Tag: Duniya Vijay

  • ನಾಗರತ್ನ ಹಲ್ಲೆ ಪ್ರಕರಣ ದುನಿಯಾ ವಿಜಿ ಸ್ಪಷ್ಟನೆ

    ನಾಗರತ್ನ ಹಲ್ಲೆ ಪ್ರಕರಣ ದುನಿಯಾ ವಿಜಿ ಸ್ಪಷ್ಟನೆ

    ಬೆಂಗಳೂರು: ನಾಗರತ್ನ ಅವರು ತಮ್ಮ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

    ನಟ ದುನಿಯಾ ವಿಜಯ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಹೆಣ್ಣು ಮಗು ಅಂತ ಹೇಳಿ ಸಿಂಪತಿ ಗಿಟ್ಟಿಸುತ್ತಿದ್ದರು. ನಾವು ಯಾರು ನೆಮ್ಮದಿಯಾಗಿ ಇರಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ. ಸದ್ಯ ಕೊನೆಗೆ ಸತ್ಯ ಗೊತ್ತಾಗಿದೆ. ಸುಮ್ಮನೆ ಅವಳಂತೆ ನಾನು ನಾಯಿಯಂತೆ ಮಾತನಾಡಲು ಇಷ್ಟ ಇಲ್ಲ. ಏನಾಗಿದೆ ಅದಕ್ಕೆ ನ್ಯಾಯ ಕೊಡಿಸಿ ಅಷ್ಟೆ. ಒಂದು ಫೇಕ್ ಕಂಪ್ಲೇಂಟ್ ಕೊಟ್ಟರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ ಎಂದು ಬೇಸರದಿಂದ ವಿಜಿ ಹೇಳಿದ್ದಾರೆ. ಇದನ್ನೂ ಓದಿ: ನಾಗರತ್ನ ದಾದಾಗಿರಿ ಪ್ರಕರಣ- ನಿಜವಾಗಿ ಅಲ್ಲಿ ನಡೆದಿದ್ದೇನು: ಕೀರ್ತಿಗೌಡ ಮಾತು

    ನನಗೂ ತುಂಬಾ ಕೆಲಸ ಇದೆ. ಆದರೆ ಈ ಸಮಸ್ಯೆಯಿಂದ ಏನು ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ನಾನು ನಾಗರತ್ನ ವಿರುದ್ಧ ದೂರು ಕೊಡುತ್ತೇನೆ. ಈ ಬಗ್ಗೆ ಸಂಪೂರ್ಣವಾಗಿ ಸಂಜೆ ಸುದ್ದಿಗೋಷ್ಠಿ ಮಾಡಿ ಮಾತನಾಡುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!

    ಇಷ್ಟು ವರ್ಷ ದುನಿಯಾ ವಿಜಿ ಸರಿಯಿಲ್ಲ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಸಿಂಪತಿ ಪಡೆದುಕೊಂಡಿದ್ದರು. ಜನರ ನಂಬಿಕೆಯಿಂದ ಈ ರೀತಿ ಮಾಡಿದ್ದಾರೆ ಎಂದು ಇದೇ ವೇಳೆ ಕೀರ್ತಿಗೌಡ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=alaw833_NkQ

  • ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು

    ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು

    ಬೆಂಗಳೂರು: ತನ್ನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ವಿರುದ್ಧ ಎರಡನೇ ಪತ್ನಿ ಕೀರ್ತಿ ಗೌಡ ಅವರು ದೂರು ದಾಖಲಿಸಿದ್ದಾರೆ.

    ಸೆ. 23 ರಂದು ತನಗೆ ಹಾಗೂ ತನ್ನ ಮಾವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾಗರತ್ನ ಹಲ್ಲೆ ಮಾಡಿದ್ದಾರೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿಗೌಡ ಅವರು 4 ಪುಟಗಳ ದೂರು ಸಲ್ಲಿಸಿದ್ದಾರೆ.

    ದೂರುನಲ್ಲೇನಿದೆ?:
    ಸೆ.23ರಂದು ದುನಿಯಾ ವಿಜಿಯವರು ಹೈಗ್ರೌಂಡ್ ಪೊಲೀಸ್ ಠಾಣೆಯ್ಲಲಿ ಅರೆಸ್ಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಅತ್ತೆ-ಮಾವನನ್ನು ಸಂತೈಸಲೆಂದು ವಿಜಿ ಸ್ನೇಹಿತರಿಬ್ಬರು ಮನೆಗೆ ಬಂದಿದ್ದರು. ಹೀಗಾಗಿ ನಾವೆಲ್ಲ ಮನೆಯಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದೆವು. ಇದೇ ವೇಳೆ ನಾಗರತ್ನ ಅವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಮನೆಗೆ ನುಗ್ಗಿ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಇಷ್ಟು ಮಾತ್ರವಲ್ಲದೇ ನನ್ನ ತಲೆಕೂದಲನ್ನು ಎಳೆದಾಡಿ, ಮನಬಂದಂತೆ ಹಲ್ಲೆಗೈದು ನಿನ್ನನ್ನು ಈಗಲೇ ಮುಗಿಸಿಬಿಡುತ್ತೇನೆ ಕಿರುಚಿತ್ತಾ ಕೊಲೆ ಮಾಡುವ ಉದ್ದೇಶದಿಂದ ಕರಿಮಣಿಯನ್ನು ಕುತ್ತಿಗೆಗೆ ಬಿಗಿಹಿಡಿದುಕೊಂಡರು. ಇದರಿಂದಾಗಿ ನನಗೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದಂತಾಯಿತು. ಕುತ್ತಿಗೆ ಹಾಗೂ ತಲೆಗೆ ಗಾಯಗಳಾಯಿತು. ಈ ವೇಳೆ ನಮ್ಮ ಮನೆಯವರು ಹಾಗೂ ನಾಗರತ್ನ ಮಧ್ಯೆ ಜಟಾಪಟಿಯೇ ನಡೆದು ಹೋಯಿತು. ವಯಸ್ಸಾಗಿರುವ ನನ್ನ ಅತ್ತೆ-ಮಾವನ ಮೇಲೂ ಕೈ ಮಾಡಿದ್ದಾರೆ. ಹೀಗಾಗಿ ಮಾವನಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.

