Tag: domestic cricket

  • ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

    ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಬೇಸರವಾಗುತ್ತಿದೆ ಎಂದು ಹೇಳಿರುವ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹ್‌ಝಾದ್, ಭಾರತದಲ್ಲಿ ಆಟಗಾರರಿಗೆ ಸಿಗುವ ಬೆಂಬಲ ಹಾಗೂ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

    2019ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶೆಹ್‌ಝಾದ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಅಗ್ರ ಕ್ರಮಾಂಕದ ಆಟಗಾರನಾಗಿ ಗಮನ ಸೆಳೆದಿದ್ದರು. ಆದರೆ ಕೆಲವೇ ಕೆಲವು ಕೆಟ್ಟ ಇನ್ನಿಂಗ್ಸ್ ಅವರನ್ನು ಟೆಸ್ಟ್ ಹಾಗೂ ಓಡಿಐ ತಂಡದಿಂದ ಕೈಬಿಡುವಂತೆ ಮಾಡಿತ್ತು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಟಿ20 ಕ್ರಿಕೆಟ್‌ಗೆ ಸೂಕ್ತರಾಗುವ ಅವರನ್ನು ಇನ್ನಷ್ಟು ದಿನಗಳ ಕಾಲ ಆಡಿಸಬಹುದಾಗಿತ್ತು. ಆದರೆ 2019ರಲ್ಲಿ ಮತ್ತೊಮ್ಮೆ ಅವರನ್ನು ತಂಡದಿಂದ ಹೊರದಬ್ಬಲಾಯಿತು. ಅಂದಿನಿಂದ ಬಲಗೈ ಬ್ಯಾಟ್ಸ್‌ಮನ್‌ ಪಾಕಿಸ್ತಾನ ತಂಡದಲ್ಲಿ ಕಾಣಿಸುತ್ತಿಲ್ಲ. ಕೇವಲ ದೇಶಿ ಕ್ರಿಕೆಟ್ ಆಡಿಕೊಂಡಿದ್ದಾರೆ.

    ತಮ್ಮ ಕ್ರಿಕೆಟ್ ವೃತ್ತಿ ಜೀವನದ ಆರಂಭದಲ್ಲಿ ನನ್ನ ಬ್ಯಾಟಿಂಗ್ ಅನ್ನು ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಹೋಲಿಸಿದ್ದರು ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದ ಕುರಿತು ಮಾತನಾಡಿರುವ ಅವರು, ನನ್ನ ವೈಫಲ್ಯಗಳ ಬಗ್ಗೆ ಪಿಸಿಬಿ ಅಧಿಕಾರಿಗಳು ಮುಖಾಮುಖಿಯಾಗಿ ಕುಳಿತು ಚರ್ಚಿಸಬಹುದಿತ್ತು. ನಾನು ಸವಾಲುಗಳನ್ನು ಸ್ವೀಕರಿಸಲು ಸಿದ್ಧನಿದ್ದೆ. ತದನಂತರ ಯಾರದು ತಪ್ಪು? ಯಾರದು ಸರಿ ಎಂದು ತಿಳಿಯುತ್ತಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

    ಆದರೆ ವಖಾರ್ ಯೂನಿಸ್ ಅವರ ಮಾತುಗಳು ನನಗೆ ತಂಬಾ ನೋವು ಕೊಟ್ಟಿದ್ದವು. ವಿಶೇಷವಾಗಿ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾಗ ಇದು ಸಿಕ್ಕಾಪಟ್ಟೆ ಕಾಡಿತ್ತು. ನನ್ನನ್ನು ತಂಡದಿಂದ ಕೈಬಿಡಲು ಅವರು ಮೊದಲೇ ರೂಪಿಸಿದ್ದ ಯೋಜನೆ ಇದಾಗಿತ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಒಂದೇ ಕಲ್ಲಿನಲ್ಲಿ ಎರಡು ಪಕ್ಷಿಗಳನ್ನು ಕೊಲ್ಲುವುದು ಅವರ ಉದ್ದೇಶವಾಗಿತ್ತು ಎಂದು ಅಹ್ಮದ್ ಶೆಹ್‌ಝಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv

  • 2012ರ ನಂತ್ರ ಏರಿಕೆ: ಅಂಪೈರ್, ಸ್ಕೋರರ್, ಕೂರೇಟರ್ ಸಂಬಳ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?

    2012ರ ನಂತ್ರ ಏರಿಕೆ: ಅಂಪೈರ್, ಸ್ಕೋರರ್, ಕೂರೇಟರ್ ಸಂಬಳ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂಪೈರ್, ಕ್ಯೂರೇಟರ್ ಹಾಗೂ ಕ್ರಿಕೆಟ್ ವಿಶ್ಲೇಷಕರ ಸಂಭಾವನೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

    ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಸದ್ಯ ಬಿಸಿಸಿಐ ಕಾರ್ಯದರ್ಶಿ ಆಗಿರುವ ಸಬಾ ಕರೀಂ ಅವರು ಏಪ್ರಿಲ್ 12 ರ ಸಭೆಯಲ್ಲಿ ನೀಡಿದ ಸಲಹೆ ಮೇರೆಗೆ ಈ ಕುರಿತು ಚಿಂತನೆ ನಡೆಸಿದೆ. ಅಲ್ಲದೇ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಭಾವನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

    100% ಹೆಚ್ಚಳ: ಸದ್ಯ 2012 ರಿಂದಲೂ ಬಿಸಿಸಿಐ ನಲ್ಲಿ ಕಾರ್ಯನಿರ್ವಹಿಸುತ್ತಿರುವ 105 ಅಂಪೈರ್ ಗಳು ಸಂಭಾವನೆ 100% ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 2002 ರಲ್ಲಿ ಅಂಪೈರ್ ಗಳ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಬಿಸಿಸಿಐ ಸಂಭಾವನೆ ಹೆಚ್ಚಳದ ಚಿಂತನೆ ನಡೆಸಿದೆ. ಸದ್ಯ ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಟಾಪ್ 20 ಅಂಪೈರ್ ಗಳು ಮೂರುದಿನ ಅಥವಾ 50 ಓವರ್ ಗಳ ಪಂದ್ಯಕ್ಕೆ ಒಂದು ದಿನಕ್ಕೆ 20 ಸಾವಿರ ರೂ. ದಿನ ಪಡೆಯುತ್ತಿದ್ದಾರೆ. ಸದ್ಯ ಬಿಸಿಸಿಐ ನಿರ್ಧಾರದ ಬಳಿಕ ಅವರು 40 ಸಾವಿರ ರೂ. ಪಡೆಯಲಿದ್ದಾರೆ. ಉಳಿದ 85 ಅಂಪೈರ್ ಗಳು ದಿನ ಒಂದಕ್ಕೆ 30 ಸಾವಿರ ರೂ. ಪಡೆಯುತ್ತಾರೆ.

    ಟಿ20 ಮಾದರಿಯನ್ನು ಗಮನಿಸಿದರೆ ಟಾಪ್ 20 ಅಂಪೈರ್ ಗಳು 20 ಸಾವಿರ ರೂ. ಹಾಗೂ ಉಳಿದ 85 ಅಂಪೈರ್ ಗಳು 15 ಸಾವಿರ ರೂ. ಪಡೆಯಲಿದ್ದಾರೆ. ವಿದೇಶಿ ಅಂಪೈರ್ ಗಳ ದಿನ ಭತ್ಯೆ 750 ರೂ. ನಿಂದ 1,500 ರೂ.ಗೆ ಏರಿಕೆಯಾಗಿದೆ. ಇತರೇ ಅಂಪೈರ್ ಗಳ ದಿನ ಭತ್ಯೆ 500 ರೂ. ನಿಂದ 1 ಸಾವಿರ ರೂ.ಗೆ ಏರಿಕೆಯಾಗಿದೆ.

    ಪಿಚ್ ಕ್ಯೂರೇಟರ್ ಗಳ ಸಂಭಾವನೆಯೂ 2012ರ ಬಳಿಕ ಮೊದಲ ಬಾರಿಗೆ ಹೆಚ್ಚಳವಾಗುತ್ತಿದೆ. ಪ್ರಮುಖ ಐದು ವಲಯ ಮತ್ತು ಸಹಾಯಕ ಕ್ಯೂರೇಟರ್ ಗಳು ಈ ಹಿಂದೆ ವಾರ್ಷಿಕವಾಗಿ 6 ಲಕ್ಷ ರೂ. ಮತ್ತು 4.2 ಲಕ್ಷ ರೂ.ಗಳನ್ನು ಪಡೆಯುತ್ತಿದ್ದರು. ಈಗ ಈ ಮೊತ್ತ 12 ಲಕ್ಷ ರೂ. ಮತ್ತು 8.4 ಲಕ್ಷ ರೂ.ಗೆ ಏರಿಕೆಯಾಗಿದೆ.

    ಪಂದ್ಯದ ಸ್ಕೋರ್ ಮಾಹಿತಿಯನ್ನು ದಾಖಲಿಸುವ ಸಿಬ್ಬಂದಿಯೂ ಸಹ ಸಂಭಾವನೆಯ ಹೆಚ್ಚಳ ಪಡೆಯಲಿದ್ದಾರೆ. ಸದ್ಯ ಬಿಸಿಸಿಐಯಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಮಂದಿ ಈ ಲಾಭ ಪಡೆಯಲಿದ್ದಾರೆ. ಸದ್ಯ ಪ್ರಥಮ ದರ್ಜೆ ಮೂರು ದಿನ ಅಥವಾ 50 ಓವರ್ ಪಂದ್ಯಕ್ಕೆ 10 ಸಾವಿರ ರೂ. ಸಂಭಾವನೆ ಹಾಗೂ ಸಿಮೀತ ಓವರ್ ಪಂದ್ಯಕ್ಕೆ 5 ಸಾವಿರ ರೂ. ಗಳು ಸಂಭಾವನೆ ಪಡೆಯಲಿದ್ದಾರೆ. ಅಲ್ಲದೇ ಪ್ರತಿ ದಿನದ ಭತ್ಯೆ ಹೆಚ್ಚಳವಾಗಿದ್ದು, ಔಟ್ ಸ್ಟೇಷನ್ ಸ್ಕೋರರ್ ಗಳಿಗೆ 1,500 ರೂ. ಹಾಗೂ ಉಳಿದವರಿಗೆ 1 ಸಾವಿರ ರೂ. ಸಿಗಲಿದೆ.

    ಸದ್ಯ ಬಿಸಿಸಿಐ ಚಿಂತನೆಗೆ ಸುಪ್ರೀಂ ನಿಂದ ನಿಯೋಜನೆ ಮಾಡಲಾಗಿರುವ ಬಿಸಿಸಿಐ ಆಡಳಿತಾತ್ಮಕ ಸಂಸ್ಥೆ(ಸಿಒಎ) ಸಹ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಇದರೊಂದಿಗೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಭಾವನೆ ಸಹ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಬಿಸಿಸಿಐ ಅಧ್ಯಕ್ಷರು ಸದ್ಯ ವಾರ್ಷಿಕ 80 ಲಕ್ಷ ರೂ. ಹಾಗೂ ಸಮಿತಿಯ ಸದಸ್ಯರು 60 ಲಕ್ಷ ರೂ. ಪಡೆಯುತ್ತಿದ್ದಾರೆ. ಬಿಸಿಸಿಐ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರೆ ಕ್ರಮವಾಗಿ 1 ಕೋಟಿ ರೂ. ಹಾಗೂ 75 ರಿಂದ 80 ಲಕ್ಷ ರೂ. ಗೆ ಸಂಭಾವನೆ ಹೆಚ್ಚಳವಾಗುವ ಸಾಧ್ಯತೆ ಇದೆ.