Tag: Duniya Vijay

  • ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಮೊದಲ ಬಾರಿಗೆ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಓದಿದ್ದೀರಿ. ಆ ಸಿನಿಮಾದ ಮುಹೂರ್ತ ಮೊನ್ನೆಯಷ್ಟೇ ನಡೆದಿದೆ. ಅಂದು ದುನಿಯಾ ವಿಜಯ್ ಹೋಗಿರಲಿಲ್ಲ. ಹಾಗಾಗಿ ವಿಜಯ್ ಆ ಚಿತ್ರದಲ್ಲಿ ಇರುತ್ತಾರಾ ಅಥವಾ ಇಲ್ಲವಾ ಎನ್ನುವ ಅನುಮಾನ ಕೂಡ ಮೂಡಿತ್ತು. ಈ ಎಲ್ಲದಕ್ಕೂ ಇಂದು ಸ್ಪಷ್ಟ ಉತ್ತರ ಸಿಕ್ಕಿದೆ. ನೆನ್ನೆಯಷ್ಟೇ ದುನಿಯಾ ವಿಜಯ್ ತೆಲುಗು ಸಿನಿಮಾದ ಶೂಟಿಂಗ್ ಗಾಗಿ ತೆರಳಿದ್ದಾರೆ. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರ

    ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಈ ಹೊಸ ಸಿನಿಮಾದಲ್ಲಿ ವಿಜಯ್ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಗಾಗಿ ವಿಜಯ್, ಪತ್ನಿಯೊಂದಿಗೆ ತೆರಳಿದ್ದಾರೆ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ವಿಲನ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ದುನಿಯಾ ವಿಜಯ್, ಆನಂತರ ದುನಿಯಾ ಚಿತ್ರ ಅವರನ್ನು ಹೀರೋ ಆಗಿ ಮಾಡಿತು. ಅಲ್ಲಿಂದ ಅವರು ನಾಯಕರಾಗಿಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಈಗ ಮತ್ತೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದು ತೆಲುಗು ಸಿನಿಮಾದಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ಗೋಪಿಚಂದ್ ಮಲಿನೇನೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಯ್ಯನ 107ನೇ ಸಿನಿಮಾ ಇದಾಗಿದೆ. ಎರಡು ವಾರದಿಂದ ಸಿನಿಮಾದ ಶೂಟಿಂಗ್ ನಡೆದಿದ್ದು, ಇಂದಿನಿಂದ ದುನಿಯಾ ವಿಜಯ್ ಅವರ ದೃಶ್ಯಗಳನ್ನು ಸೆರೆ ಹಿಡಿಯುತ್ತಾರಂತೆ ನಿರ್ದೇಶಕರು.

  • ‘ಕಂಟ್ರಿಮೇಡ್’ನಲ್ಲಿ ಗ್ಯಾಂಗ್‌ಸ್ಟರ್ ಆದ ಟಾಮ್ ಅಂಡ್ ಜೆರ್ರಿಯ ನಿಶ್ವಿತ್ ಕೊರೋಡಿ

    ‘ಕಂಟ್ರಿಮೇಡ್’ನಲ್ಲಿ ಗ್ಯಾಂಗ್‌ಸ್ಟರ್ ಆದ ಟಾಮ್ ಅಂಡ್ ಜೆರ್ರಿಯ ನಿಶ್ವಿತ್ ಕೊರೋಡಿ

    ಹೊಸ ತಂಡದವರೇ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ‘ಕಂಟ್ರಿಮೇಡ್’ ಸಿನಿಮಾ ಇಂದು ಸೆಟ್ಟೇರಿದೆ. ಗೊಂಬೆ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಟಾಮ್ ಅಂಡ್ ಜೆರ್ರಿ ಖ್ಯಾತಿಯ ನಟ ನಿಶ್ಚಿತ್ ಕೊರೋಡಿ ನಾಯಕ ನಟ. ಈ ಬಾರಿ ಪಕ್ಕಾ ಮಾಸ್ ಅವತಾರ ತಾಳಿರುವ ನಿಶ್ಚಿತ್ ಗ್ಯಾಂಗ್‌ಸ್ಟರ್ ಕಥಾನಕವುಳ್ಳ ‘ಕಂಟ್ರಿಮೇಡ್’ ಸ್ಕ್ರಿಪ್ಟ್ ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದಾರೆ. ಮಾಸ್ ಸಿನಿಮಾಗೆ ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಹಾಗೂ ಖಳನಟ ವಸಿಷ್ಠ ಸಿಂಹ ಸಾಥ್ ನೀಡಿದ್ದಾರೆ.

    ಇಂದು ಅದ್ಧೂರಿಯಾಗಿ ಸೆಟ್ಟೇರಿರುವ ಕಂಟ್ರಿಮೇಡ್ ಚಿತ್ರಕ್ಕೆ ದುನಿಯಾ ವಿಜಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ರೆ, ವಸಿಷ್ಠ ಸಿಂಹ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ’ಲವ್ ಮಾಕ್ಟೆಲ್’ ತೆಲುಗು ಅವತರಣಿಕೆ ನಿರ್ಮಾಣ ಮಾಡಿರುವ ಭಾವನಾರವಿ ಗೊಂಬೆ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಕಂಟ್ರಿಮೇಡ್ ಚಿತ್ರದ ರೂವಾರಿ ರಾಘವ ಸೂರ್ಯ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರಿಗೆ ಸಿನಿಮಾ ಮೇಲೆ ಅಪಾರ ಸೆಳೆತ. ನಿರ್ದೇಶಕನಾಗುವ ಕನಸ್ಸೊತ್ತಿರುವ ರಾಘವ್ ಸೂರ್ಯ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ದುಡಿದ ಅನುಭವ ಹೊಂದಿದ್ದಾರೆ. ಇದೀಗ ಕಂಟ್ರಿಮೇಡ್ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ!

