Tag: drugs

  • ಅಮಿತ್ ಶಾ ಉಪಸ್ಥಿತಿಯಲ್ಲೇ 2,400 ಕೋಟಿ ಮೌಲ್ಯದ ಡ್ರಗ್ಸ್ ನಾಶ

    ಅಮಿತ್ ಶಾ ಉಪಸ್ಥಿತಿಯಲ್ಲೇ 2,400 ಕೋಟಿ ಮೌಲ್ಯದ ಡ್ರಗ್ಸ್ ನಾಶ

    ನವದೆಹಲಿ: ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಉಪಸ್ಥಿತಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬರೋಬ್ಬರಿ 2,381 ಕೋಟಿ ರೂ. ಮೌಲ್ಯದ 1.40 ಲಕ್ಷ ಕೆಜಿ ಗೂ ಅಧಿಕ ಮಾದಕ ದ್ರವ್ಯವನ್ನು (Drugs) ನಾಶಪಡಿಸಲಾಗಿದೆ.

    ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹಾಗೂ ಎಲ್ಲಾ ರಾಜ್ಯಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಗಳ (ANTF) ಸಮನ್ವಯದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಡ್ರಗ್ಸ್ ಅನ್ನು ನಾಶಪಡಿಸಲಾಗಿದೆ. ನವದೆಹಲಿಯಲ್ಲಿ ಮಾದಕ ವಸ್ತು ಕಳ್ಳಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅಮಿತ್ ಶಾ ಅವರು ವರ್ಚುವಲ್ ಆಗಿ ಡ್ರಗ್ಸ್ ನಾಶವನ್ನು ಮೇಲ್ವಿಚಾರಣೆ ಮಾಡಿದ್ದಾರೆ.

    ಎನ್‌ಸಿಬಿ ಹೈದರಾಬಾದ್ ಘಟಕದಿಂದ ವಶಪಡಿಸಿಕೊಂಡ 6,590 ಕೆಜಿ, ಇಂದೋರ್ ಘಟಕದಿಂದ 622 ಕೆಜಿ, ಜಮ್ಮು ಮತ್ತು ಕಾಶ್ಮೀರ ಘಟಕದಿಂದ 356 ಕೆಜಿ ಡ್ರಗ್ಸ್ ಅನ್ನು ನಾಶಪಡಿಸಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ. ಇದರೊಂದಿಗೆ ಅಸ್ಸಾಂನಲ್ಲಿ 1,486 ಕೆಜಿ, ಚಂಡೀಗಢದಲ್ಲಿ 229 ಕೆಜಿ, ಗೋವಾದಲ್ಲಿ 25 ಕೆಜಿ, ಗುಜರಾತ್‌ನಲ್ಲಿ 4,277 ಕೆಜಿ, ಹರಿಯಾಣದಲ್ಲಿ 2,458 ಕೆಜಿ, ಜಮ್ಮು ಮತ್ತು ಕಾಶ್ಮೀರದಲ್ಲಿ 4,069 ಕೆಜಿ, ಮಧ್ಯಪ್ರದೇಶದಲ್ಲಿ 1,03,884 ಕೆಜಿ, ಮಹಾರಾಷ್ಟ್ರದಲ್ಲಿ 159 ಕೆಜಿ, ತ್ರಿಪುರಾದಲ್ಲಿ 1,803 ಕೆಜಿ, ಉತ್ತರ ಪ್ರದೇಶದಲ್ಲಿ 4,049 ಕೆಜಿ ಮಾದಕ ದ್ರವ್ಯವನ್ನು ನಾಶಪಡಿಸಲಾಗಿದೆ. ಇದನ್ನೂ ಓದಿ: Mobile Ban – ಇನ್ನು ಮುಂದೆ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಸುವಂತಿಲ್ಲ

    ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ. 2022ರ ಜೂನ್ 1 ರಿಂದ 2023 ಜುಲೈ 15 ರವರೆಗೆ ಎನ್‌ಸಿಬಿಯ ಎಲ್ಲಾ ಪ್ರಾದೇಶಿಕ ಘಟಕಗಳು ಮತ್ತು ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳು ಅಂದಾಜು 9,580 ಕೋಟಿ ರೂ. ಮೌಲ್ಯದ ಅಂದಾಜು 8,76,554 ಕೆಜಿ ವಶಪಡಿಸಿಕೊಂಡ ಡ್ರಗ್ಸ್ ಅನ್ನು ನಾಶಪಡಿಸಿದೆ. ಇದು ನಿರ್ಧರಿತ ಗುರಿಗಿಂತ 11 ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ ಸಿಬಿಐ ತನಿಖೆಗೆ – ಕೆ.ಎನ್ ರಾಜಣ್ಣ ಘೋಷಣೆ

    ಇಂದಿನ ಕಾರ್ಯಾಚರಣೆಯ ಮೂಲಕ ಒಂದೇ ವರ್ಷದಲ್ಲಿ ನಾಶವಾದ ಒಟ್ಟು ಡ್ರಗ್ಸ್‌ನ ಪ್ರಮಾಣವನ್ನು 10 ಲಕ್ಷ ಕೆಜಿ ಎಂದು ಅಂದಾಜಿಸಲಾಗಿದೆ. ಈ ಡ್ರಗ್ಸ್‌ನ ಮೌಲ್ಯ ಅಂದಾಜು 12,000 ಕೋಟಿ ರೂ. ಆಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡ್ರಗ್ಸ್ ಪ್ರಚೋದನೆ ಹಾಡು : ವಿಜಯ್ ಚಿತ್ರತಂಡಕ್ಕೆ ನೀಡಿದ ಖಡಕ್ ಸೂಚನೆ ಏನು?

    ಡ್ರಗ್ಸ್ ಪ್ರಚೋದನೆ ಹಾಡು : ವಿಜಯ್ ಚಿತ್ರತಂಡಕ್ಕೆ ನೀಡಿದ ಖಡಕ್ ಸೂಚನೆ ಏನು?

    ಮಿಳಿನ ಖ್ಯಾತ ನಟ ದಳಪತಿ ವಿಜಯ್, ಸದಾ ಸಮಾಜಮುಖಿ ಚಿಂತೆಗಳಲ್ಲಿ ತೊಡಗಿಕೊಂಡವರು. ಸಿನಿಮಾ ಮೂಲಕ ಮಾತ್ರವಲ್ಲ, ವೈಯಕ್ತಿಕ ಜೀವನವನ್ನು ಅಷ್ಟೇ ಹಸನಾಗಿ ಇಟ್ಟುಕೊಂಡವರು. ಮೊನ್ನೆಯಷ್ಟೇ ಅವರ ನಟನೆಯ ಲಿಯೋ ಸಿನಿಮಾದ ‘ನಾ ರೆಡಿದಾ ವರವಾ’ ಹಾಡು ರಿಲೀಸ್ ಆಗಿತ್ತು. ಈ ಹಾಡಿನ ಕುರಿತಾಗಿ ಸಾಕಷ್ಟು ಟೀಕೆ ಕೇಳಿ ಬಂದಿದ್ದವು.

    ‘ನಾ ರೆಡಿದಾ ವರವಾ’ ಹಾಡಿನಲ್ಲಿ ಡ್ರಗ್‌ ಮತ್ತು ಮಾದಕ ವಸ್ತುಗಳನ್ನು ಪ್ರಚೋದಿಸುವಂತಹ ಅಂಶಗಳು ಇವೆ. ಇವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಸೆಲ್ವಂ ಅನ್ನುವವರು ದೂರು ನೀಡಿದ್ದರು. ಮಾದಕ ಕ್ರಮ ನಿಯಂತ್ರಣ ತಡೆ ಕಾಯ್ದೆ ಅನ್ವಯ ಚಿತ್ರತಂಡದ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಸೆಲ್ವಂ ನಡೆಗೆ ಸ್ವತಃ ವಿಜಯ್ ಅಭಿನಂದಿಸಿದ್ದಾರೆ. ಹಾಡಿನಲ್ಲಿ ಮಾರ್ಪಾಡು ಮಾಡುವಂತೆ ನಿರ್ದೇಶಕರಿಗೆ ವಿಜಯ್ ಸೂಚಿಸಿದ್ದಾರೆ.

    ವಿಜಯ್ ಸೂಚನೆಯಂತೆ ಹಾಡಿನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಮಾದಕ ವಸ್ತು ಪ್ರಚೋದಿಸುವಂತಹ ಎಲ್ಲ ಅಂಶಗಳನ್ನು ತೆಗೆದಿರುವುದಾಗಿ ಚಿತ್ರತಂಡ ಹೇಳಿದೆ. ವಿಜಯ್ ಅವರ ಸಾಮಾಜಿಕ ಕಳಕಳಿಗೆ ಚಿತ್ರತಂಡ ಜೊತೆಯಾಗಿ ಗೌರವಿಸಿದೆ. ಈ ನಡೆಗೆ ಭಾರೀ ಪ್ರಶಂಸೆ ಕೂಡ ವ್ಯಕ್ತವಾಗಿದೆ.

    ಕಳೆದ ಜೂನ್ 22 ರಂದು ವಿಜಯ್​ (Dalpati Vijay) ಹುಟ್ಟುಹಬ್ಬದ ಪ್ರಯುಕ್ತ ‘ಲಿಯೋ’ (Leo) ಚಿತ್ರತಂಡದವರು ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ವಿಜಯ್​ ಅವರಿಗೆ ಶುಭಾಶಯ ಕೋರಿದ್ದರು. ಜೊತೆಗೆ ಸಿನಿಮಾದ ಮೊದಲ ಲಿರಿಕಲ್​ ಹಾಡು (Song) ಬಿಡುಗಡೆ ಮಾಡಿದ್ದರು. ಇದನ್ನೂ ಓದಿ:ಆಸ್ಕರ್ ಜ್ಯೂರಿಯಾಗುವ ಅವಕಾಶ ಪಡೆದ ರಾಮ್‌ಚರಣ್- ಜ್ಯೂ.ಎನ್‌ಟಿಆರ್

    ‘ನಾ ರೆಡಿದಾ ವರವಾ’ (Na Redida Varava) ಎಂಬ ಲಿರಿಕಲ್​ ಹಾಡು ಅಂದು ಬಿಡುಗಡೆ ಆಗಿತ್ತು. ಅದೇ ಹಾಡು ವಿವಾದಕ್ಕೂ ಕಾರಣವಾಗಿತ್ತು. ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಕೆಲವರ ವಿಚಾರಣೆ ಹಾಗೂ ಬಂಧನ ಕೂಡ ನಡೆದಿದೆ. ಈ ಹೊತ್ತಿನಲ್ಲಿ ಹಾಡಿನಲ್ಲಿ ಡ್ರಗ್ಸ್ (Drugs) ಪ್ರಚೋದಿಸುವಂತಹ ಸನ್ನಿವೇಶಗಳು ಇದ್ದವು. ಹಾಗಾಗಿ ಈ ಹಾಡಿನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೆಲ್ವಂ ಅನ್ನುವವರು ದೂರು (Complaint) ನೀಡಿದ್ದರು.

    ನಾ ರೆಡಿದಾ ವರವಾ ಹಾಡಿಗೆ ವಿಜಯ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್​ ಸಾಹಿತ್ಯ ರಚಿಸಿದ್ದು, ವಿಜಯ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಿಲಿಯನ್​ಗಳಿಗೂ ಹೆಚ್ಚು ವೀಕ್ಷಣೆ ಕಂಡಿತ್ತು.

    ‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್​ ಕನಕರಾಜ್​ (Lokesh Kanakaraj) ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡುತ್ತಿರುವ ‘ಲಿಯೋ’ ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಲಲಿತ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಇನ್ನು, ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನೂ ರಚಿಸಿದ್ದಾರೆ ವಿಜಯ್​.

     

    ‘ಲಿಯೋ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಅಕ್ಟೋಬರ್​ 19ರಂದು ಐದು ಭಾಷೆಗಳಲ್ಲಿ  ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಬಾಲಿವುಡ್​ ನಟ ಸಂಜಯ್​ ದತ್​ ಈ ಚಿತ್ರದ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದು, ವಿಜಯ್​ ಮತ್ತು ಸಂಜಯ್​ ದತ್​ ಜೊತೆಗೆ ತ್ರಿಷಾ, ಅರ್ಜುನ್‌ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್‌ ಅಲಿ ಖಾನ್‌, ಗೌತಮ್​ ಮೆನನ್​, ಮಿಸ್ಕಿನ್​ ಮುಂತಾದವರು ಅಭಿನಯಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟಾರ್ ನಟಿಯರ ತೆರೆ ಹಿಂದಿನ ಕಹಾನಿ : ಡ್ರಗ್ಸು, ಸೆಕ್ಸ್, ಪ್ರೀತಿ, ಗೀತಿ ಇತ್ಯಾದಿ

    ಸ್ಟಾರ್ ನಟಿಯರ ತೆರೆ ಹಿಂದಿನ ಕಹಾನಿ : ಡ್ರಗ್ಸು, ಸೆಕ್ಸ್, ಪ್ರೀತಿ, ಗೀತಿ ಇತ್ಯಾದಿ

    ಬ್ಬೊಬ್ಬರದ್ದು ಒಂದೊಂದು ಕತೆ. ಈ ಹೀರೋಯಿನ್ ಗಳಿಗೆ ಯಾರಾದರೊಬ್ಬರು ಕಿರಿಕ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಇವರೆಲ್ಲ ಕಣ್ಣೀರು ಸುರಿಸುತ್ತಿರುತ್ತಾರೆ. ಪುರುಷ ಪ್ರಧಾನ ಬಣ್ಣದ ಲೋಕದಲ್ಲಿ ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹೆಣ್ಣನ್ನು ಒಂದು ರೀತಿ ನೋಡುವುದೇ ಪುರುಷರ ಸಂಪ್ರದಾಯ. ಆದರೂ ಹೀರೋಯಿನ್ಸ್ ಹೋರಾಟ ಮಾಡುತ್ತಿದ್ದಾರೆ. ಏನಾಯಿತೀಗ ಚಾಲ್ತಿಯಲ್ಲಿರುವ ನಾಯಕಿಯರಿಗೆ? ಅದ್ಯಾವ ಕಂಟಕ ಎದುರಾಗಿದೆ? ಇಲ್ಲಿದೆ ಸ್ಟೋರಿ.

    ಶ್ರೀಲೀಲಾ 

    ಶ್ರೀಲೀಲಾ (Sreeleela) ಕೆಲವು ವರ್ಷಗಳ ಹಿಂದೆ ಅವಕಾಶಕ್ಕಾಗಿ ಒದ್ದಾಡುತ್ತಿದ್ದ ಈ ಕನ್ನಡತಿ ಈಗ ಟಾಲಿವುಡ್‌ನಲ್ಲಿ ಎದ್ವಾತದ್ವಾ ಬ್ಯುಸಿ. ಕೈಯಲ್ಲಿ ಎಂಟು ಹತ್ತು ಸಿನಿಮಾಗಳಿವೆ. ಸ್ಟಾರ್ ಹೀರೋಸ್ ಈಕೆಯ ಕಾಲ್‌ಶೀಟ್‌ಗೆ ಕಾಯುತ್ತಿದ್ದಾರೆ. ಇಷ್ಟಿದ್ದರೂ ಗೊಳೋ ಎನ್ನುವಂತಾಗಿದೆ ಶ್ರೀಲೀಲಾ ಬದುಕು. ಕಾರಣ ಪ್ರಿನ್ಸ್ ಮಹೇಶ್ ಬಾಬು ನಾಯಕನಾಗಿರುವ ಗುಂಟೂರು ಖಾರಂ ಸಿನಿಮಾಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಇವರು, ಅದೇ ಸ್ಥಾನದಲ್ಲಿ ಮುಂದುವರೆಯಬೇಕಾಗಿದೆ. ಫಸ್ಟ್ ಹೀರೋಯಿನ್ ಜಾಗದಲ್ಲಿ ಮೀನಾಕ್ಷಿ ಚೌಧರಿ ಕುಲುಕುಲು.

    ಪೂಜಾ ಹೆಗಡೆ ಫಸ್ಟ್ ಹೀರೋಯಿನ್ ಆಗಿದ್ದರು.  ಖಬರಿದಲ್ಲದ ಕಾರಣಗಳಿಂದ ಎದ್ದು ಹೋದರು. ಎರಡನೇ ನಾಯಕಿಯಾಗಿದ್ದ ಶ್ರೀಲೀಲಾಗೆ ಮೊದಲ ನಾಯಕಿ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಪ್ರಿನ್ಸ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಇಬ್ಬರೂ ಸೇರಿ ಲೀಲಾ ನೀನು ಬಾಲಂಗೋಚಿಯಾಗಿರು, ಮೀನಾಕ್ಷಿ ಪಟವಾಗಲಿ ಎಂದರು. ಫಿನಿಶ್, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಶ್ರೀಲೀಲಾಗೆ. ಪಾಲಿಗೆ ಬಂದದ್ದು ಪಂಚಾಮೃತ. ಅದೇ ಕಿಸ್ ಬೆಡಗಿ ಹಾಲಿ ವ್ರತ.

    ತಮನ್ನಾ

    ತಮನ್ನಾ (Tamannaah) ನಟಿಸಿರುವ ಲಸ್ಟ್ ಸ್ಟೋರೀಸ್ ವೆಬ್ ಸೀರೀಸ್ ಓಟಿಟಿ ಬಿಡುಗಡೆಗೆ ಒಂದು ದಿನ ಬಾಕಿ. ಪ್ರಚಾರ ಭರ್ಜರಿಯಾಗಿದೆ. ಆದರೆ ಈಗಾಗಲೇ ಹೊರ ಬಿದ್ದಿರುವ ಇದರ ಟ್ರೈಲರ್ ನೋಡಿದವರು ಮಿಲ್ಕಿಬ್ಯೂಟಿಗೆ ಎಲೆ ಅಡಿಕೆ ಹಾಕಿಕೊಂಡು ಕ್ಯಾಕರಿಸುತ್ತಿದ್ದಾರೆ. ವರ್ಷದ ಹಿಂದೆ ಲಿಪ್‌ಲಾಕ್ ಮಾಡೋಕೆ ನಾಚಿ ನೀರಾಗುತ್ತಿದ್ದ ಈ ಚೆಲುವೆ ಈಗ ಕೆಂಗೇರಿ ನೀರಿನಲ್ಲೂ ಜಳಕ ಮಾಡಲು ಹಿಂಜರಿಯುತ್ತಿಲ್ಲ. ಸಬ್ ಪೈಸಾ ಕಾ ಮಾಮ್ಲಾ ಹೈ ಎನ್ನುತ್ತಿದ್ದಾರೆ ಆಕೆಯ ಫ್ಯಾನ್ಸು.

    ಈ ವೆಬ್ ಸೀರೀಸ್‌ನಲ್ಲಿ ತಮನ್ನಾ ಬರೀ ಲಿಪ್‌ಲಾಕ್ ಮಾತ್ರ ಮಾಡಿಲ್ಲ. ಬೆಡ್‌ರೂಮ್ ದೃಶ್ಯಗಳಲ್ಲಿ ಬೆದರಿಲ್ಲ, ಬೆಂಡಾಗಿಲ್ಲ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜತೆ ಕೆನೆದು ಕುಣಿದಿದ್ದಾಳೆ. `ನಮ್ಮ ಸಂಸ್ಕೃತಿಗೆ ನೀನೊಂದು ಕಪ್ಪು ಚುಕ್ಕೆ. ದುಡ್ಡಿಗಾಗಿ ಸೀ ಗ್ರೇಡ್ ನಟಿಯಾದೆಯಾ?’ ಹೀಗಂತ ಜನರು ಎಣ್ಣೆ ಇಲ್ಲದೆ ಒಗ್ಗರಣೆ ಹಾಕುತ್ತಿದ್ದಾರೆ. ಯಾರು ಏನೆಂದರೆ ನಂಗೇನು ? ಜಮಾನಾ ಬದಲ್ ಗಯಾ ಹೈ. ನಾನೂ ಬದಲಾಗಿದ್ಧೇನೆ ಎನ್ನುವುದು ತಮನ್ನಾ ಸಿಂಗಲ್ ಸ್ಲೋಗನ್ನು.

    ಶ್ರುತಿ ಹಾಸನ್ 

    ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ (Shruti Haasan) ಮತ್ತೆ ಹೆದ್ದಾರಿಯಲ್ಲಿ ಬಂದು ನಿಂತಿದ್ದಾರೆ. ನಟ ಸಿದ್ಧಾರ್ಥ್ ಜೊತೆ ಸಂಬಂಧ ಮುರಿದುಕೊಂಡ ಮೇಲೆ ಇನ್ನೊಬ್ಬನ ಜೊತೆ ಡಿಂಗ್‌ಡಾಂಗ್ ಮಾಡುತ್ತಿದ್ದರು. ಈಗ ಶಂತನು ಹಜಾರಿಕಾ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ವಿಷಯ ಅದಲ್ಲ, ಈಕೆ ನಿತ್ಯ ಬಾಯ್‌ಫ್ರೆಂಡ್ ಕಮ್ ಅನಧಿಕೃತ ಗಂಡನ ಜೊತೆ ಡ್ರಗ್ಸ್ (Drugs) ಏರಿಸುತ್ತಾಳೆ. ಅದಕ್ಕಾಗಿ ಡಿಪ್ರೆಶನ್‌ಗೆ ಹೋಗಿ ಹೊರಬರಲು ಮಾತ್ರೆ ನುಂಗುತ್ತಿದ್ದಾಳೆ. ಅಷ್ಟೆ ಅಲ್ಲ, ಶ್ರುತಿ ಪಕ್ಕಾ ಸೈಕೋ. ಹೀಗಂದಿದ್ದಾನೆ ದುಬೈ ಬಾಬಾ.

    ಡ್ರಗ್ಸು, ಡಿಪ್ರೆಶನ್ನು, ಮಾತ್ರೆ, ಸೈಕೋ… ಈ ಆರೋಪಗಳನ್ನು ಮಾಡಿದ್ದಾನೆ ದುಬೈನಲ್ಲಿ ಕುಂತಿರುವ ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು. ಈ ಹಿಂದೆ ಪ್ರಭಾಸ್, ಸಮಂತಾ ಬಗ್ಗೆಯೂ ನಾಲಿಗೆ ಅಲ್ಲಾಡಿಸಿದ್ದ. ಈಗ ಶ್ರುತಿ ಹಿಂದೆ ಬಿದ್ದಿದ್ದಾನೆ. ಇದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಗೊತ್ತಿಲ್ಲ. ಒಟ್ಟಿನಲ್ಲಿ ಶ್ರುತಿ ಹಾಸನ್ ಜೀವನ ಇದೇ ಆಗಿದ್ದರೆ, ಕಮಲ್ ಹಾಸನ್ ಜೀವನ ಪಾವನ ಆದಂಗೇಯಾ.

    ಆಸಿನ್

    ಅದೊಂದು ಕಾಲದ ಸ್ಟಾರ್ ನಟಿ ಆಸಿನ್ (Asin) ಬದುಕಲ್ಲಿ ಬಿರುಗಾಳಿ ಎದ್ದಿದೆಯಾ? ಏಳೆಂಟು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿ ಸಿಇಓ ರಾಹುಲ್ ಶರ್ಮಾ ಜೊತೆ ಹಸೆಮಣೆ ಏರಿದ ಮೇಲೆ ನಾಪತ್ತೆಯಾಗಿದ್ದ ಈಕೆ ನಿಜಕ್ಕೂ ಗಂಡನಿಗೆ ಡಿವೋರ್ಸ್ (Divorce) ಕೊಡಲಿದ್ದಾರಾ? ಇಷ್ಟು ವರ್ಷವಾದರೂ ಮಕ್ಕಳಾದ ಸುದ್ದಿ ಬಂದಿಲ್ಲ. ಬಣ್ಣದ ಲೋಕ ಆಕೆ ಕಡೆ ಕಣ್ಣೆತ್ತಿ ನೋಡುತ್ತಿಲ್ಲ. ಹೀಗಿದ್ದರೂ ಯಾಕೆ ಆಸಿನ್ ಬದುಕನ್ನು ರಾಡಿ ಮಾಡಿಕೊಂಡರು? ಉತ್ತರ ಸಸ್ಪೆನ್ಸ್ ಆಫ್ ಬಾಲಿವುಡ್. ಆಸಿನ್ ಬೇರೆ ಯಾರೂ ಅಲ್ಲ, ಅಮೀರ್ ಗಜನಿ ಬೆಡಗಿ.

    ಮಲಯಾಳಂ ಮೂಲದ ಆಸಿನ್ ನಂತರ ತಮಿಳು, ತೆಲುಗು ಹಾಗೂ ಬಾಲಿವುಡ್‌ನಲ್ಲಿ ಹೆಸರು ಮಾಡಿದರು. ಅಮೀರ್ ಖಾನ್ ಅಭಿನಯದ ಗಜನಿ ಹೆಸರು ತಂದಿತು. ಎಂಟು ವರ್ಷಗಳ ಹಿಂದೆ ಆಲ್ ಈಸ್ ವೆಲ್ ಸಿನಿಮಾ ನಂತರ ಹೊಸಿಲು ದಾಟಲಿಲ್ಲ. ಅಕ್ಕಿ ಸೇರು ಒದ್ದು ಬಾಗಿಲು ಹಾಕಿಕೊಂಡಿದ್ದೇ ಕೊನೆ. ಈಗ ಅದೇ ರಾಹುಲ್‌ಗೆ ಸೋಡಾ ಚೀಟಿ ಕೊಡಲು ತುದಿಗಾಲಲ್ಲಿ ನಿಂತಿದ್ಧಾರಂತೆ. ಬಣ್ಣದ ಮಂದಿ ಜೀವನ ಬೆಲ್ಲ ಇಲ್ಲದ ಹೂರಣ. ಎರಡೂ ಒಂದೇನಾ? ನೀವೇ ಡಿಸೈಡ್ ಮಾಡ್ರಪ್ಪಾ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ

    ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ

    ವರಿಬ್ಬರೂ ಒಂದೊಂದು ಕಾರಣಕ್ಕೆ ಗೋಳಾಡುತ್ತಿದ್ದಾರೆ. ಒಬ್ಬಾಕೆದ್ದು ಡ್ರಗ್ಸ್ (Drugs) ಸಮಸ್ಯೆ, ಇನ್ನೊಬ್ಬ ನಟಿಯದ್ದು ಕಿಸ್ಸಿನ (Kiss) ಕಾಂಟ್ರವರ್ಸಿ. ನಾನು ಹಾಗಿರಲಿಲ್ಲ ಎನ್ನುವುದೇ ಇಬ್ಬರ ಒನ್ ಲೈನ್ ಸಿನಿಮಾ. ಯಾವ ಕಾರಣಕ್ಕೆ ಇಬ್ಬರು ನಟಿಯರು ಹೀಗೆ ಒದ್ದಾಡುತ್ತಿದ್ದಾರೆ? ಏನಿದರ ಹಿಂದಿನ ಅಸಲಿಯತ್ತು?

    ಅಶು ರೆಡ್ಡಿ(Ashu Reddy), ಈಕೆ ಕಾಲಿವುಡ್ ನಟಿ. ಸ್ಟಾರ್ ಪಟ್ಟ ದಕ್ಕಿಲ್ಲ. ಅದಕ್ಕಾಗಿ ಸಕಲ ರೀತಿ ಹೋರಾಟ ಮಾಡುತ್ತಿದ್ದಾರೆ. ತುಣುಕು ಪಾತ್ರ ಸಿಕ್ಕರೂ ಕೇಕೆ ಹಾಕುತ್ತಾರೆ. ರಜನಿಯ ಕಬಾಲಿ ಚಿತ್ರದಲ್ಲೂ ಹಿಂಗೆ ಬಂದು ಹಂಗೆ ಹೋಗಿದ್ದರು. ಈಗ ಅದೇ ಸಿನಿಮಾ ನಿರ್ಮಾಪಕ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನ ಹೆಸರು ಕೆಪಿ ಚೌಧರಿ. ಇದೇ ಚೌಧರಿ ಜೊತೆ ಗಂಟೆಗಟ್ಟಲೆ ಚಾಟಿಂಗು, ನೂರು ಸಾರಿ ಫೋನ್ ಕಾಲಿಂಗು ಅಶು ರೆಡ್ಡಿ ಮಾಡಿದ್ದಾರಂತೆ. ಇದನ್ನು ಖಾಕಿ ಬಹಿರಂಗಗೊಳಿಸಿದೆ. ಮಾಧ್ಯಮ ಬರೆದಿವೆ. ಅಶು ರಣಚಂಡಿ ಅವತಾರ.

    `ನಾನು ಡ್ರಗ್ಸ್ ತೊಗೊಂಡಿಲ್ರಪ್ಪಾ. ನನ್ನ ಮೊಬೈಲ್ ನಂಬರ್ ಲೀಕ್ ಮಾಡಿದ್ದಾರೆ. ಸಾವಿರಾರು ಫೋನ್ ಬರುತ್ತಿವೆ. ನಾನೆಲ್ಲಿಗೆ ಹೋಗಲಿ? ಮೀಡಿಯಾ ಮೇಲೆ ಕೇಸ್ ಹಾಕುತ್ತೇನೆ.’ ಹೀಗಂತ ಟೊಂಕಕ್ಕೆ ಸೀರೆ ಸಿಕ್ಕಿಸಿಕೊಂಡು ಗುಡುಗಿದ್ದಾರೆ ಚಿನ್ನಾರಿ ಅಶು. `ಹಾಗಿದ್ದರೆ ನೂರು ಸಾರಿ ಚೌಧರಿಗೆ ಫೋನ್ ಯಾಕೆ ಮಾಡಿದ್ದೆ?’ ಇದಕ್ಕೆ ಉತ್ತರ ಮಾತ್ರ ಅಶು ರೆಡ್ಡಿ ನಾಲಿಗೆಯಿಂದ ಈಚೆ ಬೀಳುತ್ತಿಲ್ಲ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂತಿದ್ದಾರಾ ಅಶು? ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ದಶಕಗಳ ನಂತರ ಬಾಲಿವುಡ್ ಹಿರಿಯ ನಟಿ ಲಿಪ್‌ಲಾಕ್ ದೃಶ್ಯ ನೆನಪಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸಿ, ಹೆಂಗೆ ಡೆಟಾಲ್ ಹಾಕಿ ಬಾಯಿ ತೊಳಕೊಂಡೆ ಎನ್ನುವುದನ್ನು ಇಂಚಿಂಚಾಗಿ ಹರವಿಟ್ಟಿದ್ದಾರೆ. ಆ ನಟಿಯ ಹೆಸರು ನೀನಾ ಗುಪ್ತಾ (Neena Gupta). ಪೋಷಕ ನಟಿ ಕಮ್ ಬೋಲ್ಡ್ ಆಕ್ಟರೀಸ್ ಗದ್ದುಗೆ ಏರಿದ್ದರು ಈಕೆ ದಶಕಗಳ ಹಿಂದೆ. ತೊಂಬತ್ತರ ದಶಕದ ದಿಲ್ಲಗಿ ಸೀರಿಯಲ್‌ನಲ್ಲಿ ಮೊದಲ ಬಾರಿ ಲಿಪ್‌ಲಾಕ್ ದೃಶ್ಯಕ್ಕೆ ಒಪ್ಪಿದ್ದರು. ಧಾರಾವಾಹಿ ಲೋಕ ಬೆಚ್ಚಿತ್ತು. ಕಾರಣ ಅಲ್ಲಿವರೆಗೆ ಸೀರಿಯಲ್ ಮಡಿ ಮಡಿಲಾಗಿದ್ದವು.

     

    ದಿಲೀಪ್ ಧವನ್ ಜೊತೆ ತುಟಿಗೆ ಮುತ್ತಿಟ್ಟ ನೀನಾ ಇಡೀ ರಾತ್ರಿ ನಿದ್ದೆ ಮಾಡಲಿಲ್ಲವಂತೆ. ಇಷ್ಟ ಇಲ್ಲದ ನಟನ ಜೊತೆ ಕಿಸ್ ಮಾಡಿದ್ದಕ್ಕೆ ಫುಲ್ ಬಾಟಲ್ ಡೆಟಾಲ್‌ನಿಂದ ಬಾಯಿ ತೊಳೆದುಕೊಂಡಿದ್ದರಂತೆ. ಅದೃಷ್ಟವೋ ದುರದೃಷ್ಟವೋ? ಜನರು ರೊಚ್ಚೆಗೆದ್ದು ರಾಡಿ ನೀರು ಎರಚಬಾರದೆಂದು ನಿರ್ದೇಶಕ ಆ ದೃಶ್ಯಕ್ಕೆ ಕತ್ತರಿ ಹಾಕಿಬಿಟ್ಟ. ಅದನ್ನು ಇಷ್ಟು ವರ್ಷಗಳ ನಂತರ ನೆನೆದಿದ್ದಾರೆ ನೀನಾ. ಈಕೆ ಬೇರೆ ಯಾರೂ ಅಲ್ಲ, ವೆಸ್ಟ್ ಇಂಡೀಸ್ ಮಾಜಿ ಸ್ಟಾರ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಮಗುವಿನ ತಾಯಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಬಾಲಿವುಡ್ ನ ವಿವಾದಿತ ಸಿನಿಮಾ ವಿಮರ್ಶಕನೆಂದೇ ಖ್ಯಾತನಾಗಿರುವ ಉಮೈರ್ ಸಂಧು (Umair Sandhu) , ಮೊದ ಮೊದಲು ಸಿನಿಮಾ ರಿಲೀಸ್ ಗೂ ಮುನ್ನ ಚಿತ್ರದ ಬಗ್ಗೆ ವಿಮರ್ಶೆ ಮಾಡಿ ಸಂಚಲನ ಸೃಷ್ಟಿಸುತ್ತಿದ್ದ. ಅದರಲ್ಲೂ ವಿದೇಶದಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ನಾನು ಸೆನ್ಸಾರ್ ಮಂಡಳಿಯ ಸದಸ್ಯನೆಂದು ಹೇಳಿಕೊಂಡು, ರಿಲೀಸ್ ಗೂ ಮುನ್ನವೇ ಚಿತ್ರ ವಿಮರ್ಶೆ ಪ್ರಕಟಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಉಮೈರ್ ಸಿಲೆಬ್ರಿಟಿಗಳ ಹಿಂದೆ ಬಿದ್ದಿದ್ದಾನೆ.

    ಉಮೈರ್ ಸಂಧು ಸಿಲೆಬ್ರಿಟಿಗಳ ಬಗ್ಗೆ ಕಾಮೆಂಟ್ ಮಾಡುವುದು, ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಹೊಸದೇನೂ ಅಲ್ಲ. ಈವರೆಗೂ ಬಾಲಿವುಡ್ ನಟ ನಟಿಯರ ಬಗ್ಗೆ ಕಾಮೆಂಟ್ ಮಾಡುತ್ತಿದ್ದವರು. ಇದೀಗ ದಕ್ಷಿಣದ ತಾರೆಯರ ಹಿಂದೆ ಬಿದ್ದಿದ್ದಾರೆ. ಈ ಬಾರಿ ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ಬಗ್ಗೆ ಟ್ವೀಟ್ ಮಾಡಿದ್ದಾರೆ ಉಮೈರ್. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ಶ್ರುತಿ ಹಾಸನ್ (Shruti Haasan) ಬಗ್ಗೆ ಟ್ವೀಟ್ ಮಾಡಿರುವ ಉಮೈರ್, ‘ಶ್ರುತಿ ಹಾಸನ್ ಸೈಕೋ (Psycho) ವುಮನ್. ಅವರು ಇತ್ತೀಚಿನ ದಿನಗಳಲ್ಲಿ ಆಂಟಿ ಡಿಪ್ರೆಸೆಂಟ್ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಅವರ ಬಾಯ್ ಫ್ರೆಂಡ್ ಜೊತೆ ನಿತ್ಯವೂ ಅವರು ಡ್ರಗ್ಸ್ (Drugs) ಸೇವಿಸುತ್ತಾರೆ. ನಿನ್ನೆ ರಾತ್ರಿ ಕೂಡ ಶ್ರುತಿ ಅವರು ತಮ್ಮ ತಂದೆ ಕಮಲ್ ಹಾಸನ್ ಜೊತೆ ಜಗಳ ಮಾಡಿಕೊಂಡಿದ್ದರು’ ಎಂದು ಟ್ವೀಟ್ ಮಾಡಿದ್ದಾರೆ.

     

    ಉಮೈರ್ ಸಂಧು ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಅನೇಕರು ಈ ಟ್ವೀಟ್ ಗೆ ಕಾಮೆಂಟ್ ಮಾಡಿದ್ದಾರೆ. ಶ್ರುತಿ ಹಾಸನ್ ಅವರು ಶಂತನು ಹಜಾರಿಕಾ (Shantanu Hazarika) ಅವರ ಜೊತೆ ಡೇಟಿಂಗ್ ಮಾಡುತ್ತಿರುವುದು ಗುಟ್ಟಿನ ವಿಚಾರವೇನೂ ಅಲ್ಲ. ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಡ್ರಗ್ಸ್ ತೆಗೆದುಕೊಳ್ಳುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ವಿಜಯ್ ನಟನೆಯ ‘ಲಿಯೋ’ ಚಿತ್ರದ ಹಾಡಿನ ವಿರುದ್ಧ ದೂರು

    ವಿಜಯ್ ನಟನೆಯ ‘ಲಿಯೋ’ ಚಿತ್ರದ ಹಾಡಿನ ವಿರುದ್ಧ ದೂರು

    ಳೆದ ಜೂನ್ 22 ರಂದು ಕಾಲಿವುಡ್​ನ ಜನಪ್ರಿಯ ನಟ ವಿಜಯ್​ (Dalpati Vijay) ಹುಟ್ಟುಹಬ್ಬದ ಪ್ರಯುಕ್ತ ‘ಲಿಯೋ’ (Leo) ಚಿತ್ರತಂಡದವರು ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ವಿಜಯ್​ ಅವರಿಗೆ ಶುಭಾಶಯ ಕೋರಿದ್ದರು. ಜೊತೆಗೆ ಸಿನಿಮಾದ ಮೊದಲ ಲಿರಿಕಲ್​ ಹಾಡು (Song) ಬಿಡುಗಡೆ ಮಾಡಿದ್ದರು.

    ‘ನಾ ರೆಡಿದಾ ವರವಾ’ (Na Redida Varava) ಎಂಬ ಲಿರಿಕಲ್​ ಹಾಡು ಅಂದು ಬಿಡುಗಡೆ ಆಗಿತ್ತು. ಅದೇ ಹಾಡು ಇದೀಗ ವಿವಾದಕ್ಕೂ ಕಾರಣವಾಗಿದೆ. ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಕೆಲವರ ವಿಚಾರಣೆ ಹಾಗೂ ಬಂಧನ ಕೂಡ ನಡೆದಿದೆ. ಈ ಹೊತ್ತಿನಲ್ಲಿ ಹಾಡಿನಲ್ಲಿ ಡ್ರಗ್ಸ್ (Drugs) ಪ್ರಚೋದಿಸುವಂತಹ ಸನ್ನಿವೇಶಗಳು ಇವೆಯಂತೆ. ಹಾಗಾಗಿ ಈ ಹಾಡಿನ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಸೆಲ್ವಂ ಅನ್ನುವವರು ದೂರು (Complaint) ನೀಡಿದ್ದು, ಮಾದಕ ಕ್ರಮ ನಿಯಂತ್ರಣ ತಡೆ ಕಾಯ್ದೆ ಅನ್ವಯ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

    ನಾ ರೆಡಿದಾ ವರವಾ ಹಾಡಿಗೆ ವಿಜಯ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್​ ಸಾಹಿತ್ಯ ರಚಿಸಿದ್ದು, ವಿಜಯ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಿಲಿಯನ್​ಗಳಿಗೂ ಹೆಚ್ಚು ವೀಕ್ಷಣೆ ಕಂಡಿತ್ತು. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್​ ಕನಕರಾಜ್​ (Lokesh Kanakaraj) ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡುತ್ತಿರುವ ‘ಲಿಯೋ’ ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಲಲಿತ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಇನ್ನು, ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನೂ ರಚಿಸಿದ್ದಾರೆ ವಿಜಯ್​.

     

    ‘ಲಿಯೋ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಅಕ್ಟೋಬರ್​ 19ರಂದು ಐದು ಭಾಷೆಗಳಲ್ಲಿ  ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಬಾಲಿವುಡ್​ ನಟ ಸಂಜಯ್​ ದತ್​ ಈ ಚಿತ್ರದ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದು, ವಿಜಯ್​ ಮತ್ತು ಸಂಜಯ್​ ದತ್​ ಜೊತೆಗೆ ತ್ರಿಷಾ, ಅರ್ಜುನ್‌ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್‌ ಅಲಿ ಖಾನ್‌, ಗೌತಮ್​ ಮೆನನ್​, ಮಿಸ್ಕಿನ್​ ಮುಂತದವರು ಅಭಿನಯಿಸುತ್ತಿದ್ದಾರೆ.

  • ತೆಲುಗು ಚಿತ್ರೋದ್ಯಮದಲ್ಲಿ ಡ್ರಗ್ಸ್ : ಕೇಳಿ ಬಂತು ಮತ್ತೋರ್ವ ನಟಿ ಹೆಸರು

    ತೆಲುಗು ಚಿತ್ರೋದ್ಯಮದಲ್ಲಿ ಡ್ರಗ್ಸ್ : ಕೇಳಿ ಬಂತು ಮತ್ತೋರ್ವ ನಟಿ ಹೆಸರು

    ತೆಲುಗು (Telugu) ಚಿತ್ರೋದ್ಯಮದಲ್ಲಿ ಡ್ರಗ್ಸ್ ಪ್ರಕರಣ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಸೂಪರ್ ಹಿಟ್ ಸಿನಿಮಾ ‘ಕಬಾಲಿ’ (Kabali) ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆದ ನಂತರ ದಿನಕ್ಕೊಬ್ಬರ ಹೆಸರು ಆಚೆ ಬರುತ್ತಿದೆ. ಚೌಧರಿ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ತೆಲುಗಿನ ಖ್ಯಾತ ನಟಿ ಸುರೇಖಾ ವಾಣಿ (Surekha Vani) ಹೆಸರು ಇದೀಗ ವೈರಲ್ ಆಗಿದೆ.

    ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದವರು ಸುರೇಖಾ ವಾಣಿ. ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇವರು ಅರೆಸ್ಟ್ ಆಗಿರುವ ಕೆ.ಪಿ ಚೌಧರಿಗೆ ಆಪ್ತರು ಎಂದು ಹೇಳಲಾಗುತ್ತಿದೆ.  ಆಪ್ತವಾಗಿರುವ ಫೋಟೋವನ್ನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಚೌಧರಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋ ಇದೀಗ ಸುರೇಖಾ ವಾಣಿಗೆ ಮುಳುವಾಗಿದೆ.

    ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಸುರೇಖಾ ವಾಣಿ, ‘ನನ್ನ ಹೆಸರು ಸುಖಾಸುಮ್ಮನೆ ಡ್ರಗ್ಸ್ ಕೇಸ್ ನಲ್ಲಿ ಕೇಳಿ ಬರುತ್ತಿದೆ. ಫೋಟೋ ವೈರಲ್ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಯ ಜೊತೆ ಆಪ್ತವಾಗಿ ಇದ್ದೇವೆ ಅಂದರೆ, ನಾವೂ ಡ್ರಗ್ಸ್ ತಗೆದುಕೊಳ್ಳುತ್ತೇವೆ ಎಂಬರ್ಥವಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಹೆಸರು ಹಾಳು ಮಾಡಬೇಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ತೆಲುಗು ನಟಿ ಅಶು ರೆಡ್ಡಿ (Ashu Reddy) ಹೆಸರು ಕೇಳಿ ಬಂದಿತ್ತು. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ನಿರ್ಮಾಪಕ ಕೆಪಿ ಚೌಧರಿ ಅವರು ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.  ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.

     

    ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

  • ಕಾಲಿವುಡ್ ಡ್ರಗ್ಸ್ ಕೇಸ್ ನಟಿ ಅಶು ರೆಡ್ಡಿ ಹೆಸರು ಬೆನ್ನಲ್ಲೇ ಇನ್ನೂ ಅನೇಕರಿಗೆ ನಡುಕ

    ಕಾಲಿವುಡ್ ಡ್ರಗ್ಸ್ ಕೇಸ್ ನಟಿ ಅಶು ರೆಡ್ಡಿ ಹೆಸರು ಬೆನ್ನಲ್ಲೇ ಇನ್ನೂ ಅನೇಕರಿಗೆ ನಡುಕ

    ಸೂಪರ್ ಹಿಟ್ ಸಿನಿಮಾ ‘ಕಬಾಲಿ’ (Kabali) ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗುವ ಮೂಲಕ ಕಾಲಿವುಡ್ (Kollywood) ಗೆ ಶಾಕ್ ನೀಡಿದ್ದರು. ಈ ಬಂಧನ ಕಾಲಿವುಡ್ ನಲ್ಲೇ ಸಾಕಷ್ಟು ಸಂಚಲನ ಮೂಡಿಸಿತ್ತು. ಈಗ ಅದೇ ಚೌಧರಿ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅಶು ರೆಡ್ಡಿ (Ashu Reddy) ಹೆಸರು ಕೇಳಿ ಬಂದಿದೆ ಎಂದು ಹೇಳಲಾಗಿತ್ತು. ಅಶು ರೆಡ್ಡಿ ಹೆಸರು ಆಚೆ ಬರುತ್ತಿದ್ದಂತೆಯೇ ಸಾಕಷ್ಟು ಜನರಿಗೆ ನಡುಕ ಶುರುವಾಗಿದೆ.

    ನಟಿ ಅಶು ರೆಡ್ಡಿ ಈಗ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ ಅವರು ಡ್ರಗ್ (Drugs) ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.

    ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

    ಈ ಹಿಂದೆ ಇದೇ ಅಶು ರೆಡ್ಡಿ ಜೊತೆ ರಾಮ್ ಗೋಪಾಲ್ ವರ್ಮಾ(Ram Gopal Varma)  ಕಾಣಿಸಿಕೊಂಡಿದ್ದರು. ಅಶು ರೆಡ್ಡಿ ಅಚರ ಪಾದ ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಶೇರ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಆರ್‌ಜಿವಿ ಮತ್ತು ಅಶು ರೆಡ್ಡಿ ಭಾಗಿಯಾಗಿದ್ದರು. ಸಂದರ್ಶನದ ಬಳಿಕ ಅಶು ರೆಡ್ಡಿ ಅವರ ಕಾಲ ಬುಡದಲ್ಲಿ ಆರ್‌ಜಿವಿ ಕುಳಿತು ಆಕೆಯನ್ನ ಗುರಾಯಿಸುತ್ತಿರುವ ಫೋಟೋವನ್ನ ಆರ್‌ಜಿವಿ ಶೇರ್ ಮಾಡಿದ್ದು, ಫೋಟೋಗೆ ಭಾರಿ ಕಾಮೆಂಟ್ ಹರಿದು ಬಂದಿತ್ತು.

     

    ಅಶು ರೆಡ್ಡಿ ಸೋಫಾದ ಮೇಲೆ ಕುಳಿತಿದ್ದರು. ಅವರ ಹಿಡಿದು ಕುಳಿತಿರುವ ಆರ್‌ಜಿವಿ, ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್ ಎಂದು ಆರ್‌ಜಿವಿ ಫೋಟೋ ಜತೆ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ಅಶು ರೆಡ್ಡಿ ಜೊತೆ ಯಾರೆಂಬ ಕಾಂಟ್ಯಾಕ್ಟ್ ನಲ್ಲಿದ್ದರೋ ಅವರಿಗೆಲ್ಲ ವಿಚಾರಣೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

  • ‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಕಾಲಿವುಡ್‌ನ ‘ಕಬಾಲಿ’ (Kabali) ಸಿನಿಮಾದ ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಅವರು ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನ ನಿರ್ಮಾಪಕ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅಶು ರೆಡ್ಡಿ (Ashu Reddy) ಅವರ ಹೆಸರು ಕೇಳಿ ಬರುತ್ತಿದೆ.

    ನಟಿ ಅಶು ರೆಡ್ಡಿ ಈಗ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ ಅವರು ಡ್ರಗ್ (Drugs) ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಸೀಕ್ರೆಟ್ ಡೇಟಿಂಗ್‌ಗೆ ಸಿಕ್ತು ಸಾಕ್ಷಿ

    ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

  • ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಗಾಂಜಾ ಮಾರಾಟ – ಜಾರ್ಖಂಡ್‍ನ 3 ಮಹಿಳೆಯರ ಬಂಧನ

    ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಗಾಂಜಾ ಮಾರಾಟ – ಜಾರ್ಖಂಡ್‍ನ 3 ಮಹಿಳೆಯರ ಬಂಧನ

    ಬೆಂಗಳೂರು: ಹೊರ ರಾಜ್ಯದಿಂದ ಕರ್ನಾಟಕಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಮಹಿಳಾ ಡ್ರಗ್ (Drugs) ಪೆಡ್ಲರ್‌ಗಳನ್ನು ಪುಲಿಕೇಶಿನಗರ (Pulikeshi Nagar) ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಪ್ರೇಮಾ, ಸುನೀತಾ ಮತ್ತು ಮುತ್ಯಾಲಮ್ಮ ಎಂದು ಗುರುತಿಸಲಾಗಿದೆ. ಆರೋಪಿಗಳು ಜಾರ್ಖಂಡ್ (Jharkhand) ಗುಡ್ಡಗಾಡು ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿದ್ದರು. ಬಳಿಕ ಅದನ್ನು ಬೆಂಗಳೂರಿಗೆ (Bengaluru) ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಉರುಳಿಸಲಾಗಿದೆ: 1700 ಕೋಟಿಯ ಸೇತುವೆ ಕುಸಿತಕ್ಕೆ ಬಿಹಾರ ಡಿಸಿಎಂ ಸಮರ್ಥನೆ

    ಕಾಲೇಜು ವಿದ್ಯಾರ್ಥಿಗಳನ್ನು (Students) ಟಾರ್ಗೆಟ್ ಮಾಡಿದ್ದ ಆರೋಪಿಗಳು ಸಣ್ಣ ಸಣ್ಣ ಪ್ಯಾಕೆಟ್‍ಗಳನ್ನು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು. ಅಲ್ಲದೆ ಕೆಲ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರತಿಭಟನೆಯಿಂದ ಹಿಂದೆ ಸರಿದ ಕುಸ್ತಿಪಟುಗಳು – ಮರಳಿ ರೈಲ್ವೇ ಉದ್ಯೋಗಕ್ಕೆ