Tag: drugs

  • ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ತಿರುವನಂತಪುರಂ: ಡ್ರಗ್ಸ್ ನಿಗ್ರಹ ದಳ ಹಾಗೂ ಅಬಕಾರಿ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆ.ಜಿ. ಡ್ರಗ್ಸ್ ಅನ್ನು ಕೊಚ್ಚಿಯ ಕೊರಿಯರ್ ಸೆಂಟರ್ ನಲ್ಲಿ ವಶಪಡಿಸಿಕೊಂಡಿದೆ.

    ಖಚಿತ ಮಾಹಿತಿ ಆಧರಿಸಿ ಕೇರಳದ ಮಾದಕ ದ್ರವ್ಯ ನಿಗ್ರಹ ಪಡೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಕೊಚ್ಚಿಯ ಖಾಸಗಿ ಕೊರಿಯರ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಮಾದಕ ದ್ರವ್ಯದ 64 ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಡ್ರಗ್ಸ್ ದಂಧೆಕೋರರು ಪ್ಯಾಕೆಟ್‍ಗಳನ್ನು ಬಟ್ಟೆಯಲ್ಲಿ ಸುತ್ತಿ ಬಾಕ್ಸ್‍ಗಳಲ್ಲಿ ಬಚ್ಚಿಟ್ಟಿದ್ದರು. ಅಲ್ಲದೇ ಸಾಗಾಣಿಕೆಯ ಹಿಂದೆ ಕೊರಿಯರ್ ಸೆಂಟರ್‍ನ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ಎರ್ನಾಕುಲಂನ ವಿಭಾಗೀಯ ಉಪ ಅಬಕಾರಿ ಆಯುಕ್ತ ಎ.ಎಸ್.ರಂಜಿತ್ ಹೇಳಿದ್ದಾರೆ.

    ಅಬಕಾರಿ ಆಯುಕ್ತ ರಿಶಿ ರಾಜ್ ಸಿಂಗ್ ಮಾತನಾಡಿ, ಡ್ರಗ್ಸ್ ದಂಧೆಕೋರರು ಅಕ್ರಮವಾಗಿ ಮಾದಕ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಹೊಂದಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಭಾರೀ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೇ ದಂಧೆಕೋರರು ಯಾವ ರೀತಿ ಇವುಗಳನ್ನು ರಫ್ತು ಮಾಡುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿಯಲಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಾಲಯಕ್ಕೆ ಮುಗಿಬೀಳುತ್ತಿದ್ದ ವಿದ್ಯಾರ್ಥಿಗಳು: ಅನುಮಾನದಿಂದ ನೋಡಿದಾಗ ಬಯಲಾಯ್ತು ಡ್ರಗ್ಸ್ ದಂಧೆ!

    ದೇವಾಲಯಕ್ಕೆ ಮುಗಿಬೀಳುತ್ತಿದ್ದ ವಿದ್ಯಾರ್ಥಿಗಳು: ಅನುಮಾನದಿಂದ ನೋಡಿದಾಗ ಬಯಲಾಯ್ತು ಡ್ರಗ್ಸ್ ದಂಧೆ!

    ಬೀದರ್: ಮನೆಯಲ್ಲಿಯೇ ಚಿಕ್ಕ ದೇವಾಲಯವನ್ನು ನಿರ್ಮಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಟೋರಿಯಸ್ ತಂಡವನ್ನು ಭೇದಿಸುವಲ್ಲಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಭಾಲ್ಕಿ ಪಟ್ಟಣದ ಬಸವನಗರ ಬಡಾವಣೆಯ ರೇಣುಕಾ ಜಲ್ದೆಯು ಮನೆಯಲ್ಲೇ ದೇವಾಲಯ ನಿರ್ಮಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ನಶೆ ಏರಿಸುವ ಡ್ರಗ್ಸ್ ಮಾರಾಟಮಾಡುತ್ತಿದ್ದಳು. ಇದರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಿಲ್ಲಾಧಿಕಾರಿ ಶಿವಪ್ರಕಾಶ್ ಹಾಗೂ ಡ್ರಗ್ಸ್ ನಿಯಂತ್ರಣ ಅಧಿಕಾರಿ ಶರಣಬಸಪ್ಪ ಸೇರಿದಂತೆ ಅಧಿಕಾರಿಗಳ ತಂಡ ಭಾನುವಾರ ದಾಳಿ ನಡೆಸಿದೆ.

    ದಾಳಿ ವೇಳೆ ಮನೆಯಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಮತ್ತೇರಿಸುವ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ರೇಣುಕಾ ಜಲ್ದೆಯನ್ನು ಬಂಧಿಸಿದ್ದು, ದಂಧೆಯ ಪ್ರಮುಖ ರೂವಾರಿ ಆಕೆಯ ಗಂಡ ಸಂಜೀವ ಕುಮಾರನಿಗಾಗಿ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದಾರೆ.

    ಪತ್ತೆಯಾಗಿದ್ದು ಹೇಗೆ?
    ಮನೆಯಲ್ಲೇ ಸಣ್ಣದಾದ ದೇವಸ್ಥಾನ ನಿರ್ಮಿಸಿಕೊಂಡಿದ್ದ ದಂಧೆಕೋರರು, ಅಂಗಳದಲ್ಲಿನ ತುಳಸಿ ಗಿಡದ ಪಕ್ಕದ ಪೊದೆಯೊಂದರಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡಿದ್ದರು. ದರ್ಶನದ ನೆಪ ಹೇಳಿ ಬರುತ್ತಿದ್ದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತಿತ್ತು. ಮೇಲ್ನೋಟಕ್ಕೆ ಸ್ಥಳೀಯರಿಗೆ ದೇವಸ್ಥಾನಕ್ಕೆ ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದಿನೇ ದಿನೇ ವಿದ್ಯಾರ್ಥಿಗಳು ಹಾಗೂ ಯುವಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಂಸ್ಕೃತಿಕ ನಗರಿಯನ್ನ ಬೆಚ್ಚಿ ಬೀಳಿಸುವ ಡ್ರಗ್ಸ್ ಮಾರಾಟ ಜಾಲ ಪತ್ತೆ – 18 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಸಾಂಸ್ಕೃತಿಕ ನಗರಿಯನ್ನ ಬೆಚ್ಚಿ ಬೀಳಿಸುವ ಡ್ರಗ್ಸ್ ಮಾರಾಟ ಜಾಲ ಪತ್ತೆ – 18 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಮೈಸೂರು: ಸಾಂಸ್ಕೃತಿಕ ನಗರಿಯನ್ನ ಬೆಚ್ಚಿ ಬೀಳಿಸುವ ಡ್ರಗ್ಸ್ ಮಾರಾಟ ಜಾಲ ಬೆಳಕಿಗೆ ಬಂದಿದೆ. ಭಾರತದಲ್ಲಿ ನಿಷೇಧಿತ ಖಾಟ್ ಡ್ರಗ್ಸ್ ಮಾರಾಟಕ್ಕೆ ಮುಂದಾಗಿದ್ದ ವಿದೇಶಿಗನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಿರುವ ವಿದೇಶಿ ವಿದ್ಯಾರ್ಥಿಗಳಿಂದ ಈ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಸರ್ಕಾರಿ ಕೊರಿಯರ್ ಗಳನ್ನೆ ಡ್ರಗ್ಸ್ ಸಾಗಣಿಕೆಗೆ ದಂಧೆಕೋರರು ಬಳಸಿಕೊಂಡಿದ್ದಾರೆ.

    ಕೊರಿಯರ್ ಮೂಲಕ ಖಾಟ್ ಡ್ರಗ್ಸ್ ನ್ನು ಮುಂಬೈಗೆ ಕಳುಹಿಸುವಾಗ ಯಮನ್ ದೇಶದ ಆಮ್ಜಾ ಅಬ್ದೋವ ಖಾಸಿಂ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. 3 ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದ ಆಮ್ಜಾ ಯಮನ್ ದೇಶದಿಂದ ಕೊರಿಯರ್ ಮೂಲಕವೇ ಖಾಟ್ ಡ್ರಗ್ಸ್ ತರಿಸಿದ್ದಾನೆ. ಈತನ ಬಳಿ ಇದ್ದ ಸುಮಾರು 7 ಕೆ.ಜಿ ತೂಕದ ಖಾಟ್ ಡ್ರಗ್ಸ್ ವಶ ಪಡಿಸಿಕೊಳ್ಳಲಾಗಿದೆ.

