Tag: doctor

  • ಪ್ರೀತಿಗಾಗಿ ಕತ್ತು ಸೀಳಿ ವೈದ್ಯೆಯ ಬರ್ಬರ ಹತ್ಯೆ – 3 ದಿನದ ನಂತ್ರ ಆರೋಪಿ ಅರೆಸ್ಟ್

    ಪ್ರೀತಿಗಾಗಿ ಕತ್ತು ಸೀಳಿ ವೈದ್ಯೆಯ ಬರ್ಬರ ಹತ್ಯೆ – 3 ದಿನದ ನಂತ್ರ ಆರೋಪಿ ಅರೆಸ್ಟ್

    ನವದೆಹಲಿ: ಮೂರು ದಿನಗಳ ಹಿಂದೆ ವೈದ್ಯೆಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈಗ ಮೂರು ದಿನಗಳ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಡಾ. ಗರೀಮಾ ಮಿಶ್ರಾ(25) ಮೃತ ವೈದ್ಯೆಯಾಗಿದ್ದು, ಡಾ. ಚಂದ್ರಪ್ರಕಾಶ್ ಕೊಲೆ ಮಾಡಿದ ಆರೋಪಿ. ಗರೀಮಾ ಮಂಗಳವಾರ ದೆಹಲಿಯ ರಂಜೀತ್‍ನಗರದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗರೀಮಾ ಶವದ ಪಕ್ಕದಲ್ಲಿ ರಕ್ತದ ಕಲೆಯಿದ್ದ ಮುರಿದು ಬಿದ್ದ ಚಾಕು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಗರೀಮಾ ಮೂಲತಃ ಉತ್ತರಪ್ರದೇಶದ ಬಾರೈಚ್‍ನವಳಾಗಿದ್ದು, ಎಂಬಿಬಿಎಸ್ ನಂತರ ಎಂಡಿ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದಿದ್ದಳು. ಡಾ. ಚಂದ್ರಶೇಖರ್ ಕೂಡ ಎಂಡಿ ಮಾಡುತ್ತಿದ್ದು, ಈ ಹಿಂದೆ ಗರೀಮಾ ಜೊತೆ ಕೆಲಸ ಮಾಡಿದ್ದನು. ಪ್ರೀತಿಗಾಗಿ ಚಂದ್ರಶೇಖರ್, ಗರೀಮಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು.

    ಚಂದ್ರಪ್ರಕಾಶ್, ಗರೀಮಾ ಮಿಶ್ರಾಳನ್ನು ಪ್ರೀತಿಸುತ್ತಿದ್ದನು. ಆದರೆ ಗರೀಮಾ ಆತನನ್ನು ಒಳ್ಳೆಯ ಸ್ನೇಹಿತನ ರೀತಿ ನೋಡುತ್ತಿದ್ದಳು. ಈ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಚಂದ್ರಪ್ರಕಾಶ್, ಗರೀಮಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಗರೀಮಾ ಅಪಾರ್ಟ್ ಮೆಂಟ್‍ನ ಮೂರನೇ ಮಹಡಿಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಳು. ಆ ರೂಮಿನ ಪಕ್ಕದಲ್ಲಿದ್ದ ಮತ್ತೊಂದು ರೂಮಿನಲ್ಲಿ ವೈದ್ಯರಾದ ಚಂದ್ರಪ್ರಕಾಶ್ ಹಾಗೂ ರಾಕೇಶ್ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 11.45ಕ್ಕೆ ಗರೀಮಾಳನ್ನು ಕೊನೆಯದಾಗಿ ನೋಡಿದ್ದೆ ಎಂದು ಮನೆ ಮಾಲೀಕ ತಿಳಿಸಿದ್ದಾರೆ.

    ಅನುಮಾನ ಬಂದಿದ್ದು ಹೇಗೆ?
    ಗರೀಮಾ ಕೊಲೆಯಾದ ದಿನದಿಂದ ಆಕೆಯ ನೆರೆ ಮನೆಯಲ್ಲಿದ್ದ ವೈದ್ಯ ಚಂದ್ರಪ್ರಕಾಶ್ ವರ್ಮಾ ಕೂಡ ಕಾಣೆಯಾಗಿದ್ದನು. ಅಲ್ಲದೆ ಆತ ಮನೆಯಿಂದ ಹೊರಗೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿ ಚಂದ್ರಪ್ರಕಾಶ್‍ನನ್ನು ಪೊಲೀಸರು ಉತ್ತರಖಂಡದ ರೋರ್ಕಿಯಲ್ಲಿ ಬಂಧಿಸಿದ್ದಾರೆ.

