Tag: duniya viji

  • ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಬೆಂಗಳೂರು: ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನವನ್ನೂ ಮಾಡುತ್ತಿರೋ ಚಿತ್ರ ಸಲಗ. ಬಂಡಿಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯೋ ಮೂಲಕ ಈ ಸಿನಿಮಾಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸಲಗ ಎಂಬುದೇ ಪಕ್ಕಾ ಮಾಸ್ ಟೈಟಲ್. ದುನಿಯಾ ವಿಜಯ್ ಮೊದಲ ಹೆಜ್ಜೆಯಲ್ಲಿ ನಿರ್ದೇಶಕರಾಗಿ ಈ ಚಿತ್ರವನ್ನ ಹೇಗೆ ಸಂಭಾಳಿಸಲಿದ್ದಾರೆ, ಇದರ ಕಥೆ ಎಂಥಾದ್ದೆಂಬುದೂ ಸೇರಿದಂತೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಸಲಗ ಪ್ರೇಕ್ಷಕರ ನಡುವೆ ಈ ಪಾಟಿ ಘೀಳಿಟ್ಟು ಸದ್ದು ಮಾಡುತ್ತಿರೋದಕ್ಕೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರೋದು ಕೆ.ಪಿ ಶ್ರೀಕಾಂತ್ ಅನ್ನೋದೂ ಕೂಡಾ ಕಾರಣ!

    ಕೆಪಿ ಶ್ರೀಕಾಂತ್ ಹಿಟ್ ಸಿನಿಮಾ ನಿರ್ಮಾಪಕರೆಂದೇ ಖ್ಯಾತರಾಗಿರುವವರು. ಸಿನಿಮಾವನ್ನು ವ್ಯವಹಾರದಾಚೆಗೆ ಪ್ರೀತಿಸುವ ಅವರು ಕಥೆಗೆ ಎಲ್ಲ ಕೋನದಿಂದಲೂ ಕಸುವಿದೆ ಅಂತ ಗೊತ್ತಾಗದೆ ಯಾವ ಚಿತ್ರವನ್ನೂ ನಿರ್ಮಾಣ ಮಾಡಲು ಮುಂದಾಗುವವರಲ್ಲ. ಹೆಚ್ಚೂಕಮ್ಮಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚಿತ್ರರಂಗದ ಭಾಗವಾಗಿರುವ ಶ್ರೀಕಾಂತ್ ಬತ್ತಳಿಕೆಯಲ್ಲಿ ಈ ಮಾತಿಗೆ ಪೂರಕವಾದ ವಿಚಾರಗಳೇ ಇವೆ. ಇಂಥಾ ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಸಲಗದ ಮೂಲಕ ಭಾರೀ ಯಶಸ್ಸೊಂದನ್ನು ತಮ್ಮದಾಗಿಸಿಕೊಳ್ಳಲಿದ್ದಾರೆಂಬ ಸೂಚನೆಗಳೇ ಎಲ್ಲ ದಿಕ್ಕಿನಿಂದಲೂ ಕಾಣಿಸುತ್ತಿವೆ.

    ಸಲಗ ಆರಂಭದಲ್ಲಿಯೇ ಎಂಥಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಅನ್ನೋದಕ್ಕೆ ಚಿತ್ರರಂಗದ ಗಣ್ಯರ ಪ್ರತಿಕ್ರಿಯೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಯುವ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರೋ ವಿಜಯ್ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ತರುಣ್ ಸುಧೀರ್ ಕೂಡಾ ತಮ್ಮ ಬಹುಕಾಲದ ಗೆಳೆಯನ ಈ ಸಾಹಸಕ್ಕೆ ಶುಭ ಕೋರಿದ್ದಾರೆ. ಕಾರ್ತಿಕ್ ಗೌಡ, ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಲಗಕ್ಕೆ ಶುಭ ಕೋರಿದ್ದಾರೆ.

    ಇದು ಸಲಗ ಚಿತ್ರದ ಬಗ್ಗೆ ತಾನೇ ತಾನಾಗಿ ಹುಟ್ಟಿಕೊಂಡಿರೋ ಪಾಸಿಟಿವ್ ವಾತಾವರಣ. ದುನಿಯಾ ವಿಜಯ್ ಅವರೇನು ಏಕಾಏಕಿ ನಿರ್ದೇಶಕರಾಗಿ ಅವತರಿಸಿಲ್ಲ. ನಿರ್ದೇಶನಕ್ಕೆ ಬೇಕಾಗುವಂಥಾ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡು ಎಲ್ಲದರಲ್ಲಿಯೂ ಪಕ್ಕಾ ಅನ್ನಿಸಿದ ನಂತರವಷ್ಟೇ ಅಖಾಡಕ್ಕಿಳಿದಿದ್ದಾರೆ. ವಿಜಯ್ ಅವರ ಇಂಥಾ ಶ್ರದ್ಧೆಯ ಯಾನಕ್ಕೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೂಡಾ ಸಾಥ್ ನೀಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲೆನ್ನಬಹುದಾದ ಕಮಾಲ್ ನಡೆಯೋ ಲಕ್ಷಣಗಳೇ ಎಲ್ಲೆಡೆ ದಟ್ಟೈಸಿದೆ.

  • ಆಹಾರ ಸಾಮಾಗ್ರಿಗಳನ್ನ ಹೊತ್ತು ಬಂಡೀಪುರದತ್ತ ಹೊರಟ ದುನಿಯಾ ವಿಜಿ

    ಆಹಾರ ಸಾಮಾಗ್ರಿಗಳನ್ನ ಹೊತ್ತು ಬಂಡೀಪುರದತ್ತ ಹೊರಟ ದುನಿಯಾ ವಿಜಿ

    ಬೆಂಗಳೂರು: ಬಂಡೀಪುರ ಹುಲಿಸಂರಕ್ಷಿತಾರಣ್ಯದಲ್ಲಿ ಕಳೆದ ಐದು ದಿನಗಳಿಂದ ಕಾಡ್ಗಿಚ್ಚಿನಿಂದ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಂಡಿಪುರದತ್ತ ನಟ ದುನಿಯಾ ವಿಜಯ್ ಆಹಾರ ಸಾಮಗ್ರಿಗಳೊಂದಿಗೆ ಹೊರಟಿದ್ದಾರೆ.

    ದುನಿಯಾ ವಿಜಿ ಬಂಡಿಪುರ ಅಗ್ನಿದುರಂತ ವಿಚಾರ ಕೇಳಿ ಸ್ವಯಂ ಸೇವಕರಿಗಾಗಿ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಹೊರಟಿದ್ದಾರೆ. ಸದ್ಯ ಕಾರ್ಯಾಚರಣೆಯಲ್ಲಿ ಭಾಗಿ ಆಗಿರುವವರಿಗೆ ಆಹಾರ ನೀರು, ಜ್ಯೂಸ್, ಬಿಸ್ಕೆಟ್ಸ್, ಜಾಮೂನ್ ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡಲಿದ್ದಾರೆ.

    ಅಷ್ಟೇ ಅಲ್ಲದೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಅರಣ್ಯ ಸಿಬ್ಬಂದಿಗಳಿಗೆ ದುನಿಯಾ ವಿಜಯ್ ಸಹಾಯ ಮಾಡಲಿದ್ದಾರೆ. ನಟ ದರ್ಶನ್ ಕೂಡ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಬೆಂಕಿ ನಂದಿಸಲು ಸ್ವಯಂ ಸೇವಕರು ಸರ್ಕಾರದ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದರು.

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಅನೇಕ ಪ್ರಾಣಿಗಳು ಬೆಂಕಿಯಲ್ಲಿ ಸಿಕ್ಕಿ ಭಸ್ಮವಾಗಿದೆ. ಈ ಕುರಿತಂತೆ ದರ್ಶನ ಅವರು ಕೂಡ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಣ್ಣಾಮಲೈ ವಿರುದ್ಧವೇ ದೂರು ಕೊಟ್ಟ ವಿಜಿ ಪುತ್ರಿ: ಸ್ಪಷ್ಟನೆ ಕೊಟ್ಟ ಡಿಸಿಪಿ

    ಅಣ್ಣಾಮಲೈ ವಿರುದ್ಧವೇ ದೂರು ಕೊಟ್ಟ ವಿಜಿ ಪುತ್ರಿ: ಸ್ಪಷ್ಟನೆ ಕೊಟ್ಟ ಡಿಸಿಪಿ

    ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ವಿರುದ್ಧವೇ ದುನಿಯಾ ವಿಜಿ ದ್ವಿತೀಯಾ ಪುತ್ರಿ ಮೋನಿಷಾ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ.

    ದುನಿಯಾ ವಿಜಿ ಕೌಟುಂಬಿಕ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ವಿಜಿ ಅವರ ಎರಡನೇ ಪತ್ನಿ ಕೀರ್ತಿ ಗೌಡರ ಮೇಲೆ ಹಲ್ಲೆ ನಡೆಸಿದ್ದ, ಮೊದಲ ಪತ್ನಿ ನಾಗರತ್ನರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಅಲ್ಲದೇ ದುನಿಯಾ ವಿಜಿ ಮಕ್ಕಳನ್ನು ಸಹ ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸರ ವಿಚಾರಣೆಯಿಂದ ಮಾನಸಿಕವಾಗಿ ನೊಂದಿದ್ದ ದ್ವಿತೀಯಾ ಪುತ್ರಿ ಮೋನಿಷಾ ಈಗ ಅಣ್ಣಾಮಲೈ ವಿರುದ್ಧವೇ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ.

    ದೂರಿನಲ್ಲಿ ಗಿರಿನಗರ ಪೊಲೀಸರು ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪದೇ ಪದೇ ಮನಗೆ ಬಂದು ತಾಯಿ ಎಲ್ಲಿ ಎಂದು ಪ್ರಶ್ನಿಸುತ್ತಾರೆ. ಮನೆಗೆ ಬಂದಾಗ ಏಕಾಏಕಿ ಫೋನ್ ಕಿತ್ತುಕೊಂಡು, ಅಮ್ಮನಿಂದ ಕರೆ ಬಂದಿದ್ಯಾ ಎಂದು ಪರಿಶೀಲಿಸುತ್ತಾರೆ. ಪೊಲೀಸರ ವರ್ತನೆಯಿಂದಾಗಿ ನಮಗೆ ತುಂಬಾ ಹಿಂಸೆಯಾಗುತ್ತಿದೆ. ಇದರಿಂದಾಗಿ ನಾವು ನೆಮ್ಮದಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಅಪ್ಪನಿಂದ ಕಿರುಕುಳ, ಇನ್ನೊಂದು ಕಡೆ ಪೊಲೀಸರ ಟಾರ್ಚರ್ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಮೋನಿಕಾ ದೂರು ಆಧರಿಸಿ ಅಣ್ಣಾಮಲೈಗೆ ಕರೆ ಮಾಡಿ ಮಾಹಿತಿ ಪಡೆದ ಮಕ್ಕಳ ಆಯೋಗ, ಮೋನಿಕಾಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಮಕ್ಕಳನ್ನು ಈ ಪ್ರಕರಣದಿಂದ ದೂರವಿಡಿ. ನಟ ವಿಜಯ್ ಕೂಡ ಮಕ್ಕಳ ಬಗ್ಗೆ ಮಾತನಾಡದಂತೆ ಸೂಚಿಸಿದ್ದಾರೆ. ಅಲ್ಲದೇ ಈ ಬಗ್ಗೆ ಆಯೋಗದಿಂದ ಸೂಚನಾ ಪತ್ರ ರವಾನೆಯಾಗಿರುವ ಮಾಹಿತಿ ಲಭ್ಯವಾಗಿದೆ.

    ವಿಜಿ ಪುತ್ರಿ ದೂರು ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅಣ್ಣಾಮಲೈ, ನಟ ದುನಿಯಾ ವಿಜಿ ಪ್ರಕರಣದಲ್ಲಿ ಮಕ್ಕಳ ಆಯೋಗದಿಂದ ನಮಗೆ ನೋಟಿಸ್ ಬಂದಿದ್ದು, ಈಗಾಗಲೇ ನಾನು ಅದಕ್ಕೆ ಉತ್ತರಿಸಿದ್ದೇನೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಟ್ಟಿಲ್ಲ. ತನಿಖಾ ಸಂದರ್ಭದಲ್ಲಿ ನಾಗರತ್ನ ಅವರ ಬಗ್ಗೆ ವಿಚಾರಣೆ ಮಾಡಬೇಕಿತ್ತು. ಹೀಗಾಗಿ ಘಟನಾವಳಿಯ ಬಗ್ಗೆ ಪುತ್ರಿ ಮೋನಿಕಾರಿಂದ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಆದರೆ ದ್ವಿತೀಯಾ ಪುತ್ರಿ ಮೋನಿಷಾರಿಂದ ಯಾವುದೇ ಮಾಹಿತಿಯನ್ನು ಕೇಳಿಲ್ಲ. ಪೊಲೀಸರು ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಹಾಗೆ ನಡೆದುಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಮೋನಿಷಾ ಆರೋಪ ಮಾಡಿದ ಹಾಗೆ, ಪೊಲೀಸರು ಅವರ ಮೊಬೈಲ್ ತಪಾಸಣೆ ಮಾಡಿಲ್ಲ. ತನಿಖಾ ಸಂದರ್ಭಗಳಲ್ಲಿ ಕೆಲವೊಂದು ಈ ರೀತಿಯ ತೊಂದರೆ ಆಗುತ್ತದೆ. ತೊಂದರೆ ಆಗಿದ್ದರೆ ಕ್ಷಮೆ ಇರಲಿ. ಆದರೆ ನಮ್ಮ ಗಮನಕ್ಕೆ ಬಂದ ಹಾಗೆ, ನಾವು ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಮಕ್ಕಳ ಆಯೋಗಕ್ಕೆ ಈಗಾಗಲೇ ಮೌಖಿಕವಾದ ಹೇಳಿಕೆಯನ್ನು ನೀಡಿದ್ದೇನೆ. ಅವರು ಲಿಖಿತ ರೂಪದಲ್ಲಿ ತಿಳಿಸುವಂತೆ ಹೇಳಿದ್ದಾರೆ. ಹೀಗಾಗಿ ಗುರುವಾರ ಲಿಖಿತ ರೂಪದಲ್ಲಿ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!

    ‘ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!

    ಬೆಂಗಳೂರು: ನಟ ದುನಿಯಾ ವಿಜಿ ಅವರ ಮೊದಲ ಪತ್ನಿ ನಾಗರತ್ನ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ಮಗಳು ಮೋನಿಕಾಳೆ ಮಾಸ್ಟರ್ ಮೈಂಡ್ ಎಂಬುದು ತಿಳಿದುಬಂದಿದೆ.

    ದುನಿಯಾ ವಿಜಿ ಜೈಲಿಗೆ ಹೋದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ನನ್ನ ಮಗನನ್ನು ನೋಡಲು ಹೋಗಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ಕೀರ್ತಿಗೌಡ ವಿರುದ್ಧವೇ ನಾಗರತ್ನ ದೂರು ನೀಡಿದ್ದರು.

    ದುನಿಯಾ ವಿಜಿ ಜೈಲಿನಲ್ಲಿದ್ದಾಗ ಅವರನ್ನು ಹೇಗೆ ಜೈಲಿನಿಂದ ಬಿಡಿಸಬೇಕೆಂದು ವಿಜಿ ಅವರ ತಂದೆ- ತಾಯಿ ಹಾಗೂ ಕೀರ್ತಿ ಮನೆಯಲ್ಲೇ ಕುಳಿತು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ನಾಗರತ್ನ ಏಕಾಏಕಿ ಮನೆಗೆ ನುಗ್ಗಿ ಸೋಫಾ ಮೇಲೆ ಕುಳಿತಿದ್ದ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ್ದರು.

    ನಾಗರತ್ನ ಅವರು ಕೀರ್ತಿ ಮೇಲೆ ಹಲ್ಲೆ ನಡೆಸಿದ ನಂತರ ಅವರು ಸ್ವತಃ ಗಿರಿನಗರ ಪೊಲೀಸ್ ಠಾಣೆಗೆ ಹೋಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಆದರೆ ಈಗ ನಾಗರತ್ನ, ಕೀರ್ತಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    ನಾಗರತ್ನ ಅವರ ಮಗಳು ಮೋನಿಕಾ, ಕೀರ್ತಿ ಮನೆಯಲ್ಲಿದ್ದಾಗ ತನ್ನ ತಾಯಿಗೆ ಪ್ರತಿಯೊಂದು ವಿಷಯವನ್ನು ಹೇಳುತ್ತಿದ್ದರು. ಇದೊಂದು ಪೂರ್ವಯೋಜನೆ ಕೃತ್ಯವಾಗಿದ್ದು, ಮೋನಿಕಾ ತನ್ನ ತಾಯಿಗೆ ಕರೆ ಮಾಡಿ ಪ್ರತಿಯೊಂದು ವಿಷಯ ತಿಳಿಸಿದ್ದರು. ಹೀಗಾಗಿ ನಾಗರತ್ನ ನೇರವಾಗಿ ಮನಗೆ ನುಗ್ಗಿ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿ ಮಂಜು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಈ ಮೂಲಕ ದುನಿಯಾ ವಿಜಿ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ನಾಗರತ್ನ ಮನೆಗೆ ಬೆಳ್ಳಂ ಬೆಳ್ಳಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ವಿಜಿ ಮಗಳು ಮೋನಿಕಾ ಮಾಸ್ಟರ್ ಮೈಂಡ್ ಆಗಿದ್ದರು. ನಾಗರತ್ನ ಮನೆ ಮೇಲೆ ಪೊಲೀಸ್ ದಾಳಿಗೂ ಮೊದಲೇ ನಾಗರತ್ನ ಹಾಗೂ ಮೋನಿಕಾ ಎಸ್ಕೇಪ್ ಆಗಿದ್ದಾರೆ.

    ಸದ್ಯ ಗಿರಿನಗರ ಪೊಲೀಸರು ನಾಗರತ್ನ ಹಾಗೂ ಅವರ ಮಗಳು ಮೋನಿಕಾ ಅವರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು: ದುನಿಯಾ ವಿಜಿ ಸ್ಪಷ್ಟನೆ

    ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು: ದುನಿಯಾ ವಿಜಿ ಸ್ಪಷ್ಟನೆ

    ಬೆಂಗಳೂರು: ನನ್ನ ವಿರುದ್ಧ ಮಗಳು ಮೋನಿಕಾ ಸುಳ್ಳು ಆರೋಪದ ದೂರನ್ನು ನೀಡಿದ್ದಾಳೆ ಎಂದು ದುನಿಯಾ ವಿಜಿ ಸ್ಪಷ್ಟನೆ ನೀಡಿದ್ದಾರೆ.

    ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಜಿ, ನನ್ನ ಮನೆಗೆ ಯಾರೂ ಬಂದಿಲ್ಲ. ಮೋನಿಕಾ ಮನೆಗೆ ಬಂದಿರುವುದು ನಾನು ರೆಕಾರ್ಡ್ ಮಾಡಿದ್ದೇನೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಸದ್ಯ ಎಲ್ಲ ಮಾಹಿತಿಯನ್ನು ಗಿರಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ್ದೇನೆ. ಮೋನಿಕಾ ಗಿರಿನಗರ ಠಾಣೆಗೆ ಬಂದಿದ್ದಾಗ ನಾನು ಆಕೆಗೆ ಕರೆ ಮಾಡಿ ಪೊಲೀಸರು ಬರುತ್ತಿದ್ದಾರೆ ಎಂದು ಹೇಳಿದೆ ಆಗ ಆಕೆ ಅಲ್ಲಿಂದ ಓಡಿ ಹೋಗಿ ಈ ರೀತಿಯ ದೂರು ನೀಡಿದ್ದಾಳೆ ಎಂದು ತಿಳಿಸಿದರು.

    ನಮ್ಮ ಮನೆಗೆ ಬರಲು ಯಾರಿಗೂ ಅವಕಾಶವಿಲ್ಲ. ಏಕೆಂದರೆ ಮನೆಯಲ್ಲಿ ನನ್ನ ತಂದೆ ಹಾಗೂ ತಾಯಿ ಮಾತ್ರ ಇದ್ದಾರೆ. ನಾನು ಊರಿನಲ್ಲಿದ್ದೆ. ಹೀಗಿರುವಾಗ ಕಳೆದ ವಾರ ನಾಗರತ್ನ ಮನೆ ಮೇಲೆ ದಾಳಿ ಮಾಡಿಸಿದ್ದಳು. ಆಗ ನನ್ನ ತಂದೆ- ತಾಯಿ ಮಗ ಇಲ್ಲದ ಸಮಯದಲ್ಲಿ ನಮ್ಮ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿಗೆ ಪ್ರತಿ ದೂರು ನೀಡಲು ತಾಯಿ ಮತ್ತು ಮಗಳು ಈ ನಾಟಕವಾಡಿದ್ದಾರೆ ಎಂದು ವಿಜಿ ಹೇಳಿದರು.

    ಮೋನಿಕಾ ಬಾಗಿಲು ಬಡಿದಾಗ ನಾವು ಬಾಗಿಲು ತೆಗೆಯಲಿಲ್ಲ. ಆಕೆ ಬಾಗಿಲು ಚಚ್ಚಿದ್ದಾಳೆ. ನಂತರ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಗ ಹೋಗಿ ದೂರು ನೀಡಿದ್ದಾಳೆ. ಆದರೆ ಆಸ್ಪತ್ರೆಗೆ ದಾಖಲಾಗುವಾಗ ವೈದ್ಯರು ನಿನಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಿ ಮೆಡಿಕಲ್ ಸರ್ಟಿಫಿಕೇಟ್ ನೀಡಿದ್ದಾರೆ. ಇವರು ಡ್ರಾಮಾ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ ಎಲ್ಲ ಮಾಧ್ಯಮಗಳ ಮುಂದೆ ನಾನು ನಿಜವನ್ನು ಹೊರ ಹಾಕುತ್ತೇನೆ ಎಂದರು.

    ಇವರಿಗೆ ಬೆಳಗ್ಗೆ ಎದ್ದರೆ ದೂರು, ಸಂಜೆ ಎಫ್‍ಐಆರ್ ಹಾಗೂ ಟಿವಿಯಲ್ಲಿ ಬರುವ ಆಸೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಲು ಈ ರೀತಿ ಮಾಡುತ್ತಿದ್ದಾರೆ. ನಾನು ತೊಂದರೆಯಲ್ಲಿದ್ದರೆ ಅವರಿಗೆ ಖುಷಿ. ಹಾಗಾಗಿ ಅವರು ಹೀಗೆ ಮಾಡುತ್ತಿದ್ದಾರೆ. ನನ್ನ ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ನನ್ನ ತಂದೆಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ನನ್ನ ತಾಯಿಗೆ ನಡೆದಾಡಲು ಆಗಲ್ಲ. ಹೀಗಿರುವಾಗ ನಾಗರತ್ನ ನನ್ನ ತಂದೆ- ತಾಯಿ ವಿರುದ್ಧ ದೂರು ನೀಡಿದ್ದಳು. ಮೋನಿಕಾ ಬಾಗಿಲು ಬಡಿಯುವಾಗ ನಾನು ಮನೆಯೊಳಗೆ ಇದ್ದೆ. ಈ ವೇಳೆ ಮನೆಯಲ್ಲಿದ್ದ ಮೂವರು ಯುವಕರನ್ನು ಕಿಟಕಿಯಿಂದ ಮೋನಿಕಾಳ ನೋಡುತ್ತಿದ್ದಳು. ಆ ಮೂವರನ್ನು ನೋಡಿ ಮೋನಿಕಾ ಅವರ ವಿರುದ್ಧ ಕೂಡ ದೂರು ದಾಖಲಿಸಿದ್ದಾಳೆ. ಮೋನಿಕಾ ಪ್ರೀಪ್ಲಾನ್ ಮಾಡಿಕೊಂಡು ಈ ರೀತಿ ಮಾಡಿದ್ದಾಳೆ. ನಾಗರತ್ನ ಬರಿ ಸುಳ್ಳು ಹೇಳುತ್ತಾರೆ, ಡ್ರಾಮಾ ಮಾಡುತ್ತಾರೆ ಅವರ ಮಾತನ್ನು ಯಾರೂ ನಂಬಬೇಡಿ. ಮೂರು ದಿನ ನನಗೆ ಸಮಯ ಕೊಡಿ ನಾನು ಎಲ್ಲ ಸತ್ಯವನ್ನು ಹೇಳುತ್ತೇನೆ ಎಂದು ವಿಜಯ್ ಹೇಳಿದರು. ಇದನ್ನೂ ಓದಿ:ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು

    ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು

    ಬೆಂಗಳೂರು: ದುನಿಯಾ ವಿಜಿ ವಿರುದ್ಧ ಅವರ ಮಗಳೇ ಈಗ ದೂರು ನೀಡಿದ್ದು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಅವಾಚ್ಯ ಶಬ್ಧಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ವಿಜಿ ಮೊದಲ ಪುತ್ರಿ ಮೋನಿಕಾ ತನ್ನ ತಂದೆ ವಿಜಿ, ಕೀರ್ತಿ ಗೌಡ ಸೇರಿದಂತೆ ಐವರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಸೋಮವಾರ ಸುಮಾರು 10- 11 ಗಂಟೆಗೆ ನಾನು ನನ್ನ ತಂದೆ ಮನೆಗೆ ಹೋಗಿ ಕೆಲವು ವೈಯಕ್ತಿಕ ವಸ್ತುಗಳನ್ನು ಹಾಗೂ ಕಾರಿನ ದಾಖಲಾತಿಗಳನ್ನು ತೆಗೆದುಕೊಳ್ಳಲು ಅಲ್ಲಿಗೆ ಹೋಗಿದ್ದೆ. ನಾನು ಮನೆಯ ಒಳಗೆ ಹೋಗುವಾಗ ನನ್ನ ತಂದೆ ವಿಜಿ, ಕೀರ್ತಿಗೌಡ, ಹೇಮಂತ್, ವಿನೋದ್ ಹಾಗೂ ಕಾರ್ ಡ್ರೈವರ್ ಮಹಮ್ಮದ್ ಸೇರಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನನ್ನನ್ನು ಬೈದು ಕಾಲಿನಿಂದ ಹಾಗೂ ಕೆಲವು ಮಾರಕಸ್ತ್ರಾಗಳಿಂದ ಹೊಡೆದು ಗೋಡೆಗೆ ನನ್ನ ತಲೆಯನ್ನು ಹಿಡಿದು ಹೊಡೆದಿದ್ದಾರೆ. ಸದ್ಯ ನನ್ನ ಹಣೆ ಹಾಗೂ ಬಲಗೈಗೆ ಗಾಯವಾಗಿದ್ದು, ಮೀನಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ನನ್ನ ಕಾರಿನ ಕೀ ಹಾಗೂ ದಾಖಲಾತಿಗಳನ್ನು ಕೊಡಿಸಿ ಹಾಗೂ ನನ್ನ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕ್ರಮಕೈಗೊಳ್ಳಬೇಕು.

    ಆರೋಪಿಗಳ ವಿರುದ್ಧ ವಿರುದ್ಧ ಐಪಿಸಿ ಸೆಕ್ಷನ್ 341, 34, 324, 323, 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂರಲ್ಲ, ಹತ್ತು ಮಕ್ಕಳಿದ್ರೂ ದುನಿಯಾ ವಿಜಿಯನ್ನೇ ಮದ್ವೆಯಾಗ್ತಿದ್ದೆ: ಕೀರ್ತಿ ಗೌಡ

    ಮೂರಲ್ಲ, ಹತ್ತು ಮಕ್ಕಳಿದ್ರೂ ದುನಿಯಾ ವಿಜಿಯನ್ನೇ ಮದ್ವೆಯಾಗ್ತಿದ್ದೆ: ಕೀರ್ತಿ ಗೌಡ

    ಬೆಂಗಳೂರು: ಮೂರು ವರ್ಷದ ಹಿಂದೆ ಮದುವೆಯಾಗಿದೆ. ನನ್ನ ಪತಿಗೆ ಮೂವರು ಅಲ್ಲ, ಹತ್ತು ಮಕ್ಕಳಿದ್ದರೂ ನಾನು ಮದುವೆಯಾಗುತ್ತಿದ್ದೆ ಎಂದು ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಹೇಳಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದುನಿಯಾ ವಿಜಯ್ ಏನು ಅಂತ ಗೊತ್ತಿದ್ದು, ನಾನು ಮದುವೆ ಆಗಿದ್ದೇನೆ. ನಾನು ತುಂಬಾ ತ್ಯಾಗ ಮಾಡಿ ಮದುವೆಯಾಗಿದ್ದೇನೆ. ನಾಗರತ್ನ ಅವರಿಗೆ ಗಂಡ ಮಕ್ಕಳು ಬೇಕು ಅಷ್ಟೇ. ಇದರಿಂದ ಅವರು ಜನರಿಂದ ಸಿಂಪತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಪತಿ, ಅತ್ತೆ, ಮಾವ ಎಲ್ಲರು ಅವರ ಬಗ್ಗೆ ಹೇಳಿದ್ದರು. ಆದರೆ ಇಷ್ಟೊಂದು ಸುಳ್ಳು ಹೇಳುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಮೂರು ಮಕ್ಕಳಿರುವವರನ್ನು ಮದುವೆಯಾಗುವುದಕ್ಕೆ ಒಳ್ಳೆಯ ಮನಸ್ಸು ಬೇಕು. ಅವರ ಮಕ್ಕಳಿಗೂ ನಾನು ಪ್ರೀತಿಕೊಟ್ಟು ಸಾಕುತ್ತಿದ್ದೇನೆ. ನನಗೆ ಅವರ ಬಗ್ಗೆ ಗೊತ್ತು. ಈ ಪ್ರಪಂಚ ತಲೆಕೆಳಗಾದರೂ ಸರಿ. ನನಗೆ ನನ್ನ ಗಂಡನೇ ಸರ್ವಸ್ವ. ನನ್ನ ಪತಿ ನೀನು ಬೇಡ ಎಂದು ಹೇಳುವರೆಗೂ ನಾನು ಹೋಗುವುದಿಲ್ಲ ಎಂದು ಕೀರ್ತಿಗೌಡ ಗುಡುಗಿದ್ದಾರೆ.

    ಮೂರು ದಿನಗಳ ಹಿಂದಷ್ಟೇ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಮಾತನಾಡಿ, ಕೀರ್ತಿ ದುಡ್ಡು, ಬಂಗಾರ ಎಲ್ಲಾ ಎತ್ತಿಕೊಂಡು ಮನೆಯಿಂದ ಓಡಿಹೋಗಿದ್ದಾರೆ ಅಂತ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಸಿದ ಕೀರ್ತಿಗೌಡ ಅವರು, ನಾನು ದುಡ್ಡು, ಒಡವೆ ತಗೊಂಡು ಓಡಿಹೋಗಿಲ್ಲ. ಕಳ್ಳತನ ಮಾಡುವಷ್ಟು ಬರ್ಬಾದ್ ಆಗಿಲ್ಲ. ನನ್ನ ಗಂಡ ನನಗೆ ಬೇಜಾನ್ ಕೊಟ್ಟಿದ್ದಾರೆ. ನಾನು ನನ್ನ ತಾಯಿ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

    ಅವರು ಮಗನನ್ನ ನೋಡುವುದಕ್ಕೆ ಬಂದಾಗ ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ಅವರು ನೂರಕ್ಕೆ ನೂರು ಸುಳ್ಳು ಹೇಳುತ್ತಾರೆ. ಅವರೇ ಜಗಳ ಮಾಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅಂತವರ ಜೊತೆ ಇರಲು ಸಾಧ್ಯವಿಲ್ಲ. ಮನೆ ವಿಚಾರವನ್ನು ಬೀದಿಗೆ ತರಲು ನನಗೆ ಇಷ್ಟ ಇಲ್ಲ. ನನ್ನ ಅತ್ತೆ, ಮಾವ ನಾದಿನಿ ಎಲ್ಲರ ಸಪೋರ್ಟ್ ನನಗಿದೆ. ಎಲ್ಲೋ ಪುಟ್ಟ ಸಂಸಾರ ಮಾಡಿಕೊಂಡು ನೆಮ್ಮದಿಯಾಗಿದ್ವಿ ಒಂದು ಕ್ಷಣದಲ್ಲಿ ನಾಗರತ್ನ ಅವರು ಹಾಳು ಮಾಡಿದ್ದಾರೆ. ನನ್ನ ಪತಿ ಜೈಲಿನಿಂದ ಹೊರಬರಲಿ ಅಂತ ಕಾಯುತ್ತಿದ್ದೆ. ನನಗೆ ಅವರನ್ನು ಬಿಟ್ಟು ಬೇರೇನು ಬೇಡ. ಅವರೆ ನನ್ನ ಪ್ರಪಂಚ ಎಂದು ಕೀರ್ತಿ ಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ

    ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ

    ಬೆಂಗಳೂರು: ದುನಿಯಾ ವಿಜಯ್ ಹಲ್ಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಆದರೆ ಹಲ್ಲೆಗಳೊಗಾದ ಮಾರುತಿ ಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಹಲ್ಲೆಯ ಕುರಿತು ಮಾರುತಿಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ದುನಿಯಾ ವಿಜಯ್ ಅವರ ಮಗನಿಗೆ ನಾನು ಕಿಚಾಯಿಸಿಲ್ಲ. ಆದರೆ ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ರೇಗಿಸಿ ಹೊಡೆದರು ಎಂದು ಹಲ್ಲೆಗೊಳಗಾದ ಮಾರುತಿ ಗೌಡ ಆರೋಪಿಸಿದ್ದಾರೆ.

    ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಲೇ ಸುಮಾರು 11 ಜನರು ಜಾಕ್‍ರಾಡ್‍ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ನನಗೆ ದುನಿಯಾ ವಿಜಯ್ ಫ್ಯಾನ್ಸ್ ಹೊಡೆದ್ರು ಅಂತ ಹೇಳಬೇಕೆಂದು ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಅಭಿಮಾನಿಗಳು ಹೊಡೆಯುವ ರೀತಿ ವಿಡಿಯೋ ಮಾಡಿಸಿದರು ಎಂದರು.

    ನನ್ನ ಭೇಟಿಗೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರು ಬಂದಿದ್ದರು, ಆರೋಗ್ಯ ವಿಚಾರಿಸಿದ್ದಾರೆ. ಆದರೆ ಯಾವುದೇ ರಾಜಿ ಸಂಧಾನ ಮಾಡಿಕೊಂಡಿಲ್ಲ. ಕಾನೂನು ಹೋರಾಟ ಕೈಬಿಡುವುದಿಲ್ಲ ಎಂದು ಮಾರುತಿ ಗೌಡ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿಗೆ ಇನ್ನೂ 2 ದಿನ ಜೈಲು!

    ದುನಿಯಾ ವಿಜಿಗೆ ಇನ್ನೂ 2 ದಿನ ಜೈಲು!

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಅವರು ಇನ್ನೂ 2 ದಿನಗಳ ಕಾಲ ಜೈಲಿನಲ್ಲೇ ಇರಲಿದ್ದಾರೆ.

    ಜೈಲಿನಲ್ಲಿರುವ ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 1ಕ್ಕೆ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

    ವಿಜಿ ಪರ ವಕೀಲರ ವಾದವೇನು?:
    ಐಪಿಸಿ ಸೆಕ್ಷನ್ ಕಲಂ 326 ಹೊರತುಪಡಿಸಿ ಉಳಿದ ಪ್ರಕರಣಗಳು ಜಾಮೀನಿಗೆ ಅರ್ಹವಾದದ್ದಾಗಿದೆ. ಇಲ್ಲಿ ಉದ್ದೇಶಪೂರ್ವಕವಾಗಿ ಐಪಿಸಿ ಸೆಕ್ಷನ್ 326 ಸೆಕ್ಷನ್ ಸೇರಿಸಲಾಗಿದೆ. ಆದ್ರೆ ದೂರಿನಲ್ಲಾಗಲಿ, ಎಫ್‍ಐಆರ್ ನಲ್ಲಾಗಲಿ ಮಾರಕಾಸ್ತ್ರದ ಬಗ್ಗೆ ಪ್ರಸ್ತಾಪವಿಲ್ಲ. ಕೈನಿಂದ ಹಲ್ಲೆ ಎಂದು ಮಾತ್ರ ಆರೋಪಿಸಲಾಗಿತ್ತು. ಈ ಬಗ್ಗೆ ನೀಡಿದ ಮೊದಲ ಹೇಳಿಕೆಯಲ್ಲೂ ಇದರ ಪ್ರಸ್ತಾಪವಿಲ್ಲ. ನಾಲ್ಕು ಗಂಟೆಗಳ ಅವಧಿಯಲ್ಲಿ 2 ನೇ ಹೇಳಿಕೆ ಪಡೆದು ಸೆಕ್ಷನ್ 326 ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಮಾರುತಿ ಗೌಡ ಆರೋಗ್ಯ ಸುಧಾರಿಸಿದೆ. ನಿನ್ನೆ ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇದೊಂದು ಸಾಮಾನ್ಯ ಪ್ರಕರಣವಾಗಿದೆ. ಹೀಗಾಗಿ ವಿಜಿಗೆ ಜಾಮೀನು ನೀಡಿ ಅಂತ ದುನಿಯಾ ವಿಜಿ ಪರ ವಕೀಲ ಆರ್. ಶ್ರೀನಿವಾಸ್ ವಾದ ಮಾಡಿದ್ದಾರೆ.