    ಒಂದು ಕೆ.ಜಿ. ಖಾಟ್ ಬೆಲೆ ಬರೋಬ್ಬರಿ 2.60 ಲಕ್ಷ ರೂ ಇದ್ದು ಒಟ್ಟು 18 ಲಕ್ಷ ಮೌಲ್ಯದ ಖಾಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ವಿದೇಶಿ ವಿದ್ಯಾರ್ಥಿಗಳ ಅಕ್ರಮ ವಿಸಾ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ವಿದೇಶಿ ವಿದ್ಯಾರ್ಥಿಗಳಿಂದಲೇ ಡ್ರಗ್ಸ್ ಮಾರಾಟ ಜಾಲ ಬೆಳಕಿಗೆ ಬಂದಿದೆ.

  • ಡೋಪ್ ಟೆಸ್ಟ್‌ಗೆ  ನಾನು ರೆಡಿ- ಆಪ್ ಮುಖಂಡನ ಚಾಲೆಂಜ್ ಸ್ವೀಕರಿಸಿದ ಪಂಜಾಬ್ ಸಿಎಂ

    ಡೋಪ್ ಟೆಸ್ಟ್‌ಗೆ ನಾನು ರೆಡಿ- ಆಪ್ ಮುಖಂಡನ ಚಾಲೆಂಜ್ ಸ್ವೀಕರಿಸಿದ ಪಂಜಾಬ್ ಸಿಎಂ

    ಚಂಡೀಗಢ: ಸರ್ಕಾರಿ ನೌಕರರಿಗೆ ಡೋಪ್ ಟೆಸ್ಟ್ ಕಡ್ಡಾಯಗೊಳಿಸಿ ಆದೇಶ ನೀಡಿದ ಬಳಿಕ ನಾನು ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.

    ಪಂಜಾಬ್ ರಾಜ್ಯವನ್ನು ಡಗ್ಸ್ ಮುಕ್ತ ರಾಜ್ಯವಾಗಿ ರೂಪಿಸಲು ಪಣತೊಟ್ಟಿರುವ ಸಿಎಂ ಅಮರಿಂದರ್ ಸಿಂಗ್ ಕಳೆದ ಎರಡು ದಿನಗಳ ಹಿಂದೆ ಎಲ್ಲಾ ಸರ್ಕಾರಿ ನೌಕರರಿಗೆ ಡೋಪಿಂಗ್ ಟೆಸ್ಟ್ ಕಡ್ಡಾಯ ಮಾಡಿ ಆದೇಶ ನೀಡಿದ್ದರು. ಆದರೆ ಸರ್ಕಾರದ ಈ ಆದೇಶಕ್ಕೆ ವಿರೋಧ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

    ಸದ್ಯ ತಾವು ಡೋಪಿಂಗ್ ಪರೀಕ್ಷೆ ಎದುರಿಸಲು ಸಿದ್ಧ ಎಂದು ವಿರೋಧಿ ಪಕ್ಷಗಳಿಗೆ ಟಾಂಗ್ ನೀಡಿರುವ ಸಿಎಂ ಅಮರಿಂದರ್ ಸಿಂಗ್, ಸರ್ಕಾರಿ ನೌಕರರು ಈ ಪರೀಕ್ಷೆ ಎದುರಿಸಲು ನಾನು ಮೊದಲು ಡೋಪಿಂಗ್ ಪರೀಕ್ಷೆ ಮಾಡಿಕೊಳ್ಳುತ್ತೇನೆ. ಈ ಮೂಲಕ ನೌಕರರಲ್ಲಿ ಇರುವ ಭಾವನೆಯನ್ನು ದೂರ ಮಾಡಲು ಯತ್ನಿಸಲು ಸಿದ್ಧ ಎಂದು ಹೇಳಿದ್ದಾರೆ.