    ನಾಗರತ್ನ ಅವರ ಜೊತೆ ತಮ್ಮ ಸಂಪತ್ ಕೂಡ ಬಂದಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಡ್ರೈವರನ್ನು ಹೆದರಿಸಿ, ಹಲ್ಲೆಗೈದು, ಅವಾಚ್ಯವಾಗಿ ಬೈದು ಬಲವಂತವಾಗಿ ಕಾರ್ ಕಿತ್ತುಕೊಂಡು ಹೋಗಿದ್ದಾರೆ. ಆದ್ರೆ ನನ್ನ ಪತಿ ಜೈಲಿನಲ್ಲಿದ್ದ ಕಾರಣ ಆ ಚಿಂತೆಯಲ್ಲಿದ್ದ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಒಟ್ಟಿನಲ್ಲಿ ನಾಗರತ್ನ ಅವರ ಕೃತ್ಯದಿಂದ ನನಗೂ- ನನ್ನ ಮಾವನಿಗೂ ಗಾಯಗಳಾಗಿದ್ದು, ವೈದ್ಯರ ಬಳಿ ತೋರಿಸಿ, ಸದ್ಯ ವಿಶ್ರಾಂತಿ ಪಡೆಯುತ್ತಿದ್ದೇವೆ. ಘಟನೆಯಿಂದ ಅತ್ತೆಗೂ ದಿಗ್ಭ್ರಮೆಯಾಗಿದ್ದು, ಅವರೂ ಚಿಕಿತ್ಸೆ ಪಡೆದಿರುತ್ತಾರೆ.

    ಈ ಮೊದಲು ಅಂದರೆ ಸೆ.22ರಂದು ನನ್ನ ಗಂಡ ಹಾಗೂ ಸ್ನೇಹತರ ಜೊತೆ ಮಾತನಾಡುತ್ತಿದ್ದ ವೇಳೆ ಮೋನಿಕಾ ಮನೆ ಕಂಪೌಂಡ್ ಗೇಟನ್ನು ಒದ್ದು ಒಳಗೆ ಬಂದು ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ. ಅಲ್ಲದೇ ಕಲ್ಲು ತೆಗೆದುಕೊಂಡು ಮನೆ ಬಾಗಿಲಿಗೆ ಹಾನಿ ಮಾಡಿದ್ದಾಳೆ. ಈ ವೇಳೆ ಬಾಗಿಲು ತೆಗೆಯದ ಕಾರಣ ನಿಮಗೆ ತಕ್ಕ ಪಾಠ ಕಲಿಸುತ್ತೇನೆ ಅಂತ ಎಚ್ಚರಿಕೆ ನೀಡಿ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ಸುಳ್ಳು ದೂರು ನೀಡಿದ್ದಾಳೆ. ಅಲ್ಲದೇ ನಾಗರತ್ನ ಹಾಗೂ ಮಕ್ಕಳು ಸೇರಿ ವಿಜಯ್ ವಿರುದ್ಧ ಸುಖಾಸುಮ್ಮನೆ ದೂರುಗಳನ್ನು ದಾಖಲಿಸುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಘಟನೆಗೆ ಸಂಬಂಧಿಸಿದಂತೆ ನಾಗರತ್ನ ಹಾಗೂ ಆಕೆಯ ತಮ್ಮ ಸಂಪತ್ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೀರ್ತಿ ಗೌಡ ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ಬೆಂಗಳೂರು: ದುನಿಯಾ ವಿಜಿ ಜೈಲಿಗೆ ಹೋದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಈ ಘಟನೆಯ ಪ್ರತ್ಯಕ್ಷದರ್ಶಿ ಮಂಜು ಅವರು ಸಂಪೂರ್ಣ ವಿವರವನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಮಂಜು ಅವರು, ನಾಗರತ್ನ ಹಾಗೂ ಮಕ್ಕಳು ಕಾನೂನಿನ ದಾರಿ ತಪ್ಪಿಸಿ ಅವರಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಯಾರೋ ಕಾಣದ ಕೈ ಇಲ್ಲಿ ಆಟ ಆಡುತ್ತಿದೆ. ಈ ಮೂಲಕ ನಾನು ಎಸ್‍ಪಿ ಅಣ್ಣಾಮಲೈ ಅವರಿಗೆ ಕೈ ಮುಗಿದು, ಎಸ್‍ಪಿ ಅಣ್ಣಾಮಲೈ ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ನಾನು ನಿಮ್ಮ ಅಭಿಮಾನಿ ಸರ್, ಚಿಕ್ಕಮಗಳೂರಿನಲ್ಲಿ ಸಿಂಗಂ ಎಂದು ಹೇಳಿದ್ದಾರೆ. ಇಂತಹವರು ನಮ್ಮ ಬೆಂಗಳೂರಿಗೆ ಬಂದಿದ್ದಾರೆ. ನಾಗರತ್ನ ಅವರಿಂದ ನಮಗೆ ನ್ಯಾಯ ಕೊಡಿಸಬೇಕು. ಇಲ್ಲವೆಂದರೆ ನಿಮ್ಮನ್ನು ಫಾಲೋ ಮಾಡುತ್ತಿರುವ ನಮಗೆ ಅನ್ಯಾಯ ಮಾಡಿದ ರೀತಿ ಆಗುತ್ತದೆ. ನಿಮ್ಮಿಂದ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ, ಭರವಸೆ ಇದೆ. ಶೀಘ್ರವೇ ನಾಗರತ್ನ ಅವರನ್ನು ಹಿಡಿಯಿರಿ. ಒಂದು ವೇಳೆ ಅವರನ್ನು ಬಂಧಿಸಿಲ್ಲ ಎಂದರೆ ನಾವು ಧರಣಿ ಮಾಡುತ್ತೇವೆ. ದುನಿಯಾ ವಿಜಯ್ ಬಗ್ಗೆ ಎಲ್ಲರಿಗೂ ಗೊತ್ತು. ನಿಮ್ಮ ಮೇಲೆ ತುಂಬಾ ಗೌರವಿದೆ. ದಯವಿಟ್ಟು ಅವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

