Tag: DV Sadananda Gowda

  • ಹಾಲಿ, ಮಾಜಿ ಸಿಎಂಗಳ ಹೆಲಿಕಾಪ್ಟರ್ ಜಾತಕ! ಯಾರ ಅವಧಿಯಲ್ಲಿ ಎಷ್ಟು ಕೋಟಿ ಖರ್ಚಾಗಿದೆ?

    ಹಾಲಿ, ಮಾಜಿ ಸಿಎಂಗಳ ಹೆಲಿಕಾಪ್ಟರ್ ಜಾತಕ! ಯಾರ ಅವಧಿಯಲ್ಲಿ ಎಷ್ಟು ಕೋಟಿ ಖರ್ಚಾಗಿದೆ?

    ಬೆಂಗಳೂರು: ತಮ್ಮ ತಪ್ಪು ಮುಚ್ಚಿಕೊಳ್ಳಲು ರಾಜಕಾರಣಿಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಹೊಸದಲ್ಲ. ಎಲ್ಲರೂ ಒಂದೇ ದೋಣಿಯಲ್ಲಿ ಪಯಣ ಮಾಡುವ ಮುಖಂಡರೇ. ಇದಕ್ಕೆ ಉದಾಹರಣೆ ಹೆಲಿಕಾಪ್ಟರ್ ಪ್ರಯಾಣದ ಖರ್ಚು ವೆಚ್ಚಗಳು.

    ಹೌದು. ದಲಿತ ಮನೆಯಲ್ಲಿ ಊಟ ಮಾಡಿದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಾಲೆಳೆದಿದ್ರು. ಇದಕ್ಕೆ ಯಡಿಯೂರಪ್ಪ ಸಿಎಂ ಮೊದಲು ಹೆಲಿಕಾಪ್ಟರ್ ಸುತ್ತೋದು ಬಿಟ್ಟು ಜನರ ಬಳಿ ಹೋಗಲಿ ಅಂತ ಟಾಂಗ್ ನೀಡಿದ್ರು. ಹೀಗಾಗಿ ಹೆಲಿಕಾಪ್ಟರ್ ವಿಚಾರದಲ್ಲಿ ಯಾರು ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವ ಮಾಹಿತಿ ಈಗ ಆರ್‍ಟಿಐ ಅಡಿಯಲ್ಲಿ ಸಿಕ್ಕಿದೆ.

    ಸಿದ್ದು ಮೇಲೆ ಆರೋಪ ಮಾಡೋ ಯಡಿಯೂರಪ್ಪನವರೇ ತಾವು ಮುಖ್ಯಮಂತ್ರಿಯಾಗಿದ್ದಾಗ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಡಿಯೂರಪ್ಪ ಮಾತ್ರವಲ್ಲ ಮುಖ್ಯಮಂತ್ರಿಯಾಗಿ ಸದ್ಯ ಕೇಂದ್ರದಲ್ಲಿ ಮಂತ್ರಿಯಾಗಿರುವ ಡಿವಿ ಸದಾನಂದಗೌಡ ಕೂಡಾ ಕೋಟಿ ಕೋಟಿ ಹಣವನ್ನು ಹೆಲಿಕಾಪ್ಟರ್ ಪ್ರವಾಸಕ್ಕೆ ಹಣ ಖರ್ಚು ಮಾಡಿದ್ರು. ಜಗದೀಶ್ ಶೆಟ್ಟರ್ ಕೂಡಾ ಕೋಟಿಗಳ ವೆಚ್ಚದಲ್ಲಿ ಹೆಲಿಕಾಪ್ಟರ್ ಪ್ರವಾಸ ಮಾಡಿದ್ದಾರೆ.

    ಇನ್ನು ಕಾಂಗ್ರೆಸ್‍ನ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಹೆಲಿಕಾಪ್ಟರ್ ಖರ್ಚಿನಲ್ಲಿ ಹಿಂದೆ ಬಿದ್ದಿಲ್ಲ. ಮೂರೇ ವರ್ಷದ ಅವಧಿಯಲ್ಲಿ ಇವರ ಖರ್ಚು ಕೋಟಿ ದಾಟಿದೆ. ಅಸಲಿಗೆ ಹೆಲಿಕಾಪ್ಟರ್ ಬಗ್ಗೆ ಮಾತಾನಾಡುವ ನಾಯಕರು ಎಷ್ಟು ಖರ್ಚು ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಆರ್‍ಟಿಐ ಅಡಿಯಲ್ಲಿ ಭಾಸ್ಕರ್ ಅವರು ಕೇಳಿ ಪಡೆದುಕೊಂಡಿದ್ದು ಆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಸಿದ್ದರಾಮಯ್ಯ: ಮೇ 2013 ರಿಂದ ಜನವರಿ 2016ರ ಅವಧಿಯವರೆಗೆ ಒಟ್ಟು 20.11 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರಲ್ಲಿ 2013-14ರಲ್ಲಿ 9.7 ಕೋಟಿ ರೂ., 2014-2015 ರಲ್ಲಿ 5.81 ಕೋಟಿ ರೂ., 2016 ಜನವರಿಯಲ್ಲಿ 4.6 ಕೋಟಿ ರೂ. ಖರ್ಚಾಗಿದೆ.

    ಬಿ.ಎಸ್.ಯಡಿಯೂರಪ್ಪ: ಮೇ 30, 2008ರಿಂದ ಜುಲೈ 31, 2011 ರವರೆಗಿನ ಅವಧಿಯಲ್ಲಿ ಒಟ್ಟು 42.26 ಕೋಟಿ ರೂ. ವೆಚ್ಚ ಮಾಡಿದ್ದಾರೆ.


    ಡಿ.ವಿ.ಸದಾನಂದಗೌಡ: ಆಗಸ್ಟ್ 04, 2011ರಿಂದ ಜುಲೈ 11, 2012ರವರೆಗಿನ ಹೆಲಿಕಾಪ್ಟರ್ ಪ್ರಯಾಣಕ್ಕೆ 13.77 ಕೋಟಿ ರೂ. ಖರ್ಚು ಮಾಡಿದ್ದಾರೆ.


    ಜಗದೀಶ್ ಶೆಟ್ಟರ್: ಜುಲೈ 12, 2012ರಿಂದ ಮೇ 12,2013ವರೆಗೆ ಒಟ್ಟು 12.78 ಕೋಟಿ ರೂ. ಖರ್ಚು ಮಾಡಿದ್ದಾರೆ.

  • ಹೋಟೆಲ್ಲಿಂದ ತಂದ್ರೂ ಊಟ ಮಾಡಿದ್ದು ದಲಿತರ ಮನೆಯಲ್ಲಿ ಅಲ್ಲವೇ: ಡಿವಿಎಸ್ ಪ್ರಶ್ನೆ

    ಹೋಟೆಲ್ಲಿಂದ ತಂದ್ರೂ ಊಟ ಮಾಡಿದ್ದು ದಲಿತರ ಮನೆಯಲ್ಲಿ ಅಲ್ಲವೇ: ಡಿವಿಎಸ್ ಪ್ರಶ್ನೆ

    ಬೆಂಗಳೂರು: ದಲಿತರ ಮನೆ ತುಂಬಾ ಚಿಕ್ಕದಾಗಿದೆ. ಎಲ್ಲರಿಗೂ ಊಟ ಒದಗಿಸುವುದು ಕಷ್ಟವಾಗಿತ್ತು. ಹೀಗಾಗಿ ಅವರು ಅಲ್ಲಿಂದ ತಂದು ಊಟಹಾಕಿದ್ದು ತಪ್ಪೇ. ದಲಿತರ ಮನೆಯಲ್ಲೇ ಊಟ ಮಾಡಿದ್ದು ನಿಜವಲ್ಲವೇ ಅಂತಾ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಪ್ರಶ್ನಿಸಿದ್ದಾರೆ.