    ಕಲ್ಕತ್ತಾ ಮತ್ತು ಉತ್ತರ ಕರ್ನಾಟಕ ಎರಡು ಬ್ಯಾಕ್ ಡ್ರಾಪ್‌ನಲ್ಲಿ ಸಾಗುವ ಕಥೆ ಚಿತ್ರದಲ್ಲಿದೆ. ಮಾಸ್ ಗ್ಯಾಂಗ್‌ಸ್ಟರ್ ಕುರಿತಾದ ಕಥೆ ಚಿತ್ರದಲ್ಲಿದ್ದು ಬಾಲಕನಾಗಿದ್ದಾಗ ಕೆಲವು ಕಹಿ ಘಟನೆಗಳನ್ನು ಸಹಿಸಿಕೊಳ್ಳಲಾಗದೆ ಊರು ಬಿಟ್ಟು ಕಲ್ಕತ್ತಾ ಸೇರಿಕೊಳ್ಳುವ ನಾಯಕನ ಸುತ್ತ ಸಿನಿಮಾ ಹೆಣೆಯಲಾಗಿದೆ. ಚಿತ್ರದಲ್ಲಿ ನಿಶ್ವಿತ್ ಕೊರೋಡಿ ಎರಡು ಶೇಡ್‌ಗಳಲ್ಲಿ ಕಾಣಸಿಗಲಿದ್ದಾರೆ. ಇವರಿಗೆ ಜೋಡಿಯಾಗಿ, ಬೆಂಗಾಲಿ ಹುಡುಗಿಯಾಗಿ ’ಲವ್‌ಮಾಕ್ಟೆಲ್-2’ ಖ್ಯಾತಿಯ ರಚೇಲ್‌ ಡೇವಿಡ್ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶರತ್‌ಲೋಹಿತಾಶ್ವ, ತಬಲಾನಾಣಿ ಒಳಗೊಂಡ ತಾರಾಬಳಗವಿದೆ. ನಕುಲ್‌ ಅಭಯಂಕರ್ ಸಂಗೀತ, ಜಿ.ಎಸ್.ಶ್ರೇಯಸ್ ಕ್ಯಾಮೆರಾ ವರ್ಕ್, ದೀಪು.ಎಸ್.ಕುಮಾರ್ ಸಂಕಲನ ಸಿನಿಮಾಗೆ ಇರಲಿದೆ. ಇಂದು ಸೆಟ್ಟೇರಿರುವ ಕಂಟ್ರಿಮೇಡ್ ಏಪ್ರಿಲ್‌ನಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

  • ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ನಾಳೆ (ಫೆ.01) ಶಿವರಾತ್ರಿ. ಹಬ್ಬ ಹರಿದಿನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸ್ಯಾಂಡಲ್ ವುಡ್ ಸದಾ ಸಿದ್ಧವಿರುತ್ತದೆ. ಪ್ರತಿ ಸಲದಂತೆಯೂ ಈ ಬಾರಿಯೂ ಶಿವರಾತ್ರಿಯನ್ನು ಸಡಗರದಿಂದ ಕನ್ನಡ ಚಿತ್ರರಂಗ ಬರಮಾಡಿಕೊಳ್ಳುತ್ತಿದೆ. ಒಂದು ಕಡೆ ಈ ವಾರ ಐದಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿದ್ದರೆ, ನಾಳೆ ಮತ್ತಷ್ಟು ಕಾರ್ಯಕ್ರಮಗಳು ಪ್ಲ್ಯಾನ್ ಆಗಿವೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ಸಲಗ ಸಿನಿಮಾದ ನಂತರ ದುನಿಯಾ ವಿಜಯ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿರುವ ವಿಜಯ್, ಈ ಸಿನಿಮಾದಲ್ಲಿ ಅವರು ಯಾವೆಲ್ಲ ಪಾತ್ರ ನಿರ್ವಹಿಸಲಿದ್ದಾರೆ ಎಂದು ಈವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗಾಗಲೇ ರಿಲೀಸ್ ಆದ ಪೋಸ್ಟರ್ ಹೇಳುವ ಪ್ರಕಾರ, ದುನಿಯಾ ವಿಜಯ್ ಅವರು ನಟನೆಯೊಂದಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನುತ್ತದೆ. ಶಿವರಾತ್ರಿ ದಿನದಂದು ಇದೆಲ್ಲದಕ್ಕೂ ಉತ್ತರ ಸಿಗಲಿದೆ. ಹಾಗೂ ಟೈಟಲ್ ಕೂಡ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ವೀರಂ ಸಿನಿಮಾದ ಹಾಡೊಂದು ಶಿವರಾತ್ರಿಗಾಗಿ ರಿಲೀಸ್ ಆಗುತ್ತಿದೆ. ಶಿವನ ಆರಾಧನೆಯ ಕುರಿತಾಗಿಯೇ ಈ ಹಾಡು ಮೂಡಿ ಬಂದಿದ್ದು, ಖ್ಯಾತ ಗಾಯಕಿ ಅನನ್ಯ ಭಟ್ ಈ ಗೀತೆಯನ್ನು ಹಾಡಿದ್ದಾರೆ. ಅನೂಪ್ ಸೀಳೀನ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದ್ದು, ನಾಗೇಂದ್ರ ಪ್ರಸಾದ್ ಈ ಗೀತೆಯನ್ನು ಬರೆದಿದ್ದಾರೆ. ಈ ಹಾಡು ಅಕ್ಕ ಮತ್ತು ತಂಗಿಯ ಭಾವನಾತ್ಮಕ ಸನ್ನಿವೇಶದಲ್ಲಿ ಸ್ಥಳ ಪಡೆದಿದೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ಅಲ್ಲದೇ ಶಿವರಾತ್ರಿ ಮುನ್ನ ದಿನವೇ ಸುನಿ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಮತ್ತು ನಾಯಕನ ಪರಿಚಯದ ಟೀಸರ್ ವೊಂದು ಬಿಡುಗಡೆ ಆಗಿದೆ. ಹೊಸ ಹುಡುಗನಿಗಾಗಿ ಸುನಿ ವಿಶೇಷ ಟೀಸರ್ ವೊಂದನ್ನು ತಯಾರಿಸಿ, ಆ ಮೂಲಕ ತಮ್ಮ ಸಿನಿಮಾದ ನಾಯಕನನ್ನು ಪರಿಚಯಿಸಿದ್ದಾರೆ. ಶಿವರಾತ್ರಿ ಒಂದು ದಿನ ಮುನ್ನವೇ ಈ ಟೀಸರ್ ಅಭಿಮಾನಿಗಳಿಗೆ ಇಷ್ಟವಾಗಿದೆ.

  • ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಇದೀಗ ಸ್ವತಃ ವಿಜಯ್ ಅವರೇ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ, ಅಧಿಕೃತಗೊಳಿಸಿದ್ದಾರೆ. ತಮ್ಮ ಎರಡನೇ ಸಿನಿಮಾ ಕುರಿತು ಅತೀ ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ಸದ್ಯಕ್ಕೆ ‘ವಿಕೆ 28’ ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ದುನಿಯಾ ವಿಜಯ್, ಈ ಸಿನಿಮಾ ಕೂಡ ರಕ್ತಸಿಕ್ತ ಅಧ್ಯಾಯವೊಂದನ್ನು ತೆರೆದಿಡಲಿದೆ ಎನ್ನುವಂತೆ ಪೋಸ್ಟರ್. ಲವ್ ಸ್ಟೋರಿಗಳಿಗಿಂತಲೂ ಲಾಂಗು ಮಚ್ಚುಗಳ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ದುನಿಯಾ ವಿಜಯ್, ಆ ಸರಣಿಯನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

    ವಿಜಯ್ ಚೊಚ್ಚಲು ನಿರ್ದೇಶನದ ಸಲಗ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದರೂ, ನಿರ್ಮಾಪಕರ ಜೇಬು ತುಂಬಿಸುವಲ್ಲಿ ಸೋಲಲ್ಲಿ. ಹಾಗಾಗಿ ಈ ವರ್ಷದ ಗೆಲುವಿನ ಸಿನಿಮಾಗಳ ಪಟ್ಟಿಯಲ್ಲಿ ಅದು ಸ್ಥಾನ ಪಡೆದುಕೊಂಡಿತು. ಸಲಗ ಸಕ್ಸಸ್ ಆಗುತ್ತಿದ್ದಂತೆಯೇ ವಿಜಯ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿದರು. ಈಗದು ಎರಡನೇ ಸಿನಿಮಾವಾಗಿ ಬದಲಾಗಿದೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಅಂದಹಾಗೆ ಸಲಗ ಸಿನಿಮಾ ಮಾಡಿದ್ದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬದಲು ಈ ಸಿನಿಮಾವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಉಳಿದ ವಿವರವನ್ನು ಮುಂದಿನ ದಿನಗಳಲ್ಲಿ ನೀಡುತ್ತಾರಂತೆ ದುನಿಯಾ ವಿಜಯ್.

  • ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ದುನಿಯಾ ವಿಜಯ್ ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆಯೊಂದಿಗೆ ಶುರುವಾದ ‘ಸಲಗ’ ಸಿನಿಮಾ, ಇದೀಗ ಯಶಸ್ಸಿನ ಕಿರೀಟ ತೊಟ್ಟುಕೊಂಡಿದೆ. ನಿರ್ದೇಶನದ ಮೊದಲ ಸಿನಿಮಾದಲ್ಲಿಯೇ ಗೆದ್ದು ಬೀಗುತ್ತಿರುವ ದುನಿಯಾ ವಿಜಯ್, ಸದ್ಯದಲ್ಲೇ ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ದುನಿಯಾ ಅಂಗಳದಿಂದ ಬಂದಿದೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?


    ಸಲಗ ಸೋತರೂ, ಗೆದ್ದರೂ ತಾವು ನಟನೆಯ ಜತೆಗೆ ನಿರ್ದೇಶನದಲ್ಲೂ ಮುಂದುವರೆಯುವುದಾಗಿ ದುನಿಯಾ ವಿಜಯ್ ಈ ಹಿಂದೆಯೇ ಹೇಳಿದ್ದರು. ಅಂದುಕೊಂಡ ಕನಸು ಅವರನ್ನು ಕೈ ಬಿಡಲಿಲ್ಲ. ಪ್ರೇಕ್ಷಕ ಸಲಗ ಗೆಲ್ಲಿಸಿಬಿಟ್ಟ. ಹಾಗಾಗಿ ನಿರ್ದೇಶಕನಾಗುವ ಹುರುಪು ಇಮ್ಮಡಿಯಾಗಿದೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಸದ್ಯ ಹೊಸ ಸಿನಿಮಾದ ಕಥೆ ಬರೆಯುವುದರಲ್ಲಿ ವಿಜಯ್ ತೊಡಗಿಕೊಂಡಿದ್ದಾರೆ. ಈ ಬಾರಿಯೂ ಅವರು ರಾ ಆಗಿರುವಂತಹ ಕಥೆಯನ್ನೇ ಸಿನಿಮಾ ಮಾಡಲಿದ್ದಾರಂತೆ. ಪಕ್ಕಾ ಮಾಸ್ ಸಿನಿಮಾ ಅದಾಗಿದ್ದು, ನಿರ್ದೇಶನದ ಜತೆಗೆ ನಟನೆಯನ್ನೂ ಮಾಡುತ್ತಾರಾ ಅಥವಾ ಬೇರೆ ಕಲಾವಿದರಿಗೆ ಹೊಸ ಸಿನಿಮಾ ಮಾಡುತ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ : ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?


    ಅಂದುಕೊಂಡಂತೆ ಆದರೆ, ಶಿವರಾತ್ರಿ ಹೊತ್ತಿಗೆ ಈ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲಿಯವರೆಗೂ ಸಂಭಾಷಣೆಕಾರ ಮಾಸ್ತಿ ಮತ್ತು ದುನಿಯಾ ವಿಜಯ್ ಸ್ಕ್ರಿಪ್ಟ್ ಬರೆಯುವುದರಲ್ಲಿ ಮಗ್ನರಾಗಿರುತ್ತಾರೆ. ಜತೆ ಜತೆಗೆ ಕಲಾವಿದರ ಆಯ್ಕೆ ಕೂಡ ನಡೆಯಲಿದೆಯಂತೆ. ಎರಡನೇ ಸಿನಿಮಾಗೆ ನಿರ್ದೇಶನ ಮಾಡುವುದು ಪಕ್ಕಾ ಆಗಿದ್ದು, ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  • ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    – ವೇದಿಕೆಯಲ್ಲೇ ಕಣ್ಣೀರಿಟ್ಟ ದುನಿಯಾ ವಿಜಿ

    ಬೆಂಗಳೂರು: ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ. ಹೀಗಾಗಿ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಇಂದು ಖಾಸಗಿ ಹೊಟೇಲ್ ನಲ್ಲಿ ನಡೆದ ‘ಸಲಗ’ ಚಿತ್ರದ ಸಕ್ಸಸ್ ಮೀಟ್‍ನಲ್ಲಿ ಮಾತನಾಡಿದ ಅವರು, ನಾವು ಒಟ್ಟಿಗೆ ಇದ್ದಾಗೆಲ್ಲಾ ನಮಗೆ ವಯಸ್ಸಾಗಿದೆ ಅನ್ಕೋಳ್ಳೋದಿಲ್ಲ. ನಾವು ಪಾಸಿಟಿವ್ ಥಿಂಕ್ ಮಾಡಬೇಕು, ಅದೇ ಒಳ್ಳೆಯದು. ವಿಜಿ ಮೊದಲ ಸಿನಿಮಾ ದುನಿಯಾ ಮುಹೂರ್ತಕ್ಕೂ ಬಂದಿದ್ದೆ, ಈಗಲೂ ಜೊತೆ ಇರ್ತೀನಿ. ಕನ್ನಡದ ನಟಿ ಸಂಜನಾ ಅವರು ಚಿತ್ರದಲ್ಲಿ ಒಳ್ಳೆಯ ರೀತಿ ನಟಿಸಿದ್ದಾರೆ. ನಮ್ಮಲ್ಲೇ ಒಳ್ಳೊಳ್ಳೆ ನಟಿಯರಿದ್ದಾರೆ. ಎಲ್ಲರಿಗೂ ಹೇಳೋದೇನು ಅಂದ್ರೆ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ಇದೇ ವೇಳೆ ವೇದಿಕೆಯಲ್ಲಿ ಅಪ್ಪು ನೆನೆದು ಶಿವಣ್ಣ ಭಾವುಕರಾದರು. ‘ಸಲಗ’ ಪ್ರೀ-ರಿಲೀಸ್ ಇವೆಂಟ್ ಯಾವಾಗ್ಲೂ ನೆನಪಿರುತ್ತೆ. ಅಪ್ಪು ನಾನು ಇದ್ವಿ. ಹಲವು ನೆನಪುಗಳಿವೆ. ಈಗಿಲ್ಲ ಅಂತ ಅನ್ಕೊಂಡ್ರೆ ತುಂಬಾ ಕಷ್ಟ ಆಗುತ್ತೆ. ಆದರೆ ಅವರು ಇಲ್ಲೇ ಇದ್ದಾರೆ, ಅವರ ಬೆಸ್ಲಿಂಗ್ಸ್ ಇರುತ್ತೆ ಎಂದರು. ನೀವು ಬಂದಿದ್ದೀರಿ, ನಿಮ್ಮ ಮೂಲಕ ಅಪ್ಪು ಬ್ಲೆಸ್ಲಿಂಗ್ಸ್ ನೋಡಬಹುದಾ ಎಂಬ ಪ್ರಶ್ನೆಗೆ ಇಲ್ಲ ಖಂಡಿತಾ ಇಲ್ಲ. ಅವರು ಇಲ್ಲ ಅಂತ ಅನ್ಕೊಳ್ಳೋ ಹಾಗಿಲ್ಲ. ಇಲ್ಲೇ ಇದ್ದಾರೆ ಎಂದು ಶಿವಣ್ಣ ಗದ್ಗದಿತರಾದರು.

    ನಟ ದುನಿಯಾ ವಿಜಯ್ ಮಾತನಾಡಿ, ಸಲಗ ಚಿತ್ರ ಸಕ್ಸಸ್ ತಂದುಕೊಟ್ಟಿದೆ ಎಂದು ಹೇಳಿ ಕಣ್ಣೀರು ಹಾಕಿದರು. ಕೆಲ ಕ್ಷಣ ಮೌನ ತಾಳಿದ ಬಳಿಕ ದುನಿಯಾ ವಿಜಯ್ ದುಃಖದ ಕೋಡಿ ಒಡೆಯಿತು. ಈ ನಡುವೆ ತಾಯಿ – ತಂದೆ ಕಳೆದುಕೊಂಡರು. ಈ ಸಕ್ಸಸ್ ಅನ್ನು ಅಪ್ಪು, ಅಮ್ಮ-ಅಪ್ಪ ಅಭಿಮಾನಿಗಳಿಗೆ ಸಲ್ಲಿಸ್ತೀನಿ. ಶಿವಣ್ಣ ಯಾವಾಗಲೂ ಜೊತೆಯಲ್ಲಿದ್ದಾರೆ, ಖುಷಿಯಾಗುತ್ತೆ. ಸಿನಿಮಾ ಪ್ರೊಡ್ಯೂಸ್ ಮಾಡೋವಾಗ ಮುಂಚೆ 40 ರೂ. ನನ್ನ ಜೇಬಲ್ಲಿತ್ತು. ಈಗ 40 ಲಕ್ಷ ಆಗಿದೆ ಎಂದು ಭಾವುಕರಾದರು.

    ಸಲಗ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ಗಣೇಶ್, ಡಾಲಿ ಧನಂಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಲ್ಲದೆ ನಟ ಡಾಲಿ ಧನಂಜಯ್, ಸಂಜನಾ ಆನಂದ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಲಗ ಚಿತ್ರಕ್ಕೆ ಅಪ್ಪು ಚಾಲನೆ ಕೊಟ್ಟಿದ್ರು. ಚಿತ್ರ ಬಿಡುಗಡೆಗೂ ಮುಂಚೆ ಪ್ರಿ-ರಿಲೀಸ್ ಇವೆಂಟ್ ನಲ್ಲೂ ಅಪ್ಪು ಇದ್ದರು. ಇದೀಗ ಸಲಗ ಸಕ್ಸಸ್ ನಲ್ಲಿ ಅಪ್ಪು ಇಲ್ಲ ಅನ್ನೋದು ಕೊರಗು ಚಿತ್ರತಂಡಕ್ಕಿದೆ.

  • ದುನಿಯಾ ವಿಜಯ್ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ – ಯುವತಿ ಪಟ್ಟು

    ದುನಿಯಾ ವಿಜಯ್ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ – ಯುವತಿ ಪಟ್ಟು

    ದಾವಣಗೆರೆ: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಯುವತಿಯೊಬ್ಬಳು ಪಟ್ಟು ಹಿಡಿದಿದ್ದಾಳೆ.

    ಸಾಮಾನ್ಯವಾಗಿ ಸಂಬಂಧಿಕರು, ಅಣ್ಣಂದಿರು ಬಾರದಿದ್ದರೆ ಮದುವೆಯಾಗುವುದಿಲ್ಲ. ಅವರು ಬಂದು ಅಕ್ಷತೆ ಹಾಕಿದರೆ ಮಾತ್ರ ಮದುವೆ ಹಾಗುತ್ತೇನೆ ಅಂತ ಹೇಳುವ ಎಷ್ಟೋ ಮಂದಿಯನ್ನು ನೋಡಿದ್ದೇವೆ. ಆದರೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಯುವತಿಯೊಬ್ಬಳು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಇದನ್ನೂ ಓದಿ: ಚಾಮುಂಡಿ ಬೆಟ್ಟವನ್ನು ಕಾಂಕ್ರೀಟ್ ಕಾಡು ಮಾಡಬೇಡಿ – ಮೋದಿಗೆ ಪತ್ರ ಬರೆದ ಭೈರಪ್ಪ

    ದಾವಣಗೆರೆಯ ರಾಮನಗರದ ಅನುಷ ಹಠ ಹಿಡಿದ ಯುವತಿಯಾಗಿದ್ದು, ಅನುಷಾ ಕುಟುಂಬಸ್ಥರು ಎಲ್ಲರೂ ದುನಿಯಾ ವಿಜಯ್ ಅಭಿಮಾನಿಗಳಾಗಿದ್ದು, ಕಳೆದ ಐದು ವರ್ಷದ ಹಿಂದೆ ಅನುಷಾ ತಂದೆ ಶಿವಾನಂದ್ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು. ಅಲ್ಲದೆ ದುನಿಯಾ ವಿಜಯ್ ಬರುವವರೆಗೂ ಮನೆ ಓಪನಿಂಗ್ ಮಾಡುವುದಿಲ್ಲ ಎಂದು ಹಾಗೇಯೇ ಬಿಟ್ಟಿದ್ದರು. ಈ ವಿಚಾರ ತಿಳಿದು ವಿಜಯ್ ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಗೃಹ ಪ್ರವೇಶ ಮಾಡಿದ್ದರು. ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಈಗ ಶಿವಾನಂದ ಅವರ ಮಗಳು ಅನುಷಾ ಅವರ ಮದುವೆ ಇದೇ 29ಕ್ಕೆ ನಿಶ್ಚಿತವಾಗಿದ್ದು, ದುನಿಯಾ ವಿಜಿ ಮದುವೆಗೆ ಬಂದು ಆಶೀರ್ವಾದ ಮಾಡದಿದ್ದರೆ ತಾಳಿಯೇ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಅಲ್ಲದೆ ಒಂಟಿ ಸಲಗ ಎಂದು ಹಚ್ಚೆ ಹಾಕಿಸಿಕೊಂಡಿರುವ ಅನುಷಾ, ಲಗ್ನ ಪತ್ರಿಕೆಯಲ್ಲಿ ಕೂಡ ದುನಿಯಾ ವಿಜಯ್ ಅವರ ಪೋಟೋ ಹಾಕಿಸಿಕೊಂಡಿದ್ದಾರೆ. ಮದುವೆಗೆ ದುನಿಯಾ ವಿಜಯ್ ಬಾರದಿದ್ದರೆ ಮದುವೆಯಾಗುವುದಿಲ್ಲ ಎಂದು ಅನುಷಾ ಪಟ್ಟು ಹಿಡಿದಿದ್ದಾಳೆ.

  • ನಟ ದುನಿಯಾ ವಿಜಯ್‍ಗೆ ಪಿತೃ ವಿಯೋಗ

    ನಟ ದುನಿಯಾ ವಿಜಯ್‍ಗೆ ಪಿತೃ ವಿಯೋಗ

    ಬೆಂಗಳೂರು: ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ(81) ಇಂದು ನಿಧನರಾಗಿದ್ದಾರೆ.

    ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಪ್ಪ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಎರಡು ದಿನದ ಹಿಂದೆ ದುನಿಯಾ ವಿಜಯ್, ಅಪ್ಪನನ್ನ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಇಂದು ಬೆಳಗ್ಗೆ 7.30ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ರುದ್ರಪ್ಪ ಮೃತಪಟ್ಟಿದ್ದಾರೆ.

    ಈ ಸಂಬಂಧ ವಿಜಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಪನ ಫೋಟೋ ಹಾಕಿ ‘ಮಿಸ್ ಯೂ ಅಪ್ಪ’ ಎಂದು ಬರೆದುಕೊಂಡಿದ್ದಾರೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ವಿಜಯ್ ತಂದೆಯ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ಕಳೆದ ಜುಲೈನಲ್ಲಿ ವಿಜಯ್ ರ ತಾಯಿ ನಾರಾಯಣಮ್ಮ ನಿಧನರಾಗಿದ್ದರು. ಈ ಕುರಿತು ಸ್ವತಃ ನಟನೇ ತನ್ನ ತಾಯಿ ಜೊತೆಗಿನ ಫೋಟೋ ಹಾಕಿ ‘ಮತ್ತೆ ಹುಟ್ಟಿ ಬಾ ಅಮ್ಮ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ನಾರಾಯಣಮ್ಮ ಅವರ ಅಂತ್ಯಕ್ರಿಯೆ ನಡೆದಿತ್ತು. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್

     

  • ‘ಸಲಗ’ ಪ್ರೀ-ರಿಲೀಸ್ ಕಳೆ ಹೆಚ್ಚಿಸಲಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    ‘ಸಲಗ’ ಪ್ರೀ-ರಿಲೀಸ್ ಕಳೆ ಹೆಚ್ಚಿಸಲಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    ಗಂಧದ ಗುಡಿಯಲ್ಲಿ ‘ಸಲಗ’ ಚಿತ್ರದ ಸೌಂಡ್ ದಿನದಿಂದ ದಿನಕ್ಕೆ ಜೋರಾಗ್ತಿದೆ. ಚಿತ್ರದ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಚಿತ್ರತಂಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಇದರ ಬೆನ್ನಲ್ಲೇ ಅದ್ದೂರಿ ಪ್ರಿರಿಲೀಸ್ ಕಾರ್ಯಕ್ರಮಕ್ಕೆ ಟೀಂ ಸಲಗ ಪ್ಲ್ಯಾನ್ ಮಾಡಿಕೊಂಡಿದೆ. ಅಕ್ಟೋಬರ್ 10ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪವರ್ ಫುಲ್ ಕಳೆ ನೀಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸುತ್ತಿದ್ದಾರೆ.

    ಹೌದು, ಅಕ್ಟೋಬರ್ 10ರಂದು ತೆರೆ ಮೇಲೆ ಅಬ್ಬರಿಸಲು ‘ಸಲಗ’ ಸಕಲ ಸಿದ್ಧವಾಗಿದೆ. ನಾಡಹಬ್ಬದಂದೇ ಸಲಗನ ದರ್ಬಾರ್ ಚಿತ್ರಮಂದಿರಗಳಲ್ಲಿ ಶುರುವಾಗಲಿದ್ದು, ಅದಕ್ಕೂ ಮುನ್ನ ಪ್ರೀ- ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಚಿತ್ರತಂಡ. ಈ ಕಾರ್ಯಕ್ರಮಕ್ಕೆ ಚಂದನವನದ ಸ್ಟಾರ್ ನಟ ನಟಿಯರು,ರಾಜಕೀಯ ನಾಯಕರು ಆಗಮಿಸಲಿದ್ದಾರೆ.

    ಈಗಾಗಲೇ ಚಿತ್ರತಂಡ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇದರ ಬೆನ್ನಲ್ಲೇ ಚಿತ್ರತಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ಕೋರಿದೆ. ಸಲಗ ಚಿತ್ರದ ಆರಂಭದಿಂದಲೂ ಚಿತ್ರತಂಡಕ್ಕೆ ಸಾಥ್ ನೀಡುತ್ತಾ ಬಂದಿರುವ ಪವರ್ ಸ್ಟಾರ್ ಚಿತ್ರತಂಡದ ಸಂತಸವನ್ನು ಹೆಚ್ಚಿಸಿದ್ದು, ಇದೀಗ ಕಾರ್ಯಕ್ರಮಕ್ಕೆ ಬರುವ ಮೂಲಕ ಚಿತ್ರತಂಡಕ್ಕೆ ಪವರ್ ಫುಲ್ ಸಾಥ್ ನೀಡುತ್ತಿದ್ದಾರೆ.

    ದುನಿಯಾ ವಿಜಿ ಮೊದಲ ನಿರ್ದೇಶನವಾದ್ದರಿಂದ ಅವರ ಡೈರೆಕ್ಷನ್ ಸ್ಟೈಲ್, ವಿಜಿ ಹಾಗೂ ಡಾಲಿ ಜುಗಲ್ಬಂದಿ ಚಿತ್ರದಲ್ಲಿ ಹೇಗಿರಬಹುದೆಂದು ಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಜಿ ಅಭಿಮಾನಿ ಬಳಗವಂತೂ ಬಿಡುಗಡೆಗೂ ಮುನ್ನವೇ ಸಲಗವನ್ನು ತೇರು ಹೊತ್ತು ಸಂಭ್ರಮಿಸುವಂತೆ ಆರಾಧನೆ ಮಾಡೋಕೆ ಶುರುವಿಟ್ಟಿದ್ದಾರೆ.

    ಚಿತ್ರದ ಯಶಸ್ಸಿಗೆ ಪೂಜೆ ಪುನಸ್ಕಾರದ ಜೊತೆ ಹರಕೆ ಕೂಡ ಹೊತ್ತಿದ್ದಾರೆ. ಇನ್ನೂ ಕೆಲವರು ಟ್ಯಾಟೂ ಹಾಕಿಸಿಕೊಂಡು ಸಲಗ ಸಿನಿಮಾ ಮೇಲಿನ ಅಭಿಮಾನ ತೋರುತ್ತಿದ್ದಾರೆ. ಹೀಗೆ ಸಖತ್ ಕ್ರೇಜ್ ಕ್ರಿಯೇಟ್ ಮಾಡಿರುವ ಸಲಗ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿ ಇನ್ನಷ್ಟು ಕಿಕ್ ಕೊಡಲು ರೆಡೆಯಾಗಿದೆ. ಇದನ್ನೂ ಓದಿ: ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ಚಿತ್ರದಲ್ಲಿ ವಿಜಿ ರೌಡಿ ಪಾತ್ರಕ್ಕೆ ಬಣ್ಣಹಚ್ಚಿದ್ರೆ ಡಾಲಿ ಪೊಲೀಸ್ ಅವತಾರ ತೊಟ್ಟಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ಮಿಂಚಿದ್ದು, ಚರಣ್ ರಾಜ್ ಮಾಸ್ ಮ್ಯೂಸಿಕ್, ಮಾಸ್ತಿ ಸಂಭಾಷಣೆ, ಶಿವ ಸೇನ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಸಲಗ ಅಕ್ಟೋಬರ್ 14ಕ್ಕೆ ಚಿತ್ರಮಂದಿರದ ಕದ ತಟ್ಟಲಿದೆ.

  • ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ಬೆಂಗಳೂರು: ಗಾಂದೀನಗರದ ಗಲ್ಲಿ ಗಲ್ಲಿಗಳಲ್ಲಿ, ವಿಜಿ ಅಭಿಮಾನಿ ದೇವರುಗಳಲ್ಲೀಗ ಸಲಗ ಜಪ ಶುರುವಾಗಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಕುಂತ್ರು, ನಿಂತ್ರು ಸಲಗ ಸಲಗ ಅಂತಿದ್ದಾರೆ. ಸೆಟ್ಟೇರಿದ ದಿನವೇ ಒಂದು ಬಝ್ ಕ್ರಿಯೇಟ್ ಮಾಡಿದ್ದ ಸಿನಿಮಾ ಈಗ ವಿಜಿ ಭಕ್ತಗಣದಲ್ಲಿ ಹೈವೋಲ್ಟೇಜ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಂಟಿ ಸಲಗದಂತೆ ಎಲ್ಲಾ ಅಡೆತಡೆಗಳನ್ನು ದಾಟಿ ಫೈನಲಿ ನಾಡ ಹಬ್ಬಕ್ಕೆ ಚಿತ್ರಮಂದಿರಕ್ಕೆ ಭರ್ಜರಿ ಎಂಟ್ರಿ ಕೊಡೋಕೆ ‘ಸಲಗ’ ಸಕಲ ಸಜ್ಜಾಗಿದೆ.

    ವಿಜಿ ನಿರ್ದೇಶನದ ಸಲಗ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಟೀಸರ್, ಹಾಡುಗಳು ಸೋಶಿಯಲ್ ಮೀಡಿಯಾಗಳಲ್ಲಿ ಧೂಳ್ ಎಬ್ಬಿಸಿ ಸಿನಿರಸಿಕರ ಕಿಕ್ಕೇರಿಸಿವೆ. ಒಂದು ಕಡೆ ವಿಜಿ ಚೊಚ್ಚಲ ನಿರ್ದೇಶನ, ಇನ್ನೊಂದು ಕಡೆ ಮಾಸ್ ಸಬ್ಜೆಕ್ಟ್, ಇದಕ್ಕೂ ಮೀರಿ ದುನಿಯಾ ವಿಜಿ ಡಾಲಿಯ ಹೈವೋಲ್ಟೇಜ್ ಕಾಂಬಿನೇಷನ್, ಇವೆಲ್ಲವೂ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ದುಪ್ಟಟ್ಟು ಮಾಡಿದ್ದು, ಬ್ಲ್ಯಾಕ್ ಕೋಬ್ರಾ ಚಿತ್ರಮಂದಿರದಲ್ಲಿ ಗೆದ್ದು ಬೀಗೋದೊಂದೇ ಬಾಕಿ ಇದೆ.ಇದನ್ನೂ ಓದಿ: ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!

    ‘ಸಲಗ’ ಮೇಲೆ ವಿಜಿ ಭಕ್ತಗಣ ತೋರುತ್ತಿರುವ ಪ್ರೀತಿ ಮತ್ತೊಂದು ದುನಿಯಾ ವಿಜಿ ಮುಂದೆ ಸೃಷ್ಟಿಯಾಗುವ ಮಟ್ಟಿಗಿದೆ. ಅಭಿಮಾನಿಗಳ ಪ್ರೀತಿ ಕಂಡು ಸ್ವತಃ ವಿಜಿಯೇ ಮೂಕವಿಸ್ಮಿತರಾಗಿದ್ದಾರೆ. ಸಾಮಾಜಿಕ ಜಾಲತಾಣದ ಅಂಗಳದಲ್ಲಂತೂ ಸಲಗ ಹವಾ ಜೋರಾಗಿದೆ. ಚಿತ್ರದ ಪ್ರತಿ ಅಪ್ಡೇಟ್‍ನ್ನೂ ಅಭಿಮಾನಿಗಳು ತೇರು ಹೊತ್ತು ಸಂಭ್ರಮಿಸುವ ರೀತಿ ಸಂಭ್ರಮಿಸುತ್ತಿದ್ದಾರೆ. ಇಷ್ಟಕ್ಕೆ ಈ ಅಭಿಮಾನ ಮುಗಿಯಲಿಲ್ಲ, ವಿಜಿ ಡೈ ಹಾರ್ಡ್ ಫ್ಯಾನ್ಸ್ ಅಂತೂ ಕೇಳೋದೇ ಬೇಡ, ಕೈ ಮೇಲೆ, ಎದೆ ಮೇಲೆ ಸಲಗ ಟ್ಯಾಟೂ ಹಾಕಿಸಿಕೊಂಡು ಆರಾಧಿಸುತ್ತಿದ್ದಾರೆ. ಕೆಲವರಂತೂ ಹೇರ್ ಸ್ಟೈಲ್ ನಲ್ಲೂ ಸಲಗ ಎಂದು ಡಿಸೈನ್ ಮಾಡಿಸಿಕೊಂಡಿದ್ದಾರೆ. ಈ ಪ್ರೀತಿ, ಅಭಿಮಾನ ಕಂಡು ಖುದ್ದು ವಿಜಿಯೇ ಶರಣು ಶರಣೆಂದಿದ್ದಾರೆ. ಈ ಕ್ರೇಜ್ ಕೇವಲ ಗಾಂದೀನಗರದ ಗಲ್ಲಿಗಳಲ್ಲಿ ಮಾತ್ರವಲ್ಲ, ಕರುನಾಡಿನ ಮನೆ ಮನದಲ್ಲೂ ಶುರುವಾಗಿದೆ ಅನ್ನೋದೇ ಬಲು ವಿಶೇಷ.

    ‘ಸಲಗ’ ಚಿತ್ರಮಂದಿರಕ್ಕೆ ಬರೋದನ್ನೇ ಕಾದು ಕುಳಿತಿರುವ ಭಕ್ತಗಣಕ್ಕೆ ಹೈವೋಲ್ಟೇಜ್ ಟ್ರೇಲರ್ ಸದ್ಯದಲ್ಲೇ ಉಡುಗೊರೆಯಾಗಿ ನೀಡಲಿದೆ ಚಿತ್ರತಂಡ. ರೌಡಿಸಂ ಕಥಾನಕ, ಚರಣ್ ರಾಜ್ ಸಂಗೀತ ನಿರ್ದೇಶನ, ಮಾಸ್ತಿ ಸಂಭಾಷಣೆ, ವಿಜಿ ಮಾಸ್ ಅವತಾರ, ಡಾಲಿಯ ಖಾಕಿ ಖದರ್ ಎಲ್ಲವೂ ಮೇಳೈಸಿರುವ ಸಲಗ ನಾಡಹಬ್ಬಕ್ಕೆ ಥಿಯೇಟರ್ ನಲ್ಲಿ ದರ್ಬಾರ್ ಶುರುಮಾಡಲಿದೆ. ಇದನ್ನೂ ಓದಿ: 10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್