    ನಡೆದ ಘಟನೆಯೇನು?:
    ಮೊದಲೇ ಮಗಳು ಮೊನಿಕಾ ಬಂದು ಅಮ್ಮನಿಗೆ ನೇರವಾಗಿ ಬರುವಂತೆ ದಾರಿ ಕೊಟ್ಟು ಹೋಗಿದ್ದರು. ನಾವು ಊಹಿಸಿರಲಿಲ್ಲ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ. ಇಷ್ಟು ಸಣ್ಣ ಹುಡುಗಿ ತನ್ನ ತಂದೆಯ ವಿರುದ್ಧ ಮಾಡುತ್ತೀನಿ ಎಂದು ಯೋಚನೆಯನ್ನೂ ಮಾಡದೇ ಕ್ರಿಮಿನಲ್ ಪ್ಲ್ಯಾನ್ ಮಾಡಿದ್ದಾರೆ. ಹಲ್ಲೆ ಮಾಡುವ ಮೊದಲೇ ಅಮ್ಮನ ಜೊತೆ ಮಾತನಾಡಿ ಇಬ್ಬರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಹಲ್ಲೆ ಮಾಡಿದ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇವರು ಈಗ ಮಾತ್ರವಲ್ಲ ನಿರಂತರವಾಗಿ ದುನಿಯಾ ವಿಜಿ ಅವರಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಎಲ್ಲರ ಮುಂದೇ ಇವರು ನಾನು ಮೊದಲನೇ ಹೆಂಡತಿ ಎಂದು ಸಿಂಪತಿ ಪಡೆಯುತ್ತಿದ್ದಾರೆ. ಮನೆಗೆ ಬಂದಾಕ್ಷಣ ಅವರು ಅವಾಚ್ಯ ಪದಗಳಿಂದ ಬೈದಿದ್ದಾರೆ. ಆಗ ಬೈಗುಳವನ್ನು ನಾವು ಹೇಳಲು ಸಾಧ್ಯವಿಲ್ಲ ಅಷ್ಟು ಅಸಭ್ಯವಾಗಿತ್ತು. ಅವರು ಮಾಡುವ ಸುಳ್ಳುಗಳು. ಈ ಸುಳ್ಳು ಆರೋಪದಿಂದ ನಮಗೆ ತುಂಬಾ ನೋವಾಗಿದೆ. ಅದಕ್ಕೆ ಈಗ ಮಾತನಾಡಲು ಧೈರ್ಯವಾಗಿ ಮಾಧ್ಯಮಗಳ ಮುಂದೇ ಬಂದಿದ್ದೇನೆ ಎಂದ್ರು.

    ದುನಿಯಾ ವಿಜಿ ಅವರು ಮಕ್ಕಳನ್ನು ತುಂಬಾ ಪ್ರೀತಿ ಮಾಡುತ್ತಾರೆ. ಆದರೆ ಮಗಳು ನಮ್ಮ ಮುಂದೇ ಸಿಸಿಟಿವಿಯನ್ನ ತೆಗೆದಿದ್ದಾರೆ. ಆದರೆ ನಾವು ಏನು ಮಾತನಾಡಲು ಆಗಲಿಲ್ಲ. ಪ್ರತಿದಿನ ಮಗಳು ಮೊನಿಕಾಳನ್ನು ನೋಡಿ ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು ಎಂಬಂತೆ ಇದ್ದರು. ಈಗ ನೇರವಾಗಿ ನೋಡಿದ ಮೇಲೆ ಅವರ ಬಣ್ಣ ಬಯಲಾಗಿದೆ. ಸ್ವಲ್ಪ ಹೊತ್ತು ಹಲ್ಲೆ ಮಾಡಿದ ಬಳಿಕ ಮಗಳು ನೀರು ಕೊಡುತ್ತಾಳೆ. ಬಳಿಕ ಮತ್ತೆ ಅವರ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಯ ಮೇಲೆ ಪ್ರೀತಿ ಇಲ್ಲ. ಅವರಿಗೆ ಶಿಕ್ಷೆ ಕೊಡಬೇಕು ಎಂಬ ಉದ್ದೇಶ ಮಾತ್ರವಿದೆ ಎಂದು ಮಂಜು ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ಜಿಮ್ ಟ್ರೈನರ್ ಕಿಡ್ನಾಪ್, ಹಲ್ಲೆ ಕೇಸ್ – ವಿಜಿ ವಿಚಾರಣೆ ಡಿ.12ಕ್ಕೆ ಮುಂದೂಡಿಕೆ

    ಜಿಮ್ ಟ್ರೈನರ್ ಕಿಡ್ನಾಪ್, ಹಲ್ಲೆ ಕೇಸ್ – ವಿಜಿ ವಿಚಾರಣೆ ಡಿ.12ಕ್ಕೆ ಮುಂದೂಡಿಕೆ

    ಬೆಂಗಳೂರು: ನಟ ದುನಿಯಾ ವಿಜಿ ಮೇಲೆ ದಾಖಲಾಗಿರುವ ಹಲ್ಲೆ ಪ್ರಕರಣದ ವಿಚಾರಣೆ ಡಿಸೆಂಬರ್ 12ಕ್ಕೆ ಮುಂದೂಡಿಕೆಯಾಗಿದೆ.

    ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಇಂದು 8 ನೇ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಿಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಜಾಮೀನಿನ ನಂತರದ ಮೊದಲ ವಿಚಾರಣೆ ಇಂದು ನಡೆದಿತ್ತು. ಹೀಗಾಗಿ ವಿಜಿ ಇಂದು ನ್ಯಾ.ಮಹೇಶ್ ಬಾಬು ಮುಂದೆ ಹಾಜರಾಗಿದ್ದರು.

    ಖುದ್ದು ಹಾಜರಿಗೆ ಸೂಚನೆ ಇಲ್ಲದಿದ್ದರೂ ಕೋರ್ಟ್ ಗೆ ಹಾಜರಾಗಿದ್ದು, ವಿಜಿ ಪರ ವಕೀಲರು ಚಾರ್ಜ್ ಶೀಟ್ ಹಾಕುವವರೆಗೂ ಕೋರ್ಟ್ ಗೆ ಖುದ್ದು ಹಾಜರಾತಿಗೆ ವಿನಾಯಿತಿ ಕೇಳಿದ್ದಾರೆ. ಆದ್ರೆ ನ್ಯಾ. ಮಹೇಶ್ ಬಾಬು ಅವರು ವಕೀಲರ ಮನವಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಡಿಸೆಂಬರ್ 12 ಕ್ಕೆ ಅರ್ಜಿ ವಿಚಾರಣೆ ಮುಂದೂಡಿ, ಮುಂದಿನ ವಿಚಾರಣೆ ವೇಳೆ ಹಾಜರಾಗಲು ಸೂಚನೆ ನೀಡಿದ್ದಾರೆ.

    ಕಾನೂನಿನ ಮೇಲೆ ತಮಗಿರುವ ಗೌರವ ವ್ಯಕ್ತಪಡಿಸಲು ವಿಜಿ ಇಂದು ಕೋರ್ಟ್ ಮುಂದೆ ಹಾಜರಾಗಿದ್ದರು. ದುನಿಯಾ ವಿಜಿ ಜೊತೆ ಇತರೆ ಮೂವರು ಆರೋಪಿಗಳು ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ವಿಜಿ ನಿರಾಕರಿಸಿದರು.

    ಏನಿದು ಪ್ರಕರಣ?
    ಸೆಪ್ಟೆಂಬರ್ 22ರ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದರು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ ಆರೋಪ ಕೇಳಿ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ, ಕಿಟ್ಟಿ ಜಗಳದ ಅಸಲಿ ಸತ್ಯ ಬಹಿರಂಗ

    ದುನಿಯಾ ವಿಜಿ, ಕಿಟ್ಟಿ ಜಗಳದ ಅಸಲಿ ಸತ್ಯ ಬಹಿರಂಗ

    ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತು ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಜಗಳದ ಅಸಲಿ ಕತೆ ಈಗ ಬಹಿರಂಗವಾಗಿದೆ.

    ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರಕ್ಕೆ ಪಾನಿಪುರಿ ಕಿಟ್ಟಿ, 40 ಲಕ್ಷ ಫೈನಾನ್ಸ್ ಮಾಡಿದ್ದರು. ಮಾಸ್ತಿಗುಡಿ ಚಿತ್ರದ ಇಬ್ಬರು ಖಳನಟರಾದ ಉದಯ್ ಮತ್ತು ಅನಿಲ್ ಮೂಲಕ ಕಿಟ್ಟಿ 40 ಲಕ್ಷ ಹಣ ಫೈನಾನ್ಸ್ ಮಾಡಿದ್ದರು. ನಂತರ ಚಿತ್ರ ಬಿಡುಗಡೆಯಾದ ಬಳಿಕ ಪಾನೀಪುರಿ ಕಿಟ್ಟಿ 40 ಲಕ್ಷ ಹಣ ವಾಪಸ್ ಕೇಳಿದರು. ಕಿಟ್ಟಿ ಫೈನಾನ್ಸ್ ಮಾಡಿದ್ದ ಹಣ ನೀಡಲು ಚಿತ್ರ ನಿರ್ಮಾಪಕ ಸುಂದರ್ ಗೌಡ ಮತ್ತು ವಿಜಯ್ ಮೀನಾ ಮೇಷ ಎಣಿಸಿದ್ದು ಕಿಟ್ಟಿ ಬೇಸರಕ್ಕೆ ಕಾರಣವಾಗಿದೆ.

    ಮಾಸ್ತಿಗುಡಿ ಚಿತ್ರದ ಖಳನಟ ಅನಿಲ್ ಮೂಲಕ 40 ಲಕ್ಷ ಫೈನಾನ್ಸ್ ಕೊಟ್ಟಿದ್ದ ಕಿಟ್ಟಿ ಬಳಿಕ ಹಣ ವಾಪಸ್ ಕೇಳಿದ್ದರು. ಈ ವೇಳೆ ಸದ್ಯಕ್ಕೆ ಹಣ ಇಲ್ಲ, ಫಿಲಂ ಲಾಸ್ ಆಗೋಯ್ತು ಅಂತಾ ವಿಜಯ್ ಮತ್ತು ನಿರ್ಮಾಪಕ ಸುಂದರ್ ಪಿ ಗೌಡ ಹೇಳಿದ್ದರು. ಅಲ್ಲದೇ ಇಂದು ಕೊಡ್ತೀವಿ, ನಾಳೆ ಕೊಡ್ತೀವಿ ಅಂತ ಹೇಳಿ ದಿನ ಕಳೆದಂತೆ ಮಾತಿನ ವರಸೆ ಬದಲಾಯಿಸಿದ್ದರು. ಹೀಗೆ ಘಟನೆ ಹಿಂದಿನ ಹಲವು ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಫೈನಾನ್ಸ್ ವಿಚಾರ ತಾರಕ್ಕೇರುತ್ತಿದ್ದಂತೆ ಅನಿಲ್‍ಗೆ ತಾನೇ ಹಣ ಕೊಟ್ಟಿದ್ದು ಅವರ ಬಳಿ ತೆಗೆದುಕೋ ಎಂದು ದುನಿಯಾ ವಿಜಿ ಹಾಗೂ ಸುಂದರ್ ಗೌಡ ಹೇಳಿದ್ದಾರೆ. ಇದೇ ವಿಚಾರದಿಂದ ಇಬ್ಬರ ನಡುವೆ ಸಣ್ಣ ಮನಸ್ತಾಪ ಹುಟ್ಟಿದ್ದು, ಆಪ್ತ ಸ್ನೇಹಿತರ ನಡುವೆ ದ್ವೇಷದ ಕಿಡಿ ಹೊತ್ತಿಸಿತ್ತು. ಅಂದಿನಿಂದ ವಿಜಯ್ ಮತ್ತು ಕಿಟ್ಟಿ ಹಾವು ಮುಂಗುಸಿಯಂತಾಗಿದ್ದು, ಕಳೆದ ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬೀಲ್ಡಿಂಗ್ ಕಾಂಪಿಟೇಷನ್ ವೇಳೆ ಸ್ಫೋಟಗೊಂಡಿದೆ ಎನ್ನಲಾಗಿದೆ.

    ಸದ್ಯ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಕಿಟ್ಟಿ, ನಾನು ಯಾವುದೇ ಫೈನಾನ್ಸ್ ಮಾಡಿಲ್ಲ. ಮಾಸ್ತಿಗುಡಿಗೆ 40 ಲಕ್ಷ ಕೊಟ್ಟಿದ್ದೆ ಎನ್ನುವುದು ಸುಳ್ಳು. ಅನಿಲ್ ಹಣ ಹೂಡಿದ್ದರು ಎಂದು ಹೇಳಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ: ನಾಗರತ್ನ

    ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ: ನಾಗರತ್ನ

    ಬೆಂಗಳೂರು: ದುನಿಯಾ ವಿಜಯ್ ಅವರಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ. ಯಾರ ಜೀವನ ಹಾಳಾಗುತ್ತದೆ ಎನ್ನುವುದು ತಿಳಿಯುತ್ತದೆ. ಅವರ ಬಳಿ ಸಿನಿಮಾ ಇಲ್ಲದಿದ್ದರೆ ಬೇಕಾದರೆ ನಾನೇ ಸಿಡಿ ತರಿಸಿ ಕೊಡುತ್ತೇನೆ ಎಂದು ವಿಜಯ್ ಮೊದಲ ಪತ್ನಿ ನಾಗರತ್ನ ಹೇಳಿದ್ದಾರೆ.

