Tag: dustbin

  • ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಸಿಕ್ತು 34 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್

    ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಸಿಕ್ತು 34 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್

    ಲಕ್ನೋ: ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಲಕ್ಷಾಂತರ ಮೌಲ್ಯ ಬೆಲೆ ಬಾಳುವ 6 ಚಿನ್ನದ ಬಿಸ್ಕತ್ ಪತ್ತೆ ಆಗಿದೆ.

    ಉತ್ತರಪ್ರದೇಶದ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ 6 ಚಿನ್ನದ ಬಿಸ್ಕತ್‍ಗಳ ಬೆಲೆಯೂ ಒಟ್ಟಾರೆಯಾಗಿ 36.60 ಲಕ್ಷ ರೂ.ಗಳಾಗಿವೆ. 6 ಚಿನ್ನದ ಬಾರ್‌ಗಳನ್ನು ಕಪ್ಪು ಟೇಪ್‍ನಿಂದ ಸುತ್ತಿರುವ ಪ್ಲಾಸ್ಟಿಕ್‍ನಲ್ಲಿ ಅಡಗಿಸಿಟ್ಟಿದ್ದರು. ನಂತರ ಇದನ್ನು ವಿಮಾನ ನಿಲ್ದಾಣದ ಕಸದ ಬುಟ್ಟಿಗೆ ಎಸೆಯಲಾಗಿತ್ತು.

    ಇದನ್ನು ನೋಡಿದ ಅಧಿಕಾರಿಗಳು ಚಿನ್ನದ ಬಿಸ್ಕತ್‍ನ್ನು ಜಪ್ತಿ ಮಾಡಲಾಗಿದ್ದು, ಕಸದ ಬುಟ್ಟಿಯಲ್ಲಿ ಚಿನ್ನ ಹೇಗೆ ಬಂತು. ಯಾರು ತಂದರು ಎಂಬ ಬಗ್ಗೆ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದುಬೈನಿಂದ ಬಂದ ಕೆಲವು ಪ್ರಯಾಣಿಕರನ್ನು ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿರುವ ಸಿಬ್ಬಂದಿಯನ್ನು ತನಿಖೆ ನಡೆಸುತ್ತಿದ್ದಾರೆ. ಆದರೂ ಈವರೆಗೂ ಆ ಚಿನ್ನದ ಬಿಸ್ಕತ್ ಯಾರದ್ದು ಎನ್ನುವುದು ಪತ್ತೆ ಆಗಿಲ್ಲ. ಇದನ್ನೂ ಓದಿ: ಡಿಕೆಶಿ ಕೈಎತ್ತಿದ ಬಳಿಕ ಕುಮಾರಸ್ವಾಮಿ ಅಬ್ಬೇಪಾರಿ ಆಗಿ ಬೀದಿಗೆ ಬಂದ್ರು, ಸಿದ್ದರಾಮಯ್ಯಗೂ ಇದೇ ಗತಿ: ಆರ್. ಅಶೋಕ್

    Live Tv
    [brid partner=56869869 player=32851 video=960834 autoplay=true]

  • ಅಂಚೆ ಕಚೇರಿ ಸಿಬ್ಬಂದಿ ಒಳ ಜಗಳಕ್ಕೆ ಕಸವಾಯ್ತು ಸಾಲಮನ್ನಾ ಪತ್ರ, ಆಧಾರ್ ಕಾರ್ಡ್

    ಅಂಚೆ ಕಚೇರಿ ಸಿಬ್ಬಂದಿ ಒಳ ಜಗಳಕ್ಕೆ ಕಸವಾಯ್ತು ಸಾಲಮನ್ನಾ ಪತ್ರ, ಆಧಾರ್ ಕಾರ್ಡ್

    ಬೆಂಗಳೂರು: ಆಧಾರ್ ಕಾರ್ಡ್ ಎಂಬುದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಸಾಮಾನ್ಯ ಹಕ್ಕು, ಇಂತಹ ಆಧಾರ್ ಕಾರ್ಡ್ ಜನರ ಕೈ ಸೇರುವ ಬದಲು ಕಸದ ತೊಟ್ಟಿ ಸೇರಿದ ಘಟನೆ ಬೆಂಗಳೂರು ಹೊರವಲಯ ಮಂಡೂರು ಗ್ರಾಮದಲ್ಲಿ ನಡೆದಿದೆ.

    ಮಂಡೂರಿನ ಅಂಚೆ ಕಚೇರಿ ಸಿಬ್ಬಂದಿಯ ಒಳ ಜಗಳದಿಂದ ಆಧಾರ್ ಕಾರ್ಡ್ ಜೊತೆಗೆ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಿದ್ದ ಸಾಲಮನ್ನಾ ಪತ್ರಗಳು ಕಸದ ಬುಟ್ಟಿಗೆ ಸೇರಿದೆ. ರಾಜ್ಯ ಸರ್ಕಾರ ರೈತರಿಗೆ ಸಾಲಮನ್ನಾ ಪತ್ರಗಳನ್ನು ಅಂಚೆ ಮುಖಾಂತರ ಕಳುಹಿಸಿತ್ತು. ಆದ್ರೆ ಅಂಚೆ ಸಿಬ್ಬಂದಿಗಳ ಎಡವಟ್ಟು ಕೆಲಸದಿಂದ ರೈತರಿಗೆ ಅನ್ಯಾನವಾಗಿದೆ. ಜೊತೆಗೆ ಆಧಾರ್ ಗೆ ನೊಂದಣಿಯಾದವರ ಕಾರ್ಡ್ ಗಳು ಕೂಡ ಸೇರಬೇಕಾದವರಿಗೆ ತಲುಪದೇ ಕಸದ ಬುಟ್ಟಿ ಸೇರಿದೆ.

    ಕಚೇರಿಗೆ ಬಂದ ಪೋಸ್ಟ್ ಗಳನ್ನು ಜನರಿಗೆ ತಲುಪಿಸದೇ ಕಸದ ತೊಟ್ಟಿಗೆ ಎಸೆದಿದ್ದ ವಿಷಯ ಗ್ರಾಮಸ್ಥರಿಗೆ ತಿಳಿದಿದೆ. ಬಳಿಕ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಸದಸ್ಯ ಕೆಂಪರಾಜು ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಅಂಚೆ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಕಸದ ತೊಟ್ಟಿಗೆ ಎಸೆದಿರುವ ಆಧಾರ್ ಕಾರ್ಡ್ ಹಾಗೂ ಸರ್ಕಾರದಿಂದ ರೈತರಿಗೆ ನೀಡಿರುವ ಸವಲತ್ತು ಪತ್ರಗಳನ್ನು ಅವರ ಮನೆಬಾಗಲಿಗೆ ತಲುಪಿಸುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv