Tag: DRS

  • 1 ಎಸೆತಕ್ಕೆ 2 ಬಾರಿ ರಿವ್ಯೂ – ಚರ್ಚೆಗೆ ಗ್ರಾಸವಾದ ರಹಮಾನ್ ಔಟ್ ತೀರ್ಪು

    1 ಎಸೆತಕ್ಕೆ 2 ಬಾರಿ ರಿವ್ಯೂ – ಚರ್ಚೆಗೆ ಗ್ರಾಸವಾದ ರಹಮಾನ್ ಔಟ್ ತೀರ್ಪು

    ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 69 ರನ್‍ಗಳಿಂದ ಜಯಗಳಿಸಿದ್ದರೂ ಈಗ ಪಂಜಾಬ್ ಆಟಗಾರ ಮುಜೀಬ್ ಉರ್ ರಹಮಾನ್ ಔಟ್ ಆಗಿದ್ದ ಎಸೆತಕ್ಕೆ ಎರಡು ಬಾರಿ ರಿವ್ಯೂ ಪಡೆದುಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

    14ನೇ ಓವರಿನ 5 ಎಸೆತವನ್ನು ಎದುರಿಸಲು ರಹಮಾನ್ ಸ್ಟ್ರೈಕ್‍ನಲ್ಲಿದ್ದರು. ಖಲೀಲ್ ಅಹ್ಮದ್ ಎಸೆದ ಎಸೆತವನ್ನು ಹೊಡೆಯಲು ಪ್ರಯತ್ನಿಸಿದರೂ ಬಾಲ್ ವಿಕೆಟ್ ಕೀಪರ್ ಬೈರ್‌ಸ್ಟೋವ್ ಕೈ ಸೇರಿತು. ಕೂಡಲೇ ಹೈದರಾಬಾದ್ ಆಟಗಾರರು ಔಟ್‍ಗೆ ಬಲವಾಗಿ ಮನವಿ ಮಾಡಿದರು. ಅಂಪೈರ್ ಯಾವುದೇ ನಿರ್ಧಾರ ಪ್ರಕಟಿಸದೇ ಬಾಲ್ ಬ್ಯಾಟಿಗೆ ಬಡಿದಿದ್ಯಾ ಇಲ್ಲವೋ ಎಂಬುದನ್ನು ಪರಿಶೀಲಿಸಲು ರಿವ್ಯೂ ನೋಡಲು ಮುಂದಾದರು. ಈ ವೇಳೆ ಬಾಲ್ ಬ್ಯಾಟಿಗೆ ತಾಗಿ ವಿಕೆಟ್ ಕೀಪರ್ ಕೈ ಸೇರಿದ ಕಾರಣ ಔಟ್ ಎಂದು ತೀರ್ಪು ನೀಡಿದರು.

    ಔಟ್ ತೀರ್ಪಿನ ಹಿನ್ನೆಲೆಯಲ್ಲಿ ಕ್ರೀಸಿನಿಂದ ಹೊರ ನಡೆಯುತ್ತಿದ್ದಾಗ ಡ್ರೆಸ್ಸಿಂಗ್ ರೂಮ್‍ನಿಂದ ಡಿಆರ್‍ಎಸ್ ತೆಗೆದುಕೊಳ್ಳುವಂತೆ ಸೂಚನೆ ಬಂತು. ಕೂಡಲೇ ರಹಮಾನ್ ಮನವಿ ಮಾಡಿದರು. ಅಲ್ಟ್ರಾ ಎಡ್ಜ್‌ನಲ್ಲಿ ಬಾಲ್ ಬ್ಯಾಟಿಗೆ ತಾಗಿರುವ ಧ್ವನಿ ಕೇಳಿಸಿತು. ಮೂರನೇ ಅಂಪೈರ್ ಸಹ ಔಟ್ ತೀರ್ಪು ನೀಡಿದರು.

    ಫೀಲ್ಡ್‌ನಲ್ಲಿರುವ ಅಂಪೈರ್ ಅವರಿಗೆ ಅಲ್ಟ್ರಾ ಎಡ್ಜ್ ನೋಡಿ ತೀರ್ಪು ನೀಡಲು ಬರುವುದಿಲ್ಲ. ಹೀಗಾಗಿ ಮೊದಲ ಬಾರಿ ರಿವ್ಯೂ ನೋಡುವಾಗ ಅಲ್ಟ್ರಾ ಎಡ್ಜ್ ನೋಡಿರಲಿಲ್ಲ. ಈ ಕಾರಣಕ್ಕೆ ಡಿಆರ್‍ಎಸ್ ತೆಗೆದುಕೊಳ್ಳಲಾಯಿತು. ಇದನ್ನೂ ಓದಿ: ಕೆಲ ಸಿಎಸ್‍ಕೆ ಆಟಗಾರರು ತಂಡದಲ್ಲಿ ತಮ್ಮ ಸ್ಥಾನವನ್ನು ಸರ್ಕಾರಿ ಕೆಲಸ ಅಂದ್ಕೊಂಡಿದ್ದಾರೆ: ಸೆಹ್ವಾಗ್

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ಪರ ಬೈರ್‌ಸ್ಟೋವ್ 92 ರನ್(55 ಎಸೆತ 7 ಬೌಂಡರಿ, 6 ಸಿಕ್ಸರ್) ಡೇವಿಡ್ ವಾರ್ನರ್ 52 ರನ್(40 ಎಸೆತ, 5 ಬೌಂಡರಿ 1 ಸಿಕ್ಸರ್) ಹೊಡೆದ ಪರಿಣಾಮ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ್ದ ಪಂಜಾಬ್ 16.5 ಓವರ್‌ಗಳಿಗೆ 132 ರನ್‍ ಗಳಿಸಿ  ಆಲೌಟ್ ಆಯ್ತು.

  • ಜಡೇಜಾ ವಿರೋಚಿತ ಆಟಕ್ಕೆ ಸೈನಿ ಸಾಥ್- ಭಾರತಕ್ಕೆ ಸೋಲು, ನ್ಯೂಜಿಲೆಂಡಿಗೆ ಸರಣಿ

    ಜಡೇಜಾ ವಿರೋಚಿತ ಆಟಕ್ಕೆ ಸೈನಿ ಸಾಥ್- ಭಾರತಕ್ಕೆ ಸೋಲು, ನ್ಯೂಜಿಲೆಂಡಿಗೆ ಸರಣಿ

    – ಕೊನೆಯವರೆಗೂ ಹೋರಾಡಿದ ಜಡೇಜಾ
    – 45 ರನ್, 5 ಬೌಂಡರಿ, 2 ಸಿಕ್ಸರ್ ಸಿಡಿಸಿದ ಸೈನಿ
    – ಸೈನಿ ಸಿಕ್ಸ್‌ಗೆ ಕೊಹ್ಲಿ ಫುಲ್ ಫಿದಾ
    – 6 ವರ್ಷದ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ಕಿವೀಸ್
    – ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕಿವೀಸ್‍ಗೆ 350ನೇ ಗೆಲುವು

    ಆಂಕ್ಲೆಂಡ್: 96 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಭಾರತ ಶೀಘ್ರವೇ ಪತನ ಹೊಂದುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಬೌಲಿಂಗ್, ಫೀಲ್ಡಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಬ್ಯಾಟಿಂಗ್‍ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಭಾರತಕ್ಕೆ ಹೀನಾಯ ಸೋಲು ಖಚಿತ ಎಂದೇ ಭಾವಿಸಲಾಗಿದ್ದ ಪಂದ್ಯಕ್ಕೆ ರೋಚಕ ತಿರುವು ನೀಡಿ ವಿಕೆಟ್ ಒಪ್ಪಿಸಿದ್ದರೂ ಉತ್ತಮ ಆಟದಿಂದ ಜಡೇಜಾ ಭಾರತದ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಭಾರತದ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ನ್ಯೂಜಿಲೆಂಡ್ 22 ರನ್ ಗಳಿಂದ ಗೆದ್ದರೂ ಜಡೇಜಾ ಮತ್ತು ನವದೀಪ್ ಸೈನಿಯ ಆಟ ಮೆಚ್ಚುಗೆ ಗಳಿಸಿತು. ಭಾರತ 150 ರನ್ ಗಳಿಸುವುದು ಅನುಮಾನ ಎಂದು ವ್ಯಕ್ತವಾಗಿದ್ದರೂ ಇವರಿಬ್ಬರು 8ನೇ ವಿಕೆಟಿಗೆ 80 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ಭಾರತ ಸುಲಭವಾಗಿ ಸೋಲುವುದಿಲ್ಲ. ಕೊನೆಯವರೆಗೂ ಹೋರಾಟ ಮಾಡುತ್ತದೆ ಎಂಬುದನ್ನು ಸಾಧಿಸಿ ತೋರಿಸಿದರು. 45ನೇ ಓವರಿನಲ್ಲಿ ಸೈನಿ ಬೌಲ್ಡ್ ಆದ ಬಳಿಕ ಚಹಲ್ ಮತ್ತು ಕೊನೆಯವರೆಗೂ ವಿರೋಚಿತ ಆಟವಾಡಿದ್ದ ಜಡೇಜಾ ಸಿಕ್ಸ್ ಹೊಡೆಯಲು ಹೋಗಿ ಬೌಂಡರಿ ಗೆರೆ ಸಮೀಪ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ಭಾರತ ಸರಣಿಯನ್ನು ಸೋತಿತು. ಈ ಮೂಲಕ ಟ20ಯಲ್ಲಿ ವೈಟ್ ವಾಶ್‍ನೊಂದಿಗೆ ಸೋತಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದು, ಕ್ಲೀನ್ ಸ್ವೀಪ್ ಮಾಡಲು ಒಂದು ಹೆಜ್ಜೆ ಮಾತ್ರ ಬಾಕಿಯಿದೆ. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

    ಆಕ್ಲೆಂಡ್‍ನ ಈಡನ್ ಪಾರ್ಕ್ ನಲ್ಲಿ 274 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 48.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 251 ರನ್ ಗಳಿಸಲು ಶಕ್ತವಾಯಿತು. ಶ್ರೇಯಸ್ ಅಯ್ಯರ್ 52 ರನ್ (57 ಎಸೆತ, 7 ಬೌಂಡರಿ, 1 ಸಿಕ್ಸ್), ರವೀಂದ್ರ ಜಡೇಜಾ 55 ರನ್ (73 ಎಸೆತ, 2 ಬೌಂಡರಿ, 1 ಸಿಕ್ಸ್) ಹಾಗೂ ನವದೀಪ್ ಸೈನಿ 45 ರನ್ (49 ಎಸೆತ, 5 ಬೌಂಡರಿ, 2 ಸಿಕ್ಸ್) ಹೊಡೆದರು. ಇಂದು ಭಾರತದ ವಿರುದ್ಧ ಗೆದ್ದ ನ್ಯೂಜಿಲೆಂಡ್ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 350ನೇ ಗೆಲುವು ದಾಖಲಿಸಿತು.

    ಆರಂಭದಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಭಾರತ ಆಘಾತಕ್ಕೆ ಒಳಗಾಯಿತು. ಬಳಿಕ ಮೈದಾಕ್ಕಿಳಿದ ವಿರಾಟ್ ಕೊಹ್ಲಿ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್‍ಗೆ ಮುಂದಾದರು. ಆದರೆ 24 ರನ್ ಗಳಿಸಿದ್ದ ಆರಂಭಿಕ ಬ್ಯಾಟ್ಸ್‍ಮನ್ ಪೃಥ್ವಿ ಶಾ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತರೆಳಿದರು. ಇದನ್ನೂ ಓದಿ: ಅಂಪೈರ್ ವಿರುದ್ಧ ಕೊಹ್ಲಿ ಫುಲ್ ಗರಂ- ವಿಡಿಯೋ

    ವಿರಾಟ್ ಕೊಹ್ಲಿ ಜೊತೆ ಸೇರಿದ ಶ್ರೇಯಸ್ ಅಯ್ಯರ್ ಉತ್ತಮ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಆದರೆ 15 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾಕ್ಕಿಳಿದ ಕೆ.ಎಲ್.ರಾಹುಲ್ 4 ರನ್ ಹಾಗೂ ಕೇದಾರ್ ಜಾಧವ್ 9 ರನ್ ಗಳಿಸಿ ಬಹುಬೇಗ ವಿಕೆಟ್ ಕಳೆದುಕೊಂಡರು. ಪರಿಣಾಮ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ ಕೇವಲ 96 ರನ್ ಗಳಿಸಿತು.