    ಕತ್ರಿಗುಪ್ಪೆಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಂದು ಮಾತನಾಡಲು ನಿಮ್ಮ ಮುಂದೆ ಬಂದಿದ್ದು, ನನ್ನ ಕುಟುಂಬ ಬೀದಿಗೆ ಬರಲು ಕಾರಣರಾಗಿರುವ ಕೀರ್ತಿ ಬಗ್ಗೆ ಮಾತನಾಡಲು ಬಂದಿದ್ದೇನೆ. ಆಕೆ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ಏನಕ್ಕೆ ವಿಜಯ್ ಆಕೆ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಎನ್ನುವುದು ತಿಳಿದಿದೆ. ಆಕೆ ಸ್ಲಂ ನಿಂದ ಬಂದಿದ್ದಾಳೆ. ಆದರೆ ನಾನು ವಿಜಯ್ ಅವರಿಗೆ ಡಿವೋರ್ಸ್ ಕೊಟ್ಟಿಲ್ಲ.  ವರ್ಷಕ್ಕೆ ಒಬ್ಬರೂ ಬರುತ್ತಾರೆ, ಹೋಗುತ್ತಾರೆ ಎಂದು ಸುಮ್ಮನಿದ್ದೆ. ಅದಕ್ಕೆ ಕೀರ್ತಿ ಜೊತೆ ಇದ್ದಾಗಲೂ ನಾನು ಪ್ರಶ್ನೆ ಮಾಡಿಲ್ಲ. ಕೀರ್ತಿ ಯಾರ ಯಾರ ನಿರ್ಮಾಪಕ ಜೊತೆ ಓಡಾಡಿದ್ದಾಳೆ ಎನ್ನುವುದರ ಬಗ್ಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ನನ್ನ ಮಕ್ಕಳು, ಕುಟುಂಬವನ್ನು ಬೀದಿಪಾಲು ಮಾಡಲೆಂದೇ ಕೀರ್ತಿ ಆಗಮಿಸಿದ್ದು, ವಿಜಯ್ ವರ್ಷಕ್ಕೆ ಒಬ್ಬರಂತೆ ಕರೆದುಕೊಂಡು ಬರುತ್ತಿದ್ದರು. ಈಕೆಯೂ ಹಾಗೇ ಎಂದುಕೊಂಡಿದ್ದೆ. ಆದರೆ ಮಾಧ್ಯಮಗಳಲ್ಲಿ 2ನೇ ಹೆಂಡತಿ ಎಂದು ಹೇಳುತ್ತಿದ್ದರೆ ಸುಮ್ಮನೆ ಇರುವುದು ಹೇಗೆ? ವಿಜಯ್ ಅವರಿಗೆ ಈ ಕುರಿತು ಸಾಕಷ್ಟು ಬಾರಿ ಹೇಳಿದರೂ ಅವರು ಮಾತು ಕೇಳಲಿಲ್ಲ. ಕೀರ್ತಿ ಕುರಿತು ಎಲ್ಲಾ ದಾಖಲೆ ಇದ್ದು, ಅವುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ನನ್ನ ಮಕ್ಕಳಿಗೆ ಅಪ್ಪ-ಅಮ್ಮ ಇಬ್ಬರು ಬೇಕು. ನಾನು ನನ್ನ ಮಕ್ಕಳು ಬೀದಿಗೆ ಬರೋ ಪರಿಸ್ಥಿತಿಯಲ್ಲಿದ್ದೇವೆ. ನಾನು ಆಸ್ತಿಗೆ ಬಂದವಳಲ್ಲ, ನನಗೆ ವಿಜಯ್ ಬೇಕಷ್ಟೇ ಎಂದರು.

    ಇದೇ ವೇಳೆ ವಿಜಯ್ ಮಾಡಿರುವ ಆರೋಪಗಳ ಕುರಿತು ಉತ್ತರಿಸಿದ ಅವರು, ಮಕ್ಕಳ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ. ಮನೆ ಮಾತ್ರ ನನ್ನ ಹೆಸರಿನಲ್ಲಿದೆ. ಆದರೆ ನಮ್ಮ ಕುಟುಂಬದ ಹೆಸರಿನಲ್ಲಿ ಮೂರು ಮನೆ ಇದ್ದು, ಅವೆಲ್ಲಾ ಏನಾಗಿದೆ ಗೊತ್ತಿಲ್ಲ. ಈಗ ಬಾಡಿಗೆ ಮನೆಯಲ್ಲಿ ಯಾಕೆ ಇದ್ದಾರೆ ಎನ್ನುವುದು ಗೊತ್ತಿಲ್ಲ. ನನ್ನ ಗಂಡ ಅಮಾಯಕ ಈ ಕುರಿತು ಅವರಿಗೆ ಏನು ಗೊತ್ತಿಲ್ಲ. ಅತ್ತೆ ಮಾವ ಅವರನ್ನು ನೋಡಿಕೊಳ್ಳೋಕೆ ಬಂದೆ ಎಂದು ಹೇಳುವ ಕೀರ್ತಿ ಈಗ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದರು.

    ಮಾಧ್ಯಮದ ಮುಂದೇ ವಿಜಯ್ ನನ್ನ ಪತಿ ಎಂದು ಪೋಸ್ ನೀಡಲು ಕೀರ್ತಿಗೆ ನಾಚಿಕೆ ಆಗಲ್ವಾ? ಅವಳ ನಡೆ ಮೀತಿ ಮೀರುತ್ತಿದೆ. ವಿಜಯ್ ಬಾಡಿಗೆ ಮನೆಗೆ ಹೋಗಲು ಕೀರ್ತಿಗೌಡ ಕಾರಣ. ಅಲ್ಲದೇ ಜೈಲಿಗೆ ಹೋಗಲು ಅವಳೇ ಕಾರಣ. ಅವಳು ದುಡ್ಡು ಮಾಡಲು ಬಂದಿದ್ದಾಳೆ. ಈ ಕುರಿತು ಎಲ್ಲಾ ದಾಖಲೆ ಸಂಗ್ರಹಿಸುತ್ತಿದ್ದೇನೆ. ಈ ಎಲ್ಲಾ ವಿಚಾರಗಳ ಸತ್ಯ ಇವತ್ತು ಅಲ್ಲದಿದ್ದರೂ ನಾಳೆ ವಿಜಿ ಅವರಿಗೆ ಗೊತ್ತಾಗುತ್ತೆ. ಅದಕ್ಕಾಗಿ ನಾನು ಕಾಯುತ್ತೇನೆ ಎಂದು ತಿಳಿಸಿದರು.

