Tag: Dr K Srinivasamoorthy

  • ಜೆಡಿಎಸ್ ಪಕ್ಷದಲ್ಲಿ ತರಬೇತಿ ಪಡೆದು ಪಕ್ಷಾಂತರ – ಶ್ರೀನಿವಾಸಮೂರ್ತಿ ಬೇಸರ

    ಜೆಡಿಎಸ್ ಪಕ್ಷದಲ್ಲಿ ತರಬೇತಿ ಪಡೆದು ಪಕ್ಷಾಂತರ – ಶ್ರೀನಿವಾಸಮೂರ್ತಿ ಬೇಸರ

    ನೆಲಮಂಗಲ: ನಮ್ಮ ಜೆಡಿಎಸ್ ಪಕ್ಷದಲ್ಲೇ ತರಬೇತಿ ಹೊಂದಿ ಬೇರೆ ಪಕ್ಷಕ್ಕೆ ಆಡಳಿತದ ಆಸೆಗೆ ಪಕ್ಷಾಂತರವಾಗುವುದು ಸರಿಯಲ್ಲ ಎಂದು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದರು.

    ನೆಲಮಂಗಲ ಗ್ರಾಮಾಂತರ ಭಾಗದ ಗಡಿ ಗ್ರಾಮವಾದ ಬರಗೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಡಿಯಲ್ಲಿ 50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವೇಳೆ ಪಕ್ಷಾಂತರ ಮಾಡುವವರ ಬಗ್ಗೆ ನೆನೆದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಿಂದ ಚಾಲನೆ

    ಅಧಿಕಾರದ ಲಾಲಸೆಗೆ ಯಾರು ಬಲಿಯಾಗಬಾರದು. ಮುಂದಿನ ದಿನದಲ್ಲಿ ಜೆಡಿಎಸ್ ಪಕ್ಷ ಬಲಾಢ್ಯವಾಗಲಿದೆ. ಇನ್ನೂ 2 ಕೋಟಿ 55 ಲಕ್ಷ ವೆಚ್ಚದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆಯಾಗುತ್ತಿದ್ದು, ಇದಕ್ಕೆ ಅಂದಿನ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಸಹಕಾರಿಯಾಗಿದ್ದಾರೆ ಎಂದು ನೆನಪಿಕೊಂಡರು.

    ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಆರ್.ಡಿ.ಪಿ.ಆರ್ ಅಡಿ ಬಿಡುಗಡೆಯಾಗಿ ವಾಪಸ್ಸು ಆಗಿದ್ದ ಹಣ ಇದೀಗ ಮತ್ತೆ ಬಿಡುಗಡೆಯಾಗಿ, ಕಾಮಗಾರಿ ಪ್ರಾರಂಭವಾಗಿದೆ. ಗಡಿ ಪಂಚಾಯತಿಗಳಾದ ಮರಳಕುಂಟೆ, ಹಸಿರುವಳ್ಳಿ ಗ್ರಾಮಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ಹಸಿರುವಳ್ಳಿ ಪಂಚಾಯತಿಗೆ 1.50 ಕೋಟಿ ಅನುದಾನ ನೀಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ, ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಿ ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ಕಾರಿನಲ್ಲಿ ಕೈ ಸನ್ನೆ ಮಾಡಿ ಜೀವ ಉಳಿಸಿಕೊಂಡ ಬಾಲಕಿ

    ಈ ಸಂದರ್ಭದಲ್ಲಿ ಮರಳಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮೀ ಶೇಖರ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಮುಖಂಡ ಮಹಿಮಣ್ಣ, ಮಾಜಿ.ಗ್ರಾ.ಪಂ.ಅಧ್ಯಕ್ಷ ಅಶ್ವಥ್ ರಾಜು, ಬರಗೂರು ಮಾರುತಿ, ಗ್ರಾ.ಪಂ.ಸದಸ್ಯರಾದ ವೈ.ಟಿ.ಇಂದ್ರಕುಮಾರ್, ಬೆಣಚನಹಳ್ಳಿ ರಾಜಣ್ಣ, ಶೋಭಾ ಮಂಜುನಾಥ್, ದಾಸೇನಹಳ್ಳಿ ಮೂರ್ತಯ್ಯ, ವಿಜಯಕುಮಾರಿ ಇನ್ನೀತರರಿದ್ದರು.

  • ಮಕ್ಕಳು ಮೂಲಭೂತ ಸೌಕರ್ಯದಿಂದ ವಂಚಿತರಾಗಬಾರದು: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ

    ಮಕ್ಕಳು ಮೂಲಭೂತ ಸೌಕರ್ಯದಿಂದ ವಂಚಿತರಾಗಬಾರದು: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ

    ನೆಲಮಂಗಲ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಸಾಧಾರಣ ಪ್ರತಿಭೆಗಳಿದ್ದು, ಉತ್ತಮ ವೇದಿಕೆ ಸಿಕ್ಕರೆ ಸಾಧಕರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನೆಲಮಂಗಲ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

    ತಾಲೂಕಿನ ಸೊಂಡೆಕೊಪ್ಪ ರಸ್ತೆಯ ವೆಂಕಟಪುರದಲ್ಲಿನ ಎಮರಾಲ್ಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಸಮಾಜದ ಪ್ರತಿ ಮಗು ಶಿಕ್ಷಣದ ಜೊತೆ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎಮರಾಲ್ಡ್ ಶಾಲೆಯಂತಹ ಉತ್ತಮ ವಾತಾವರಣದ ಶಾಲೆಗಳು ಅನಿವಾರ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೈಟೆಕ್ ಸೌಲಭ್ಯವಿರುವ ವೇದಿಕೆ ನಿರ್ಮಾಣ ಮಾಡಿರುವ ಈ ಶಾಲೆಯ ಮಾಲೀಕರಿಗೆ ಶ್ಲಾಘಿಸುತ್ತೇನೆ. ಯಾವ ಶಿಕ್ಷಕರು ಕೆಟ್ಟವರಲ್ಲ, ಮಕ್ಕಳ ಭವಿಷ್ಯದ ಉನ್ನತಿಗೆ ಶ್ರಮಿಸುತ್ತಾರೆ. ಪ್ರತಿಯೊಂದು ನೋವು ಪಾಠವಾಗುತ್ತದೆ, ಮನುಷ್ಯನ ಕೆಟ್ಟವಿಚಾರಗಳನ್ನು ಬದಲಿಸುತ್ತದೆ. ತೃಪ್ತಿ ಸಿಗುವುದು ಕಾಯಕದಲ್ಲಿ, ಆದ್ದರಿಂದ ಮಕ್ಕಳಿಗೆ ತೃಪ್ತಿ ಗಳಿಸುವಂತೆ ಶಿಕ್ಷಣ ಕಲಿಸಿ ಎಂದರು.

    ಎಮರಾಲ್ಡ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷ ಎಮ್. ಲೋಕೇಶ್ ರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ಸುವರ್ಣಾವಕಾಶ ನಮಗೆ ಲಭ್ಯವಾಗಿದೆ. ಮಕ್ಕಳಲ್ಲಿ ಶಿಕ್ಷಣದ ಕಲಿಕೆಯಲ್ಲದೆ ಕ್ರೀಡೆ, ಸಾಂಸ್ಕೃತಿಕವಾಗಿ ಉತ್ತಮ ಪ್ರತಿಭೆಯನ್ನು ಹೊಂದಿರುತ್ತಾರೆ. ಆದ್ದರಿಂದ ಶಿಕ್ಷಣದ ಜೊತೆ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ತರಬೇತಿಗೆ ವಿಶಾಲ ಮೈದಾನ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ, ತರಬೇತಿ ನೀಡಿದರೆ ಅತ್ಯುತ್ತಮ ಸಾಧನೆ ಮಾಡುತ್ತಾರೆ ಎಂಬುದಕ್ಕೆ ನಮ್ಮ ಶಾಲೆ ಸಾಕ್ಷಿಯಾಗಿದೆ ಎಂದರು.

    ಶಾಲೆಯ ಪ್ರಸ್ತುತ ವರ್ಷದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರೀ ನರ್ಸರಿಯಿಂದ ಪ್ರೌಢಶಾಲಾ ಮಕ್ಕಳು ನೃತ್ಯ, ನಾಟಕ, ಸುಗಮಸಂಗೀತ, ಕರಾಟೆ ಸೇರಿದಂತೆ ಅನೇಕ ಪ್ರದರ್ಶನಗಳನ್ನು ನಡೆಸಲಾಯಿತು.