Tag: dosa

  • ಥಟ್‌ ಅಂತ ಬ್ರೇಕ್‌ಫಾಸ್ಟ್‌ಗೆ ಮಾಡಿ ಸೌತೆಕಾಯಿ ದೋಸೆ!

    ಥಟ್‌ ಅಂತ ಬ್ರೇಕ್‌ಫಾಸ್ಟ್‌ಗೆ ಮಾಡಿ ಸೌತೆಕಾಯಿ ದೋಸೆ!

    ತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದು ತಿಂಡಿ ಮಾಡುವುದೇ ದೊಡ್ಡ ಕೆಲಸ ಎನ್ನುವಂತಾಗಿದೆ.  ಅದರಲ್ಲೂ ಪ್ರತಿದಿನ ಅವಲಕ್ಕಿ, ಉಪ್ಪಿಟ್ಟು, ದೋಸೆ, ಇಡ್ಲಿ  ಇದೆಲ್ಲವನ್ನು ತಿಂದು ಬೇಜಾರಾಗಿದೆ. ಬೇರೆ ಏನನ್ನಾದರೂ ತಿನ್ನಬೇಕು ಎಂದರೆ ಅದನ್ನು ತಯಾರಿಸಲು ಬೆಳಿಗ್ಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಸಮಯವೇ ಎಲ್ಲ ಎನ್ನುವಂತ ಬೆಂಗಳೂರಿಗರೇ ಬೆಳಿಗ್ಗೆ ತಿಂಡಿ ತಿನ್ನಲು ಸಮಯವೂ ಇರುವುದಿಲ್ಲ. ಹೀಗಿರುವಾಗ ಥಟ್‌ ಅಂತ ಕೇವಲ 10 ರಿಂದ 15 ನಿಮಿಷಗಳಲ್ಲೇ ಸೌತೆಕಾಯಿ ದೋಸೆ ಮಾಡಬಹುದು.

    ಹೌದು, ಸಾಮಾನ್ಯವಾಗಿ ದೋಸೆ ತಯಾರಿಸುವಂತೆ ಇದಕ್ಕೆ ಅಕ್ಕಿ ನೆನೆಯಿಡುವ ಅವಶ್ಯಕತೆಯಿಲ್ಲ. ಅಕ್ಕಿ ಹಿಟ್ಟು ಬೇಕೇ ಬೇಕು ಎನ್ನುವ ಹಾಗೆಯೂ ಇಲ್ಲ. ಮನೆಯಲ್ಲಿರುವ ಹಿಟ್ಟನ್ನು ಬಳಸಿ ಸರಳವಾಗಿ ಸೌತೆಕಾಯಿ ದೋಸೆ ತಯಾರಿಸಿ.

    ಬೇಕಾಗುವ ಸಾಮಗ್ರಿಗಳು:
    ಸೌತೆಕಾಯಿ
    ಉಪ್ಪು
    ಕೆಂಪು ಖಾರದ ಪುಡಿ
    ಗೋಧಿ ಹಿಟ್ಟು (ಮನೆಯಲ್ಲಿರುವ ಯಾವ ಹಿಟ್ಟನ್ನು ಬಳಸಬಹುದು)
    ಅಕ್ಕಿ ಹಿಟ್ಟು
    ಕಡಲೆ ಹಿಟ್ಟು
    ಮೊಸರು

    ಮಾಡುವ ವಿಧಾನ:
    ಮೊದಲಿಗೆ ಸೌತೆಕಾಯಿಯನ್ನು ತುರಿದುಕೊಳ್ಳಬೇಕು, ಬಳಿಕ ಒಂದು ಪಾತ್ರೆಗೆ ಸೌತೆಕಾಯಿಯನ್ನು ಹಾಕಿ, ಅದಕ್ಕೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು ಹಾಕಬೇಕು, ಬಳಿಕ ಅದಕ್ಕೆ ಮೊಸರು, ಉಪ್ಪು, ಖಾರದ ಪುಡಿ, ತೆಂಗಿನ ತುರಿ, ನೀರನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ದೋಸೆ ಹಿಟ್ಟಿನ ಹದಕ್ಕೆ ಬರುವ ಹಾಗೇ ಕಲಸಿಕೊಳ್ಳಬೇಕು. ಬಳಿಕ ಕಾದ ತವೆಯ ಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ಬಳಿಕ ಹಿಟ್ಟನ್ನು ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿದರೆ ಗರಿಗರಿಯಾದ ಸೌತೆಕಾಯಿ ದೋಸೆ ತಯಾರಾಗುತ್ತದೆ. ದೋಸೆಯನ್ನು ಚಟ್ನಿ ಅಥವಾ ಖಾರ ಹಾಕಿರುವುದರಿಂದ ಮೊಸರಿನ ಜೊತೆಗೆ ತಿನ್ನಬಹುದು.

  • ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿ ರುಚಿಗೆ ಫಿದಾ ಆದ ಪ್ರಿಯಾಂಕಾ ಗಾಂಧಿ

    ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿ ರುಚಿಗೆ ಫಿದಾ ಆದ ಪ್ರಿಯಾಂಕಾ ಗಾಂಧಿ

    ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ (Congress) ಪರ ಪ್ರಚಾರಕ್ಕೆ ಕಾರ್ನಾಟಕ (Karnataka) ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಬುಧವಾರ ಮೈಸೂರು (Mysuru) ತೆರಳಿದ್ದಾರೆ. ಅರಮನೆ ನಗರಿಯ ಪ್ರಸಿದ್ಧ ಮೈಲಾರಿ ದೋಸೆಯನ್ನು (Mailari Dosa) ಸವಿದು ಪ್ರಿಯಾಂಕಾ ಫಿದಾ ಆಗಿದ್ದಾರೆ.

    ಪ್ರಿಯಾಂಕಾ ಗಾಂಧಿ ಮೈಸೂರಿನ ಅಗ್ರಹಾರ ಬಳಿ ಇರುವಾ ಹೆಸರಾಂತ ಮೈಲಾರಿ ಹೋಟೆಲ್‌ಗೆ (Mailari Hotel) ತೆರಳಿದ್ದು, ಅಲ್ಲಿ ಅವರು ಅಡುಗೆ ಮನೆಯಲ್ಲಿ ಖುದ್ದು ತವಾ ಮೇಲೆ ದೋಸೆ ಹಾಕಿದ್ದಾರೆ. ತವಾಗೆ ಸಂಪಣ ಹಾಕಿ ದೋಸೆ ಮಾಡಿ ಸಂತೋಷ  ವ್ಯಕ್ತಪಡಿಸಿದ ಪ್ರಿಯಾಂಕಾ ಬಳಿಕ ದೋಸೆ ಸವಿದು ರುಚಿಗೆ ಮನಸೋತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

    ಬಳಿಕ ಮಾತನಾಡಿದ ಅವರು, ನಾನಿಲ್ಲಿ ಇಡ್ಲಿ, ದೋಸೆ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು. ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ನಾನು ಇದನ್ನು ಮನೆಯಲ್ಲಿಯೂ ಟ್ರೈ ಮಾಡುತ್ತೇನೆ ಎಂದು ಹೇಳಿದರು.

    ಈ ವೇಳೆ ಪ್ರಿಯಾಂಕಾ ಗಾಂಧಿ ಅವರಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಥ್ ನೀಡಿದರು. ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗೆ ಆಮಿಷ? – ಸೋಮಣ್ಣರದ್ದು ಎನ್ನಲಾದ ಆಡಿಯೋ ವೈರಲ್

  • ಕಲ್ಲಂಗಡಿ ಸಿಪ್ಪೆಯನ್ನು ಎಸೆಯುವ ಬದಲು ಮಾಡಿ ನೋಡಿ ದೋಸೆ

    ಕಲ್ಲಂಗಡಿ ಸಿಪ್ಪೆಯನ್ನು ಎಸೆಯುವ ಬದಲು ಮಾಡಿ ನೋಡಿ ದೋಸೆ

    ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿಂದ ಬಳಿಕ ನಾವದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯಿಂದ ಎಂತೆಂತಹ ರುಚಿಕರವಾದ ಅಡುಗೆಗಳನ್ನು ಮಾಡಬಹುದು ಎಂಬುದು ನಿಮಗೆ ತಿಳಿದಿದೆಯಾ? ಕಲ್ಲಂಗಡಿ ಸಿಪ್ಪೆಯ ರಾಯಿತಾ ಮಾಡುವುದು ಹೇಗೆಂದು ನಾವು ಇತ್ತೀಚೆಗಷ್ಟೇ ಹೇಳಿಕೊಟ್ಟಿದ್ದೇವೆ. ಇಂದು ನಾವು ಕಲ್ಲಂಗಡಿ ಸಿಪ್ಪೆ ಬಳಸಿಕೊಂಡು ದೋಸೆ (Watermelon Rind Dosa) ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಕೂಡಾ ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೇ ಈ ರೀತಿ ಡಿಫರೆಂಟ್ ರೆಸಿಪಿಗಳನ್ನು ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ದೋಸೆ ಅಕ್ಕಿ – 4 ಕಪ್
    ಕಲ್ಲಂಗಡಿ ಸಿಪ್ಪೆ – 2 ಕಪ್
    ಉದ್ದಿನಬೇಳೆ – ಅರ್ಧ ಕಪ್
    ಮೆಂತ್ಯ – 2 ಟೀಸ್ಪೂನ್
    ಮಂಡಕ್ಕಿ – 2 ಕಪ್
    ತೆಂಗಿನ ತುರಿ – ಅರ್ಧ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ದೋಸೆ ಮಾಡಲು ಬೇಕಾಗುವಷ್ಟು

    ಮಾಡುವ ವಿಧಾನ:
    * ಮೊದಲಿಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು, ಅದರ ಹಸಿರು ಪದರವನ್ನು ಪೀಲರ್ ಸಹಾಯದಿಂದ ತೆಗೆದುಹಾಕಿ. ನಮಗೆ ದೋಸೆ ಮಾಡಲು ಸಿಪ್ಪೆಯ ಬಿಳಿ ಪದರ ಮಾತ್ರ ಉಪಯೋಗಕ್ಕೆ ಬರುತ್ತದೆ. ಬಳಿಕ ಅದನ್ನು ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕಿಡಿ.
    * ಅಕ್ಕಿ ಹಾಗೂ ಉದ್ದಿನಬೇಳೆಯನ್ನು ತೊಳೆದು, 4-5 ಗಂಟೆಗಳ ಕಾಲ ನೆನೆಸಿಡಿ. ಅಕ್ಕಿಯನ್ನು ರುಬ್ಬುವುದಕ್ಕೂ 1 ಗಂಟೆ ಮೊದಲು ಮಂಡಕ್ಕಿಯನ್ನು ಸೇರಿಸಿ ನೆನೆಸಿ.
    * ಈಗ ಮಿಕ್ಸರ್ ಜಾರ್‌ಗೆ ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ತೆಂಗಿನ ತುರಿ ಹಾಕಿ ನೀರನ್ನು ಸೇರಿಸದೇ ಸ್ವಲ್ಪ ರುಬ್ಬಿಕೊಳ್ಳಿ.
    * ಈಗ ನೆನೆಸಿದ ಅಕ್ಕಿ ಮಿಶ್ರಣವನ್ನು ಸೇರಿಸಿ, ಎಲ್ಲವನ್ನೂ ನಯವಾಗಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಡಿಫರೆಂಟ್ ರುಚಿ – ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ

    * ಬಳಿಕ ಹಿಟ್ಟಿಗೆ ಉಪ್ಪು ಸೇರಿಸಿ, ಮಿಶ್ರಣ ಮಾಡಿ 6-7 ಗಂಟೆಗಳ ಕಾಲ ಹುದುಗಲು ಬಿಡಿ. (ರಾತ್ರಿಯಿಡೀ ಹುದುಗಲು ಬಿಡಬಹುದು)
    * ಬೆಳಗ್ಗೆ ದೋಸೆ ಹಿಟ್ಟಿನ ಸ್ಥಿರತೆ ಪರಿಶೀಲಿಸಿ, ಅಗತ್ಯವಿದ್ದರೆ ಇನ್ನಷ್ಟು ನೀರು ಸೇರಿಸಿ ಮಿಶ್ರಣ ಮಾಡಿ.
    * ಈಗ ದೋಸೆ ಮಾಡುವ ತವಾ ಬಿಸಿ ಮಾಡಿ, ಒಂದು ಸೌಟು ಹಿಟ್ಟನ್ನು ಸುರಿದು, ದೋಸೆಯನ್ನು ದಪ್ಪನೆ ಹರಡಿ. ಕೆಲ ಹನಿ ಎಣ್ಣೆ ಹಾಕಿ, ಮುಚ್ಚಿ ದೋಸೆಯನ್ನು ಬೇಯಿಸಿ.
    * ದೋಸೆ 2 ನಿಮಿಷ ಕಾದ ಬಳಿಕ ಮಗುಚಿ ಹಾಕಿ 1 ನಿಮಿಷ ಕಾಯಿಸಿಕೊಳ್ಳಿ.
    * ಇದೀಗ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಕಲ್ಲಂಗಡಿ ಸಿಪ್ಪೆಯ ರಾಯಿತಾ – ಒಮ್ಮೆ ನೀವೂ ಟ್ರೈ ಮಾಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರೋಗ್ಯಕರ ಹುರುಳಿ ಕಾಳಿನ ದೋಸೆ ರೆಸಿಪಿ

    ಆರೋಗ್ಯಕರ ಹುರುಳಿ ಕಾಳಿನ ದೋಸೆ ರೆಸಿಪಿ

    ಹುರುಳಿ ಕಾಳು ಆರೋಗ್ಯಕರ ಮಾತ್ರವಲ್ಲದೇ ರುಚಿಕರವೂ ಆಗಿರುತ್ತದೆ. ನಾವು ತಯಾರಿಸುವ ಅಡುಗೆಗಳಲ್ಲಿ ಹುರುಳಿಯನ್ನು ಆದಷ್ಟು ಬಳಸಲು ಪ್ರಯತ್ನಿಸಿದರೆ, ಅದನ್ನು ಇನ್ನಷ್ಟು ಆರೋಗ್ಯಕರ ಖಾದ್ಯವನ್ನಾಗಿ ಮಾಡಬಹುದು. ನಾವಿಂದು ಹುರುಳಿಯನ್ನು ಬಳಸಿ ಭಿನ್ನವಾಗಿ ದೋಸೆ (Horse gram Dosa) ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ಇದನ್ನು ನೀವೂ ಒಮ್ಮೆ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಹುರುಳಿ – ಅರ್ಧ ಕಪ್
    ದೋಸೆ ಅಕ್ಕಿ – 2 ಕಪ್
    ಮೆಂತ್ಯ – 1 ಟೀಸ್ಪೂನ್
    ಅವಲಕ್ಕಿ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ದೋಸೆ ತಯಾರಿಸಲು ಬೇಕಾಗುವಷ್ಟು ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಬೆಲ್ಲದ ಪರೋಟ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ದೋಸೆ ಅಕ್ಕಿ, ಹುರುಳಿ ಹಾಗೂ ಮೆಂತ್ಯವನ್ನು ತೆಗೆದುಕೊಂಡು, ತೊಳೆದು, 5-6 ಗಂಟೆಗಳ ಕಾಲ ನೆನೆಸಿಡಿ.
    * ನೆನೆಸಿಟ್ಟ ಅಕ್ಕಿಯನ್ನು ರುಬ್ಬುವುದಕ್ಕೂ 30 ನಿಮಿಷ ಮೊದಲು ಅವಲಕ್ಕಿಯನ್ನು ತೊಳೆದು ನೆನೆಸಿ.
    * ಈಗ ಮಿಕ್ಸರ್ ಜಾರ್‌ಗೆ ನೆನೆಸಿಟ್ಟ ಎಲ್ಲಾ ಪದಾರ್ಥಗಳನ್ನು ಹಾಕಿ, ದೋಸೆ ಹಿಟ್ಟಿನ ಹದಕ್ಕೆ ಬೇಕಾಗುವಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ.
    * ಈಗ ಹಿಟ್ಟಿಗೆ ಉಪ್ಪು ಸೇರಿಸಿ ಮಿಶ್ರಣ ಮಾಡಿ, 8-10 ಗಂಟೆ ವಿಶ್ರಾಂತಿ ನೀಡಿ.
    * 8-10 ಗಂಟೆಗಳ ಬಳಿಕ ಹಿಟ್ಟು ಹುದುಗಿರುವುದು ಕಂಡುಬರುತ್ತದೆ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ತವಾವನ್ನು ಬಿಸಿ ಮಾಡಿ, 1 ಸೌಟು ಹಿಟ್ಟನ್ನು ತವಾದ ಮೇಲೆ ಸುರಿದು, ತೆಳ್ಳಗೆ ಹರಡಿ.
    * ದೋಸೆಯ ಸುತ್ತಲೂ ಕೆಲ ಹನಿ ಎಣ್ಣೆಯನ್ನು ಹಾಕಿ, 1-2 ನಿಮಿಷ ಮಧ್ಯಮ ಉರಿಯಲ್ಲಿ ಮುಚ್ಚಿ ಬೇಯಿಸಿ.
    * ದೋಸೆ ಗರಿಗರಿಯಾದ ಬಳಿಕ ತವಾದಿಂದ ತೆಗೆಯಿರಿ.
    * ಇದೀಗ ಹುರುಳಿ ಕಾಳಿನ ದೋಸೆ ತಯಾರಾಗಿದ್ದು, ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?

    Live Tv
    [brid partner=56869869 player=32851 video=960834 autoplay=true]

  • ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    ರೋಗ್ಯಕರ ಹಾಗೂ ಪೌಷ್ಟಿಕಾಂಶವುಳ್ಳ ಉಪಾಹಾರ ಪ್ರತಿ ದಿನ ಮಾಡಬೇಕೆಂದರೆ, ಒಮ್ಮೆ ಹೆಸರು ಬೇಳೆಯ ದೋಸೆ (Moong Dal Dosa) ಮಾಡಿ ನೋಡಿ. ಸರಳವಾಗಿ ತಯಾರಿಸಬಹುದಾದ ಹೆಸರು ಬೇಳೆ ದೋಸೆ ಕೆಲವೇ ಪದಾರ್ಥಗಳನ್ನು ಬಳಸಿ ಮಾಡಬಹುದು. ಇದನ್ನು ಯಾವುದೇ ಸೈಡ್ ಡಿಶ್ ಇಲ್ಲದೇ ಸವಿಯಬಹುದಾದರೂ ಚಟ್ನಿಯೊಂದಿಗೆ ಇದರ ರುಚಿ ದುಪ್ಪಟ್ಟಾಗುತ್ತದೆ. ಒಮ್ಮೆ ಮನೆಯಲ್ಲಿ ಹೆಸರು ಬೇಳೆ ದೋಸೆಯನ್ನು ಮಾಡಿನೋಡಿ.

    ಬೇಕಾಗುವ ಪದಾರ್ಥಗಳು:
    ಹೆಸರು ಬೇಳೆ – 1 ಕಪ್
    ಮೆಣಸಿನಕಾಯಿ – 1
    ಶುಂಠಿ – 1 ಇಂಚು
    ಜೀರಿಗೆ – 1 ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಹಿಂಗ್ – ಚಿಟಿಕೆ
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – ದೋಸೆ ಕಾಯಿಸಲು ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ ಹೆಸರು ಬೇಳೆ ತೆಗೆದುಕೊಂಡು, ಮುಳುಗುವಷ್ಟು ನೀರು ಹಾಕಿ 3 ಗಂಟೆಗಳ ಕಾಲ ನೆನೆಸಿ.
    * ನೀರನ್ನು ಸೋಸಿ ಹೆಸರು ಬೇಳೆಯನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ.
    * ಈಗ ಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ, ಅಗತ್ಯವಿರುವಷ್ಟು ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಬ್ಯಾಟರ್ ಅನ್ನು ಪಾತ್ರೆಗೆ ವರ್ಗಾಯಿಸಿ, ಅರಿಶಿನ, ಕೊತ್ತಂಬರಿ ಸೊಪ್ಪು, ಹಿಂಗ್ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.

    * ಬಿಸಿ ತವಾದ ಮೇಲೆ ಒಂದು ಸೌಟು ಬ್ಯಾಟರ್ ಸುರಿದು, ನಿಧಾನವಾಗಿ ಹರಡಿ.
    * ದೋಸೆಯ ಮೇಲೆ 1 ಟೀಸ್ಪೂನ್ ಎಣ್ಣೆ ಹಾಕಿ, ತವಾ ಮುಚ್ಚಿ, 1 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ.
    * ದೋಸೆಯನ್ನು ಮಗುಚಿ ಹಾಕಿ, ಎರಡೂ ಬದಿ ಕಾಯಿಸಿಕೊಳ್ಳಿ.
    * ಇದೀಗ ಹೆಸರು ಬೇಳೆ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

    Live Tv
    [brid partner=56869869 player=32851 video=960834 autoplay=true]

  • ಹೀಗೆ ಮಾಡಿ ತೆಂಗಿನಕಾಯಿ ದೋಸೆ

    ಹೀಗೆ ಮಾಡಿ ತೆಂಗಿನಕಾಯಿ ದೋಸೆ

    ಪ್ರತಿ ದಿನ ಬೆಳಗ್ಗೆ ಉಪಹಾರಕ್ಕೆ ಹೊಸ ಹೊಸದೇನಾದರೂ ಮಾಡಬೇಕು ಎಂದರೆ ಒಮ್ಮೆ ತೆಂಗಿನಕಾಯಿ ದೋಸೆ (Coconut Dosa) ಮಾಡಿ ನೋಡಿ. ಅಕ್ಕಿ ಹಾಗೂ ತೆಂಗಿನಕಾಯಿ ಸಂಯೋಜನೆಯ ರುಚಿಕರವಾದ ದೋಸೆ ಪರ್ಫೆಕ್ಟ್ ಉಪಹಾರವಾಗಿದೆ. ಸೆಟ್ ದೋಸೆಯನ್ನು ಹೋಲುವ ತೆಂಗಿನಕಾಯಿ ದೋಸೆಯನ್ನು ತಯಾರಿಸಲು ಕೆಲವೇ ನಿಮಿಷಗಳು ಸಾಕು. ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – 2 ಕಪ್
    ಮೆಂತ್ಯ – 1 ಟೀಸ್ಪೂನ್
    ತುರಿದ ತೆಂಗಿನಕಾಯಿ – 1 ಕಪ್
    ನೀರು – ರುಬ್ಬಲು
    ಉಪ್ಪು – 1 ಟೀಸ್ಪೂನ್ ಇದನ್ನೂ ಓದಿ:  ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಮತ್ತು ಮೆಂತ್ಯ ವನ್ನು ತೆಗೆದುಕೊಂಡು ಅದು ಮುಳುಗುವಷ್ಟು ನೀರು ಹಾಕಿ ಸುಮಾರು 4 ಗಂಟೆಗಳ ಕಾಲ ನೆನೆಸಿಡಿ.
    * ಈಗ ಅಕ್ಕಿಯನ್ನು ನೀರಿನಿಂದ ತೆಗೆದು ಮಿಕ್ಸರ್ ಗ್ರೈಂಡರ್‌ನಲ್ಲಿ ಹಾಕಿ, ರುಬ್ಬಿಕೊಳ್ಳಿ.
    * ಈಗ ಅಕ್ಕಿಯ ಹಿಟ್ಟನ್ನು ಒಂದು ಬಟ್ಟಲಿಗೆ ವರ್ಗಾಯಿಸಿ, ಪಕ್ಕಕ್ಕಿಡಿ.
    * ಈಗ ಮಿಕ್ಸರ್ ಗ್ರೈಂಡರ್‌ನಲ್ಲಿ ತೆಂಗಿನಕಾಯಿ ತುರಿ ಮತ್ತು 1 ಕಪ್ ನೀರು ಹಾಕಿ ಮೃದುವಾಗಿ ರುಬ್ಬಿ.
    * ತೆಂಗಿನಕಾಯಿ ಪೇಸ್ಟ್ ಅನ್ನು ಅಕ್ಕಿ ಹಿಟ್ಟಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಮಂಗಳೂರು ಬನ್ಸ್ ಮಾಡುವುದು ಹೇಗೆ ಗೊತ್ತಾ?

    * ಈಗ ಹಿಟ್ಟನ್ನು ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇಟ್ಟು, 8 ಗಂಟೆಗಳ ಕಾಲ ವಿಶ್ರಾಂತಿ ನೀಡಿ.
    * ಈಗ ದಪ್ಪ ದೋಸೆ ತಯಾರಿಸಲು ಬೇಕಾಗುವಷ್ಟು ಹೆಚ್ಚುವರಿ ನೀರನ್ನು ಬಳಸಬಹುದು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಶ್ರಣ ಮಾಡಿ.
    * ಈಗ ಬಿಸಿ ತವಾದ ಮೇಲೆ ಬ್ಯಾಟರ್ ಅನ್ನು ಸುರಿದು ಒಂದೊಂದೇ ದೋಸೆ ತಯಾರಿಸಿ.
    * ಮಧ್ಯಮ ಜ್ವಾಲೆಯಲ್ಲಿ ಬ್ಯಾಟರ್ ಸುರಿದು ಅದಕ್ಕೆ ಮುಚ್ಚಿ, ದೋಸೆ ಸಂಪೂರ್ಣ ಬೇಯುವವರೆಗೆ ಕಾಯಿಸಿ.
    * ಈಗ ತೆಂಗಿನಕಾಯಿ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ಮೃದುವಾದ ವೆಜಿಟೇಬಲ್ ಉತ್ತಪ್ಪ ಮಾಡಿ ಸವಿಯಿರಿ

    ಮೃದುವಾದ ವೆಜಿಟೇಬಲ್ ಉತ್ತಪ್ಪ ಮಾಡಿ ಸವಿಯಿರಿ

    ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಈರುಳ್ಳಿ ಹಾಕಿ ಉತ್ತಪ್ಪ ಮಾಡುತ್ತಾರೆ. ಆದರೆ ಮನೆಯಲ್ಲಿ ನಾವು ನಮಗೆ ಬೇಕಾದ ತರಕಾರಿಗಳನ್ನು ಬಳಸಿ ಉತ್ತಪ್ಪ ತಯಾರಿಸಬಹುದು. ರುಚಿಯಾದ ಹಾಗೂ ತುಂಬಾ ಮೃದುವಾದ ವೆಜಿಟೇಬಲ್ ಉತ್ತಪ್ಪ ಮಾಡುವ ವಿಧಾನ ಇಲ್ಲಿದೆ. ಒಮ್ಮೆ ನೀವೂ ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ಇಡ್ಲಿ ಅಕ್ಕಿ – 2 ಕಪ್
    ಉದ್ದಿನಬೇಳೆ – ಅರ್ಧ ಕಪ್
    ಮೆಂತ್ಯ – ಅರ್ಧ ಟೀಸ್ಪೂನ್
    ಅವಲಕ್ಕಿ – 1 ಕಪ್
    ನೀರು – ನೆನೆಸಲು ಹಾಗೂ ರುಬ್ಬಲು
    ಉಪ್ಪು – 2 ಟೀಸ್ಪೂನ್
    ಎಣ್ಣೆ – ಹುರಿಯಲು

    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ತುರಿದ ಕ್ಯಾರೆಟ್ – 1

    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
    ಸಣ್ಣಗೆ ಹೆಚ್ಚಿದ ಟೊಮೇಟೊ – 1
    ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
    ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 1
    ಕರಿಬೇವಿನ ಎಲೆಗಳು – ಸ್ವಲ್ಪ
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್ ಇದನ್ನೂ ಓದಿ: ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಇಡ್ಲಿ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ತೆಗೆದುಕೊಂಡು, ಅದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ 5 ಗಂಟೆ ನೆನೆಸಿಡಿ.
    * ಈಗ ನೆನೆಸಿಟ್ಟಿದ್ದ ಅಕ್ಕಿಯಿಂದ ನೀರನ್ನು ಬಸಿದು, ಮಿಕ್ಸರ್ ಗ್ರೈಂಡರ್‌ಗೆ ವರ್ಗಾಯಿಸಿ. ಅಗತ್ಯವಿರುವಷ್ಟು ನೀರು ಹಾಕಿ ನುಣ್ಣಗೆ ರುಬ್ಬಿ, ಪಾತ್ರೆಯಲ್ಲಿ ತೆಗೆದಿಡಿ.
    * ಈಗ ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಅದಕ್ಕೆ ಅಗತ್ಯವಿರುವಷ್ಟು ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ.
    * ಈಗ ಅಕ್ಕಿ ಹಿಟ್ಟು ಹಾಗೂ ಅವಲಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ, 8 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿ ಇಡಿ. ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ಮಾಡಿ ಕೇರಳ ಶೈಲಿಯ ಅಪ್ಪಂ

    * 8 ಗಂಟೆಗಳ ಬಳಿಕ ಹಿಟ್ಟು ಉಬ್ಬಿರುವುದನ್ನು ನೀವು ಕಾಣಬಹುದು. ಅದಕ್ಕೆ 2 ಟೀಸ್ಪೂನ್ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
    * ಈಗ ಕತ್ತರಿಸಿಟ್ಟಿದ್ದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಮ್, ಟೊಮೆಟೋ, ಶುಂಠಿ, ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಕೊತ್ತಂಬರಿ ಸೊಪ್ಪನ್ನು ಒಂದು ಬೌಲ್‌ಗೆ ಹಾಕಿ ಮಿಶ್ರಣವನ್ನು ತಯಾರು ಮಾಡಿಟ್ಟಿರಿ.
    * ಬಿಸಿ ಕಾವಲಿಯ ಮೇಲೆ ದೋಸೆ ಹಿಟ್ಟನ್ನು ಹಾಕಿ, ಸಾಮಾನ್ಯ ಮಸಾಲೆ ದೋಸೆಗಿಂತ ಸ್ವಲ್ಪ ದಪ್ಪವಾದ ದೋಸೆಯನ್ನು ಹಾಕಿ.
    * ಅದರ ಮೇಲೆ ತಯಾರಿಸಿಟ್ಟಿದ್ದ ತರಕಾರಿಯ ಮಿಶ್ರಣವನ್ನು 1-2 ಟೀಸ್ಪೂನ್‌ನಷ್ಟು ಹಾಕಿ ಹರಡಿ.
    * ದೋಸೆಯ ಬದಿಗಳಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ, ದೋಸೆಯನ್ನು ಎರಡೂ ಬದಿ ತಿರುವಿ ಹಾಕಿ ಬೇಯಿಸಿ.
    * ಇದೀಗ ವೆಜಿಟೇಬಲ್ ಉತ್ತಪ್ಪ ತಯಾರಾಗಿದ್ದು, ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ದಿಢೀರ್ ಅಂತ ತಯಾರಿಸಿ ಜೋಳದ ದೋಸೆ

    ದಿಢೀರ್ ಅಂತ ತಯಾರಿಸಿ ಜೋಳದ ದೋಸೆ

    ಜೋಳದ ಹಿಟ್ಟನ್ನು ಬಳಸಿ ಅತ್ಯಂತ ಸುಲಭವಾಗಿ ದೋಸೆ ತಯಾರಿಸುವುದು ಹೇಗೆ ಎಂಬುದು ನಿಮಗೆ ಗೊತ್ತಾ? ತುಂಬಾನೇ ಸರಳವಾಗಿ ಹಾಗೂ ಆರೋಗ್ಯಕರವಾಗಿ ಜೋಳದ ದೋಸೆಯನ್ನು ದಿಢೀರ್ ಅಂತಲೇ ತಯಾರಿಸಬಹುದು. ಚಟ್ನಿಯೊಂದಿಗಿನ ಇದರ ಸ್ವಾದ ಎಂತಹವರನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಬಲ್ಲುದು. ಸಿಂಪಲ್ ಆಗಿ ಮಾಡಬಹುದಾಗ ಜೋಳದ ದೋಸೆ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಜೋಳದ ಹಿಟ್ಟು – ಒಂದೂವರೆ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – 4 ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕತ್ತರಿಸಿದ ಕರಿಬೇವಿನ ಎಲೆಗಳು – ಸ್ವಲ್ಪ
    ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
    ಜೀರಿಗೆ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಎಣ್ಣೆ – ದೋಸೆ ತಯಾರಿಸಲು ಬೇಕಾಗುವಷ್ಟು ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಉಪ್ಪು ಹಾಗೂ ನೀರನ್ನು ಸೇರಿಸಿ ಗಂಟಿಲ್ಲದಂತೆ ಮಿಶ್ರಣ ಮಾಡಿ.
    * ಈಗ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳು, ಮೆಣಸಿನಕಾಯಿ, ಜೀರಿಗೆ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಅದನ್ನು 10 ನಿಮಿಷಗಳ ಕಾಲ ವಿಶ್ರಾಂತಿಗೆ ಬಿಡಿ.
    * ಬಳಿಕ ಹಿಟ್ಟಿನ ಸ್ಥಿರತೆಯನ್ನು ನೋಡಿ, ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ.
    * ಈಗ ಪ್ಯಾನ್ ಅನ್ನು ಬಿಸಿಗಿಟ್ಟು, ಒಂದು ಸೌಟು ಹಿಟ್ಟನ್ನು ಪ್ಯಾನ್‌ನಲ್ಲಿ ತೆಳುವಾಗಿ ಹರಡಿ.
    * ಅದರ ಮೇಲೆ 1 ಟೀಸ್ಪೂನ್ ಎಣ್ಣೆ ಹಾಕಿ, ಗರಿಗರಿಯಾಗುವವರೆಗೆ ಹುರಿಯಿರಿ.
    * ಇದೀಗ ಜೋಳದ ದೋಸೆ ತಯಾರಾಗಿದ್ದು, ಅದನ್ನು ಚಟ್ನಿಯೊಂದಿಗೆ ಸವಿದರೆ ಸೂಪರ್ ಆಗಿರುತ್ತದೆ. ಇದನ್ನೂ ಓದಿ: ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್

    Live Tv
    [brid partner=56869869 player=32851 video=960834 autoplay=true]

  • ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

    ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟಾಪ್ ಹೋಟೆಲ್‍ಗಳಿಂದ 10 ವಿವಿಧ ರೀತಿಯ ದೋಸೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ನನಗೆ ಕಳುಹಿಸಿದ್ದಾರೆ. ಆದರೆ ಇಲ್ಲಿಯವರೆಗೂ ನನಗೆ ಯಾವುದೇ ದೋಸೆ ಪಾರ್ಸೆಲ್ ಬಂದಿಲ್ಲ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಗರದಲ್ಲಿ ಮಳೆಹಾನಿಯಿಂದಾಗಿ ಜನ ಪರದಾಡುತ್ತಿದ್ದ ಸಂದರ್ಭದಲ್ಲಿ ಸಂಸದ ತೇಜಸ್ವಿಸೂರ್ಯ ದೋಸೆ ಸವಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರಿಂದ ತೇಜಸ್ವಿ ಸೂರ್ಯ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದರು. ಈ ಮಧ್ಯೆ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಮಳೆ ಹಾನಿಯಿಂದ ಜನರ ಪರದಾಡುತ್ತಿದ್ದರೆ ಸಂಸದರು ಹೋಟೆಲ್‍ನಲ್ಲಿ ದೋಸೆ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದು ಇವರ ಬೇಜವಾಬ್ದಾರಿ ತನವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿತ್ತು. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    ಇದೀಗ ಈ ಕುರಿತಂತೆ ತೇಜಸ್ವಿ ಸೂರ್ಯ ಅವರು ತಮ್ಮ ಟ್ವಿಟ್ಟರ್‌ನಲ್ಲಿ ದೋಸೆ ತಿನ್ನುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿದ್ದಾರೆ. ಆದರೆ 24 ಗಂಟೆಗಿಂತಲೂ ಹೆಚ್ಚು ಕಾಲ ಕಳೆದಿದೆ. ಇನ್ನೂ ದೋಸೆ ಬಂದಿಲ್ಲ. ಇದರಲ್ಲಿಯೂ ಮೋಸ ಮಾಡಿದ್ದಾರೆ. ದೋಸೆಯನ್ನು ಸರಿಯಾಗಿ ಕಳುಹಿಸಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ. ಇವರು ಆಡಳಿತವನ್ನು ನಡೆಸುವ ಕನಸು ಕಾಣುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಳ್ಳುವ ಮೂಲಕ ವ್ಯಂಗ್ಯವಾಡಿದ್ದಾರೆ.

    ತೇಜಸ್ವಿ ಸೂರ್ಯ ಅವರು ಮಸಾಲೆ ದೋಸೆ ತಿನ್ನುತ್ತಿರುವ ವೀಡಿಯೋವನ್ನು ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಹಂಚಿಕೊಂಡಿದ್ದರು. ಇದೇ ವೇಳೆ ನಗರದ ಬಹುತೇಕ ಭಾಗಗಳು ಪ್ರವಾಹದಲ್ಲಿ ಜಲಾವೃತಗೊಂಡಿದ್ದ ವೀಡಿಯೊವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ತೇಜಸ್ವಿ ಸೂರ್ಯ ದೋಸೆ ಸವಿದಿದ್ದನ್ನು ಟೀಕಿಸಿದ್ದ ಕಾಂಗ್ರೆಸ್‍ಗೆ ಬಿಜೆಪಿ ತಿರುಗೇಟು

    ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ನನ್ನ ಕ್ಷೇತ್ರದಲ್ಲಿ ಬೊಮ್ಮನಹಳ್ಳಿಯಲ್ಲಿ ಮಾತ್ರ ಸ್ವಲ್ಪ ಮಳೆ ಸಮಸ್ಯೆ ಆಗಿದೆ ಬೇರೆ ಕ್ಷೇತ್ರದಲ್ಲಿ ಜನ ಜೀವನ ಯಥಾಸ್ಥಿತಿ ನಡೆದುಕೊಂಡು ಬರುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ. ನನ್ನ ಕ್ಷೇತ್ರದಲ್ಲಿ ಇರುವ ಅಂಗಡಿ ಉದ್ಘಾಟನೆ ನನ್ನ ಕರ್ತವ್ಯ, ಅದನ್ನು ನಿರ್ವಹಣೆ ಮಾಡಿರುವುದಾಗಿ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ- ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿ

    ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ- ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿ

    ಬೆಂಗಳೂರು: ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ (Bengaluru Flood) ಷಡ್ಯಂತ್ರವಂತೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ (Congress), ಟೆಂಪ್ಟ್ ಆಗಿ ದೋಸೆ ತಿನ್ನಲು ಹೋಗಿದ್ದ ಎಳೆ ಸಂಸದ ತೇಜಸ್ವಿ ಸೂರ್ಯ (Tejasvi Surya) ಈಗ ದಿಢೀರನೆ ಹೇಳಿಕೆ ಕೊಡಲು ಪ್ರತ್ಯಕ್ಷರಾಗಿದ್ದಾರೆ. ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ. ವರುಣ (Rain)ದೇವನ ಷಡ್ಯಂತ್ರವೇ?, ಮೇಘರಾಜನ ಷಡ್ಯಂತ್ರವೇ? ಅಥವಾ 40% ಕಮಿಷನ್ ಲೂಟಿಕೋರರ ಷಡ್ಯಂತ್ರವೇ?, ಸಂಸದರು ಉತ್ತರಿಸುವರೆ ಎಂದು ಪ್ರಶ್ನಿಸಿದೆ.

    ಏನಿದು ದೋಸೆ ವಿವಾದ..?: ಬೆಂಗಳೂರಿನಲ್ಲಿ ಮಳೆ ಹಾನಿಯಿಂದ ಜನರ ಪರದಾಡುತ್ತಿದ್ದರೆ ಸಂಸದರು ಹೋಟೆಲ್‍ನಲ್ಲಿ ದೋಸೆ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ ಅಂತ ವೀಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ವಿರೋಧ ಪಕ್ಷಗಳು ಸಂಸದರ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಫೇಕ್ ಇಶ್ಯು ಕ್ರಿಯೇಟ್ ಮಾಡ್ತಿದ್ದಾರೆ- ದೋಸೆ ವಿವಾದಕ್ಕೆ ಸೂರ್ಯ ಸ್ಪಷ್ಟನೆ

    ಹೋಟೆಲಿ (Hotel) ನಲ್ಲಿ ದೋಸೆ ಸವಿಯುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ನನ್ನ ಕ್ಷೇತ್ರದಲ್ಲಿ ಬೊಮ್ಮನಹಳ್ಳಿಯಲ್ಲಿ ಮಾತ್ರ ಸ್ವಲ್ಪ ಮಳೆ ಸಮಸ್ಯೆ ಆಗಿದೆ ಬೇರೆ ಕ್ಷೇತ್ರದಲ್ಲಿ ಜನ ಜೀವನ ಯಥಾಸ್ಥಿತಿ ನಡೆದುಕೊಂಡು ಬರುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ. ನನ್ನ ಕ್ಷೇತ್ರದಲ್ಲಿ ಇರುವ ಅಂಗಡಿ ಉದ್ಘಾಟನೆ ನನ್ನ ಕರ್ತವ್ಯ, ಅದನ್ನು ನಿರ್ವಹಣೆ ಮಾಡಿರುವುದಾಗಿ ತಿಳಿಸಿದ್ದರು.

    ನಮ್ಮ ಕ್ಷೇತ್ರದಲ್ಲಿ ಎಲೆಕ್ಟಿಕ್ ಬಸ್ ಉದ್ಘಾಟನೆ ಇತ್ತು ಅಂದ್ರೆ ಅದಕ್ಕೂ ಹೋಗ್ತೀವಿ. ದೋಸೆ ಅಂಗಡಿ ಉದ್ಘಾಟನೆಗೆ ಕರೆಯುತ್ತಾರೆ. ಅದಕ್ಕೂ ಹೋಗ್ತೀವಿ, ಗಣಪತಿ ಇಟ್ಟಿದ್ರೆ ಅಲ್ಲಿಗೂ ಹೋಗ್ತೀವಿ. ಒಬ್ಬ ಜನ ಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಟಾಂಗ್ ಕೊಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]