Tag: duniya viji

  • ಕರಿಚಿರತೆಯ ಕಾಳಗದ ಬಗ್ಗೆ ಜಗ್ಗೇಶ್ ಹೇಳಿದ್ದೇನು?

    ಕರಿಚಿರತೆಯ ಕಾಳಗದ ಬಗ್ಗೆ ಜಗ್ಗೇಶ್ ಹೇಳಿದ್ದೇನು?

    ಬೆಂಗಳೂರು: ಬಾಡಿ ಬಿಲ್ಡರ್ ಕಂ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿ ಮೇಲೆ ದುನಿಯಾ ವಿಜಯ್ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಾ ಸಾಗುತ್ತಿದೆ. ಈ ಘಟನೆಯ ಬಗ್ಗೆ ಸ್ಯಾಂಡಲ್ ವುಡ್ ತಾರೆಯರೆಲ್ಲ ದಿಗ್ಭ್ರಾಂತರಾಗಿದ್ದಾರೆ. ಇದೀಗ ಒಂದು ಕಾಲದಲ್ಲಿ ವಿಜಯ್ ಬೆಳವಣಿಗೆಯನ್ನು ಮೆಚ್ಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಟ್ವಿಟರ್ ಮೂಲಕ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಕ್ರೂರನಾಗಿದ್ದ ವಾಲ್ಮೀಕಿ ನಾರದರ ಮಾರ್ಗದರ್ಶನದಲ್ಲಿ ರಾಮಾಯಣ ರಚಿಸಿ ಮಹನೀಯನಾದ. ಶಾರದೆಯ ಒಲುಮೆಯಿಂದ ಸಾಮಾನ್ಯ ಅಸಾಮಾನ್ಯನಾದ. ದುನಿಯಾ ವಿಜಿ ಇಂದಿನ ಘಟನೆಯಿಂದ ತನ್ನ ಶ್ರಮವನ್ನು ಗಾಳಿಗೆ ತೂರಿ ಬಿಟ್ಟ. ಕಲಾವಿದ ಸಮಾಜದ ಮಾರ್ಗದರ್ಶಕ ಆಗಬೇಕು. ಇಲ್ಲದಿದ್ದರೆ ನಮ್ಮ ಬೆವರಿಗೂ ಜನರ ಚಪ್ಪಾಳೆಗೂ ಅಪಮಾನ ಮಾಡಿದಂತೆ. ನಶ್ವರ ಜಗಕ್ಕೆ ಗುಣವೇ ಶ್ರೀಮಂತಿಕೆ… ಹೀಗಂತ ಟ್ವಿಟರ್ ಮೂಲಕ ಜಗ್ಗೇಶ್ ದುನಿಯಾ ವಿಜಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

    ಇದು ಜಗ್ಗೇಶ್ ಮಾತ್ರವಲ್ಲ ಜನಸಾಮಾನ್ಯರ ಅಭಿಪ್ರಾಯ ಎಂದರೂ ಅತಿಶಯೋಕ್ತಿಯಲ್ಲ. ವಿಜಿ ಉಗುಲಿನಲ್ಲಿ ಹೋಗೋದಕ್ಕೆ ಅನ್ಯಾಯವಾಗಿ ಕೊಡಲಿ ತೆಗೆದುಕೊಂಡಿದ್ದಾರೆ ಎಂಬ ಅಭಿಪ್ರಾಯವೇ ಜನಸಾಮಾನ್ಯರ ಕಡೆಯಿಂದಲೂ ಕೇಳಿ ಬರುತ್ತಿದೆ. ಇದನ್ನೂ ಓದಿ: ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ..?- ದುನಿಯಾ ವಿಜಯ್‍ಗೆ ಪೊಲೀಸರಿಂದ ಫುಲ್ ಕ್ಲಾಸ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

    ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

    ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ದುನಿಯಾ ವಿಜಯ್ ನನ್ನು ಬಂಧಿಸಿದ್ದು, ಆದ್ರೆ ಭಾನುವಾರವಾದ್ದರಿಂದ ಕೋರ್ಟ್ ಗೆ ರಜೆ ಹಿನ್ನೆಲೆಯಲ್ಲಿ ದುನಿಯಾ ವಿಜಿಗೆ ಜೈಲೂಟ ಗ್ಯಾರಂಟಿಯಾಗಿದೆ.

