Tag: doll

  • ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ಸರ್ಜಾ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಮನೆಮಾಡಿದ್ದು, ಗೊಂಬೆಗಳ ಮಧ್ಯೆ ರಾಯನ್ ರಾಜ್ ಸರ್ಜಾ ಫೋಟೋಗೆ ಪೋಸ್ ನೀಡಿದ್ದಾನೆ.

    ನಾಡಿನಾದ್ಯಂತ ದಸರಾ ಹಬ್ಬವನ್ನು ಜನರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ದಸರಾ ವೇಳೆ ಮನೆಯಲ್ಲಿ ವಿವಿಧ ಗೊಂಬೆಗಳನ್ನು ಕೂರಿಸುವ ಪದ್ಧತಿ ಇದೆ. ಇದೀಗ ಮೇಘನಾ ಸರ್ಜಾ ಅವರು ದಸರಾ ಹಬ್ಬದ ಹಿನ್ನೆಲೆ ವಿವಿಧ ರೀತಿಯ ಗೊಂಬೆಗಳನ್ನು ಕೂರಿಸಿ ಹಬ್ಬವನ್ನು ಆಚರಿಸುತ್ತಿದ್ದಾರೆ. ವಿಶೇಷವೆಂದರೆ ಈ ಗೊಂಬೆಗಳ ಮಧ್ಯೆ ಪುಟ್ಟಗೊಂಬೆಯಂತೆ ಕುಳಿತುಕೊಂಡು ರಾಯನ್ ರಾಜ್ ಸರ್ಜಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಇದನ್ನೂ ಓದಿ: 16 ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ

    meghana raj

    ಸದ್ಯ ಈ ಮುದ್ದಾದ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ರಾಯನ್ ನೆತ್ತಿ ಮೇಲೆ ಪುಟ್ಟ ಜುಟ್ಟನ್ನು ಕಟ್ಟಿಕೊಂಡಿದ್ದು ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾನೆ. ಫೋಟೋ ಜೊತೆಗೆ ಶೀರ್ಷಿಕೆಯಲ್ಲಿ, ದಸರಾ ಯಾವಾಗಲೂ ನನ್ನ ಕುಟುಂಬಕ್ಕೆ ವಿಶೇಷ ಹಬ್ಬವಾಗಿದೆ ಮತ್ತು ನನ್ನ ಪುಟ್ಟ ಕಂದ ತನ್ನ ಮೊದಲ ವಿಜಯದಶಮಿಯನ್ನು ತನ್ನ ಕೊಲ್ಲು ಪಾಟಿ(ನನ್ನ ತಂದೆಯ ಅಜ್ಜಿ)ಯ ಮನೆಯಲ್ಲಿ ಆಚರಿಸುತ್ತಿದ್ದಾನೆ. ನೀವು ಹಿಂದೆ ನೋಡುತ್ತಿರುವ ಬೊಂಬೆಗಳೆಲ್ಲಾ 45 ವರ್ಷಗಳಿಗಿಂತ ಹಳೆಯದು. ಮುಂದಿನ ವರ್ಷ ಯಾವಾಗಲೂ ಹಬ್ಬವನ್ನು ಸಂತೋಷದಿಂದ ಆಚರಿಸಲು ಪ್ರತಿ ವರ್ಷ ಎಚ್ಚರಿಕೆಯಿಂದ ಇವುಗಳನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷ ನವರಾತ್ರಿಯ ಸಮಯದಲ್ಲಿ ರಾಯನ್ ಕೂಡ ಜನಿಸಿದನು. ಹಾಗಾಗಿ ಈ ಹಬ್ಬ ಮತ್ತಷ್ಟು ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 20 ನಿಮಿಷದಲ್ಲಿ ವಿಶ್ವವಿಖ್ಯಾತ ಮೈಸೂರಿನ ಜಂಬೂಸವಾರಿ ಮುಕ್ತಾಯ

     

    View this post on Instagram

     

    A post shared by Meghana Raj Sarja (@megsraj)

    ಚಿರಂಜೀವಿ ಸರ್ಜಾ, ಮೇಘನಾ ರಾಜ್, ರಾಯನ್ ರಾಜ್ ಸರ್ಜಾ ಕಡೆಯಿಂದ ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

  • ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಚಿಕನ್ ಮೊರೆ ಹೋದ ಬಾಡಿ ಬಿಲ್ಡರ್

    ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಚಿಕನ್ ಮೊರೆ ಹೋದ ಬಾಡಿ ಬಿಲ್ಡರ್

    ನುರ್-ಸುಲ್ತಾನ್: ಖಜಕಸ್ತಾನದ ಬಾಡಿಬಿಲ್ಡರ್ ಯೋರಿ ತುಲೋಚ್ಚೋ ಕಾಮತೃಷೆಗಾಗಿ ಚಿಕನ್ ಬಳಕೆ ಮಾಡುತ್ತಿರುವ ವಿಚಿತ್ರ ವೀಡಿಯೋವನ್ನ ತನ್ನ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ. ಈತನ ಅಶ್ಲೀಲ ವೀಡಿಯೋಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

    ಯೋರಿ ತುಲೋಚ್ಕೋ ನವೆಂಬರ್ ನಲ್ಲಿ ತಾನು ಮೆಚ್ಚಿದ ಡಾಲ್ ಮಾರ್ಗೋ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದನು. ಇದೀಗ ಗೊಂಬೆ ಮುರಿದಿದ್ದು, ಮೊದಲ ಕ್ರಿಸ್‍ಮಸ್ ಹಬ್ಬವನ್ನ ಒಂಟಿಯಾಗಿ ಆಚರಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಗೊಂಬೆಯನ್ನ ರಿಪೇರಿಗೆ ಕಳುಹಿಸಿ ಹಲವು ಪೋಸ್ಟ್ ಮಾಡಿಕೊಂಡಿದ್ದ ಯೋರಿ ಭಗ್ನ ಪ್ರೇಮಿಯಂತೆ ಕಣ್ಣೀರು ಹಾಕಿದ್ದಾನೆ. ಆದ್ರೆ ರಿಪೇರಿಗೆ ಹೋದ ಗೊಂಬೆ ಸಿದ್ಧವಾಗುತ್ತಿದ್ದು ಎಂದು ಹೇಳಿಕೊಂಡಿದ್ದಾನೆ.

    ಮೊದಲ ಗೊಂಬೆ ಮುರಿದ ಪರಿಣಾಮ ಹಲವು ಸೆಕ್ಸ್ ಡಾಲ್‍ಗಳನ್ನು ಪಡೆಯಲು ಯೋರಿ ಮುಂದಾಗಿದ್ದಾನೆ. ಗೊಂಬೆ ಮಾರ್ಗೋ ಮತ್ತೆ ಮುರಿದು ಹೋಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ಹೆಚ್ಚು ಸೆಕ್ಸ್ ಗಾಗಿ ಹಲವು ಡಾಲ್ ಗಳನ್ನು ಖರೀದಿಗೆ ಮುಂದಾಗಿದ್ದೇನೆ. ಕೆಲವೇ ದಿನಗಳಲ್ಲಿ ಮೊದಲಿನಿಂತಾಗಿ ತನ್ನ ಮಾರ್ಗೋ ಹಿಂದಿರುಗಲಿದೆ. ಸದ್ಯ ತಾನು ಕ್ವಾರಂಟೈನ್ ನಲ್ಲಿದ್ದೇನೆ ಎಂದು ಯೋರಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಈ ಯುವತಿಯ ಫೋಟೋಗೆ ಹುಡಗರು ಫಿದಾ-ಇಲ್ಲಿದೆ ಫೋಟೋವಿನ ಅಸಲಿ ಸತ್ಯ

    ಕಳೆದ ಒಂದು ವರ್ಷದಿಂದ ಮಾರ್ಗೋ ಜೊತೆ ಯೋರಿ ಡೇಟಿಂಗ್ ನಲ್ಲಿದ್ದನು. ಮಾರ್ಚ್ ನಲ್ಲಿ ನಡೆಯಬೇಕಿದ್ದ ಯೋರಿ ಮತ್ತು ಮಾಗೋ ಮದುವೆ ಕೊರೊನಾದಿಂದ ಮುಂದೂಡಲ್ಪಟ್ಟಿತ್ತು. ಕೊನೆಗೆ ನವೆಂಬರ್ ನಲ್ಲಿ 12 ಜನರ ಸಮ್ಮುಖದಲ್ಲಿ ಗೊಂಬೆ ಬೆರಳಿಗೆ ಉಂಗುರ ತೊಡೆಸಿದ್ದನು. ನಮ್ಮ ಸಂಬಂಧ ಎಲ್ಲರಗಿಂತ ಭಿನ್ನವಾದದ್ದು ಎಂದು ಹೇಳಿ ಮಾರ್ಗೋ ತುಟಿಗೆ ತುಟಿಯನ್ನ ಸೇರಿಸಿದ್ದನು. ಯೋರಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇಡೀ ಜಗತ್ತಿನಲ್ಲೆಡೆ ಗುರುತಿಸಿಕೊಂಡಿದ್ದನು. ಇದನ್ನೂ ಓದಿ: ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್ ಡಾಲ್ಸ್ ಇಟ್ಟ ಫುಟ್ಬಾಲ್ ಟೀಂ

    ಅವಳಿಗೆ ಒಬ್ಬಳಿಗೆ ನಡೆಯಲು ಆಗಲ್ಲ. ಅಡುಗೆ ಮಾಡಲು ಸಹ ಬರಲ್ಲ. ಆದ್ರೆ ಆಕೆಗೆ ಜಾರ್ಜಿಯನ್ ಕಸೀನ್ ಅಂದ್ರೆ ಬಲು ಇಷ್ಟ. ಖಿನ್ಕಲಿ ಅವಳ ಇಷ್ಟವಾದ ಡಿಶ್. ಅವಳು ಕೇವಲ ಗೊಂಬೆಯಲ್ಲ, ಅದರೊಳಗೊಂದು ನಿಷ್ಕಲ್ಮಶವಾದ ಆತ್ಮವಿದೆ ಎಂದು ಯೋರಿ ಮಾರ್ಗೋಳ ಗುಣಗಳನ್ನ ಕೊಂಡಾಡಿದ್ದಾನೆ. ಇದನ್ನೂ ಓದಿ: ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ – ಮಹಿಳೆಯರಿಗಿಂತ ಡಾಲ್ ಉತ್ತಮ ಅಂದ

    ಮೊದಲಿಗೆ ಮಾರ್ಗೋ ಜೊತೆಗಿನ ಫೋಟೋಗಳನ್ನ ಹಂಚಿಕೊಂಡಾಗ ಎಲ್ಲರೂ ಆಕೆಯನ್ನ ನೋಡುತ್ತಾರೆ ಎಂದು ಅಸೂಯೆ ಎನಿಸಿ ಡಿಲೀಟ್ ಮಾಡಿದೆ. ಕೆಲವರು ನನ್ನನ್ನ ಸ್ಯಾಡಿಸ್ಟ್, ಲೈಂಗಿಕ ರೋಗಿ, ಸಲಿಂಗಿ ಹಲವು ಪದಗಳಿಂದ ನನ್ನನ್ನು ಕಟುವಾಗಿ ಟೀಕಿಸಿದರು. ಆದ್ರೆ ನಮ್ಮಿಬ್ಬರ ಬಾಂಧವ್ಯ ಮದುವೆಗಿಂತಲೂ ಅಮೂಲ್ಯವಾದದ್ದು. ಒಂದು ವರ್ಷದ ಹಿಂದೆ ಮಾರ್ಗೊಳ ಸೌಂದರ್ಯಕ್ಕೆ ಮಾರು ಹೋದ ನಾನು ಆಕೆಯನ್ನ ಪ್ರೀತಿಸತೊಡಗಿದೆ. ನಾನು ಲೈಂಗಿಕ ಪ್ರಕ್ರಿಯೆಯನ್ನು ಇಷ್ಟಪಡುತ್ತೇನೆ. ಲಿಂಗ ಮತ್ತು ಲೈಂಗಿಕ ದೃಷ್ಟಿಕೋನ ಇಲ್ಲಿ ಮುಖ್ಯವಲ್ಲ. ಮಾರ್ಗೊ ಜೊತೆಗಿನ ಲೈಂಗಿಕ ಜೀವನವನ್ನು ವಿವರಿಸುವುದು ಕಷ್ಟ ಎಂದು ಯೋರಿ ಹೇಳಿದ್ದಾನೆ.

  • ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ – ಮಹಿಳೆಯರಿಗಿಂತ ಡಾಲ್ ಉತ್ತಮ ಅಂದ

    ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ – ಮಹಿಳೆಯರಿಗಿಂತ ಡಾಲ್ ಉತ್ತಮ ಅಂದ

    ಬೀಜಿಂಗ್: ವ್ಯಕ್ತಿಯೊಬ್ಬ ನಿಜವಾದ ಮಹಿಳೆಯೊಂದಿಗೆ ಡೇಟ್ ಮಾಡುವುದಕ್ಕಿಂತ ಸೆಕ್ಸ್ ಡಾಲ್ ಜೊತೆ ಇರುವುದು ಉತ್ತಮ ಎಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇದೀಗ ಆತ ನಿಶ್ಚಿತಾರ್ಥ ಮಾಡಿಕೊಂಡ ಸೆಕ್ಸ್ ಡಾಲ್ ಹಾಗೂ ಅವರ ಬೇಬಿ ಡಾಲ್ ಜೊತೆ ಹಾಂಕಾಂಗ್‍ನಲ್ಲಿ ವಾಸವಾಗಿದ್ದಾನೆ.

    ಕ್ಸಿ ಟಿಯನ್‍ರಾಂಗ್(35) ಎಂಬಾತ ಮೋಚಿ ಎಂಬ ಗೊಂಬೆಯೊಂದಿಗೆ ಈ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಅಲ್ಲದೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆತನ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.

    ಇಲ್ಲಿಯವರೆಗೆ ನಾನು ಡಾಲನ್ನು ಚುಂಬಿಸಿಲ್ಲ ಎಂದು ಹೇಳಿದ್ದಾನೆ. ಯಾಕೆ ಚುಂಬಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ಚುಂಬಿಸಿದರೆ ಆಕೆಯ ಸೂಕ್ಷ್ಮವಾದ ತ್ವಚೆಗೆ ಎಲ್ಲಿ ಹಾನಿಯಾಗಬಹುದು ಎಂಬ ಉತ್ತರವನ್ನು ನೀಡಿದ್ದಾನೆ.

    ಹಾಂಕಾಂಗ್‍ನಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಇರುತ್ತಿದ್ದ ಗೊಂಬೆಗಳ ವೀಕ್ಷಿಸುತ್ತಿದ್ದ ಕ್ಸಿ ಕಳೆದ 10 ವರ್ಷಗಳಿಂದ ಅದರ ಮೇಲೆ ಆಕರ್ಷಣೆಗೆ ಒಳಗಾಗಿದ್ದಾನೆ. ಆಗ ಒಂದು ಗೊಂಬೆಯ ಬೆಲೆ 80,000 ಯುವಾನ್(ಅಂದಾಜು 9.7 ಲಕ್ಷ) ಇತ್ತು. ಆದರೆ ಆ ಸಮಯದಲ್ಲಿ ದುಡ್ಡು ಇರದ ಕಾರಣ ಖರೀದಿಸಲು ಸಾಧ್ಯವಾಗಿರಲಿಲ್ಲ.

    2019ರಲ್ಲಿ ಸಿಲಿಕೋನ್ ಡಾಲ್ ಇಂಟರ್‍ನೆಟ್‍ನಲ್ಲಿ ಮಾರಾಟಕ್ಕೆ ಇರುವುದನ್ನು ನೋಡಿ 1,0000 ಯುವಾನ್(11.34 ಲಕ್ಷ) ನೀಡಿ ಆನ್‍ಲೈನ್ ನಲ್ಲಿ ಆರ್ಡರ್ ಮಾಡಿ ಚೀನಾದಿಂದ ತರಿಸಿಕೊಂಡಿರುದಾಗಿ ತಿಳಿಸಿದ್ದಾನೆ. ಕ್ಸಿ ಟಿಯನ್‍ರಾಂಗ್ ರಾತ್ರಿ ಮಲಗಿರುವ ವೇಳೆ ಮೋಚಿ ಕುರ್ಚಿ ಮೇಲೆ ಕುಳಿತಿರುತ್ತಾಳೆ. ಅಲ್ಲದೆ ನಾನು ಆಕೆಯನ್ನು ಒದ್ದೆ ಬಟ್ಟೆಯಿಂದ ಸ್ನಾನ ಮಾಡಿಸಿ ಟಾಲ್ಕಮ್ ಪೌಡರ್ ಹಾಕುತ್ತೇನೆ ಎಂದು ತಿಳಿಸಿದ್ದಾನೆ.

    ಈ ಮೊದಲು ನನಗೆ ಗರ್ಲ್‍ಫ್ರೆಂಡ್ ಇದ್ದಳು. ಆದರೆ ನಾನು ಮೋಚಿಯನ್ನು ಗೌರವಿಸುತ್ತೇನೆ. ನನ್ನ ಗಮನ ಈಗ ಏನಿದ್ದರೂ ಮೋಚಿ ಮೇಲೆ ಮಾತ್ರ. ಇಲ್ಲಿಯವರೆಗೂ ನಾನು ಮೋಚಿಯೊಂದಿಗೆ ಲೈಂಗಿಕ ಸಂಬಂಧವನ್ನು ಕೂಡ ಹೊಂದಿಲ್ಲ. ಹಿಂದೆ ನನ್ನ ಗರ್ಲ್ ಫ್ರೆಂಡ್ ಯಾವಾಗಲೂ ನನಗೆ ಏನಾದರೂ ಕೊಡಿಸುವಂತೆ ಪೀಡಿಸುತ್ತಿದ್ದಳು. ಇಲ್ಲಿಯವರೆಗೂ ಮೋಚಿ ಮಾತ್ರ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾನೆ.

    ನನ್ನ ಹಳೆಯ ಗೆಳತಿ ಮೊಬೈಲ್‍ನನ್ನು ನೋಡುತ್ತಾ ನನ್ನ ಮೇಲೆ ಗಮನ ನೀಡುತ್ತಿರಲಿಲ್ಲ. ಆದರೆ ಮೋಚಿ ಹಾಗೇ ಮಾಡುವುದಿಲ್ಲ. ಅವಳ ಎಲ್ಲ ಗಮನವನ್ನು ನನ್ನ ಮೇಲೆ ಹರಿಸುತ್ತಾಳೆ. ಹಾಗಾಗಿ ನಿಜವಾದ ಮಹಿಳೆಗಿಂತ ಸೆಕ್ಸ್ ಡಾಲ್ ಜೊತೆ ಡೇಟ್ ಮಾಡುವುದು ಉತ್ತಮ ಎಂದು ಹೇಳಿದ್ದಾನೆ. ಮೋಚಿಗೆ ಮುದ್ದಾದ ಬಟ್ಟೆ ತೊಡಿಸಿ ಫೋಟೋವನ್ನು ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾನೆ.

  • ಕೆಲವೇ ದಿನಗಳಲ್ಲಿ ಮುರಿದು ಹೋಯ್ತು ಮದ್ವೆಯಾದ ಸೆಕ್ಸ್ ಡಾಲ್

    ಕೆಲವೇ ದಿನಗಳಲ್ಲಿ ಮುರಿದು ಹೋಯ್ತು ಮದ್ವೆಯಾದ ಸೆಕ್ಸ್ ಡಾಲ್

    – ಬಾಡಿಬಿಲ್ಡರ್ ವಿಚಿತ್ರ ಪ್ರೇಮ ಕಹಾನಿ
    – ಒಂದು ವರ್ಷದಿಂದ ಬೊಂಬೆ ಜೊತೆ ಡೇಟಿಂಗ್

    ನುರ್-ಸುಲ್ತಾನ್: ಪ್ರೀತಿಸಿ ಮದುವೆಯಾದ ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಬಾಡಿ ಬಿಲ್ಡರ್ ಓರ್ವ ಕಣ್ಣೀರಿಟ್ಟಿದ್ದಾನೆ. ಖಜಕಸ್ತಾನದ ಯೋರಿ ತುಲೋಚ್ಕೋ ನವೆಂಬರ್ ನಲ್ಲಿ ತಾನು ಮೆಚ್ಚಿದ ಡಾಲ್ ಮಾರ್ಗೋ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದನು. ಇದೀಗ ಗೊಂಬೆ ಮುರಿದಿದ್ದು, ಮೊದಲ ಕ್ರಿಸ್‍ಮಸ್ ಹಬ್ಬವನ್ನ ಒಂಟಿಯಾಗಿ ಆಚರಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ.

    ಕಳೆದ ಒಂದು ವರ್ಷದಿಂದ ಮಾರ್ಗೋ ಜೊತೆ ಯೋರಿ ಡೇಟಿಂಗ್ ನಲ್ಲಿದ್ದನು. ಮಾರ್ಚ್ ನಲ್ಲಿ ನಡೆಯಬೇಕಿದ್ದ ಯೋರಿ ಮತ್ತು ಮಾಗೋ ಮದುವೆ ಕೊರೊನಾದಿಂದ ಮುಂದೂಡಲ್ಪಟ್ಟಿತ್ತು. ಕೊನೆಗೆ ನವೆಂಬರ್ ನಲ್ಲಿ 12 ಜನರ ಸಮ್ಮುಖದಲ್ಲಿ ಗೊಂಬೆ ಬೆರಳಿಗೆ ಉಂಗುರ ತೊಡೆಸಿದ್ದನು. ನಮ್ಮ ಸಂಬಂಧ ಎಲ್ಲರಗಿಂತ ಭಿನ್ನವಾದದ್ದು ಎಂದು ಹೇಳಿ ಮಾರ್ಗೋ ತುಟಿಗೆ ತುಟಿಯನ್ನ ಸೇರಿಸಿದ್ದನು. ಯೋರಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇಡೀ ಜಗತ್ತಿನಲ್ಲೆಡೆ ಗುರುತಿಸಿಕೊಂಡಿದ್ದನು.

    ಮದುವೆಯಾದ ತಿಂಗಳಳೊಳಗೆ ಯೋರಿಯ ಪ್ರೀತಿ ಗೊಂಬೆ ಪತ್ನಿ ಮುರಿದಿದೆ. ಹಾಗಾಗಿ ಗೊಂಬೆಯನ್ನ ರಿಪೇರಿಗಾಗಿ ಬೇರೊಂದು ನಗರಕ್ಕೆ ಕಳುಹಿಸಿರುವ ಯೋನಿ ಒಂಟಿತನದ ದಿನಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾನೆ. ಅವಳು ಶೀಘ್ರದಲ್ಲೇ ಮನೆಗೆ ಹಿಂದಿರುಗಲಿದ್ದಾಳೆ ಅಂತ ಯೋರಿ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ಸದ್ಯ ಗೆಳೆಯರೊಂದಿಗೆ ದಿನಗಳನ್ನ ಕಳೆಯುತ್ತಿರೋದಾಗಿ ಯೋರಿ ಹೇಳಿದ್ದಾನೆ.

    ಅವಳಿಗೆ ಒಬ್ಬಳಿಗೆ ನಡೆಯಲು ಆಗಲ್ಲ. ಅಡುಗೆ ಮಾಡಲು ಸಹ ಬರಲ್ಲ. ಆದ್ರೆ ಆಕೆಗೆ ಜಾರ್ಜಿಯನ್ ಕಸೀನ್ ಅಂದ್ರೆ ಬಲು ಇಷ್ಟ. ಖಿನ್ಕಲಿ ಅವಳ ಇಷ್ಟವಾದ ಡಿಶ್. ಅವಳು ಕೇವಲ ಗೊಂಬೆಯಲ್ಲ, ಅದರೊಳಗೊಂದು ನಿಷ್ಕಲ್ಮಶವಾದ ಆತ್ಮವಿದೆ ಎಂದು ಯೋರಿ ಮಾರ್ಗೋಳ ಗುಣಗಳನ್ನ ಕೊಂಡಾಡಿದ್ದಾನೆ.

    ಮೊದಲಿಗೆ ಮಾರ್ಗೋ ಜೊತೆಗಿನ ಫೋಟೋಗಳನ್ನ ಹಂಚಿಕೊಂಡಾಗ ಎಲ್ಲರೂ ಆಕೆಯನ್ನ ನೋಡುತ್ತಾರೆ ಎಂದು ಅಸೂಯೆ ಎನಿಸಿ ಡಿಲೀಟ್ ಮಾಡಿದೆ. ಕೆಲವರು ನನ್ನನ್ನ ಸ್ಯಾಡಿಸ್ಟ್, ಲೈಂಗಿಕ ರೋಗಿ, ಸಲಿಂಗಿ ಹಲವು ಪದಗಳಿಂದ ನನ್ನನ್ನು ಕಟುವಾಗಿ ಟೀಕಿಸಿದರು. ಆದ್ರೆ ನಮ್ಮಿಬ್ಬರ ಬಾಂಧವ್ಯ ಮದುವೆಗಿಂತಲೂ ಅಮೂಲ್ಯವಾದದ್ದು. ಒಂದು ವರ್ಷದ ಹಿಂದೆ ಮಾರ್ಗೊಳ ಸೌಂದರ್ಯಕ್ಕೆ ಮಾರು ಹೋದ ನಾನು ಆಕೆಯನ್ನ ಪ್ರೀತಿಸತೊಡಗಿದೆ. ನಾನು ಲೈಂಗಿಕ ಪ್ರಕ್ರಿಯೆಯನ್ನು ಇಷ್ಟಪಡುತ್ತೇನೆ. ಲಿಂಗ ಮತ್ತು ಲೈಂಗಿಕ ದೃಷ್ಟಿಕೋನ ಇಲ್ಲಿ ಮುಖ್ಯವಲ್ಲ. ಮಾರ್ಗೊ ಜೊತೆಗಿನ ಲೈಂಗಿಕ ಜೀವನವನ್ನು ವಿವರಿಸುವುದು ಕಷ್ಟ ಎಂದು ಯೋರಿ ಹೇಳಿದ್ದಾನೆ.

    ಸದ್ಯ ಮುರಿತಕ್ಕೊಳ್ಳಗಾಗಿರುವ ಗೊಂಬೆಯನ್ನ ರಿಪೇರಿಗೆ ಬೇರೆ ಕಡೆ ಕಳುಹಿಸಿದ್ದು, ಆಕೆಯ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ ಯೋರಿ ಕಾಯುತ್ತಿದ್ದಾನೆ.

  • ತಂದೆಗಾಗಿ ಮರದ ಬೊಂಬೆ ಜೊತೆ ಮಗ ಮದುವೆ

    ತಂದೆಗಾಗಿ ಮರದ ಬೊಂಬೆ ಜೊತೆ ಮಗ ಮದುವೆ

    ಲಕ್ನೋ: ಕೊರೊನಾ ಲಾಕ್‍ಡೌನ್ ನಡುವೆಯೂ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬ ಬೊಂಬೆ ಜೊತೆ ಮದುವೆಯಾಗಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    90 ವರ್ಷದ ಶಿವ ಮೋಹನ್ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳುವುದಕ್ಕೆ ಮಗನಿಗೆ ಬೊಂಬೆ ಜೊತೆ ಮದುವೆ ಮಾಡಿಸಿದ್ದಾರೆ. ಅದರಂತೆಯೇ ತಂದೆಯ ಕೊನೆ ಆಸೆಗಾಗಿ ಮಗ ಮರದ ಬೊಂಬೆ ಜೊತೆ ಮದುವೆ ಮಾಡಿಕೊಂಡಿದ್ದಾನೆ.

    “ನನಗೆ 9 ಗಂಡು ಮಕ್ಕಳಿದ್ದಾರೆ, ಅವರಲ್ಲಿ ಎಂಟು ಮಂದಿಗೆ ಮದುವೆಯಾಗಿದೆ. ಆದರೆ ಕಿರಿಯವನಿಗೆ ಯಾವುದೇ ಆಸ್ತಿ ಇಲ್ಲ ಮತ್ತು ಬುದ್ಧಿವಂತನೂ ಅಲ್ಲ. ಆದ್ದರಿಂದ ನಾನು ಅವನನ್ನು ಬೊಂಬೆಯ ಜೊತೆ ಮದುವೆ ಮಾಡಿಸಿದ್ದೇನೆ” ಎಂದು ತಂದೆ ಶಿವ ಮೋಹನ್ ತಿಳಿಸಿದರು.

    ಮರದಲ್ಲಿ ಮಾಡಿದ್ದ ವಧು ಬೊಂಬೆಗೆ ಕೆಂಪು ರೇಷ್ಮೆ ಮತ್ತು ಹೂವುಗಳಿಂದ ಅಲಂಕರ ಮಾಡಲಾಗಿತ್ತು. ಅಲ್ಲದೇ ವಿವಾಹದ ಸಂದರ್ಭದಲ್ಲಿ ನಡೆಸಲಾಗುವ ಎಲ್ಲಾ ಶಾಸ್ತ್ರಗಳನ್ನೂ ಮಾಡುವ ಮೂಲಕ ಬೊಂಬೆ ಜೊತೆ ಮದುವೆ ಮಾಡಲಾಗಿದೆ. ಅಂದರೆ ವಧು-ವರ ಹೂಮಾಲೆ ಬದಲಾಯಿಸಿಕೊಳ್ಳುವುದು, ವಿವಾಹವಾದ ಬಳಿಕ ಸಪ್ತಪದಿ ತುಳಿಯುವುದು ಸೇರಿದಂತೆ ಪ್ರತಿಯೊಂದು ಶಾಸ್ತ್ರವನ್ನು ಮಾಡಲಾಗಿದೆ. ಮದುವೆಯನ್ನು ಮಾಡಿಸಲು ಪುರೋಹಿತರು ಕೂಡ ಹಾಜರಿದ್ದರು.

    ಶಿವ್ ಮೋಹನ್ ಸಾಯುವ ತಮ್ಮ ಎಲ್ಲ ಗಂಡು ಮಕ್ಕಳ ಮದುವೆಯನ್ನು ನೋಡಬೇಕೆಂದು ಆಸೆಪಟ್ಟಿದ್ದರು. ಆದರೆ ಕೊನೆಗೆ ಮಗನಿಗೆ ಇನ್ನೂ ಮದುವೆಯಾಗಿರಲಿಲ್ಲ. ಹೀಗಾಗಿ ಬೊಂಬೆ ಜೊತೆ ಮದುವೆ ಮಾಡಿಸಲಾಗಿದೆ ಎಂದು ಕುಟುಂಬದರು ತಿಳಿಸಿದ್ದಾರೆ. ಈ ಮದುವೆಯಲ್ಲಿ ಕೆಲ ಸಂಬಂಧಿಕರು ಸಹ ಹಾಜರಿದ್ದರು.

  • ಬಾಲಕಿ ಮೂಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊಂಬೆಯ ಶೂ ತೆಗೆಯಲು 2.12 ಲಕ್ಷ ರೂ. ಬಿಲ್

    ಬಾಲಕಿ ಮೂಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊಂಬೆಯ ಶೂ ತೆಗೆಯಲು 2.12 ಲಕ್ಷ ರೂ. ಬಿಲ್

    ವಾಷಿಂಗ್ಟನ್: ಮಗುವಿನ ಮೂಗಿನಲ್ಲಿ ಸಿಕ್ಕಿಕೊಂಡ ಗೊಂಬೆಯ ಶೂ ತೆಗೆಯಲು ವೈದ್ಯರೊಬ್ಬರು 3,000 ಡಾಲರ್(2.13 ಲಕ್ಷ ರೂ.) ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಲಾಸ್ ವೆಗಾಸ್‍ನಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಮೂಗಿನಲ್ಲಿ ಸಿಕ್ಕಿಹಾಕಿಕೊಂಡ ಶೂ ತೆಗೆಸಲು ಲೂಸಿ ಬ್ರಾನ್ಸನ್‍ಳ ತಾಯಿ ಕ್ಯಾಟಿ ಹೆಂಡರ್ಸನ್‍ನಲ್ಲಿರುವ ಸೇಂಟ್ ರೋಸ್ ಡೊಮಿನಿಕೇನ್ ಸೈನಾ ಕ್ಯಾಂಪಸ್‍ನಲ್ಲಿರುವ ಡಿಗ್ನಿಟಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದಾರೆ.

    3 ವರ್ಷದ ಮಗು ಲೂಸಿ ಬ್ರಾನ್ಸನ್‍ಳ ಮೂಗಿನ ಎರಡೂ ಹೊಳ್ಳೆಯಲ್ಲಿ ಗೊಂಬೆಯ ಕಾಲಿನ ಶೂಗಳು ಸಿಕ್ಕಿ ಹಾಕಿಕೊಂಡಿತ್ತು. ಒಂದು ಶೂವನ್ನು ತೆಗೆಯಲು ತಾಯಿ ಕ್ಯಾಟಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೊಂದು ಶೂವನ್ನು ತೆಗೆಯುವಲ್ಲಿ ವಿಫಲರಾಗಿದ್ದಾರೆ. ನಂತರ ಮಗುವನ್ನು ಡಿಗ್ನಿಟಿ ಹೆಲ್ತ್ ಸೆಂಟರ್‍ಗೆ ಕರೆದೊಯ್ದಿದ್ದಾರೆ. ವೈದ್ಯರು ಶೂ ತೆಗೆದಿದ್ದು ಇಷ್ಟಕ್ಕೇ 2.13 ಲಕ್ಷ ರೂ. ಬಿಲ್ ಮಾಡಿದ್ದಾರೆ. ತನ್ನ ಇಮೇಲ್‍ನಲ್ಲಿ ಇಷ್ಟು ಮೊತ್ತದ ಬಿಲ್ ನೋಡಿದ ಮಗುವಿನ ತಾಯಿ ಕ್ಯಾಟಿ ಶಾಕ್ ಆಗಿದ್ದಾರೆ.

    ಬಿಲ್ ನೋಡಿದ ನಂತರ ನನಗೆ ಇದು ತಪ್ಪು ಎನ್ನುವುದು ತಿಳಿಯಿತು. ಬಹುಶಃ ಇವರು ಇನ್ಶೂರೆನ್ಸ್ ದರವನ್ನು ಸರಿಯಾಗಿ ಪರಿಗಣಿಸಿಲ್ಲದಿರಬಹುದು, ಇಲ್ಲವೇ ತಪ್ಪಾಗಿ ಬಿಲ್ ನೀಡಿರಬಹುದು ಎಂದು ಭಾವಿಸಿದೆ. ನಂತರ ತಪ್ಪಾಗಿ ಬಿಲ್ ನೀಡಲಾಗಿಲ್ಲ ಎನ್ನುವುದು ತಿಳಿಯಿತು ಎಂದು ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.

    ನಂತರ ಅವರು ಹೈ ಡಿಟೆಕ್ಟೆಬಲ್ ಮೆಡಿಕಲ್ ಪಾಲಿಸಿ ಪ್ರಕಾರ ಬಿಲ್ ಕಡಿಮೆ ಮಾಡಿಸಿ 1.21 ಲಕ್ಷ ರೂ. ಕಟ್ಟಿ ಬಂದಿದ್ದಾರೆ.

    ಜುಲೈನಲ್ಲಿ ನಟ ರಾಹುಲ್ ಭೋಸ್ ಚಂಢೀಗಡದ ಖಾಸಗಿ ಹೋಟೆಲ್‍ನಲ್ಲಿ ಬಾಳೆಹಣ್ಣು ಖರೀದಿಸಿದಾಗ ಅವರಿಗೆ 442.50 ರೂ. ಬಿಲ್ ನೀಡಲಾಗಿತ್ತು. ಈ ವಿಡಿಯೋವನ್ನು ಭೋಸ್ ಅವರು ಸಾಮಾಜಿಕ ಜಾಲvತಾಣಗಳಲ್ಲಿ ಹಾಕಿದ್ದರು. ಈ ಕುರಿತು ಸಾಕಷ್ಟು ಚರ್ಚೆಯಾಗಿತ್ತು.

  • ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ಬೆಂಗಳೂರು: ದಸರಾ ಬಂದರೆ ಕಣ್ಮುಂದೆ ಬರುವುದೇ ಮೈಸೂರು, ಮೈಸೂರು ಅರಮನೆ, ಅಂಬಾರಿ ಜೊತೆಗೆ ದಸರಾ ಹಬ್ಬದ ವಿಶೇಷ ಬೊಂಬೆಗಳು. ಬೊಂಬೆಗಳ ಹಬ್ಬದಲ್ಲಿ ಇಲ್ಲೊಬ್ಬ ಮಗ ತನ್ನ ತಾಯಿಗಾಗಿ ಬೆಂಗಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ್ದಾನೆ.

    ಅನೇಕ ವರ್ಷಗಳಿಂದ ತಾಯಿ ತ್ರಿಪುರ ಸಂಪತ್‍ಗೆ ಮನೆಯಲ್ಲಿ ನೂರಾರು ಬೊಂಬೆಗಳನ್ನು ಕೂರಿಸಿ ಹಬ್ಬವನ್ನು ಮಾಡಿಕೊಂಡು ಬಂದಿದ್ದಾರೆ. ದಸರಾ ಬೊಂಬೆಗಳ ಜೊತೆ ಅರಮನೆಯ ಮಾದರಿಯನ್ನು ತಂದು ಕೂರಿಸೋಣ ಎಂದು ತಾಯಿ ಆಸೆಪಟ್ಟಿದ್ದಾರೆ. ಮಗ ವಸಂತ ಕುಮಾರ್ ಹೊರಗಿನಿಂದ ಯಾಕೆ ತರುವುದು ನಾನೇ ಅರಮನೆ ಮಾಡಿಕೊಡುತ್ತೇನೆ ಎಂದು ಅರಮನೆಯನ್ನು ಮರದಿಂದ ಮಾಡಿದ್ದಾರೆ.

    ತಾಯಿಯ ಆಸೆಯನ್ನು ಪೂರೈಸಲು ನಮ್ಮ ಯಜಮಾನರು ಎಂಟು ತಿಂಗಳು ಶ್ರಮ ಪಟ್ಟಿದ್ದಾರೆ. ರಾತ್ರಿ ಕೆಲಸದಿಂದ ಬಂದ ಮೇಲೆ ಅರಮನೆ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದರು. ಮೈಸೂರು ಅರಮನೆ ಹೇಗಿದೇಯೋ ಅದೇ ರೀತಿ ಪೈಟಿಂಗ್ ಮಾಡಿ ಲೈಟ್ಸ್ ಹಾಕಿ ಮಾಡಿದರು ಎಂದು ವಸಂತ ಕುಮಾರ್ ಪತ್ನಿ ನಂದಿನಿ ತಿಳಿಸಿದ್ದಾರೆ.

    ದಸರಾ ಹಬ್ಬಕ್ಕಾಗಿ ತಾಯಿಯ ಆಸೆಯನ್ನು ಪೂರೈಸಲು ಅರಮನೆ ಮಾಡಿರುವ ವಸಂತ ಕುಮಾರ್ ಅವರ ಕಲೆಯನ್ನು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ಬೆಂಗಳೂರು: ನಾಡಹಬ್ಬ ದಸರಾಕ್ಕೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ದಸರಾ ಅಂದರೆ ಮೊದಲು ನೆನಪಾಗೋದು ಜಂಬು ಸವಾರಿ ಹಾಗೂ ಗೊಂಬೆಗಳು. ನವರಾತ್ರಿಯ ಪೂರ್ವ ತಯಾರಿಯಾಗಿ ಅಂದ-ಚೆಂದದ ಗೊಂಬೆಗಳು ಬೆಂಗಳೂರಿಗೆ ಲಗ್ಗೆಯಿಟ್ಟಿದ್ದು, ಎಲ್ಲರನ್ನು ಕೈ ಬೀಸಿ ಕರೆಯುತ್ತಿವೆ.

    ನಗರದ ಮಲ್ಲೇಶ್ವರಂ, ಗಾಂಧಿ ಬಜಾರ್, ಚಿಕ್ಕಪೇಟೆ, ಕೆ.ಆರ್ ಮಾರುಕಟ್ಟೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಎಲ್ಲೆಡೆ ದಸರಾ ಗೊಂಬೆಗಳು ಮಾರಾಟವಾಗುತ್ತಿವೆ. ಇಲ್ಲಿ ಸರಿಸುಮಾರು 500 ವರ್ಷಗಳಿಂದ ಮೈಸೂರು ಸೇರಿದಂತೆ ಹಲವೆಡೆಯಿಂದ ಬಂದಿರೋ ಬೊಂಬೆ ಕೂಡಿಸುವ ಪದ್ಧತಿಯಿದೆ. ಇಲ್ಲಿ ಕಟ್ಟಿಗೆಯಲ್ಲಿ ಕಟ್ಟಿದ ಮೈಸೂರು ಅರಮನೆ, ಅದರ ಮುಂದೆ ಜಂಬೂ ಸವಾರಿ ಮತ್ತು ರಾಜದರ್ಬಾರ್ ಗೊಂಬೆಗಳು ಮನಸೂರೆಗೊಳಿಸುತ್ತಿವೆ.

    ಜೊತೆಗೆ ತಲೆಯಾಡಿಸುವ ನರ್ತಕಿ, ಗಣೇಶ, ಸಂಗೀತಗಾರರು, ಮಕ್ಕಳ ಆಟಿಕೆಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಈ ಬಾರಿಯ ವಿಶೇಷವೆಂದರೆ ದಶವತಾರ ಗೊಂಬೆಗಳು. ಈ ಮುದ್ದು ಮುದ್ದಾದ ಗೊಂಬೆಗಳಿಗೆ ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ಒಂದೊಂದು ಗೊಂಬೆಗಳು ಒಂದೊಂದು ಕಥೆ ಹೇಳುತ್ತಿದ್ದು, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿವೆ. 50 ರೂಪಾಯಿಂದ ಹಿಡಿದು 5 ಸಾವಿರ ರೂ. ಮೌಲ್ಯದ ಗೊಂಬೆಗಳೂ ಸಿಗುತ್ತಿವೆ.

  • ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ನವದೆಹಲಿ: ಗೊಂಬೆಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು 11 ತಿಂಗಳ ಮಗುವಿನ ಕಾಲು ನೋವನ್ನು ಗುಣಪಡಿಸಿದ ಅಪರೂಪದ ಸಂಗತಿಯೊಂದು ರಾಷ್ಟ್ರರಾಜಧಾನಿ ನವದೆಹಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

    11 ತಿಂಗಳ ಮಗು ಝಿಕ್ರಾಳ ಕಾಲು ಮೂಳೆ ಮುರಿದು ಹೋಗಿತ್ತು. ಈ ವೇಳೆ ಮಗುವಿನ ಜೊತೆಗೆ ಆಕೆಯ ಗೊಂಬೆಗೂ ಕೂಡ ಚಿಕಿತ್ಸೆ ನೀಡಲಾಯಿತು. ಮಗು 13 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗೊಂಬೆ ಆ ಮಗುವಿಗೆ ಸಾಥ್ ನೀಡಿದೆ. ಝಿಕ್ರಾ, ಮಹಮ್ಮದ್ ಶಹಜಾದ್ ಮಲಿಕ್ ಮಗಳಾಗಿದ್ದು ಇವರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. 13 ದಿನಗಳ ಹಿಂದೆ ಝಿಕ್ರಾ ಮಲಗಿದ್ದಾಗ ಹಾಸಿಗೆ ಮೇಲಿಂದ ಕೆಳಗೆ ಬಿದಿದ್ದಳು. ಆಗ ಅವರ ತಂದೆ ಮಲಿಕ್ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

    ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಾಗ ವೈದ್ಯರು ಎಕ್ಸ್ ರೇ ಮಾಡಿದ್ದಾರೆ. ಈ ವೇಳೆ ಕಾಲು ಫ್ರ್ಯಾಕ್ಚರ್ ಆಗಿರುವ ವಿಷಯ ತಿಳಿದು ಬಂದಿದೆ. ಆಗ ವೈದ್ಯರು ಟ್ರ್ಯಾಕ್ಷನ್ ರಾಡ್ ಮೂಲಕ ಚಿಕಿತ್ಸೆ ನೀಡಬೇಕಾಯಿತು. ಚಿಕ್ಕ ಮಕ್ಕಳಿಗೆ ಟ್ರ್ಯಾಕ್ಷನ್ ರಾಡ್ ಹಾಕಿದರೆ ಕಾಲುಗಳನ್ನು ಮೇಲೆ ಕಟ್ಟಬೇಕಾಗುತ್ತದೆ. ಹೀಗೆ ಮಾಡಿದರೆ ಕಾಲಿನ ಮೂಳೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಹೀಗಾಗಿ ಚಿಕಿತ್ಸೆಗೆಂದು ಝಿಕ್ರಾಳನ್ನು ವೈದ್ಯರು ಹಾಸಿಗೆ ಮೇಲೆ ಮಲಗಿಸಿದಾಗ ಆಕೆ ಒಂದೇ ಕಡೆ ಮಲಗುತ್ತಿರಲಿಲ್ಲ. ಹಾಗಾಗಿ ವೈದ್ಯರಿಗೆ ಝಿಕ್ರಾಳಿಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತಿತ್ತು. ಅಲ್ಲದೆ ಆಕೆಯ ಕಾಲಿಗೆ ಬ್ಯಾಂಡೇಜ್ ಹಾಕಲು ಆಗುತ್ತಿರಲಿಲ್ಲ. ಝಿಕ್ರಾ ನೋವಿನಿಂದ ನರಳುತ್ತಿದ್ದಳು. ಈ ವೇಳೆ ಝಿಕ್ರಾ ತಾಯಿ ಫರೀನ್‍ಗೆ ಆಕೆಯ ಅಜ್ಜಿ ನೀಡಿದ ಗೊಂಬೆ ನೆನಪಾಗಿದೆ. ಝಿಕ್ರಾ ಈ ಗೊಂಬೆಯನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಬಳಿಕ ಫರೀನ್ ಆ ಗೊಂಬೆಯನ್ನು ಆಸ್ಪತ್ರೆಗೆ ತಂದಾಗ ಝಿಕ್ರಾ ಖುಷಿಪಟ್ಟಿದ್ದಾಳೆ.

    ಝಿಕ್ರಾಗೆ ಬ್ಯಾಂಡೇಜ್ ಹಾಕುವ ಮೊದಲು ವೈದ್ಯರು ಗೊಂಬೆಗೆ ಬ್ಯಾಂಡೇಜ್ ಹಾಕಿದ್ದಾರೆ. ಇದನ್ನು ನೋಡಿದ ಝಿಕ್ರಾ ಸುಮ್ಮನೆ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದಾಳೆ. ಈಗ ಝಿಕ್ರಾ ಹಾಗೂ ಆಕೆಯ ಗೊಂಬೆ ‘ಪರಿ’ ಒಂದೇ ಹಾಸಿಗೆಯಲ್ಲಿ ದಾಖಲಾಗಿದ್ದಾರೆ. ಗೊಂಬೆ ಇಲ್ಲದಿದ್ದರೆ ಮಗುವಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿತ್ತು. ಗೊಂಬೆಯ ಕಾರಣ ಝಿಕ್ರಾ ಖುಷಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳು ಆದಷ್ಟು ಬೇಗ ಸರಿಹೋಗಲಿ. ಬೇರೆ ವಿಭಾಗದ ವೈದ್ಯರು ಕೂಡ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಝಿಕ್ರಾ ತಂದೆ ಹೇಳಿದ್ದಾರೆ.

  • ಸಿದ್ದರಾಮಯ್ಯ ಕಾರಿನಲ್ಲಿ ಗೊಂಬೆ ಪತ್ತೆ

    ಸಿದ್ದರಾಮಯ್ಯ ಕಾರಿನಲ್ಲಿ ಗೊಂಬೆ ಪತ್ತೆ

    ದಾವಣಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸುತ್ತಿದ್ದು, ಸಿಬ್ಬಂದಿ ಹೆಲಿಪ್ಯಾಡ್ ಮತ್ತು ಸಿದ್ದರಾಮಯ್ಯ ಪ್ರಯಾಣ ಮಾಡುವ ಕಾರು ತಪಾಸಣೆ ಮಾಡಿದ್ದಾರೆ.

    ತಪಾಸಣೆಯ ವೇಳೆ ಸಿದ್ದರಾಮಯ್ಯ ಕಾರಿನಲ್ಲಿ ಒಂದು ಸಣ್ಣ ಆಟ ಸಾಮಾನಿನ ಗೊಂಬೆ ಪತ್ತೆಯಾಗಿದೆ. ಅದನ್ನು ಸಿಬ್ಬಂದಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    ಸಿದ್ದರಾಮಯ್ಯ ದಾವಣಗೆರೆ ಲೋಕಸಭಾ ಅಭ್ಯರ್ಥಿ ಹೆಚ್.ಬಿ ಮಂಜಪ್ಪರ ಪರ ಮತಯಾಚಿಸಲಿದ್ದಾರೆ. ಮಧ್ಯಾಹ್ನದ ವೇಳೆಗೆ ದಾವಣಗೆರೆ ತಾಲೂಕಿನ ತ್ಯಾವಣಗಿ, ಉಚ್ಚಂಗಿದುರ್ಗದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ.

    ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಪರ ತೇಜಸ್ವಿ ಸೂರ್ಯ ಪ್ರಚಾರ ಮಾಡಲಿದ್ದಾರೆ. ಚನ್ನಗಿರಿ ಹಾಗೂ ಹರಿಹರದಲ್ಲಿ ರೋಡ್ ಶೋ ಮೂಲಕ ತೇಜಸ್ವಿ ಸೂರ್ಯ ಮತಯಾಚನೆ ಮಾಡಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ಎರಡೇ ದಿನ ಬಾಕಿ ಇದ್ದು, ರಾಜಕೀಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.