    ಬಿಜೆಪಿ ನಾಯಕರ ಬರ ಪ್ರವಾಸದ ವೇಳೆ ತುಮಕೂರಿನಲ್ಲಿ ದಲಿತರ ಮನೆಯಲ್ಲಿ ಹೊಟೇಲ್ ತಿಂಡಿ ತಿಂದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯಿಸಿ, ಭಾರತೀಯ ಜನತಾ ಪಾರ್ಟಿಯ `ನಮ್ಮ ನಡೆ ಶೋಷಿತರ ಕಡೆ’ ಎಂದು ಹೇಳುತ್ತಿರೋದು ಕಾಂಗ್ರೆಸ್ಸಿನವರಿಗೆ ಭಯ ಹುಟ್ಟಿಸಿದೆ. ಯಾಕಂದ್ರೆ ನನ್ನ ನಡೆ ಎಲ್ಲ ಫೈಲ್ ಆಗಿದೆ. ನನಗೆ ಇನ್ನು ಇರೋದು ಒಂದೇ ನಡೆ. ಅದು ಸೀದಾ ನನ್ನ ಮನೆ ಮೈಸೂರು ಕಡೆಗೆ ಅಂತಾ ಸಿಎಂ ಮನದಲ್ಲಿ ಭಾವಿಸಿದ್ದಾರೆ. ಹೀಗಾಗಿ ಆ ಹೆದರಿಕೆಯಿಂದಾ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಅಂತಾ ಹೇಳಿದ್ರು.ನಾನು ಕೇಳ್ತೀನಿ ತಿಂಡಿ ಯಾರು ಮಾಡಿದ್ರು? ಗದ್ದೆಯಲ್ಲಿ ಭತ್ತ ಯಾರು ಬೆಳೆಸಿದ್ರು? ಯಾವ ಮಿಲ್ ನಲ್ಲಿ ಭತ್ತವನ್ನ ಅಕ್ಕಿ ಮಾಡಿದ್ರು? ಅದನ್ನ ಯಾರು ರುಬ್ಬಿದ್ರು? ಇದೆಲ್ಲ ಅವರಿಗೆ ಮುಖ್ಯವಾಗಿದೆ. ಒಂದು ದಲಿತ ಮನೆಯಲ್ಲಿ ಯಾರು ನಮಗೆ ಪ್ರೀತಿಯಿಂದ ಬಡಿಸಿದ್ರು? ಯಾರ ತಟ್ಟೆಯಲ್ಲಿ ತಿಂದೆವು? ತಮ್ಮ ಕೈಯಾರೆ ಬಡಿಸಿದವರು ಯಾರು? ಇದನ್ನ ನೋಡಬೇಕೇ ಹೊರತು ಯಾರು ಮಾಡಿದ್ರು ಅನ್ನೋದು ಮುಖ್ಯವಲ್ಲ ಎಂದು ತಿಳಿಸಿದ್ರು.

    ಇದನ್ನೂ ಓದಿ: ವೀಡಿಯೋ ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಬಣ್ಣ ಬಯಲು

    ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಹತಾಶಾ ಭಾವನೆ ಎಲ್ಲಿವರೆಗೆ ಬಂದಿದೆ ಅಂದ್ರೆ ಇನ್ನು ಒಂದು ವರ್ಷ ಹಿಂಗೆ ಬಿಜೆಪಿ ಮೇಲೆ ಗೂಬೆ ಕೂರಿಸ್ತಾ ಇರ್ತಾರೆ. ಅವರಿಗೆ ಇದೇ ಕೆಲಸ. ಯಾಕಂದ್ರೆ ಅವರಿಂದ ಬೇರೇನೂ ಮಾಡಲು ಸಾಧ್ಯವಿಲ್ಲ ಅಂತಾ ಡಿವಿಎಸ್ ಹೇಳಿದ್ರು.

    ತಿವಾರಿ ಪ್ರಕರಣ ಸಿಬಿಐಗೆ ವಹಿಸಿ: ಇದೇ ವೇಳೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕದ ಕುರಿತು ಮಾತನಾಡಿದ ಅವರು, ಇದು ಎರಡು ರಾಜ್ಯಗಳಿಗೆ ಅನ್ವಯಿಸುತ್ತೆ. ರಾಜ್ಯದ ಪೊಲೀಸ್ ಅಧಿಕಾರಿಗಳನ್ನ ತನಿಖೆಗೆ ಅಲ್ಲಿಗೆ ಕಳುಹಿಸಬೇಕು. ಎರಡು ರಾಜ್ಯಗಳ ಪೊಲೀಸರು ಪರಸ್ಪರ ಸಹಕರಿಸಬೇಕು. ಸಿಎಂ ಸಿದ್ದರಾಮಯ್ಯ ಆ ಕೆಲಸ ಮಾಡಬೇಕಿತ್ತು. ತಿವಾರಿ ಸಹೋದರ ಆರೋಪ ಮಾಡಿದ್ದಾರೆ. ನಾಲ್ಕು ತಿಂಗಳು ವೇತನ ನೀಡಿರಲಿಲ್ಲವೆಂದು ಹೇಳಿದ್ದಾರೆ. ಜೊತೆಗೆ ಸಾವಿರಾರು ಕೋಟಿ ರೂ ಹಗರಣದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ಸಿಬಿಐ ತನಿಖೆಗೆ ವಹಿಸಬೇಕು. ಆಗ ಸಾರ್ವಜನಿಕರಿಗೆ ಸಂಶಯ ನಿವಾರಣೆಯಾಗಲಿದೆ. ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸುವುದಿಲ್ಲ ಅಂತಾ ಹೇಳಿದ್ದಾರೆ.

  • ಮಂಗಳೂರು: ಬೆಕ್ಕು ಕಚ್ಚಿ ರೇಬೀಸ್‍ಗೆ ತುತ್ತಾಗಿ ಉಪನ್ಯಾಸಕಿ ಸಾವು

    ಮಂಗಳೂರು: ಬೆಕ್ಕು ಕಚ್ಚಿ ರೇಬೀಸ್‍ಗೆ ತುತ್ತಾಗಿ ಉಪನ್ಯಾಸಕಿ ಸಾವು

    ಮಂಗಳೂರು: ಬೆಕ್ಕು ಕಚ್ಚಿ ರೇಬಿಸ್‍ಗೆ ತುತ್ತಾಗಿ ಉಪನ್ಯಾಸಕಿಯೊಬ್ಬರು ಮೃತಪಟ್ಟಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದಲ್ಲಿ ನಡೆದಿದೆ.

    ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಸಂಬಂಧಿ 56 ವರ್ಷದ ಪುಷ್ಪಾವತಿ ರೇಬಿಸ್‍ನಿಂದಾಗಿ ಮೃತಪಟ್ಟ ಮಹಿಳೆ. ಪುಷ್ಪಾವತಿ ಅವರಿಗೆ ನಾಲ್ಕು ತಿಂಗಳ ಹಿಂದೆ ಮನೆಯಲ್ಲಿ ಬೆಕ್ಕು ಕಚ್ಚಿತ್ತು. ಈ ಬಗ್ಗೆ ಆರಂಭದಲ್ಲಿ ಪುಷ್ಪಾವತಿ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಬೆನ್ನು ನೋವಿಗೆ ಒಳಗಾಗಿ ಆಸ್ಪತ್ರೆ ಸೇರಿದ ಪುಷ್ಪಾವತಿ ಅವರಲ್ಲಿ ರೇಬಿಸ್ ಲಕ್ಷಣಗಳು ಪತ್ತೆಯಾಗಿತ್ತು ಮತ್ತು ವರ್ತನೆಯಲ್ಲೂ ಅಸಹಜತೆ ಕಾಣಿಸಿಕೊಂಡಿತ್ತು.

    ತಕ್ಷಣ ಮನೆಯವರು ಪುಷ್ಪಾವತಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಮತ್ತು ಅಪೋಲೊ ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಿಸದೆ ಪುಷ್ಪಾವತಿ ಮೃತಪಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಉಪ್ಪಿನಂಗಡಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪುಷ್ಪಾವತಿ ಅಪಾರ ಶಿಷ್ಯ ವರ್ಗವನ್ನೂ ಹೊಂದಿದ್ದರು.