    ಇದೇ ವೇಳೆ ರಾಜ್ಯದ ರಾಜಕೀಯ ಮುಖಂಡರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಇದುವರೆಗೂ ಯಾವೊಬ್ಬ ರಾಜಕೀಯ ನಾಯಕರು ಸಹ ಸ್ವತಃ ಡೋಪಿಂಗ್ ಪರೀಕ್ಷೆಗೆ ಒಳಗಾಗುವುದಾಗಿ ಕೈ ಎತ್ತಿಲ್ಲ. ನನ್ನ ಬಳಿಕವಾದರೂ ಶಾಸಕರು ಪರೀಕ್ಷೆ ಎದುರಿಸಲು ಸಿದ್ಧವಾದರೆ ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಸ್ವತಃ ಡೋಪ್ ಪರೀಕ್ಷೆಗೆ ಒಳಗಾಗಿದ್ದ ಆಪ್ ನಾಯಕ ಅಮನ್ ಆರೋರಾ ನೈತಿಕ ಮೌಲ್ಯದ ಮೇಲೆ ಪರೀಕ್ಷೆ ಎದುರಿಸಿದ್ದೇನೆ. ಸಾಧ್ಯವಾದರೆ ಸಿಎಂ ಹಾಗೂ ಆಡಳಿತ ಪಕ್ಷದ ಶಾಸಕರು ಪರೀಕ್ಷೆ ಎದುರಿಸಲಿ ಎಂದು ಚಾಲೆಂಜ್ ಮಾಡಿದ್ದರು. ಅಲ್ಲದೇ ಸರ್ಕಾರದ ನೀತಿಯ ವಿರುದ್ಧ ನನಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಇದು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಏಕೆ ಅನ್ವಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಏನಿದು ಡೋಪ್ ಟೆಸ್ಟ್ ಆದೇಶ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ಕಳ್ಳಸಾಗಣೆ ಕುರಿತು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿ, ಡ್ರಗ್ಸ್ ಕಳ್ಳಸಾಗಾಣೆ ಮಾಡುವವರಿಗೆ ಮರಣ ದಂಡನೆ ವಿಧಿಸುವ ನಿಯಮವನ್ನು ಜಾರಿಗೆ ತರುವ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಆದಾದ ಬಳಿಕ ಉಂಟಾದ ಬೆಳವಣಿಗೆಯಲ್ಲಿ ಸರ್ಕಾರಿ ನೌಕರರಿಗೆ ಎಲ್ಲರಿಗೂ ಡೋಪಿಂಗ್ ಪರೀಕ್ಷೆ ಕಡ್ಡಾಯಗೊಳಿಸಿದ್ದರು. ಪ್ರಮುಖವಾಗಿ ಸೇವೆಯ ವಿವಿಧ ಹಂತಗಳಲ್ಲಿ ಇದನ್ನು ನಿರಂತವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದರು. ಅಲ್ಲದೇ ಸರ್ಕಾರಿ ಸೇವೆ ಸೇರುವ ಹಾಗೂ ಭಡ್ತಿ ವೇಳೆಯೂ ಡೋಪಿಂಗ್ ಪರೀಕ್ಷೆ ಕಡ್ಡಾಯಗೊಳಿಸಿದ್ದರು.

  • ಡ್ರಗ್ಸ್ ಬದಲು ಚಿನ್ನ ಕಳ್ಳಸಾಗಣೆ ಮಾಡಿ: ರಾಜಸ್ಥಾನ ಶಾಸಕ ಪ್ರಚೋದನಾಕಾರಿ ಹೇಳಿಕೆ ವೈರಲ್!

    ಡ್ರಗ್ಸ್ ಬದಲು ಚಿನ್ನ ಕಳ್ಳಸಾಗಣೆ ಮಾಡಿ: ರಾಜಸ್ಥಾನ ಶಾಸಕ ಪ್ರಚೋದನಾಕಾರಿ ಹೇಳಿಕೆ ವೈರಲ್!

    ಜೈಪುರ: ಡ್ರಗ್ಸ್ ಕಳ್ಳಸಾಗಣೆ ಮಾಡುವ ಬದಲು ಚಿನ್ನ ಕಳ್ಳ ಸಾಗಣೆ ಮಾಡಿ ಎಂದು ರಾಜಸ್ಥಾನದ ಜೋಧಪುರ ಜಿಲ್ಲೆಯ ಬಿಲಾರ ಕ್ಷೇತ್ರದ ಬಿಜೆಪಿ ಶಾಸಕ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.

    ರಾಜ್ಯದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಅತಿ ಹೆಚ್ಚು ನಡೆಯುತ್ತಿದ್ದು, ಯುವ ಪೀಳಿಗೆ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಳ್ಳಸಾಗಣೆಯಲ್ಲಿ ಬಿಶೋಯಿ ಸಮುದಾಯಕ್ಕಿಂತ ಹೆಚ್ಚು ದೇವಾಸಿ ಸಮುದಾಯದವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾದಕ ದ್ರವ್ಯ ಕಳ್ಳಸಾಗಾಣಿಕೆಯಲ್ಲಿ ಸೆರೆ ಸಿಕ್ಕ ಇವರನ್ನು ಮಾದಕ ದ್ರವ್ಯ ಕೇಸ್ ಅಡಿಯಲ್ಲಿ ಬಂಧಿಸಿ ಜೋಧಪುರ ಜೈಲಿನಲ್ಲಿ ಇರಿಸಲಾಗಿದೆ.

    ಏನಿದು ವಿಡಿಯೋ?
    ಬಿಲಾರ ಕ್ಷೇತ್ರದ ಬಿಜೆಪಿ ಶಾಸಕ ಅರ್ಜುನ್ ಲಾಲ್ ಜಾರ್ಜ್ ರವರು ಕಳೆದ ಮೇ 7ರಂದು ಜೈತ್ವಾಸ್ ಗ್ರಾಮದ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ದೇವಾಸಿ ಸಮುದಾಯವನ್ನು ಕುರಿತು ಹೇಳಿಕೆ ನೀಡಿದ್ದಾರೆ. ನೀವು ಡ್ರಗ್ಸ್ ಕಳ್ಳಸಾಗಣೆ ಮಾಡುವ ಬದಲು ಚಿನ್ನ ಕಳ್ಳ ಸಾಗಣೆ ಮಾಡಿ ಎಂದಿದ್ದಾರೆ. ಚಿನ್ನ ಮತ್ತು ಡ್ರಗ್ಸ್ ಬೆಲೆಗಳು ಒಂದೇ ಆಗಿದೆ. ಈ ಡ್ರಗ್ಸ್ ಕೇಸ್‍ನಲ್ಲಿ ನಿಮಗೆ ಯಾವುದೇ ಕಾರಣಕ್ಕೂ ಬೇಲ್ ಸಿಗುವುದಿಲ್ಲ, ಚಿನ್ನದ ಕಳ್ಳಸಾಗಣೆಯಲ್ಲಿ ನಿಮಗೆ ಬೇಲ್ ಸುಲಭವಾಗಿ ಸಿಗುವುದು. ಡ್ರಗ್ಸ್ ಕೇಸ್‍ನಲ್ಲಿ ಸಿಕ್ಕಿ ಬೀಳೊಕ್ಕಿಂತ ಚಿನ್ನ ಕದ್ದು ಸಿಕ್ಕಿ ಬಿದ್ರೆ ಮರ್ಯಾದೆ ಜಾಸ್ತಿ ಎಂದು ಹೇಳಿದ್ದಾರೆ. ಶಾಸಕರ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಕುರಿತಂತೆ ರೇಖಾ ಮಹಾ ಸಭಾದ ಜಿಲ್ಲಾ ಕಾರ್ಯದರ್ಶಿಯವರು ಜಾರ್ಜ್ ರವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ದೇವಾಸಿ ಸುಮುದಾಯದವರು ಹೆಮ್ಮೆ ಪಟ್ಟುಕೊಳ್ಳುವ ವಿಚಾರವಲ್ಲ ಹಾಗೂ ಯಾವುದೇ ಕಳ್ಳ ಸಾಗಣೆಯಲ್ಲಿ ಸಿಕ್ಕರೆ ಶಿಕ್ಷೆ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.

  • ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಬೆಂಂಗಳೂರು: ಮಕ್ಕಳು ಬ್ಯಾಗ್ ಯೂನಿಫಾರ್ಮ್ ಹಾಕ್ಕೊಂಡು ಸ್ಕೂಲಿಗೆ ಹೋಗುವಾಗ ಪೋಷಕರು ನೂರು ಕನಸು ಗರಿಗೆದರುತ್ತದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಭವಿಷ್ಯ ಮಾದಕ ವ್ಯಸನದೊಳಗೆ ಬಂಧಿಯಾಗುತ್ತಿದೆ. ಶಾಲಾ ಮಕ್ಕಳನ್ನೇ ಈ ಕೆಟ್ಟ ಜಾಲ ಟಾರ್ಗೆಟ್ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯೇ ಭಯಾನಕ ಸತ್ಯವನ್ನು ಹೊರಹಾಕಿದೆ.

    ಪಾನಿಪುರಿಯಲ್ಲಿ ಡ್ರಗ್ಸ್ ಹಾಕಿಕೊಡಲಾಗುತ್ತಿದೆ. ಬೆಂಗಳೂರು ಡ್ರಗ್ಸ್ ಜಾಲದ ಸಿಟಿಯಾಗಿದೆ ಎಂದು ಶಾಸಕ ವಿಜಯ್ ಕುಮಾರ್ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದಾಗ ಇದು ಸಾಧ್ಯನೇ ಇಲ್ಲ ಎಂದು ಹೇಳಿದ್ದರು. ಆದರೆ ಇದು ನಿಜ ಅಂತಾ ಆರೋಗ್ಯ ಇಲಾಖೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.

    ಶಾಲೆಯ ಅಕ್ಕಪಕ್ಕದಲ್ಲಿ ಪಾನಿಪುರಿಯೊಳಗೆ, ಐಸ್ ಕ್ರೀಂನಲ್ಲಿಯೇ ಮಕ್ಕಳಿಗೆ ಡ್ರಗ್ಸ್ ರುಚಿ ತೋರಿಸುವ ಜಾಲ ಬೆಳೆದಿದೆ. ಈ ಜಾಲದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಆದ್ದರಿಂದ ಈಗಾಗಲೇ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕೊಟ್ಟಿದ್ದು, ಶಾಲೆಯ ನೂರು ಮೀಟರ್ ಅಂತರದಲ್ಲಿರುವ ಅನುಮಾನಸ್ಪದ ಶಾಪ್, ಐಸ್‍ಕ್ರೀಂ ಪಾನೀಪುರಿ ಅಂಗಡಿಗಳ ಮೇಲೆ ಕಣ್ಣಿಡುವಂತೆ ಆದೇಶಿಸಿಲಾಗಿದೆ. ಅಲ್ಲದೇ ಪೋಷಕರಿಗೂ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಜಂಟಿ ಆಯುಕ್ತ ಹರ್ಷವರ್ಧನ್ ಹೇಳಿದ್ದಾರೆ.

    ಮಕ್ಕಳ ಬದುಕು ಕಸಿದುಕೊಳ್ಳುವ ಈ ಜಾಲದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಇದ್ದರೆ ದೂರು ನೀಡುವಂತೆ ಆಹಾರ ಸುರಕ್ಷತಾ ಇಲಾಖೆ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಸುರಕ್ಷತಾ ವಿಭಾಗ ತನಿಖಾಧಿಕಾರಿಗಳ ತಂಡ ರಚನೆ ಮಾಡಿಕೊಂಡು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿವೆ.

  • ಶಾಲೆಗೆ ಚಕ್ಕರ್ ಹಾಕಿ ಗಾಂಜಾ ಹೊಡೆಯುತ್ತಿದ್ದ ವಿದ್ಯಾರ್ಥಿಗಳು- ದೂರು ನೀಡಿದ್ದಕ್ಕೆ 5 ಮನೆಗಳ ಗಾಜು ಒಡೆದ್ರು

    ಶಾಲೆಗೆ ಚಕ್ಕರ್ ಹಾಕಿ ಗಾಂಜಾ ಹೊಡೆಯುತ್ತಿದ್ದ ವಿದ್ಯಾರ್ಥಿಗಳು- ದೂರು ನೀಡಿದ್ದಕ್ಕೆ 5 ಮನೆಗಳ ಗಾಜು ಒಡೆದ್ರು

    ಬೆಂಗಳೂರು: ಶಾಲೆಯಲ್ಲಿ ಮಕ್ಕಳು ವಿದ್ಯೆ ಕಲಿಯಲು ಬರುತ್ತಾರೆ. ಶಾಲೆಯನ್ನ ವಿದ್ಯಾದೇಗುಲ ಎಂದು ಪೂಜೆ ಮಾಡುತ್ತಾರೆ. ಅದರೆ ಅಂತಹ ಶಾಲೆಯಲ್ಲಿ ವಿದ್ಯಾರ್ಥಿಗಳು ಗಾಂಜಾ ಹೊಡೆದು ಪುಂಡಾಟ ನಡೆಸ್ತಾರೆ ಎಂದರೆ ಎಲ್ಲರೂ ಸಹ ಒಂದು ನಿಮಿಷ ಶಾಕ್ ಗೆ ಒಳಗಾಗ್ತಾರೆ.

    ಬೆಂಗಳೂರು ಹೊರವಲಯದ ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಗಾಂಜಾ ಹೊಡೆಯುವುದಲ್ಲದೇ ಶಾಲೆಗೆ ಚಕ್ಕರ್ ಹಾಕಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಶಾಲೆಗೆ ಸ್ಥಳೀಯರು ದೂರು ನೀಡಿದ್ದು, ನಮ್ಮ ಮೇಲೆ ದೂರು ಕೊಡುತ್ತೀರಾ ಎಂದು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದವರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಗಾಂಜಾ ಮತ್ತಿನಲ್ಲಿ 5 ಮನೆಗಳ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ.

    ಈ ಬಗ್ಗೆ ಶಾಲೆಯ ಪಕ್ಕದಲ್ಲಿಯೇ ಇರುವ ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶಾಲೆಗೆ ಹೋಗುವಾಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್, ಕೊಲೆ!

    ಶಾಲೆಗೆ ಹೋಗುವಾಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್, ಕೊಲೆ!

    ವಿಜಯಪುರ: ಗಾಂಜಾ ನಶೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರದ ಮಂಜುನಾಥ ನಗರದ ಮಲ್ಲಿಕಾರ್ಜುನ್ ಸ್ಕೂಲ್ ಬಳಿ ಅಪ್ರಾಪ್ತ ಬಾಲಕಿ ಹೊರಟಾಗ ಮೂವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಕೈಲಾಶ್, ಸಾಗರ್ ಮೋರೆ, ದೀಪಕ್ ಹಾಗೂ ಇನ್ನು ಇಬ್ಬರಿಂದ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಕೈಲಾಶ್ ಓರ್ವನನ್ನು ಬಿಟ್ಟು ಉಳಿದ ಇಬ್ಬರು ಅತ್ಯಾಚಾರಿಗಳು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಕೈಲಾಸ್ ಮತ್ತು ಸಾಗರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಾಗಿಲ್ಲ.

    ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನಲೆಯಲ್ಲಿ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಮೃತ ಬಾಲಕಿಯ ಶವವಿಟ್ಟು ಕುಟುಂಬಸ್ಥರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರ ಪ್ರತಿಭಟನೆಗೆ ವಿವಿಧ ದಲಿತ ಪರ ಸಂಘಟನೆಗಳು ಸಾಥ್ ನೀಡಿದ್ದಾರೆ.

    ಪ್ರತಿಭಟನಾಕಾರರು ಕಲಬುರ್ಗಿ ಅಥಣಿ ರಸ್ತೆ ಬಂದ್ ಮಾಡಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.

  • ಮಂಗ್ಳೂರಲ್ಲಿ ಲವ್ ಜಿಹಾದ್ ನಿಂದ ಯುವತಿಯನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆ

    ಮಂಗ್ಳೂರಲ್ಲಿ ಲವ್ ಜಿಹಾದ್ ನಿಂದ ಯುವತಿಯನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆ

    ಮಂಗಳೂರು: ಲವ್ ಜಿಹಾದ್‍ ಗೆ ಬಲಿಯಾಗುತ್ತಿದ್ದ ಯುವತಿಯನ್ನು ಹಿಂದೂ ಜಾಗರಣ ವೇದಿಕೆ ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಅಮೀರ್ ಎಂಬಾತ ಪ್ರೀತಿಸಿದ್ದ. ಈ ನಡುವೆ ಅಮೀರ್ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ. ಕೂಡಲೇ ಎಚ್ಚತ್ತುಕೊಂಡ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಯುವತಿಯನ್ನು ಸಂಪರ್ಕಿಸಿ ಮನವೊಲಿಸಲು ಯತ್ನಿಸಿದ್ದಾರೆ.

     

    ಯುವತಿ ಮುಸ್ಲಿಂ ಯುವಕನನ್ನು ಬಿಡಲು ಒಪ್ಪಿರಲಿಲ್ಲ. ನಿನ್ನನ್ನು ಪ್ರೀತಿಸುವ ನಾಟಕವಾಡಿ ನಡುದಾರಿಯಲ್ಲಿ ಕೈಬಿಟ್ಟು ಹೋಗುತ್ತಾನೆ ಎಂದು ಕಾರ್ಯಕರ್ತರು ಹೇಳಿದ್ದರೂ ಯುವತಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗೆ ಕಾರ್ಯಕರ್ತರೊಬ್ಬರು ಯುವತಿಯನ್ನ ಫೋನ್ ಮೂಲಕ ಸಂಪರ್ಕಿಸಿ ಮನವೊಲಿಸುವ ಆಡಿಯೋ ಲಭ್ಯವಾಗಿದೆ.

    ಕೊನೆಗೆ ಬಜರಂಗದಳದ ಮಹಿಳಾ ಸಂಘಟನೆ ದುರ್ಗಾ ವಾಹಿನಿ ಸದಸ್ಯರು ಯುವತಿಯ ಮನೆಗೆ ತೆರಳಿ ಮನವೊಲಿಸಿದ್ದಾರೆ. ಗಾಂಜಾ ವ್ಯಸನಿಯನ್ನ ಪ್ರೀತಿಸುವುದು ಬೇಡ ಅಂದಿದ್ದಕ್ಕೆ ಯುವತಿ ಕೊನೆಗೂ ಒಪ್ಪಿದ್ದಾಳೆ. ತನ್ನ ತಪ್ಪಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾಳೆ. ಯುವಕ ಅಮಿರ್ ಸದ್ಯಕ್ಕೆ ಮಂಗಳೂರಿನ ಕದ್ರಿ ಪೊಲೀಸರ ಬಂಧನದಲ್ಲಿದ್ದಾನೆ.

  • ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    – ಬೆಂಜ್ ಕಾರಲ್ಲಿತ್ತು ಗಾಂಜಾ
    – ಸಾರ್ವಜನಿಕರಿಂದ ಉದ್ಯಮಿ ಮೊಮ್ಮಗನಿಗೆ ಹಿಗ್ಗಾಮಗ್ಗಾ ಥಳಿತ

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟರು ಡ್ರಗ್ಸ್ ಸೇವಿಸಿ ಸಿಕ್ಕಸಿಕ್ಕವರಿಗೆ ಕಾರಿನಿಂದ ಗುದ್ದಿರೋ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿ ನಡೆದಿದೆ.

    ನಟರು ಉದ್ಯಮಿ ಮೊಮ್ಮಗನ ಜೊತೆ ಗಾಂಜಾ ಸೇವಿಸಿ ಆಕ್ಸಿಡೆಂಟ್ ಮಾಡಿದ್ದು, ಸಾರ್ವಜನಿಕರಿಂದ ಗೂಸಾ ಬೀಳ್ತಿದ್ದಂತೆ ಮುಖ ಮುಚ್ಕೊಂಡು ಎಸ್ಕೇಪ್ ಆಗಿದ್ದಾರೆ.

     

    ಲಾಲ್‍ಬಾಗ್ ರಸ್ತೆ ಮೂಲಕ ಬಂದ ಟಾಪ್ ಹೀರೋಗಳಿದ್ದ ಆ ಬೆಂಜ್ ಕಾರು ಮೊದಲು ರಸ್ತೆ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಿಬಿಎಂಪಿ ಬೋರ್ಡ್ ಅಷ್ಟೇ ಅಲ್ಲ, ಫುಟ್‍ಪಾತ್‍ಗೆ ಹಾಕಿದ್ದ ಕಬ್ಬಿಣದ ಗ್ರಿಲ್‍ಗಳೇ ಮುರಿದುಹೋಗಿವೆ.

     

    ವಿದ್ಯುತ್ ಕಂಬ, ಓಮ್ನಿ ಕಾರ್ ಹಾಗೂ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದ್ದು, ಸಿಕ್ಕಸಿಕ್ಕವರಿಗೆಲ್ಲಾ ಗುದ್ದಿ ಪರಾರಿಯಾಗಿದ್ದಾರೆ. ಇವರ ಆಟಾಟೋಪದಿಂದ ತಾಳ್ಮೆಗೆಟ್ಟ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉದ್ಯಮಿಯ ಮೊಮ್ಮಗನಿಗೆ ಒದೆ ಬೀಳುತ್ತಲೇ ಆ `ಸ್ಟಾರ್’ಗಳು ಎಸ್ಕೇಪ್ ಆಗಿದ್ದಾರೆ.

    ಇಷ್ಟೆಲ್ಲಾ ಆದ್ಮೇಲೆ ಬೆಂಜ್ ಸೀಜ್ ಮಾಡಿದ ಪೋಲೀಸರಿಗೆ ಶಾಕ್ ಕಾದಿತ್ತು. ಕಾರ್‍ನಲ್ಲಿ ಕೋಟಿ ಮೌಲ್ಯದ ಮಾದಕ ದ್ರವ್ಯ ಪತ್ತೆಯಾಗಿದೆ. ಇಷ್ಟಾದರೂ ಪೊಲೀಸರು ಮಾತ್ರ ಎಫ್‍ಐಆರ್ ದಾಖಲಿಸಿಲ್ಲ.

    ಒದೆ ತಿಂದ ಉದ್ಯಮಿ ಮೊಮ್ಮಗ ಆಸ್ಪತ್ರೆಯಲ್ಲಿ ಟ್ರೀಟ್‍ಮೆಂಟ್ ಪಡೆದು ಎಸ್ಕೇಪ್ ಆಗಿದ್ದಾನೆ. ಹಿಟ್ ಅಂಡ್ ರನ್‍ನಿಂದ ಗಾಯಗೊಂಡವರಿಗೆ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.