Tag: dynamite

  • ಜಿಲೆಟಿನ್‌, ಡೈನಾಮೈಟ್‌ ಅಲ್ಲ -ಹುಣಸೋಡಿನಲ್ಲಿ ಜೆಲ್‌ ಸ್ಫೋಟಕ ಸ್ಫೋಟ

    ಜಿಲೆಟಿನ್‌, ಡೈನಾಮೈಟ್‌ ಅಲ್ಲ -ಹುಣಸೋಡಿನಲ್ಲಿ ಜೆಲ್‌ ಸ್ಫೋಟಕ ಸ್ಫೋಟ

    – ಪಬ್ಲಿಕ್‌ ಟಿವಿಗೆ ಶಿವಮೊಗ್ಗ ಡಿಸಿ ಹೇಳಿಕೆ
    – ವಿದೇಶದಲ್ಲಿ ಬಳಸುವ ಸ್ಫೋಟಕವನ್ನು ತಂದವರು ಯಾರು?

    ಶಿವಮೊಗ್ಗ: ಹುಣಸೋಡಿನಲ್ಲಿ ಜಿಲೆಟಿನ್‌ ಮತ್ತು ಡೈನಾಮೈಟ್‌ ಸ್ಫೋಟಗೊಂಡಿಲ್ಲ. ಬದಲಾಗಿ ಜೆಲ್‌ ರೂಪದ ವಸ್ತು ಸ್ಫೋಟಗೊಂಡ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಪಬ್ಲಿಕ್‌ ಟಿವಿಗೆ ಜಿಲ್ಲಾಧಿಕಾರಿ ಡಿಸಿ ಶಿವಕುಮಾರ್‌ ಪ್ರತಿಕ್ರಿಯಿಸಿ, ಬೆಂಗಳೂರು ಮತ್ತು ಮಂಗಳೂರಿನಿಂದ ಆಗಮಿಸಿದ ಬಾಂಬ್‌ ನಿಷ್ಕ್ರಿಯ ದಳದ ಸದಸ್ಯರು ಬಂದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಜೆಲ್‌ ರೂಪದ ವಸ್ತು ಸ್ಫೋಟಗೊಂಡ ವಿಚಾರ ತಿಳಿದು ಬಂದಿದೆ. ಇದು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿ ಎಂದು ತಿಳಿಸಿದರು.

    ಜೆಲ್‌ ರೀತಿಯ ಸ್ಫೋಟಕವನ್ನು ವಿದೇಶದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಈ ಕ್ವಾರಿಗೆ ಸ್ಫೋಟಕ ಬಂದಿದ್ದು ಹೇಗೆ? ಎಲ್ಲಿಂದ ತಂದಿದ್ದಾರೆ? ಇಷ್ಟು ದೊಡ್ಡ ಪ್ರಮಾಣದಲ್ಲಿ ತಂದವರು ಯಾರು? ಎಂಬುದರ ಬಗ್ಗೆ ತನಿಖೆ ನಡೆದಾಗ ಸ್ಪಷ್ಟವಾದ ವಿಚಾರ ಲಭ್ಯವಾಗಲಿದೆ ಎಂದು ತಿಳಿಸಿದರು.

    ಸದ್ಯ ಸ್ಫೋಟದ ಸ್ಥಳದಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಮುಖ್ಯಮಂತ್ರಿಗಳಿಗೆ ಎಲ್ಲ ಮಾಹಿತಿಗಳನ್ನು ನೀಡುತ್ತಿದ್ದೇವೆ. ಅಕ್ರಮ ಕಲ್ಲು ಕ್ವಾರಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

    ಗುರುವಾರ ರಾತ್ರಿ 2 ಶವಗಳು ಪತ್ತೆಯಾಗಿತ್ತು. ಇಂದು ಮೂರು ಶವ ಪತ್ತೆಯಾಗಿದೆ. ದುರಂತದಲ್ಲಿ ಒಟ್ಟು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

  • ಬಂಡೆಕಲ್ಲು ಸಿಡಿತದ ಭಾರೀ ಶಬ್ಧಕ್ಕೆ ಬೆಚ್ಚಿಬಿದ್ದ ಬೆಂಗ್ಳೂರು!

    ಬಂಡೆಕಲ್ಲು ಸಿಡಿತದ ಭಾರೀ ಶಬ್ಧಕ್ಕೆ ಬೆಚ್ಚಿಬಿದ್ದ ಬೆಂಗ್ಳೂರು!

    ಬೆಂಗಳೂರು: ಲೇಔಟ್ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದ ಸ್ಫೋಟಕಗಳನ್ನ ಬಳಸಿ ಬಂಡೆ ಕಲ್ಲನ್ನು ಒಡೆದಿದ್ದು ಕೆಲಕಾಲ ನಗರದಲ್ಲಿ ಆತಂಕಕ್ಕೆ ಕಾರಣವಾಗಿತ್ತು.

    ರಾಜರಾಜೇಶ್ವರಿ ನಗರ ನೈಸ್ ರಸ್ತೆಯ ಬಳಿ ಕೆರೆಕೋಡಿ ಎಂಬಲ್ಲಿ ಲೇಔಟ್ ನಿರ್ಮಾಣಕ್ಕೆ ಬಂಡೆ ಕಲ್ಲನ್ನು ಒಡೆಯಲಾಗುತ್ತಿದೆ. ಸ್ಫೋಟಕಗಳನ್ನು ಬಳಸಿ ಒಡೆಯುತ್ತಿದ್ದ ಕೆಲಸಗಾರರು ಇವತ್ತು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಿದ್ದಾರೆ. ಇದರ ಪರಿಣಾಮ ರಾಜರಾಜೇಶ್ವರಿ ನಗರ, ಕೆಂಗೇರಿ, ಕುಮಾರಸ್ವಾಮಿ ಲೇಔಟ್ ಸಮೀಪದ ಪ್ರದೇಶಗಳಲ್ಲಿ ಭಾರೀ ಶಬ್ಧ ಕೇಳಿದೆ. ಶಬ್ಧ ಕೇಳಿದ ಕೂಡಲೇ ಜನ ಆತಂಕದಿಂದ ಹೊರ ಬಂದಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಕೆರಕೋಡಿ ನಿವಾಸಿ ಜಯಪ್ರಭಾ, ಕಳೆದ ಮೂರು ತಿಂಗಳಿನಿಂದ ಈ ಭಾಗದಲ್ಲಿ ಲೇಔಟ್ ನಿರ್ಮಾಣಕ್ಕೆ ಬಂಡೆ ಕಲ್ಲನ್ನು ಒಡೆಯಲಾಗುತ್ತಿದೆ. ಡೈನಾಮೈಟ್ ಬಳಸಿ ಒಡೆಯುವ ಕಾರಣ ಈ ಶಬ್ಧ ಸಾಮಾನ್ಯ. ಆದರೆ ಇಂದು ಭಾರೀ ಪ್ರಮಾಣದಲ್ಲಿ ಡೈನಾಮೈಟ್ ಬಳಸಿರುವ ಸಾಧ್ಯತೆಯಿದೆ. ಹೀಗಾಗಿ ಎಂದಿಗಿಂತ ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿದೆ. ಸ್ವಲ್ಪ ಕಂಪನದ ಅನುಭವ ಆಗಿದೆ ಎಂದು ವಿವರಿಸಿದರು.

    ಭಾರೀ ಪ್ರಮಾಣದ ಶಬ್ಧ ಕೇಳಿ ಬಂದ ಹಿನ್ನೆಯಲ್ಲಿ ಆರ್ ಆರ್ ನಗರ ಸುತ್ತಮುಲ್ಲಿನ ಜನ ಭೂಕಂಪ ಆಯ್ತು ಎಂದು ತಿಳಿದು ಮನೆಯಿಂದ ಹೊರ ಬಂದಿದ್ದರು. ಹೀಗಾಗಿ ಭೂಕಂಪದ ವದಂತಿ ಹರಿದಾಡಲು ಆರಂಭವಾಗಿತ್ತು.