    ಸರ್ಕಾರಿ ವಕೀಲರ ವಾದವೇನು?:
    ದುನಿಯಾ ವಿಜಿ ಮನುಷ್ಯನೇ ಅಲ್ಲ. ಈತ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ವಿಜಿಗೆ ಜಾಮೀನು ನೀಡಬೇಡಿ ಅಂತ ಸರ್ಕಾರಿ ಪರ ವಕೀಲರು ಪ್ರತಿವಾದ ಮಾಡಿದ್ದಾರೆ.

    ಹೀಗಾಗಿ ಎರಡೂ ತಂಡಗಳ ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಅದೇಶವನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಿ ಅವರು ಇನ್ನೂ 2 ದಿನಗಳ ಕಾಲ ಜೈಲಿನಲ್ಲಿರಲಿದ್ದಾರೆ.

    ಜಾಮೀನು ನೀಡದಂತೆ ಹೈಗ್ರೌಂಡ್ಸ್ ಪೊಲೀಸರು ಕೂಡ ಆಕ್ಷೇಪಣೆ ಸಲ್ಲಿಸಿದ್ದರು. ಈ ಆಕ್ಷೇಪಣೆಗಳೇನು?:
    * ಆರೋಪಿಗಳು ಗಾಂಜಾ ಸೇವಿಸಿದ್ದಾರೆ ಎಂಬ ಮಾಹಿತಿ ಇದೆ
    * ರಕ್ತ ಮಾದರಿ ಕೊಡಲಾಗ್ತಾ ಇದೆ, ಈಗಲೇ ಜಾಮೀನು ಮಂಜೂರು ಮಾಡಬೇಡಿ.
    * ಆರೋಪಿ ಪದೇ ಪದೇ ಇದೇ ರೀತಿಯ ಗಲಾಟೆ ಮಾಡ್ತಾನೆ
    * ಇದೇ ರೀತಿಯ ಗಲಾಟೆಯನ್ನು ಮಾಡಿ ಮೂರು ಬಾರಿ ಸ್ಟೇಷನ್ ಬೇಲ್ ಪಡೆದಿದ್ದಾರೆ
    * ಈ ಬಾರಿಯೂ ಜಾಮೀನು ಸಿಕ್ಕಿದ್ದರೆ ಕಾನೂನು ಮೇಲಿನ ಭಯ ಹೋಗುತ್ತೆ
    * ಪ್ರಭಾವಿ ವ್ಯಕ್ತಿ ಆಗಿರೋದ್ರಿಂದ ಸಾಕ್ಷಿ ನಾಶ ಮಾಡ್ತಾನೆ
    * ಪೊಲೀಸ್ ಠಾಣೆಯ ಮುಂದೆಯೇ ದೊಡ್ಡ ಗಲಾಟೆ ಮಾಡಿದ್ದಾನೆ.

    ಮಾರುತಿ ಗೌಡ ಡಿಸ್ಚಾರ್ಜ್:
    ದುನಿಯಾ ವಿಜಿಗೆ ಜಾಮೀನು ಸಿಗುವ ಸಾಧ್ಯತೆಗಳಿವೆ. ಯಾಕಂದ್ರೆ ಹಲ್ಲೆಗಳೊಳಗಾಗಿದ್ದ ಮಾರುತಿ ಗೌಡ ಶುಕ್ರವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಟ ದುನಿಯಾ ವಿಜಿ ಹಲ್ಲೆಯಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಮಾರುತಿ ಗೌಡ ದಾಖಲಾಗಿದ್ದರು. ಆರು ದಿನಗಳ ಬಳಿಕ ನಿನ್ನೆ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಮಾರುತಿ ಗೌಡ ತುಟಿಗೆ ಗಾಯವಾಗಿ, ಕಣ್ಣು ಮತ್ತು ಮುಖ ಊತ ಬಂದಿತ್ತು. ಹೀಗಾಗಿ ಆರು ದಿನಗಳ ಕಾಲ ಚಿಕಿತ್ಸೆ ನೀಡಿ ತುಟಿಗೆ ಹದಿನೈದು ಹೊಲಿಗೆ ಹಾಕಲಾಗಿತ್ತು. ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

    ಏನಿದು ಪ್ರಕರಣ?:
    ಕಳೆದ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಸ್ಪರ್ಧೆ ನೋಡಲು ದುನಿಯಾ ವಿಜಿ ತಮ್ಮ ತಂಡದೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=YjxBslBdbNU