    ಶ್ರೇಯಸ್ ಅರ್ಧಶತಕ:
    ನಿಧಾನಗತಿಯ ಬ್ಯಾಟಿಂಗ್ ಮೂಲಕ ವಿಕೆಟ್ ಕಾಯ್ದುಕೊಂಡು ಆಡುತ್ತಿದ್ದ ಶ್ರೇಯಸ್ ಅಯ್ಯರ್ 56ನೇ ಎಸೆತದಲ್ಲಿ ಅರ್ಧಶತ ದಾಖಲಿಸಿದರು. ಆದರೆ ನಂತದ ಎಸೆತದಲ್ಲಿ ಸ್ಫೋಟಕ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು.

    ಜಡೇಜಾ ಏಕಾಂಗಿ ಹೋರಾಟ:
    ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ್ ಜಡೇಜಾ ಅಂತಿಮ ಹಂತದವರೆಗೂ ಬೌಲರ್‍ಗಳ ಜೊತೆ ಸೇರಿ ರನ್ ಗಳಿಸಲು ಯತ್ನಿಸಿದರು. ಶಾರ್ದೂಲ್ ಠಾಕೂರ್ ಜೊತೆ ಸೇರಿ 7ನೇ ವಿಕೆಟ್‍ಗೆ 26 ರನ್ ಜೊತೆಯಾಟ, ನವದೀಪ್ ಸೈನಿ ಜೊತೆ ಸೇರಿ 8ನೇ ವಿಕೆಟ್‍ಗೆ 76 ರನ್ ಜೊತೆಯಾಟದ ಕೊಡುಗೆ ನೀಡಿದರು. ಬಳಿಕ ಯಜುವೇಂದ್ರ ಚಹಲ್‍ರೊಂದಿಗೆ 9ನೇ ವಿಕೆಟ್‍ಗೆ 22 ರನ್ ಜೊತೆಯಾಟವಾಡಿದರು. ಕೊನೆಯವರೆಗೂ ಏಕಾಂಗಿ ಹೋರಾಡಿದ್ದ ಜಡೇಜಾ 48.3 ಎಸೆತವನ್ನು ಸಿಕ್ಸರ್ ಗೆ ಅಟ್ಟಲು ಹೋಗಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

    ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಮಾರ್ಟಿನ್ ಗುಪ್ಟಿಲ್ 79 ರನ್, ಹೆನ್ರಿ ನಿಕೋಲ್ಸ್ 41 ರನ್ ಮತ್ತು ರಾಸ್ ಟೇಲರ್ 73 ರನ್ ಹೊಡೆದರು. ಯಜುವೇಂದ್ರ ಚಹಲ್ 3 ವಿಕೆಟ್, ಶಾರ್ದೂಲ್ ಠಾಕೂರ್ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

    ಕೊಹ್ಲಿ ವರ್ಸಸ್ ಸೌಥಿ:
    ಎಲ್ಲಾ ಮೂರು ಸ್ವರೂಪಗಳಲ್ಲಿ (ಏಕದಿನ, ಟಿ 20 ಮತ್ತು ಟೆಸ್ಟ್) ಕೊಹ್ಲಿಯನ್ನು ಟಿಮ್ ಸೌಥಿ ಒಂಬತ್ತು ಬಾರಿ ಔಟ್ ಮಾಡಿದ್ದಾರೆ. ಇಂಗ್ಲೆಂಡ್‍ನ ಜೇಮ್ಸ್ ಆಂಡರ್ಸನ್ ಮತ್ತು ಗ್ರೇಮ್ ಸ್ವಾನ್ ಅವರು ತಲಾ 8 ಬಾರಿ ಕೊಹ್ಲಿಯನ್ನು ಪೆವಿಲಿಯನ್‍ಗೆ ಕಳುಹಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಸೌಥಿ ಮತ್ತು ವೆಸ್ಟ್ ಇಂಡೀಸ್ ರವಿ ರಾಂಪಾಲ್ ತಲಾ ಆರು ಬಾರಿ ವಿರಾಟ್ ವಿಕೆಟ್ ಕಿತ್ತಿದ್ದಾರೆ. ಶ್ರೀಲಂಕಾದ ಟಿಸರಾ ಪೆರೆರಾ ಮತ್ತು ಆಸ್ಟ್ರೇಲಿಯಾದ ಆಡಮ್ ಜಂಪಾ 5-5 ಬಾರಿ ಕೊಹ್ಲಿ ಅವರನ್ನು ಔಟ್ ಮಾಡಿದ್ದಾರೆ.

    5 ಏಕದಿನ ಪಂದ್ಯಗಳಲ್ಲಿ ಬುಮ್ರಾಗೆ 1 ವಿಕೆಟ್:
    ವೇಗದ ಬೌಲರ್ ಬುಮ್ರಾ ಗಾಯದ ನಂತರ ಈ ವರ್ಷ ತಂಡಕ್ಕೆ ಮರಳಿದ್ದಾರೆ. ಅಂದಿನಿಂದ ಅವರು 5 ಏಕದಿನ ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಅನ್ನು 277 ಸ್ಟ್ರೈಕ್ ದರದಲ್ಲಿ ಪಡೆದಿದ್ದಾರೆ. ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ಅವರು ಯಾವುದೇ ವಿಕೆಟ್ ಕಿತ್ತಿಲ್ಲ. ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂತಹ ಕೆಟ್ಟ ಫಾರ್ಮ್ ಗೆ ಬುಮ್ರಾ ತುತ್ತಾಗಿದ್ದಾರೆ.

    ಭಾರತ ವಿರುದ್ಧ ಟೇಲರ್ ಸಾಧನೆ:
    ಸತತ ಎರಡನೇ ಏಕದಿನ ಪಂದ್ಯದಲ್ಲಿ ರಾಸ್ ಟೇಲರ್ ಅರ್ಧಶತಕ ಬಾರಿಸಿದರು. ಅವರು ಭಾರತ ವಿರುದ್ಧ ಅತಿ ಹೆಚ್ಚು 11 ಅರ್ಧಶತಕಗಳನ್ನು ಗಳಿಸಿದ ಕಿವಿ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ನಾಥನ್ ಆಸ್ಟಲ್ 10 ಬಾರಿ ಅರ್ಧಶಕತ ಸಿಡಿಸಿದ್ದರು.

    ಭಾರತವು 6 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಭಾರತ ಸರಣಿಯಲ್ಲಿ ತಂಡವು 0-2ರ ಹಿನ್ನಡೆಗೆ ತುತ್ತಾಗಿದೆ. ಕೊನೆಯ ಬಾರಿಗೆ ಅಂದ್ರೆ 2014ರಲ್ಲಿ ನ್ಯೂಜಿಲೆಂಡ್ ಭಾರತವನ್ನು 4-0 ಗೋಲುಗಳಿಂದ ಸೋಲಿಸಿತ್ತು. ಕಳೆದ ಮೂರು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.

  • ಅಂಪೈರ್ ವಿರುದ್ಧ ಕೊಹ್ಲಿ ಫುಲ್ ಗರಂ- ವಿಡಿಯೋ

    ಅಂಪೈರ್ ವಿರುದ್ಧ ಕೊಹ್ಲಿ ಫುಲ್ ಗರಂ- ವಿಡಿಯೋ

    ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಫುಲ್ ಗರಂ ಆದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಆಕ್ಲೆಂಡ್‍ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‍ನ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲ್ಸ್ ಎಲ್‍ಬಿಡಬ್ಲ್ಯೂ ಔಟ್ ಆಗಿದ್ದರು. ನಿಗದಿತ ಸಮಯದ ನಂತರ ಅವರು ಡಿಆರ್‌ಎಸ್‌ ಮನವಿ ಮಾಡಿದರು. ಆಗ ಅಂಪೈರ್ ಬ್ರೂಸ್ ಆಕ್ಸೆನ್‍ಫೋರ್ಡ್ ಅನುಮೋದಿಸಿದರು. ಇದರಿಂದಾಗಿ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಕೋಪ ವ್ಯಕ್ತಪಡಿಸಿದರು. ನಿಯಮಗಳ ಪ್ರಕಾರ, ಮೊದಲ ಅಂಪೈರ್ ನಿರ್ಧಾರದ ನಂತರದ 15 ಸೆಕೆಂಡುಗಳಲ್ಲಿ ಡಿಆರ್‌ಎಸ್‌ಗೆ ಸಲ್ಲಿಸಬೇಕು. ಆದರೆ 15 ನಿಮಿಷವಾದ ನಂತರ ಮನವಿಯನ್ನು ಒಪ್ಪಿದ್ದಕ್ಕೆ ಕೊಹ್ಲಿ ಸಿಟ್ಟಾದರು. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

    https://twitter.com/SMmPMm/status/1225993208678629376

    ಯಜುವೇಂದ್ರ ಚಹಲ್ ಎಸೆದ ಇನ್ನಿಂಗ್ಸ್ ನ 17ನೇ ಓವರಿನ 5ನೇ ಎಸೆತದಲ್ಲಿ ಅಂಪೈರ್ ನ್ಯೂಜಿಲೆಂಡ್ ಆರಂಭಿಕ ಆಟಗಾರ ನಿಕೋಲ್ಸ್ ಗೆ ಎಲ್‍ಬಿಡಬ್ಲ್ಯೂ ಔಟ್ ನೀಡಿದರು. ಇದರ ನಂತರ ಡಿಆರ್‌ಎಸ್‌ಗೆ ಸಲ್ಲಿಸಿದಾಗಲೂ ನಿಕೋಲ್ಸ್ ಅವರನ್ನು ಔಟ್ ಎಂದು ತಿಳಿಸಲಾಯಿತು. ಈ ಮಧ್ಯೆ ವಿರಾಟ್ ಕೊಹ್ಲಿ ಅಂಪೈರ್ ಹತ್ತಿರ ಹೋಗಿ ಅಸಮಾಧಾನ ಹೊರ ಹಾಕಿದ್ದರು. ಆದರೆ ಅಂಪೈರ್ ಬ್ರೂಸ್ ಅವರು ತಮ್ಮ ನಿರ್ಧಾರಕ್ಕೆ ಬದ್ಧವಾಗಿ ನಿಂತಿದ್ದರು.

    ಆರಂಭಿಕ ಬ್ಯಾಟ್ಸ್‌ಮನ್ ನಿಕೋಲ್ಸ್ 59 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಮಾರ್ಟಿನ್ ಗುಪ್ಟಿಲ್ ಅವರೊಂದಿಗೆ ಮೊದಲ ವಿಕೆಟ್‍ಗೆ 93 ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು.

    https://twitter.com/SMmPMm/status/1225992972279222275

  • ಕಳೆದ 2 ವರ್ಷದಿಂದ ಕೊಹ್ಲಿಗೆ ಡಿಆರ್‌ಎಸ್ ಫೀವರ್

    ಕಳೆದ 2 ವರ್ಷದಿಂದ ಕೊಹ್ಲಿಗೆ ಡಿಆರ್‌ಎಸ್ ಫೀವರ್

    ರಾಂಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್)ಯನ್ನು ಸೂಕ್ತ ಸಮಯದಲ್ಲಿ ಬಳಕೆ ಮಾಡಿಕೊಳ್ಳಲು ಕಳೆದ 2 ವರ್ಷಗಳಿಂದ ವಿಫಲರಾಗಿದ್ದು, ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದ ವೇಳೆಯೂ ಡಿಆರ್ ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನಲ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಕಳೆದ 2 ವರ್ಷಗಳಿಂದ ಇದುವರೆಗೂ ಕೊಹ್ಲಿ ಪಡೆದ ಎಲ್ಲಾ ಡಿಆರ್‌ಎಸ್ ಮನವಿಗಳಲ್ಲಿ ನಿರಾಸೆ ಎದುರಿಸಿದ್ದಾರೆ. 2017 ರಲ್ಲಿ ನಡೆದ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆರಂಭವಾದ ಈ ನಡೆ ಇಂದಿಗೂ ಮುಂದುವರಿದಿದ್ದು, ಸತತ 9 ಬಾರಿ ಕೊಹ್ಲಿ ಡಿಆರ್‌ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.

    ಇಂದಿನ ಪಂದ್ಯದಲ್ಲಿ ಮಯಾಂಕ್ ಹಾಗೂ ಪೂಜಾರ ಬಹುಬೇಗ ಔಟಾದ ಹಿನ್ನೆಲೆಯಲ್ಲಿ ತಂಡ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದ ಕೊಹ್ಲಿ, ಬಿರುಸಿನ 2 ಬೌಂಡರಿ ಸಿಡಿಸಿ ಗಮನ ಸೆಳೆದರು. ಆದರೆ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಅನ್ರಿಕ್ ನಾಟ್ರ್ಜೆ ಎಸೆದ 16ನೇ ಓವರಿನಲ್ಲಿ ಕೊಹ್ಲಿ ಎಲ್‍ಬಿ ಬಲೆಗೆ ಬಿದ್ದರು. ಇದನ್ನು ಆನ್ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿದ ಕೊಹ್ಲಿ ಡಿಆರ್‌ಎಸ್ ಪಡೆದರು.

    ರೋಹಿತ್ ಶರ್ಮಾರ ಸಲಹೆಯೊಂದಿಗೆ ಕೊಹ್ಲಿ ಡಿಆರ್‌ಎಸ್ ಪಡೆದರು ಕೂಡ ಚೆಂಡು ಲೆಗ್ ಸ್ಟಂಪ್‍ಗೆ ತಾಗಿ ಮುಂದೇ ಸಾಗುತ್ತಿರುವಂತೆ ಕಂಡು ಬಂತು ರಿವ್ಯೂನಲ್ಲಿ ಕಂಡು ಬಂತು. ಪರಿಣಾಮ ಥರ್ಡ್ ಅಂಪೈರ್, ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನೇ ಅಂತಿಮಗೊಳಿಸಿದರು. ಇದರೊಂದಿಗೆ ಕೊಹ್ಲಿ 22 ಎಸೆತಗಳಲ್ಲಿ 12 ರನ್ ಗಳಿಸಿ ನಿರ್ಗಮಿಸಿದರು. ಆದರೆ ಕೊಹ್ಲಿ ಔಟಾಗುತ್ತಿದಂತೆ ಅಭಿಮಾನಿಗಳು ಡಿಆರ್‌ಎಸ್ ನಿಮಯಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದು, ಅಂಪೈರ್ ತೀರ್ಮಾನವನ್ನು ಅಂತಿಮಗೊಳಿಸುವ ನಿಯಮಗಳನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕೂಡ ಕೊಹ್ಲಿ ಡಿಆರ್‌ಎಸ್ ನಿಯಮಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇತ್ತ ತಂಡದ ನಾಯಕರಾಗಿ ಡಿಆರ್‌ಎಸ್ ಪಡೆಯುವಲ್ಲಿ ಕೊಹ್ಲಿ ಸರಿ ಎನಿಸುತ್ತಿದ್ದರು, ಬ್ಯಾಟ್ಸ್ ಮನ್ ಆಗಿ ನಿರಾಸೆ ಅನುಭವಿಸುತ್ತಿದ್ದಾರೆ.

    https://twitter.com/IManish311/status/1185515629492617216

  • ಥರ್ಡ್ ಅಂಪೈರ್ ತೀರ್ಪು ನೋಡಿ ‘ಹಣೆ ಚಚ್ಚಿಕೊಂಡ’ ಹಿಟ್ ಮ್ಯಾನ್

    ಥರ್ಡ್ ಅಂಪೈರ್ ತೀರ್ಪು ನೋಡಿ ‘ಹಣೆ ಚಚ್ಚಿಕೊಂಡ’ ಹಿಟ್ ಮ್ಯಾನ್

    ಬೆಂಗಳೂರು: ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿದ ತೀರ್ಪನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಕುಟುಕಿದ್ದಾರೆ.

    ಟ್ವೀಟ್ ಮಾಡಿ ಐಸಿಸಿ ಕಾಲೆಳೆದಿರುವ ರೋಹಿತ್ ಶರ್ಮಾ ಅವರು, ಚೆಂಡು ಹಾಗೂ ಬ್ಯಾಟ್ ಮಧ್ಯೆ ಇರುವ ಅಂತರನ್ನು ಫೋಟೋ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಹಣೆ ಬಡೆದುಕೊಳ್ಳುತ್ತಿರುವ ಹಾಗೂ ಕಣ್ಣುಗಳ ಇಮೋಜಿಯನ್ನು ಹಾಕಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಚಿನ್, ಲಾರಾ ಹಿಂದಿಕ್ಕಿ ಕೊಹ್ಲಿ ವಿಶ್ವದಾಖಲೆ

    ವೆಸ್ಟ್ ವಿಂಡೀಸ್ ಬೌಲರ್ ಕೆಮರ್ ರೂಚ್ ಎಸೆದ ಟೀಂ ಇಂಡಿಯಾ ಇನ್ನಿಂಗ್ಸ್ ನ ಆರನೇ ಓವರ್ ನ ಅಂತಿಮ ಎಸೆತವನ್ನು ರೋಹಿತ್ ಶರ್ಮಾ ಎದುರಿಸಿದರು. ಈ ವೇಳೆ ಚಂಡು ಬ್ಯಾಟ್ ಹಾಗೂ ಪ್ಯಾಡ್ ಮಧ್ಯೆ ಸಾಗಿ ವಿಕೆಟ್ ಕೀಪರ್ ಶಾಯ್ ಹೋಪ್ ಕೈಸೇರಿತ್ತು. ಇದನ್ನೂ ಓದಿ: ವಿಶ್ವಕಪ್‍ನಲ್ಲಿ ಪಾಕಿಗೆ ಭಾರತ ಸಹಾಯ ಮಾಡಲಿ – ಅಕ್ತರ್ ಮನವಿ

    ಅಂಪೈರ್ ಔಟ್ ನೀಡದ ಹಿನ್ನೆಲೆಯಲ್ಲಿ ವಿಂಡೀಸ್ ಡಿಆರ್‍ಎಸ್ ಮೊರೆ ಹೋಗಿತ್ತು. ಡಿಆರ್‍ಎಸ್ ರಿವ್ಯೂ ಪರೀಶೀಲನೆ ವೇಳೆ ಬ್ಯಾಟ್ ಚೆಂಡು ತಾಗಿರಲಿಲ್ಲ. ಅಲ್ಟ್ರಾ ಎಡ್ಜ್ ನಲ್ಲಿ ಚೆಂಡ್ ಪ್ಯಾಡ್‍ಗೆ ತಗಲಿದ್ದನ್ನು ಗಮನಿಸಿದ ಮೂರನೇ ಅಂಪೈರ್ ಔಟ್ ತೀರ್ಪು ನೀಡುವಂತೆ ಸೂಚನೆ ನೀಡಿದ್ದರು.

    https://twitter.com/IamRs45Fc/status/1144189062284103680

    ಔಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ರೋಹಿತ್ ಶರ್ಮಾ ನಕ್ಕು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಆದರೆ ಥರ್ಡ್ ಅಂಪೈರ್ ಮೈಕಲ್ ಗೌಫ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಥರ್ಡ್ ಅಂಪೈರ್ ಗೆ ಕಣ್ಣು ಕಾಣಿಸುವುದಿಲ್ಲ. ಅವರು ಕುರುಡರಾಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ವಿಶ್ವಕಪ್‍ನಲ್ಲಿ ಮಿಂಚುತ್ತಿರುವ ಶಮಿಗೆ `ಲಫಂಗ’ ಎಂದ ಪತ್ನಿ ಹಸೀನ್

    ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದಾಗ ಪತ್ನಿ ರಿತಿಕಾ ಸಿಂಗ್ ವಾಟ್ ಎಂದು ಹೇಳಿ ಅಸಮಾಧಾನ ಹೊರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಆಟಗಾರರು ಶಿಸ್ತು ಉಲ್ಲಂಘಿಸಿದರೆ ಅವರ ವಿರುದ್ಧ ದಂಡ ಹಾಕಲಾಗುತ್ತದೆ. ಮೈದಾನದಲ್ಲಿ ಅಂಪೈರ್ ಗಳು ತಪ್ಪು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳಬಹುದು. ಥರ್ಡ್ ಅಂಪೈರ್ ತಪ್ಪು ತೀರ್ಪನ್ನು ಹೇಗೆ ಒಪ್ಪಿಕೊಳ್ಳುವುದು. ತಪ್ಪು ತೀರ್ಪು ನೀಡುವ ಅಂಪೈರ್ ಗಳಿಗೆ ಐಸಿಸಿ ಯಾಕೆ ದಂಡ ವಿಧಿಸುವುದಿಲ್ಲ ಎಂದು ಸರ್ ಜಡೇಜಾ ಫ್ಯಾನ್ ಅಸಮಾಧಾನ ಹೊರಹಾಕಿದ್ದಾರೆ.

    ಥರ್ಡ್ ಅಂಪೈರ್ ಮೈಕಲ್ ಗೋ ಇಂಗ್ಲೆಂಡ್ ಮೂಲದವರು. ಇದೊಂದು ಅತ್ಯಂತ ತಪ್ಪು ತೀರ್ಪು, ಥರ್ಡ್ ಅಂಪೈರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ.

  • 3ನೇ ಅಂಪೈರ್ ಬೇಡ, 4ನೇ ಅಂಪೈರ್ ಬೇಕು – ಐಸಿಸಿ ವಿರುದ್ಧ ನೆಟ್ಟಿಗರು ಕಿಡಿ

    3ನೇ ಅಂಪೈರ್ ಬೇಡ, 4ನೇ ಅಂಪೈರ್ ಬೇಕು – ಐಸಿಸಿ ವಿರುದ್ಧ ನೆಟ್ಟಿಗರು ಕಿಡಿ

    – 3ನೇ ಅಂಪೈರ್‌ಗೂ ದಂಡ ವಿಧಿಸಿ
    – ತೀರ್ಪು ನೋಡಿ ನಕ್ಕ ರೋಹಿತ್ ಶರ್ಮಾ

    ಮ್ಯಾಂಚೆಸ್ಟರ್: ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರ ಔಟ್ ತೀರ್ಪು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ವೆಸ್ಟ್ ವಿಂಡೀಸ್ ಬೌಲರ್ ಕೆಮರ್ ರೂಚ್ ಎಸೆದ ಟೀಂ ಇಂಡಿಯಾ ಇನ್ನಿಂಗ್ಸ್ ನ ಆರನೇ ಓವರ್ ನ ಅಂತಿಮ ಎಸೆತವನ್ನು ರೋಹಿತ್ ಶರ್ಮಾ ಎದುರಿಸಿದರು. ಈ ವೇಳೆ ಚಂಡು ಬ್ಯಾಟ್ ಹಾಗೂ ಪ್ಯಾಡ್ ಮಧ್ಯೆ ಸಾಗಿ ವಿಕೆಟ್ ಕೀಪರ್ ಶಾಯ್ ಹೋಪ್ ಕೈಸೇರಿತ್ತು.

    https://twitter.com/Ro45FC/status/1144193118725496832

    ಅಂಪೈರ್ ಔಟ್ ನೀಡದ ಹಿನ್ನೆಲೆಯಲ್ಲಿ ವಿಂಡೀಸ್ ಡಿಆರ್‍ಎಸ್ ಮೊರೆ ಹೋಗಿತ್ತು. ಡಿಆರ್‍ಎಸ್ ರಿವ್ಯೂ ಪರೀಶೀಲನೆ ವೇಳೆ ಬ್ಯಾಟ್ ಚೆಂಡು ತಾಗಿರಲಿಲ್ಲ. ಅಲ್ಟ್ರಾ ಎಡ್ಜ್ ನಲ್ಲಿ ಚೆಂಡ್ ಪ್ಯಾಡ್‍ಗೆ ತಗಲಿದ್ದನ್ನು ಗಮನಿಸಿದ ಮೂರನೇ ಅಂಪೈರ್ ಔಟ್ ತೀರ್ಪು ನೀಡುವಂತೆ ಸೂಚನೆ ನೀಡಿದ್ದಾರೆ.

    ಔಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ರೋಹಿತ್ ಶರ್ಮಾ ನಕ್ಕು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ಥರ್ಡ್ ಅಂಪೈರ್ ಮೈಕಲ್ ಗೌಫ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಥರ್ಡ್ ಅಂಪೈರ್ ಗೆ ಕಣ್ಣು ಕಾಣಿಸುವುದಿಲ್ಲ. ಅವರು ಕುರುಡರಾಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

    ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದಾಗ ಪತ್ನಿ ರಿತಿಕಾ ಸಿಂಗ್ ವಾಟ್ ಎಂದು ಹೇಳಿ ಅಸಮಾಧಾನ ಹೊರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://twitter.com/IamRs45Fc/status/1144189062284103680

    ಆಟಗಾರರು ಶಿಸ್ತು ಉಲ್ಲಂಘಿಸಿದರೆ ಅವರ ವಿರುದ್ಧ ದಂಡ ಹಾಕಲಾಗುತ್ತದೆ. ಮೈದಾನದಲ್ಲಿ ಅಂಪೈರ್ ಗಳು ತಪ್ಪು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳಬಹುದು. ಥರ್ಡ್ ಅಂಪೈರ್ ತಪ್ಪು ತೀರ್ಪನ್ನು ಹೇಗೆ ಒಪ್ಪಿಕೊಳ್ಳುವುದು. ತಪ್ಪು ತೀರ್ಪು ನೀಡುವ ಅಂಪೈರ್ ಗಳಿಗೆ ಐಸಿಸಿ ಯಾಕೆ ದಂಡ ವಿಧಿಸುವುದಿಲ್ಲ ಎಂದು ಸರ್ ಜಡೇಜಾ ಫ್ಯಾನ್ ಅಸಮಾಧಾನ ಹೊರಹಾಕಿದ್ದಾರೆ.

