Tag: doctors

  • ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಸರ್ಕಾರಿ ವೈದ್ಯ

    ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಸರ್ಕಾರಿ ವೈದ್ಯ

    ರಾಮನಗರ: ಸರ್ಕಾರಿ ವೈದ್ಯರೊಬ್ಬರು ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ರಾಮನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ವೈದ್ಯ. ನಾರಾಯಣಸ್ವಾಮಿ ಅವರು ರೋಗಿಯನ್ನು ಡಿಸ್ಚಾರ್ಜ್ ಮಾಡಲು ಮೂರು ಸಾವಿರ ರೂಪಾಯಿಗೆ ಭೇಟಿಕೆ ಇಟ್ಟಿದ್ದ. ಹೀಗಾಗಿ ರೋಗಿಯ ಸಂಬಂಧಿಕರಿಂದ ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿಯೇ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

    ಸರ್ಕಾರಿ ಜಿಲ್ಲಾಸ್ಪತ್ರೆಗೆ ಅಪೆಂಡಿಕ್ಸ್ ಹಿನ್ನೆಲೆಯಲ್ಲಿ ರೋಗಿಯೊಬ್ಬರು ದಾಖಲಾಗಿದ್ದರು. ರೋಗಿಗೆ ಶಸ್ತ್ರಚಿಕಿತ್ಸೆ ಒಳಗಾಗಬೇಕು ಎಂದು ಡಾ.ನಾರಾಯಣಸ್ವಾಮಿ ತಿಳಿಸಿದ್ದಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಸಾವಿರಾರು ರೂಪಾಯಿಗಳು ಖರ್ಚಾಗುತ್ತೆ. ಹೀಗಾಗಿ ನಾನು ಮಾಡಿರುವ ಶಸ್ತ್ರಚಿಕಿತ್ಸೆಗೆ 10 ಸಾವಿರ ರೂಪಾಯಿ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರು.

    ಎಸಿಬಿ ಬಲೆಗೆ ಬಿದ್ದಿರುವ ವೈದ್ಯ ನಾರಾಯಣಸ್ವಾಮಿ ಅವರು ಏಳು ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಪಡೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದರು. ಉಳಿದ 3,000 ರೂ.ಯನ್ನು ಶಸ್ತ್ರಚಿಕಿತ್ಸೆ ವೇಳೆ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೋಗಿಯನ್ನು ಡಿಸ್ಚಾರ್ಜ್ ಮಾಡುವುದನ್ನು ತಡೆದಿದ್ದರು. ಅಷ್ಟೇ ಅಲ್ಲದೆ ಹಣ ನೀಡಿಯೇ ರೋಗಿಯನ್ನು ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದರು. ಅದರಂತೆ ಇಂದು ರೋಗಿಯನ್ನ ಡಿಸ್ಚಾರ್ಜ್ ಮಾಡುವಾಗ ಹಣವನ್ನ ಪಡೆಯುತ್ತಿದ್ದ ವೈದ್ಯ ನಾರಾಯಣಸ್ವಾಮಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

  • ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಯಾದಗಿರಿ: ಚಲಿಸುತ್ತಿರುವ ಆಟೋದಲ್ಲಿಯೇ ಹೆರಿಗೆಯಾಗಿರುವ ಘಟನೆ ಯಾದಗಿರಿ ನಗರದ ಮಧ್ಯ ಭಾಗದಲ್ಲಿ ತಡರಾತ್ರಿ ನಡೆದಿದೆ.

    ದೇವಿ ಎಂಬಾಕೆ ಮಾರ್ಗ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದೇವಿ ಯಾದಗಿರಿ ತಾಲೂಕಿನ ಮುದ್ನಾಳ ತಾಂಡದ ನಿವಾಸಿಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ದಾಖಲೆಗಳು ಸರಿಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಹೆರಿಗೆ ನೋವು ಅನುಭವಿಸುತ್ತಿದ್ದ ದೇವಿಯನ್ನು ತಡರಾತ್ರಿ ವೈದ್ಯರು ವಾಪಸ್ ಕಳುಹಿಸಿದ್ದಾರೆ.

    ವಾಪಸ್ ಹೋಗುವಾಗ ಆಟೋದಲ್ಲೇ ಹೆರಿಯಾಗಿದೆ. ಸದ್ಯಕ್ಕೆ ದೇವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಮುದ್ನಾಳ ಯಾದಗಿರಿಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಸ್ವಗ್ರಾಮವಾಗಿದ್ದು, ಸ್ವತಃ ಶಾಸಕರ ಗ್ರಾಮದ ಸರ್ಕಾರಿ ಆಸ್ಪತ್ರೆಯ ವೈದ್ಯರು ಈ ರೀತಿ ಅಮಾನವೀಯತೆ ಪ್ರದರ್ಶನ ಮಾಡಿದ್ದು, ದೇವಿ ಅವರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

  • ಪೇಜಾವರಶ್ರೀ ಆರೋಗ್ಯ ಸ್ಥಿರ- ಬೆಂಗಳೂರು ವೈದ್ಯರು ಇಂದು ಮಣಿಪಾಲಕ್ಕೆ

    ಪೇಜಾವರಶ್ರೀ ಆರೋಗ್ಯ ಸ್ಥಿರ- ಬೆಂಗಳೂರು ವೈದ್ಯರು ಇಂದು ಮಣಿಪಾಲಕ್ಕೆ

    ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಎಂಟನೇ ದಿನ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿದಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಇಂದು ಬೆಂಗಳೂರಿನ ತಜ್ಞ ವೈದ್ಯರು ಆಗಮಿಸುವ ಸಾಧ್ಯತೆಯಿದೆ.

    ಈ ಹಿಂದೆ ಎರಡು ದಿನ ಮಣಿಪಾಲದಲ್ಲೇ ಇದ್ದು ಮೇಲ್ವಿಚಾರಣೆ ನಡೆಸಿ ವಾಪಾಸ್ ತೆರಳಿದ್ದ ತಜ್ಞ ವೈದ್ಯರು, ಇದೀಗ ಮತ್ತೆ ಬಂದು ಶ್ರೀಗಳ ಆರೋಗ್ಯದ ರಿಪೋರ್ಟ್ ಸದ್ಯದ ಕಂಡೀಶನ್ ಪರಿಶೀಲನೆ ಮಾಡಲಿದ್ದಾರೆ. ರಕ್ತದೊತ್ತಡ ಮತ್ತು ಮಧುಮೇಹ ಸಹಜ ಸ್ಥಿತಿಯಲ್ಲಿದೆ. ಕಫ ಬಹುತೇಕ ಕರಗಿಯಾಗಿದೆ ಎಂಬ ಮಾಹಿತಿಯಿದೆ.

    ಶ್ವಾಸಕೋಶದ ಸಮಸ್ಯೆ ಮಾತ್ರ ಕಾಣಿಸುತ್ತಿದೆ. ಗುರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪೇಜಾವರ ಮಠದ ಭಕ್ತ ವಾಸುದೇವ ಭಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಕಳೆದ ರಾತ್ರಿ ಕೆಎಂಸಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ವಿಶ್ವೇಶತೀರ್ಥ ಸ್ವಾಮೀಜಿಯ ಪ್ರಜ್ಞಾ ಸ್ಥಿತಿಯಲ್ಲಿ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

    ಕಳೆದ 24 ಗಂಟೆಗೆ ಹೋಲಿಸಿದರೆ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲೆ ಮುಂದುವರಿದಿದೆ. ಪೇಜಾವರ ಶ್ರೀಗಳು ಜೀವ ರಕ್ಷಕ ಸಾಧನಗಳ ಅಳವಡಿಕೆಯಲ್ಲಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದರು. ಕಳೆದ ಶುಕ್ರವಾರ ಬೆಳಗ್ಗಿನ ಜಾವ 5 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಅಡ್ಮಿಟ್ ಮಾಡಲಾಗಿತ್ತು.

  • ನ್ಯುಮೋನಿಯಾಕ್ಕೆ ಹಲವು ದಿನದ ಚಿಕಿತ್ಸೆ ಅವಶ್ಯಕ: ನೀರಾ ರಾಡಿಯಾ

    ನ್ಯುಮೋನಿಯಾಕ್ಕೆ ಹಲವು ದಿನದ ಚಿಕಿತ್ಸೆ ಅವಶ್ಯಕ: ನೀರಾ ರಾಡಿಯಾ

    ಉಡುಪಿ: ನ್ಯುಮೋನಿಯಾಕ್ಕೆ ಹಲವು ದಿನ ಚಿಕಿತ್ಸೆ ಬೇಕು. ಪೇಜಾವರ ಶ್ರೀಗಳ ಆರೋಗ್ಯ ಸದ್ಯ ಸ್ಥಿರವಾಗಿದೆ. ಸಂಪೂರ್ಣ ಸುಧಾರಿಸಲು ಸಮಯಾವಕಾಶ ಬೇಕಾಗಬಹುದು ಎಂದು ಪೇಜಾವರ ಶ್ರೀ ಶಿಷ್ಯೆ, ಕಾರ್ಪೊರೇಟ್ ಜಗತ್ತಿನ ಪ್ರಭಾವಿ ನೀರಾ ರಾಡಿಯಾ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ನ್ಯುಮೋನಿಯಾಗೆ ಕೆಲ ದಿನ ಟ್ರೀಟ್‍ಮೆಂಟ್ ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ನ್ಯುಮೋನಿಯಾ ಸಮಸ್ಯೆಗೆ ಹೆಚ್ಚು ದಿನ ಟ್ರೀಟ್ಮೆಂಟ್ ಬೇಕಾಗುತ್ತದೆ. ಶ್ರೀಗಳು ದಾಖಲಾದ ಸ್ಥಿತಿಗಿಂತ ಆರೋಗ್ಯ ಈಗ ಬಹಳ ಸುಧಾರಿಸಿದೆ ಎಂದರು. ಇದನ್ನೂ ಓದಿ: ಎದೆಯಲ್ಲಿದ್ದ ಕಫ ನೀರಾಗುತ್ತಿದೆ- ಚಿಕಿತ್ಸೆಗೆ ಪೇಜಾವರ ಶ್ರೀಗಳು ಸ್ಪಂದನೆ

    ತನ್ನ ನಿಯತಿ ಹೆಲ್ತ್ ಕೇರ್ ಮಥುರಾ, ಡೆಲ್ಲಿಯ ಆಸ್ಪತ್ರೆಯ ಉತ್ಪಲ್ ಶರ್ಮಾ ಮತ್ತು ಅಜಯ್ ಅಗರವಾಲ್ ಇಬ್ಬರು ತಜ್ಞರು ನನ್ನ ಜೊತೆಗಿದ್ದಾರೆ. ಅವರು ಕೆಎಂಸಿ ವೈದ್ಯರ ತಂಡದ ಜೊತೆ ಚರ್ಚೆ ಮಾಡಿದ್ದಾರೆ ಎಂದು ನೀರಾ ಹೇಳಿದರು.

    ಡಾ. ಉತ್ಪಲ್ ಶರ್ಮಾ ಮಾತನಾಡಿ, ಡಾಕ್ಟರ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಒಬ್ಬ ರೋಗಿಯನ್ನು ಮೂರು ದಿನ ಮಾನಿಟರ್ ಮಾಡಬೇಕು. ಗುರುಗಳ ಆರೋಗ್ಯದಲ್ಲಿ ಸುಧಾರಣೆ ಇದೆ. ಕೆಎಂಸಿ ವೈದ್ಯರ ತಂಡ ಬಹಳ ಶ್ರಮ ವಹಿಸುತ್ತಿದೆ ಎಂದರು.

  • ಎಂಜೆಕ್ಷನ್ ಚುಚ್ಚಿ ಆಟೋದಲ್ಲಿ ಹೋಗುತ್ತಿದ್ದಾಗ ಮಗು ಸಾವು

    ಎಂಜೆಕ್ಷನ್ ಚುಚ್ಚಿ ಆಟೋದಲ್ಲಿ ಹೋಗುತ್ತಿದ್ದಾಗ ಮಗು ಸಾವು

    ಮಡಿಕೇರಿ: ಇಂಜೆಕ್ಷನ್ ರಿಯಾಕ್ಷನ್ ಆಗಿ ಎರಡು ತಿಂಗಳ ಮಗು ಸಾವನ್ನಪಿದೆ ಎಂಬ ಆರೋಪ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಕೇಳಿ ಬಂದಿದೆ.

    ಹಾಕತ್ತೂರಿನ ನಿವಾಸಿ ಅಶೋಕ್ ಪತ್ನಿ ತೇಜಸ್ವಿನಿ ಬಾಣಂತಿತನಕ್ಕಾಗಿ ಭಾಗಮಂಡಲದ ತವರು ಮನೆಯಲ್ಲಿದ್ದರು. ಈ ವೇಳೆ ತನ್ನ ಎರಡು ತಿಂಗಳ ಮಗುವಿಗೆ ಚುಚ್ಚುಮದ್ದು ಕೊಡಿಸಿದ್ದಾರೆ. ಚುಚ್ಚುಮದ್ದು ರಿಯಾಕ್ಷನ್ ಆಗಿ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.

    ಚುಚ್ಚುಮದ್ದು ಕೊಡಿಸಿ ಆಟೋದಲ್ಲಿ ಮನೆಗೆ ಹೋಗುವಷ್ಟಲ್ಲಿ ಮಗು ಸಂಪೂರ್ಣ ನಿತ್ರಾಣಗೊಂಡಿತ್ತು. ತಕ್ಷಣವೇ ಭಾಗಮಂಡಲದ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಬರುವಷ್ಟರಲ್ಲಿ ಮಗು ಸಾವನ್ನಪ್ಪಿದೆ. ಆದರೂ ಭಾಗಮಂಡಲದ ವೈದ್ಯರು ಮಗುವನ್ನು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

    ದಂಪತಿ ಮಗುವನ್ನು ಮಡಿಕೇರಿ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಪರಿಶೀಲಿಸಿ ಒಂದು ಗಂಟೆಯ ಹಿಂದೆಯೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವೈದ್ಯರು ನಿರ್ಲಕ್ಷ್ಯ ವಹಿಸಿ ಚುಚ್ಚುಮದ್ದು ನೀಡಿದ್ದೇ ಮಗು ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಣ್ಮಗುವಿಗೆ ಜನ್ಮಕೊಟ್ಟು ಬಾಣಂತಿ ಸಾವು – ಕುಂದಾಪುರದಲ್ಲಿ ವೈದ್ಯರ ವಿರುದ್ಧ ಆಕ್ರೋಶ

    ಹೆಣ್ಮಗುವಿಗೆ ಜನ್ಮಕೊಟ್ಟು ಬಾಣಂತಿ ಸಾವು – ಕುಂದಾಪುರದಲ್ಲಿ ವೈದ್ಯರ ವಿರುದ್ಧ ಆಕ್ರೋಶ

    ಉಡುಪಿ: ಕುಂದಾಪುರ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ಆಕ್ರೋಶಿತ ಕುಟುಂಬ ಸರ್ಕಾರಿ ಆಸ್ಪತ್ರೆಗೆ ಮುತ್ತಿಗೆ ಹಾಕಿದೆ.

    ಉಡುಪಿ ಜಿಲ್ಲೆ ಕುಂದಾಪುರದ ಅಂಕದಕಟ್ಟೆ ನಿವಾಸಿ ಸುಧೀರ್ ದೇವಾಡಿಗ ಅವರ ಪತ್ನಿ ಸುಜಾತ ಮೃತಪಟ್ಟ ಬಾಣಂತಿ. ಸುಜಾತಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿಗೆ ವೈದ್ಯರು ಪ್ರಯತ್ನಿಸಿದ್ದರು. ಆದರೆ ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವವಾಗಿದೆ. ವೈದ್ಯರು ಅಧಿಕ ರಕ್ತಸ್ರಾವಕ್ಕೆ ಒಳಗಾದಾಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದರು.

    ಖಾಸಗಿ ಆಸ್ಪತ್ರೆಯಲ್ಲಿ ಅಧಿಕ ರಕ್ತಸ್ರಾವದಿಂದಲೇ ಬಾಣಂತಿ ಸುಜಾತಾ ಮೃತಪಟ್ಟಿದ್ದಾರೆ. ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದಾಗಿ ಸಾವಾಗಿದೆ ಎಂದು ಮಹಿಳೆಯ ಮನೆಯವರು ಆರೋಪಿಸಿ, ಆಸ್ಪತ್ರೆ ಮುಂದೆ ಜಮಾಯಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ಪ್ರಕರಣದಲ್ಲಿ ರಕ್ತಸ್ರಾವ ಹತೋಟಿಗೆ ಬರಲ್ಲ. ನಮ್ಮ ಎಲ್ಲಾ ಪ್ರಯತ್ನ ಮಾಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    ಸಂಬಂಧಿಕರಾದ ಮಂಜುಳಾ ಮಾತನಾಡಿ, ಸುಜಾತ ಹೆರಿಗೆಗೆ ಹೋಗುವ ತನಕ ಆರೋಗ್ಯವಾಗಿದ್ದರು. ಏಕಾಏಕಿ ಹೀಗಾಗಿದ್ದಕ್ಕೆ ಸರಿಯಾದ ತನಿಖೆಯಾಗಬೇಕು ಎಂದರು. ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ, ಮಾತನಾಡಿ ಕೆಲವು ಪ್ರಕರಣದಲ್ಲಿ ವೈದ್ಯರ ಕೈಮೀರಿ ಪರಿಸ್ಥಿತಿ ಹೋಗುತ್ತದೆ. ರಕ್ತಸ್ರಾವವನ್ನು ಹತೋಟಿಗೆ ತರಲು ಅಸಾಧ್ಯವಾಯ್ತು. ನಮ್ಮ ಕರ್ತವ್ಯ ದಲ್ಲಿ ಲೋಪವೆಸಗಿಲ್ಲ ಎಂದು ಹೇಳಿದರು.

  • ಎದೆಯೊಳಗೆ ಕಬ್ಬಿಣದ ಸರಳು ಹೊಕ್ಕಿದ್ರೂ ಸಾವು ಗೆದ್ದ ಲಾರಿ ಚಾಲಕ

    ಎದೆಯೊಳಗೆ ಕಬ್ಬಿಣದ ಸರಳು ಹೊಕ್ಕಿದ್ರೂ ಸಾವು ಗೆದ್ದ ಲಾರಿ ಚಾಲಕ

    – ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ರಾಯಚೂರು: ಲಾರಿ ಅಪಘಾತದಲ್ಲಿ ಕಬ್ಬಿಣದ ಸರಳು ಎದೆಯೊಳಗೆ ಹೊಕ್ಕಿ ಹೊರಬಂದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರ ತಂಡದ ಸತತ ಒಂದೂವರೆ ಗಂಟೆಯ ಶಸ್ತ್ರಚಿಕಿತ್ಸೆಯಿಂದ ಚಾಲಕ ಕೋಟೇಶ್ವರ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯವಾಡ ಮೂಲದ ಕೋಟೇಶ್ವರ ರಾವ್ ಚಲಾಯಿಸುತ್ತಿದ್ದ ಲಾರಿ ಗುರುಮಿಠಕಲ್ ಬಳಿ ರಾತ್ರಿ ವೇಳೆ ಅಪಘಾತಕ್ಕೀಡಾಗಿತ್ತು. ಈ ವೇಳೆ ಕಬ್ಬಿಣದ ಹಾರೆ ರೀತಿಯ ಸರಳು ಕೋಟೇಶ್ವರ ಅವರ ದೇಹದೊಳಗೆ ಹೊಕ್ಕಿತ್ತು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಮಾಡಲು ವೈದ್ಯರಿಂದ ಸಾಧ್ಯವಾಗಿಲ್ಲ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಕೂಡಲೇ ಸ್ಪಂದಿಸಿದ ಜನರಲ್ ಸರ್ಜನ್ ಡಾ. ವಿಜಯ್ ರಾಥೋಡ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಕೋಟೇಶ್ವರ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ವೈದ್ಯರ ತಂಡ ಸಂತಸ ವ್ಯಕ್ತಪಡಿಸಿದೆ. ರಿಮ್ಸ್ ಆಸ್ಪತ್ರೆ ಅಂದರೆ ಮೂಗುಮುರಿಯುತ್ತಿದ್ದ ಸಾರ್ವಜನಿಕರು ಸಹ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಡಾ.ವಿಜಯ್ ರಾಥೋಡ್ ನೇತೃತ್ವದ ತಂಡ ಮೂರು ವರ್ಷದ ಕೆಳಗೆ ಇದೇ ರೀತಿಯ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದರು. ಗ್ರಾನೈಟ್ ಸ್ಫೋಟದ ವೇಳೆ ವ್ಯಕ್ತಿಯೋರ್ವನ ದೇಹದೊಳಗೆ ಹೊಕ್ಕಿದ್ದ ಒಂದು ಕೆ.ಜಿ ತೂಕದ ಕಲ್ಲನ್ನ ಯಶಸ್ವಿಯಾಗಿ ಹೊರತೆಗೆದಿದ್ದರು. ಅದಾದ ಬಳಿಕ ಕೋಟೇಶ್ವರ ಅವರ ಪ್ರಕರಣವೇ ಅತ್ಯಂತ ಕ್ಲಿಷ್ಟಕರವಾಗಿತ್ತು ಎಂದು ಡಾ. ವಿಜಯ್ ರಾಥೋಡ್ ಹೇಳಿದ್ದಾರೆ.

  • ಸೀಮೆ ಎಣ್ಣೆ ಸ್ಟೌವ್ ಸ್ಫೋಟ – 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕ ಸಾವು

    ಸೀಮೆ ಎಣ್ಣೆ ಸ್ಟೌವ್ ಸ್ಫೋಟ – 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕ ಸಾವು

    – ವೈದ್ಯರ ನಿರ್ಲಕ್ಷ ಎಂದು ಆರೋಪಿಸಿ ಪೋಷಕರ ಪ್ರತಿಭಟನೆ

    ತುಮಕೂರು: ತುಮಕೂರು-ಸೀಮೆಎಣ್ಣೆ ಸ್ಟೌವ್ ಸಿಡಿದು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಾವಗಡ ತಾಲೂಕಿನ ಎ.ಎಚ್.ಹಳ್ಳಿ ನಿವಾಸಿ ನವೀನ್(22) ಮೃತ ದುರ್ದೈವಿಯಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಸ್ಟೌವ್ ನಲ್ಲಿ ಅಡುಗೆ ಮಾಡುವ ವೇಳೆ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ನವೀನ್‍ರನ್ನು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೀನ್ ಇಂದು ಬೆಳಗ್ಗೆ ಸಾವನಪ್ಪಿದ್ದಾರೆ.

    ಯುವಕನ ಸಾವಿಗೆ ವೈದ್ಯರ ನಿರ್ಲಕ್ಷ ಪೋಷಕರು ಆರೋಪ ಮಾಡಿದ್ದು, ಪಾವಗಡ ಪಟ್ಟಣದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ನವೀನ್ ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಬ ಮಾಹಿತಿ ಲಭಿಸಿದೆ.

  • ಎರಡು ತಿಂಗಳ ಮಗುವಿನ ಬೆನ್ನಿನ ಮೇಲೆ ಬೆಳೆದ ಬೆರಳು

    ಎರಡು ತಿಂಗಳ ಮಗುವಿನ ಬೆನ್ನಿನ ಮೇಲೆ ಬೆಳೆದ ಬೆರಳು

    – ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ ವೈದ್ಯರು

    ಭೋಪಾಲ್: ಎರಡು ತಿಂಗಳ ಬಾಲಕಿಯ ಬೆನ್ನಿನ ಮೇಲೆ ಬೆರಳು ಕಾಣಿಸಿಕೊಂಡ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

    ಖಾರ್ಗೋನ್ ಜಿಲ್ಲೆಯ ಬಾರ್ವಾ ಸಮೀಪ ಹಳ್ಳಿಯ ಎರಡು ತಿಂಗಳ ಹೆಣ್ಣು ಮಗವಿಗೆ ಇಂತಹ ಅಪರೂಪ ಕಾಯಿಲೆ ಕಾಣಿಸಿಕೊಂಡಿದೆ. ಹುಟ್ಟಿನಿಂದಲೇ ಮಗುವಿನ ಹಿಂಭಾಗದಲ್ಲಿ ಬೆರಳಿನಂತೆ ಕಾಣುವ ಉಂಡೆ ಇತ್ತು. ಆದರೆ ಪೋಷಕರು ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ. ಇದನ್ನೂ ಓದಿ: 19 ಕಾಲ್ಬೆರಳು, 12 ಕೈಬೆರಳಿರುವ ಅಜ್ಜಿಯನ್ನ ಮಾಟಗಾತಿ ಎಂದು ನಿಂದಿಸಿದ ಜನ

    ಮಗು ಜನಿಸಿದ ಎರಡು ತಿಂಗಳಿಗೆ ಹಿಂಭಾಗದಲ್ಲಿದ್ದ ಗಂಟು ಬೆರಳಿನ ಆಕಾರದಲ್ಲಿ ಬೆಳೆಯಲು ಆರಂಭಿಸಿತ್ತು. ಇದರಿಂದ ಗಾಬರಿಗೊಂದ ಪೋಷಕರು ಹೆಣ್ಣು ಮಗುವಿನೊಂದಿಗೆ ಎಂವೈ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ವಿಭಾಗವನ್ನು ತಲುಪಿದರು. ಆಗ ವೈದ್ಯರು ಎಂಆರ್‌ಐ ಟೆಸ್ಟ್ ಮಾಡಿದಾಗ, ಟೆಥರ್ಡ್ ಕಾರ್ಡ್ ಎಂಬ ಆಂತರಿಕ ಕಾಯಿಲೆ ಇರುವುದು ಕಂಡುಬಂದಿದೆ. ಇದರಲ್ಲಿ, ಒಂದು ದೊಡ್ಡ ರಕ್ತನಾಳ (ಬೆನ್ನುಹುರಿ) ಅದರ ಗೊತ್ತುಪಡಿಸಿದ ಸ್ಥಳಕ್ಕಿಂತ ಕೆಳಗೆ ಅಂಟಿಕೊಂಡಿದೆ ಎನ್ನುವುದನ್ನು ವೈದ್ಯರು ಗುರುತಿಸಿದ್ದರು. ಇದನ್ನೂ ಓದಿ: ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ಒಂದು ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಈ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಕಾಲುಗಳಲ್ಲಿ ದೌರ್ಬಲ್ಯ, ವಕ್ರತೆ ಮತ್ತು ಅಡಚಣೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅತ್ಯಂತ ಅಪರೂಪದ ರೋಗ ಎಂದು ಎಂವೈ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ನರಶಸ್ತ್ರಚಿಕಿತ್ಸೆ ವೈದ್ಯರಾದ ರಾಕೇಶ್ ಗುಪ್ತಾ ಮತ್ತು ಡಾ. ಜಾಫರ್ ಶೇಖ್ ಅವರ ನೇತೃತ್ವದ ತಂಡವು ಹೆಣ್ಣು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸೊಂಟದಿಂದ ಬೆರಳು-ಕೊಂಡಿಯನ್ನು ಬೇರ್ಪಡಿಸುವ ಮೂಲಕ ಬೆನ್ನುಹುರಿಯನ್ನು ಸರಿಪಡಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ ನಾಲ್ಕು ದಿನಗಳ ನಂತರ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಿದ್ದಾರೆ. ಇದನ್ನೂ ಓದಿ: 25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

  • ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ನವದೆಹಲಿ: ರಾಷ್ಟ್ರ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡ ವ್ಯಕ್ತಿಯೊಬ್ಬರ ದೇಹದಿಂದ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

    56 ವರ್ಷದ ವ್ಯಕ್ತಿಯೊಬ್ಬರ ದೇಹದಲ್ಲಿ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡ ಇತ್ತು. ಇದು ರೋಗಿಯ ಇಡೀ ಹೊಟ್ಟೆ ಭಾಗವನ್ನು ಆಕ್ರಮಿಸಿಕೊಂಡಿದ್ದು, ತೀವ್ರ ನೋವು ಅನುಭವಿಸುತ್ತಿದ್ದ ರೋಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮೂತ್ರಪಿಂಡದ ಸಮಸ್ಯೆ ಬಗ್ಗೆ ತಿಳಿದು ಬಂದಿದೆ. ರೋಗಿಯ ದೇಹದಲ್ಲಿ 2 ನವಜಾತ ಶಿಶುಗಳ ತೂಕದ ಮೂತ್ರಪಿಂಡ ಇರುವುದು ಪತ್ತೆಯಾಗಿದೆ. ಹೀಗಾಗಿ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಕೊನೆಗೂ ಈ ರೋಗಪೀಡಿತ ಮೂತ್ರಪಿಂಡವನ್ನು ರೋಗಿ ದೇಹದಿಂದ ಹೊರತೆಗೆದಿದ್ದಾರೆ.

    ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿರುವ ಮೂತ್ರಪಿಂಡ ಸಾಮಾನ್ಯವಾಗಿ 120 ರಿಂದ 150 ಗ್ರಾಂ ಇರುತ್ತದೆ. ಆದರೆ ಈ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮೂತ್ರಪಿಂಡ ಮಾತ್ರ ಬರೋಬ್ಬರಿ 7.4 ಕೆಜಿಯಷ್ಟು ತೂಕ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ವೈದ್ಯರಾದ ಡಾ.ಸಚಿನ್ ಕಥುರಿಯಾ ಮಾತನಾಡಿ, ಭಾರತದಲ್ಲಿ ಈವರೆಗೆ ಇಂತಹ ದೊಡ್ಡ ಪ್ರಮಾಣದ ರೋಗಪೀಡಿತ ಮೂತ್ರಪಿಂಡ ಹೊರತೆಗೆದ ನಿದರ್ಶನ ಇಲ್ಲ. ಇಷ್ಟು ತೂಕದ ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿರುವುದು ಪ್ರಪಂಚದಲ್ಲೇ ಇದು ಮೂರನೇ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.

    ರೋಗಿಯು ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, ಈ ಹಿಂದೆ 2006ರಲ್ಲಿ ಅವರಿಗೆ ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆ ಬಂದರೆ ಮೂತ್ರಪಿಂಡದ ತುಂಬ ದ್ರವ ತುಂಬಿ, ಅದು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ ಮತ್ತು ಅವುಗಳು ಊದಿಕೊಳ್ಳುತ್ತವೆ. ಬಳಿಕ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರಿಗೆ 40 ವಯಸ್ಸಿಗೆ ಮೂತ್ರಪಿಂಡ ವೈಫಲ್ಯವಾಗುತ್ತದೆ.

    ಸದ್ಯ ನಾವು ರೋಗಿಯ ಎಡ ಭಾಗದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದೇವೆ. ಬಲಗಡೆಯ ಮೂತ್ರಪಿಂಡದಲ್ಲೂ ಸಮಸ್ಯೆ ಇದೆ, ಆದರೆ ಸದ್ಯ ರೋಗಿಗೆ ಅದರಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ. ಒಂದು ವೇಳೆ ಬಲ ಭಾಗದ ಮೂತ್ರಪಿಂಡದಲ್ಲೂ ಸಮಸ್ಯೆ ಹೆಚ್ಚಾದರೆ ಅದನ್ನು ಕೂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಬೇಕಾಗುತ್ತದೆ. ಆಗ ರೋಗಿಗೆ ಮೂತ್ರಪಿಂಡ ಕಸಿ ಮಾಡುವವರೆಗೂ ಅವರು ಸಂಪೂರ್ಣ ಡಯಾಲಿಸಿಸ್ ಮೇಲೆಯೇ ಅವಲಂಬಿಸಿರಬೇಕು ಎಂದು ವೈದ್ಯರು ಮಾಹಿತಿ ಕೊಟ್ಟಿದ್ದಾರೆ.

    ಈ ಹಿಂದೆ ವೈದ್ಯರ ತಂಡ ಬಾರೀ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಎರಡು ಪ್ರಕರಣ ನಡೆದಿತ್ತು. ಅಮೆರಿಕದಲ್ಲಿ ಓರ್ವ ರೋಗಿಯ ದೇಹದಿಂದ ಬರೋಬ್ಬರಿ 9 ಕೆಜಿ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿತ್ತು. ಬಳಿಕ ನೆದರ್‌ಲ್ಯಾಂಡ್ಸ್‌ನಲ್ಲಿ ರೋಗಿಯೋರ್ವನ ದೇಹದಲ್ಲಿದ್ದ 8.7 ಕೆಜಿ ತೂಕದ ಮೂತ್ರಪಿಂಡ ಹೊರತೆಗೆಯಲಾಗಿತ್ತು.