ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಪಾರವನ್ನು ಹೆಚ್ಚಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಭಾರತದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇತ್ತ ಚೀನಾ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಅಮೆರಿಕದ ಆಡಳಿತವು ಭಾರತವನ್ನು ಸಮಾನ ಮನಸ್ಸಿನ ಹಿತಾಸಕ್ತಿಗಳೊಂದಿಗೆ ಪ್ರಮುಖ ಪಾಲುದಾರ ಎಂದು ನೋಡಿದೆ. ಟ್ರಂಪ್ ಹೊಸ ಆಡಳಿತವು ಅಮೆರಿಕದ ಉನ್ನತ ಮಿಲಿಟರಿ ವ್ಯವಸ್ಥೆಯಲ್ಲಿ ಒಂದಾದ F-35 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಭಾರತದ ಸುಂಕಗಳ ಬಗ್ಗೆ ಈ ಹಿಂದೆ ದೂರಿದ್ದ ಟ್ರಂಪ್, ಎರಡೂ ದೇಶಗಳು ವ್ಯಾಪಾರ ಒಪ್ಪಂದದಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬ ಪ್ರಧಾನಿ ಮೋದಿಯವರ ಮಾತಿಗೆ ಸಮ್ಮತಿಸಿದ್ದಾರೆ.
ವಾಷಿಂಗ್ಟನ್: ಬಾಂಗ್ಲಾದೇಶದ (Bangldesh) ವಿಚಾರವನ್ನು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಬಿಡುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಶ್ವೇತಭವನದಲ್ಲಿ (White House) ಟ್ರಂಪ್ ಅವರನ್ನು ಮೋದಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.
I will leave Bangladesh to PM Modi, says US President Donald Trump in response to a question on Bangladesh; dismisses any role of US deep state in it. pic.twitter.com/ml54d2PxFm
ನಂತರ ಮಾಧ್ಯಮಗಳ ಜೊತೆ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಡೀಪ್ ಸ್ಟೇಟ್ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಟ್ರಂಪ್, ಇದರಲ್ಲಿ ಡೀಪ್ ಸ್ಟೇಟ್ ಪಾತ್ರವಿಲ್ಲ. ಈ ವಿಚಾರದಲ್ಲಿ ಮೋದಿಯವರು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಮೋದಿ ಅವರಿಗೆ ಬಿಡುತ್ತೇನೆ ಎಂದು ತಿಳಿಸಿದರು.
ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai Terror Attack) ಆರೋಪಿ ತಹವ್ವೂರ್ ರಾಣಾನನ್ನು (Tahawwur Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿ ಒಪ್ಪಿಕೊಂಡಿದೆ. ಪ್ರಧಾನಿ ಮೋದಿ ಎದುರಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಈ ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿ (PM Modi) ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ (Donald Trump) ಅಧಿಕಾರ ವಹಿಸಿಕೊಂಡ ಬಳಿಕ ಇದು ಮೋದಿ ಅವರ ಮೊದಲ ಭೇಟಿ.
ಪ್ರಧಾನಿ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಂತರ, ಮುಂಬೈ ದಾಳಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ನಾವು 26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಯಾಗಿರುವ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
26/11 ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಪ್ರಸ್ತುತ ಅಮೆರಿಕದಲ್ಲಿ ಹೆಚ್ಚಿನ ಭದ್ರತೆಯ ಜೈಲಿನಲ್ಲಿದ್ದಾನೆ. ಭಾರತ ಹಲವು ವರ್ಷಗಳಿಂದ ಆತನನ್ನು ಹಸ್ತಾಂತರಿಸುವಂತೆ ಕೋರುತ್ತಿದೆ.
ಇದೇ ಜನವರಿ ತಿಂಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ತಹವ್ವೂರ್ ರಾಣಾನ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ, ಆತನನ್ನು ಭಾರತಕ್ಕೆ ಗಡೀಪಾರು ಮಾಡಲು ದಾರಿ ಮಾಡಿಕೊಟ್ಟಿತು.
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಮೆರಿಕ ಪ್ರವಾಸವು ಭಾರತ-ಅಮೆರಿಕ ಸಂಬಂಧಗಳಲ್ಲಿ ನಿರ್ಣಾಯಕ ಕ್ಷಣವಾಗಿದ್ದು, ವಾಷಿಂಗ್ಟನ್ನಲ್ಲಿ ಪ್ರಮುಖ ಸಭೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹಾಗೂ ಸುಂಕ ವಿಧಿಸುವ ಕುರಿತು ಟ್ರಂಪ್ (Donald Trump) ಅವರೊಂದಿಗಿನ ಚರ್ಚೆಯು ಪ್ರಮುಖವಾಗಿದೆ.
ಈಗಾಗಲೇ ಪ್ರಧಾನಿ ಮೋದಿ ಅಮೆರಿಕದಲ್ಲಿದ್ದಾರೆ. ಇತ್ತ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವುದಕ್ಕೂ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ರಾತ್ರಿಯೇ ಪರಸ್ಪರ ಸುಂಕ ಪರಿಚಯಿಸಲು ಯೋಜಿಸಿದ್ದಾರೆ.
ಇಂದು ಮಧ್ಯಾಹ್ನ 1:30ರ ವೇಳೆಗೆ (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:30ಕ್ಕೆ) ಸುಂಕ ಕ್ರಮಗಳನ್ನು ಪರಿಚಯಿಸಲು ನಿರ್ಧರಿಸಿರುವುದಾಗಿ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಕೊನೇ ಕ್ಷಣದಲ್ಲಿ ಮೋದಿ-ಟ್ರಂಪ್ ಭೇಟಿ ಕೊನೇ ಕ್ಷಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಜ.20 ರಂದು ಅಧಿಕಾರ ಸ್ವೀಕರಿಸಿದ ಟ್ರಂಪ್ ನೀರಿಕ್ಷೆಯಂತೆ ಕೆನಡಾ, ಮೆಕ್ಸಿಕೊ ಹಾಗೂ ಚೀನಾ ದೇಶಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು. ಕೆನಡಾ ಹಾಗೂ ಮೇಕ್ಸಿಕೊ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ತಲಾ ಶೇ.25ರಷ್ಟು ಮತ್ತು ಚೀನಾದ ವಸ್ತುಗಳ ಮೇಲೆ ಶೇ.10ರಷ್ಟು ಸುಂಕವನ್ನು ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಆದೇಶ ಹೊರಡಿಸಿದ್ದರು. ಆದ್ರೆ ದಿಢೀರ್ ಈ ನಿರ್ಧಾರದಲ್ಲಿ ಟ್ರಂಪ್ ಕೆನಡಾ ಮತ್ತು ಮೆಕ್ಸಿಕೋ ದೇಶಗಳಿಗೆ ವಿಧಿಸಿದ್ದ ಸುಂಕವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ.
ಟ್ರಂಪ್ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಅಮೆರಿಕಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಇಂದು ಸುಂಕ ವಿಧಿಸುವ ಕುರಿತು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ವಾಷಿಂಗ್ಟನ್: ಉಕ್ಕು ಮತ್ತು ಅಲ್ಯೂಮಿನಿಯಂ (Steel & Aluminum) ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ತೆರಿಗೆ ಎಫೆಕ್ಟ್ ಷೇರು ಮಾರುಕಟ್ಟೆ ಮೇಲೆ ತಟ್ಟಿದೆ. ಸೆನ್ಸೆಕ್ಸ್ 1,018.20 ಅಂಕಗಳಷ್ಟು ಇಳಿಕೆ ಕಂಡಿದ್ದು, 76,293ರಲ್ಲಿ ವ್ಯವಹಾರ ಮುಗಿಸಿದೆ.
ಉಕ್ಕು ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ 25% ನಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಕಂಡಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಷೇರು ಮಾರುಕಟ್ಟೆ ಕುಸಿದಿದೆ. ಸೆನ್ಸೆಕ್ಸ್ 1,018.20 ಪಾಯಿಂಟ್ಗಳಷ್ಟು (1.32%) ಕುಸಿತ ಕಂಡಿದೆ. ನಿಫ್ಟಿ 309 ಪಾಯಿಂಟ್ಗಳಿಗಿಂತ ಹೆಚ್ಚು (1.32%) ಕುಸಿದಿದ್ದು, 23,381 ಅಂಕಗಳಿಗೆ ವ್ಯವಹಾರ ಮುಗಿಸಿದೆ. ಇದನ್ನೂ ಓದಿ: ವಿದೇಶಗಳಿಗೆ ಅಮೆರಿಕ ನೀಡುತ್ತಿದ್ದ ನೆರವಿಗೂ ಕೊಕ್ಕೆ ಹಾಕಿದ ಟ್ರಂಪ್ – ಭಾರತದ ಮೇಲೂ ಎಫೆಕ್ಟ್?
ಅಲ್ಯೂಮಿನಿಯಂ ಮೇಲಿನ ಸುಂಕ ಹೆಚ್ಚಿಸುವುದು ಟ್ರಂಪ್ ಅವರ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ಅಲ್ಯೂಮಿನಿಯಂ ಮೇಲಿನ ದರವನ್ನು ಶೇ.10 ರಿಂದ ಶೇ.25 ಕ್ಕೆ ಹೆಚ್ಚಿಸಲಾಗಿದೆ. ಮಾರ್ಚ್ 4 ರಿಂದ ಜಾರಿಗೆ ಬರಲಿದೆ. ಆ ಉತ್ಪನ್ನ ಮತ್ತು ಉಕ್ಕಿನ ಎಲ್ಲಾ ಆಮದುಗಳಿಗೆ ಇದು ಅನ್ವಯಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಎರಡು ದಿನಗಳ ಮೊದಲು ಈ ಘೋಷಣೆ ಮಾಡಲಾಗಿತ್ತು. ರಷ್ಯಾ ಮತ್ತು ಚೀನಾದಂತಹ ದೇಶಗಳು ಅಸ್ತಿತ್ವದಲ್ಲಿರುವ ಸುಂಕಗಳನ್ನು ತಪ್ಪಿಸಲು ಮಾಡುತ್ತಿರುವ ಪ್ರಯತ್ನಗಳನ್ನು ಹತ್ತಿಕ್ಕುವ ಉದ್ದೇಶವನ್ನು ಟ್ರಂಪ್ ಹೊಂದಿದ್ದಾರೆ. ಸುಂಕ ವಿಧಿಸುವುದರಿಂದ ದೇಶೀಯ ಉತ್ಪಾದನೆ ಹೆಚ್ಚುತ್ತದೆ. ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುತ್ತವೆ ಎಂದು ಟ್ರಂಪ್ ಹೇಳಿಕೊಳ್ಳುತ್ತಾರೆ. ಇದನ್ನೂ ಓದಿ: ಕರಾಳ ಯುದ್ಧ ಭೂಮಿ ಗಾಜಾ ಮೇಲೆ ಕಣ್ಣು – ಟ್ರಂಪ್ ನಿರ್ಧಾರಕ್ಕೆ ವಿಶ್ವವೇ ನಿಬ್ಬೆರಗು!
– ಕೋವಿಡ್ ವೈರಸ್ ಹರಡಿದವರಿಗೆ ಮಿಲಿಯನ್ ಡಾಲರ್ಗಟ್ಟಲೆ ನೆರವು ನೀಡಿತ್ತಾ ‘USAID’?
‘ಅಮೆರಿಕ ಫಸ್ಟ್’ ಇದು ಡೊನಾಲ್ಡ್ ಟ್ರಂಪ್ (Donald Trump) ಅವರ ಘೋಷವಾಕ್ಯ. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶವಾಸಿಗಳಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅಭಿವೃದ್ಧಿ ಹಾಗೂ ಮಾನವೀಯ ನೆರವಿನ ಆಶಯದೊಂದಿಗೆ ಇತರೆ ದೇಶಗಳಿಗೆ ಅಮೆರಿಕದಿಂದ ಭಾರತವೂ ಸೇರಿದಂತೆ ಹಲವು ದೇಶಗಳಿಗೆ ಹಣಕಾಸಿನ ಸಹಾಯ ಸಿಗುತ್ತಿತ್ತು. ಈಗ ಅದಕ್ಕೂ ಟ್ರಂಪ್ ಕೊಕ್ಕೆ ಹಾಕಿದ್ದಾರೆ. ಅನಾವಶ್ಯಕವಾಗಿ ಅಮೆರಿಕದ ಹಣ ಹೊರಗಡೆ ಹೋಗುತ್ತಿದೆ ಎಂಬುದು ಯುಎಸ್ ಅಧ್ಯಕ್ಷರ ವಾದ. ಇನ್ಮುಂದೆ ದೇಶದ ಹಣ ಅಮೆರಿಕನ್ನರಿಗಷ್ಟೇ ಸಿಗಬೇಕು. ವ್ಯರ್ಥವಾಗಿ ಬೇರೆಯವರ ಪಾಲಾಗಬಾರದು ಎಂದು ಟ್ರಂಪ್ ಸರ್ಕಾರ, ‘ಯುಎಸ್ಎಐಡಿ’ (USAID) ಸ್ಥಗಿತಗೊಳಿಸುವ ಕ್ರಮಕೈಗೊಂಡಿದೆ.
ಏನಿದು ಯುಎಸ್ಎಐಡಿ?
ಯುಎಸ್ಎಐಡಿ ಅಮೆರಿಕ ಸರ್ಕಾರದ ಅಂತಾರಾಷ್ಟ್ರೀಯ ಮಾನವೀಯ ಮತ್ತು ಅಭಿವೃದ್ಧಿ ಅಂಗವಾಗಿದೆ. ಇದು ಸ್ವಾಯತ್ತ ಸಂಸ್ಥೆಯಾಗಿದೆ. ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ನ ವರದಿಯ ಪ್ರಕಾರ ಬಡತನ, ರೋಗ ಮತ್ತು ಇತರ ಬಿಕ್ಕಟ್ಟುಗಳನ್ನು ಎದುರಿಸುವ ದೇಶಗಳಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಈ ಸಂಸ್ಥೆಯಡಿ ಪ್ರಪಂಚದಾದ್ಯಂತ ಸುಮಾರು 10,000 ಜನರ ಕಾರ್ಯಪಡೆ ಕೆಲಸ ಮಾಡುತ್ತದೆ. ಹತ್ತಾರು ಶತಕೋಟಿ ಡಾಲರ್ಗಳ ವಾರ್ಷಿಕ ಬಜೆಟ್ ಅನ್ನು ಇದು ಜಗತ್ತಿನ ವಿವಿಧ ದೇಶಗಳಿಗೆ ಮೀಸಲಿಡುತ್ತದೆ.
ಸ್ಥಾಪನೆ ಯಾಕೆ?
1961 ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಸ್ವತಂತ್ರ ಏಜೆನ್ಸಿಯಾಗಿ ಯುಎಸ್ಎಐಡಿಯನ್ನು ಸ್ಥಾಪಿಸಿದರು. ಶೀತಲ ಸಮರದ ಸಮಯದಲ್ಲಿ ಸೋವಿಯತ್ ಒಕ್ಕೂಟದ ಪ್ರಭಾವವನ್ನು ಎದುರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ವಿವಿಧ ವಿದೇಶಿ ನೆರವು ಕಾರ್ಯಕ್ರಮಗಳ ಮೂಲಕ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ತನ್ನ ಮಾತು ಕೇಳುವಂತೆ ಮಾಡುವುದು ಅಮೆರಿಕದ ಪ್ರಮುಖ ಧ್ಯೇಯವಾಗಿತ್ತು. ಅಮೆರಿಕನ್ ಭದ್ರತೆಯು ಸ್ಥಿರತೆ ಮತ್ತು ಇತರ ರಾಷ್ಟ್ರಗಳಲ್ಲಿನ ಆರ್ಥಿಕ ಪ್ರಗತಿಗೆ ಪೂರಕವಾಗಿದೆ ಎಂದು ಪ್ರತಿಪಾದಿಸಲಾಗಿತ್ತು. ಮಹಿಳೆಯರ ಆರೋಗ್ಯದಿಂದ ಹಿಡಿದು ಶುದ್ಧ ಕುಡಿಯುವ ನೀರಿನವರೆಗೆ ಎಲ್ಲಾ ಸಮಸ್ಯೆಗಳ ಪರಿಹಾರದಲ್ಲೂ ಯುಎಸ್ಎಐಡಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಯಾವ್ಯಾವ ದೇಶಗಳಿಗೆ ಅತಿ ಹೆಚ್ಚು ನೆರವು?
2023 ರ ಆರ್ಥಿಕ ವರ್ಷದಲ್ಲಿ, ಯುಎಸ್ಎಐಡಿ 40 ಶತಕೋಟಿಗಿಂತ ಹೆಚ್ಚಿನ ಡಾಲರ್ ನೆರವನ್ನು ನೀಡಿತ್ತು. ಇದರ ಬಜೆಟ್ನ ಲೆಕ್ಕಾಚಾರಗಳು ನಿಖರವಾಗಿರುವುದಿಲ್ಲ. ದಿ ವಾಷಿಂಗ್ಟನ್ ಪೋಸ್ಟ್ ಪ್ರಕಾರ, ನಲವತ್ತು ಶತಕೋಟಿ ಡಾಲರ್ಗಳು ಫೆಡರಲ್ ಬಜೆಟ್ನ 1% ಕ್ಕಿಂತ ಕಡಿಮೆಯಿರುತ್ತದೆ. ಯುಎಸ್ಎಐಡಿ 2023 ರ ಆರ್ಥಿಕ ವರ್ಷದಲ್ಲಿ ಸುಮಾರು 130 ದೇಶಗಳಿಗೆ ಸಹಾಯವನ್ನು ಒದಗಿಸಿದೆ. ಈ ದೇಶಗಳ ಪೈಕಿ ಉಕ್ರೇನ್, ಇಥಿಯೋಪಿಯಾ, ಜೊರ್ಡಾನ್, ಕಾಂಗೊ, ಸೊಮಾಲಿಯಾ, ಯೆಮನ್, ಅಫ್ಘಾನಿಸ್ತಾನ, ನೈಜೀರಿಯಾ, ಸೌತ್ ಸುಡಾನ್, ಸಿರಿಯಾ ಸೇರಿದಂತೆ ಅನೇಕ ರಾಷ್ಟçಗಳು ಅತಿ ಹೆಚ್ಚು ನೆರವು ಪಡೆದುಕೊಂಡಿವೆ. ಇದನ್ನೂ ಓದಿ: ಫ್ರಾನ್ಸ್ಗೆ ಪ್ರಯಾಣ ಬೆಳೆಸಿದ ಮೋದಿ – ಅಮೆರಿಕ ಭೇಟಿ ಬಗ್ಗೆ ಹೇಳಿದ್ದೇನು?
ಭಾರತದಲ್ಲೂ ಯುಎಸ್ಎಐಡಿ ನಿಧಿ?
ಯುಎಸ್ಎಐಡಿ ಭಾರತದಲ್ಲಿ 70 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 2023-24 ರ ಆರ್ಥಿಕ ವರ್ಷದಲ್ಲಿ, ಇದರಿಂದ ಸರ್ಕಾರ ಮತ್ತು ನಾಗರಿಕ ಸಮಾಜಕ್ಕಾಗಿ 6.8 ಮಿಲಿಯನ್ ಡಾಲರ್ ನೆರವು ಸಿಕ್ಕಿತ್ತು. ಆರೋಗ್ಯಕ್ಕಾಗಿ ಸುಮಾರು 55 ಮಿಲಿಯನ್ ಡಾಲರ್, ಯುಎಸ್ ಸರ್ಕಾರದ ಫಾರಿನ್ ಅಸಿಸ್ಟೆನ್ಸ್ ವೆಬ್ಸೈಟ್ನ ಪ್ರಕಾರ ಪರಿಸರಕ್ಕೆ 18 ಮಿಲಿಯನ್ ಡಾಲರ್ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ 7.8 ಮಿಲಿಯನ್ ಡಾಲರ್ ನೆರವು ದೊರೆತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಇದರ ಮೂಲಕ ಭಾರತವು 140 ದಶಲಕ್ಷ ಡಾಲರ್ ಪಡೆಯಬೇಕಿದ್ದರೆ, ದೇಶದ ಒಟ್ಟಾರೆ ಬಜೆಟ್ 600 ಶತಕೋಟಿಗಿಂತ ಹೆಚ್ಚಿರಬೇಕು. ಆದರೀಗ, ಯುಎಸ್ಎಐಡಿ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಪಾಲುದಾರರಿಗೆ ಯೋಜನೆಗಳನ್ನು ನಿಲ್ಲಿಸುವಂತೆ ನಿರ್ದೇಶಿಸಿದೆ.
ದೇಶದಲ್ಲಿ ಯುಎಸ್ಎಐಡಿ 70 ವರ್ಷಗಳ ಪಯಣ ಹೇಗಿತ್ತು? ಆರೋಗ್ಯ: ತಾಯಿ ಮತ್ತು ಮಕ್ಕಳ ಮರಣ, ಕ್ಷಯ (ಟಿಬಿ), ಹೆಚ್ಐವಿ ಮತ್ತು ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ವಿವಿಧ ಆರೋಗ್ಯ ಸವಾಲುಗಳನ್ನು ಎದುರಿಸಲು ಭಾರತೀಯ ಸರ್ಕಾರದೊಂದಿಗೆ ಯುಎಸ್ಎಐಡಿ ಕೆಲಸ ಮಾಡುತ್ತದೆ. 1990 ರಿಂದ ಭಾರತದಲ್ಲಿ 2 ದಶಲಕ್ಷಕ್ಕೂ ಹೆಚ್ಚು ಮಕ್ಕಳ ಜೀವ ಉಳಿಸಲು ಇದು ಸಹಾಯ ಮಾಡಿದೆ. ಯುಎಸ್ಎಐಡಿ ಬೆಂಬಲದ ಮೂಲಕ 25,000 ನ್ಯುಮೋನಿಯಾ ಸಾವುಗಳು ಮತ್ತು 14,000 ಅತಿಸಾರ ಸಾವುಗಳನ್ನು ತಡೆಗಟ್ಟಲಾಗಿದೆ. ಟಿಬಿಯನ್ನು ಪತ್ತೆಹಚ್ಚಲು, ಗುಣಪಡಿಸಲು ಮತ್ತು ತಡೆಗಟ್ಟಲು ಭಾರತ ಸರ್ಕಾರಕ್ಕೆ ಅಗತ್ಯ ಬೆಂಬಲ ನೀಡಿದೆ. 1995 ರಿಂದ ಭಾರತ ಸರ್ಕಾರ ಮತ್ತು ನಾಗರಿಕ ಸಮಾಜದ ಸಹಭಾಗಿತ್ವದಲ್ಲಿ ಎಚ್ಐವಿ ಸೋಂಕು ತಡೆಗಟ್ಟುವಿಕೆ ಮತ್ತು ಸೋಂಕು ಪೀಡಿತರ ಆರೋಗ್ಯ ಸೇವೆಗೆ ಅಗತ್ಯೆ ನೆರವು ನೀಡಿದೆ. ಪರಿಣಾಮವಾಗಿ 2007 ರಿಂದ ಹೊಸ ಏಡ್ಸ್ ಸೋಂಕಿತರ ಸಂಖ್ಯೆಯು ಶೇಕಡಾ 32 ರಷ್ಟು ಕಡಿಮೆಯಾಗಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು 13.1 ಮಿಲಿಯನ್ ಡಾಲರ್ ಹಣವನ್ನು ಸಮುದಾಯಗಳಿಗೆ ಸಾರ್ವಜನಿಕ ಆರೋಗ್ಯ ಕಾಳಜಿಗೆ ಅರಿವು ಮೂಡಿಸಲು, ಪರೀಕ್ಷೆ ಮತ್ತು ಸೋಂಕಿತರ ಬಗ್ಗೆ ನಿಗಾವಹಿಸಲು, ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ನೀಡಲು ನೀಡಿತ್ತು. ಯುಎಸ್ಎಐಡಿ ಭಾರತಕ್ಕೆ 200 ಹೊಚ್ಚಹೊಸ, ಅತ್ಯಾಧುನಿಕ ವೆಂಟಿಲೇಟರ್ಗಳನ್ನು ಕೊಡುಗೆಯಾಗಿ ನೀಡಿದೆ. ಇದನ್ನೂ ಓದಿ: USAID| 294 ಮಂದಿ ಬಿಟ್ಟು 13,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಿದ ಟ್ರಂಪ್!
ಶಿಕ್ಷಣ: ಯುಎಸ್ಎಐಡಿ ಮತ್ತು ಅದರ ಪಾಲುದಾರರು ಒಂಬತ್ತು ಭಾಷೆಗಳಲ್ಲಿ ಓದುವ ಕೌಶಲ್ಯವನ್ನು ಸುಧಾರಿಸಲು ಭಾರತದ 16 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಸಾಕ್ಷರತಾ ಅಭಿಯಾನಕ್ಕೆ ಬೆಂಬಲ ನೀಡಿದೆ. ಪಧೇ ಭಾರತ್ ಬಾಧೆ ಭಾರತ್ (ಭಾರತವನ್ನು ತಿಳಿಯಿರಿ, ಪ್ರಗತಿ ಭಾರತ) ಅಭಿಯಾನದ ಮೂಲಕ ಎರಡು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದೆ. ಯುಎಸ್ಎಐಡಿ-ಬೆಂಬಲಿತ ಕಾರ್ಯಕ್ರಮಗಳು ಸುಧಾರಿತ ಬೋಧನಾ ಕೌಶಲ್ಯಗಳಲ್ಲಿ 61,000 ಶಿಕ್ಷಕರಿಗೆ ತರಬೇತಿ ನೀಡಿವೆ.
ಸ್ವಚ್ಛಭಾರತ ಅಭಿಯಾನ, ಆಹಾರ ಭದ್ರತೆ: 2014 ರಲ್ಲಿ ಪ್ರಾರಂಭಿಸಲಾದ ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು (ಸ್ವಚ್ಛ ಭಾರತ ಮಿಷನ್) ಬೆಂಬಲಿಸಿದೆ. 3 ಲಕ್ಷಕ್ಕೂ ಹೆಚ್ಚು ಜನರಿಗೆ ಮನೆ ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡಿದೆ. 25,000 ಸಮುದಾಯಗಳು ಬಯಲು ಮಲವಿಸರ್ಜನೆಯಿಂದ ಮುಕ್ತವಾಗಿದೆ (ಒಡಿಎಫ್). ಜೊತೆಗೆ, ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು 1.32 ಲಕ್ಷಕ್ಕೂ ಹೆಚ್ಚು ರೈತರು ತಮ್ಮ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹಕಾರ ನೀಡಿದೆ. ಸ್ವಯಂಚಾಲಿತ ಹವಾಮಾನ ಕೇಂದ್ರಗಳ ಜಾಲವನ್ನು ವಿಸ್ತರಿಸಲು ಭಾರತದ ಅತಿದೊಡ್ಡ ಹವಾಮಾನ ಸೇವೆಗಳ ಕಂಪನಿಯೊಂದಿಗೆ ಯುಎಸ್ಎಐಡಿ ಸಹಕರಿಸಿದೆ. ಸುಮಾರು 70,000 ರೈತರಿಗೆ ಎಸ್ಎಂಎಸ್ ಮೂಲಕ ವಿಶ್ವಾಸಾರ್ಹ, ಸ್ಥಳೀಯ ಹವಾಮಾನ ದತ್ತಾಂಶ ಸಿಗುವಂತೆ ಮಾಡಿದೆ. ಅಪಾಯ ತಗ್ಗಿಸುವ ಸಾಧನಗಳು ಮತ್ತು ಬೆಳೆ ವಿಮೆ ಸೇವೆಗಳನ್ನು ಸಹ ನೀಡಿದೆ.
ಜಗತ್ತಿಗೆ ಯುಎಸ್ಎಐಡಿ ಕೊಡುಗೆ ಏನು?
2023ರ ಆರ್ಥಿಕ ವರ್ಷದಲ್ಲಿ 40 ಶತಕೋಟಿ ಡಾಲರ್ಗಿಂತ ಹೆಚ್ಚಿನ ಹಣವನ್ನು ಜಾಗತಿಕ ರಾಷ್ಟçಗಳಿಗೆ ಯುಎಸ್ಎಐಡಿ ನೀಡಿದೆ. ನಿಧಿಯು 130 ದೇಶಗಳ ನೆರವಿಗೆ ಸಹಕಾರಿಯಾಗಿದೆ. 1945 ರಲ್ಲಿ ವಿಶ್ವ ಯುದ್ಧ 2 ಕೊನೆಗೊಂಡ ನಂತರ ಅಂತರರಾಷ್ಟ್ರೀಯ ಅಭಿವೃದ್ಧಿ ನೆರವು ಪ್ರಾರಂಭವಾಯಿತು. 1947 ರಿಂದ 1949 ರವರೆಗೆ ರಾಜ್ಯ ಕಾರ್ಯದರ್ಶಿ ಜಾರ್ಜ್ ಸಿ ಮಾರ್ಷಲ್ ಯುದ್ಧದ ನಂತರ ಯುರೋಪ್ಗೆ ಗಮನಾರ್ಹ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದರು. ಮಾರ್ಷಲ್ ಯೋಜನೆ ಎಂದು ಕರೆಯಲ್ಪಡುವ ಇದು ಯುರೋಪ್ ತನ್ನ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು, ಅದರ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಪ್ರಾದೇಶಿಕ ಸ್ಥಿರತೆಗೆ ಸಹಾಯ ಮಾಡಿತು. ಇದನ್ನೂ ಓದಿ: ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್ ಸಹಿ
ಮಾರ್ಷಲ್ ಯೋಜನೆಯ ಯಶಸ್ಸು ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಅವರನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಸಹಾಯ ಕಾರ್ಯಕ್ರಮ ಜಾರಿಗೆ ಪ್ರೇರೇಪಿಸಿತು. 1961 ರಲ್ಲಿ ಅಧ್ಯಕ್ಷ ಜಾನ್ ಎಫ್. ಕೆನಡಿ ವಿದೇಶಿ ಸಹಾಯ ಕಾಯ್ದೆಗೆ ಸಹಿ ಹಾಕಿದರು. ಕಾರ್ಯನಿರ್ವಾಹಕ ಆದೇಶದ ಮೂಲಕ ಯುಎಸ್ಎಐಡಿ ರಚನೆಗೆ ಕಾರಣಕರ್ತರಾದರು. ಅಲ್ಲಿಂದ ಇಲ್ಲಿಯವರೆಗೆ ಯುಎಸ್ಎಐಡಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ವಿವಿಧ ಯೋಜನೆಗಳಿಗಾಗಿ ಹಣಕಾಸಿನ ನೆರವು ನೀಡುತ್ತಾ ಬಂದಿದೆ. ಆದರೀಗ, ಟ್ರಂಪ್ ಅವರು 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಯುಎಸ್ಎಐಡಿ ಮತ್ತು ಅದರ ಕಾರ್ಯಾಚರಣೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.
ಯುಎಸ್ಎಐಡಿಗೆ ಟ್ರಂಪ್, ಮಸ್ಕ್ ವಿರೋಧ ಯಾಕೆ?
ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ಯುಎಸ್ಎಐಡಿ ಏಜೆನ್ಸಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೆಲವು ಮಾಹಿತಿಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ‘ಯುಎಸ್ಎಐಡಿ, ಡಾಲರ್ ಹಣವನ್ನು ಬಳಸಿಕೊಂಡು ಕೋವಿಡ್-19 ಸೇರಿದಂತೆ ಲಕ್ಷಾಂತರ ಜನರನ್ನು ಬಲಿ ಪಡೆದ ಜೈವಿಕ ಶಸ್ತ್ರಾಸ್ತ್ರ ಸಂಶೋಧನೆಗೆ ಧನಸಹಾಯ ನೀಡಿರುವುದು ನಿಮಗೆ ತಿಳಿದಿದೆಯೇ?’ ಎಂದು ಮಸ್ಕ್ ಪ್ರಶ್ನಿಸಿದ್ದಾರೆ. 2023ರ ನ್ಯೂಯಾರ್ಕ್ ಪೋಸ್ಟ್ ಲೇಖನವನ್ನು ಉಲ್ಲೇಖಿಸಿ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ. ‘ಈ ಏಜೆನ್ಸಿಯು ಎಡಪಂಥೀಯ ರಾಜಕೀಯ ಆ್ಯಪ್.. ಇದರಿಂದ ಹಣ ದುಂದು ವೆಚ್ಚ ಆಗ್ತಿದೆ’ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ. ಯುಎಸ್ಎಐಡಿ ಕುರಿತು ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅದನ್ನು ಸ್ಥಗಿತಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಸ್ಕ್ ಹೇಳಿದ್ದರು. ಇದನ್ನೂ ಓದಿ: ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್ ಕೊಟ್ಟ ಆಫರ್ ಏನು?
ತೆರಿಗೆಯ ಅಸ್ತ್ರವನ್ನೇ ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಗ್ರೀನ್ಲ್ಯಾಂಡ್ ಖರೀದಿ ಮಾಡುವುದಾಗಿ ಹೇಳಿದ್ದ ಟ್ರಂಪ್, ಪನಾಮ ಕಾಲುವೆಯನ್ನು ತನ್ನ ಸುಪರ್ದಿಗೆ ಪಡೆಯುವ ಮಾತುಗಳನ್ನೂ ಆಡಿದ್ದರು. ಇದೀಗ ಯುದ್ಧ ಭೂಮಿಯಾದ ಗಾಜಾ ಮೇಲೆ ಟ್ರಂಪ್ ಕಣ್ಣಿಟ್ಟಿರುವುದು ಇಡೀ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಟ್ರಂಪ್ ಈ ನಿರ್ಧಾರಕ್ಕೆ ಕಾರಣವೇನು? ಟ್ರಂಪ್ ಹೇಳಿದ್ದೇಕೆ? ಗಾಜಾ ಪಟ್ಟಿ ನಿಯಂತ್ರಣದಿಂದ ಅಮೆರಿಕಕ್ಕೆ ಏನು ಲಾಭ ಎಂಬುದನ್ನು ತಿಳಿಯೋಣ.. ಅದಕ್ಕೂ ಮುನ್ನ ಗಾಜಾಪಟ್ಟಿಯ ಕರಾಳ ಇತಿಹಾಸವನ್ನರಿಯೋಣ…
ಗಾಜಾ ಪಟ್ಟಿಯ ಇತಿಹಾಸ ನಿಮಗೆ ಗೊತ್ತೇ?
ಪ್ಯಾಲೆಸ್ತೀನ್ ನೈರುತ್ಯ ಭಾಗದಲ್ಲಿರುವ ಗಾಜಾ ಪಟ್ಟಿಯು ಸಂಘರ್ಷದ ಭೂಮಿ ಎಂದೇ ಹೆಸರುವಾಸಿ. ರೋಮನ್ನರು ಸೇರಿದಂತೆ ವಿಶ್ವದ ಇತರ ಪ್ರಮುಖ ಶಕ್ತಿಗಳು ಗಾಜಾ ಪಟ್ಟಿಯನ್ನ ಆಳಿದ್ದವು. ಅದರಲ್ಲೂ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಯುದ್ಧ ಶುರುವಾದ ಬಳಿಕ ಇದು ಅಕ್ಷರಶಃ ಯುದ್ಧ ಭೂಮಿಯಾಗಿ ಮಾರ್ಪಟ್ಟಿತು. ಇದೀಗ ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟಿದೆ. ಈ ನಡುವೆ ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಟ್ರಂಪ್ ಈ ಯುದ್ಧ ಭೂಮಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗಾಜಾ ಪಟ್ಟಿಯನ್ನು ಮೊದಲು ಅಶ್ಯೂರ್ ಎಂಬ ಸಾಮ್ರಾಜ್ಯ ಆಳುತ್ತಿತ್ತು. ನಂತರ ಗಾಜಾದಲ್ಲಿ ರೋಮನ್ನರ ಪ್ರಾಬಲ್ಯ ಸ್ಥಾಪನೆಯಾಯ್ತು. ಕ್ರಿ.ಪೂ. 1ನೇ ಶತಮಾನದಲ್ಲಿ ರೋಮನ್ನರ ಸಾಮ್ರಾಜ್ಯವು ಗಾಜಾವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಬಳಿಕ ಈ ಪ್ರದೇಶದ ಮಹತ್ವ ಅರಿತು ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಲು ಶುರು ಮಾಡಿದರು. ಏಷ್ಯಾ, ಯುರೋಪ್, ಆಫ್ರಿಕಾ ನಡುವಿನ ವ್ಯಾಪಾರ ಮಾರ್ಗಗಳು ಇದರ ಮೂಲಕವೇ ಹಾದುಹೋಗುತ್ತಿದ್ದರಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿಯೇ ಮಾರ್ಪಟ್ಟಿತ್ತು. ರೋಮನ್ನರ ಆಳ್ವಿಕೆ ಗಾಜಾದಲ್ಲಿ ಮಹತ್ವದ ಬದಲಾವಣೆಯನ್ನೇ ತಂದಿತು. ಆದ್ರೆ ರೋಮನ್ನರ ಆಳ್ವಿಕೆಯ ಕೊನೆ ಕೊನೆಯಲ್ಲಿ ಗಾಜಾ ಪಟ್ಟಿಯಲ್ಲಿ ಹಲವಾರು ದಂಗೆಗಳು ಮತ್ತು ಸಂಘರ್ಷಗಳು ಏರ್ಪಟ್ಟವು. ರೋಮ್ ಸಾಮ್ರಾಜ್ಯದ ಪತನದ ನಂತರ ಗಾಜಾ ಮುಸ್ಲಿಂ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು. ಕ್ರಿ.ಶ. 7ನೇ ಶತಮಾನದಲ್ಲಿ ಅರಬ್ಬರು ಗಾಜಾವನ್ನು ವಶಕ್ಕೆ ಪಡೆದುಕೊಂಡು ಸಂಪೂರ್ಣ ಇಸ್ಲಾಮಿಕ್ ಸಾಮ್ರಾಜ್ಯದ ಭಾಗವಾಗಿ ಪರಿವರ್ತಿಸಿದರು. ಇದನ್ನ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದ್ರು, ಇದರ ಹೊರತಾಗಿಯೂ ಯುದ್ಧ, ಸಂಘರ್ಷಗಳು ಮುಂದುವರಿಯಿತು.
ಇನ್ನೂ 20ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯಕ್ಕೆ ಗಾಜಾಪಟ್ಟಿ ಒಳಪಟ್ಟಿತು. ಆದ್ರೆ ಬ್ರಿಟಿಷ್ ಆಳ್ವಿಕೆಯು ಪ್ಯಾಲೆಸ್ತೀನ್ನಲ್ಲಿ ಯಹೂದಿ ಮತ್ತು ಅರಬ್ ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಿಸಿತು. ಈ ಸಂದರ್ಭದಲ್ಲಿ ಲಕ್ಷಾಂತರ ಜನ ವಲಸೆ ಹೋದರು. ಹಲವು ಸಂಘರ್ಷ ಚಳವಳಿಗಳು ಹುಟ್ಟಿಕೊಂಡುವು ಪ್ರಮುಖವಾಗಿ ಪ್ಯಾಲೆಸ್ತೀನ್ ಸ್ವಾತಂತ್ರ್ಯ ಸಂಗ್ರಾಮ ಅಂದು ಹುಟ್ಟಿಕೊಟ್ಟ ಸಂಗ್ರಾಮ ಇಂದಿಗೂ ಮುಂದುವರಿಯುತ್ತಲೇ ಇದೆ.
ಗಾಜಾ ಇಸ್ರೇಲ್ ಆಡಳಿತಕ್ಕೆ ಒಳಪಟ್ಟಿದ್ದು ಯಾವಾಗ?
ಕಳೆದ ದಶಕಗಳಿಂದಲೂ ಗಾಜಾ ಪಟ್ಟಿ ಸಂಘರ್ಷ ಮತ್ತು ಹಿಂಸಾಚಾರದ ಕೇಂದ್ರವಾಗಿಯೇ ಉಳಿದಿದೆ. 1948ರಲ್ಲಿ ಇಸ್ರೇಲ್ ರಚನೆಯೊಂದಿಗೆ ಭೌಗೋಳಿಕ ಪ್ರಾಮುಖ್ಯತೆ ಹೆಚ್ಚಾಯಿತು. 1948ರಲ್ಲಿ ಇಸ್ರೇಲ್ ಪೂರ್ಣ ಪ್ರಮಾಣದಲ್ಲಿ ರಚನೆಯಾದಾಗ ಆ ಪ್ರದೇಶದಲ್ಲಿ ಅರಬ್ ಮತ್ತು ಯಹೂದಿ ಸಮುದಾಯಗಳನ್ನು ಪ್ರತ್ಯೇಕಿಸಲು ಕದನವಿರಾಮ ರೇಖೆ ಎಳೆಯಲಾಯಿತು. ಇದರ ಅಡಿಯಲ್ಲಿ, ಗಾಜಾ ಪಟ್ಟಿಯನ್ನು ಅರಬ್ ಬಹುಸಂಖ್ಯಾತ ಪ್ರದೇಶವಾಗಿ ಸ್ಥಾಪಿಸಲಾಯಿತು. ಆದರೆ ಯಹೂದಿ ಸಮುದಾಯವು ಇಸ್ರೇಲ್ನಲ್ಲಿ ಉಳಿಯಿತು. ೧೯೪೮ ರಿಂದ ೧೯೬೭ರ ವರೆಗೆ ಈಜಿಪ್ಟ್ ಈ ಪ್ರದೇಶವನ್ನು ನಿಯಂತ್ರಿಸಿತು. ಆದರೆ ೧೯೬೭ರಲ್ಲಿ ನಡೆದ 6 ದಿನಗಳ ಯುದ್ಧದಲ್ಲಿ ಇಸ್ರೇಲ್ ಈಜಿಪ್ಟ್ ಅನ್ನು ಸೋಲಿಸಿ ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಪ್ರದೇಶವು ಇಸ್ರೇಲ್ ಆಡಳಿತಕ್ಕೆ ಒಳಪಟ್ಟಿತು.
2005 ರಲ್ಲಿ, ಪ್ಯಾಲೆಸ್ತೀನಿಯನ್ ಸ್ವಾತಂತ್ರ್ಯ ಸಂಸ್ಥೆ ಜೊತೆಗಿನ ಒಪ್ಪಂದದ ಭಾಗವಾಗಿ, ಇಸ್ರೇಲ್ ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿತು ಮತ್ತು ಯಹೂದಿ ವಸಾಹತುಗಳನ್ನು ಕೆಡವಿತು. ಆದರೆ 2007 ರಲ್ಲಿ ಹಮಾಸ್ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದು ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಯಿತು.
ಟ್ರಂಪ್ ಗೇಮ್ ಪ್ಲ್ಯಾನ್ ಏನು?
ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದ ನಂತರ ಟ್ರಂಪ್ ಗಾಜಾ ಪಟ್ಟಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಿಯಂತ್ರಣ ಮಾಡುವುದಾಗಿ ಹೇಳಿದರು. ಅಲ್ಲಿ ಇನ್ನೂ ಅಡಗಿಸಿಟ್ಟಿರುವ ಬಾಂಬ್ಗಳನ್ನು ಸ್ಫೋಟವಾಗದಂತೆ ನಾವು ತಡೆಯುತ್ತೇವೆ. ಆರ್ಥಿಕವಾಗಿ ಅಭಿವೃದ್ಧಿ ಮಾಡುತ್ತೇವೆ. ಉದ್ಯೋಗಾವಕಾಶ ಸೃಷ್ಟಿಸುತ್ತೇವೆ. ಗಾಜಾವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದು ಹಲವು ಆಫರ್ಗಳನ್ನ ಘೋಷಣೆ ಮಾಡಿದರು. ಆದ್ರೆ ಗಾಜಾದಲ್ಲಿರುವ 18 ರಿಂದ 20 ಲಕ್ಷ ಪ್ಯಾಲೆಸ್ತೀನಿಯನ್ನರು ಗಾಜಾವನ್ನು ತೊರೆದು ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹೇಳಿದ್ದಾರೆ.
ಗಾಜಾ ವಾಸಕ್ಕೆ ಯೋಗ್ಯವಲ್ಲ. ಅಭಿವೃದ್ಧಿಪಡಿಸಿದ ನಂತರ ಇದು ವಿಶ್ವದಾದ್ಯಂತ ಜನರಿಗೆ ನೆಲೆಯಾಗಲಿದೆ. ರಿವೇರಿಯಾ ಆಗಿ ಗಾಜಾ ಬದಲಾಗಲಿದೆ. ರಿವೇರಿಯಾ ಎಂಬುದು ಇಟಾಲಿಯನ್ ಪದವಾಗಿದ್ದು, ಇದರ ಅರ್ಥ ಕರಾವಳಿ. ಇಟಾಲಿಯನ್ ಮತ್ತು ಫ್ರೆಂಚ್ ರಿವೇರಿಯಾದಂತೆ ಗಾಜಾವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಮುಖ್ಯವಾಗಿ ಗಾಜಾವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಉದ್ದೇಶವನ್ನು ಟ್ರಂಪ್ ಹೊಂದಿದ್ದಾರೆ. ಹಾಗಾಗಿ ಪ್ಯಾಲೆಸ್ತೀನಿಯರನ್ನು ಸ್ಥಳಾಂತರಿಸುವುದು ಅವಶ್ಯಕ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಆಫರ್ಗೆ ಇಸ್ರೇಲ್ ಪ್ರಧಾನಿ ಒಪ್ಪಿದರೂ. ಮಧ್ಯಪ್ರಾಚ್ಯ ಹಾಗೂ ಅನೇಕ ಯುರೋಪಿಯನ್ ದೇಶಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಟ್ರಂಪ್ ಇಡೀ ಗಾಜಾವನ್ನ ಸಂಪೂರ್ಣವಾಗಿ ಇಸ್ರೇಲ್ ನಿಯಂತ್ರಣಕ್ಕೆ ಕೊಡುವುದಕ್ಕಾಗಿ ಈ ಪ್ಲ್ಯಾನ್ ಮಾಡಿದ್ದಾರೆಂದು ಕೆಲ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮುಂದೆ ಟ್ರಂಪ್ ಅವರ ನಿಲುವು ಏನೆಂಬುದನ್ನು ಕಾದುನೋಡಬೇಕಿದೆ.
– ಟ್ರಂಪ್ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಮೊದಲ ಭೇಟಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದು, ಇದೀಗ ಫ್ರಾನ್ಸ್ (France) ರಾಜಧಾನಿ ಪ್ಯಾರಿಸ್ಗೆ ಪ್ರಯಾಣ ಬೆಳೆಸಿದ್ದಾರೆ. ಸಂಜೆ ವೇಳೆಗೆ ಫ್ರಾನ್ಸ್ ತಲುಪಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ 3ನೇ ಆವೃತ್ತಿಯ ಕೃತಕ ಬುದ್ಧಿಮತ್ತೆ (AI) ಆ್ಯಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದಾರೆ.
#WATCH | Delhi: Prime Minister Narendra Modi leaves for France to co-chair the AI Action Summit.
From France, PM Modi will proceed on a two-day visit to the United States at the invitation of President Donald Trump. pic.twitter.com/oxElBtrIDY
Over the next few days, I will be in France and USA to take part in various programmes.
In France, I will be taking part in the AI Action Summit, where India is the co-chair. I will be holding talks with President @EmmanuelMacron towards strengthening India-France relations. We…
ಫ್ರಾನ್ಸ್ ಪ್ರವಾಸದ ಬಳಿಕ ಫೆಬ್ರವರಿ 12ರಂದು ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಲಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನಿ ಮೋದಿ, ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚಿಸಲಿದ್ದಾರೆ. ಇದನ್ನೂ ಓದಿ: Maha Kumbh Mela: ಪುಣ್ಯ ಸ್ನಾನ ಮಾಡಿದ ನೆನಪಿರಲಿ ಪ್ರೇಮ್
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಇದು ಪ್ರಧಾನಿ ಮೋದಿ ಅವರ ಮೊದಲ ಭೇಟಿಯಾಗಿದೆ. ಈ ಸಂಸತವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬರುವ ಎರಡು ದಿನಗಳ ಭೇಟಿಯ ಸಮಯದಲ್ಲಿ ತಮ್ಮ ಸ್ನೇಹಿತ ಟ್ರಂಪ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಯುಎಸ್ಎ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹಾಗೂ ವೈವಿಧ್ಯಮಯ ವಲಯಗಳಲ್ಲಿ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಕೆಲಸ ಮಾಡಿದ್ದನ್ನು ನಾನು ಆತ್ಮೀಯವಾಗಿ ಸ್ಮರಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರವಾಸದ ವಿವರ:
* ಪ್ರಧಾನಿ ಮೋದಿ ಅವರು ಫೆಬ್ರವರಿ 10 ರಂದು (ಸೋಮವಾರ) ಪ್ಯಾರಿಸ್ಗೆ ಆಗಮಿಸಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿರುವ ಭೋಜನಕೂಟದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖ ಜಾಗತಿಕ ನಾಯಕರು, ಟೆಕ್ ಉದ್ಯಮದ ಪ್ರಮುಖ CEOಗಳು ಮತ್ತು ಇತರ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
* AI ಆ್ಯಕ್ಷನ್ ಶೃಂಗಸಭೆಯು ಫೆಬ್ರವರಿ 11(ಮಂಗಳವಾರ) ರಂದು ನಡೆಯಲಿದೆ. ಯುನೈಟೆಡ್ ಕಿಂಗ್ಡಮ್ (2023) ಮತ್ತು ದಕ್ಷಿಣ ಕೊರಿಯಾ (2024)ದಲ್ಲಿ ನಡೆದ ಹಿಂದಿನ ಆವೃತ್ತಿಗಳ ಮುಂದುವರಿಕೆಯಾಗಿ ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ. AI ತಂತ್ರಜ್ಞಾನಗಳ ಜವಾಬ್ದಾರಿಯುತ ಮತ್ತು ನೈತಿಕ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಈ ಶೃಂಗಸಭೆ ಹೊಂದಿದೆ. ಜಾಗತಿಕ ಆರ್ಥಿಕತೆಯ ಭವಿಷ್ಯವನ್ನು ರೂಪಿಸುವಲ್ಲಿ ಇದು ನಿರ್ಣಾಯಕ ಪಾತ್ರವಹಿಸುತ್ತದೆ.
* ಭಾರತ-ಫ್ರಾನ್ಸ್ CEOಗಳ ವೇದಿಕೆಯನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ವ್ಯಾಪಾರ, ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ಚರ್ಚೆಗಳು ಸೀಮಿತ ಮತ್ತು ನಿಯೋಗ ಮಟ್ಟದ ಎರಡೂ ಸ್ವರೂಪಗಳಲ್ಲಿ ನಡೆಯಲಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ USAID ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 13,500ಕ್ಕೂ ಹೆಚ್ಚು ಮಂದಿಯನ್ನು ಮನೆಗೆ ಕಳುಹಿಸಿದ್ದಾರೆ.
USAID ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿಶ್ವಾದ್ಯಂತ ಸುಮಾರು 14 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 294 ಮಂದಿಯನ್ನು ಮಾತ್ರ ಉಳಿಸಿದ್ದು ಉಳಿದ ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಲಾಗಿದೆ.
ವಿಶ್ವದ ಶ್ರೀಮಂತ ವ್ಯಕ್ತಿ, ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಸಲಹೆಯ ಬೆನ್ನಲ್ಲೇ ಟ್ರಂಪ್ ಅವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ವಿಶ್ವಾದ್ಯಂತ ಅನೇಕ ಉದ್ಯೋಗಿಗಳನ್ನು ಈಗಾಗಲೇ ಆಡಳಿತಾತ್ಮಕ ರಜೆಯ ಮೇಲೆ ಕಳುಹಿಸಲಾಗಿದೆ. ಶುಕ್ರವಾರದ ವೇಳೆ ಮಿಷನ್-ನಿರ್ಣಾಯಕ ಕಾರ್ಯಗಳಿಗೆ ಜವಾಬ್ದಾರರಾಗಿರುವ ಸಿಬ್ಬಂದಿ ಮಾತ್ರ ಉಳಿಯುತ್ತಾರೆ ಎಂದು ವರದಿಯಾಗಿದೆ.
USAID ಹಲವರು ದೇಶಗಳಿಗೆ ಹಣಕಾಸಿನ ಸಹಾಯ ನೀಡುತ್ತಿದೆ. ಬಡತನ, ಶಿಕ್ಷಣ, ಆರೋಗ್ಯ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಈ ಹಣವನ್ನು ಬಳಕೆ ಮಾಡಲು ಅಮೆರಿಕ ಸರ್ಕಾರ ಹಲವು ದೇಶಗಳಿಗೆ ಈ ಅನುದಾನ ನೀಡುತ್ತಾ ಬಂದಿದೆ.
ಅನುದಾನ ಹಂಚಿಕೆಯಲ್ಲಿ ಕೇವಲ 10% ಮಾತ್ರ ನಿಜವಾದ ಫಲಾನುಭವಿಗಳಿಗೆ ಸಹಾಯವಾಗುತ್ತದೆ. ಉಳಿದ ಹಣಗಳು ಸರ್ಕಾರೇತರ ಸಂಸ್ಥೆ, ಎಡಪಂಥೀಯ ಮಾಧ್ಯಮಗಳಿಗೆ ಬಳಕೆಯಾಗುತ್ತದೆ ಎಂದು ಮಸ್ಕ್ ದೂರಿದ್ದಾರೆ.
????????????TRUMP ADMIN SUED OVER MASSIVE USAID JOB CUTS
USAID unions are suing Trump after his administration moved to slash the agency’s workforce from 14,000 to just 294 in a push for efficiency, led by @marcorubio and @DOGE.
ನಮ್ಮ ದೇಶದ ಜನರೇ ಸಂಕಷ್ಟಕ್ಕೆ ಸಿಲುಕಿರುವಾಗ ಬೇರೆ ದೇಶಗಳಿಗೆ ಯಾಕೆ ಅನುದಾನ ನೀಡಬೇಕು. ಅಮೆರಿಕ ಸರ್ಕಾರ ವಿದೇಶಗಳಿಗೆ ನೀಡುತ್ತಿರುವ USAID ಅನ್ನು ಕ್ರಿಮಿನಲ್ ಸಂಘಟನೆ ಎಂದು ಮಸ್ಕ್ ಕರೆದಿದ್ದಾರೆ. ಈ ಅನುದಾನ ನಿಜವಾಗಿಯೂ ಬಡ ದೇಶಗಳಿಗೆ ತಲುಪುತ್ತಿಲ್ಲ. ಇದು ಅಮೆರಿಕ ಸರ್ಕಾರವನ್ನು ಬೆಂಬಲಿಸುವ ಸರ್ಕಾರೇತರ ಸಂಸ್ಥೆಗಳಿಗೆ ಹೋಗುತ್ತದೆ. ಈ ಎನ್ಜಿಒಗಳು ಆ ಹಣವನ್ನು ಸರ್ಕಾರದ ಡೆಮಾಕ್ರಟಿಕ್ ನಾಯಕರಿಗೆ ಕಳುಹಿಸುತ್ತಾರೆ. ಅಕ್ರಮ ಹಣ ವರ್ಗಾವಣೆ ಮಾಡಲು USAID ಇದನ್ನು ಬಳಸಲಾಗುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನನ್ನ DOGE ಇಲಾಖೆ ವಾರಕ್ಕೆ 120 ಗಂಟೆ ಕೆಲಸ ಮಾಡುತ್ತಿದೆ: ಮಸ್ಕ್
ನಷ್ಟದಲ್ಲಿದ್ದ ಟ್ವಿಟ್ಟರ್ (Twitter) ಕಂಪನಿಯನ್ನು ಖರೀದಿಸಿದ ಬಳಿಕ ಮಸ್ಕ್ ಮಾಡಿದ ಮೊದಲ ಕೆಲಸ ಏನೆಂದರೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದರು. ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಬಳಿಕ 80% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದು ಹಾಕಿದ್ದನ್ನು ಮಸ್ಕ್ ಸಮರ್ಥಿಸಿಕೊಂಡಿದ್ದರು.
ನಾವು ಯಾವುದೇ ಕಾರ್ಯಕರ್ತರ ಸಂಘಟನೆಯನ್ನು ನಡೆಸುತ್ತಿಲ್ಲ. ಸೆನ್ಸರ್ಶಿಪ್ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು. ಹೀಗಾಗಿ 80% ರಷ್ಟು ಉದ್ಯೋಗವನ್ನು ಕಡಿತ (Job Cut) ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದ್ದರು.
ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದಾಗ ಸುಮಾರು 8 ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದು 80% ರಷ್ಟು ಮಂದಿಗೆ ಗೇಟ್ಪಾಸ್ ನೀಡಲಾಗಿದೆ.
ನವದೆಹಲಿ: 2009ರಿಂದ ಇಲ್ಲಿಯವರೆಗೆ ಅಮೆರಿಕದಿಂದ ಒಟ್ಟು 15,000 ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಗಡಿಪಾರುಗೊಂಡು (Deportation) ಭಾರತಕ್ಕೆ ಮರಳುತ್ತಿರುವ ಭಾರತೀಯರ (Indians) ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಲು ನಾವು ಅಮೆರಿಕ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಹೇಳಿಕೆ ನೀಡಿದ್ದಾರೆ.
ಅಮೆರಿಕದಿಂದ ಗಡಿಪಾರು ಮಾಡಲಾದ ಭಾರತೀಯ ನಾಗರಿಕರ ಕುರಿತು ಮಾತನಾಡಿದ ಅವರು, ತಮ್ಮ ನಾಗರಿಕರು ವಿದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆದುಕೊಂಡು ಹೋಗುವುದು ಎಲ್ಲಾ ದೇಶಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ತರಬೇತಿ ವೇಳೆ IAFನ ಮಿರಾಜ್-2000 ಯುದ್ಧ ವಿಮಾನ ಪತನ – ಇಬ್ಬರು ಪೈಲಟ್ ಸೇಫ್
ಅಕ್ರಮ ವಲಸೆ ಉದ್ಯಮದ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವತ್ತ ನಮ್ಮ ಗಮನ ಕೇಂದ್ರೀಕರಿಸಿರುವುದನ್ನು ಸದನವು ಪ್ರಶಂಸಿಸುತ್ತದೆ. ಗಡಿಪಾರು ಮಾಡಿದವರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಕಾನೂನು ಜಾರಿ ಸಂಸ್ಥೆಗಳು ಏಜೆಂಟರು ಮತ್ತು ಅಂತಹ ಏಜೆನ್ಸಿಗಳ ವಿರುದ್ಧ ಅಗತ್ಯ, ತಡೆಗಟ್ಟುವ ಮತ್ತು ಅನುಕರಣೀಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದರು. ಇದನ್ನೂ ಓದಿ: ಹಿಂದೂ ಪದ ತಂದಿದ್ದೇ ಕಾಂಗ್ರೆಸ್: ಸಂತೋಷ್ ಲಾಡ್
ಅಮೆರಿಕದಿಂದ ಹಿಂದಿರುಗುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಅಧಿಕಾರಿಗಳು ಕುಳಿತು ಚರ್ಚಿಸಲು ಸೂಚಿಸಿದೆ. ಅವರು ಅಮೆರಿಕಕ್ಕೆ ಹೇಗೆ ಹೋದರು, ಯಾರು ಏಜೆಂಟ್ ಮತ್ತು ಇದು ಮತ್ತೆ ಸಂಭವಿಸದಂತೆ ನಾವು ಹೇಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೇವೇಗೌಡರು ಕರ್ನಾಟಕಕ್ಕೆ ಕೇಂದ್ರ ಮಾಡಿರೋ ಅನ್ಯಾಯದ ಬಗ್ಗೆ ಮಾತಾಡಲಿ: ಕೃಷ್ಣ ಬೈರೇಗೌಡ
ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಪ್ರಶ್ನೆಗೆ ಉತ್ತರಿಸಿ, ಬುಧವಾರ 104 ಜನರು ಹಿಂತಿರುಗಿದ್ದಾರೆಂದು ನಮಗೆ ತಿಳಿದಿದೆ. ನಾವು ಅವರ ರಾಷ್ಟ್ರೀಯತೆಯನ್ನು ದೃಢಪಡಿಸಿದ್ದೇವೆ. ಇದು ಹೊಸ ಸಮಸ್ಯೆ ಎಂದು ನಾವು ಭಾವಿಸಬಾರದು. ಇದು ಈ ಹಿಂದೆಯೂ ನಡೆದಿರುವ ಸಮಸ್ಯೆ. ಕಾನೂನು ಚಲನಶೀಲತೆಯನ್ನು ಉತ್ತೇಜಿಸುವುದು ಮತ್ತು ಅಕ್ರಮ ಸಂಚಾರವನ್ನು ನಿರುತ್ಸಾಹಗೊಳಿಸುವುದು ನಮ್ಮ ಸಾಮೂಹಿಕ ಹಿತಾಸಕ್ತಿಯಾಗಿದೆ. ಎಲ್ಲಾ ದೇಶಗಳು ತಮ್ಮ ನಾಗರಿಕರು ವಿದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಹೊಂದಿವೆ. ಗಡಿಪಾರು ಪ್ರಕ್ರಿಯೆ ಹೊಸದೇನಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿರೋದು ದಪ್ಪ ಎಮ್ಮೆ ಚರ್ಮದ ಸರ್ಕಾರ: ಸುನೀಲ್ ಕುಮಾರ್
ಅಮೆರಿಕದಿಂದ ಭಾರತಕ್ಕೆ ಇಲ್ಲಿಯವರೆಗೆ ಗಡಿಪಾರು ಮಾಡಲಾದ ಜನರ ಅಂಕಿಅಂಶಗಳನ್ನು ಜೈಶಂಕರ್ ಸದನದ ಮುಂದೆ ಮಂಡಿಸಿದರು. 2009 ರಲ್ಲಿ 734 ಭಾರತೀಯರನ್ನು, 2010ರಲ್ಲಿ 799 ಭಾರತೀಯರನ್ನು, 2011ರಲ್ಲಿ 597 ಭಾರತೀಯರನ್ನು ಮತ್ತು 2012ರಲ್ಲಿ 530 ಭಾರತೀಯರನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿ 2024ರವರೆಗಿನ ಮಾಹಿತಿಯನ್ನು ಹಂಚಿಕೊಂಡರು.
ಯಾವ ವರ್ಷದಲ್ಲಿ ಎಷ್ಟು ಭಾರತೀಯರ ಗಡಿಪಾರು?
2009-734
2010-799
2011-597
2012-530
2013-550
2014-591
2015-708
2016-1303
2017-1024
2018-1180
2019-2042
2020-1889
2021-805
2022-862
2023-617
2024-1368
2025-104