    ನನಗೆ ಇಬ್ಬರು ಎರಡು ಎರಡು ಹೆಣ್ಣು ಮಕ್ಕಳಿದ್ದಾರೆ. ಅವರ ಭವಿಷ್ಯ ಹಾಳಾಗಬಾರದೆಂದು ಸುಮ್ಮನಿದ್ದೆ. ಆದರೆ ನನಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಮುಂದೆ ಬರಬೇಕಾಯಿತು. ಕೀರ್ತಿ ಜೊತೆ ಇರುವ ಮಗು ಬಾಡಿಗೆ ಮಗು ಅದು ವಿಜಯ್ ಅವರದ್ದು ಅಲ್ಲ. ಈ ಕುರಿತು ವಿಜಯ್ ಅವರಿಗೆ ಅರ್ಥವಾದರೆ ಅವರೇ ನನ್ನ ಬಳಿ ಬಂದು ಮಾತನಾಡುತ್ತಾರೆ. ಯಾರಾದರು ವಿಜಯ್ 2ನೇ ಮದುವೆಗೆ ಹೋಗಿದ್ದೀರಾ? ಗಂಡ ಅಂತಾ ಹೇಗೆ ಹೇಳುತ್ತಾಳೆ? ಏನ್ ದಾಖಲೆ ಇದೆ? ಕೀರ್ತಿಗೌಡ ತಂದೆ ಯಾರು ಎಂದು ಮೊದಲು ಕೇಳಿ? ಯಾವತ್ತು ಕೀರ್ತಿಗೌಡ ನನ್ನ ಮಕ್ಕಳಿಗೆ ಚಿಕ್ಕಮ್ಮ ಅಲ್ಲ. ಏಕೆಂದರೆ ಇಟ್ಟುಕೊಂಡವರು ಎಲ್ಲರು ಚಿಕ್ಕಮ್ಮಂದಿರಲ್ಲ ಎಂದು ಕಿಡಿಕಾರಿದರು.

    ನನ್ನ ಗಂಡ ಹೇಗೆ ಮತ್ತೆ ನನ್ನ ಬಳಿ ಬರುತ್ತಾರೆ ಎಂಬುವುದು ನನಗೆ ಗೊತ್ತಿದೆ. ಅವರ ಮೇಲೆ ಈಗಲೂ ನನಗೆ ನಂಬಿಕೆ ಇದೆ. ಆದರೆ ಅವರು ಕಳೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಮಾತಿನಂತೆ ವಕೀಲರ ದಾಖಲೆ ಬಿಡುಗಡೆ ಮಾಡಲು ತಿಳಿಸಿ. ಈ ಕುರಿತು ಎಲ್ಲಾ ಮಾಹಿತಿ ಲಭ್ಯವಾದ ಬಳಿಕ ದಾಖಲೆ ಸಮೇತ ಉತ್ತರಿಸುತ್ತೇನೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿ ವೇಳೆ ವಿಜಯ್ ಹಾಗೂ ಕೀರ್ತಿ ಕುರಿತ ದಾಖಲೆ, ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಸುದ್ದಿಗೋಷ್ಠಿಯಲ್ಲಿ ಯಾವುದೇ ದಾಖಲೆ ಬಿಡುಗಡೆ ಮಾಡದೇ ಜಾರಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ ತಾಯಿಗೆ ಅನಾರೋಗ್ಯ?

    ದುನಿಯಾ ವಿಜಿ ತಾಯಿಗೆ ಅನಾರೋಗ್ಯ?

    ಬೆಂಗಳೂರು: ಅಮ್ಮನ ಮೇಲೆ ಅಪಾರ ಪ್ರೀತಿ ಹೊಂದಿರುವ ನಟ ದುನಿಯಾ ವಿಜಯ್ ಅವರ ತಾಯಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಒಬ್ಬರೆ ಆಟೋದಲ್ಲಿ ಆಸ್ಪತ್ರೆಗೆ ತೆರಳಿ ಮನೆಗೆ ವಾಪಸ್ ಆಗಿದ್ದಾರೆ.

    ವಿಜಯ್ ಅವರ ವಿವಾದಗಳಿಂದ ಬೇಸತ್ತಿರುವ ತಂದೆ ತಾಯಿ ಇಬ್ಬರು ಈ ಕುರಿತು ಚಿಂತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರಿಗೆ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದೆ. ಸದ್ಯ ವಿಜಯ್ 2ನೇ ಪತ್ನಿ ಕೀರ್ತಿ ಅವರೊಂದಿಗೆ ವಿಶ್ರಾಂತಿ ಪಡೆಯಲು ಮಡಿಕೇರಿಗೆ ತೆರಳಿದ್ದಾರೆ. ಮಂಗಳವಾರ ಗಿರಿನಗರ ಪೊಲೀಸ್ ಠಾಣೆಗೆ ತೆರಳಿದ್ದ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳು ತಾಯಿ ನಾಗರತ್ನ ಮಾತು ಕೇಳಿಕೊಂಡು ನನ್ನ ವಿರುದ್ಧವೇ ದೂರು ನೀಡುವ ಸಾಧ್ಯತೆ ಇದೆ. ಮಕ್ಕಳು ಏನಾದರು ದೂರು ಕೊಟ್ಟರೆ ಪರಿಶೀಲಿಸಿ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ದುನಿಯಾ ವಿಜಿ ಹೆಣ್ಣು ಮಕ್ಕಳ ದೂರಿನಿಂದ ಮತ್ತೆ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ. ಬಳಿಕ ನೇರ ಅಲ್ಲಿಂದ ಮಡಿಕೇರಿಗೆ ತೆರಳಿದ್ದರು. ಆದರೆ ಸದ್ಯ ತಾಯಿಯ ಅನಾರೋಗ್ಯ ವಿಚಾರ ತಿಳಿದು ವಿಜಯ್ ಮತ್ತೆ ವಾಪಸ್ ಆಗುವ ಸಾಧ್ಯತೆಗಳಿದೆ.

    ಈ ಹಿಂದೆ ಹಲವು ಬಾರಿ ಮೊದಲ ಪತ್ನಿ ನಾಗರತ್ನ ಅವರ ವಿರುದ್ಧ ಆರೋಪ ಮಾಡಿದ್ದ ವಿಜಯ್, ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಅಲ್ಲದೇ ನ್ಯಾಯಾಲಯದಿಂದ ಜಾಮೀನು ಪಡೆದು ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆಯೂ ಮೊದಲ ಪತ್ನಿಯ ವಿರುದ್ಧ ಸಾಕ್ಷಿ ಸಮೇತ ಹಲವು ಆರೋಪ ಮಾಡಿದ್ದರು.

