ಬೆಂಗಳೂರು: ಪತ್ರಕರ್ತೆ ಗೌರಿ ಹತ್ಯಗೆ ಇಡೀ ದೇಶ ಬೆಚ್ಚಿಬಿದ್ದಿದೆ. ಇದರ ಬೆನ್ನಲ್ಲೇ ಈ ಸ್ಫೋಟಕ ಪತ್ರ ರಾಜ್ಯವನ್ನು ಬೆಚ್ಚಿಬೀಳಿಸಲಿದೆ.
ಗೌರಿ ಹತ್ಯೆಯ ಬಳಿಕ ಹತ್ಯೆಕೋರರ ಹಿಟ್ ಲಿಸ್ಟ್ ನಲ್ಲಿದ್ದ ರಾಜ್ಯದ ವಿಚಾರವಾದಿಗಳಿಗೆ ಹಿಂದಿನ ಕೈ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ವೈಫಲ್ಯವಾಗಿದೆ ಅಂತಾ ಗರಂ ಆಗಿದ್ದಾರೆ.
ವಿಚಾರವಾದಿ, ಮಾಜಿ ಹಿಂದುಳಿದ ಆಯೋಗದ ಅಧ್ಯಕ್ಷ ಹಾಗೂ ದ್ವಾರಕನಾಥ್ ಹಾಗೂ ಬಿಟಿ ಲಲಿತಾ ನಾಯ್ಕ್, ಶಸ್ತ್ರಾಸ್ತ್ರ ಹೊಂದಿರುವ ಭದ್ರತಾ ಸಿಬ್ಬಂದಿಯನ್ನು ನೀಡಿ ಅಂತಾ ಪದೇ ಪದೇ ಪತ್ರ ಬರೆದ್ರೂ ಸರ್ಕಾರ ಕ್ಯಾರೆ ಅಂದಿಲ್ಲ.
ಈಗ ಮತ್ತೆ ಕುಮಾರಸ್ವಾಮಿಗೆ ಹಾಗೂ ಗೃಹಸಚಿವರಿಗೆ ಪತ್ರ ಬರೆದಿರುವ ದ್ವಾರಕನಾಥ್, ಗೌರಿ ಅಂಗರಕ್ಷಕರಿಲ್ಲದೇ ಇರೋದ್ರಿಂದ ಹತ್ಯೆಯಾಗಿದ್ರು. ಇನ್ನೋರ್ವ ವಿಚಾರವಾದಿ ಭಗವಾನ್ ಅಂಗರಕ್ಷಕರು ಇದ್ದಿದ್ರಿಂದ ಸೇಫ್ ಆದ್ರು. ಈ ವಿಚಾರವನ್ನು ಹತ್ಯೆಕೋರರು ಖುದ್ದು ಎಸ್ಐಟಿ ಮುಂದೆ ಬಾಯ್ಬಿಟ್ರು. ಹೀಗಾಗಿ ಸರ್ಕಾರ ನನಗ್ಯಾಕೆ ಅಂಗರಕ್ಷಕರನ್ನು ನೀಡುತ್ತಿಲ್ಲ ಅಂತಾ ದ್ವಾರಕನಾಥ್ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌರಿ ಹಂತಕ ಟಾರ್ಗೆಟ್ ಲಿಸ್ಟ್ ಗುಪ್ತಚರ ಇಲಾಖೆಯಿಂದ ಸರ್ಕಾರಕ್ಕೆ ರವಾನೆಯಾಗಿದ್ದು, ಈ ಹೆಸರುಗಳು ಕೂಡ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದಿನೇಶ್ ಅಮಿನ್ ಮಟ್ಟು, ಗಿರೀಶ್ ಕಾರ್ನಡ್ , ಮರುಳ ಸಿದ್ದಪ್ಪ, ನಿಡುಮಾಮಿಡಿ ಶ್ರೀ, ಬರಗೂರು ರಾಮಚಂದ್ರಪ್ಪ, ಹೆಚ್ ಎಸ್ ದೊರೆಸ್ವಾಮಿ ,ಚಂದ್ರಶೇಖರ್ ಕಂಬಾರ್, ಬಿಟಿ ಲಲಿತಾ ನಾಯಕ್ ಡಾ ಸಿದ್ದಲಿಂಗಯ್ಯ, ಟಿ ಎನ್ ಸೀತಾರಂ , ವಿಮಲಾ , ಎಸ್ ಎಂ ಜಮದಾರ್ ನವರಿಗೆ ಭದ್ರತೆ ಕೊಡುವಂತೆ ಗುಪ್ತಚರ ಇಲಾಖೆಯಿಂದಲೇ ಸೂಚನೆ ಸಿಕ್ಕಿದೆ. ಆದ್ರೆ ಸರ್ಕಾರ ನಮಗೆ ಭದ್ರತೆ ಕೊಡೋದ್ರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಅಂತಾ ವಿಚಾರವಾದಿಗಳು ಇದೀಗ ಗರಂ ಆಗಿದ್ದಾರೆ.
ಬೆಂಗಳೂರು: 2014ರ ಲೋಕಸಭಾ ಚುನಾವಣೆ ವೇಳೆ ನಿಖರವಾಗಿ ನರೇಂದ್ರ ಮೋದಿ ದೇಶದ ಪ್ರಧಾನಿ ಆಗುತ್ತಾರೆ ಎಂದು ಹೇಳಿದ್ದ ರಾಜಗುರು ದ್ವಾರಕಾನಾಥ ಗುರೂಜಿ ಅವರು 2019ರಲ್ಲಿ ಯಾರು ಗದ್ದುಗೆ ಏರಲಿದ್ದಾರೆ ಎನ್ನುವುದನ್ನು ಸೆಪ್ಟೆಂಬರ್ ನಂತರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 13ಕ್ಕೆ ಗುರು ಬದಲಾವಣೆ ಆಗುತ್ತಾನೆ. ಹೀಗಾಗಿ ಈಗಲೇ ಹೇಳಲು ಬರುವುದಿಲ್ಲ. ಗುರು ಬದಲಾವಣೆ ಆದ ಬಳಿಕ ಹೇಳುತ್ತೇನೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ರಾಜಕೀಯ ನಾಯಕರ ಒಡನಾಟದ ಬಗ್ಗೆ ಮಾತನಾಡಿದ ಅವರು, 2004ರಲ್ಲಿ ಕಾಂಗ್ರೆಸ್ ನಾಯಕ ನಟವರ್ ಸಿಂಗ್ ಮನೆಗೆ ಬಂದಿದ್ದರು. ಮುಂದೆ ಯಾರು ಪ್ರಧಾನಿ ಆಗುತ್ತಾರೆ ಎಂದು ಕೇಳಿದಾಗ ನಾನು ಸೋನಿಯಾ ಗಾಂಧಿ ಯಾವುತ್ತೂ ದೇಶದ ಪ್ರಧಾನಿ ಆಗಲು ಸಾಧ್ಯವಿಲ್ಲ ಎಂದಿದ್ದೆ. ಮನಮೋಹನ್ ಸಿಂಗ್ ಆಗಬಹುದು. ಆದರೆ ಪ್ರಣಬ್ ಮುಖರ್ಜಿ ಅವರಿಗೆ ಅಧಿಕಾರ ಕೊಟ್ಟರೆ ಪಕ್ಷಕ್ಕೆ ಮುಂದೆ ಸಹಾಯವಾಗಬಹುದು ಎಂದು ನಾನು ಸಲಹೆ ನೀಡಿದ್ದೆ. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದರು.
2014ರಲ್ಲಿ ಮೋದಿ ಪ್ರಧಾನಿ ಆಗುತ್ತಾರೆ ಎಂದು ಹೇಗೆ ನಿಖರವಾಗಿ ಹೇಳಿದ್ದೀರಿ ಎಂದು ಕೇಳಿದ್ದಕ್ಕೆ, ನಾನು ನನ್ನ ಶಿಷ್ಯಂದಿರಿಗೆ ಸ್ಟಷ್ಟವಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದೆ. 2014ರ ನಂತರ ಕಾಂಗ್ರೆಸ್ ದ್ವಿಮುಖವಾಗಲಿದೆ. ಯಾವುದೋ ಒಂದು ಹುಲಿ ಬರುತ್ತದೆ. ನನ್ನ ಪ್ರಕಾರ ಇದು ಬೇಗ ಮುಕ್ತಾಯವಾಗುವುದಿಲ್ಲ.. 2014ರಲ್ಲಿ ಹಾಕಿದ ಬುನಾದಿ ದೇಶದಲ್ಲಿ ಶಾಶ್ವತವಾಗಿರುತ್ತದೆ ಎಂದು ತಿಳಿಸಿದರು.
ಈ ವೇಳೆ 2019ರಲ್ಲೂ ಮೋದಿ ಅಧಿಕಾರಕ್ಕೆ ಏರಲಿದ್ದೀರಿ ಎಂದು ನೀವು ಹೇಳ್ತಾ ಇದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಈ ಪ್ರಶ್ನೆಗೆ ಈಗಲೇ ಉತ್ತರ ನೀಡುವುದಿಲ್ಲ. ಸೆಪ್ಟೆಂಬರ್ 13ಕ್ಕೆ ಗುರು ಬದಲಾವಣೆ ಆಗುತ್ತಾನೆ. ಬಳಿಕ ನಾನು ಭವಿಷ್ಯ ಹೇಳುತ್ತೇನೆ. ಎಲ್ಲವೂ ದೇವರ ಇಚ್ಛೆ ಎಂದು ಉತ್ತರಿಸಿದರು.
ಲೋಕಸಭೆ ಆಯ್ತು ಕರ್ನಾಟಕದಲ್ಲಿ ಮುಂದೆ ಏನಾಗಬಹುದು ಎಂದು ಕೇಳಿದ್ದಕ್ಕೆ, ಸ್ಥೂಲವಾಗಿ ಹೇಳುವುದಾದರೆ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಸೆಪ್ಟೆಂಬರ್ ನಂತರ ಏನಾಗಬಹುದು ಎನ್ನುವುದು ತಿಳಿಯಬಹುದು ಎಂದರು.
2014ರಲ್ಲಿ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಜಯಿಸುತ್ತಾರೆ ಎಂದು ದ್ವಾರಕಾನಾಥ್ ಗುರೂಜಿ ನಿಖರವಾಗಿ ಭವಿಷ್ಯ ಹೇಳಿದ್ದರು. ಇದಕ್ಕೂ ಮೊದಲು 2011ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದ್ದರು.
ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗ್ತಾನೆ. 25 ವರ್ಷದ ಹಿಂದೆ ನಾನು ಹೇಳಿದ ಆ ಮಾತು ನಿಜವಾಗುತ್ತದೆ ಎಂದು ರಾಜಗುರು ದ್ವಾರಕಾನಾಥ ಗುರೂಜಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯನವರು ಕುಳಿತ ಕುರ್ಚಿಯಲ್ಲಿ ನೀನು ಕುಳಿತುಕೊಳ್ಳುತ್ತಿಯಾ ಎಂದು ನಾನು 25 ವರ್ಷದ ಹಿಂದೆಯೇ ಡಿಕೆ ಶಿವಕುಮಾರ್ಗೆ ಹೇಳಿದ್ದೇನೆ. ಈ ಮಾತಿಗೆ ಈಗಲೂ ಬದ್ಧವಾಗಿದ್ದೇನೆ ಎಂದು ಅವರು ತಿಳಿಸಿದರು.
30 ವರ್ಷಗಳ ಹಿಂದೆ ಆತ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ಬಹಳಷ್ಟು ಬಾರಿ ಮನೆಗೆ ಬರುತ್ತಿದ್ದ. ಆದರೆ 6 ತಿಂಗಳ ಬಳಿಕ ನನ್ನ ಮತ್ತು ಆತನ ನಡುವೆ ಭೇಟಿ ಆಗಿತ್ತು. ಆತನ ಜಾತಕ ಫಲ ನೋಡಿ ನಾನು ನೀನು ಮಂತ್ರಿಯಾಗುತ್ತಿಯಾ ಎಂದು ಹೇಳಿದ್ದೆ. ಅದರಂತೆ ಆತನಿಗೆ ಗುಂಡೂರಾವ್ ಅವಧಿಯಲ್ಲಿ ಬಂಧಿಖಾನೆ ಸಚಿವ ಸ್ಥಾನ ಸಿಕ್ಕಿತ್ತು ಎಂದು ಅವರು ನೆನಪು ಮಾಡಿಕೊಂಡರು.
ಯಾವ ಘಟನೆಗಳು ಬೇಕಾದರೂ ಆಗಬಹುದು. ಆದರೆ ಹಣೆಬರಹವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಷ್ಟ ಎಲ್ಲರಿಗೂ ಬರುತ್ತದೆ. ಈಗ ಬಂದಿರುವ ಕಷ್ಟ ನಿವಾರಣೆಗೆ ನಾನು ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಐಟಿ ದಾಳಿ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಬಂದಾಗ ನಾನು ಪೂಜೆ ಮಾಡುತ್ತಿದ್ದೆ. ಪೂಜೆ ಮುಗಿದ ಬಳಿಕ ನಮ್ಮ ಜೊತೆ ಮಾತನಾಡಿದರು. ನಮ್ಮಲ್ಲಿ ಇರುವುದನ್ನು ಹೇಳಿದೆ. ಎರಡು ಬಾಕ್ಸ್ ನಲ್ಲಿ ಏನು ಸಿಕ್ಕಿಲ್ಲ. ಅದರಲ್ಲಿ ಔಷಧಿಗಳು ಇತ್ತು. ಪ್ರಜಾಪ್ರಭುತ್ವದಲ್ಲಿ ನಾವು ನಂಬಿಕೆಯನ್ನು ಇಟ್ಟಿದ್ದೇವೆ. ನಾನು ಯಾವುದೇ ಅಕ್ರಮ ಸಂಪಾದನೆ ಮಾಡಿಲ್ಲ. ವಿಚಾರಣೆ, ತನಿಖೆ ಎಲ್ಲವನ್ನೂ ನಾವು ಎದುರಿಸುತ್ತೇವೆ ಎಂದರು.
ಇದೆ ವೇಳೆ, ನಿಮ್ಮ ಮನೆಯಲ್ಲಿ ದೇವರಾಜ್ ಅರಸ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ದ್ವಾರಕಾನಾಥ ಗುರೂಜಿ, ಅರಸ್ ಅವರನ್ನು ಬೆಳೆಸಿದ್ದು ನನ್ನ ತಂದೆಯವರು. ಅವರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಮೃತಪಡುವ ದಿನ ನಾನು ಇವತ್ತು ಬರುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ ಅವರು ಮಧ್ಯಾಹ್ನ ಮನೆಗೆ ಬಂದೇ ಬಿಟ್ಟರು. ಈ ಸಂದರ್ಭದಲ್ಲಿ ಅವರು ಕುಸಿದು ಬಿದ್ದರು. ವೈದ್ಯರಿಗೆ ತೋರಿಸಿದಾಗ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದರು. ಅವರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿತ್ತು. ಅಷ್ಟೇ ಅಲ್ಲದೇ ನಾನು ಯಾವ ತನಿಖೆಗೂ ಸಿದ್ಧ ಎಂದು ಹೇಳಿದ್ದೆ, ಮರಣೋತ್ತರ ಪರೀಕ್ಷೆಯಲ್ಲೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ವರದಿ ಬಂದಿದೆ. ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎನ್ನುವ ಆರೋಪ ಶುದ್ಧ ಸುಳ್ಳು ಎಂದರು.
ಬೆಂಗಳೂರು: ಸಾಧಾರಣವಾಗಿ ಸಚಿವರ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಅವರ ಸಂಬಂಧಿಕರು, ಆಪ್ತರು, ಕಚೇರಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ. ಆದರೆ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ ಬಳಿಕ ಕೇಳಿ ಬಂದ ಮತ್ತೊಂದು ಹೆಸರು ಜ್ಯೋತಿಷಿ ದ್ವಾರಕಾನಾಥ್. ಹೌದು. ದ್ವಾರಕಾನಾಥ್ ಗೂ ಡಿಕೆಶಿಗೂ ಏನು ಸಂಬಂಧ? ದ್ವಾರಕಾನಾಥ್ ಕರ್ನಾಟಕದಲ್ಲಿ ಅಷ್ಟೊಂದು ಪ್ರಭಾವಿ ವ್ಯಕ್ತಿಯೇ ಎಂದು ನೀವು ಕೇಳಬಹುದು. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಎನ್ನುವಂತೆ ಇಲ್ಲಿ ದ್ವಾರಕಾನಾಥ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಪವರ್ಫುಲ್ ಗುರು:
ದ್ವಾರಕಾನಾಥ್ ಅವರು ಇಡೀ ರಾಜ್ಯದಲ್ಲೇ ಅತ್ಯಂತ ಪವರ್ಫುಲ್ ಜ್ಯೋತಿಷಿ ಎಂದೇ ಪ್ರಸಿದ್ಧಿಯಾಗಿದ್ದಾರೆ. ಆದರೆ ವಿವಾದಕ್ಕೆ ಗುರಿಯಾಗಿದ್ದು ಇದೇ ಮೊದಲ ಬಾರಿಯಲ್ಲ. ಇವರ ಮನೆಯಲ್ಲೇ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ನಿಧನರಾಗಿದ್ದರು. ಈ ಸಾವು ಸಹಜ ಸಾವಲ್ಲ, ಸಂಶಯಾಸ್ಪದ ಸಾವು. ಇದರ ಬಗ್ಗೆ ತನಿಖೆಯಾಗಬೇಕು ಎಂದು ಅರಸು ಕುಟುಂಬಸ್ಥರು ಆಗ್ರಹಿಸಿದ್ದರು. ಈ ಮೂಲಕ ಮೊದಲ ಬಾರಿಗೆ ದ್ವಾರಕಾನಾಥ್ ವಿವಾದದಲ್ಲಿ ಸಿಲುಕಿಕೊಂಡರು. ಆದರೆ ಪವರ್ಫುಲ್ ಶಿಷ್ಯಂದಿರ ಸಹಕಾರದಿಂದಾಗಿ ಈ ಪ್ರಕರಣದಲ್ಲಿ ಬಚಾವಾಗಿದ್ದರು.
ಶಿಷ್ಯಂದಿರು ಯಾರೆಲ್ಲ ಇದ್ದಾರೆ?
ಮಾಜಿ ಸಿಎಂ ದೇವರಾಜು ಅರಸು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸೋನಿಯಾ ರಾಜಕೀಯ ಕಾರ್ಯದರ್ಶಿ ಪ್ರಸ್ತುತ ಗುಜರಾತ್ ಕಾಂಗ್ರೆಸ್ಸಿನ ರಾಜ್ಯಸಭಾ ಅಭ್ಯರ್ಥಿ ಅಹ್ಮದ್ ಪಟೇಲ್, ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸ್ ರಾವ್ ದೇಶ್ಮುಖ್, ಎಸ್ಬಿ ಚವ್ಹಾಣ್, ಆಂಧ್ರ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ, ವಿಜಯ ಭಾಸ್ಕರ್ ರೆಡ್ಡಿ, ಧರಂ ಸಿಂಗ್, ಮಾಜಿ ಸಿಎಂ ಎಸ್ಎಂ ಕೃಷ್ಣ, ನಫೀಜ್ ಪಾಜಲ್, ಪ್ರೊ. ಬಿಕೆ ಚಂದ್ರಶೇಖರ್, ಉದ್ಯಮಿ ಅನಿಲ್ ಅಂಬಾನಿ, ಬಾಲಿವುಡ್ ನಟ-ನಟಿಯರು ದ್ವಾರಕನಾಥ್ ಬಳಿ ಜ್ಯೋತಿಷ್ಯ ಕೇಳುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಪ್ರಭಾವಿಯಾಗಲು ಕಾರಣ ಏನು?
ದ್ವಾರಕಾನಾಥ್ ತಂದೆ ಹೆಸರಾಂತ ಜ್ಯೋತಿಷಿ ಬೆಳ್ಳೂರು ಶಂಕರನಾರಾಯಣ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಂದೆ ವಾಸವಿದ್ದ ಮನೆಯ ರಸ್ತೆಗೆ ಬಿ.ಎಸ್.ಶಂಕರನಾರಾಯಣ ರಸ್ತೆ ಅಂತ ನಾಮಕರಣ ಮಾಡಿಸಿದ್ದರು. ಈ ನಾಮಕರಣ ಕಾರ್ಯಕ್ರಮಕ್ಕೆ ಧರಂ ಸಿಂಗ್, ವಿಲಾಸ್ರಾವ್ ದೇಶ್ಮುಖ್, ಸುಶೀಲ್ಕುಮಾರ್ ಶಿಂಧೆ, ನಟವರ್ ಸಿಂಗ್ ಭಾಗವಹಿಸಿದ್ದರು. ಸದ್ಯ ಜ್ಯೋತಿಷಿ ದ್ವಾರಕಾನಾಥ್ ಬೆಂಗಳೂರಿನ ಆರ್ ಟಿ ನಗರದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಓರ್ವ ಪುತ್ರಿ, ಓರ್ವ ಪುತ್ರನಿದ್ದು ಇವರಿಬ್ಬರು ವೈದ್ಯರನ್ನೇ ಮದುವೆಯಾಗಿದ್ದಾರೆ. ಇವರು ಶೀಘ್ರದಲ್ಲೇ ಕೋರಮಂಗಲದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಡಯಾಬಿಟಿಕ್ ಕೇಂದ್ರ ಪ್ರಾರಂಭಿಸಲಿದ್ದು, ಈ ಕೇಂದ್ರದ ವ್ಯವಹಾರವೇ ಜ್ಯೋತಿಷಿಗೆ ಮುಳುವಾಗುವ ಸಾಧ್ಯತೆ ಇದೆ.
ಜ್ಯೋತಿಷಿ ಆಗುವುದಕ್ಕೂ ಮೊದಲು ಏನಾಗಿದ್ರು?
ಈ ಹಿಂದೆ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಕ್ಲರ್ಕ್ ಆಗಿ ದ್ವಾರಕಾನಾಥ್ ಕೆಲಸ ಮಾಡುತ್ತಿದ್ದರು. ಅವ್ಯವಹಾರ ಆರೋಪದ ಮೇಲೆ ಮೂರು ದಶಕಗಳ ಹಿಂದೆ ಅಮಾನತುಗೊಂಡಿದ್ದರು. ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಸ್ತುತ ಗ್ರಾಮೀಣಭಿವೃದ್ಧಿ ಸಚಿವರಾಗಿರುವ ಹೆಚ್ಕೆ ಪಾಟೀಲ್ ಅವರ ತಂದೆ ಕೆ ಎಚ್ ಪಾಟೀಲ್ ಅಮಾನತು ಮಾಡಿಸಿದ್ದರು. ಆದರೆ ನಂತರ ಕೋರ್ಟ್ ನಲ್ಲಿ ದೋಷಮುಕ್ತರಾದ ಬಳಿಕ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಜ್ಯೋತಿಷ್ಯ ವೃತ್ತಿಗಿಳಿದ ದ್ವಾರಕಾನಾಥ್ ಬಳಿಕ ಶೃಂಗೇರಿ ಶ್ರೀಶಂಕರ ಮಠಕ್ಕೆ ಆಪ್ತರಾದರು.
ನಿಖರ ಭವಿಷ್ಯಕ್ಕೆ ಫೇಮಸ್:
ಮೊದಲು ಇವರಿಗೆ ಮಾಜಿ ಸಿಎಂ ದೇವರಾಜು ಅರಸು ಅವರ ಪರಿಚಯವಾಗಿ ನಂತರ ಪರಮಾಪ್ತರಾದರು. ಅರಸು ಮೂಲಕ ಮಾಜಿ ಪ್ರಧಾನಿ ಇಂದಿರಾಗಾಂಧಿ ಪರಿಚಯವೂ ಆಯಿತು. ತುರ್ತು ಪರಿಸ್ಥಿತಿ ಬಳಿಕ ಚಿಕ್ಕಮಗಳೂರು ಚುನಾವಣೆಯಲ್ಲಿ ವೇಳೆ ಇಂದಿರಾ ಗೆಲುವಿನ ಭವಿಷ್ಯವನ್ನು ನಿಖರವಾಗಿ ನುಡಿದಿದ್ದ ಕಾರಣ ಇವರು ಮತ್ತಷ್ಟು ಕೈ ನಾಯಕರಿಗೆ ಹತ್ತಿರವಾದರು. 2014ರ ಲೋಕಸಭಾ ಚುನಾವಣೆಯ ವೇಳೇ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ, ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ ಗೆ ಹೀನಾಯ ಸೋಲಾಗುತ್ತದೆ ಎಂದು ದ್ವಾರಕಾನಾಥ್ ಭವಿಷ್ಯ ನುಡಿದಿದ್ದರು.
ಡಿಕೆಶಿಗೆ ಪರಿಚಯವಾಗಿದ್ದು ಹೇಗೆ?ಪವರ್ಫುಲ್ ಮಿನಿಸ್ಟರ್ಗೂ ಪವರ್ಫುಲ್ ಜ್ಯೋತಿಷಿ ದ್ವಾರಕಾನಾಥ್ ಅವರಿಗೂ ಕೆಲ ವರ್ಷಗಳಿಂದ ಆರಂ ಭಗೊಂಡ ಸ್ನೇಹವಲ್ಲ. ಎಸ್ಜೆಆರ್ಸಿ ಕಾಲೇಜಿನಲ್ಲಿ ಡಿಕೆಶಿ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ದ್ವಾರಕಾನಾಥ್ ಪರಿಚಯವಾಗಿತ್ತು. ಈ ಮೂಲಕ ದೇವರಾಜು ಅರಸು ಸೇರಿದಂತೆ ಪ್ರಭಾವಿ ಕಾಂಗ್ರೆಸ್ಸಿಗರ ಡಿಕೆಶಿಗೆ ಸಿಕ್ಕಿತ್ತು. ಜ್ಯೋತಿಷಿ ಪ್ರಭಾವದಿಂದಾಗಿ 25ನೇ ವಯಸ್ಸಿನಲ್ಲೇ ಡಿಕೆ ಶಿವಕುಮಾರ್ ಅವರಿಗೆ ಸಾತನೂರು ಕ್ಷೇತ್ರದ ಟಿಕೆಟ್ ಸಿಕ್ಕಿತ್ತು. ಮೊದಲ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸೋತರೂ ಉಪ ಚುನಾವಣೆಯಲ್ಲಿ ಡಿಕೆಶಿ ಗೆದ್ದಿದ್ದರು. ಮೊದಲ ಬಾರಿಗೆ ಶಾಸಕರಾದ ಬೆನ್ನಲ್ಲೇ ಶಿಷ್ಯ ಡಿಕೆಶಿ ಅವರನ್ನು ಜ್ಯೋತಿಷಿ ದ್ವಾರಕಾನಾಥ್ ಸಚಿವರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ದೆಹಲಿಯ ಪ್ರಭಾವ ಬಳಸಿ ಬಂಗಾರಪ್ಪ ಸಂಪುಟದಲ್ಲಿ ಶಿವಕುಮಾರ್ ಅವರನ್ನು ಬಂಧಿಖಾನೆ ಸಚಿವರನ್ನಾಗಿ ನೇಮಿಸುವಲ್ಲೂ ಮಹತ್ವದ ಪಾತ್ರವಹಿಸಿದ್ದರು.
ಸಿಬಿಐ ಬಲೆಗೆ ಬಿದ್ದ ಜ್ಯೋತಿಷಿ:
ಮಗಳನ್ನು ಡಾಕ್ಟರ್ ಮಾಡಲು ಹೋಗಿ ಸಿಬಿಐ ಬಲೆಗೂ ಬಿದಿದ್ದ ಜ್ಯೋತಿಷಿ ದ್ವಾರಕಾನಾಥ್ ಬಿದ್ದಿದ್ದರು. ಪರಮಾಪ್ತ ಶಿಷ್ಯ ಧರಂ ಸಿಂಗ್ ಸಿಎಂ ಆಗಿದ್ದಾಗ ಅವಧಿಯಲ್ಲಿ ರಾಜೀವ್ಗಾಂಧಿ ಆರೋಗ್ಯ ವಿವಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ತಮ್ಮ ಮಗಳಿಗೆ ಪಿಜಿ ಸೀಟ್ ಕೊಡಿಸಿದ್ದು ದೊಡ್ಡ ವಿವಾದವಾಗಿ ಸಿಬಿಐ ತನಿಖೆಯೂ ನಡೆದಿತ್ತು. ತಮ್ಮ ಮಗಳನ್ನು ಡಾಕ್ಟರ್ ಮಾಡಲು ತಮ್ಮ ಆಪ್ತರನ್ನೇ ದ್ವಾರಕಾನಥ್ ಆರೋಗ್ಯ ವಿವಿಯ ಉಪಕುಲಪತಿ ಮಾಡಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಉಪ ಕುಲಪತಿ ಡಾ.ಪ್ರಭಾಕರ್, ಜ್ಯೋತಿಷಿ ಪುತ್ರಿಯೂ ಸಿಬಿಐ ತನಿಖೆ ಎದುರಿಸಬೇಕಾಯಿತು.
ಜ್ಯೋತಿಷಿ ದ್ವಾರಕನಾಥ್ ಅವರು ತಮ್ಮ ಬಿ ಎಸ್ ರಾಘವನ್ಗೂ ಪ್ರಭಾವಿ ಹುದ್ಡೆ ಕೊಡಿಸಿದ್ದರು ಎಂದು ಹೇಳಲಾಗುತ್ತಿದೆ. ರಾಮಕೃಷ್ಣ ಹೆಗಡೆ ಅವಧಿಯಲ್ಲಿ ರಾಘವನ್ಗೆ ಕರ್ನಾಟಕ ರಾಜ್ಯ ಕ್ರೀಡಾ ಸಮಿತಿ ಅಧ್ಯಕ್ಷರೂ ಆಗಿದ್ದರು. ನಂತರ ಬಿ ಎಸ್ ರಾಘವನ್ ಕೆಲವೊಂದಿಷ್ಟು ಪೊಲೀಸ್ ತನಿಖೆಯನ್ನೂ ಎದುರಿಸಬೇಕಾಯಿತು.