    ನಾವು ಡಾ. ಚಂದ್ರಪ್ರಕಾಶ್‍ರನ್ನು ಹಿಡಿಯಲು ಹೋಗಿದ್ದಾಗ ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದನು. ನಾವು ಆತನ ಕಾಲ್ ರೆಕಾರ್ಡ್ ಹಾಗೂ ವಾಟ್ಸಾಪ್‍ನಿಂದ ಟ್ರೇಸ್ ಮಾಡಿ ರೋರ್ಕಿಗೆ ಹೋಗಿದ್ದೇವು. ಸದ್ಯ ಚಂದ್ರಪ್ರಕಾಶ್ ತಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಮುಂದಿನ ವಿಚಾರಣೆ ದೆಹಲಿಯಲ್ಲಿ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಹೈ-ಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳ – ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್

    ಹೈ-ಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳ – ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್

    ಕಲಬುರಗಿ: ಜಿಲ್ಲೆ ಸೇರಿದಂತೆ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಸೂರ್ಯನ ಹೊಡೆತಕ್ಕೆ ಪುಟ್ಟ ಕಂದಮ್ಮಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

    ದಿನದಿಂದ ದಿನಕ್ಕೆ ಹೈ-ಕ ಭಾಗದ 6 ಜಿಲ್ಲೆಯಲ್ಲಿ ಅಕ್ಷರಶಃ ಬಿಸಲಿನ ತಾಪ ಕಾದ ಕೆಂಡದಂತಾಗುತ್ತಿದೆ. ಹೀಗಾಗಿ ಕಲಬುರಗಿಯಲ್ಲಿನ ಜನರ ಬದುಕು ಸದ್ಯ ನರಕಯಾತನೆಯಂತಾಗಿದ್ದು, ಮನೆಯಲ್ಲಿದ್ರೂ ತೊಂದರೆ ಹೊರಗಡೆ ಬಂದ್ರೂ ತೊಂದರೆ ಎನ್ನುವಂತಾಗಿದೆ.

    ದೊಡ್ಡವರು ಹೇಗೋ ಅಬ್ಬಬ್ಬಾ ಎಂದು ದಿನ ಕಳೆಯುತ್ತಿದ್ದಾರೆ. ಆದರೆ ಹಸುಗೂಸುಗಳ ಸ್ಥಿತಿಗತಿ ದೇವರೇ ಕಾಪಾಡಬೇಕು ಎನ್ನುವ ಹಾಗಾಗಿದೆ. ಕಾರಣ ಬಿಸಿಲಿನ ಹೊಡೆತಕ್ಕೆ ಮಕ್ಕಳಿಗೆ ಡಿ-ಹೈಡ್ರೇಷನ್ ಆಗಿ ಆಸ್ಪತ್ರೆಗೆ ದಾಖಲಾಗುತ್ತಿವೆ. ಕಳೆದ ಕೆಲ ದಿನಗಳಿಂದ ಬಿಸಿಲು 43 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ನಿಮ್ಮ ಮಕ್ಕಳನ್ನು ಆದಷ್ಟು ಕೇರ್ ಮಾಡಿ ಎಂದು ಮಕ್ಕಳ ತಜ್ಞ ವೈದ್ಯರು ಹೇಳುತ್ತಾರೆ.

    ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್ ಹೀಗಿದೆ
    * ಮಗುವನ್ನು ತೆಳುವಾದ ಬಟ್ಟೆಯಿಂದ ಕವರ್ ಮಾಡಿ
    * ತಾಯಿ ಪದೇ ಪದೇ ಎದೆಹಾಲು ಉಣಿಸಬೇಕು
    * ತಾಯಿ ನೀರನ್ನು ಹೆಚ್ಚಿಗೆ ಸೇವಿಸಲಿ.

    ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿರುವ ಹೆರಿಗೆ ನಂತರದ ವಾರ್ಡ್‍ನಲ್ಲಿ ಏಸಿ ಇಲ್ಲ. ಹೀಗಾಗಿ ಫ್ಯಾನ್ ನಿಂದ ಬರೋ ಬಿಸಿಗಾಳಿಯಿಂದ ಬಳಲುವ ಅನಿವಾರ್ಯ ತಾಯಿಗೆ ಬಂದೊದಗಿದೆ. ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಸಾವಿಗೂ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಕುರಿತು ಜಿಲ್ಲಾಸ್ಪತ್ರೆಯ ಸರ್ಜನ್ ಕೇಳಿದ್ರೆ, ನಮ್ಮ ಬಳಿ ಇರುವ ತನಕ ನಾವು ಕೇರ್ ಮಾಡುವುದಾಗಿ ಹೇಳುತ್ತಿದ್ದಾರೆ.

    ಬಿಸಿಲಿನಿಂದ ಉಂಟಾಗುತ್ತಿರೋ ನಾನಾ ಕಾಯಿಲೆ ಜೀವಕ್ಕೆ ಅಪಾಯ ತರಬಲ್ಲದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತಿದೆ.

  • ದಾಖಲೆ ಪತ್ರ ದೃಢೀಕರಿಸಲು 50 ರೂಪಾಯಿಗೆ ಕೈಯೊಡ್ಡುವ ವೈದ್ಯಾಧಿಕಾರಿ!

    ದಾಖಲೆ ಪತ್ರ ದೃಢೀಕರಿಸಲು 50 ರೂಪಾಯಿಗೆ ಕೈಯೊಡ್ಡುವ ವೈದ್ಯಾಧಿಕಾರಿ!

    ತುಮಕೂರು: ದಾಖಲೆ ಪತ್ರ ದೃಢೀಕರಣ ಮಾಡಲು ಜಿಲ್ಲೆಯಲ್ಲಿ ವೈದ್ಯಾಧಿಕಾರಿಯೊಬ್ಬರು 50 ರೂಪಾಯಿಗೆ ಕೈವೊಡ್ಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಸ್ಥಾನಿಕ ವೈದ್ಯಾಧೀಕಾರಿ ಡಾ.ರಾಧಿಕಾ ಅವರ ಲಂಚಾವತಾರದ ವಿಡಿಯೋ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ವೃದ್ಧರೊಬ್ಬರ ವಯಸ್ಸಿನ ಪತ್ರದ ದೃಢೀಕರಣಕ್ಕಾಗಿ ಡಾ.ರಾಧಿಕಾ ಬಳಿ ಬಂದಿದ್ದರು. ಈ ವೇಳೆ ದೃಢೀಕರಣ ಪತ್ರಕ್ಕೆ ಸಹಿ ಹಾಕಲು ವೈದ್ಯೆ 50 ರೂ. ಲಂಚ ಕೇಳಿದ್ದಾರೆ. ಆಗ ವೃದ್ಧರ ಜೊತೆ ಬಂದ ವ್ಯಕ್ತಿ ವೈದ್ಯರಿಗೆ 500 ರೂ. ಮುಖಬೆಲೆಯ ನೋಟ್ ನೀಡಿದ್ದಾರೆ. ಆದ್ರೆ ವೈದ್ಯೆ ಕೇವಲ 50. ರೂ. ಪಡೆದು, ಉಳಿದ 450 ರೂ. ವಾಪಸ್ ಕೊಟ್ಟಿದ್ದಾರೆ.

    ಅಲ್ಲದೆ ದೃಢೀಕರಣ ಪತ್ರಕ್ಕೆ ಸಹಿ ಹಾಕಿದ್ದಕ್ಕೆ “ನಿನ್ನ ಬಾಯಲ್ಲಿ ಒಂದು ಮಾತು ಬರುತ್ತಿಲ್ಲವಲ್ಲಾ ಸೈನ್ ಹಾಕಿದಕ್ಕೆ ಹಣ ಕೊಡಬೇಕು ಅಂತ” ಎಂದು ಕೇಳಿ ವೈದ್ಯೆ ಹಣ ಪಡೆದಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಲಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ವೈದ್ಯೆಯ ಅಸಲಿಯತ್ತು ಬಟಾಬಯಲಾಗಿದೆ.

  • ಟ್ರೀಟ್‍ಮೆಂಟ್ ಸರಿಯಿಲ್ಲವೆಂದು ವೈದ್ಯನ ಮೇಲೆ ಹಲ್ಲೆ

    ಟ್ರೀಟ್‍ಮೆಂಟ್ ಸರಿಯಿಲ್ಲವೆಂದು ವೈದ್ಯನ ಮೇಲೆ ಹಲ್ಲೆ

    ಬೆಂಗಳೂರು: ಟ್ರೀಟ್‍ಮೆಂಟ್ ಸರಿಯಿಲ್ಲ ಎಂದು ಪ್ರಸಿದ್ಧ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ವಿಜಯ್ ಕುಮಾರ್ ಬಾಯ್ನಾಕ್ ಹಲ್ಲೆಗೊಳಗಾದ ವೈದ್ಯರಾಗಿದ್ದು, ಇವರು ಹೋಮಿಯೋಪಥಿ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸರ್ಕಾರಿ ಹೋಮಿಯೋಪಥಿ ವೈದ್ಯರಾಗಿದ್ದ ವಿಜಯ್ ಕುಮಾರ್, ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಗೆ ಪರ್ಸನಲ್ ಹೋಮಿಯೋಪಥಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ನಿವೃತ್ತಿ ನಂತರ ನಾಗರಭಾವಿ ಬಳಿಯ ಪಾಪರೆಡ್ಡಿಪಾಳ್ಯದಲ್ಲಿ ಹೋಮಿಯೋಪಥಿ ಕ್ಲಿನಿಕ್ ತೆರೆದು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

    ಕಳೆದ 23ರಂದು ಇವರ ಕ್ಲಿನಿಕ್‍ಗೆ ಬಂದ ಸುರೇಶ್ ನಾಯ್ಕ್ ಡಸ್ಟ್ ಅಲರ್ಜಿಗೆ ನೀವು ಕೊಟ್ಟ ಚಿಕಿತ್ಸೆ ಸರಿಯಿಲ್ಲ ಎಂದು ಜಗಳ ಶುರು ಮಾಡಿದ್ದಾನೆ. ಅಲ್ಲದೆ ನನ್ನ ಹೆಂಡತಿಗೆ ಮಾಧ್ಯಮದವರೆಲ್ಲ ಗೊತ್ತು ನಮಗೆ ಒಂದೂವರೆ ಲಕ್ಷ ಹಣ ಕೊಟ್ಟರೆ ಸರಿ ಎಂದು ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಹಣ ನೀಡಲು ವೈದ್ಯ ವಿಜಯ್ ಕುಮಾರ್ ನಿರಾಕರಿಸಿದ್ದಕ್ಕೆ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಲ್ಲದೇ, ಆಕ್ಸಿಡೆಂಟ್ ಮಾಡಿ ಜೀವ ತೆಗೆಯೋದಾಗಿ ಬೆದರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಡಾಕ್ಟರ್ ವಿಜಯ್ ಕುಮಾರ್‍ರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಸ್ಥಳೀಯರು, ವೈದ್ಯ ವಿಜಯ್ ಕುಮಾರ್ ಕಳೆದ ಎರಡು ವರ್ಷಗಳಿಂದ ಪಾಪರೆಡ್ಡಿ ಪಾಳ್ಯದಲ್ಲಿ ಕ್ಲಿನಿಕ್ ತೆರೆದು ಬಡವರಿಗೆ ಉಚಿತವಾಗಿ ಹೋಮಿಯೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿರೋದು ಚಿಕಿತ್ಸೆ ವಿಷಯಕ್ಕಲ್ಲ. ಬೇರೆಯದ್ದೇ ಕಾರಣ ಇದೆ. ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಸದ್ಯ ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ವೈದ್ಯರ ತಾತ್ಕಾಲಿಕ ನೇಮಕ – ಒಂದೇ ವಾರದಲ್ಲಿ 7 ರೋಗಿಗಳು ಸಾವು

    ವೈದ್ಯರ ತಾತ್ಕಾಲಿಕ ನೇಮಕ – ಒಂದೇ ವಾರದಲ್ಲಿ 7 ರೋಗಿಗಳು ಸಾವು

    ಮಡಿಕೇರಿ: ವೈದ್ಯರಿಲ್ಲದ ಕಾರಣ ಕಳೆದ ಒಂದೇ ವಾರದಲ್ಲಿ 7 ರೋಗಿಗಳು ಸಾವನ್ನಪ್ಪಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಟ್ಟದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಎದೆನೋವಿನಿಂದ ಕುಟ್ಟ ಸಾರ್ವಜನಿಕ ಆಸ್ಪತ್ರೆಗೆ ಮಣಿ (43) ದಾಖಲಾಗಿದ್ದರು. ಆದರೆ ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ಸಿಗದೆ ಮಣಿ ಮೃತಪಟ್ಟಿದ್ದಾರೆ. ಇದರಿಂದ ಇಂದು ಸಾರ್ವಜನಿಕರು ದಿಢೀರನೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಗೋಣಿಕೊಪ್ಪದ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದ್ದು, ವಾರದಲ್ಲಿ ಎರಡು ದಿನ ಮಾತ್ರವೇ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೋಬಳಿ ಕೇಂದ್ರದಲ್ಲಿರುವ ಕುಟ್ಟ ಆಸ್ಪತ್ರೆಯನ್ನೇ ಹಲವು ಗ್ರಾಮಗಳ ಸಾವಿರಾರು ಜನರು ಆಶ್ರಯಿಸಿದ್ದಾರೆ.

    ವೈದ್ಯರ ತೀವ್ರಕೊರತೆ ಇದ್ದರೂ ರಾಜಕಾರಣಿಗಳಿಗೆ ಮಾತ್ರ ಇದರ ಬಗ್ಗೆ ಪರಿವೇ ಇಲ್ಲದಂತಾಗಿದೆ. ಆದರೆ ವೈದ್ಯರಿಲ್ಲದ ಪರಿಣಾಮ ಒಂದೇ ವಾರದಲ್ಲಿ 7 ಜನರು ಸಾವನ್ನಪ್ಪಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ.

  • ರಾಯಚೂರಿನ ಸರ್ಕಾರಿ ವೈದ್ಯರಿಗೆ ವಾಸ್ತು ಕಂಟಕ

    ರಾಯಚೂರಿನ ಸರ್ಕಾರಿ ವೈದ್ಯರಿಗೆ ವಾಸ್ತು ಕಂಟಕ

    -ವೈದ್ಯರ ಮೂಢನಂಬಿಕೆಗೆ ಜನಸಾಮಾನ್ಯರ ಪರದಾಟ

    ರಾಯಚೂರು: ಮೂಢನಂಬಿಕೆ ಅನ್ನೋದು ಎಂಥವರನ್ನೂ ಬಿಟ್ಟಿಲ್ಲ. ಮನೆಯ ವಾಸ್ತುದೋಷದ ಬಗ್ಗೆ ಕೇಳಿರ್ತೀರಿ, ಸರ್ಕಾರಿ ಕಚೇರಿಗಳ ವಾಸ್ತುದೋಷದ ಬಗ್ಗೆಯೂ ಕೇಳಿರ್ತೀರಿ. ಆದ್ರೆ ವಿಜ್ಞಾನ ನಂಬುವ ವೈದ್ಯರಿಗೂ ವಾಸ್ತುದೋಷ ಕಾಡುತ್ತಿದೆ. ರಾಯಚೂರಲ್ಲಿ ವೈದ್ಯರ ಮೂಢನಂಬಿಕೆಗೆ ಪರದಾಡ್ತಿರೋದು ಮಾತ್ರ ಜನಸಾಮಾನ್ಯರು.

    ರಾಯಚೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಾದ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಗಳ ನಡುವೆ ಮಾರ್ಗದ ಗೇಟ್ ಗೆ ಬೀಗ ಹಾಕಿದ್ದರಿಂದ ಜನರು ಕಾಂಪೌಂಡ್ ಜಿಗಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎರಡೂ ಆಸ್ಪತ್ರೆಗಳು ಅಕ್ಕಪಕ್ಕದಲ್ಲಿವೆ. ಔಷಧಿ, ಸ್ಕ್ಯಾನಿಂಗ್, ಕ್ಯಾಂಟಿನ್ ಪ್ರತಿಯೊಂದಕ್ಕೂ ಎರಡೂ ಆಸ್ಪತ್ರೆಗಳ ರೋಗಿಗಳು ಈ ಗೇಟ್ ದಾಟಲೇಬೇಕು. ಆದರೆ ದಕ್ಷಿಣಕ್ಕೆ ಇರೋ ಈ ಗೇಟ್‍ನ ವಾಸ್ತು ಸರಿಯಿಲ್ಲ. ಇದರಿಂದ ವೈದ್ಯರ ಏಳಿಗೆ ಆಗುತ್ತಿಲ್ಲ ಎಂದು ಎರಡು ಆಸ್ಪತ್ರೆ ವೈದ್ಯರು ಮಾತನಾಡಿಕೊಂಡು ಈ ಗೇಟ್‍ಗೆ ಬೀಗ ಜಡಿದಿದ್ದಾರೆ. ಇದರಿಂದ ರೋಗಿಗಳು ಮಾತ್ರ ಹೈರಾಣಾಗಿದ್ದಾರೆ.

    ಈ ಆಸ್ಪತ್ರೆಗಳಿಗೆ ರಾಯಚೂರು ಮಾತ್ರವಲ್ಲದೆ ಯಾದಗಿರಿ ಹಾಗೂ ತೆಲಂಗಾಣದಿಂದಲೂ ರೋಗಿಗಳು ಬರ್ತಾರೆ. ವೈದ್ಯರು ಹೀಗೆ ಗೇಟ್ ಬಂದ್ ಮಾಡಿರೋದ್ರಿಂದ ರೋಗಿಗಳು ಹಾಗೂ ಸಂಬಂಧಿಕರು ಕಾಪೌಂಡ್ ಹಾರಿ ಇಲ್ಲವೇ, ಕಾಂಪೌಂಡ್ ಕೆಳಗಿಂದ ತೂರಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹೋಗ್ತಿದ್ದಾರೆ. ವಿದ್ಯಾವಂತರಾಗಿ ಸಾಮಾನ್ಯ ಜನರಿಗೆ ತಿಳಿ ಹೇಳಬೇಕಾದ ವೈದ್ಯರೇ ತಮ್ಮ ಮೂಢನಂಬಿಕೆಯಿಂದ ರೋಗಿಗಳಿಗೆ ತೊಂದರೆ ಕೊಡುತ್ತಿರುವುದು ನಿಜಕ್ಕೂ ದುರಂತವೇ ಸರಿ.

  • ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ಬೀದರ್: ವೈದ್ಯರ ನಿರ್ಲಕ್ಷ್ಯದಿಂದ ಹಸಗೂಸು ಸಾವನ್ನಪ್ಪಿದೆ ಎಂದು ಬ್ರಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಮಗುವಿನ ಪೋಷಕರು ಆರೋಪಿಸಿದ್ದಾರೆ.

    ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಮಗುವನ್ನು ಹೆತ್ತವರು ದಾಖಲಿಸಿದ್ದರು. ಆಗ ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ಬುಧವಾರ ನಿಮ್ಮ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದ್ರೆ ಇಂದು ಮಗು ಸಾವನ್ನಪ್ಪಿದೆ ಎಂದಿದ್ದಾರೆ. ಮಗು ಮೃತಪಡಲು ವೈದ್ಯರ ನಿರ್ಲಕ್ಷ್ಯವೇ ಕಾರಣ. ನಿನ್ನೆ ಆರೋಗ್ಯವಾಗಿದ್ದ ಮಗು ಇಂದು ಸಾವನ್ನಪ್ಪಿದೆ ಎಂದರೇ ಏನರ್ಥ ಎಂದು ಹೆತ್ತವರು ಕಣ್ಣೀರಿಡುತ್ತಿದ್ದಾರೆ.

    ಸದ್ಯ ಬ್ರೀಮ್ಸ್ ಆಸ್ಪತ್ರೆ ಮುಂದೆ ಮಗುವಿನ ಹೆತ್ತವರು ಹಾಗೂ ಸಂಬಂಧಿಕರು ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಪರೇಷನ್ ಫೇಲ್, ರೋಗಿ ಸಾವು – ಚಿಕ್ಕಬಳ್ಳಾಪುರ ಆಸ್ಪತ್ರೆ ಮುಂದೆ ಸಂಬಂಧಿಕರ ಪ್ರತಿಭಟನೆ

    ಆಪರೇಷನ್ ಫೇಲ್, ರೋಗಿ ಸಾವು – ಚಿಕ್ಕಬಳ್ಳಾಪುರ ಆಸ್ಪತ್ರೆ ಮುಂದೆ ಸಂಬಂಧಿಕರ ಪ್ರತಿಭಟನೆ

    – ಗರ್ಭಿಣಿಯಾಗಿರಲಿಲ್ಲ ಎಂದು ಸಂಬಂಧಿಕರ ಆರೋಪ
    – ಮಹಿಳೆಯ ಹೊಟ್ಟೆಯಲ್ಲಿ ಭ್ರೂಣವಿತ್ತು
    – ಸಂಬಂಧಿಕರಿಗೆ ತಿಳಿಸಿ ಆಪರೇಷನ್
    – ಪ್ರಕರಣದ ಬಗ್ಗೆ ವೈದ್ಯೆ ಸ್ಪಷ್ಟನೆ

    ಬೆಂಗಳೂರು: ಮಗು ಇದೆ ಎಂದು ಭಾವಿಸಿ ವೈದ್ಯರು ಆಪರೇಷನ್ ಮಾಡಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಹೋಬಳಿಯ ಬೀಸೇಗಾರಹಳ್ಳಿ ಗ್ರಾಮದ 23 ವರ್ಷದ ಮುನಿರತ್ನಮ್ಮ ಮೃತ ಮಹಿಳೆ. ಕಳೆದ ಭಾನುವಾರ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮುನಿರತ್ನಮ್ಮಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ಜಿಲ್ಲಾಸ್ಪತ್ರೆಯ ಸ್ತ್ರೀ ರೋಗ ತಜ್ಞೆ ರೇಣುಕಾ, ಮುನಿರತ್ನಮ್ಮಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಗೆ ಮಾಡಿಸಿಕೊಂಡು ಬರುವಂತೆ ಕಳುಹಿಸಿದ್ದರು.

    ಸ್ಕ್ಯಾನಿಂಗ್ ಮಾಡಿಸಿಕೊಂಡ ಬಂದ ಮಹಿಳೆಯ ರಿಪೋರ್ಟ್ ನೋಡಿದ ವೈದ್ಯೆ ರೇಣುಕಾ, ಹೊಟ್ಟೆಯಲ್ಲಿ ಮಗು ಅಡ್ಡ ತಿರುಗಿದೆ ಸರಿಯಾಗಿ ಕಾಣ್ತಿಲ್ಲ. ಕೂಡಲೇ ಅಪರೇಷನ್ ಮಾಡಬೇಕು ಎಂದು ತರಾತರುರಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ವೇಳೆ ಹೊಟ್ಟೆಯಲ್ಲಿ ಯಾವುದೇ ಮಗು ಕಂಡುಬಂದಿಲ್ಲ. ಇದರಿಂದ ಗಾಬರಿಗೊಂಡ ವೈದ್ಯೆ ಕೂಡಲೇ ಮಹಿಳೆಯನ್ನು ಅಂಬ್ಯುಲೆನ್ಸ್ ಮುಖಾಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸಾಗಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಕಳೆದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಗೆ ದಾಖಲಾಗಿದ್ದ ಮುನಿರತ್ನಮ್ಮ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಹೀಗಾಗಿ ಆಕ್ರೋಶಗೊಂಡಿರುವ ಮೃತಳ ಸಂಬಂಧಿಕರು, ಮೃತದೇಹವನ್ನು ಜಿಲ್ಲಾಸ್ಪತ್ರೆ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದರು. ಮುನಿರತ್ನಮ್ಮಳ ಸಾವಿಗೆ ವೈದ್ಯೆ ರೇಣುಕಾ ಹಾಗೂ ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ವಿಜಯ್ ಕುಮಾರ್ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಹಾಗೂ ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್ ಬರುವಂತೆ ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ ದೂರು ನೀಡುವಂತೆ ಮನವಿ ಮಾಡಿಕೊಂಡರು. ಈ ಸಂಬಂಧ ಮೃತಳ ಸಂಬಂಧಿಕರು ವೈದ್ಯೆ ವಿರುದ್ಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಮೃತಳ ಸಂಬಂಧಿಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ವೈದ್ಯೆ ರೇಣುಕಾ, ಸ್ಕ್ಯಾನಿಂಗ್ ರಿಪೋರ್ಟ್ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ್ದೆ. ಮುನಿರತ್ಮಮ್ಮಳ ಗಂಭೀರ ಸ್ಥಿತಿ ಬಗ್ಗೆ ಸಂಬಂಧಿಕರಿಗೆ ತಿಳಿಸಿ ಅಪರೇಷನ್ ಮಾಡಿದ್ದೇನೆ. ನನ್ನದೇನು ತಪ್ಪಿಲ್ಲ ಎಂದು ಹೇಳಿದ್ದಾರೆ. ಆದರೆ ಇತ್ತ ಮೃತ ಮುನಿಲಕ್ಷಮ್ಮಳಿಗೆ 3 ವರ್ಷದ ಮಗು ಸಹ ಇದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 3 ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಪಾಪಿ ವೈದ್ಯ

    3 ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಪಾಪಿ ವೈದ್ಯ

    ಬೆಳಗಾವಿ(ಚಿಕ್ಕೋಡಿ): ಪಾಪಿ ವೈದ್ಯನೊಬ್ಬ ಮೂರು ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಘಟನೆ ಬೆಳಗಾವಿ ನಗರದ ಕಿರ್ಲೊಸ್ಕರ್ ರಸ್ತೆಯಲ್ಲಿರುವ ಬೆಳಗಾವಿ ಚಿಲ್ಡ್ರನ್ ಆಸ್ಪತ್ರೆಯಲ್ಲಿ ನಡೆದಿದೆ.

    ಬಾಬಣ್ಣ ಹುಕ್ಕೇರಿ ಎಂಬ ವೈದ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಉಮೇಶ್ ಎಂಬವರ ಪುಟ್ಟ ಕಂದಮ್ಮನ ಬೆರಳನ್ನೇ ಕಟ್ ಮಾಡಿದ್ದಾನೆ.

    ಕಂದಮ್ಮ ಜ್ವರದಿಂದ ಬಳಲುತ್ತಿದ್ದ ವೇಳೆ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಗ ವೈದ್ಯ ಬಾಬಣ್ಣ ಹುಕ್ಕೇರಿ ಸಲಾಯಿನ್ ಹಾಕಿದ್ದ ಬ್ಯಾಂಡೇಜ್ ತೆಗೆಯುವಾಗ ಮಗುವಿನ ಬೆರಳು ಕಟ್ ಮಾಡಿದ್ದಾನೆ. ಬಳಿಕ ತುಂಡಾದ ಬೆರಳು ಜೋಡಿಸಲು ಹರಸಾಹಸ ಪಟ್ಟಿದ್ದಾನೆ.

    ಈ ಬಗ್ಗೆ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯ ಬಾಬಣ್ಣ ಹುಕ್ಕೇರಿ, ನರ್ಸ್ ಅಶ್ವಿನಿ ವಿರುದ್ಧ ಕೇಸ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೇನೆಯ ರಕ್ಷಣಾ ನಿಧಿಗೆ  1 ಕೋಟಿ ರೂ. ದೇಣಿಗೆ ನೀಡಿದ ಮೈಸೂರಿನ ವೈದ್ಯ

    ಸೇನೆಯ ರಕ್ಷಣಾ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ ಮೈಸೂರಿನ ವೈದ್ಯ

    ಮೈಸೂರು: ಭಾರತೀಯ ಸೇನೆಯ ರಕ್ಷಣಾ ನಿಧಿಗೆ ಮೈಸೂರಿನ ವೈದ್ಯರೊಬ್ಬರು ಬರೋಬ್ಬರಿ 1 ಕೋಟಿ ರೂ. ಹಣವನ್ನು ದೇಣಿಗೆ ನೀಡುವ ಮೂಲಕ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

    ಜಿಲ್ಲೆಯ ಗೋಕುಲಂ ಬಡಾವಣೆಯಲ್ಲಿರುವ ಆದಿತ್ಯಾ ಅಧಿಕಾರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್ ಅವರು ಯೋಧರಿಗಾಗಿ ಸಹಾಯಧನವನ್ನು ನೀಡಿದ್ದಾರೆ. ಚಂದ್ರಶೇಖರ್ ಅವರು ಬರೋಬ್ಬರಿ 1 ಕೋಟಿ ರೂ. ಹಣವನ್ನು ದೇಣಿಗೆ ರೂಪದಲ್ಲಿ ಭಾರತೀಯ ಸೇನೆಯ ರಕ್ಷಣಾ ನಿಧಿಗೆ ನೀಡಿದ್ದಾರೆ.

    ಬುಧವಾರ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಬುದ್ಧರಗೋಷ್ಠಿ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್‍ರವರಿಗೆ ದೇಣಿಗೆ ಹಣದ ಚೆಕ್ ಅನ್ನು ಡಾ.ಚಂದ್ರಶೇಖರ್ ಅವರು ಹಸ್ತಾಂತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv