದು ಇದೇ ಮೊದಲೇನಲ್ಲ. ಅಕ್ಟೋಬರ್‍ನಲ್ಲಿ ಇಲ್ಲಿನ ಮದುವೆ ಸಮಾರಂಭವೊಂದಲ್ಲಿ ಅತಿಥಿಗೆ ಗುಂಡೇಟು ತಗುಲಿ ಸರ್ಜರಿಗೆ ಒಳಪಡಬೇಕಾಯ್ತು. ಈಜಿಪ್ಟ್ ನ ಬಾನಿ ಸ್ವೆಫ್‍ನಲ್ಲಿ 30 ವರ್ಷದ ವ್ಯಕ್ತಿ ಮುದವೆಗೆ ಬಂದಿದ್ದಾಗ ಅವರ ತೊಡೆಗೆ ಗುಂಡೇಟು ತಗುಲಿತ್ತು. ಅವರಿಗೆ ಸರ್ಜರಿ ಮಾಡಿಸಬೇಕಾಯ್ತು.

  • ಮುಂಬೈನಿಂದ ಅಬುಧಾಬಿಗೆ ಹೋಗಿದ್ದ ಜಗತ್ತಿನ ದಢೂತಿ ಮಹಿಳೆ ಎಮಾನ್ ಇನ್ನಿಲ್ಲ

    ಮುಂಬೈನಿಂದ ಅಬುಧಾಬಿಗೆ ಹೋಗಿದ್ದ ಜಗತ್ತಿನ ದಢೂತಿ ಮಹಿಳೆ ಎಮಾನ್ ಇನ್ನಿಲ್ಲ

    ಅಬುದಾಭಿ: ವಿಶ್ವದ ದಢೂತಿ ಮಹಿಳೆ ಎನಿಸಿಕೊಂಡಿದ್ದ ಎಮಾನ್ ಅಹ್ಮದ್ ಅಬುದಾಭಿಯಲ್ಲಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

    ತನ್ನ 37ನೇ ಹುಟ್ಟುಹಬ್ಬ ಆಚರಿಸಿಕೊಂಡ ಒಂದು ವಾರದಲ್ಲೇ ಎಮಾನ್ ಮೃತಪಟ್ಟಿದ್ದಾರೆ. ಇಲ್ಲಿನ ಬುರ್ಜೀಲ್ ಆಸ್ಪತ್ರೆಯ ಅಧಿಕಾರಿಗಳು ಎಮಾನ್ ಸಾವನ್ನು ದೃಢಪಡಿಸಿದ್ದಾರೆ. ಹೃದಯ ಕಾಯಿಲೆ, ಕಿಡ್ನಿ ವೈಫಲ್ಯ ಹಾಗೂ ಇನ್ನಿತರೆ ಸಂಬಂಧಿತ ರೋಗದಿಂದ ಎಮಾನ್ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.

    ಎಮಾನ್ ಯುನೈಟೆಡ್ ಅರಬ್ ಎಮಿರೈಟ್ಸ್‍ಗೆ ಬಂದಾಗಿನಿಂದ ಸುಮಾರು 20 ವಿವಿಧ ತಜ್ಞ ವೈದ್ಯರ ತಂಡ ಆಕೆಯ ಆರೋಗ್ಯ ಸ್ಥಿತಿಯ ವಿಚಾರಣೆ ಮಾಡುತ್ತಿದ್ದರು. ಎಮಾನ್ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಳ್ಳುತ್ತವೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ.

    ಈಜಿಪ್ಟ್‍ನ ಅಲೆಕ್ಸಾಂಡ್ರಿಯಾ ನಿವಾಸಿಯಾದ ಎಮಾನ್‍ರನ್ನು ಮುಂಬೈನ ಸೈಫೀನಾ ಆಸ್ಪತ್ರೆಗೆ ತೂಕ ಇಳಿಕೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಮುಂಬೈನಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದ ನಂತರ ಮೇ 4ರಂದು ಬುರ್ಜೀಲ್ ಆಸ್ಪತ್ರೆಗೆ ಎಮಾನ್‍ರನ್ನು ರವಾನಿಸಲಾಗಿತ್ತು.

    37 ವರ್ಷದ ಎಮಾನ್ ಫೆಬ್ರವರಿ 11ರಂದು ಮುಂಬೈಗೆ ಬಂದಾಗ 504ಕೆಜಿ ತೂಕವಿದ್ದರು. ಆಕೆಯನ್ನು ವಿಶ್ವದ ದಢೂತಿ ಮಹಿಳೆ ಎಂದೇ ಪರಿಗಣಿಸಲಾಗಿತ್ತು. ಸೈಫೀ ಆಸ್ಪತ್ರೆಯಲ್ಲಿ ಬಾರಿಯಾಟ್ರಿಕ್ ಸರ್ಜರಿ ಹಾಗೂ ಊಟದ ಪಥ್ಯದಿಂದ ಆಕೆ 300 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯವಾಗಿತ್ತು ಎಂದು ಇಲ್ಲಿನ ವೈದ್ಯರು ಹೇಳಿದ್ದರು. ಈ ಹಿಂದೆ ವೈದ್ಯರು ಎಮಾನ್ ಗುಣಮುಖರಾಗುತ್ತಿರವ ಬಗ್ಗೆ ವಿಡಿಯೋಗಳನ್ನ ಹಂಚಿಕೊಂಡು, ಅಂದುಕೊಂಡಿದ್ದಕ್ಕಿಂತ ಮೂರು ಪಟ್ಟು ವೇಗವಾಗಿ ಎಮಾನ್ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ರು.

    ಎರಡನೇ ಹಂತದ ಚಿಕಿತ್ಸೆ ಅಂತ್ಯದ ವೇಳೆಗೆ ಎಮಾನ್ ತನ್ನ ಕೈಯ್ಯಾರೆ ತಾನೇ ಊಟ ಮಾಡುವಂತಾಗುತ್ತಾರೆ. ನಿಯಮಿತ ಪಥ್ಯದಿಂದ ಅಗತ್ಯ ತೂಕ ಇಳಿಸಿಕೊಂಡ ನಂತರ ಎಲೆಕ್ಟ್ರಿಕ್ ವ್ಹೀಲ್ ಚೇರ್‍ನಲ್ಲಿ ಓಡಾಡುವಂತಾಗುತ್ತಾರೆ ಎಂದು ಅಬುದಾಭಿಯ ಬುರ್ಜೀಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಯಸೀನ್ ಎಲ್ ಶಾಹತ್ ಹೇಳಿದ್ದರು.

    ವೈದ್ಯರ ವಿರುದ್ಧ ಕಿಡಿಕಾರಿದ್ದ ಸಹೋದರಿ: ಇದೇ ಏಪ್ರಿಲ್ ನಲ್ಲಿ ಎಮಾನ್ ಅಹ್ಮದ್ ಸಹೋದರಿ ಷೈಮಾ ಸೆಲೀಮ್ ಮುಂಬೈನ ವೈದ್ಯ ಲಕ್ದವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭಾರತಕ್ಕೆ ಬಂದು ಎಮಾನ್ ಅಹ್ಮದ್ ತೂಕ ಇಳಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳುತ್ತಿರೋದು ಸುಳ್ಳು. ಬರೋಬ್ಬರಿ 500 ಕೆಜಿ ತೂಕವಿದ್ದ ಎಮಾನ್ ದೇಹದ ತೂಕ ಇಳಿಸುತ್ತೇವೆ ಅಂತಾ ವೈದ್ಯರು ಭರವಸೆ ನೀಡಿ ಭಾರತಕ್ಕೆ ಕರೆತಂದಿದ್ದರು. ಆದ್ರೆ ಇಲ್ಲಿ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.

     

    ಆದ್ರೆ ಇಮಾನ್ ಸಹೋದರಿ ಆರೋಪವನ್ನು ವೈದ್ಯ ಲಕ್ದವಾಲಾ ತಳ್ಳಿ ಹಾಕಿದ್ದರು. ಎಮಾನ್ ಚಿಕಿತ್ಸೆಗೂ ಮುನ್ನ 500 ಕೆಜಿ ತೂಕವಿದ್ರು. ಚಿಕಿತ್ಸೆ ಬಳಿಕ ಆಕೆ ತೂಕ 172 ಕೆಜಿಗೆ ಇಳಿದಿದೆ. ಆದ್ರೆ ಮುಂದಿನ ಚಿಕಿತ್ಸಾ ವೆಚ್ಚವನ್ನು ಉಳಿಸಿಕೊಳ್ಳಲು ಎಮಾನ್ ಕುಟುಂಬಸ್ಥರು ಸುಳ್ಳು ಆರೋಪ ಮಾಡ್ತಿದ್ದಾರೆಂದು ಲಕ್ದವಾಲಾ ಪ್ರತಿಕ್ರಿಯೆ ನೀಡಿದ್ದರು. ಎಮಾನ್ ಚಿಕಿತ್ಸೆಗೆ ಯಾರೂ ಮುಂದೆ ಬಾರದೇ ಇದ್ದಾಗ ಮುಂಬೈ ವೈದ್ಯರು ಕಷ್ಟಪಟ್ಟು ಈಜಿಪ್ಟ್ ನಿಂದ ಮುಂಬೈಗೆ ಎಮಾನ್ ರನ್ನು ಕರೆ ತಂದಿದ್ದರು.

  • ಕಷ್ಟಪಟ್ಟು ಈಜಿಪ್ಟಿನಿಂದ ಕರೆತಂದು ಚಿಕಿತ್ಸೆ ನೀಡಿದ್ದ ಮುಂಬೈ ವೈದ್ಯರ ವಿರುದ್ಧವೇ ಈಗ ಎಮಾನ್ ಸಹೋದರಿ ಕಿಡಿ

    ಕಷ್ಟಪಟ್ಟು ಈಜಿಪ್ಟಿನಿಂದ ಕರೆತಂದು ಚಿಕಿತ್ಸೆ ನೀಡಿದ್ದ ಮುಂಬೈ ವೈದ್ಯರ ವಿರುದ್ಧವೇ ಈಗ ಎಮಾನ್ ಸಹೋದರಿ ಕಿಡಿ

    ಮುಂಬೈ: ವಿಶ್ವದ ದಢೂತಿ ಮಹಿಳೆ ಈಜಿಪ್ಟ್ ನ ಎಮಾನ್ ಅಹ್ಮದ್ ಸಹೋದರಿ ಷೈಮಾ ಸೆಲೀಮ್ ಮುಂಬೈನ ವೈದ್ಯ ಲಕ್ದವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಭಾರತಕ್ಕೆ ಬಂದು ಎಮಾನ್ ಅಹ್ಮದ್ ತೂಕ ಇಳಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳುತ್ತಿರೋದು ಸುಳ್ಳು ಅಂತಾ ಸಹೋದರಿ ಆರೋಪಿಸಿದ್ದಾರೆ. ಬರೋಬ್ಬರಿ 500 ಕೆಜಿ ತೂಕವಿದ್ದ ಎಮಾನ್ ದೇಹದ ತೂಕ ಇಳಿಸುತ್ತೇವೆ ಅಂತಾ ವೈದ್ಯರು ಭರವಸೆ ನೀಡಿ ಭಾರತಕ್ಕೆ ಕರೆತಂದಿದ್ದರು. ಆದ್ರೆ ಇಲ್ಲಿ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಅಂತಾ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ಬಂದ 3 ವಾರದಲ್ಲಿ 120 ಕೆಜಿ ತೂಕ ಇಳಿಸಿಕೊಂಡ ವಿಶ್ವದ ದಢೂತಿ ಮಹಿಳೆ

    ಷೈಮಾ ಸೆಲೀಮ್ ಏಪ್ರಿಲ್ 14ರಂದು ವೀಡಿಯೋ ಮಾಡುವ ಮೂಲಕ ಈ ಆರೋಪವನ್ನು ಮಾಡಿದ್ದಾರೆ. ಮುಂಬೈನ ಸೈಫೀ ಆಸ್ಪತ್ರೆಯ ವೈದ್ಯ ಡಾ. ಮುಫಜಲ್ ಲಕ್ದವಾಲಾ, ಸರ್ಜರಿ ಬಳಿಕ ಎಮಾನ್ ತೂಕ ಇಳಿಸಿಕೊಂಡಿದ್ದಾಳೆ ಅಂತಾ ಹೇಳುತ್ತಿದ್ದಾರೆ. ಆದ್ರೆ ಇದು ಸುಳ್ಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾದ ಬಳಿಕ ಆಕೆ ಇಲ್ಲಿವರೆಗೆ ಎಮಾನ್ ಮಾತನಾಡಿಲ್ಲ, ನಡೆದಾಡಿಲ್ಲ. ಹೀಗಾಗಿ ಭಾರತಕ್ಕೆ ಬಂದ ಬಳಿಕ ಆಕೆಯ ಆರೋಗ್ಯ ಹದಗೆಟ್ಟಿದೆಯೇ ಹೊರತು, ಚಲನವಲನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಅಂತಾ ಷೈಮಾ ವೀಡಿಯೋದಲ್ಲಿ ದೂರಿದ್ದಾರೆ. ಅಲ್ಲದೇ ಆಕೆಗೆ ಆಸ್ಪತ್ರೆಯಲ್ಲಿ ಯಾವೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂಬುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಸಿಎಟಿ ಸ್ಕ್ಯಾನ್ ಮೆಶಿನ್ ಕೂಡ ಇಲ್ಲ ಅಂತಾ ಹೇಳಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

    ಆದ್ರೆ ಇಮಾನ್ ಸಹೋದರಿ ಆರೋಪವನ್ನು ವೈದ್ಯ ಲಕ್ದವಾಲಾ ತಳ್ಳಿ ಹಾಕಿದ್ದಾರೆ. ಇಮಾನ್ ಚಿಕಿತ್ಸೆಗೂ ಮುನ್ನ 500 ಕೆಜಿ ತೂಕವಿದ್ಲು. ಚಿಕಿತ್ಸೆ ಬಳಿಕ ಆಕೆ ತೂಕ 172 ಕೆಜಿಗೆ ಇಳಿದಿದೆ. ಆದ್ರೆ ಮುಂದಿನ ಚಿಕಿತ್ಸಾ ವೆಚ್ಚವನ್ನು ಉಳಿಸಿಕೊಳ್ಳಲು ಇಮಾನ್ ಕುಟುಂಬಸ್ಥರು ಸುಳ್ಳು ಆರೋಪ ಮಾಡ್ತಿದ್ದಾರೆಂದು ಲಕ್ದವಾಲಾ ಪ್ರತಿಕ್ರಿಯೆ ನೀಡಿದ್ದಾರೆ.

    https://www.youtube.com/watch?v=MSz2yMt3zz4