Tag: Drunk young man

  • ಮದ್ಯದ ಮತ್ತಿನಲ್ಲಿ ಕಾಲುಜಾರಿ ಬಾವಿಗೆ ಬಿದ್ದ ಯುವಕ ಸಾವು

    ಮದ್ಯದ ಮತ್ತಿನಲ್ಲಿ ಕಾಲುಜಾರಿ ಬಾವಿಗೆ ಬಿದ್ದ ಯುವಕ ಸಾವು

    ರಾಯಚೂರು: ಯುವಕನೊಬ್ಬ ಮದ್ಯ ಕುಡಿದ ಮತ್ತಿನಲ್ಲಿ ಕಾಲುಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲೂಕಿನ ಮತಪಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಯಚೂರು ತಾಲೂಕಿನ ತಿಮ್ಮಾಪುರ ಗ್ರಾಮದ ನಿವಾಸಿ ರಮೇಶ್ (32) ಮೃತ ಯುವಕ. ಮತಪಳ್ಳಿ ಗ್ರಾಮದ ಯಲ್ಲಮ್ಮನ ಜಾತ್ರೆಗೆ ಬಂದಿದ್ದಾಗ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ರಮೇಶ್ ಮದ್ಯದ ಮತ್ತಿನಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದಿದ. ಆದರೆ ಇದು ಯಾರ ಗಮನಕ್ಕೂ ಬಾದೆ ರಮೇಶ್ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಬಾವಿಯಲ್ಲಿ ತೇಲುತ್ತಿದ್ದ ಮೃತ ದೇಹವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸಲು ರಮೇಶ್ ಮೃತದೇಹವನ್ನು ಮೇಲಕ್ಕೆ ತಂದಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮದ್ಯದ ಅಮಲಿನಲ್ಲಿ ಅವಾಚ್ಯ ಪದ ಬಳಸಿದ ಯುವಕನಿಗೆ ಥಳಿತ

    ಮದ್ಯದ ಅಮಲಿನಲ್ಲಿ ಅವಾಚ್ಯ ಪದ ಬಳಸಿದ ಯುವಕನಿಗೆ ಥಳಿತ

    ಚಿಕ್ಕಬಳ್ಳಾಪುರ: ಇನ್ನೊಬ್ಬರ ನೆಮ್ಮದಿಗೆ ದಕ್ಕೆ ತರುವುದು, ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದ ಬಳಕೆ ಮಾಡುವುದು ಅಪರಾಧ. ಹೀಗಿದ್ದರೂ ನಗರದ ಬಿಬಿ ರಸ್ತೆಯ ವಾಣಿ ಚಿತ್ರಮಂದಿರದ ಬಳಿ ಯುವಕನೊಬ್ಬ ಕುಡಿದ ಅಮಲಿನಲ್ಲಿ ಸಾರ್ವಜನಿಕರನ್ನು ಅವಾಚ್ಯ ಪದಗಳಿಂದ ನಿಂತಿಸಿ, ಥಳಿಸಿಕೊಂಡಿದ್ದಾನೆ.

    ಆಗಿದ್ದೇನು?:
    ಇಂದು ಮಧ್ಯಾಹ್ನ ವಾಣಿ ಚಿತ್ರಮಂದಿರದ ಬಳಿ ಯುವಕನೊಬ್ಬ ಮದ್ಯದ ಅಮಲಿನಲ್ಲಿ ರಸ್ತೆಯ ಮೇಲೆ ತೂರಾಡುತ್ತಾ, ಸಾರ್ವಜನಿಕರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಯವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಯುವಕ ನಡು ರಸ್ತೆಯಲ್ಲಿಯೇ ಮುಗುಚಿ ಬಿದ್ದಿದ್ದ. ಅಲ್ಲಿಯೂ ಆತನನ್ನು ಏಳೆದು ಹೊಡೆದಿದ್ದಾರೆ.

    ಇದನ್ನು ನೋಡಿದ ಯುವಕನ ಸ್ನೇಹಿತರು ಹಾಗೂ ಕೆಲ ಹಿರಿಯರು ಆತನನ್ನು ರಕ್ಷಿಸಿದ್ದಾರೆ. ಬಳಿಕ ಸ್ನೇಹಿತ ಅವನನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಾಗಲೂ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv