Tag: education

  • ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ಯಶಸ್ವಿಯಾಗಿ ಕರೆತಂದ ಶ್ರೀ

    ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ಯಶಸ್ವಿಯಾಗಿ ಕರೆತಂದ ಶ್ರೀ

    ಕಲಬುರಗಿ: ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಹಲವು ಯೋಜನೆ ತಂದರೂ ಪ್ರಯೋಜನವಾಗಿಲ್ಲ. ಆದ್ರೆ ಕಲಬುರಗಿಯ ಮಹೇಶ್ವರನಂದ ಸ್ವಾಮೀಜಿಗಳು, ಅಲೆಮಾರಿ ಮಕ್ಕಳಿಗಾಗಿಯೇ ಶಾಲೆ ತೆಗೆದಿದ್ದಾರೆ. ರಾಜ್ಯದ ಮೂಲೆ-ಮೂಲೆ ಸುತ್ತಿ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಜೊತೆ ವಸತಿ ಸೌಕರ್ಯ ನೀಡುತ್ತಿದ್ದಾರೆ.

    ಕಲಬುರಗಿ ತಾಲೂಕಿನ ತಾಡತೆಗನೂರ ಗ್ರಾಮದ ವಿವೇಕಾನಂದ ವಿದ್ಯಾಪೀಠದ ಅಧ್ಯಕ್ಷರಾದ ಮಹೇಶ್ವರನಂದ ಸ್ವಾಮೀಜಿ ಅಲೆಮಾರಿ ಜನಾಂಗದ ಮಕ್ಕಳ ಪೋಷಕರಿಗೆ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡುತ್ತಾರೆ. ರಾಜ್ಯದ ಮೂಲೆ ಮೂಲೆಗೆ ಹೋಗಿ ಅಲೆಮಾರಿ ಜನಾಂಗದ ಮಕ್ಕಳನ್ನು ಕರೆ ತಂದು ತಮ್ಮ ಶಾಲೆಯಲ್ಲಿ ಶಿಕ್ಷಣ ಕೊಡುತ್ತಿದ್ದಾರೆ. ಈ ಮೂಲಕ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ದಾರಿದೀಪವಾಗಿದ್ದಾರೆ.

    2002ರಲ್ಲಿ ಶ್ರೀಗಳು ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಈ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಕಳೆದ 15 ವರ್ಷಗಳಲ್ಲಿ ಈ ಶಾಲೆಯಲ್ಲಿ 8 ಸಾವಿರಕ್ಕೂ ಅಧಿಕ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಶ್ರೀಗಳ ಕಾರ್ಯ ಮೆಚ್ಚಿ ಹಿಂದಿನ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಖುದ್ದು ಶಾಲೆಗೆ ಭೇಟಿ ನೀಡಿ, ಶ್ಲಾಘಿಸಿದ್ದರು.

    ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರದ ಯತ್ನ ವಿಫಲವಾಗಿದ್ದರೂ, ಶ್ರೀಗಳು ಯಶಸ್ವಿಯಾಗಿದ್ದಾರೆ.

    https://www.youtube.com/watch?v=TxziRBYSK44&pbjreload=10

  • Fortune Institute Of Fashion Technology

    Fortune Institute Of Fashion Technology

    Fortune Institute is one of the reputed upcoming fashion institute in India. We are now set to train youngsters in fashions, interiors, arts & designing and management courses in the field of management and art.

    Fortune institute is set up in Bangalore with all the infrastructure to train the students to a level of all-round competence and encourage them to promote themselves as professionals, by the end their training period.

    Objectives of the courses
    To update the knowledge of students, developing the creative skills in designing; in fusion of western and Indian technical know-how of the skills for the industries, general aspects of the trends in the world of artistic and fashion market

    Appreciating and understanding historical fashions, developing designs through Computer Aided Designing; Production technology, quality control,marketing and sales techniques and business management. Thus enhancing professional competence in youth can thrive them as professionals in various fields of the industry.

    Faculty
    We offer well qualified, experience staff for effective running of the curriculum. Guest lecturers and experts are invited from time to time to impart their professional expertise and experience to the students. And students can reach the faculties 24/7.

    Why Us?
    – We are in the industry from the past 15 years. We offer Diploma, Degree, PG Course
    – Weekend, Evening, Morning, Regular & distance classes are available.
    – Convenient regular, part time, full time class timings.
    – Affordable fees & easy monthly installment facilities available.
    – Global promotion for students designs and creativity through our websites and social media pages.
    – Lifetime access to students in House Boutique.
    – 100% job guarantee for eligible students.
    – Seminars, workshops, fashion shows & many more events will be conducted.

    Fashion Designing Management Course Content
    – Illustration & sketches with color concepts
    – Embroidery – Hand, machine & zardosi work
    – Tie & die prints, batiks, paintings on the textiles etc
    – Garment constructions with pattern & layout marking, ladies wear
    – Gents wear & kids wear, party wear, western & Indo-western wear & sample making
    – Production technology & quality concept
    – Merchandising & retail management
    – Boutique Management
    – Business Management
    – Sewing Technology
    – CAD designing

    Contact Fortune
    135, 2nd floor, Dispensary Road,
    Parallel to commercial street, near Safina
    Plaza/M.G.Road, Bangalore – 560 001
    Phone: 4113 2522 | 9845383989 | 2558 4313 | 2547 5692
    Email : info@fiftarts.com, manju219@yahoo.com
    Website: www.fiftarts.com

  • ಮುಖ್ಯಮಂತ್ರಿಯಿಂದ ಸನ್ಮಾನ ಮಾಡಿಸ್ಕೊಂಡ ಬಡ ವಿದ್ಯಾರ್ಥಿಗೆ ಡಾಕ್ಟರ್ ಆಗೋಕೆ ಬೇಕಿದೆ ಸಹಾಯ

    ಮುಖ್ಯಮಂತ್ರಿಯಿಂದ ಸನ್ಮಾನ ಮಾಡಿಸ್ಕೊಂಡ ಬಡ ವಿದ್ಯಾರ್ಥಿಗೆ ಡಾಕ್ಟರ್ ಆಗೋಕೆ ಬೇಕಿದೆ ಸಹಾಯ

    ದಾವಣಗೆರೆ: ಒಂದೆಡೆ ಸಾಂಬಾರು ಪದಾರ್ಥ ಮಾರಾಟ ಮಾಡುತ್ತಿರುವ ತಂದೆ, ಮತ್ತೊಂದೆಡೆ ಮಗನನ್ನು ಡಾಕ್ಟರ್ ಮಾಡಬೇಕೆಂದು ಕೂಲಿ ಕೆಲಸ ಮಾಡುತ್ತಿರುವ ತಾಯಿ. ಈ ದಂಪತಿಯ ಪ್ರತಿಭಾವಂತ ಕಿಶೋರ್ ಇಂದು ಡಾಕ್ಟರ್ ಆಗೋದಕ್ಕೆ ಆರ್ಥಿಕ ಸಹಾಯದ ಅವಶ್ಯಕತೆಯಿದೆ.

    ಕಿಶೋರ್ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಅತ್ಯುತ್ತಮ ಅಂಕ ಪಡೆದು ಮುಖ್ಯಮಂತ್ರಿಗಳಿಂದ ಸನ್ಮಾನವನ್ನು ಸಹ ಮಾಡಿಸಿಕೊಂಡಿದ್ದಾನೆ. ಓದಿನಲ್ಲಿ ಮುಂದಿರುವ ಈತನಿಗೆ ಬಡತನ ಎನ್ನುವುದು ಹೆಗಲೇರಿದೆ. ತಂದೆ ಕೃಷ್ಣಮೂರ್ತಿ ಚಿಕ್ಕ ಗಾಡಿಯಲ್ಲಿ ಸಾಂಬಾರು ಪದಾರ್ಥಗಳನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಗೂ ಹೋಗಿ ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರ ಸಾಗಿಸುತ್ತಿದ್ದಾರೆ. ಆದ್ರೆ ಎರಡನೇ ಮಗ ಕಿಶೋರ್ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಬೇಕು ಎನ್ನುವ ಕನಸನ್ನು ಇಟ್ಟುಕೊಂಡು ಚೆನ್ನಾಗಿ ಓದಿ ಮೆಡಿಕಲ್‍ನಲ್ಲಿ ಸರ್ಕಾರಿ ಸೀಟ್ ಪಡೆದು ದಾವಣಗೆರೆಯ ಜೆ ಜೆ ಮೆಡಿಕಲ್ ಕಾಲೇಜ್‍ಗೆ ಸೇರಿದ್ದಾನೆ.

    ಮೆಡಿಕಲ್ ಮಾಡಿ ಡಾಕ್ಟರ್ ಆಗಬೇಕು ಎನ್ನುವ ಮಗನ ಕನಸನ್ನು ನಿರಾಸೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಬ್ಯಾಂಕ್ ನಿಂದ ಲೋನ್ ಮಾಡಿಸಿಯಾದ್ರು ಓದಿಸೋಣ ಎಂದುಕೊಂಡಿದ್ರು. ಆದ್ರೆ ಜಾಮೀನು ನೀಡಲು ಯಾವುದೇ ಆಸ್ತಿ ಇಲ್ಲದಿರುವುದರಿಂದ ಲೋನ್ ಕ್ಯಾನ್ಸಲ್ ಅಗಿದೆ.

    ಮೆಡಿಕಲ್ ಅಂದ್ರೆ ಏನ್ ಸುಮ್ನೆನಾ? ಲಕ್ಷಾಂತರ ರೂಪಾಯಿ ಡೊನೇಷನ್ ಕಟ್ಟಬೇಕು. ಕಾಲೇಜ್ ನಲ್ಲಿ ಹೈಫೈ ಲೈಫ್ ಲೀಡ್ ಮಾಡಬೇಕು. ಕೈಯಲ್ಲಿ ಒಂದು ಬೈಕ್ ಇರ್ಬೇಕು ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ ಕಿಶೋರ್ ಮಾತ್ರ ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋ ಗಾದೆಯನ್ನು ಪಾಲಿಸುತ್ತಿದ್ದಾನೆ. ಹಾಸ್ಟಲ್ ನಲ್ಲಿ ಇದ್ರೆ ಎಲ್ಲಿ ಪೋಷಕರಿಗೆ ಹೊರೆಯಾಗುತ್ತೆ ಎಂದು ಆಲೋಚನೆ ಮಾಡಿ ಹಳ್ಳಿಯಿಂದಲೇ ಪ್ರತಿನಿತ್ಯ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿ ಬಸ್ ಹಿಡಿದು ಕಾಲೇಜ್ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಎಷ್ಟಾದ್ರೂ ಕಷ್ಟಪಟ್ಟು ಮೆಡಿಕಲ್ ಮುಗಿಸಿ ತಂದೆ-ತಾಯಿಗಳನ್ನು ಸುಖವಾಗಿ ನೋಡಿಕೊಳ್ಳುತ್ತೇನೆ. ಆದ್ರೆ ಕಾಲೇಜ್ ಶುಲ್ಕ ಕಟ್ಟಲು ಪೋಷಕರು ಕೂಲಿ ಮಾಡಿ ನನ್ನನ್ನು ಓದಿಸುತ್ತಿದ್ದಾರೆ. ನಮಗೆ ಅಸರೆಯ ಕೈಗಳು ಬೇಕಾಗಿವೆ ಎಂಬುದು ಇದೀಗ ವಿದ್ಯಾರ್ಥಿಯ ಮನವಿ.

    ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಸರ್ಕಾರಿ ಮೆಡಿಕಲ್ ಸೀಟ್ ಪಡೆದಿರೋ ಈತನ ಡಾಕ್ಟರ್ ಕನಸು ನನಸು ಮಾಡಲು ಸಹಾಯ ಬೇಕಿದೆ.

  • ಬಲಗಾಲು, ಬಲಗೈ ಸ್ವಾದೀನ ಇಲ್ಲ, ಮಾತನಾಡಲು ಕಷ್ಟ ಆದರೂ ಓದಬೇಕೆಂಬ ಹಂಬಲ

    ಬಲಗಾಲು, ಬಲಗೈ ಸ್ವಾದೀನ ಇಲ್ಲ, ಮಾತನಾಡಲು ಕಷ್ಟ ಆದರೂ ಓದಬೇಕೆಂಬ ಹಂಬಲ

    ಚಿತ್ರದುರ್ಗ: ಹುಟ್ಟುವಾಗಲೇ ಶಾಪಗ್ರಸ್ಥರಾಗಿ ಬಲಗಾಲು, ಬಲಗೈ ಸ್ವಾದೀನ ಕಳೆದುಕೊಂಡಿದ್ದು, ಮಾತನಾಡಲು ಆಗದೇ ಕಷ್ಟ ಅನುಭವಿಸುತ್ತಿರುವ ಶಿವಕುಮಾರ್‍ಗೆ ಓದಬೇಕೆಂಬ ಹಂಬಲ ಇದೆ. ಆದ್ದರಿಂದ ಸಹಾಯ ಕೇಳಿಕೊಂಡು ನಮ್ಮ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಜಿಲ್ಲೆಯ ಹುಲ್ಲೂರು ನಾಯಕರಹಟ್ಟಿ ಗ್ರಾಮದ ಸಾವಿತ್ರಮ್ಮನ ಅವರ ಪುತ್ರ ಶಿವಕುಮಾರ್. ಇವರು ಹುಟ್ಟುವಾಗಲೇ ವಿಕಲಚೇತನರಾಗಿ ಜನಿಸಿದ್ದಾರೆ. ಶಿವಕುಮಾರ್ ತಮ್ಮ ಬಲಗಾಲು, ಬಲಗೈ ಸ್ವಾದೀನವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಾತನಾಡಲು ಆಗದೇ ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಶಿವಕುಮಾರ್ ಓದಬೇಕೆಂಬ ಹಂಬಲ ಹಾಗೂ ದುಡಿಯಬೇಕೆಂಬ ಛಲವನ್ನು ಇಟ್ಟುಕೊಂಡಿದ್ದಾರೆ.

    ತಂದೆ ತಾಯಿಗೆ ಹೊರೆಯಾಗಿರಲು ಇಷ್ಟಪಡದೇ ಪ್ರಥಮ ಬಿಎ ಪದವಿಯನ್ನು ಓದುತ್ತಿರುವ ಶಿವಕುಮಾರ್ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಕಲಚೇತನರಿಗೆ ನೀಡುವ ವಾಹನಕ್ಕಾಗಿ ಪರದಾಡಿದ್ದಾರೆ. ಕಾಲೇಜು ಮುಗಿಸಿ ನಂತರ ಗ್ರಾಮದಲ್ಲಿ ವ್ಯಾಪಾರ ಮಾಡಲು ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ಅಂಗವಿಕಲರಿಗೆ ನೀಡುವ ನೇರ ಸಾಲಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ಅರ್ಜಿಗಳಿಗೆ ಮಾತ್ರ ಯಾವ ಇಲಾಖೆಯು ಪ್ರತಿಕ್ರಿಯಿಸುತ್ತಿಲ್ಲ. ಆದ್ದರಿಂದ ಪ್ರತಿದಿನ ತಾಯಿಯೊಂದಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುತ್ತಾರೆ.

    ವಿಪರ್ಯಾಸ ಎಂದರೆ ಚಿತ್ರದುರ್ಗದ ಉಸ್ತುವಾರಿ ಹೊತ್ತಿರುವ ಸಚಿವರಾದ ಹೆಚ್ ಆಂಜನೇಯನವರ ತವರೂರು ಜಿಲ್ಲೆಯಲ್ಲೇ ಸೌಲಭ್ಯ ವಂಚಿತರನ್ನಾಗಿಸುತ್ತಿರುವುದು ನಾಚಿಕೆಯ ಸಂಗತಿಯಾಗಿದೆ.

    ಚಿಕ್ಕ ವಯಸ್ಸಿನಿಂದಲೂ ವಿಕಲಚೇತನ ಮಗನಿಗೆ ಊರುಗೋಲಾಗಿರುವ ತಾಯಿ ಸಾವಿತ್ರಮ್ಮ. ಮಗನಿಗಾಗಿ ಸರ್ಕಾರ ವಿದ್ಯಾರ್ಥಿ ವೇತನ ಕೊಟ್ಟು, ಪದವಿ ಪೂರ್ಣಗೊಳಿಸಲು ಸಹಕರಿಸಬೇಕು. ಸಬ್ಸಿಡಿ ಸಾಲ ಕೊಟ್ಟು ಸ್ವಾವಲಂಬಿಯಾಗಿ ಬದುಕಲು ನೆರವಾಗಬೇಕೆಂದು ಅಂಗಲಾಚುತ್ತಾ ಕಣ್ಣೀರಿಡುತ್ತಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=Gml-BsIW4z4

  • ಬೆಳಕು ಇಂಪ್ಯಾಕ್ಟ್: ಸಂಗೀತ ಪ್ರತಿಭೆ ಅಂಧ ನವೀನ್ ಬಾಳಲ್ಲಿ ಮೂಡಿತು ಬೆಳಕು

    ಬೆಳಕು ಇಂಪ್ಯಾಕ್ಟ್: ಸಂಗೀತ ಪ್ರತಿಭೆ ಅಂಧ ನವೀನ್ ಬಾಳಲ್ಲಿ ಮೂಡಿತು ಬೆಳಕು

    ರಾಯಚೂರು: ರಾಯಚೂರಿನ ನಾಗಲಾಪುರ ಗ್ರಾಮದ ರೈತ ಗುಂಡಪ್ಪ ಎಂಬವರಿಗೆ ಮೂವರು ಮಕ್ಕಳು ಅಂಧರಾಗಿ ಹುಟ್ಟಿದ್ದಾರೆ. ಈ ಮೂವರಲ್ಲಿ ನವೀನ್ ಕೂಡ ಒಬ್ಬರಾಗಿದ್ದಾರೆ. ನವೀನ್ ಗೆ ಓದಿನಲ್ಲಿ ವಿಪರೀತ ಆಸಕ್ತಿ, ಕೀಬೋರ್ಡ್ ನುಡಿಸಿ ಏನಾದ್ರೂ ಸಾಧಿಸಬೇಕೆಂಬ ಹಂಬಲವಿತ್ತು. ವಿದ್ಯಾಭ್ಯಾಸ ಮತ್ತು ಕೀಬೋರ್ಡ್ ಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಯಾಚಿಸಿ ಬಂದಿದ್ದ ನವೀನ್‍ನ ಕನಸು ಇಂದು ನನಸಾಗಿದೆ.

    ಓದಿನಲ್ಲಿ ಎಂದೂ ಹಿಂದೆ ಬೀಳದೆ ಹಿಂದುಸ್ತಾನಿ ಸಂಗೀತದಲ್ಲೂ ಫಸ್ಟ್ ಕ್ಲಾಸ್‍ನಲ್ಲಿ ಜೂನಿಯರ್ ಮುಗಿಸಿದ್ದಾರೆ. ಬಿಸಿಎಂ ವಸತಿ ನಿಲಯದಲ್ಲಿ ವಾಸವಾಗಿ ಇನ್ ಫ್ಯಾಂಟ್ ಜೀಸಸ್ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಓದುತ್ತಿರುವ ನವೀನ್ ಈಗ ಎಲ್ಲಾ ಚಿಂತೆ ಮರೆತು ಓದು ಹಾಗೂ ಸಂಗೀತದಲ್ಲಿ ಸಾಧನೆ ಮಾಡುತ್ತಿದ್ದಾರೆ.

    ನವೀನ್‍ಗೆ ಅವಶ್ಯವಿದ್ದ ಕೀಬೋರ್ಡ್ ನ್ನ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ವೀಕ್ಷಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಶಂಕರ್, ರಾಕೇಶ್ ಹಾಗೂ ಅಶೋಕ್ ಜೈನ್ ಒಟ್ಟಾಗಿ ಖರೀದಿಸಿ ಕೊಟ್ಟಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಂದಿಸಿದ ಇನ್ ಫ್ಯಾಂಟ್ ಜೀಸಸ್ ಕಾಲೇಜು ನವೀನ್‍ನಿಂದ ಅತ್ಯಲ್ಪ ಶುಲ್ಕ ಮಾತ್ರ ಪಡೆದು ಸಾಧನೆಗೆ ಸಹಾಯ ಮಾಡುತ್ತಿದೆ.

    ಸಾಧನೆಗೆ ದೈಹಿಕ ಅಂಗವಿಕಲತೆ ಮುಖ್ಯವಲ್ಲ ಅನ್ನೋದನ್ನ ಸಮಾಜಕ್ಕೆ ತೋರಿಸಬೇಕು ಅಂತ ಹಠಕ್ಕೆ ಬಿದ್ದಿರುವ ನವೀನ್ ಗೆ ಸಹಾಯಹಸ್ತ ಸಿಕ್ಕಿದೆ. ಎಲೆಮರೆ ಕಾಯಿಯಂತಿರುವ ಸಂಗೀತ ಪ್ರತಿಭೆ ನವೀನ್ ತನ್ನ ಸಾಧನೆ ಮೂಲಕ ಎತ್ತರಕ್ಕೆ ಬೆಳೆಯಲಿ ಅನ್ನೋದಷ್ಟೆ ನಮ್ಮ ಆಶಯ.

    https://www.youtube.com/watch?v=QxiIUnZZEP0

  • ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಪಾಟ್ನಾ: ವಿದ್ಯಾರ್ಥಿನಿಯರ ಮೇಲೆ ರ್‍ಯಾಗಿಂಗ್‌ ಎಸಗಿದ್ದಕ್ಕೆ 54 ವಿದ್ಯಾರ್ಥಿನಿಯರಿಗೆ ಬಿಹಾರದ ದರ್ಭಾಂಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಾ 25 ಸಾವಿರ ರೂ. ದಂಡ ವಿಧಿಸಿದೆ. 54 ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ್ದನ್ನು ಒಪ್ಪಿಕೊಂಡ ಕಾಲೇಜು, ಎಲ್ಲ ವಿದ್ಯಾರ್ಥಿಗಳಿಂದ ಒಟ್ಟು 13.50 ಲಕ್ಷ ರೂ. ಹಣವನ್ನು ಸಂಗ್ರಹಿಸಿದೆ.

    ಹಾಸ್ಟೆಲ್ ನಲ್ಲಿದ್ದ ಪ್ರಥಮ ವರ್ಷದ ಸೆಮಿಸ್ಟರ್ ಓದುತ್ತಿದ್ದ ಓರ್ವ ಸಂತ್ರಸ್ತೆ ನವೆಂಬರ್ 11 ರಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ಗೆ ತನಗೆ ಆಗುತ್ತಿರುವ ಅನ್ಯಾಯವನ್ನು ತೋಡಿಕೊಂಡು ಈ ಮೇಲ್ ಮೂಲಕ ದೂರನ್ನು ನೀಡಿದ್ದಳು.

    ವಿದ್ಯಾರ್ಥಿನಿಯ ವಿವರವನ್ನು ಬಹಿರಂಗ ಪಡಿಸದೇ ಈ ದೂರಿನ ಪ್ರತಿಯನ್ನು ಕಾಲೇಜಿನ ಆಡಳಿತ ಮಂಡಳಿಗೆ ಕಳುಹಿಸಿ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಎಂಸಿಐ ಆದೇಶಿಸಿತ್ತು.

    ಎಂಸಿಐ ಆದೇಶದ ಅನ್ವಯ ಈಗ ಮೂರನೇ ಸೆಮಿಸ್ಟರ್ ಓದುತ್ತಿದ್ದ ಎಲ್ಲ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಥಮ ವರ್ಷ ಓದುತ್ತಿರುವ 26 ಮಂದಿ ಈ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೂ ದಂಡವನ್ನು ವಿಧಿಸಿದೆ.

    ರ್‍ಯಾಗಿಂಗ್‌ ಆಗುತ್ತಿರುವ ವಿಚಾರ ತಿಳಿದಿದ್ದರೂ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರದೇ ಘಟನೆಯನ್ನು ಮರೆಮಾಚಲು ಯತ್ನಿಸಿದ್ದಕ್ಕೆ ಪ್ರಥಮ ಸೆಮಿಸ್ಟರ್ ಓದುತ್ತಿದ್ದ 26 ವಿದ್ಯಾರ್ಥಿನಿಯರಿಗೆ ದಂಡ ಹಾಕಲಾಗಿದೆ. ಒಂದು ವೇಳೆ ನವೆಂಬರ್ 25ರ ಒಳಗಡೆ ಈ ದಂಡವನ್ನು ಪಾವತಿಸದೇ ಇದ್ದಲ್ಲಿ ಆ ವಿದ್ಯಾರ್ಥಿನಿಯರ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ.

     

  • ಟೀ ಮಾರಾಟ ಮಾಡಿ ಸಂಪಾದನೆ- ಭರ್ಜರಿಯಾಗಿ ಇಂಗ್ಲಿಷ್ ಮಾತನಾಡುವ ಹೈಟೆಕ್ ಹಳ್ಳಿ ಮಕ್ಕಳು

    ಟೀ ಮಾರಾಟ ಮಾಡಿ ಸಂಪಾದನೆ- ಭರ್ಜರಿಯಾಗಿ ಇಂಗ್ಲಿಷ್ ಮಾತನಾಡುವ ಹೈಟೆಕ್ ಹಳ್ಳಿ ಮಕ್ಕಳು

    ಕೊಪ್ಪಳ: ಅದು ವಿದೇಶಿ ಪ್ರವಾಸಿಗರ ಸ್ವರ್ಗದ ತಾಣ. ಅಲ್ಲಿನ ಸೂರ್ಯಾಸ್ತ ನೋಡಲು ದೇಶ, ವಿದೇಶದಿಂದ ಜನರು ಬರುತ್ತಾರೆ. ಅಲ್ಲಿಗೆ ಕೆಲವು ಶಾಲಾ ಮಕ್ಕಳು ಬಂದು ಟೀ ಮಾರಿಕೊಂಡು ಸಂಪಾದನೆ ಮಾಡುತ್ತಾರೆ. ಜೊತೆಗೆ ಭರ್ಜರಿಯಾಗಿ ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಮಾತನಾಡಿಕೊಂಡು ವ್ಯವಹಾರ ನಡೆಸುತ್ತಾರೆ.

    ಜಿಲ್ಲೆಯ ವಿರುಪಾಪುರ ಗಡ್ಡೆಯಲ್ಲಿ ಸೂರ್ಯ ಮುಳುಗೋದನ್ನ ನೋಡೋದೇ ಒಂದು ರೀತಿ ಖುಷಿ. ಪಶ್ಚಿಮ ಘಟ್ಟದ ಆಗುಂಬೆಯಲ್ಲಿ ಮಳೆಗಾಲ, ಚಳಿಗಾಲದಲ್ಲಿ ಸೂರ್ಯಾಸ್ತಮ ಕಾಣಿಸಲ್ಲ. ಆದರೆ ವಿರುಪಾಪುರ ಗಡ್ಡೆಯಲ್ಲಿ ವರ್ಷವಿಡಿ ಸೂರ್ಯ ಮುಳುಗೋ ಸನ್ನಿವೇಶವನ್ನು ಕಣ್ತುಂಬಿಕೊಳ್ಳಬಹುದು.

    ಇಂತಹ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳೋಕೆ ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಬಂದವರನ್ನೆಲ್ಲಾ ಇಂಗ್ಲಿಷ್‍ನಲ್ಲೇ ಮಾತನಾಡಿಸುತ್ತಾ ಟೀ, ಲೆಮನ್ ಟೀ, ಜ್ಯೂಸ್ ಮತ್ತು ನೀರಿನ ಬಾಟಲ್ ಸೇಲ್ ಮಾಡುತ್ತಾರೆ ವಿರುಪಾಪುರ ಗಡ್ಡೆಯ ಸುತ್ತಮುತ್ತಲಿನ ಗ್ರಾಮದ ಮಕ್ಕಳು.

    ನಾವು ಬರೀ ಟೀ ಮಾರಾಟ ಮಾಡಲ್ಲ. ಬೆಳಗ್ಗಿನಿಂದ ಶಾಲೆಯಲ್ಲಿ ಪಾಠ ಕಲಿತು ಮನೆಗೆ ಬರುತ್ತೇವೆ. ಸಂಜೆ ಟೀ ಮಾರಾಟ ಮಾಡಿ ಮನೆಯವರಿಗೆ ಹಣಕಾಸಿಗೆ ಬೆನ್ನೆಲುಬಾಗಿ ದುಡೀತ್ತೀವಿ. ಸರಿಸುಮಾರು 10 ರಿಂದ 15 ಮಕ್ಕಳು ಹೀಗೆ ಟೀ ಮಾರುತ್ತಾ ಶಿಕ್ಷಣದ ಜೊತೆಗೆ ಬದುಕು ಕಟ್ಟಿಕೊಳ್ಳುವ ವ್ಯವಹಾರನೂ ಕೂಡ ಕಲಿತ್ತಿದ್ದೇವೆ ಎಂದು ಟೀ ಮಾರುವ ವಿದ್ಯಾರ್ಥಿ ಆಕಾಶ್ ನಾಯಕ್ ಹೇಳುತ್ತಾನೆ.

    ದೊಡ್ಡವರು ಸುಮ್ಮನೆ ಹೇಳ್ತಾರ ಹಾಡ್ತಾ ಹಾಡ್ತಾ ರಾಗ ಅಂತಾ. ಒಟ್ಟಿನಲ್ಲಿ ಹಂಪಿ, ಆನೆಗುಂದಿ ಸುತ್ತಲಿನ ನಿಸರ್ಗ ಸಂಪತ್ತು ಪ್ರವಾಸಿ ತಾಣವಾಗಿರದೇ ಬಡ ಮಕ್ಕಳಿಗೂ ಬದುಕು ಕಟ್ಟಿಕೊಡುತ್ತಿದೆ.

     

  • ಶಾಲಾ ಮುಖ್ಯಸ್ಥನ ಕೊಲೆ ರಹಸ್ಯ ಬಾರ್‌ನಲ್ಲಿ ಬಯಲು: ಮುಚ್ಚಿ ಹೋಗಿದ್ದ ಪ್ರಕರಣ ಮತ್ತೆ ಓಪನ್

    ಶಾಲಾ ಮುಖ್ಯಸ್ಥನ ಕೊಲೆ ರಹಸ್ಯ ಬಾರ್‌ನಲ್ಲಿ ಬಯಲು: ಮುಚ್ಚಿ ಹೋಗಿದ್ದ ಪ್ರಕರಣ ಮತ್ತೆ ಓಪನ್

    ಮೈಸೂರು: ಖಾಸಗಿ ಶಾಲೆಯ ಮುಖ್ಯಸ್ಥನ ಕೊಲೆ ರಹಸ್ಯ ಬಾರ್ ನಲ್ಲಿ ಬಯಲಾಗುವ ಮೂಲಕ ಮುಚ್ಚಿಹೋಗಿದ್ದ ಪ್ರಕರಣವೊಂದು ಮತ್ತೆ ಓಪನ್ ಆಗಿದೆ.

    ಚಾಣಕ್ಯ ಶಾಲಾ ಮುಖ್ಯಸ್ಥ ಕೃಷ್ಣ (40) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಒಬ್ಬನನ್ನು ಬಂಧಿಸಿ ನಾಪತ್ತೆಯಾಗಿರುವ ಪತ್ನಿ ಹಾಗೂ ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಮೈಸೂರಿನ ದಟ್ಟಗಳ್ಳಿಯಲ್ಲಿ ಚಾಣಕ್ಯ ಶಾಲೆಯ ಸಂಸ್ಥಾಪಕ ಕೃಷ್ಣ ಅವರು ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಪತ್ನಿ ರಾಧಾ ಪತಿ ಕೃಷ್ಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಪೊಲೀಸರು ಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಕೃಷ್ಣ ಮೃತದೇಹಕ್ಕೆ ಸಂಬಂಧಿಕರು ಅಗ್ನಿಸ್ಪರ್ಶ ನೆರವೇರಿಸುವ ಮೂಲಕ ಅಂತ್ಯಕ್ರಿಯೆ ನಡೆಸಿದ್ದರು. ಇದಾದ ಬಳಿಕ ಪ್ರತಿ ತಿಂಗಳು ಪತ್ನಿ ಮತ್ತು ಕುಟುಂಬದ ಸದಸ್ಯರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದರು. ಕೃಷ್ಣ ಮೃತಪಟ್ಟ ನಂತರ ರಾಧಾ ಅವರು ಚಾಣಕ್ಯ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದರು.

    ಬೆಳಕಿಗೆ ಬಂದಿದ್ದು ಹೇಗೆ?
    ಕೆಲ ದಿನಗಳ ಹಿಂದೆ ಕುವೆಂಪು ನಗರದ ಬಾರ್ ನಲ್ಲಿ ರಾತ್ರಿ ವೇಳೆ ಕಂಠಪೂರ್ತಿ ಕುಡಿದಿದ್ದ ಮೂವರು ಯುವಕರು ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಒಬ್ಬಾತ, ಕೃಷ್ಣರ ಮುಖವನ್ನು ದಿಂಬಿನಿಂದ ಅದುಮಿ ಉಸಿರು ಕಟ್ಟಿಸಿ ಕೊಂದ್ರು ಯಾರಿಗೂ ಗೊತ್ತಾಗಿಲ್ಲ. ಘಟನೆ ಆಗಿ ಒಂದು ವರ್ಷ ಆದ್ರೂ ಇದೂವರೆಗೂ ಕೊಂದವರು ಯಾರು ಅನ್ನೋದೆ ಗೊತ್ತಾಗಿಲ್ಲ. ಇದಕ್ಕೆ ಧಮ್ ಬೇಕಲೆ ಧಮ್ ಬೇಕು. ನೋಡು ನಮ್ಮ ಹವಾ ಹೆಂಗೆ ಮೇಂಟೆನ್ ಮಾಡಿದ್ವಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಈತ ತನ್ನ ಕೃತ್ಯದ ಬಗ್ಗೆ ಓಪನ್ ಆಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಆತನ ಟೇಬಲ್ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಕೃಷ್ಣ ಅವರ ಸಂಬಂಧಿಯೊಬ್ಬರು ಕೇಳಿಸಿಕೊಂಡಿದ್ದಾರೆ.

    ಬಾರ್ ನಲ್ಲಿ ಯುವಕ ಹೇಳಿದ ವಿಚಾರವನ್ನು ಸಂಬಂಧಿಗಳ ಬಳಿ ತಿಳಿಸಿ ಬಳಿಕ ಪತ್ನಿ ರಾಧಾ ಅವರಲ್ಲಿ ಚರ್ಚಿಸಿದ್ದಾರೆ. ಈ ವೇಳೆ ರಾಧಾ ಅವರು ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಾದ ಮಾಡಿದ್ದಾರೆ.

    ಕೊನೆಗೆ ಕೃಷ್ಣ ಅವರ ಸಂಬಂಧಿಗಳು ಬಾರ್ ನಲ್ಲಿ ನಡೆದ ಯುವಕನ  ಮಾತುಕತೆಯ ಆಧಾರದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣೇಶ್ವರರಾವ್ ಅವರು ತನಿಖೆ ನಡೆಸುವಂತೆ ಸಿಸಿಬಿಗೆ ಆದೇಶಿಸಿದರು.

    ಸಿಸಿಬಿ ಪೊಲೀಸರು ಶಂಕಿತ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಗಾಢ ನಿದ್ರೆಯಲ್ಲಿದ್ದ ಕೃಷ್ಣ ಅವರನ್ನು ಅವರ ಮನೆಯಲ್ಲೇ ಹತ್ಯೆಮಾಡಿದ್ದೇವೆ ಎಂದು ತಿಳಿಸಿದ್ದಾನೆ.

    ಚಾಣಕ್ಯ ಶಾಲೆಗೆ ಮಂಜುನಾಥ್ ಕುಡಿಯುವ ನೀರಿನ ಕ್ಯಾನ್ ಪೂರೈಕೆ ಮಾಡುತ್ತಿದ್ದ. ಈ ವೇಳೆ ರಾಧಾ ಮತ್ತು ಮಂಜುನಾಥ್ ನಡುವೆ ಪರಿಚಯವಾಗಿತ್ತು. ಈಗ ನಾಪತ್ತೆಯಾಗಿರುವ ಪತ್ನಿ ರಾಧಾ ಮತ್ತು ಉಳಿದ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

     

  • ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಪುಣೆ: ಸಸ್ಯಹಾರಿ ಆಗಿರುವ, ಮದ್ಯಪಾನ ಮಾಡದ ವಿದ್ಯಾರ್ಥಿಗೆ ಮಾತ್ರ ರ‍್ಯಾಂಕ್‌ ನೀಡುವುದಾಗಿ ಪುಣೆ ವಿಶ್ವವಿದ್ಯಾಲಯ ನಿಯಮ ರೂಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಹೌದು, ಪುಣೆಯ ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ ಕೆಲ ನಿಯಮಗಳನ್ನು ರೂಪಿಸಿ ಸುತ್ತೋಲೆ ಹೊರಡಿಸಿದೆ.

    ಸುತ್ತೋಲೆಯಲ್ಲಿ ಮಹರ್ಷಿ ಕೀರ್ತಂಕರ್ ಶೀರಲ್ ಮಾಮ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ 10 ನಿಯಮಗಳನ್ನು ಪ್ರಕಟಿಸಿದ್ದು ಈ ನಿಯಮಗಳಲ್ಲಿ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು ಮತ್ತು ಮದ್ಯಪಾನ ಮಾಡಿರಬಾರದು ಎಂದು ತಿಳಿಸಲಾಗಿದೆ.

    ಸುತ್ತೋಲೆಯಲ್ಲಿ ಏನಿದೆ?
    ಸಸ್ಯಹಾರಿ ಮತ್ತು ಮದ್ಯ ಸೇವನೆ ಅಲ್ಲದೇ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ರಕ್ತದಾನ ಶಿಬಿರ, ಶ್ರಮದಾನ, ಪರಿಸರ ರಕ್ಷಣೆ, ಮಲಿನ್ಯ ನಿಯಂತ್ರಣ ಕೆಲಸ, ಸಾಹಿತ್ಯ, ಶುಚಿತ್ವ, ಏಡ್ಸ್ ಜಾಗೃತಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರಬೇಕು ಎನ್ನುವ ಅಂಶ ಸುತ್ತೋಲೆಯಲ್ಲಿದೆ.

    ಯಾಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದಕ್ಕೆ ವಿವಿ, ಈ ಚಿನ್ನದ ಪದಕವನ್ನು ಟ್ರಸ್ಟ್ ಒಂದು ಪ್ರಯೋಜನೆ ಮಾಡಿದ್ದು, ಟ್ರಸ್ಟ್ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ಈ ಎಲ್ಲ ಅರ್ಹತೆಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿತ್ತು. ಹೀಗಾಗಿ ನಾವು ಈ ನಿಯಮವನ್ನು ಸುತ್ತೋಲೆಯಲ್ಲಿ ಸೇರಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿತ್ತು.

    ಪುಣೆ ವಿವಿಯ ಈ ವಿಶೇಷ ನಿಯಮಕ್ಕೆ ಶಿವಸೇನೆ ಮತ್ತು ಎನ್‍ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿವಾದವಾಗುತ್ತಿದ್ದಂತೆ ವಿಶ್ವವಿದ್ಯಾಲಯ ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

    ವಿವಿಯ ರಿಜಿಸ್ಟ್ರರ್ ಅರವಿಂದ್ ಶಾಲಿಗ್ರಮ್ ಪ್ರತಿಕ್ರಿಯಿಸಿ, 2006ರಲ್ಲಿ ಮೊದಲ ಬಾರಿಗೆ ಈ ರೀತಿಯ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈಗ ಪ್ರತಿ ವರ್ಷ ಹೊರಡಿಸಲಾಗುತ್ತಿದೆ. ಯೋಗಿ ಮಹರ್ಷಿ ಶೀಲರ್‍ಮಾಮ ಟ್ರಸ್ಟ್ ವತಿಯಿಂದ ಚಿನ್ನದ ಪದಕ ನೀಡಲಾಗುತ್ತಿದೆ. ಅವರು ಸೂಚಿಸಿದ ಷರತ್ತುಗಳನ್ನು ವಿಧಿಸಿ ವಿವಿ ಪ್ರತಿವರ್ಷ ಈ ಸುತ್ತೋಲೆಯನ್ನು ಹೊರಡಿಸಲಾಗುತ್ತಿದೆ ಹೊರತು ವಿವಿಯ ಪಾತ್ರ ಇದರಲ್ಲಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈಗ ಮಾಧ್ಯಮಗಳಿಗೆ ಸಿಕ್ಕಿರುವ ಸುತ್ತೋಲೆ ಇದೇ ಅಕ್ಟೋಬರ್ 31 ರಂದು ಹೊರಡಿಸಲಾಗಿದೆ.

    ಎನ್‍ಸಿಪಿ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, ಪುಣೆ ವಿವಿ ನಿರ್ಧಾರ ನಿಜಕ್ಕೂ ಶಾಕಿಂಗ್. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

     

  • ಚೆನ್ನಾಗಿ ಓದು ಅಂತಾ ಹೇಳಿದಕ್ಕೆ ಆತ್ಮಹತ್ಯೆಗೆ ಶರಣಾದ ಮಗ

    ಚೆನ್ನಾಗಿ ಓದು ಅಂತಾ ಹೇಳಿದಕ್ಕೆ ಆತ್ಮಹತ್ಯೆಗೆ ಶರಣಾದ ಮಗ

    ಬೆಂಗಳೂರು: ಪೋಷಕರು ಓದಿನ ಕಡೆ ಗಮನ ಕೊಡು ಅಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸೋಲದೇವನಹಳ್ಳಿಯಲ್ಲಿ ನಡೆದಿದೆ.

    ಮಂಜುನಾಥ್ ರೆಡ್ಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಜುನಾಥ್ ನಗರದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮಂಜುನಾಥ್ ಓದಿನಲ್ಲಿ ವೀಕ್ ಇದ್ದ ಅಂತ ಪೋಷಕರು ಮಗ ಚೆನ್ನಾಗಿ ಓದಲಿ ಅಂತ ಟ್ಯೂಷನ್ ಗೆ ಸೇರಿಸಿದ್ದರು.

    ಇದನ್ನು ಓದಿ: `ಐ ಮಿಸ್ ಯು’ ಅಮ್ಮ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಹೋದ ಹತ್ತನೇ ತರಗತಿ ವಿದ್ಯಾರ್ಥಿ

    ಬುಧವಾರ ಸಂಜೆ ಟ್ಯೂಷನ್ ಕ್ಲಾಸ್ ಮುಗಿಸಿಕೊಂಡ ಬಂದ ಮಂಜುನಾಥ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಇನ್ನು ಮಂಜುನಾಥ್ ತಂದೆ ಚಂದ್ರ ಶೇಖರ್ ರೆಡ್ಡಿ ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ದೇಹವನ್ನು ಮರೋಣತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.