Tag: dream

  • ಅಪ್ಪು ಕಂಡ ಕನಸು: ನನಸಾಗಿಸುತ್ತಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್

    ಅಪ್ಪು ಕಂಡ ಕನಸು: ನನಸಾಗಿಸುತ್ತಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್

    ಪ್ಪು (Appu) ಇಲ್ಲ. ಆದರೆ ಅವರ ಕನಸುಗಳು ಇನ್ನೂ ಜೀವಂತವಾಗಿವೆ. ಒಂದಾ ಎರಡಾ? ಏನೇನೊ ಮಾಡಬೇಕೆಂದು ಅವರು ಬಯಸಿದ್ದರು. ಯಾವ್ಯಾವುದೋ ಸಿನಿಮಾಗಳನ್ನು ಮಾಡುವ ಬಯಕೆ ಹೊತ್ತಿದ್ದರು. ಆದರೆ ಅದು ಮುಗಿಯಲಿಲ್ಲ. ಆದರೆ ಅದನ್ನು ಪೂರ್ತಿ ಮಾಡಲು ಸಜ್ಜಾಗಿದ್ದಾರೆ ಪತ್ನಿ ಅಶ್ವಿನಿ (Ashwini Puneet Raj Kumar). ಪತಿಯ ಒಂದೊಂದೆ ಆಸೆ, ಒಂದೊಂದೇ ಕನಸು, ಒಂದೊಂದೇ ಲೋಕವನ್ನು ಜನರ ಮುಂದಿಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.

    ಅಪ್ಪು ಮಹಾ ಕನಸುಗಳನ್ನು ಹೊತ್ತಿದ್ದರು. ಒಂದೊಂದೇ ಹೆಜ್ಜೆಗಳನ್ನು ಇಡುತ್ತಿದ್ದರು. ಅಭಿನಯದ ಜೊತೆಜೊತೆಗೆ ಬೇರೇನೊ ಮಾಡಬೇಕೆನ್ನುವ ಆಸೆ ಇಟ್ಟುಕೊಂಡಿದ್ದರು. ಅದಕ್ಕಾಗಿಯೇ ಅವರು ಮೊಟ್ಟ ಮೊದಲು ಆರಂಭಿಸಿದ್ದು ಪಿಆರ್‌ಕೆ (PRK) ಬ್ಯಾನರ್. ಪಾರ್ವತಮ್ಮ ರಾಜ್‌ಕುಮಾರ್ ಬ್ಯಾನರ್. ಆ ಬ್ಯಾನರ್‌ನಿಂದ ಅವರು ಅನೇಕ ಸಿನಿಮಾಗಳನ್ನು ಈಗಾಗಲೇ ಮಾಡಿದ್ದಾರೆ. ಅವರ ಉದ್ದೇಶ ಇದ್ದದ್ದು ಒಂದೇ. ಹೊಸಬರಿಗೆ ಅವಕಾಶ ಕೊಡಬೇಕು. ಹೊಸ ನಿರ್ದೇಶಕರು, ನಟ ನಟಿಯರು, ತಂತ್ರಜ್ಞರು ಎಲ್ಲರಿಗೂ ಬಣ್ಣದಲೋಕದಲ್ಲಿ ಬೆಳಗುವ ಅದೃಷ್ಟ ನೀಡಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕಾಗಿಯೇ ಅನೇಕ ಸಿನಿಮಾ ನಿರ್ಮಿಸಿದರು. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    ಪಿಆರ್‌ಕೆ ಬ್ಯಾನರ್‌ನಿಂದ ಈಗಾಗಲೇ ಅನೇಕ ಸಿನಿಮಾ ಹೊರ ಬಂದಿವೆ. ಹೊಸ ಹೊಸ ನಿರ್ದೇಶಕರು ಹುಟ್ಟಿಕೊಂಡಿದ್ದಾರೆ. ಹೊಸ ಹೊಸ ನಟ ನಟಿಯರು ಹೊಳೆಯುತ್ತಿದ್ದಾರೆ. ಹೊಸ ಹೊಸ ತಂತ್ರಜ್ಞರು ಮೆರೆಯುತ್ತಿದ್ದಾರೆ. ಅವರಿಗೆಲ್ಲ ಅಣ್ಣನಂತೆ ನಿಂತಿದ್ದು ಪುನೀತ್ ರಾಜ್‌ಕುಮಾರ್ (Puneet Raj Kumar) . ಮೊಟ್ಟ ಮೊದಲು ಅವರು ಕತೆ ಕೇಳುತ್ತಿದ್ದರು. ಕತೆಯೇ ಜೀವಾಳ ಎಂದು ಕಾಸು ಸುರಿಯುತ್ತಿದ್ದರು. ಸಿನಿಮಾದ ಸೋಲು ಗೆಲುವು ಮುಖ್ಯ ಅಲ್ಲ. ಆಯಾ ಸಿನಿಮಾ ಜನರಿಗೆ ಮುಟ್ಟಿಸುವ ಸಂದೇಶ ಮುಖ್ಯ ಎನ್ನುತ್ತಿದ್ದರು. ಇನ್ನೂ ಅನೇಕ ಸಿನಿಮಾ ಮಾಡಬೇಕಿತ್ತು. ಅಷ್ಟರಲ್ಲಿ ಹೋಗಿ ಬಿಟ್ಟರು. ಈಗ ಪತಿ ಕನಸುಗಳನ್ನು ಈಡೇರಿಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಜ್ಜಾಗಿದ್ದಾರೆ. ಅಖಾಡಕ್ಕೆ ಇಳಿದಿದ್ದಾರೆ.

    ಅಪ್ಪು ಹೋಗಿ ಎರಡು ವರ್ಷಗಳಾದವು. ಆ ನೋವು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಹಿಂಡುತ್ತಿದೆ. ಆದರೆ ಪತಿ ಕನಸುಗಳನ್ನು ಅಲ್ಲಲ್ಲೇ ಬಿಡಬಾರದಲ್ಲವೆ ? ಅದಕ್ಕಾಗಿಯೇ ಅಶ್ವಿನಿ ಅಂದೇ ಗಟ್ಟಿ ನಿರ್ಧಾರಕ್ಕೆ ಬಂದಿದ್ದರು. ಅಪ್ಪು ಏನೇನು ಆಸೆ ಪಟ್ಟಿದ್ದರೋ, ಏನೇನೊ ಸಿನಿಮಾಗಳನ್ನು ಮಾಡಬೇಕೆಂದು ತೀರ್ಮಾನಿಸಿದ್ದರೊ, ಅದನ್ನೆಲ್ಲ ಈಗ ಇವರು ಮಾಡಲು ತಯಾರಾಗಿದ್ದಾರೆ. ಪಿಆರ್‌ಕೆ ಬ್ಯಾನರ್ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅದರ ಮೊದಲ ಮೆಟ್ಟಿಲಾಗಿ ಎರಡು ಸಿನಿಮಾ ತಯಾರಾಗಿವೆ. ಬಿಡುಗಡೆಗೆ ಸಿದ್ಧವಾಗುತ್ತಿವೆ. ಆಚಾರ್ ಅಂಡ್ ಕೋ ಹಾಗೂ ಓಟು ಸಿನಿಮಾಗಳು ಜನರ ಮುಂದೆ ಬರಲು ಸಜ್ಜಾಗಿವೆ.

    ಇನ್ನೊಂದು ಕಡೆ ಅನೇಕ ಹೊಸಬರ ಕತೆಗಳನ್ನು ಕೇಳುತ್ತಿದ್ದಾರೆ. ಈಗಾಗಲೇ ಹೆಚ್ಚು ಕಮ್ಮಿ ಹದಿನೈದು ಕತೆಗಳನ್ನು ಕೇಳಿದ್ದಾರೆ. ಎಲ್ಲರೂ ಹೊಸಬರೇ. ಯಾರನ್ನೂ ಅವರು ನಿರಾಸೆ ಮಾಡುವುದಿಲ್ಲ. ಯಾವ್ಯಾವುದೋ ಕನಸು ಹೊತ್ತು ಬಂದಿರುವ ಆ ಜೀವಗಳನ್ನು ಪ್ರೀತಿಯಿಂದ ಕೂಡಿಸಿ ಕತೆ ಕೇಳುತ್ತಾರೆ. ಕೊನೆಗೆ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈ ಹದಿನೈದು ಕತೆಗಳಲ್ಲಿ 2 ಕತೆಯನ್ನು ಮಾತ್ರ ಅವರು ಓಕೆ ಮಾಡಿದ್ದಾರೆ. ಅದು ಯಾವುದೆಂದು ಗೊತ್ತಾಗಿಲ್ಲ. ಅದರ ಶೂಟಿಂಗ್ ಶುರು ಮಾಡುವ ಎಲ್ಲ ಸಿದ್ದತೆಗಳು ನಡೆಯುತ್ತಿವೆ. ಒಂದು ಹಂತ ಬಂದ ಮೇಲೆ ಆ ಸಿನಿಮಾ ಅನೌನ್ಸ್  ಮಾಡಲಿದ್ದಾರೆ.

    ಇನ್ನೊಂದು ಕಡೆ ಪಕ್ಕಾ ಹೊಸಬರ ತಂಡದ ಜತೆ ಸಿನಿಮಾ ಮಾಡಲು ತೀರ್ಮಾನಿಸಿದ್ದಾರೆ. ಮತ್ತೊಂದು ಅನುಭವಿ ತಂಡಕ್ಕೂ ಬಂಡವಾಳ ಹಾಕಲಿದ್ದಾರೆ. ಈ ವರ್ಷದ ಕೊನೆಗೆ ಎರಡೂ ಸಿನಿಮಾಗಳ ಮುಹೂರ್ತ ನಡೆಯಲಿದೆ. ಮುಂದಿನ ವರ್ಷ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಶ್ವಿನಿ ಪುನೀತ್ ಈಗ ಪಿಆರ್‌ಕೆ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಹೊಸ ಹೆಜ್ಜೆ ಇಟ್ಟಿದ್ದಾರೆ. ಪತಿ ಕಂಡಿದ್ದ ಅನೇಕ ಕನಸುಗಳನ್ನು ಈಡೇರಿಸಲು ಏನೇನು ಬೇಕೊ ಎಲ್ಲವನ್ನೂ ಮಾಡುತ್ತಿದ್ದಾರೆ.

  • ಅಮ್ಮನಿಗೆ ಕೊಟ್ಟ ಮಾತಿಗಾಗಿ ಸಿನಿಮಾ ರಂಗದಿಂದ ದೂರವಿದ್ದೆ : ಮಾನ್ವಿತಾ ಹರೀಶ್

    ಅಮ್ಮನಿಗೆ ಕೊಟ್ಟ ಮಾತಿಗಾಗಿ ಸಿನಿಮಾ ರಂಗದಿಂದ ದೂರವಿದ್ದೆ : ಮಾನ್ವಿತಾ ಹರೀಶ್

    ಕೆಲ ತಿಂಗಳುಗಳಿಂದ ಮಾನ್ವಿತಾ ಹರೀಶ್ ಸಿನಿಮಾ ರಂಗದಿಂದ ದೂರವಿದ್ದರು. ಟಗರು ಪುಟ್ಟಿಗೆ ಯಾವುದೇ ಸಿನಿಮಾಗಳು ಸಿಗುತ್ತಿಲ್ಲವಾ ಎನ್ನುವ ಅನುಮಾನ ಕೂಡ ಮೂಡಿತ್ತು. ಅದಕ್ಕೆ ಪೂರಕ ಎನ್ನುವಂತೆ ಮಾನ್ವಿತಾ ಹರೀಶ್ ಕೂಡ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಯಾಕೆ ಅವರು ಸಿನಿಮಾ ರಂಗದಿಂದ ಛೋಟಾ ಬ್ರೇಕ್ ತಗೆದುಕೊಂಡಿದ್ದರು ಎನ್ನುವುದಕ್ಕೆ ಕಾರಣ ಸಿಕ್ಕಿತೆ. ಆ ಕಾರಣವನ್ನೂ ಅವರೇ ಹೇಳಿಕೊಂಡಿದ್ದಾರೆ.

    ಮಾನ್ವಿತಾ ಎಜ್ಯುಕೇಷನ್ ಕಂಪ್ಲೀಟ್ ಮಾಡಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತಂತೆ. ಹಾಗಾಗಿ ಅವರು ಕೆಲ ತಿಂಗಳು ಸಿನಿಮಾ ರಂಗದಿಂದ ದೂರ ಇದ್ದರಂತೆ.  ಹಾಗಾಗಿ ಬ್ಯಾಲೆನ್ಸ್ ಮಾಡಿಕೊಂಡು ಸಿನಿಮಾಗಳ ಜೊತೆಗೆ ವಿದ್ಯಾಭ್ಯಾಸವನ್ನೂ ಅವರು ಮುಂದುವರೆಸಿದ್ದಾರಂತೆ. ಈ ಬಗ್ಗೆ ಮಾನ್ವಿತಾ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ

    ಮಾನ್ವಿತಾ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು ಎನ್ನುವುದು ಅವರ ತಾಯಿಯ ಕನಸಾಗಿತ್ತಂತೆ. ಹಾಗಾಗಿ ಅವರು ಮಾಸ್ ಕಮ್ಯೂನಿಕೇಷನ್‍ ನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರಂತೆ. ಅದೂ ಡಿಸ್ಟಿಂಕ್ಷನ್‍ ನಲ್ಲಿ ಪಾಸಾಗಿದ್ದಾರಂತೆ. ಈ ಕಾರಣಕ್ಕಾಗಿಯೇ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಅಂದಿದ್ದಾರೆ. ಇನ್ಮುಂದೆ ಹಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ನನ್ನ 20 ವರ್ಷದ ಕನಸು : ನಿರ್ದೇಶಕ ಅನೂಪ್ ಭಂಡಾರಿ

    ವಿಕ್ರಾಂತ್ ರೋಣ ನನ್ನ 20 ವರ್ಷದ ಕನಸು : ನಿರ್ದೇಶಕ ಅನೂಪ್ ಭಂಡಾರಿ

    ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ಹಲವು ನಿರ್ದೇಶಕರ ಕನಸಾಗಿರುತ್ತದೆ. ಅಂತಹ ಕನಸನ್ನು ನಿರ್ದೇಶಕ ಅನೂಪ್ ಭಂಡಾರಿಗೆ 20 ವರ್ಷಗಳ ಹಿಂದಿಯೇ ಕಂಡಿದ್ದರಂತೆ. 20 ವರ್ಷಗಳ ನಂತರ ಅದೀಗ ಈಡೇರಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಆ ಕನಸು ಈಡೇರಿದೆ ಎಂದಿದ್ದಾರೆ ಅನೂಪ್. ಈ ಕುರಿತು ಅವರು ಮಾತನಾಡಿದ್ದಾರೆ.

    “ವಿಕ್ರಾಂತ್ ರೋಣ ನನ್ನ ೨೦ ವರ್ಷದ ಕನಸು, ಸುದೀಪ್ ಸರ್ ಜೊತೆ ಕೆಲಸ ಮಾಡಲು. ೨೬ ವರ್ಷದ ಹಿಂದೆ ನಾನು ಸುದೀಪ್ ಸರ್‌ನ ಒಂದು ಫೋಟೋದಲ್ಲಿ ನೋಡಿದ್ದೆ. ನನ್ನ ತಂದೆ ಡ್ರಾಯರ್‌ನಲ್ಲಿ ಒಂದು ಫೋಟೋ ಇತ್ತು. ಅದರಲ್ಲಿದ್ದ ಯುವಕನಿಗೆ ಮೀಸೆ, ಗಡ್ಡ ಏನೂ ಇರಲಿಲ್ಲ, ನಾನು ಯಾರುದು ಎಂದು ನನ್ನ ತಂದೆಯನ್ನು ಕೇಳಿದಾಗ ಅವರು ಸುದೀಪ್ ನಮ್ಮದೊಂದು ಸೀರಿಯಲ್ ಮಾಡ್ತಾ ಇದ್ದಾರೆ ಅಂತ ಹೇಳಿದ್ರು. ಇವರನ್ನು ಹಾಕೊಂಡು ಸಿನಿಮಾನೇ ಮಾಡಬಹುದಲ್ಲ ಇಷ್ಟು ಸ್ಮಾರ್ಟಾಗಿ ಇದ್ದಾರೆ ಅಂತ ಹೇಳಿದ್ದೆ ಅವತ್ತು. ನಮ್ಮ ತಂದೆಗೆ ಸಿನಿಮಾ ಮಾಡುವಂತಹ ಅವಕಾಶ ಬಂದಿಲ್ಲ, ಇವತ್ತು ನನಗೆ ಬಂದಿದೆ’ ಎಂದಿದ್ದಾರೆ ಅನೂಪ್. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಇದೀಗ ಕಿಚ್ಚ ಮತ್ತು ಅನೂಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೂಪ್ ಕೆಲಸದ ಬಗ್ಗೆಯೇ ಅನೇಕರು ಮಾತನಾಡಿದ್ದಾರೆ. ಈ ತಿಂಗಳು ಕೊನೆಯಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಸುದೀಪ್, “ಕನ್ನಡ ಚಿತ್ರರಂಗದ ಒಂದು ಭಾಗ ಆಗೋಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಕಪ್ ಹಾಕಿದಾಗ ಒಂದೇ ಆಸೆ ಇದ್ದಿದ್ದು, ಹೀರೋ ಆಗ್ಬೇಕು ಅಂತ. ಹೀರೋ ಆದ್ಮೇಲೆ ಆಸೆ ಇದ್ದಿದ್ದು ಒಂದು ಹೌಸ್‌ಫುಲ್ ಆಗ್ಬೇಕು ಅಂತ. ಇವತ್ತಿಗೂ ಅದಕ್ಕಿಂದ ಮೇಲೆ ನಾನು ಹೋಗೇ ಇಲ್ಲ. ನಾನು ಸಿನಿಮಾನ ಪ್ರೀತಿಸಿದ್ದೇನೆ, ಅದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ಸಿನಿಮಾ ಇವತ್ತಿಗೂ ಕೈ ಹಿಡಿದಿದೆ. ಚಿತ್ರರಂಗದ ಹಿರಿಯರು, ಸ್ನೇಹಿತರು ಇರಲಿಲ್ಲ ಎಂದರೆ ನಾನು ಕಲಾವಿದನಾಗಿ ಬೆಳೆಯುತ್ತಿರಲಿಲ್ಲ, ಸ್ನೇಹಿತನಾಗಿ ಬೆಳೆಯುತ್ತಿರಲಿಲ್ಲ. ಮನುಷ್ಯನಾಗಿ ಮುಂದೆ ಹೋಗುತ್ತಾ ಇರಲಿಲ್ಲ. ನಾವೇನಾದ್ರೂ ಮನೆಗೆ ವಾಪಸ್ ತೆಗೆದುಕೊಂಡು ಹೋಗೋದೆಂದ್ರೆ ಸ್ಟಾರ್ಡಮ್ ಅಲ್ಲ, ಕೇವಲ ಜನರ, ಅಭಿಮಾನಿಗಳ ಪ್ರೀತಿಯಷ್ಟೇ. ಅದಕ್ಕಿಂತ ಸುಂದರವಾದದ್ದು ಏನೂ ಇಲ್ಲ’ ಅನ್ನುತ್ತಾರೆ ಸುದೀಪ್.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್ ಕಾಣುತ್ತಿರುವುದು ಹಗಲು ಕನಸು: ಸಚಿವ ಸಿ.ಸಿ.ಪಾಟೀಲ್

    ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್ ಕಾಣುತ್ತಿರುವುದು ಹಗಲು ಕನಸು: ಸಚಿವ ಸಿ.ಸಿ.ಪಾಟೀಲ್