    ಈ ವಿಚಾರದ ಬಗ್ಗೆ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪ್ರತಿಕ್ರಿಯಿಸಿ, ಭೂಮಿ ಕಂಪಿಸಿರುವುದು ಕೇವಲ ವದಂತಿಯಷ್ಟೇ. ಭೂಗರ್ಭದ ಒಳಗೆ ಯಾವುದೇ ಕಂಪನವಾಗಿಲ್ಲ. ಯಾವುದಾದರೂ ದೊಡ್ಡಮಟ್ಟದ ಶಬ್ಧವಾಗಿರಬಹುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಆರ್‍ಎಸ್‍ಗೆ ಎದುರಾಗಿದೆ ಕಂಟಕ – ಡ್ಯಾಮ್ ಬುಡದಲ್ಲೇ ಸಿಡಿಯಲಿದೆ ಡೈನಾಮೈಟ್

    – ಸರ್ಕಾರಿ ಯೋಜನೆಗೆ ಮಂಡ್ಯ ಜನರ ಕಿಡಿ

    ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಗೆ ಗಂಡಾಂತರ ಎದುರಾಗಿದೆ. ಡ್ಯಾಮ್ ಸಮೀಪವೇ ರಾಜ್ಯ ಸರ್ಕಾರ ಹೊಸ ಯೋಜನೆ ಕೈಗೆತ್ತಿಕೊಂಡಿರೋದೇ ಇದಕ್ಕೆ ಕಾರಣ. ಸರ್ಕಾರದ ಈ ನಿರ್ಧಾರದಿಂದ ರೈತರು ಮತ್ತು ಪ್ರಾಣಿ, ಪಕ್ಷಿ ಸಂಕುಲಕ್ಕೂ ಕಂಟಕ ಎದುರಾಗಿದೆ.

    ಕೃಷ್ಣರಾಜಸಾಗರ ಅಣೆಕಟ್ಟೆ ಸಮೀಪದ ಎಡಮುರಿಯಲ್ಲಿ 0.5 ಮೆಗಾವ್ಯಾಟ್ ಕಿರು ವಿದ್ಯುತ್ ಉತ್ಪಾದನಾ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ಬೆಂಗಳೂರಿನ ವಿ ಫ್ರಾಮ್ ಅನ್ನೋ ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ. ಹೀಗಾಗಿ ಗುತ್ತಿಗೆ ಪಡೆದ ಖಾಸಗಿ ಕಂಪನಿ ಬಂಡೆಗಳನ್ನ ಸ್ಫೋಟಿಸಲು ಡೈನಾಮೈಟ್ ಬಳಸ್ತಿದೆ. ಡೈನಾಮೈಟ್ ಬ್ಲಾಸ್ಟ್ ಆಗೋ ಜಾಗದಿಂದ ಕೆಲವೇ ದೂರಗಳಲ್ಲಿ ಕೆಆರ್‍ಎಸ್ ಡ್ಯಾಮ್ ಇದೆ. ಜೊತೆಗೆ ಪಕ್ಕದಲ್ಲೇ ಇರೋ ಸಿಡಿಎಸ್, ವಿರಿಜಾ, ದೇವರಾಯ ನಾಲೆಗಳಿಗೂ ಅಪಾಯ ಎದುರಾಗಿದೆ.

    ಗುತ್ತಿಗೆ ಅವಧಿ 2015ಕ್ಕೆ ಮುಗಿದಿದ್ರೂ ಈಗ ಯೋಜನೆ ಪ್ರಾರಂಭಿಸಿದೆ. ಇನ್ನು ಡ್ಯಾಂನಿಂದ ನಾಲೆಗಳಿಗೆ ಹರಿಯುವ ನೀರಿನ ದಿಕ್ಕನ್ನೇ ಬದಲಾಯಿಸಿದೆ. ನೀರಿನ ಮಧ್ಯದಲ್ಲೇ ಬಂಡೆ ಹಾಕಿರೋ ಕಾರಣ ನಾಲೆಗೆ ನೀರು ಹರಿಯುತ್ತಿಲ್ಲ. ಅವೈಜ್ಞಾನಿಕ ಯೋಜನೆಯಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಜೊತೆಗೆ ರೈತರು ತಮ್ಮ ಜಮೀನು, ತೋಟಗಳಿಗೆ ಹೋಗಲು ಕಷ್ಟಪಡ್ತಿದ್ದಾರೆ.

    ಒಟ್ಟಾರೆ, ವಿದ್ಯುತ್ ಉತ್ಪಾದನೆಗೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಯಿಂದ ಜನರಿಗೆ ಅನುಕೂಲವಾಗೋ ಬದಲು ಅನಾನುಕೂಲವಾಗ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.