Tag: Dr.Mahantesh Kadadi

  • ರಮೇಶ್ ಜಾರಕಿಹೊಳಿಯಿಂದ ಕೋಟಿ ಕೋಟಿ ಅವ್ಯವಹಾರ: ಡಾ.ಮಹಾಂತೇಶ್ ಕಡಾಡಿ ಆರೋಪ

    ರಮೇಶ್ ಜಾರಕಿಹೊಳಿಯಿಂದ ಕೋಟಿ ಕೋಟಿ ಅವ್ಯವಹಾರ: ಡಾ.ಮಹಾಂತೇಶ್ ಕಡಾಡಿ ಆರೋಪ

    ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಕೋಟಿ ಕೋಟಿ ರೂ. ಅವ್ಯವಹಾರದ ಆರೋಪ ಕೇಳಿಬಂದಿದೆ.

    ಅವರ ಒಡೆತನದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದೆ. ಅಲ್ಲದೇ ಆದಾಯ ತೆರಿಗೆಯ ಬಗ್ಗೆ ಸರ್ಕಾರಕ್ಕೆ ಸುಳ್ಳು ಲೆಕ್ಕಪತ್ರ ಕೊಟ್ಟಿದ್ದಾರೆ. ಸಕ್ಕರೆ ಕಾರ್ಖಾನೆ ಚಾಲ್ತಿಯಲ್ಲಿ ಇದ್ದರೂ ಚಾಲ್ತಿಯಲ್ಲಿ ಇಲ್ಲ ಎಂದು ಸುಳ್ಳು ದಾಖಲೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ (Congress) ಮುಖಂಡ ಡಾ.ಮಹಾಂತೇಶ್ ಕಡಾಡಿ (Dr. Mahantesh Kadadi) ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪತಿಗೆ ಮಗು ತೋರಿಸಲು ಇಷ್ಟವಿಲ್ಲದಿದ್ದರಿಂದ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ: ತಪ್ಪೊಪ್ಪಿಕೊಂಡ ಸೇಠ್

    ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ವ್ಯವಹಾರದಲ್ಲಿ ಅಕ್ರಮ ನಡೆದಿದೆ. ಕಾರ್ಖಾನೆಗೆ 700 ಎಕರೆ ಜಮೀನು ಖರೀದಿಯಲ್ಲೂ ಅವ್ಯವಹಾರವಾಗಿದೆ. 3,500 ಟನ್ ಕ್ರಷಿಂಗ್ ಸಾಮಥ್ರ್ಯದ ಕಾರ್ಖಾನೆಗೆ 300ಕೋಟಿ ರೂ. ಹಣ ವೆಚ್ಚವಾಗುತ್ತದೆ. ಇದಕ್ಕೆ ಜಾರಕಿಹೊಳಿಯವರು 500ರಿಂದ 600 ಕೋಟಿ ರೂ. ಸಾಲ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕಾರ್ಖಾನೆಯಲ್ಲಿ ಡಿಸ್ಟಿಲರಿ ಮಾಡುವುದಾಗಿ 60ಕೋಟಿ ಸಾಲ ಪಡೆದಿದ್ದಾರೆ. ಡಿಸ್ಟಿಲರಿ ನಿರ್ಮಾಣ ಮಾಡಿಲ್ಲ. ಬಳಿಕ 2019ರಲ್ಲಿ ದಿವಾಳಿ ಆಗಿದೆಯೆಂದು ಎನ್‌ಸಿಇಆರ್‌ಟಿಗೆ ಮನವಿ ಮಾಡಿದ್ದಾರೆ. ಆಗ ಎನ್‌ಸಿಇಆರ್‌ಟಿ ಇದು ಲಾಭದಾಯಕವಲ್ಲ ಎಂದು ಹೇಳಿದೆ. 2021-22ರಲ್ಲಿ 5ಸಾವಿರ ಮೆಟ್ರಿಕ್ ಟನ್ ಕಬ್ಬಿನಿಂದ ಸಕ್ಕರೆ ಉತ್ಪಾದನೆ ಮಾಡಿದ್ದಾರೆ. ಕಾರ್ಖಾನೆಗೆ ಬರುವ ಲಾಭವನ್ನು ತಾವೇ ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಪ್ರತಿ ಹಂತದಲ್ಲೂ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

    435ಕೋಟಿ ರೂ. ಹಣವನ್ನು ಡಿಸಿಸಿ ಬ್ಯಾಂಕ್‍ನಲ್ಲಿ ರಮೇಶ್ ಜಾರಕಿಹೊಳಿ ಸಾಲ ಮಾಡಿದ್ದಾರೆ. ಐಡಿಬಿಐ ಬ್ಯಾಂಕ್, ಅರಿಹಂತ ಭೀರೆಶ್ವರ ಬ್ಯಾಂಕ್, ಎಸ್.ಬಿಐ ಬ್ಯಾಂಕ್‍ನಲ್ಲಿ ಒಟ್ಟಾರೆ 1ಸಾವಿರ ಕೋಟಿ ರೂ. ಸಾಲ ಇದೆ. ಈ ಸಾಲವನ್ನು ಮನ್ನಾ ಮಾಡಲು ದಿವಾಳಿತನ ಘೋಷಣೆ ಮಾಡಿಕೊಂಡಿದ್ದಾರೆ. ದಿವಾಳಿತನ ಘೋಷಣೆ ಮಾಡಿ ಕುಟುಂಬಸ್ಥರಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ಸಾವಿರ ಕೋಟಿ ರೂ. ಹಣವನ್ನು ಮುಳುಗಿಸಲು ಪ್ಲ್ಯಾನ್ ಮಾಡಿದ್ದಾರೆ. ಇದರಲ್ಲಿ ನೇರವಾಗಿ ಕೇಂದ್ರದ ಬಿಜೆಪಿ ಸರ್ಕಾರ ಭಾಗಿಯಾಗಿದೆ. ಹೀಗಾಗಿ ಸೌಭಾಗ್ಯಲಕ್ಷ್ಮೀ ಕಾರ್ಖಾನೆ ವಿರುದ್ಧ ಸಿಬಿಐ ಅಥವಾ ಸಿಓಡಿ ತನಿಖೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಮಹಾಂತೇಶ್ ಕಡಾಡಿ ರಮೇಶ್ ಜಾರಕಿ ಹೊಳಿ ವಿರುದ್ಧ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರು. ಇದನ್ನೂ ಓದಿ: ಚೀರಾಡುತ್ತಿದ್ದರೂ ಒಬ್ಬ ವೈದ್ಯ ಬರಲಿಲ್ಲ – ಆಸ್ಪತ್ರೆ ಗೇಟ್‌ ಬಳಿ ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ

  • ರಮೇಶ್ ಜಾರಕಿಹೊಳಿ ಸೋಲಿಸೋದೇ ನಮ್ಮ ಅಜೆಂಡಾ: ಕೈ ಟಿಕೆಟ್ ವಂಚಿತ ಪ್ರಕಾಶ್ ಬಾಗೋಜಿ

    ರಮೇಶ್ ಜಾರಕಿಹೊಳಿ ಸೋಲಿಸೋದೇ ನಮ್ಮ ಅಜೆಂಡಾ: ಕೈ ಟಿಕೆಟ್ ವಂಚಿತ ಪ್ರಕಾಶ್ ಬಾಗೋಜಿ

    ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarakiholi) ಸೋಲಿಸೋದೇ ನಮ್ಮ ಒನ್ ಪಾಯಿಂಟ್ ಅಜೆಂಡಾ ಎಂದು ಗೋಕಾಕ್ ಕಾಂಗ್ರೆಸ್ ಟಿಕೆಟ್ ವಂಚಿತ ಪ್ರಕಾಶ್ ಬಾಗೋಜಿ (Prakash Bagoji) ಹೇಳಿದರು.

    ಬೆಳಗಾವಿ (Belagavi) ಜಿಲ್ಲೆ ಗೋಕಾಕ್‌ನ (Gokak) ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಕೊಣ್ಣೂರ್ ಹಾಗೂ ಬಸನಗೌಡ ಹೊಳೆಯಾಚಿಯವರಿಗೆ ಬೆಂಬಲ ವ್ಯಕ್ತಪಡಿಸಿದರು. ಟಿಕೆಟ್ ವಂಚಿತ ಆಕಾಂಕ್ಷಿಗಳಿಂದ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ.ಮಹಾಂತೇಶ್ ಕಡಾಡಿಗೆ (Dr.Mahantesh Kadadi) ಬೆಂಬಲ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಅಶೋಕ್ ಪೂಜಾರಿಯವರಿಗೂ (Ashok Poojari) ಬೆಂಬಲ ನೀಡುವಂತೆ ಎಲ್ಲರೂ ಸೇರಿ ಒಕ್ಕೊರಲ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೇವದುರ್ಗ ‘ಕೈ’ ಟಿಕೆಟ್ ಗೊಂದಲ- ಅಣ್ಣ ಬಿ.ವಿ.ನಾಯಕ್ ವಿರುದ್ಧ ತಮ್ಮ ರಾಜಶೇಖರ್ ನಾಯಕ್ ಬಂಡಾಯ 

    2008ರಿಂದ ಅಶೋಕ್ ಅಣ್ಣನವರನ್ನು ಬೆಂಬಲಿಸಿ ಗೆಲ್ಲಿಸಲು ಪ್ರಯತ್ನ ಮಾಡಿದ್ದೇವೆ. ಗೋಕಾಕ್‌ನಲ್ಲಿ ದುಷ್ಟ ಶಕ್ತಿ ಹೊಡೆಯಬೇಕು ಎಂಬ ಗುರಿ ಇದೆ. ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಕೊಡುವ ದಿನಾಂಕ ಮುಗಿದ ಬಳಿಕ ಡಾ.ಮಹಾಂತೇಶ್ ಕಡಾಡಿ ಅರ್ಜಿ ಸಲ್ಲಿಸಿದ್ದರು. ಲೇಟ್ ಅಪ್ಲಿಕೇಶನ್ ಕೊಟ್ಟವರಿಗೆ ಪಕ್ಷ ಟಿಕೆಟ್ ನೀಡಿದ್ದಾರೆ. ಅಶೋಕ್ ಪೂಜಾರಿಯವರಿಗೆ ಇಡೀ ತಾಲೂಕಿನ ಜನ 4 ಬಾರಿ ಅವಕಾಶ ನೀಡಿದೆ. ಮೊಟ್ಟ ಮೊದಲ ಬಾರಿಗೆ ಪಂಚಮಸಾಲಿ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಶೋಕ್ ಪೂಜಾರಿಯವರು ಈ ಚುನಾವಣೆಯಲ್ಲಿ (Election) ಕಿಂಗ್ ಮೇಕರ್ ಆಗಬೇಕು. ಲಿಂಗಾಯತ ಸಮುದಾಯ ಅಷ್ಟೇ ಅಲ್ಲ ಇಡೀ ತಾಲೂಕಿನ ಜನ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದರು. ಇದನ್ನೂ ಓದಿ: ನಮಗೆ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ, ಅವರ ಆದೇಶ ಪಾಲಿಸುತ್ತೇವೆ: ಡಿ.ಕೆ.ಸುರೇಶ್ 

    ನಮ್ಮ ಗುರಿ ರಮೇಶ್ ಜಾರಕಿಹೊಳಿಯವರನ್ನು ಸೋಲಿಸುವುದು ಒಂದೇ. ನಾವು ಅಶೋಕ್ ಪೂಜಾರಿಯವರಿಗೆ ಮನವಿ ಮಾಡುತ್ತೇವೆ. ಅಶೋಕ್ ಪೂಜಾರಿಯವರ ಕಾಲಿಗೆ ಬಿದ್ದು ಕರೆದುಕೊಂಡು ಬರುತ್ತೇವೆ. ಇಡೀ ರಾಜ್ಯಾದ್ಯಂತ ಪಂಚಮಸಾಲಿಗಳ ಹವಾ ಇದೆ. ಗೋಕಾಕ್‌ನಲ್ಲಿ ಪಂಚಮಸಾಲಿಯವರ ಒಳ್ಳೆಯ ಸಂಘಟನೆ ಇದೆ. ನೀವು ಒಗ್ಗೂಡಿ ನಾವು ವೋಟ್ ಹಾಕುತ್ತೇವೆ ಎಂದು ಬೇರೆ ಸಮಾಜದವರು ಹೇಳುತ್ತಿದ್ದಾರೆ. ಒಂದು ವ್ಯವಸ್ಥೆ ಸೋಲಿಸಲು ನಾವು ಒಂದಾಗಬೇಕು. ಇದಕ್ಕೆ ಅಶೋಕ್ ಪೂಜಾರಿಯವರದ್ದೇ ನೇತೃತ್ವ. ಅವರೇ ಕಿಂಗ್ ಮೇಕರ್ ಎಂದು ಹೇಳಿದರು. ಇದನ್ನೂ ಓದಿ: ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್