    – ಹಗಲು ಬೀಳುವ ಕನಸು ತುಂಬಾನೇ ಡೇಂಜರ್

    ಗದಗ: ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಹಗಲು ಕನಸು ಕಾಣುತ್ತಿದ್ದಾರೆ. ಹಗಲು ಬೀಳುವ ಕನಸು ತುಂಬಾನೇ ಡೇಂಜರ್ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

    ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿಕೆಶಿ ನಾನೇ ಸಿಎಂ ಅಂತಿದ್ದಾರೆ. ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಅವರಲ್ಲೆ ಕುಸ್ತಿ ಹಿಡದಿದ್ದು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಎಂದರು. ಸಿಎಂ ಆಗಬೇಕು ಅಂದರೆ ಬಿಜೆಪಿಯಲ್ಲಿ ಒಂದು ಸಿಸ್ಟಮ್ ಇದೆ. ಕಾಂಗ್ರೆಸ್ ನಲ್ಲಿ ಮತ್ತೊಂದು ಸಿಸ್ಟಮ್ ಇದೆ. ಬಿಜೆಪಿಯಲ್ಲಿ ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ಆರಿಸುತ್ತೇವೆ. ಆದರೆ ಕಾಂಗ್ರೆಸ್ ನಲ್ಲಿ ಹಾಗಿಲ್ಲ. ಎದುರಾಳಿಯಿಂದ ಸಿಎಂ ಹೆಸರಿನ ಚೀಟಿ ಬರುತ್ತೆ. ಆ ಚೀಟಿಯಲ್ಲಿ ಯಾರ ಹೆಸರು ಇರುತ್ತದೆ ಎಂಬುವುದು ಯಾರಿಗೂ ಗೊತ್ತಿರಲ್ಲ. ಕನಸು ಕಾಣಬೇಕು, ಆದರೆ ಹಗಲು ಕನಸು ಭಾರೀ ಡೇಂಜರ್ ಎಂದರು.

    ಗದಗನ ಮಿರ್ಚಿ ಕಥೆ ಹೇಳಿ ಕಾಂಗ್ರೆಸ್ ನಾಯಕರಿಗೆ ಅಪಹಾಸ್ಯ ಮಾಡಿದರು. ತೋಂಟದಾರ್ಯ ಮಠದ ಸ್ವಾಮೀಜಿ ಈ ಹಿಂದೆ ಕಥೆಯೊಂದನ್ನು ಹೇಳುತ್ತಿದ್ದರು. ಅದೇನೆಂದರೆ, ಮಠದ ಎದುರಿಗೆ ಒಬ್ಬ ವ್ಯಕ್ತಿ ಕೂತು ಏನೋ ತಿಂದ ಹಾಗೆ ಮಾಡುತ್ತಿದ್ದನಂತೆ. ಸಾಕಾಗಿ ಒಂದೊಮ್ಮೆ ಸ್ವಾಮಿಗಳು ಆ ವ್ಯಕ್ತಿ ಕೇಳಿದರೆ, ಗದುಗಿನ ಮಿರ್ಚಿ ತಿಂದ ಹಾಗೇ ಸುಮ್ನೆ ಕಲ್ಪನೆ ಮಾಡುತ್ತಿದ್ದೇನೆ ಎಂದಿದ್ದನಂತೆ. ಆಗ ಸ್ವಾಮಿಜಿ ಹೇಳಿದರಂತೆ ತಿಂದ ಹಾಗೆ ಮಾಡುವುದಾದರೆ ಮಿರ್ಚಿ ಜೊತೆಗೆ ಧಾರವಾಡ ಪೇಡಾ ತಿನ್ನು. ಗೋಕಾಕ್ ಕರದಂಟು ತಿನ್ನು, ಬೆಳಗಾವಿ ಕುಂದಾ ತಿನ್ನು ಇಲ್ಲದಿರುವುದನ್ನು ಯಾಕೆ ಕಲ್ಪನೆ ಮಾಡಿಕೊತಿಯಾ ಅಂದರಂತೆ. ಹಾಗೇ ಕನಸು ಕಾಣೋದಾದರೆ ಪ್ರಧಾನ ಮಂತ್ರಿಯಾಗುವುದನ್ನು ಕಾಣಲಿ, ವಲ್ರ್ಡ್ ಬ್ಯಾಂಕ್ ಅಧ್ಯಕ್ಷ ಆಗುವುದನ್ನ ಕಾಣಲಿ, ಅದನ್ನು ಬಿಟ್ಟು ಮುಂದಿನ ಸಿಎಂಗಾಗಿ ಕಾಂಗ್ರೆಸ್ ಕಂಡ ಕನಸು, ಹಗಲು ಕನಸು ಎಂದು ಕಥೆಯ ಮೂಲಕ ಅಪಹಾಸ್ಯ ಮಾಡಿದರು.

    ನಂತರ ಪಂಚಮಸಾಲಿ ಸ್ವಾಮಿಗಳ ಪರ್ಯಾಯ ಒಕ್ಕೂಟದ ರಚನೆ ಕುರಿತು, ಸ್ವಾಮೀಜಿಗಳು, ಜಗದ್ಗುರು ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ. ಏಕೆಂದರೆ ಧರ್ಮೊಪದೇಶ ಮಾಡುವ ಕಾವಿ ಧಾರಿಗಳು ತಮ್ಮಷ್ಟಕ್ಕೆ ತಾವೇ ಯೋಚಿಸಬೇಕು. ಸಮಾಜದ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ಗ್ರೂಪಿಸಮ್ ಮಾಡಬಾರದು. ಗ್ರೂಪ್ ಮಾಡುವುದಾದರೆ ಸ್ವಾಮಿಗಳು ಹಾಗೂ ರಾಜಕಾರಣಿಗಳ ಮಧ್ಯೆ ವ್ಯತ್ಯಾಸ ಏನುಳಿತು ಎಂದು ಮಠಾಧೀಶರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

  • ಆ ಭೀಕರ ಕನಸು ಬಿದ್ದರೆ ಬದುಕೋದೇ ಡೌಟು!

    ಆ ಭೀಕರ ಕನಸು ಬಿದ್ದರೆ ಬದುಕೋದೇ ಡೌಟು!

    ಧ್ಯರಾತ್ರಿ ನೀವು ಅಂಗಾತ ಮಲಗಿಕೊಂಡಿರುತ್ತೀರಿ. ಜಗತ್ತಿನ ಯಾವ ಚಿಂತೆಯೂ ಸುಳಿಯದಂತಹ ನಿದಿರೆಯ ಸುಖ ನಿಮ್ಮನ್ನಾವರಿಸಿಕೊಂಡಿರುತ್ತೆ. ಅಂತಹ ಗಾಢ ನಿದ್ದೆಯಲ್ಲಿ ಯಾರೋ ಸೈತಾನ ಎದೆ ಮೇಲೆ ಕೂತು ಬಲವಾಗಿ ಕತ್ತು ಹಿಸುಕಿದಂತಾಗುತ್ತೆ. ಕುತ್ತಿಗೆಯ ನರಗಳು ಮಿಸುಕಲೂ ಬಿಡದಂತೆ ಹಿಡಿದ ಕೈಗಳ ಸ್ಪಷ್ಟ ಅನುಭವವಾಗುತ್ತೆ. ಎದೆ ಮೇಲೆ ಕೂತಂತಹ ಭಾವವನ್ನು ಆ ಭಾರದ ಅನುಭವ ಸ್ಪಷ್ಟೀಕರಿಸುತ್ತೆ. ಮಿಸುಕಲು ಪ್ರಯತ್ನಿಸಿದರೆ ದೇಹ ಸ್ಪಂದಿಸೋದಿಲ್ಲ. ಕಿರುಚಲು ನೋಡಿದರೆ ಧ್ವನಿ ಹೊರಡೋದಿಲ್ಲ.

    ಅಂಥಾದ್ದೊಂದು ಕನಸು ಬಿದ್ದರೆ ಎಂಥಾ ಧೈರ್ಯಶಾಲಿಯೇ ಆದರೂ ಕಿಟಾರನೆ ಕಿರುಚಿ ಎದ್ದು ಕೂತು ಬಿಡುತ್ತಾರೆ. ಇರೋಬರೋ ಹೊದಿಕೆಯನ್ನೆಲ್ಲ ಗಟ್ಟಿಯಾಗಿ ಹೊದ್ದುಕೊಂಡು ಎಲ್ಲ ಒದ್ದೆಯಾಗುವಂತೆ ಬೆವರಾಡಿ ಬಿಡುತ್ತಾರೆ. ಇಂಥಾ ಕನಸು ಬಹುಪಾಲು ಜನರಿಗೆ ಒಂದಲ್ಲ ಒಂದು ಸಲ ಬೀಳುತ್ತೆ. ಅದರ ಅನುಭವ ಅದೆಷ್ಟು ಭೀಕರವಾಗಿರುತ್ತದೆಯೆಂದರೆ, ಕನಸಿನ ಅನುಭವ ಎದೆಯೇ ನಾಟಿದಂತಾಗಿ ಹಾಸಿಗೆಯಲ್ಲಿಯೇ ಅದೆಷ್ಟೋ ಮಂದಿ ಜೀವ ಬಿಟ್ಟಿದ್ದಿದೆ.

    ಕನಸು ಯಾಕೆ ಬೀಳುತ್ತೆ? ನಿದಿರೆಯಲ್ಲಿ ಕದಲೋ ಕನಸಿನ ಸಿನಿಮಾಗಳ ಹಿಂದೆ ಯಾವ ಶಕ್ತಿ ಇದೆ ಅನ್ನೋದಕ್ಕೆ ವಿಜ್ಞಾನ ಲೋಕದಲ್ಲಿ ಒಂದಷ್ಟು ಉತ್ತರಗಳಿವೆ. ಆದರೆ ಈ ಕನಸುಗಳೊಂದಿಗೆ ನಮ್ಮಲ್ಲಿ ಗಾಢವಾದ ಮೌಢ್ಯವೇ ಹೊಸೆದುಕೊಂಡಿದೆ. ಅದಕ್ಕೆ ಪೂರಕವಾದ ಒಂದಷ್ಟು ಸಂಗತಿಗಳು ಇಲ್ಲಿನ ಆಚಾರ ವಿಚಾರಗಳಲ್ಲಿಯೇ ಸೇರಿಕೊಂಡಿದೆ. ಅದರ ಫಲವಾಗಿಯೇ ಕನಸುಗಳ ಬಣ್ಣಕ್ಕೆ ಶಕುನಗಳ ಚಿತ್ತಾರ ಮೂಡಿಕೊಂಡಿದೆ.

    ಹಾಗಿದ್ದ ಮೇಲೆ ಆರಂಭದಲ್ಲಿ ಹೇಳಿದಂತಹ ಭೀಕರ ಕನಸುಗಳಿಗೆ ಕಾರಣ ಇದ್ದೇ ಇರಬೇಕಲ್ಲಾ? ಈ ಬಗ್ಗೆ ಹುಡುಕಿದರೆ ಬಂಗಾಳಿಗಳ ನಡುವೆ ಇಂತಹ ಭಯಾನಕ ಕನಸಿಗೆ ಒಂದಷ್ಟು ವಿವರಣೆಗಳಿವೆ. ಅಲ್ಲಿ ಇಂತಹ ಕನಸಿಗೆ ಬೂಬಾ ಅಂತಾರೆ. ಬೂಬಾ ಅಂದ್ರೆ ಮಾತಾಡಲಾರದ, ಮೂಕ ಎಂಬೆಲ್ಲ ಅರ್ಥಗಳಿವೆ. ಅಲ್ಲಿ ಇಂಥಾ ಕೆಟ್ಟ ಕನಸು ಬೂಬಾ ಅವತಾರದಲ್ಲಿ ಎಲ್ಲರ ಬೆನ್ನ ಹಿಂದೆ ಹೊಂಚಿ ಕುಳಿತಿರುತ್ತದೆ ಎಂಬ ನಂಬಿಕೆಯಿದೆ. ಅದೇನಾದರೂ ಅಮರಿಕೊಂಡರೆ ಸಾವು ಖಚಿತ ಎಂಬಂಥಾ ಭಯವೂ ಅಲ್ಲಿದೆ. ಅದಕ್ಕೆ ಒಂದಷ್ಟು ಮಂದಿ ಬಲಿಯಾಗಿದ್ದಾರೆ.

    ಹಾಗಾದರೆ ನಿಜಕ್ಕೂ ಇಂತಹ ಬೆಚ್ಚಿ ಬೀಳಿಸೋ ಕನಸು ಯಾಕೆ ಬೀಳುತ್ತೆ ಅನ್ನೋದಕ್ಕೂ ಒಂದಷ್ಟು ವಿವರಗಳೂ ಇವೆ. ಕೆಲವೊಮ್ಮೆ ಉಸಿರಾಟದ ಏರುಪೇರೂ ಕೂಡ ಅದಕ್ಕೆ ಕಾರಣವಾಗೋದಿದೆ. ಇನ್ನುಳಿದಂತೆ ಯಾವುದೋ ನೆನಪು, ಬಯಕೆ ಮತ್ತು ಭಯಗಳೇ ಕನಸಾಗಿ ರೀಲು ಬಿಚ್ಚಿಕೊಳ್ಳುತ್ತವೆ. ನಮ್ಮಲ್ಲಿರುವ ಅಂತರ್ಗತ ಭಯವೇ ಬೂಬಾ ಅವತಾರವಾಗಿ ಆಗಾಗ ಕಾಡಿ ಬಲಿ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ. ಆದ್ದರಿಂದಲೇ ಮೌಢ್ಯ ತುಂಬಿದ ಭಯಗಳಿಂದ ದೂರವಿರೋದೊಳಿತು. ಭಯ ತುಂಬಿಕೊಂಡರೆ ಅದು ಸೈತಾನನ ಅವತಾರವೆತ್ತಿ ಕನಸಲ್ಲಿ ಬಂದು ಎದೆ ಹತ್ತಿ ಕೂರುತ್ತೆ. ಕತ್ತು ಹಿಸುಕುತ್ತೆ. ಯಾಮಾರಿದರೆ ಜೀವವನ್ನೂ ತೆಗೆಯುತ್ತೆ.

    https://www.youtube.com/watch?v=2Ms5XvqEOKE

  • ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

    ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

    ತುಮಕೂರು: ಇವತ್ತಿನ ಎಕ್ಸಿಟ್ ಪೋಲ್ ಸಮೀಕ್ಷೆ ನೋಡಿ ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿದ್ದಿದೆ ಎಂದು ತುಮಕೂರಿನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ವ್ಯಂಗ್ಯವಾಡಿದ್ದಾರೆ.

    ಇಂದಿಗೆ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಹಲವಾರು ಸಮೀಕ್ಷೆಗಳ ಪ್ರಕಾರ ಬಿಜೆಪಿ ಪಕ್ಷ ಮುಂಚೂಣಿಯಲ್ಲಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಎಸ್.ಬಸವರಾಜು ಅವರು, ಮೋದಿ ಮತ್ತೇ ಪ್ರಧಾನಿ ಅನ್ನೋದನ್ನು ಸಮೀಕ್ಷೆ ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಲ್ಲಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಎಕ್ಸಿಟ್ ಪೋಲ್‍ನಲ್ಲಿ ಮೋಸ ಇಲ್ಲ. ಇದು ಒಂದು ರೀತಿ ಶಾಸ್ತ್ರ ಹೇಳಿದಹಾಗೆ ನೂರಕ್ಕೆ 80% ಸತ್ಯ ಇರುತ್ತದೆ. ಚುನಾವಣೋತ್ತರ ಸಮೀಕ್ಷೆ ಯಿಂದ ದೇವೇಗೌಡರಿಗೆ ನಿದ್ದೆ ಬರುವುದಿಲ್ಲ. ಈ ಸಮೀಕ್ಷೆ ಬಂದು ಮತ್ತೆ ಪ್ರಧಾನಿಯಾಗುವ ಕನಸು ಕಂಡಿದ್ದ ದೇವೇಗೌಡರು ಅವರ ಆಸೆಗೆ ತಣ್ಣೀರು ಬಿದ್ದ ಹಾಗಾಗಿದೆ ಎಂದು ಹೇಳಿದರು.

    ಅತ್ಯಂತ ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಜನರು ಈ ತೀರ್ಪು ನೀಡಿದ್ದಾರೆ. ಯುವಕರು ಯುವತಿಯರು ಮತ್ತು ಪ್ರಜ್ಞಾವಂತರು ಬಿಜೆಪಿಗೆ ಮತಹಾಕಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಡೈವೋರ್ಸ್ ಪಡೆದ ಗಂಡ ಹೆಂಡತಿ ಇದ್ದ ಹಾಗೆ. ಅವರ ಕ್ಷೇತ್ರದಲ್ಲಿ ಇವರು, ಇವರ ಕ್ಷೇತ್ರದಲ್ಲಿ ಅವರು ಸರಿಯಾಗಿ ಕೆಲಸ ಮಾಡಿಲ್ಲ. ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಹಾಕಿದರೆ ತುಮಕೂರಲ್ಲಿ ಕಾಂಗ್ರೆಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ನೋಡಿದರೆ ಡೈವೋರ್ಸ್ ಕೊಟ್ಟ ಗಂಡ, ಹೆಂಡತಿ ಮಗಳ ಮದುವೆಗೆ ಬಂದಹಾಗೆ ಬಂದು ಹೋಗಿದ್ದಾರೆ. ಒಬ್ಬರ ಮುಖ ಒಬ್ಬರು ನೋಡಿಲ್ಲ ಎಂದು ಮೈತ್ರಿ ನಾಯಕರನ್ನು ಲೇವಡಿ ಮಾಡಿದರು.

  • ಜೀವನದಲ್ಲಿ ಏನೂ ಸಾಧಿಸಕ್ಕಾಗಿಲ್ಲ, ನನ್ಯಾರೂ ಲೈಕ್ ಮಾಡಿಲ್ಲ- ವಿದ್ಯಾರ್ಥಿನಿ ಆತ್ಮಹತ್ಯೆ

    ಜೀವನದಲ್ಲಿ ಏನೂ ಸಾಧಿಸಕ್ಕಾಗಿಲ್ಲ, ನನ್ಯಾರೂ ಲೈಕ್ ಮಾಡಿಲ್ಲ- ವಿದ್ಯಾರ್ಥಿನಿ ಆತ್ಮಹತ್ಯೆ

    – ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣು

    ಮೈಸೂರು: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿನಿಯೊಬ್ಬಳು ಜೀವನದಲ್ಲಿ ಏನೂ ಸಾಧಿಸೋಕೆ ಆಗಿಲ್ಲ. ಅಲ್ಲದೆ ಬದುಕಿದ್ದಾಗ ನನ್ನ ಯಾರೂ ಲೈಕ್ ಮಾಡಿಲ್ಲ ಎಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಬನ್ನಿಮಂಟಪದ ಕಾವೇರಿನಗರದ ನಿವಾಸಿ ಯಾಸ್ಮಿನ್ ತಾಜ್(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿಯಾಗಿದ್ದ ಈಕೆ ತನಗೆ ಓದು ತಲೆಗೆ ಹತ್ತುತ್ತಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಈ ಖಿನ್ನತೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಮಾತ್ರೆ ಸೇವಿಸಿಸುವುದನ್ನು ವಿಡಿಯೋ ಮಾಡಿ, ಇದನ್ನು ಶೇರ್ ಮಾಡುವಂತೆ ಮನವಿ ಕೂಡ ಮಾಡಿದ್ದಾಳೆ.

    ಜೆ.ಎಸ್.ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯಾಸ್ಮಿನ್ ತಾಜ್ ಓದುವುದರಲ್ಲಿ ಹಿಂದಿದ್ದಳು. ಆದ್ದರಿಂದ ಜೀವನದಲ್ಲಿ ತುಂಬಾ ನೊಂದಿದ್ದಳು. ನನಗೆ ಓದುವುದಕ್ಕೆ ಆಸೆ. ಆದ್ರೆ ನನ್ನ ತಲೆಗೆ ಓದು ಹತ್ತಲಿಲ್ಲ, ನಾನೊಬ್ಬಳು ಡಲ್ ಸ್ಟೂಡೆಂಟ್. ಮುಂದೆ ಸಿಂಗರ್ ಅಥವಾ ಲಾಯರ್ ಆಗುವ ಆಸೆ ಇತ್ತು. ದೇವರು ನನ್ನ ಆಸೆಯನ್ನು ಪೂರೈಸಲಿಲ್ಲ. ಜೊತೆಗೆ ನನಗೆ ಆರೋಗ್ಯದ ಸಮಸ್ಯೆ ಕೂಡ ಇದೆ. ಆದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಿಲ್ಲ. ಅದಕ್ಕೆ ಪ್ರಿಪರೇಟರಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗಲಿಲ್ಲ. ಜೀವನಲ್ಲಿ ನಾನು ಏನೂ ಸಾಧಿಸಲಿಲ್ಲ ಎಂದು ತನ್ನ ಮೊಬೈಲ್‍ನಲ್ಲಿ ವಿಡಿಯೋ ಮಾಡಿಟ್ಟು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಅಷ್ಟೇ ಅಲ್ಲದೆ ವಿಡಿಯೋದಲ್ಲಿ, ಬದುಕಿದ್ದಾಗ ನನ್ನನ್ನ ಯಾರೂ ಲೈಕ್ ಮಾಡಿಲ್ಲ, ಸಾಯುವ ವಿಡಿಯೋನಾದ್ರೂ ಲೈಕ್ ಮಾಡಿ ಶೇರ್ ಮಾಡಿ. ಈ ಮೂಲಕ ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಳು ಅಂತ ಪ್ರಪಂಚಕ್ಕೆ ತಿಳಿಸಿ ಎಂದು ತೆಲುಗು ಭಾಷೆಯಲ್ಲಿ ಮನವಿ ಮಾಡಿದ್ದಾಳೆ. ಸದ್ಯ ಈ ಘಟನೆ ಕುರಿತು ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನಸ್ಸಿನಲ್ಲಿ ಬರುತ್ತಿದ್ದ ರಾಮ: ಹಿಂದೂ ಧರ್ಮಕ್ಕೆ ಮತಾಂತರವಾಯ್ತು ಮುಸ್ಲಿಂ ಕುಟುಂಬ

    ಕನಸ್ಸಿನಲ್ಲಿ ಬರುತ್ತಿದ್ದ ರಾಮ: ಹಿಂದೂ ಧರ್ಮಕ್ಕೆ ಮತಾಂತರವಾಯ್ತು ಮುಸ್ಲಿಂ ಕುಟುಂಬ

    ಸಾಂದರ್ಭಿಕ ಚಿತ್ರ

    ಲಕ್ನೋ: ಕನಸ್ಸಿನಲ್ಲಿ ಪದೇ ಪದೇ ಶ್ರೀರಾಮಚಂದ್ರ ಬರುತ್ತಿದ್ದ ಹಿನ್ನೆಲೆಯಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಶಾಮ್ಲಿ ಜಿಲ್ಲೆಯ ಸದರ್ ಕೋತ್ವಾಲಿಯ ಹರೇಂದ್ರ ನಗರದ ನಿವಾಸಿ ಶಹಜಾದ್ ಕುಂಟುಬ ಬುಧವಾರ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದೆ. ಇದಾದ ನಂತರ ಶ್ರೀರಾಮನ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಹಿಂದೂ ಧರ್ಮಕ್ಕೆ ಬದಲಾದ ಬಳಿಕ ಶಹಜಾದ್ ತಮ್ಮ ಹೆಸರನ್ನು ಸಂಜು ಎಂದು ಮರು ನಾಮಕರಣವನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಜೈ ಶ್ರೀರಾಮ್ ಎನ್ನುವ ಘೋಷಣೆಯನ್ನು ಕೂಗಿದ್ದಾರೆ.

     

    ಈ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಬಹಳ ದಿನಗಳಿಂದಲೂ ಕನಸ್ಸಿನಲ್ಲಿ ಶ್ರೀರಾಮಚಂದ್ರ ಕಾಣಿಸಿಕೊಳ್ಳುತ್ತಿದ್ದ. ನೀನು ಹಿಂದೂ ಧರ್ಮವನ್ನು ಸ್ವೀಕರಿಸು ಎಂದು ಪ್ರೇರೇಪಿಸುತ್ತಿದ್ದ. ನನ್ನ ಪೂರ್ವಜರು ಕೂಡ ಹಿಂದೂವಾಗಿದ್ದರು. ಆದರೆ ಅವರನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲಾಗಿತ್ತು. ಹೀಗಾಗಿ ನಾನು ನನ್ನ ಕುಟುಂಬದ ಸಮೇತ ಹಿಂದೂ ಧರ್ಮವನ್ನು ಸ್ವೀಕರಿಸಿಕೊಂಡಿದ್ದೇನೆ. ನನ್ನ ಆರಾಧ್ಯ ದೈವ ಭಗವಾನ್ ಶ್ರೀರಾಮಚಂದ್ರ. ನಾನು ನನ್ನ ಮುಂದಿನ ದಿನಗಳನ್ನು ಹಿಂದೂ ಸಂಪ್ರದಾಯದಂತೆ ಅನುಸರಿಸುತ್ತೇನೆ ಎಂದು ಹೇಳಿದರು.

    ಈ ಬಗ್ಗೆ ಶಾಮ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಂಜು ಅಲಿಯಾಸ್ ಶಹಜಾದ್, ನಾನು ನನ್ನ ಸ್ವ-ಇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ. ನನಗೆ ಹಿಂದೂ ಧರ್ಮಕ್ಕೆ ಮರಳಲು ಹಾಗೂ ಹಿಂದೂಗಳಂತೆ ಪೂಜೆ-ಪುನಸ್ಕಾರ ಸಲ್ಲಿಸಲು ಅನುಮತಿ ನೀಡಬೇಕೆಂದು ಕೋರಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಗೂ ಅಭಿಮಾನಿಗಳ ಬಹುದಿನದ ಆಸೆಯನ್ನು ನೆರವೇರಿಸಿದ್ರು ಪವರ್ ಸ್ಟಾರ್!

    ಕೊನೆಗೂ ಅಭಿಮಾನಿಗಳ ಬಹುದಿನದ ಆಸೆಯನ್ನು ನೆರವೇರಿಸಿದ್ರು ಪವರ್ ಸ್ಟಾರ್!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಗೂ ಟ್ವಿಟ್ಟರ್ ಖಾತೆ ತೆರೆಯುವ ಮೂಲಕ ಅಭಿಮಾನಿಗಳ ಬಹುದಿನದ ಕನಸನ್ನು ನೆರವೇರಿಸಿದ್ದಾರೆ.

    ಟ್ವಿಟ್ಟರಿನಲ್ಲಿ ಖಾತೆಯನ್ನು ತೆರೆಯಬೇಕೆಂದು ಅನೇಕ ಅಭಿಮಾನಿಗಳು ಪುನೀತ್ ಬಳಿ ಕೇಳಿಕೊಂಡಿದ್ದರು. ಸದ್ಯ ಪುನೀತ್ ಈಗ ತಮ್ಮ ಹೆಸರಿನಲ್ಲಿ ಅಧಿಕೃತ ಖಾತೆಯನ್ನು ತೆರೆದಿದ್ದಾರೆ.

    ಪುನೀತ್ ಈಗ ಅಧಿಕೃತವಾಗಿ ಟ್ವಿಟ್ಟರ್ ಖಾತೆ ತೆರೆದಿದ್ದು, ಸದ್ಯ ಅವರನ್ನು 7 ಸಾವಿರಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಪುನೀತ್ ಇದುವರೆಗೂ ಟ್ವಿಟ್ಟರಿನಲ್ಲಿ ಯಾರನ್ನು ಫಾಲೋ ಮಾಡುತ್ತಿಲ್ಲ. ಅಲ್ಲದೇ ಇದುವರೆಗೂ ಒಂದು ಟ್ವೀಟ್ ಕೂಡ ಮಾಡಿಲ್ಲ.

    ಈ ಹಿಂದೆ ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿರುವ ಬಗ್ಗೆ ನವರಸನಾಯಕ ಜಗ್ಗೇಶ್ ರಿವೀಲ್ ಮಾಡಿ, ಈ ಖಾತೆ ವಿರುದ್ಧ ಕಿಡಿಕಾರಿದ್ದರು. ಅಚ್ಚರಿ ಅಂದರೆ ಸಾಕಷ್ಟು ನಟ ನಟಿಯರು ಪುನೀತ್ ಅಧಿಕೃತ ಖಾತೆ ಎಂದು ತಿಳಿದು ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದರು. ಸುಮಾರು 10 ಸಾವಿರಕ್ಕೂ ಜನ ಈ ಖಾತೆ ನಿಜವೆಂದು ತಿಳಿದು ಫಾಲೋ ಮಾಡುತ್ತಿದ್ದರು.

    “ಸೆಲಿಬ್ರಿಟಿಗಳ ಬದುಕು ಎಷ್ಟು ಕಷ್ಟ ಅನ್ನೋದು ಇದಕ್ಕೆ. ಕಷ್ಟಪಟ್ಟು ನೋವು ಅಪಮಾನ ಸಹಿಸಿ ಬೆಳೆದ ಮೇಲೆ ಇಂತಹ ಸಮಯ ಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು. ಸ್ವತಃ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ. ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲ. ಇದಕ್ಕಿಂತ ಮೈಬಗ್ಗಿಸಿ ದುಡಿದು ತಿನ್ನಿ ಸ್ವಾಭಿಮಾನದಿಂದ” ಎಂದು ಬರೆದು ಜಗ್ಗೇಶ್ ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದು ದಿನದ ಪೊಲೀಸ್ ಇನ್ಸ್ ಪೆಕ್ಟರ್ ಆದ ಬೆಂಗ್ಳೂರಿನ 12ರ ಬಾಲಕ!

    ಒಂದು ದಿನದ ಪೊಲೀಸ್ ಇನ್ಸ್ ಪೆಕ್ಟರ್ ಆದ ಬೆಂಗ್ಳೂರಿನ 12ರ ಬಾಲಕ!

    ಬೆಂಗಳೂರು: ತೆಲೆಸ್ಸೇಮಿಯಾ ಬಾಧಿತ ಬಾಲಕನನ್ನು ವಿವಿ ಪುರಂ ಪೊಲೀಸರು ಒಂದು ದಿನದ ಪೊಲೀಸ್ ಇನ್ಸ್ ಪೆಕ್ಟರ್ ಮಾಡಿ ಬಾಲಕನ ಆಸೆಯನ್ನು ಈಡೇರಿಸಿದ ಘಟನೆ ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಶಶಾಂಕ್(12) ತೆಲೆಸ್ಸೇಮಿಯಾ ರೋಗದಿಂದ ಬಳಲ್ತಿರೋ ಬಾಲಕ. ತೆಲೆಸ್ಸೇಮಿಯಾ ಅನ್ನೋದು ರಕ್ತ ಸಂಬಂಧಿತ ಕಾಯಿಲೆಯಾಗಿದ್ದು, ಈ ಕಾಯಿಲೆ ಉಳ್ಳವರಿಗೆ ಮೂರು ತಿಂಗಳಿಗೊಮ್ಮೆ ಹಳೆ ರಕ್ತ ಬದಲಾಯಿಸಿ ಹೊಸ ರಕ್ತ ನೀಡಬೇಕು.

    ಶಶಾಂಕ್ ಮೂಲತಃ ಚಿಂತಾಮಣಿ ಮೂಲದವನಾಗಿದ್ದು, ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಶಾಂಕ್ ಪೊಲೀಸ್ ಇನ್ಸ್ ಪೆಕ್ಟರ್ ಆಗುವ ಕನಸು ಕಂಡಿದ್ದನು. ಸದ್ಯ ಶಶಾಂಕ್ ಆಸೆಯನ್ನು ವಿವಿ ಪುರಂ ಪೊಲೀಸ್ ಇನ್ಸ್ ಪೆಕ್ಟರ್ ಟಿಡಿ ರಾಜು ಈಡೇರಿಸಿದ್ದಾರೆ.

    ಸದ್ಯ ಶಶಾಂಕ್ ಒಂದು ದಿನದ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾನೆ. ಶಶಾಂಕ್ ಇನ್ಸ್ ಪೆಕ್ಟರ್ ಪೋಷಾಕು ಧರಿಸಿ ಇನ್ಸ್ ಪೆಕ್ಟರ್ ಚೇರ್ ನಲ್ಲಿ ಕುಳಿತು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಅಲ್ಲದೇ ವಿವಿ ಪುರಂ ಪೊಲೀಸರು ಶಶಾಂಕ್ ಗೆ ನಕಲಿ ಗನ್ ಹಾಗೂ ವಾಕಿಟಾಕಿ ಕೂಡ ನೀಡಿದ್ದರು. ಸದ್ಯ ಬಾಲಕ ಶಶಾಂಕ್ ಒಂದು ದಿನದ ಇನ್ಸ್ ಪೆಕ್ಟರ್ ಆಗಿ ಖುಷಿಪಟ್ಟಿದ್ದಾನೆ.