Tag: Dowry

  • ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಹೈದರಾಬಾದ್: ಮದುವೆಯಾದ ಮೊದಲ ರಾತ್ರಿಯೇ ಗಂಡನೊಬ್ಬ ಪತ್ನಿಯ ಜೊತೆ ರಾಕ್ಷಸನಂತೆ ನಡೆದುಕೊಂಡು ಆಕೆಯನ್ನು ಹಿಂಸಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಮೋತರಂಗನಪಲ್ಲಿ ಗ್ರಾಮದ ಗಂಗಾಧರ ನೆಲ್ಲೂರು ಬ್ಲಾಕ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪತ್ನಿಯನ್ನ ಚೂರಿಯಿಂದ ಇರಿದು, ದೇಹದ ಭಾಗಗಳನ್ನು ಕಚ್ಚಿ, ಮುಖ ಮತ್ತು ಸೂಕ್ಷ್ಮ ಭಾಗಗಳನ್ನ ಗುದ್ದಿ ಪತಿ ವಿಕೃತಿ ಮೆರೆದಿದ್ದಾನೆ.

    ಹಲ್ಲೆಗೊಳಗಾದ 24 ವರ್ಷದ ನವವಿವಾಹಿತೆಯ ಸ್ಥಿತಿ ಗಂಭೀರವಾಗಿದ್ದು, ಚಿತ್ತೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರದಂದು ರಾಕ್ಷಸ ಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ನಡೆದಿದ್ದೇನು: ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಆರೋಪಿಗೆ ಎಂಬಿಎ ಪದವೀಧರೆಯ ಜೊತೆ ಗುರುವಾರ ಮದುವೆಯಾಗಿತ್ತು. ವರದಕ್ಷಿಣೆ ಎಂದು ಹುಡುಗಿಯ ಕುಟುಂಬಸ್ಥರು 1 ಕೋಟಿ ರೂ. ಕೊಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಶುಕ್ರವಾರ ಮೊದಲ ರಾತ್ರಿ ಏರ್ಪಡಿಸಿದ್ದರು. ವಧು ಪತಿಯ ರೂಮಿಗೆ ಹೋಗಿದ್ದಾರೆ. ಆಕೆ ರೂಮಿಗೆ ಬರುತ್ತಿದ್ದಂತೆ ಆರೋಪಿ ಏಕಾಏಕಿ ಮುಖಕ್ಕೆ ಹೊಡೆಯಲು ಆರಂಭಿಸಿದ್ದಾನೆ. ನಂತರ ಚಾಕುವಿನಿಂದ ಇರಿದು, ಅಂಗಾಂಗಗಳನ್ನ ಕಚ್ಚಿದ್ದಲ್ಲದೆ ಸೂಕ್ಷ್ಮ ಭಾಗಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆಂದು ವಧು ಹೇಳಿದ್ದಾರೆ. ಪ್ರಾಣಾಪಾಯದ ಭಯದಿಂದ ವಧು ಕೂಡಲೇ ರೂಮಿನಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ.

    ನನ್ನ ಮಗಳು ಹೇಗೋ ಅವನಿಂದ ತಪ್ಪಿಸಿಕೊಂಡು ರೂಮಿನಿಂದ ಹೊರಗೆ ಬಂದಳು. ಹೊರ ಬಂದಾಗ ಅವಳು ಗಾಬರಿಯಾಗಿದ್ದಳು. ಮುಖವೆಲ್ಲಾ ಊದಿಕೊಂಡಿತ್ತು. ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು ಎಂದು ವಧುವಿನ ತಾಯಿ ತಿಳಿಸಿದ್ದಾರೆ.

  • ಪತ್ನಿ ಕೊಲೆ ಮಾಡಿ ಜೈಲು ಸೇರಿ ಪೆರೋಲ್ ಪಡೆದು ಮತ್ತೊಂದು ಮದ್ವೆಯಾಗಿ 6 ವರ್ಷದ ನಂತ್ರ ಸಿಕ್ಕಿಬಿದ್ದ!

    ಪತ್ನಿ ಕೊಲೆ ಮಾಡಿ ಜೈಲು ಸೇರಿ ಪೆರೋಲ್ ಪಡೆದು ಮತ್ತೊಂದು ಮದ್ವೆಯಾಗಿ 6 ವರ್ಷದ ನಂತ್ರ ಸಿಕ್ಕಿಬಿದ್ದ!

    ಬಳ್ಳಾರಿ: ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದ ಖೈದಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಆಚೆಗೆ ಬಂದ ಮೇಲೆ ಮತ್ತೊಂದು ಮದುವೆಯಾಗಿ ಸಿಕ್ಕಿಬಿದ್ದಿದ್ದಾನೆ.

    ಹೆಸರು ಬದಲಿಸಿಕೊಂಡು ಪೊಲೀಸರಿಗೆ ಬರೋಬ್ಬರಿ 7 ವರ್ಷಗಳ ಕಾಲ ಚಳ್ಳೆಹಣ್ಣು ತಿನಿಸಿದ್ದ ಖೈದಿಯನ್ನು ಬಂಧಿಸುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಪೊಲೀಸರು ಎದ್ನೋ ಬಿದ್ನೋ ಎಂಬಂತೆ ಕರ್ತವ್ಯ ನಿರ್ವಹಿಸಿ ಖೈದಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ರಾಯನಾಳ ಗ್ರಾಮದ ಗೋವಿಂದ ನಾಯ್ಕ್ ಎನ್ನುವ 33 ವರ್ಷದ ವ್ಯಕ್ತಿ 2009ರಲ್ಲಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಕ್ಕೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು, ಆದರೆ ಖೈದಿ ಗೋವಿಂದನಾಯ್ಕ್ 2011ರಲ್ಲಿ ತಂದೆ ನೋಡುವ ನೆಪದಲ್ಲಿ ಪೆರೋಲ್ ಮೇಲೆ ಆಗಮಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದನು.

    ಪರಾರಿಯಾದ ಬಳಿಕ ಆಂಧ್ರ- ತೆಲಗಾಂಣದಲ್ಲಿ ತೆಲೆಮರೆಸಿಕೊಂಡು ಮತ್ತೊಬ್ಬಳನ್ನು ಮದುವೆಯಾಗಿ ಸಂಸಾರ ಮಾಡುತ್ತಿದ್ದ. ಆದರೆ ಖೈದಿಯನ್ನು ಪತ್ತೆ ಮಾಡುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಹಗರಿಬೊಮ್ಮನಹಳ್ಳಿ ಪೊಲೀಸ್ ತಂಡ ರಚಿಸಿಕೊಂಡು ಖೈದಿಯನ್ನು ಬಂಧಿಸಿ ಕರೆ ತಂದಿದ್ದಾರೆ.

    ತೆಲಗಾಂಣದಲ್ಲಿ ಸಂತೋಷ ಜಾಧವ ಎನ್ನುವ ಹೆಸರಿನಲ್ಲಿ ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಮಾಡಿಸಿಕೊಂಡು ಆರಾಮ ಆಗಿ ಜೀವನ ಸಾಗಿಸುತ್ತಿದ್ದ ಗೋವಿಂದ ನಾಯ್ಕ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುವ ವೇಳೆಯಲ್ಲಿ ಪರಾರಿಯಾಗಿ ಮತ್ತೊಂದು ಮದುವೆ ಮಾಡಿಕೊಂಡು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಇದೀಗ ಮತ್ತೆ ಜೈಲಿಗೆ ಅಟ್ಟಿದ್ದಾರೆ.

  • ಪತಿ, ಕುಟುಂಬದ ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಯತ್ನ

    ಪತಿ, ಕುಟುಂಬದ ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಯತ್ನ

    ಕೊಪ್ಪಳ: ಪತಿ, ಅತ್ತೆ, ಮಾವ, ನಾದನಿ ವರದಕ್ಷಿಣೆ ಕಿರುಕುಳವನ್ನು ತಾಳಲಾರದೇ ಮನನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ನಗರದಲ್ಲಿ ಈ ಘಟನೆ ನಡೆದಿದ್ದು, ಡೆತ್ ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಹನಾಬೇಗಂ ಆತ್ಮಹತ್ಯೆಗೆ ಯತ್ನಿಸಿರೋ ಗೃಹಿಣಿಯಾಗಿದ್ದು, ಪತಿ ಮಿರ್ಜಾ ಅಹಮದ್ ಅಲಿ ಹಾಗೂ ಅತ್ತೆ, ಮಾವ, ನಾದನಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಎಂಟು ತಿಂಗಳ ಹೆಣ್ಣು ಮಗುವಿದ್ದು, ಹೆಣ್ಣು ಮಗು ಹುಟ್ಟಿದ್ದಕ್ಕೂ ಕೂಡಾ ಕಿರುಕುಳ ನೀಡಿದ್ದಾರೆ. ಪತಿ ಇನ್ನೊಂದು ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಶಹನಾಬೇಗಂ ಅಣ್ಣ ಸೈಯ್ಯದ್ ಅಬುದರ್ ಪಾಷಾ ಹೇಳಿಕೆ ನೀಡಿದ್ದಾರೆ.

    ಗಂಗಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗೃಹಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ಬೆಂಗಳೂರು: ಸಾಮಾಜಿಕ ಪಿಡುಗುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರನ್ನು ಜಾಗೃತರಾಗಿಸಬೇಕಾದ ಕಾಲೇಜೊಂದು ವಿದ್ಯಾರ್ಥಿಗಳಿಗೆ ವರದಕ್ಷಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಈಗ ಆ ಸ್ಟಡಿ ಮೆಟೀರಿಯಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ನಗರದ ಶಾಂತಿ ನಗರದಲ್ಲಿರುವ ಸೆಂಟ್ ಜೋಸೆಫರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವರದಕ್ಷಿಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಲಾಗಿದೆ. ಇದನ್ನ ವಿದ್ಯಾರ್ಥಿಯೊಬ್ಬರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

    ವರದಕ್ಷಿಣೆಯಿಂದ ಕುರೂಪಿ ಹೆಣ್ಮಕ್ಕಳ ಮದುವೆ ಆಗುತ್ತದೆ. ವರದಕ್ಷಿಣೆಯಿಂದ ಒಳ್ಳೆಯ ಹ್ಯಾಂಡ್ಸಮ್ ಹುಡುಗ ಸಿಗುತ್ತಾನೆ. ವರರಿಗೆ ಸ್ವಯಂ ಉದ್ಯೋಗ ದೊರೆಯುತ್ತದೆ. ಇದರಿಂದ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ. ಅಷ್ಟೇ ಅಲ್ಲದೇ ಬಡ ಹುಡುಗರಿಗೆ ಅನುಕುಲವಾಗುತ್ತೆ. ಇದರಿಂದ ಅವರು ತಮ್ಮ ಓದನ್ನು ಮುಂದುವರೆಸಬಹುದು. ನವ ದಂಪತಿಯ ಜೀವನ ಸುಖಮಯವಾಗಿರುತ್ತೆ. ಜೊತೆಗೆ ಆಸ್ತಿ ಮಾಡಬಹುದು ಎಂದೆಲ್ಲಾ ಅಧ್ಯಯನ ಸಾಮಗ್ರಿಯಲ್ಲಿ ಹೇಳಲಾಗಿದೆ.

    ವರದಕ್ಷಿಣೆ ಬೆಂಬಲಿಸುವ ಈ ಪಾಠವನ್ನು ಚೆನ್ನೈನ ರಿತಿಕಾ ರಮೇಶ್ ಎಂಬುವರು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸೆಂಟ್ ಜೋಸೇಫ್ ಕಾಲೇಜು ಸ್ಪಷ್ಟನೆ ನೀಡಿದೆ.

    ಇದು ಕಾಲೇಜಿನ ಲೆಕ್ಚರರ್ ನೀಡಿರುವ ಅಧ್ಯಯನ ಸಾಮಾಗ್ರಿ. ಇದಕ್ಕೂ ಕಾಲೇಜಿಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದ ಒಂದು ಪಠ್ಯಪುಸ್ತಕದಿಂದ ತೆಗೆದ ವಿಷಯ. ವಿದ್ಯಾರ್ಥಿಗಳು ಇದನ್ನೇ ಫೇಸ್‍ಬುಕ್ ಗೆ ಹಾಕಿದ್ದಾರೆ ಎಂದು ಹೇಳಿದೆ.

  • ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್‍ನಲ್ಲಿ ನಡೆದಿದೆ.

    23 ವರ್ಷದ ಶ್ವೇತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಂಗಾರೆಡ್ಡಿ ಪಟ್ಟಣದ ಶ್ವೇತಾರನ್ನು ವಿಕರಾಬಾದ್ ನಿವಾಸಿ ಮರಿಚೆನ್ನ ರೆಡ್ಡಿ ಎಂಬರೊಂದಿಗೆ 2017 ಮೇ ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಕೆಲ ತಿಂಗಳ ನಂತರ ಪತಿ ಮತ್ತು ಆತನ ತಂದೆ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.

    ಮದುವೆ ವೇಳೆ ಶ್ವೇತಾ ಪೋಷಕರು 4 ಲಕ್ಷ ರೂ. ಕ್ಯಾಶ್ ಮತ್ತು 10 ತೊಲಾ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಮದುವೆ ಬಳಿಕ ಇನ್ನೂ ವರದಕ್ಷಿಣೆಯನ್ನು ನೀಡುವದಾಗಿ ಭರವಸೆಯನ್ನು ನೀಡಿದ್ದರು.

    ಈ ದಂಪತಿ ಮಿಯಾಪುರದಿಂದ ವಿಕರಾಬಾದ್‍ನ ಸಿರಿಪುರಂಗೆ ಸೆಪ್ಟಂಬರ್‍ನಲ್ಲಿ ಹೋಗಿ ವಾಸವಾಗಿದ್ದಾರೆ. ಅಲ್ಲಿ ಪತಿಯ ಪೋಷಕರು ಶ್ವೇತಾಗೆ ಮಾಂಸವನ್ನು ತಿನ್ನವಂತೆ ಬಲವಂತ ಮಾಡಿದ್ದಾರೆ. ಶ್ವೇತಾ ಸಸ್ಯಹಾರಿ ಆಗಿದ್ದರಿಂದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಾರೆ. ಆದರೆ ಪತಿ ಬಿಡದೇ ಅವರ ಮುಂದೆ ಮಾಂಸ ಇಟ್ಟು ತಿನ್ನುವಂತೆ ಬಲವಂತ ಮಾಡಿದ್ದಾನೆ ಎಂದು ಪೊಲೀಸರು ತಿಳಿದ್ದಾರೆ.

    ಗಂಡನ ಮನೆಯವರ ಕಿರುಕುಳವನ್ನು ಸಹಿಸಿಕೊಳ್ಳಲಾಗದೇ ಶ್ವೇತಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಮತ್ತು ಆತನ ತಂದೆ-ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.

     

  • ಪತಿ, ಅತ್ತೆ, ಮಾವನ ಕಿರುಕುಳದಿಂದ ವಿಷ ಸೇವನೆ- ಸಾವು ಬದುಕಿನ ಮಧ್ಯೆ ಸೊಸೆ ಹೋರಾಟ

    ಪತಿ, ಅತ್ತೆ, ಮಾವನ ಕಿರುಕುಳದಿಂದ ವಿಷ ಸೇವನೆ- ಸಾವು ಬದುಕಿನ ಮಧ್ಯೆ ಸೊಸೆ ಹೋರಾಟ

    ಕೊಪ್ಪಳ: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಜಿಲ್ಲೆಯ ಯಲಬುರ್ಗಾ ಬೋದೂರು ಗ್ರಾಮದ ಚೆನ್ನಬಸವ ಎಂಬವರಿಗೆ ಹಿರೇಹರನಹಳ್ಳಿಯ ನಾಗರತ್ನಾ ಎಂಬವರನ್ನು ಒಂದೂವರೆ ವರ್ಷದ ಹಿಂದೆ ಮದ್ವೆ ಮಾಡಿಕೊಡಲಾಗಿತ್ತು. ಆದ್ರೆ, ನಾಗರತ್ನಗೆ ಅತ್ತೆ ಅಂಬವ್ವ, ಮಾವ ಸಿದ್ದಪ್ಪ, ಪತಿ ಚೆನ್ನಬಸವ ಮೈಮೇಲೆ ಬರೆ ಹಾಕಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾರೆ.

    ಇದರಿಂದ ನೊಂದ ನಾಗರತ್ನ ವಿಷ ಸೇವಿಸಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ಹೋರಾಟ ನಡೆಸ್ತಿದ್ದಾರೆ. ಆದ್ರೆ, ಪತಿ ಚೆನ್ನಬಸವನ ಮನೆಯವರೇ ವಿಷ ಕುಡಿಸಿದ್ದಾರೆ ಅಂತ ನಾಗರತ್ನ ಪೋಷಕರು ಇದೀಗ ಆರೋಪಿಸುತ್ತಿದ್ದಾರೆ.

  • ಒಂದಲ್ಲ, ಎರಡಲ್ಲ, ಮೂರು ಮದುವೆ- ಇಲ್ಲಿದೆ ಕಿಲಾಡಿ ಹೆಂಡ್ತಿಯ ಕಹಾನಿ

    ಒಂದಲ್ಲ, ಎರಡಲ್ಲ, ಮೂರು ಮದುವೆ- ಇಲ್ಲಿದೆ ಕಿಲಾಡಿ ಹೆಂಡ್ತಿಯ ಕಹಾನಿ

    ಬೆಳಗಾವಿ: ಈ ಮಹಿಳೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದ್ದಾಳೆ. ಮದುವೆಯಾದ ಮೇಲೆ ಕಿರಿಕ್ ಮಾಡಿಕೊಂಡು ಗಂಡಂದಿರ ಮೇಲೆ ವರದಕ್ಷಿಣೆ ಕೇಸ್ ಹಾಕಿ ಹಣ ಕೇಳೋದು ಈಕೆಯ ವೃತ್ತಿಯಾಗಿದೆ.

    ಮೂಲತಃ ನವಲಗುಂದ ತಾಲೂಕಿನ ಗುಡಿಸಾಗರ್ ಗ್ರಾಮದ ನಿವಾಸಿ ಗೀತಾ ಬೆಲ್ಲದ ಮಹಿಳೆಯೇ ನಮ್ಮ ಸ್ಟೋರಿಯ ಕಿಲಾಡಿ ಹೆಂಡತಿ. ಮೊದಲೇ ಎರಡು ಮದುವೆಯಾಗಿದ್ದ ಗೀತಾ, ವಿಚ್ಚೇಧನ ಪಡೆದು 2014ರಲ್ಲಿ ಬೆಳಗಾವಿಯ ಮಹಾಂತೇಶ ಬೆಲ್ಲದ ಎಂಬವರನ್ನ ಮದುವೆಯಾಗಿದ್ದರು.

    ಕೆಲ ದಿನ ಆದ್ಮೇಲೆ ತಾನು ಗೀತಾಳ ಮೂರನೇ ಗಂಡ ಅಂತಾ ಮಹಾಂತೇಶ್ ರಿಗೆ ಗೊತ್ತಾಗಿದೆ. ಆದರೆ ಗೀತಾ ಮೂರನೇ ಗಂಡ ಮಹಾಂತೇಶನ ವಿರುದ್ಧವೂ ಬೆಳಗಾವಿ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ದೂರು ದಾಖಲು ಮಾಡಿದ್ದಾರೆ. ಇದರಿಂದ ತೀವ್ರ ನೊಂದ ಗಂಡ ಕೋರ್ಟ್ ಮೂಲಕ ಹೆಂಡತಿ ವಿರುದ್ಧ ವಂಚನೆ ದೂರು ದಾಖಲು ಮಾಡಿದ್ದಾರೆ.

    2012ರಲ್ಲಿ ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿ ರಾಜಶೇಖರ್ ಕುಲಕರ್ಣಿ ಅವರನ್ನ ಮದುವೆ ಆಗಿ ಗೀತಾ ವಿಚ್ಚೇದನ ಪಡೆದಿದ್ದರು. ನಂತರ ಒಂದೇ ತಿಂಗಳಲ್ಲಿ ದೆಹಲಿಯ ಉದ್ಯಮಿ ಹರ್ಷ ಜೈನ್ ಜೊತೆ ಮದುವೆಯಾದ್ರು. ಆದರೆ ಅವರ ಜೊತೆಯೂ ಕಿರಿಕ್ ಮಾಡಿಕೊಂಡು ಕೋರ್ಟ್ ಮೆಟ್ಟಿಲೇರಿದ್ರು. ಈ ಕೇಸ್ ಇತ್ಯರ್ಥವಾಗುವ ಮುನ್ನವೇ ಮಹಾಂತೇಶ ಅವರನ್ನ ಮದುವೆ ಆಗಿದ್ದಾರೆ. ಇಷ್ಟೆಲ್ಲಾ ಆಟವಾಡೋ ಗೀತಾ ಮಾತ್ರ ನಾನು ಕಾನೂನು ಹೋರಾಟ ಮಾಡ್ತೀನಿ ಎಂದು ಹೇಳುತ್ತಾರೆ.

  • ವರದಕ್ಷಿಣೆಗಾಗಿ ಪತ್ನಿ, ಮಗುವನ್ನು ಮನೆಯಿಂದ ಹೊರ ಹಾಕಿದ ಪತಿರಾಯ

    ವರದಕ್ಷಿಣೆಗಾಗಿ ಪತ್ನಿ, ಮಗುವನ್ನು ಮನೆಯಿಂದ ಹೊರ ಹಾಕಿದ ಪತಿರಾಯ

    ಕಾರವಾರ: ಪತಿಯೊಬ್ಬ ವರದಕ್ಷಿಣೆಗಾಗಿ ತನ್ನ ಪತ್ನಿ ಮತ್ತು ಮಗುವನ್ನು ಮನೆಯಿಂದ ಹೊರ ಹಾಕಿರುವ ಘಟನೆ ಕಾರವಾರ ತಾಲೂಕಿನ ದಾಂಡೇಲಿಯಲ್ಲಿ ನಡೆದಿದೆ.

    ಮೂಳಕ ಮಂಥನ್ ಎಂಬಾತನೇ ಪತ್ನಿ ಮತ್ತು ಮಗುವನ್ನು ಮನೆಯಿಂದ ಹೊರಹಾಕಿದ ಪತಿ. ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದ ಸವಿತಾ ರನ್ನು ಪೇಪರ್ ಮಿಲ್‍ನಲ್ಲಿ ಎಂಜಿಯರ್ ಅಂತಾ ಹೇಳಿ ಮದುವೆಯಾಗಿದ್ದಾನೆ. ಮದುವೆಯಾದ ನಂತರ ಮಂಥನ್ ಪೇಪರ್ ಮಿಲ್ ನಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡಿಕೊಂಡಿರವುದು ಗೊತ್ತಾಗಿದೆ.

    ಪತಿಯ ಮುಖವಾಡ ಗೊತ್ತಾದರೂ ಸವಿತಾ ಗಂಡನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಆದರೆ ಪಾಪಿ ಪತಿ ಮಂಥನ್, ವರದಕ್ಷಿಣೆಗಾಗಿ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡಿ ಮಗು ಸಮೇತ ಪತ್ನಿಯನ್ನು ಮನೆಯಿಂದ್ಲೇ ಹೊರಹಾಕಿದ್ದಾನೆ.

    ಸದ್ಯ ಸವಿತಾ ದಾಂಡೇಲಿ ನಗರ ಠಾಣೆಯಲ್ಲಿ ಪತಿ ಮಂಥನ್ ಹಾಗೂ ಅತ್ತೆಯ ಮೇಲೆ ವರದಕ್ಷಿಣಿ ಕಿರುಕುಳದ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮಂಥನ್ ಊರಿನಿಂದ ನಾಪತ್ತೆಯಾಗಿದ್ದಾನೆ.

  • ಹೆಂಡ್ತಿಗೆ ಎಂಬಿಬಿಎಸ್ ಸೀಟ್ ಸಿಗ್ಲಿಲ್ಲವೆಂದು ಬೆಂಕಿ ಹಚ್ಚಿ ಕೊಂದ್ನಾ ಟೆಕ್ಕಿ?

    ಹೆಂಡ್ತಿಗೆ ಎಂಬಿಬಿಎಸ್ ಸೀಟ್ ಸಿಗ್ಲಿಲ್ಲವೆಂದು ಬೆಂಕಿ ಹಚ್ಚಿ ಕೊಂದ್ನಾ ಟೆಕ್ಕಿ?

    ಹೈದರಾಬಾದ್: ಎಂಬಿಬಿಎಸ್ ವ್ಯಾಸಂಗಕ್ಕೆ ಪ್ರವೇಶಾತಿ ಪಡೆಯಲು ವಿಫಲಳಾದ ಹೆಂಡತಿಯನ್ನು ಸಾಫ್ಟ್ ವೇರ್ ಎಂಜಿನಿಯರ್ ಪತಿಯೊಬ್ಬ ಬೆಂಕಿ ಹಚ್ಚಿ ಕೊಲೆ ಮಾಡಿರುವುದಾಗಿ ಹೈದರಾಬಾದ್ ಪೊಲೀಸರು ಶಂಕಿಸಿದ್ದಾರೆ. ಮೃತ ಮಹಿಳೆಯ ಪತಿ ಹಾಗೂ ಆತನ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

    25 ವರ್ಷದ ಹಾರಿಕಾ ಕುಮರ್ ಮೃತ ದುರ್ದೈವಿ. ಹೈದರಾಬಾದ್‍ನ ಎಲ್‍ಬಿ ನಗರದ ರಾಕ್ ಟೌನ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಹಾರಿಕಾ ಪೋಷಕರು ಮಗಳನ್ನ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು, ವರದಕ್ಷಿಣೆ ಕಿರುಕುಳದ ಬಗ್ಗೆಯೂ ಪ್ರಕರಣ ದಾಖಲಿಸಿದ್ದಾರೆ.

    ಹಾರಿಕಾ ಪತಿ ಋಷಿ ಕುಮಾರ್ ಭಾನುವಾರ ರಾತ್ರಿ ಹಾರಿಕಾ ತಾಯಿಗೆ ಕರೆ ಮಾಡಿ, ನಿಮ್ಮ ಮಗಳು ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಾರಿಕಾ ಆತ್ಮಹತ್ಯೆ ಮಾಡಿಕೊಂಡಳೆಂದು ಪತಿ ಋಷಿ ಹೇಳುತ್ತಿದ್ದಾನೆ. ಆದ್ರೆ ನಾವು ಸ್ಥಳಕ್ಕೆ ಹೋಗಿ ನೋಡಿದ ನಂತರ ಇದೊಂದು ಕೊಲೆಯಂತೆ ಕಾಣುತ್ತಿದೆ. ಋಷಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಎಸಿಪಿ ವೇಣುಗೋಪಾಲ್ ರಾವ್ ಹೇಳಿದ್ದಾರೆ.

    ಹಾರಿಕಾ ಕೆಲವು ಸಮಯದಿಂದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯನ್ನ ತೆಗೆದುಕೊಂಡಿದ್ದಳು. ಆದ್ರೆ ಈ ವರ್ಷವೂ ಆಕೆ ತೇರ್ಗಡೆಯಾಗಿರಲಿಲ್ಲ. ಖಾಸಗಿ ಕಾಲೇಜೊಂದರಲ್ಲಿ ಡೆಂಟಲ್ ಸರ್ಜರಿ ಪದವಿಗೆ ಆಯ್ಕೆಯಾಗಿದ್ದಳು. ಆದ್ರೆ ಪತಿ ಋಷಿಗೆ ಇದರಿಂದ ತೃಪ್ತಿಯಿರಲಿಲ್ಲ. ಆಕೆಗೆ ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹಾರಿಕಾ ಪೋಷಕರು ಆರೋಪ ಮಾಡಿದ್ದಾರೆ.

    ಹಾರಿಕಾ ಮತ್ತು ಋಷಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ವರದಕ್ಷಿಣೆಗಾಗಿಯೂ ಕಿರುಕುಳ ನೀಡುತ್ತಿದ್ದ. ಪ್ಲಾನ್ ಮಾಡಿ ಈ ಕೊಲೆ ಮಾಡಿದ್ದಾರೆ ಎಂದು ಹಾರಿಕಾ ತಾಯಿ ಹಾಗೂ ಸಹೋದರಿ ಹೇಳಿದ್ದಾರೆ.

    ಮಹಿಳೆಯನ್ನ ಮೊದಲು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಸುಟ್ಟುಹಾಕಲಾಗಿದ್ಯಾ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿಯಲಿದೆ. ಸದ್ಯ ವರದಿಗಾಗಿ ಕಾಯುತ್ತಿದ್ದೇವೆ. ತನಿಖೆ ಮುಂದುವರೆಸಿದ್ದೇವೆ ಎಂದು ಪೊಲಿಸರು ಹೇಳಿದ್ದಾರೆ.

  • ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಕುಡಿಸಿ ಸೆಕ್ಸ್ ಗೆ ಬರುವಂತೆ ಟೆಕ್ಕಿ ಗಂಡನ ಕಿರಿಕ್

    ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಕುಡಿಸಿ ಸೆಕ್ಸ್ ಗೆ ಬರುವಂತೆ ಟೆಕ್ಕಿ ಗಂಡನ ಕಿರಿಕ್

    ಬೆಂಗಳೂರು: ತನ್ನ ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಸೇವಿಸಿ ಸೆಕ್ಸ್ ಗೆ ಕರಿಯುತ್ತಿದ್ದ ಕಾಮುಕ ಗಂಡನ ವಿರುದ್ಧ ಪತ್ನಿಯೊಬ್ಬರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ನಗರದ ಪ್ರತಿಷ್ಠತ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಕೃಷ್ಣಕುಮಾರ್ ತನ್ನ ಪತ್ನಿಗೆ ಬ್ಲೂಫಿಲ್ಮಂ ತೋರಿಸುತ್ತಿದ್ದ ಕಾಮುಕ ಗಂಡ. ಕೃಷ್ಣ ಕುಮಾರ್ ಒಂದು ವರ್ಷದ ಹಿಂದೆ ಸುಜಾತ (ಹೆಸರು ಬದಲಾಯಿಸಿದೆ) ಎಂಬವರನ್ನು ಮದುವೆಯಾಗಿದ್ದನು. ಮದುವೆಯಾದ ಒಂದೇ ವರ್ಷದಲ್ಲಿ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾಳೆ.

    ಮದುವೆಯಾದ ಹೊಸತರಲ್ಲಿ ಕೃಷ್ಣ ಕುಮಾರ್ ಮತ್ತು ಸುಜಾತಾ ಹನಿಮೂನ್ ಗಾಗಿ ಮಾರಿಷಸ್ ಗೆ ಹೋಗಿದ್ದಾರೆ. ವಿದೇಶದಲ್ಲಿ ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿ, ಸೆಕ್ಸ್ ಫಿಲ್ಮಂಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೇ ಬೆಂಗಳೂರಿಗೆ ಬಂದ ನಂತರವು ಪ್ರತಿದಿನ ಸೆಕ್ಸ್ ಗೆ ಪೀಡಿಸುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ವಿಡಿಯೋ ಮಾಡ್ತಿದ್ದ: ಇನ್ನೂ ಇಷ್ಟಕ್ಕೆ ಸುಮ್ಮನಾಗದ ಕೃಷ್ಣಕುಮಾರ್ ಮನೆಯಲ್ಲಿ ಪತ್ನಿಯ ನಗ್ನ ವಿಡಿಯೋ ಮಾಡುವ ಮೂಲಕ ಚಿತ್ರಹಿಂಸೆ ನೀಡಿದ್ದಾನೆ. ಕೃಷ್ಣಕುಮಾರ್ ತನ್ನ ಹಳೆಯ ಗರ್ಲ್ ಫ್ರೆಂಡ್ಸ್ ಗಳ ಹೆಸರಿನ ಮೂಲಕ ತನ್ನ ಪತ್ನಿಯನ್ನು ಕರೆದು ಮಾನಸಿಕವಾಗಿಯೂ ಹಿಂಸೆ ಕೊಟ್ಟಿದ್ದಾನೆ.

    ಗಂಡನ ಕಿರುಕುಳ ನೀಡುತ್ತಿದ್ದರೆ ಏರ್‍ಪೋರ್ಟ್ ನಲ್ಲಿ ಕಸ್ಟಮ್ ಅಧೀಕ್ಷಕಿಯಾಗಿರುವ ಅತ್ತೆ ಸ್ವರ್ಣಕಲಾ ಮಾತ್ರ ವರದಕ್ಷಿಣೆ ತರುವಂತೆ ಪೀಡಿಸಿದ್ದಾಳೆ. ಗಂಡನ ಕಿರುಕುಳ ಬಗ್ಗೆ ಅತ್ತೆಗೆ ಹೇಳಿದರೆ ಸಹಿಸಿಕೊಂಡು ಹೋಗು ಎಂದು ತಿಳಿಸಿದ್ದಾಳೆ. ಗಂಡ ಸಿಗರೇಟಿನಿಂದ ಕೈ ಸುಟ್ಟರೆ, ಅತ್ತೆ ನನ್ನ ಮೇಲೆ ಹಲ್ಲೆ ನಡೆಸುತ್ತಾರೆ ಅಂತಾ ಸುಜಾತಾ ಹೇಳಿದ್ದಾರೆ.

    ಇದನ್ನೂ ಓದಿ: ನೀಚ ಟೆಕ್ಕಿಗೆ ಪತ್ನಿಯೇ ಬೆಡ್ ಕಾಫಿ: ವಿಕೃತಕಾಮಿಗೆ ದಿನವೆಲ್ಲ ಸೆಕ್ಸ್ ಬೇಕೇ ಬೇಕಂತೆ!

    ಗಂಡ ಮತ್ತು ಅತ್ತೆಯ ಕಿರುಕುಳ ತಾಳಲಾರದೇ ಸುಜಾತಾ ವಿಜಯನಗರ ಪೊಲೀಸ್ ಸ್ಟೇಷನ್ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದೂರು ನೀಡಿದ್ದಾಳೆ ಎಂಬ ಕೋಪದಿಂದ ತಾಯಿ ಮತ್ತು ಮಗ ಇಬ್ಬರೂ ಸೇರಿ ಸುಜಾತಾರನ್ನು ಅವರ ಸಾಮಾನುಗಳ ಸಹಿತ ಮನೆಯಿಂದ ಹೊರಹಾಕಿದ್ದಾರೆ.

    ಸುಜಾತಾರನ್ನು ಹೊರಹಾಕಿದ್ದ ಬಗ್ಗೆ ಆಕೆಯ ತಾಯಿ ಪ್ರಶ್ನಿಸಿದ್ದಾರೆ. ಈ ವೇಳೆ ಸ್ವರ್ಣಕಲಾ ಸುಜಾತಾರ ತಾಯಿಯ ಕೈಯನ್ನು ಕುಯ್ದು ಹಲ್ಲೆ ನಡೆಸಿದ್ದಾರೆ. ಸುಜಾತಾ ತನ್ನ ಪತಿಯ ಮನೆಯ ಮುಂದೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಸ್ಟ್ರೀಮಿಂಗ್ ಮಾಡಿದ ಟೆಕ್ಕಿ ಬಂಧನ 

    ಇದನ್ನೂ ಓದಿ: ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ 

    ಸ್ವರ್ಣ ಕಲಾ-ಅತ್ತೆ