    ಥರ್ಡ್ ಅಂಪೈರ್ ಮೈಕಲ್ ಗೋ ಇಂಗ್ಲೆಂಡ್ ಮೂಲದವರು. ಇದೊಂದು ಅತ್ಯಂತ ತಪ್ಪು ತೀರ್ಪು, ಥರ್ಡ್ ಅಂಪೈರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ.

  • ಡಿಆರ್‌ಎಸ್ ವಿರುದ್ಧ ಕೊಹ್ಲಿ ಅಪಸ್ವರ

    ಡಿಆರ್‌ಎಸ್ ವಿರುದ್ಧ ಕೊಹ್ಲಿ ಅಪಸ್ವರ

    ಮುಂಬೈ: ಮೊಹಾಲಿ ಏಕದಿನ ಕ್ರಿಕೆಟ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್‌ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಆರ್‍ಎಸ್‍ನಲ್ಲಿ ಸ್ಥಿರತೆ ಇಲ್ಲ ಎಂದು ತಿಳಿಸಿದ್ದಾರೆ.

    4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣರಾದ ಟರ್ನರ್ ಅವರ ಔಟ್ ಮನವಿಯನ್ನು ಅಂಪೈರ್ ನಿರಾಕರಿಸಿದ ಘಟನೆಯ ಕುರಿತು ಕೊಹ್ಲಿ ಪ್ರತಿಕ್ರಿಯೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಂದ್ಯದ 44 ಓವರಿನಲ್ಲಿ ಟರ್ನರ್ 41 ರನ್ ಗಳಿಸಿದ್ದರು. ಬೌಲಿಂಗ್ ಎಸೆದ ಚಹಲ್ ಎಸೆತದಲ್ಲಿ ಭಾರೀ ಶಾಟ್‍ಗೆ ಸಿಡಿಸಲು ಮುಂದಾದ ಟರ್ನರ್ ವಿಫಲರಾಗಿದ್ದರು. ಇತ್ತ ವಿಕೆಟ್ ಹಿಂದಿದ್ದ ಪಂತ್ ಬಾಲ್ ಕ್ಯಾಚ್ ಪಡೆದು, ಕೂಡಲೇ ಸ್ಟಂಪ್ ಕೂಡ ಮಾಡಿದ್ದರು. ಆಟಗಾರರ ಮನವಿಯನ್ನು ಅಂಪೈರ್ ನಿರಾಕರಿಸಿ ನಾಟೌಟ್ ಎಂದು ತಿಳಿಸಿದ್ದರು. ಕೂಡಲೇ ಕೊಹ್ಲಿ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದ್ದರು.

    ಟರ್ನರ್ ಸ್ಟಂಪ್ ಸೇರಿದಂತೆ ಕ್ಯಾಚ್ ಪರಿಶೀಲನೆ ನಡೆಸಿದ 3ನೇ ಅಂಪೈರ್ ಕೂಡ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಡಿಆರ್‍ಎಸ್ ನಲ್ಲಿ ಚೆಂಡು ಟರ್ನರ್ ಬ್ಯಾಟಿಗೆ ತಾಗಿ ಹೋಗಿದ್ದು ಸ್ಪಷ್ಟವಾಗಿತ್ತು. ಈ ವೇಳೆ ಕೊಹ್ಲಿ ಮೈದಾನದಲ್ಲೇ ಗರಂ ಆಗಿದ್ದರು.

    ನಿರ್ಣಯಕ ಹಂತದ ವಿಕೆಟ್ ಪಡೆದರೂ ಕೂಡ ಅಂಪೈರ್ ಕೆಟ್ಟ ತೀರ್ಪಿಗೆ ಬೆಲೆ ತೆತ್ತ ಟೀಂ ಇಂಡಿಯಾ ಸೋಲುಂಡಿತ್ತು. ಪರಿಣಾಮ ಸರಣಿಯಲ್ಲಿ ಆಸೀಸ್ ಸಮಬಲ ಸಾಧಿಸಿತ್ತು.

    ಆಸೀಸ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಅವರು ಗೆಲುವಿಗೆ ಅರ್ಹರಿದ್ದಾರೆ. ಆದರೆ ಡಿಆರ್‍ಎಸ್ ನಿರ್ಧಾರ ನನ್ನನ್ನು ಕ್ಷಣ ಕಾಲ ಅಚ್ಚರಿಗೊಳ್ಳುವಂತೆ ಮಾಡಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

    ಏಕದಿನ ಸರಣಿಯ ಅಂತಿಮ ಪಂದ್ಯ ಮಾರ್ಚ್ 13ರಂದು ದೆಹಲಿಯಲ್ಲಿ ನಡೆಯಲಿದ್ದು, ಸಮಬಲ ಸಾಧಿಸಿರುವ ಇತ್ತಂಡಗಳು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ ಆರಂಭದೊಂದಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಮನೋರಂಜನೆ ದೊರೆಯುತ್ತಿದ್ದು. ಟೀಂ ಫ್ರಾಂಚೈಸಿಗಳು ಟೂರ್ನಿಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇದರೊಂದಿಗೆ 11 ನೇ ಆವೃತ್ತಿಯ ಟೂರ್ನಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

    ಮಿಡ್ ಸೀಸನ್ ಟ್ರಾನ್ಸ್ ಫಾರ್: ಟೂರ್ನಿಯಲ್ಲಿ ಪ್ರಮುಖವಾಗಿ `ಮಿಡ್ ಸೀಸನ್ ಟ್ರಾನ್ಸ್ ಫಾರ್’ ಎಂಬ ಹೊಸ ನಿಯಮ ಜಾರಿಗೆಯಾಗಿದೆ. ಈ ನಿಯಮದ ಪ್ರಕಾರ ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನು ಆಡದ ಆಟಗಾರರು ಹರಾಜದ ತಂಡದ ಬದಲಾಗಿ ಬೇರೆಂದು ತಂಡ ಸೇರಲು ಅವಕಾಶ ನೀಡಲಾಗಿದೆ. ಅಲ್ಲದೇ ಈ ವೇಳೆ ಎರಡು ಪಂದ್ಯ ಮತ್ತು ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ್ದರೂ, ತಂಡದ ಬದಲಾವಣೆಗೆ ಅವಕಾಶವಿದೆ.

     

    ಮಿಡ್ ಸೀಸನ್ ಟ್ರಾನ್ಸ್ ಫಾರ್ ನಿಯಮ ಟೂರ್ನಿಯ ಮಧ್ಯದಲ್ಲಿ ಕೇವಲ 5 ದಿನಗಳು ಮಾತ್ರ ಅವಕಾಶ ನೀಡಲಾಗಿದೆ. 2016 ರ ಈ ನಿಯಮ ಜಾರಿಯಲ್ಲಿ ಇಲ್ಲದ ಕಾರಣ ಬೌಲರ್ ಡೇಲ್ ಸ್ಟೇನ್ನ್ ಸ್ಟೈನ್ ಗುಜರಾತ್ ಲಯನ್ಸ್ ಪರ ಆಡಲು ಸಾಧ್ಯವಾಗಿರಲ್ಲ. ಹಲವು ಆಟಗಾರರು ಇಂತಹ ಸಮಸ್ಯೆಯನ್ನು ಎದುರಿಸಿದ್ದರು.

    ಡಿಆರ್ ಎಸ್: ಐಸಿಸಿ ಹಾಗೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಜಾರಿ ಇದ್ದ ತೀರ್ಪು ಪುನರ್ ಪರಿಶೀಲನೆ ನೀಡುವ ನಿಯಮವನ್ನು ಜಾರಿ ಮಾಡಲಾಗಿದೆ. ಪಂದ್ಯದ ವೇಳೆ ಪ್ರತಿ ತಂಡಕ್ಕೂ ಒಂದು ಮನವಿಯನ್ನು ಸಲ್ಲಿಸುವ ಅವಕಾಶ ನೀಡಲಾಗಿದೆ.

    ಡಿಆರ್ ಎಸ್ ನಿಯಮವನ್ನು ಐಪಿಎಲ್ ಟೂರ್ನಿಯಲ್ಲಿ ಜಾರಿಗೆ ತರಲು ಹಲವು ವರ್ಷಗಳಿಂದ ಚಿಂತನೆ ನಡೆಸಲಾಗಿತ್ತು. ಇದರ ಭಾಗವಾಗಿ 11 ನೇ ಆವೃತ್ತಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.

    ದೂರದರ್ಶನದಲ್ಲಿ ಐಪಿಎಲ್: ದೇಶದ ಗ್ರಾಮೀಣ ಭಾಗದ ಜನರಿಗೂ ಐಪಿಎಲ್ ತಲುಪಿಸುವ ಭಾಗವಾಗಿ ದೂದರ್ಶನದಲ್ಲೂ ಐಪಿಎಲ್ ಪಂದ್ಯಗಳ ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಈ ಕುರಿತು ನೇರ ಪ್ರಸಾರದ ಹಕ್ಕುಗಳನ್ನು ಖರೀದಿಸಿರುವ ಸ್ಟಾರ್ ವಾಹಿಯೂ ಅನುಮತಿ ನೀಡಿದೆ. ಆದರೆ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಒಂದು ಗಂಟೆ ತಡವಾಗಿ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

    ವರ್ಚುವಲ್ ರಿಯಾಲಿಟಿ: ಅಂತರ್ಜಾಲದಲ್ಲಿ ಕ್ರಿಕೆಟ್ ನೇರ ಪ್ರಸಾರ ಮಾಡುತ್ತಿದ್ದ ಹಾಟ್ ಸ್ಟಾರ್ ಆ್ಯಪ್ ವರ್ಚುವಲ್ ರಿಯಾಲಿಟಿ ಸೇವೆಯನ್ನು ನೀಡುತ್ತಿದೆ. ಈ ಮಾದರಿಯಲ್ಲಿ ಪಂದ್ಯವನ್ನು ನೋಡಲು ಗ್ರಾಹಕರು ಮಾರುಕಟ್ಟೆಯಲ್ಲಿ ಹೊಸ ವಿಆರ್ ಗ್ಲಾಸ್ ಗಳನ್ನು ಖರೀದಿಸಬೇಕಿದೆ. ಅಲ್ಲದೇ ವಿಆರ್ ಸೇವೆ ತಂತ್ರಜ್ಞಾನವನ್ನು ಹೊಂದಿರುವ ಮೊಬೈಲ್ ನಲ್ಲಿ ಮಾತ್ರ ಈ ಸೇವೆ ಪಡೆಯಲು ಸಾಧ್ಯವಿದೆ.

    ವಿಆರ್ ವಿಶೇಷತೆ: ಆ್ಯಪ್ ನಲ್ಲಿ ಗ್ರಾಹಕರು ಲೈವ್ ಪ್ರಸಾರವನ್ನು ಅರ್ಧ ಗಂಟೆಗಳ ಕಾಲ ನಿಲ್ಲಿಸಿ ಮತ್ತೆ ನೋಡಲು ಅವಕಾಶ ನೀಡಲಾಗಿದೆ. ವಿಆರ್ ಬಳಕೆ ಮಾಡುವುದರಿಂದ ಕ್ರೀಡಾಂಗಣದ 360 ಡಿಗ್ರಿ ಕೋನದಲ್ಲಿಯೂ ವಿಕ್ಷೀಸಬಹುದಾಗಿದೆ. ಇದರಿಂದ ಮೈದಾನದಲ್ಲೇ ಕುಳಿತು ನೋಡುತ್ತಿರುವ ಅನುಭವ ಪಡೆಯಬಹುದು ಎಂದು ಸ್ಟಾರ್ ಇಂಡಿಯಾ ವಾಹಿನಿಯ ನಿರ್ದೇಶಕ ಸಂಜಾಯ್ ಗುಪ್ತಾ ತಿಳಿಸಿದ್ದಾರೆ.