    ಕೋರ್ಟ್ ಗೆ ರಜೆ ಇರುವ ಕಾರಣ ವಿಜಯ್ ಇಂದು ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಕಡಿಮೆ ಇದ್ದು, ಹೈಗ್ರೌಂಡ್ ಪೊಲೀಸರು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಅವರ ಮುಂದೆ ಹಾಜರುಪಡಿಸಲಿದ್ದಾರೆ. ಕೋರ್ಟ್ ಕಲಾಪ ಇಲ್ಲದೆ ಇರುವ ಹಿನ್ನೆಲೆಯಲ್ಲಿ ಬೇಲ್ ಸಿಗುವ ಸಾಧ್ಯತೆ ಕಡಿಮೆ ಇದೆ.

    ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506, (ಕಿಡ್ನಾಪ್, ಮಾರಣಾಂತಿಕ ಹಲ್ಲೆ, ಕೊಲೆ ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಾಗಿದೆ.

    ಪಾನಿಪುರಿ ಕಿಟ್ಟಿ ಹೇಳಿದ್ದೇನು?
    ಅಂಬೇಡ್ಕರ್ ನಗರದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಏಕಾಏಕಿ ಹಲ್ಲೆ ಮಾಡಿದ್ದಾರೆ. ತಪ್ಪು ಮಾಡಿದರೆ ಅವರ ಮನೆಗೆ ಬಂದು ಹೇಳಬೇಕು. ಅದು ಬಿಟ್ಟು ಏಕಾಏಕಿ ಹಲ್ಲೆ ಮಾಡಿದ್ದಾರೆ. ನನಗೂ ದುನಿಯಾ ವಿಜಯ್ ಅವರಿಗೂ ಜಗಳವಾಗಿಲ್ಲ. ಜಿಮ್ ಟ್ರೇನ್ ಪ್ರಸಾದ್ ನಾನು ಬಿಸಿನೆಸ್ ಪಾಟ್ನರ್ ಆಗಿದ್ದೆವು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಅವನೇ ನನ್ನ ಮಗನನ್ನು ಅಪಹರಣ ಮಾಡಿ ಹಲ್ಲೆ ಮಾಡಿದ್ದಾನೆ ಅಂತ ಕಿಟ್ಟಿ ಹೇಳಿದ್ದಾರೆ.

    ಬಂಧನದ ಭೀತಿಯಲ್ಲಿ ವಿಜಯ್, ಮಾರುತಿಗೆ ಗೌಡ ಅವರಿಗೆ ಜೀವ ಬೆದರಿಕೆ ಹಾಕಿ ವಿಡಿಯೋ ಮಾಡಿಸಿದ್ದಾರೆ. ವಿಡಿಯೋದಲ್ಲಿ ‘ಗಲಾಟೆ ನಡೆಯುತ್ತಿತ್ತು, ಈ ವೇಳೆ ದುನಿಯಾ ವಿಜಿ ಬಂದು ಬಿಡಿಸಿ ಮನೆಗೆ ಕರೆದುಕೊಂಡು ಬಿಟ್ಟಿದ್ದಾರೆ ಎಂದು ಮಾರುತಿ ಗೌಡ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾನಿಪುರಿ ಕಿಟ್ಟಿ, ಮಾರುತಿಗೆ ಹಲ್ಲೆ ಮಾಡಿ ಸುಳ್ಳು ವಿಡಿಯೋ ಮಾಡಿಸಿದ್ದಾರೆ. ಜೀವ ಬೆದರಿಕೆ ಇತ್ತು. ಆದ್ದರಿಂದ ಹೆದರಿ ಈ ವೀಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಬೆಂಗಳೂರು: ಜಾನಿ ಮೇರಾ ನಾಮ್ ಚಿತ್ರದ ನಂತರ ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ‘ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ರಚಿತಾ ರಾಮ್ ಮತ್ತು ವಿಜಿ ಒಟ್ಟಾಗಿ ನಟಿಸಿರೋ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

    ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೇರೊಂದು ಲೋಕವನ್ನೇ ಸೃಷ್ಟಿಸಿದ್ದ ಚಿತ್ರ ತಂಡ ಅಲ್ಲಿಯೇ ಐವತ್ತು ದಿನಗಳ ಚಿತ್ರೀಕರಣವನ್ನೂ ಪೂರೈಸಿಕೊಂಡಿತ್ತು. ಅಂದಹಾಗೆ ಈ ಚಿತ್ರ ದುನಿಯಾ ಟಾಕೀಸ್ ಲಾಂಛನದಲ್ಲಿ ದುನಿಯಾ ವಿಜಯ್ ಸ್ವತಃ ನಿರ್ಮಾಣ ಮಾಡುತ್ತಿರೋ ಮೊದಲ ಚಿತ್ರ. ಇದೊಂದು ತೆರನಾಗಿ ಜಾನಿ ಮೇರಾ ನಾಮ್ ಚಿತ್ರದ ಮುಂದುವರೆದ ಭಾಗವಿದ್ದಂತೆ. ಈ ಚಿತ್ರದಲ್ಲಿಯೂ ರಂಗಾಯಣ ರಘು ಮತ್ತು ವಿಜಿ ಕಾಂಬಿನೇಷನ್ ಪ್ರಮುಖ ಆಕರ್ಷಣೆ. ಇನ್ನುಳಿದಂತೆ ರಚಿತಾ ರಾಮ್ ವಿಜಯ್ ಜೋಡಿಯಾಗಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ರಚಿತಾ ರಾಮ್ ಈ ಚಿತ್ರದ ಮೂಲಕ ಮೊದಲ ಸಲ ದುನಿಯಾ ವಿಜಿ ಜೊತೆ ನಟಿಸಿದ್ದಾರೆ. ರಚಿತಾ ಇಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಮಿಕ್ಸ್ ಮಾಡಿ ಮಾತಾಡೋ ವೆಸ್ಟರ್ನ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಒಂದು ವಿಶೇಷವಾದ ಹಾಡಿನಲ್ಲಿ ವಿಜಯ್ ದೇಹವನ್ನು ಸಜ್ಜುಗೊಳಿಸಿಕೊಂಡು ನಟಿಸಿದ್ದಾರಂತೆ. ನಿರ್ದೇಶಕ ಪ್ರೀತಂ ಗುಬ್ಬಿ ಕನಸಿನಂತೆ ವಿಶೇಷವಾದ ಸೆಟ್ ಹಾಕಲೆಂದೇ ಒಂದೂವರೆ ಕೋಟಿ ವ್ಯಯಿಸಲಾಗಿತ್ತು. ವಿಜಯ್ ಮತ್ತು ರಂಗಾಯಣ ರಘು ಕಾಂಬಿನೇಷನ್ನು ಈ ಚಿತ್ರದ ಆಕರ್ಷಣೆಗಳಲ್ಲಿ ಮುಖ್ಯ ವಿಚಾರ ಎಂಬುದು ಚಿತ್ರತಂಡದ ಭರವಸೆ. ಇದಲ್ಲದೇ ರಂಗಾಯಣ ರಘು ಮತ್ತು ವಿಜಿ ಎಂಟು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಅಸಲೀ ವಿಶೇಷ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಹಾಡುಗಳು ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ.

  • ಸದ್ದಿಲ್ಲದೆ ಸೆಟ್ಟೇರಿದ ದುನಿಯಾ ವಿಜಯ್ ಹೋಮ್ ಪ್ರೊಡಕ್ಷನ್ ಸಿನಿಮಾ

    ಸದ್ದಿಲ್ಲದೆ ಸೆಟ್ಟೇರಿದ ದುನಿಯಾ ವಿಜಯ್ ಹೋಮ್ ಪ್ರೊಡಕ್ಷನ್ ಸಿನಿಮಾ

    ನೆಲಮಂಗಲ: ಸದ್ದಿಲ್ಲದೆ ದುನಿಯಾ ವಿಜಯ್ ಹೋಮ್ ಪ್ರೊಡಕ್ಷನ್ ನಲ್ಲೊಂದು ಹೊಸ ಸಿನಿಮಾ ಸೆಟ್ಟೇರಿದೆ. ದುನಿಯಾ ಟಾಕೀಸ್ ನ ಚೊಚ್ಚಲ ಸಿನಿಮಾ ‘ಜಾನಿ ಜಾನಿ ಎಸ್ ಪಪ್ಪ’. ಕಾಮಿಡಿ ಜೊತೆಗೆ ಆಕ್ಷನ್ ಹೊಂದಿರುವ ಈ ಚಿತ್ರವನ್ನು ಪ್ರೀತಮ್ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ.

    ದುನಿಯಾ ವಿಜಿ, ರಂಗಾಯಣ ರಘು ಹಾಗೂ ಪ್ರೀತಮ್ ಗುಬ್ಬಿರವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಚಿತ್ರ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೊಂದು ಚಿತ್ರವನ್ನು ತೆರೆಗೇರಿಸಲು ಸದ್ದಿಲ್ಲದೇ ಈ ಟೀಮ್ ಸಜ್ಜಾಗಿದೆ. ದುನಿಯಾ ವಿಜಿಯವರ ಸ್ವಂತ ಬ್ಯಾನರ್ ಆದ ದುನಿಯಾ ಪ್ರೋಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಜಾನಿ ಜಾನಿ ಎಸ್ ಪಪ್ಪ ಚಿತ್ರ ಜಾನಿ ಮೇರಾ ನಾಮ್ ಟೈಟಲ್ ನ ಮುಂದುವರಿದ ಭಾಗ ಎಂದು ಹೇಳಲಾಗಿದೆ.

    ಈ ಸಿನಿಮಾದಲ್ಲಿ ವಿವಿಧ ಧರ್ಮದವರನ್ನು ಒಳಗೊಂಡ ಕಾಲೋನಿಯಲ್ಲಿ ಪ್ರತಿದಿನ ನಡೆಯುವ ಸನ್ನಿವೇಶಗಳ ಚಿತ್ರಣವಾಗಿದೆ. ರಂಗಾಯಣ ರಘು ಹಾಗು ದುನಿಯಾ ವಿಜಿಯವರ ಕಾಮಿಡಿ ಕೆಮಿಸ್ಟ್ರಿ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ರಂಜಿಸಲಿದ್ದು, ವಿದೇಶಕ್ಕೆ ಹೋಗಲು ಆತುರದಲ್ಲಿರುವ ಕ್ಲಾಸ್ ಹೀರೋಯಿನ್ ರಚಿತಾ ರಾಮ್ ಹಾಗು ಮಾಸ್ ಹೀರೋ ದುನಿಯಾ ವಿಜಿ ರವರ ಪ್ರೇಮ ಕಥೆ ಅದ್ಭುತವಾಗಿದೆ ಎಂದು ಚಿತ್ರತಂಡ ಹೇಳಿದೆ.

    ಇನ್ನೂ ಚಿತ್ರಕ್ಕಾಗಿ ಬೆಂಗಳೂರು ಹೊರವಲಯ ನೆಲಮಂಗಲದ ಮೋಹನ್ ಸ್ಟುಡಿಯೋದಲ್ಲಿ 2 ಕೋಟಿ ರೂ. ಮೊತ್ತದಷ್ಟು ಅದ್ಧೂರಿ ಸೆಟ್ ರೆಡಿಯಾಗಿದ್ದು, ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡ ರೈನ್‍ಬೋ ಕಾಲೋನಿಯೇ ಚಿತ್ರದ ಪ್ರಮುಖ ಆಕರ್ಷಣೆ. ಈಗಾಗಲ್ಲೇ ಶೇ. 50ರಷ್ಟು ಶೂಟಿಂಗ್ ಹಾಗೂ 2 ಸಾಂಗ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೂಟಿಂಗ್ ಕೆಲಸ ಭರ್ಜರಿಯಾಗಿ ಸಾಗುತ್ತಿದೆ. ಚಿತ್ರಕ್ಕೆ ಅಜಿನೀಶ್ ರವರ ಸಂಗೀತವಿದ್ದು, ಯಶಸ್ವಿ ನಿರ್ದೇಶಕ ಪ್ರೀತಮ್ ಗುಬ್ಬಿಯವರು ಆಕ್ಷನ್ ಕಟ್ ಹೇಳಿದ್ದಾರೆ.

    ಖ್ಯಾತ ಗಾಯಕ ವಿಜಯ ಪ್ರಕಾಶ್ ಎರಡು ಹಾಡುಗಳಿಗೆ ಧ್ವನಿ ನೀಡಿದ್ದಾರೆ ಹಾಗೂ ಮತ್ತೆರಡು ಹಾಡುಗಳ ರೆಕಾರ್ಡಿಂಗ್ ಬಾಕಿ ಇದೆ ಎನ್ನಲಾಗಿದೆ. ಊರಿಗೊಬ್ಳೆ ಪದ್ಮಾವತಿ ಶೈಲಿಯಲ್ಲೇ ಈ ಚಿತ್ರದಲ್ಲಿ ಪದ್ಮಾವತಿ ಹೆಸರಿನಲ್ಲಿ ಮತ್ತೊಂದು ಸಾಂಗ್ ಇದ್ದು, ರಚಿತಾ ರಾಮ್ ಸಖತ್ ಸ್ಟೆಪ್ ಹಾಕಿದ್ದಾರಂತೆ. ದುನಿಯಾ ವಿಜಿಯವರ ಜನ್ಮದಿನದಂದು ಆಡಿಯೋ ರಿಲೀಸ್ ಪ್ಲಾನ್ ಮಾಡಿದ್ದು, ಮಾರ್ಚ್ ನಂತರ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಒಟ್ಟಾರೆ ಯಶಸ್ವಿ ಚಿತ್ರಗಳನ್ನು ನೀಡಿದ್ದ ದುನಿಯಾ ವಿಜಿ ಹಾಗೂ ರಂಗಾಯಣ ರಘು ಕಾಂಬಿನೇಶನ್ ನ ಜಾನಿ ಜಾನಿ ಎಸ್ ಪಪ್ಪ ಚಿತ್ರ ಈಗಾಗಲೇ ಪ್ರೋಡಕ್ಷನ್ ನಲ್ಲಿ ಬ್ಯುಸಿಯಾಗಿದ್ದು, ದುನಿಯಾ ವಿಜಿ ಸ್ವಂತ ಬ್ಯಾನರ್ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿರೋದು ಸಂತಸದ ವಿಚಾರ.

  • ಮಾಸ್ತಿಗುಡಿ ಚಿತ್ರದ ದುನಿಯಾ ವಿಜಯ್ ಕಟೌಟ್ ವಿರೂಪಗೊಳಿಸಿದ ಕಿಡಿಗೇಡಿಗಳು

    ಮಾಸ್ತಿಗುಡಿ ಚಿತ್ರದ ದುನಿಯಾ ವಿಜಯ್ ಕಟೌಟ್ ವಿರೂಪಗೊಳಿಸಿದ ಕಿಡಿಗೇಡಿಗಳು

    ಬೆಂಗಳೂರು: ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಸಿನಿಮಾ ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಹಾಕಲಾಗಿದ್ದ ದುನಿಯಾ ವಿಜಿ ಕಟೌಟನ್ನ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.

    ಕಟೌಟ್‍ನಲ್ಲಿ ದುನಿಯಾ ವಿಜಿ ತಲೆಯನ್ನು ಮುರಿದಿದ್ದಾರೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿಲ್, ಉದಯ್ ಜೊತೆ ಇರೋ ದುನಿಯಾ ವಿಜಿ ಕಟೌಟನ್ನು ವಿರೂಪಗೊಳಿಸಿದ್ದಾರೆ. ಜೊತೆಗೆ ಚಿತ್ರದ ಟೈಟಲ್ ಬೋರ್ಡ್ ಕೂಡ ಮುರಿದು ಹಾಕಿದ್ದಾರೆ.

    ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು.

    ಮಾಸ್ತಿಗುಡಿ ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಕರಬಂಧ ಮತ್ತು ಅಮೂಲ್ಯ ನಟಿಸಿದ್ದಾರೆ.

    ಇದನ್ನೂ ಓದಿ: `ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!

  • `ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!

    `ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!

    ದಾವಣಗೆರೆ: ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಚಿತ್ರದ ಯಶಸ್ಸಿಗಾಗಿ ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಹರಕೆ ಸಲ್ಲಿಸಿದ್ದಾರೆ.

    ಹೌದು. ವಿಜಿ ಅಭಿಮಾನಿಯೊಬ್ಬರು ಮೊಣಕಾಲಿನಲ್ಲೇ ನಡೆಯುವ ಮೂಲಕ ನೆರೆದವರಿಗೆ ಅಚ್ಚರಿ ಮೂಡಿಸಿದ್ದಾರೆ. ದುನಿಯಾ ವಿಜಯ್ ಅಭಿಮಾನಿ ಬಳಗದ ಅಧ್ಯಕ್ಷ ದೊಡ್ಡೇಶ ಈ ವಿಶಿಷ್ಟ ಹರಕೆ ಸಲ್ಲಿಸಿದ್ದಾರೆ.

    ದಾವಣಗೆರೆ ನಗರದ ಅಶೋಕ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹೀಗಾಗಿ ದೊಡ್ಡೇಶ ಅವರು ಅರುಣಾ ಚಿತ್ರಮಂದಿರದಿಂದ ಲಿಂಗೇಶ್ವರ ದೇವಸ್ಥಾನದವರೆಗೆ ಸುಮಾರು 500 ಮೀಟರ್ ದೂರ ಮೊಣಕಾಲಿನಲ್ಲಿಯೇ ನಡೆದು ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು. ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸುತ್ತಿದ್ದಾರೆ.

    ಬೆಂಗಳೂರಿನ ಗೌಡನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮಾಸ್ತಿಗುಡಿ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಸಿನಿಮಾ ನೋಡಲು ಉದಯ್ ತಂದೆ ವೆಂಕಟೇಶ್, ತಾಯಿ ಕೌಸಲ್ಯ ಮತ್ತು ಉದಯ್ ಸಹೋದರ ಬಂದಿದ್ದಾರೆ. ಇದೇ ವೇಳೆ ಮಾತನಾಡಿದ ಉದಯ್ ತಂದೆ-ತಾಯಿ, ಉದಯ್ ಅಭಿನಯದ ಕೊನೆ ಸಿನಿಮಾ ಇದು. ಹಾಗಾಗಿ ಚಿತ್ರಮಂದಿರದಲ್ಲಿ ನೋಡೋಕೆ ಬಂದ್ವಿ ಅಂದ್ರು. ಇನ್ನು ಕ್ಲೈಮ್ಯಾಕ್ಸ್ ದುರಂತದಲ್ಲಿ ಬಲಿಯಾದ ಅನಿಲ್ ಮತ್ತು ವಿಜಯ್ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿದೆ ಮಾಸ್ತಿ ಚಿತ್ರತಂಡ.

  • ವಿಲನ್ ರೋಲ್‍ನಲ್ಲಿ ಕರಿ ಚಿರತೆ – ಜ್ಯೂ. ಎನ್‍ಟಿಆರ್ ಮುಂದೆ ಅಬ್ಬರ

    ವಿಲನ್ ರೋಲ್‍ನಲ್ಲಿ ಕರಿ ಚಿರತೆ – ಜ್ಯೂ. ಎನ್‍ಟಿಆರ್ ಮುಂದೆ ಅಬ್ಬರ

    ಬೆಂಗಳೂರು: ಜ್ಯೂನಿಯರ್ ಎನ್‍ಟಿಆರ್ ಹೀರೊ ಆಗಿರುವ `ಜೈ ಲವ ಕುಶ’ ಸಿನಿಮಾದಲ್ಲಿ ವಿಜಯ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೊಂದು ದಿನದಲ್ಲಿ ಹೊರ ಬೀಳುವ ಸಾಧ್ಯತೆಯಿದೆ.

    ಬಾಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಎನ್‍ಟಿಆರ್ ಫಸ್ಟ್ ಟೈಮ್ ತ್ರಿಬಲ್ ರೋಲ್‍ನಲ್ಲಿ ಕಾಣಿಸುತ್ತಿದ್ದಾರೆ. ಮೂರೂ ವಿಭಿನ್ನ ಗೆಟಪ್ ಗಳು ಕೂಡ ಈ ಚಿತ್ರದಲ್ಲಿವೆ. ಜೈ, ಲವ ಮತ್ತು ಕುಶ ಎನ್ನುವುದು ಪಾತ್ರಗಳ ಹೆಸರು. ಇಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣನ ಹೋಲಿಕೆ ಪಾತ್ರಕ್ಕಿರುತ್ತವೆ ಎಂದು ಫಸ್ಟ್‍ಲುಕ್‍ನಲ್ಲಿ ರಿವೀಲ್ ಆಗಿದೆ.

    ಟಾಲಿವುಡ್‍ನಲ್ಲಿ ಜ್ಯೂನಿಯರ್ ಎನ್‍ಟಿಆರ್‍ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸೀನಿಯರ್ ಎನ್‍ಟಿಆರ್ ಮೊಮ್ಮಗ ಎನ್ನುವ ಖ್ಯಾತಿ ಇದೆ. ಅಂಥ ಸ್ಟಾರ್ ಮುಂದೆ ವಿಲನ್ ಆಗುವುದು ಸಣ್ಣ ಮಾತೇನಲ್ಲ. ಅದರಲ್ಲೂ ಇಲ್ಲಿ ಹೀರೊ ಆಗಿರುವ ವಿಜಿ ಅಲ್ಲಿ ವಿಲನ್ ಆಗಿ ನಟಿಸುವುದು ರಿಸ್ಕ್ ಕೂಡ ಹೌದು. ಆದರೆ ಬಹುಶಃ ಇವರು ಮಾಡುತ್ತಿರುವ ಪಾತ್ರಕ್ಕೂ ಒಂದು ಗತ್ತು ಇದ್ದಿರಬೇಕು. ಹೀಗಾಗಿಯೇ ವಿಜಿ ಒಪ್ಪಿಕೊಂಡಿದ್ದಾರಂತೆ ಎನ್ನುವುದು ಗಾಂಧಿನಗರದ ಮಾತು.

  • ದಿಗಂಬರ ಸ್ವಾಮೀಜಿಯ ದರ್ಶನ ಪಡೆದ ವಿಜಿ ದಂಪತಿ

    ದಿಗಂಬರ ಸ್ವಾಮೀಜಿಯ ದರ್ಶನ ಪಡೆದ ವಿಜಿ ದಂಪತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಸ್ವಾಮೀಜಿಗಳ ಆಶಿರ್ವಾದ ಪಡೆಯೋದು, ಹೋಮ ಮಾಡಿಸೋದು, ಇಂತಹ ಹಲವು ಕೆಲಸಗಳನ್ನು ಆಗಾಗ ಮಾಡ್ತಾನೇ ಇರ್ತಾರೆ.

    ಆದ್ರೆ ಇದೀಗ ದುನಿಯಾ ವಿಜಿ ದಂಪತಿ ದಿಗಂಬರ ಸ್ವಾಮೀಜಿಯ ಆಶೀರ್ವಾದ ಪಡೆದಿರೋದು ಕುತೂಹಲಕ್ಕೆ ಕಾರಣವಾಗಿದೆ. ದುನಿಯಾ ವಿಜಿ ಹಾಗೂ ಅವರ ಪತ್ನಿ ಕೀರ್ತಿ ಕಲಬುರ್ಗಿ ಜಿಲ್ಲೆಯ ಶ್ರೀ ಶ್ರೀ ಶ್ರೀ ದತ್ತ ದಿಗಂಬರ ಅಭಿನವ ಬಾಲಯೋಗಿ ಶಂಕರಲಿಂಗ ಮಹಾರಾಜ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ದುನಿಯಾ ವಿಜಿ ಅವರ ಪತ್ನಿ ಕೀರ್ತಿ ಕೂಡ ಫೋಟೋದಲ್ಲಿದ್ದಾರೆ.

    ಈ ಸ್ವಾಮೀಜಿಯನ್ನ ದುನಿಯಾ ವಿಜಿ ನಂಬೋಕೆ ಏನು ಕಾರಣ ಅನ್ನೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.