    ಇದರ ನಡುವೇ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿದ್ದು, ವಿಜಯ್ ಕುರಿತ ಕೆಲ ಸ್ಫೋಟಕ ಸತ್ಯಗಳನ್ನು ಬಿಚ್ಚಿಡಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಹಿಂದೆ ವಿಜಯ್ ಅವರ ವಿರುದ್ಧ ಯಾವುದೇ ಆರೋಪವನ್ನು ಮಾಡದ ನಾಗರತ್ನ ಅವರು ಕೀರ್ತಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು. ಅಲ್ಲದೇ ಕೀರ್ತಿ, ವಿಜಯ್ ಅವರ ವಿವಾಹ ನಡೆದಿಲ್ಲ ಎಂದು ಆರೋಪಿಸಿದ್ದರು. ಎಂದಿಗೂ ದುನಿಯಾ ವಿಜಯ್ ಅವರು ತಮ್ಮ ತಪ್ಪು ತಿಳಿದು ಮತ್ತೆ ನನ್ನ ಬಳಿ ಬರುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ ಠಾಣೆಗೆ ಹೋಗಿದ್ದ ಸೀಕ್ರೆಟ್ ರಿವೀಲ್-ಅಪ್ಪನ ವಿರುದ್ಧವೇ ತಿರುಗಿ ಬಿದ್ದ ಇಬ್ಬರು ಹೆಣ್ಣು ಮಕ್ಕಳು

    ದುನಿಯಾ ವಿಜಿ ಠಾಣೆಗೆ ಹೋಗಿದ್ದ ಸೀಕ್ರೆಟ್ ರಿವೀಲ್-ಅಪ್ಪನ ವಿರುದ್ಧವೇ ತಿರುಗಿ ಬಿದ್ದ ಇಬ್ಬರು ಹೆಣ್ಣು ಮಕ್ಕಳು

    ಬೆಂಗಳೂರು: ದುನಿಯಾ ವಿಜಿ ಜೈಲಿನಿಂದ ಜಾಮೀನು ಪಡೆದು ಹೊರಬರುತ್ತಿದ್ದಂತೆಯೇ ಅವರಿಗೆ ಮತ್ತೊಂದು ಭಯ ಶುರುವಾಗಿದೆ. ತನ್ನ ಇಬ್ಬರು ಹೆಣ್ಣು ಮಕ್ಕಳ ಭಯ ವಿಜಯ್ ಅವರನ್ನು ಕಾಡುತ್ತಿದೆ.

    ದುನಿಯಾ ವಿಜಿ ಮಂಗಳವಾರ ಮಧ್ಯಾಹ್ನ ಗಿರಿ ನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಪೊಲೀಸರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ನನ್ನ ಇಬ್ಬರು ಹೆಣ್ಣು ಮಕ್ಕಳು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ.

    ನನ್ನ ಇಬ್ಬರು ಹೆಣ್ಣು ಮಕ್ಕಳು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರಿಬ್ಬರು ತನ್ನ ತಾಯಿಯ ಮಾತು ಕೇಳಿಕೊಂಡು ನನ್ನ ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ. ಹಾಗಾಗಿ ನನ್ನ ವಿರುದ್ಧ ಯಾವುದಾದರೂ ದೂರು ಬಂದರೆ ಪರಿಶೀಲಿಸಿ ನನ್ನ ಗಮನಕ್ಕೆ ತನ್ನಿ ಎಂದು ಪೊಲೀಸರಿಗೆ ವಿಜಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸದ್ಯ ವಿಜಿ ಪೊಲೀಸ್ ಇನ್ಸ್ ಪೆಕ್ಟರ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆಯಷ್ಟೆ ವಿಜಿ ಮನೆಯಲ್ಲಿ ಹೈಡ್ರಾಮ ನಡೆದಿತ್ತು. ಆದರೆ ಈಗ ವಿಜಿ ವಿರುದ್ಧ ಅವರ ಇಬ್ಬರು ಹೆಣ್ಣು ಮಕ್ಕಳು ಸಿಡಿದೆದ್ದಿದ್ದಾರೆ.

    ಕಳೆದ 8 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ನಟ ದುನಿಯಾ ವಿಜಯ್ ಅವರಿಗೆ ಸಂಕಷ್ಟ ಎದುರಾಗಿದ್ದು, ಮೊದಲ ಪತ್ನಿಯ ಪುತ್ರಿ ಮೋನಿಕಾ ತಂದೆಯ ಮನೆಯಿಂದ ಅಮ್ಮ ನಾಗರತ್ನ ಮನೆಗೆ ತೆರಳಿದ್ದಾರೆ. ಮಂಗಳವಾರ ಬೆಳಗ್ಗೆ ದುನಿಯಾ ವಿಜಯ್‍ರ ಪುತ್ರಿ ಮೋನಿಕಾ ಬ್ಯಾಗ್ ಸಮೇತ ತಂದೆ ಮನೆಯಿಂದ ಹೊರ ಬಂದಿದ್ದು, ಅಮ್ಮ ಮನೆಗೆ ತೆರಳಿದರು.

    ಕೋರ್ಟ್ ನಿಂದ ಬೇಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿ ನಗರದ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ ತಂದೆ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದರು ಎಂಬ ಮಾಹಿತಿ ಲಭಿಸಿತ್ತು. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು, ಕೀರ್ತಿಯಿಂದಲೇ ಇಷ್ಟೆಲ್ಲ ನಡೆಯಿತು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

    ಕಳೆದ 2 ವರ್ಷಗಳಿಂದ ಕೀರ್ತಿ ಹಾಗೂ ದುನಿಯಾ ವಿಜಯ್ ಅವರೊಂದಿಗೆ ವಾಸವಿದ್ದ ಮಗಳು ಸದ್ಯ ಅಮ್ಮನ ಮನೆಗೆ ಹೋಗಿದ್ದಾಳೆ ಎನ್ನಲಾಗಿದೆ. ಕಳೆದ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಜಯ್, 2ನೇ ಪತ್ನಿ ಹಾಗೂ ನನ್ನ ಮಕ್ಕಳಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೇ ನನ್ನ ಮಗಳಿಗೆ 18 ವರ್ಷ ಪೂರ್ತಿಯಾಗಿದೆ, ಮತ್ತೊಬ್ಬ ಮಗಳಿಗೆ 18 ಪೂರ್ತಿಯಾಗಬೇಕಿದೆ. ಅವರ ಇಚ್ಛೆಯಂತೆ ಸ್ವತಂತ್ರ್ಯವಾಗಿ ಜೀವಿಸಲು ಅವರು ಅರ್ಹರು ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ocxlKBxASJc

  • ಮಾಧ್ಯಮಗಳ ವಿರುದ್ಧ ದುನಿಯಾ ವಿಜಿ ಗರಂ

    ಮಾಧ್ಯಮಗಳ ವಿರುದ್ಧ ದುನಿಯಾ ವಿಜಿ ಗರಂ

    ಬೆಂಗಳೂರು: ಸೋಮವಾರ ತಾನೇ ಜಾಮೀನಿನ ಮೇಲೆ ನಟ ದುನಿಯಾ ವಿಜಯ್ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ. ಆದ್ರೆ ಇಂದು ವಿಜಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    `ನೀವು ಸೆಲೆಬ್ರಿಟಿ, ಇನ್ನು ಮುಂದೆ ಬುದ್ಧಿ ಕಲಿತು ಸರಿಯಾಗಿರಿ ಎಂದು ದುನಿಯಾ ವಿಜಿಗೆ ಜಡ್ಜ್ ಹೇಳಿ ಬೇಲ್ ಕೊಟ್ಟಿದ್ದರು. ಆದರೆ ಜಡ್ಜ್ ಹೇಳಿದ್ದರೂ ಇಂದು ದುನಿಯಾ ವಿಜಯ್ ಬುದ್ಧಿ ಕಲಿಯಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂದು ಗಿರಿನಗರ ಪೊಲೀಸ್ ಠಾಣೆಗೆ ಹೋಗುತ್ತಿದ್ದರು. ಈ ವೇಳೆ ವರದಿಗಾರರು ಅವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಇದರಿಂದ ಸಿಟ್ಟುಗೊಂಡ ವಿಜಿ, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    ಮೊದಲನೇ ಪತ್ನಿಯಿಂದ ಕಂಗೆಟ್ಟು ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, ಇದು ನಮ್ಮ ಕುಟುಂಬದ ವಿಚಾರ, ನಾನು ಯಾರ ಮೇಲೂ ದೂರು ಕೊಡಲು ಬಂದಿಲ್ಲ. ನಮ್ಮ ಕುಟುಂಬ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಸಿಡಿಮಿಡಿಗೊಂಡಿದ್ದಾರೆ.

    ಇದಕ್ಕೆ ಮತ್ತೆ ಯಾಕೆ ಪೊಲೀಸ್ ಠಾಣೆಗೆ ಬಂದಿದ್ದೀರಾ ಎಂದು ಮರು ಪ್ರಶ್ನೆ ಮಾಡಿದ್ದಕ್ಕೆ, ನನ್ನ ಕೆಲಸಕ್ಕೆ ನಾನು ಬಂದಿದ್ದೇನೆ. ನನಗೆ ಸಾವಿರಾರು ಕೆಲಸಗಳಿವೆ. ಎಲ್ಲವನ್ನೂ ನಿಮಗೆ ಹೇಳುವ ಅವಶ್ಯಕತೆ ಇಲ್ಲ ಎಂದು ವರದಿಗಾರರಿಗೆ ಧಮ್ಕಿ ಹಾಕಿ ಪೊಲೀಸ್ ಠಾಣೆಯ ಒಳಗೆ ಹೋಗಿದ್ದಾರೆ.

    ಈಗಾಗಲೇ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು, ಕೀರ್ತಿಯಿಂದಲೇ ಇಷ್ಟೆಲ್ಲ ನಡೆಯಿತು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ocxlKBxASJc

  • ಅಮ್ಮನ ಮಡಿಲು ಸೇರಿದ ವಿಜಿ ಪುತ್ರಿ ಮೋನಿಕಾ

    ಅಮ್ಮನ ಮಡಿಲು ಸೇರಿದ ವಿಜಿ ಪುತ್ರಿ ಮೋನಿಕಾ

    ಬೆಂಗಳೂರು: ಕಳೆದ 8 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ನಟ ದುನಿಯಾ ವಿಜಯ್ ಅವರಿಗೆ ಸಂಕಷ್ಟ ಎದುರಾಗಿದ್ದು, ಮೊದಲ ಪತ್ನಿಯ ಪುತ್ರಿ ಸದ್ಯ ತಂದೆಯ ಮನೆಯಿಂದ ಅಮ್ಮ ನಾಗರತ್ನ ಮನೆಗೆ ತೆರಳಿದ್ದಾರೆ. ಇಂದು ಬೆಳಗ್ಗೆ ದುನಿಯಾ ವಿಜಯ್‍ರ ಪುತ್ರಿ ಮೋನಿಕಾ ಬ್ಯಾಗ್ ಸಮೇತ ತಂದೆ ಮನೆಯಿಂದ ಹೊರ ಬಂದಿದ್ದು, ಅಮ್ಮ ಮನೆಗೆ ತೆರಳಿದ್ದಾರೆ.

    ಜೈಲಿನಿಂದ ಬೇಲ್ ಪಡೆದು ಬಿಡುಗಡೆಯಾಗಿ ನಗರದ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ ತಂದೆ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು, ಕೀರ್ತಿಯಿಂದಲೇ ಇಷ್ಟೆಲ್ಲ ನಡೆಯಿತು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

    ಕಳೆದ 2 ವರ್ಷಗಳಿಂದ ಕೀರ್ತಿ ಹಾಗೂ ದುನಿಯಾ ವಿಜಯ್ ಅವರೊಂದಿಗೆ ವಾಸವಿದ್ದ ಮಗಳು ಸದ್ಯ ಅಮ್ಮನ ಮನೆಗೆ ತೆರಳಿದ್ದಾರೆ. ಇನ್ನುಳಿದಂತೆ ಕಳೆದ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಜಯ್, 2ನೇ ಪತ್ನಿ ಹಾಗೂ ನನ್ನ ಮಕ್ಕಳಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೇ ನನ್ನ ಮಗಳಿಗೆ 18 ವರ್ಷ ಪೂರ್ತಿಯಾಗಿದೆ, ಮತ್ತೊಬ್ಬ ಮಗಳಿಗೆ 18 ಪೂರ್ತಿಯಾಗಬೇಕಿದೆ. ಅವರ ಇಚ್ಛೆಯಂತೆ ಸ್ವತಂತ್ರ್ಯವಾಗಿ ಜೀವಿಸಲು ಅವರು ಅರ್ಹರು ಎಂದು ಹೇಳಿದ್ದರು.

    ನನ್ನ ಮೊದಲ ಪತ್ನಿಗೆ ಪತಿಯಾಗಿ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನ ನೀಡಿದ್ದೇನೆ. ಇಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನನ್ನ ತಂದೆ ತಾಯಿಗೆ ಅನ್ಯಾಯ ಮಾಡಿದ್ದರಿಂದ ನಾನು ಆಕೆಯ ಮೇಲೆ ಆರೋಪ ಮಾಡಿದ್ದೆ. ಆದರೆ ಆ ವೇಳೆಯೂ ನನ್ನ ವಿರುದ್ಧ ಕೆಟ್ಟ ಪ್ರಚಾರ ಮಾಡಲಾಗಿತ್ತು. ನಾಗರತ್ನ ಹಾಗೂ ನನ್ನ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ. ನನ್ನ ಮೊದಲ ಪತ್ನಿಗೆ ಮನೆ ಕೂಡ ನೀಡಿದ್ದು, ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಈ ಕುರಿತು ವಕೀಲರ ಮೂಲಕವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv