Tag: Doodle

  • ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

    ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

    ಬೆಂಗಳೂರು: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ 2019 ಲೋಕಸಭಾ ಚುನಾವಣೆ ಇಂದಿನಿಂದ ಆರಂಭಗೊಂಡ ಹಿನ್ನೆಲೆಯಲ್ಲಿ ಸರ್ಚ್ ಇಂಜಿನ್ ಗೂಗಲ್ ಡೂಡಲ್ ಗೌರವ ನೀಡಿದೆ. ಮತದಾನದ ಚಿಹ್ನೆಯ ಡೂಡಲ್ ತಯಾರಿಸಿ ಜಾಗೃತಿ ಮಾಡಿಸಿದೆ.

    ತೋರು ಬೆರಳಿಗೆ ಮತದಾನ ಮಾಡಿರುವ ಚಿಹ್ನೆಯ ಶಾಯಿ ಇರುವ ಚಿತ್ರವಿರುವ ಡೂಡಲ್ ಅನ್ನು ಗೂಗಲ್ ಭಾರತದ ಹೋಮ್ ಪೇಜ್‍ನಲ್ಲಿ ಹಾಕಿದೆ. ಈ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ಮತದಾನ ಪ್ರಕ್ರಿಯೆಯ ವಿವರಗಳು ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದವರಿಗೆ ಬೇಕಾದ ಸಂರ್ಪೂಣ ಮಾಹಿತಿಯನ್ನು ಪಡೆಯಬಹುದಾಗಿದೆ.

    ಹೇಗೆ ಮತದಾನ ಪ್ರಕ್ರಿಯೆ ನಡೆಯುತ್ತದೆ? ತಮ್ಮ ಮತ ಇರುವ ಬೂತ್ ಪತ್ತೆ ಹಚ್ಚುವುದು ಹೇಗೆ? ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ? ಇವಿಎಂ (ವಿವಿಪ್ಯಾಟ್) ಬಳಕೆ ಮಾಡುವುದು ಹೇಗೆ? ಸೇರಿದಂತೆ ಚುನಾವಣಾ ದಿನಾಂಕಗಳ ಮಾಹಿತಿಯನ್ನು ಪಡೆಯಬಹುದು.

    2019 ರ ಚುನಾವಣೆ ಏಳು ಹಂತಗಳಲ್ಲಿ 543 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರ ಬರಲಿದೆ. ಕರ್ನಾಟಕದಲ್ಲಿ ಏ.18 ಮತ್ತು ಏ.23 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

  • ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಬೆಂಗಳೂರು: ಇಂದು ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟಪ್ಪ ಅವರ 113 ಜನ್ಮ ವಾರ್ಷಿಕೋತ್ಸವ. ಕುವೆಂಪು ಅವರ ಜನ್ಮದಿನದಂದು ಗೂಗಲ್ ಡೂಡಲ್‍ನಲ್ಲಿ ಅವರ ಚಿತ್ರವನ್ನು ಪ್ರಕಟಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.

    ಡೂಡಲ್ ನಲ್ಲಿ ಕುವೆಂಪು ಚಿತ್ರ ಮೂಡಿ ಬರಲು ಕಾರಣರಾದ ವ್ಯಕ್ತಿ ಉಪಮನ್ಯು ಭಟ್ಟಚಾರ್ಯ. ಕೋಲ್ಕತ್ತಾ ಮೂಲದ ಆನಿಮೇಟರ್ ಆಗಿರುವ ಉಪಮನ್ಯು ಈಗ ಕ್ಯಾಲಿಫೋರ್ನಿಯಾದಲ್ಲಿದ್ದೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಗೂಗಲ್ ನಲ್ಲಿ ಕನ್ನಡ ಪದವನ್ನು ಬರೆಯಲು ಇವರಿಗೆ ಹೇಳಿಕೊಟ್ಟವರು ಸ್ವಾತಿ ಶೇಲರ್.

    ಕುವೆಂಪು ಅವರ ಜನ್ಮದಿನಕ್ಕೆ ಡೂಡಲ್ ಮಾಡಿಕೊಡಿ ಎಂದು ಗೂಗಲ್ ಅವರು ಕೇಳೀಕೊಂಡಾಗ ನನಗೆ ಇದನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಈ ಡೂಡಲ್ ನಾನು ಮಾಡಿದ್ದು, ಇದಕ್ಕೆ ಕನ್ನಡ ಪದವನ್ನು ಹಾಕಲು ಸ್ವಾತಿ ಶೇಲರ್ ಸಹಾಯ ಮಾಡಿದ್ದಾರೆ ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಗೂಗಲ್ ಎಂದು ಬರೆಯಲಾಗಿದೆ ಎಂದು ಉಪಮನ್ಯೂ ಭಟ್ಟಚಾರ್ಯ ಬರೆದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೊಸ್ಟ್ ಮಾಡಿದ್ದಾರೆ.

    ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಇದನ್ನು ಉಪಮನ್ಯೂ ಭಟ್ಟಚಾರ್ಯ ಬರೆದಿದ್ದು, ಸ್ವಾತಿ ಶೇಲರ್ ಕನ್ನಡ ಪದ ಬರೆಯಲು ಸಹಾಯ ಮಾಡಿದ್ದಾರೆ.

    ಯಾವಾಗಲ್ಲೂ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುತ್ತಿದ್ದ ಕುವೆಂಪು ಅವರಿಗೆ ‘ಪೂವು’ ಎಂಬ ಡೂಡಲ್ ಬಳಸಿಕೊಳ್ಳಲಾಗಿದೆ. ಕುವೆಂಪು ಅವರು ತಮ್ಮ ಕವಿತೆಗಳಲ್ಲಿ ತಮ್ಮ ಸುತ್ತಮುತ್ತಲಿರುವ ಪ್ರಪಂಚದ ಸರಳ ಅದ್ಭುತವನ್ನು, ವಿಶೇಷವಾದ ಹೂವುಗಳಗೆ ಪ್ರತಿಬಿಂಬಿಸಿ ಪ್ರೀತಿಸುತ್ತಿದ್ದರು.

    ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.

    ಉಪಮನ್ಯು ಭಟ್ಟಚಾರ್ಯ ಅವರು ಅನಿಮೇಷನ್ ಮೂಲಕ ಬೇರೆ ಬೇರೆ ಫೋಟೋಗಳನ್ನು ರಚಿಸಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.

  • ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ಬೆಂಗಳೂರು: ಇಂದು ರಾಷ್ಟ್ರಕವಿ, ವಿಶ್ವಮಾನವ ಸಂದೇಶ ಸಾರಿದ ನಮ್ಮ ಹೆಮ್ಮೆಯ ಕುವೆಂಪು ಅವರ 113ನೇ ಜನ್ಮದಿನ. ಈ ವಿಶಿಷ್ಟ ದಿನದಂದು ಗೂಗಲ್ ಡೂಡಲ್ ಮೂಲಕ ಕುವೆಂಪು ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.

    ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ ಕುವೆಂಪು ಅವರಿಗೆ ಇಷ್ಟವಾದ ಬಂಡೆ, ಕಾಜಾಣ ಹಕ್ಕಿಯನ್ನು ಚಿತ್ರಿಸಿದ್ದು, ಇದ್ದಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.