Tag: doctor

  • ಎದೆಯುರಿ ಅಂತ ಆಸ್ಪತ್ರೆಗೆ ಬಂದ ವ್ಯಕ್ತಿ – ಡಾಕ್ಟರ್‌ಗೆ ಕರೆ ಮಾಡಿ ಇಂಜೆಕ್ಷನ್ ಕೊಟ್ಟ ನರ್ಸ್

    ಎದೆಯುರಿ ಅಂತ ಆಸ್ಪತ್ರೆಗೆ ಬಂದ ವ್ಯಕ್ತಿ – ಡಾಕ್ಟರ್‌ಗೆ ಕರೆ ಮಾಡಿ ಇಂಜೆಕ್ಷನ್ ಕೊಟ್ಟ ನರ್ಸ್

    – ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವು

    ಕೋಲಾರ: ಎದೆಯುರಿ ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಗೆ ನರ್ಸ್ ಒಬ್ಬರು ವೈದ್ಯರಿಗೆ ಕರೆ ಮಾಡಿ ಇಂಜೆಕ್ಷನ್ ಕೊಟ್ಟಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪವೊಂದು ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.

    ಮೃತನನ್ನು ಕದಿರಪ್ಪ(38) ಎಂದು ಗುರುತಿಸಲಾಗಿದ್ದು, ಕೋಲಾರ ತಾಲೂಕು ಸುಗುಟೂರು ಗ್ರಾಮದ ನಿವಾಸಿ. ಕದೀರಪ್ಪ ಇಂದು ಬೆಳ್ಳಂಬೆಳಗ್ಗೆ ತನ್ನ ಸ್ನೇಹಿತರ ಜೊತೆಗೆ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಎದೆ ಉರಿ ಕಾಣಿಸಿಕೊಂಡಿದೆ. ಕೂಡಲೇ ಸ್ನೇಹಿತರು ಕದೀರಪ್ಪರನ್ನು ನಗರದ ಶ್ರೇಯಾ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಇಂದು ಬಂದ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಜನರು ಅಷ್ಟೇನೂ ಇರಲಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ವೈದ್ಯರು ಕೂಡ ಇರಲಿಲ್ಲ. ಆದರೆ ಆಸ್ಪತ್ರೆಯಲ್ಲಿದ್ದ ನರ್ಸ್ ಬಂದು ಕದಿರಪ್ಪನ ಅನಾರೋಗ್ಯದ ಬಗ್ಗೆ ವಿಚಾರಿಸಿ ವೈದ್ಯರಿಗೆ ಫೋನ್ ಮಾಡಿದ್ದಾರೆ. ನಂತರ ಅವರು ಹೇಳಿದಂತೆ ಒಂದು ಇಂಜೆಕ್ಷನ್ ಕೊಟ್ಟಿದ್ದಾರೆ. ಇದಾದ ಬಳಿಕ ಕದಿರಪ್ಪ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಇಲ್ಲಿ ಆಗೋದಿಲ್ಲ. ನೀವು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಅಂಬುಲೆನ್ಸ್‍ಗೆ ಹೇಳಿದ್ದಾರೆ. ಆದರೆ ಕದಿರಪ್ಪನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

    ಕೇವಲ ಎದೆ ಉರಿ ಎಂದು ಬಂದವನಿಗೆ ಆಸ್ಪತ್ರೆಯ ಸಿಬ್ಬಂದಿ ನೀಡಿದ ಇಂಜೆಕ್ಷನ್‍ನಿಂದಲೇ ಕದಿರಪ್ಪ ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ಶ್ರೇಯ ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಸಿಬ್ಬಂದಿ ತಮಗೇನು ಸಂಬಂಧವೇ ಇಲ್ಲ ಎಂಬ ಹಾರಿಕೆ ಉತ್ತರ ಕೊಟ್ಟರು. ಇದರಿಂದ ರೊಚ್ಚಿದ್ದ ಜನ ಆಸ್ಪತ್ರೆಯ ಕಿಟಕಿ ಗಾಜು ಒಡೆದು ಆಕ್ರೋಶ ಹೊರ ಹಾಕಿದ್ರು. ಜೊತೆಗೆ ಕೆಲವು ದಲಿತ ಸಂಘಟನೆಗಳ ಮುಖಂಡರು ಕೈಜೋಡಿಸಿ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿದ್ರು.

    ಸಾವಿಗೆ ಕಾರಣವಾದ ಖಾಸಗಿ ಆಸ್ಪತ್ರೆಗೆ ಬೀಗ ಹಾಕಬೇಕು. ಮೃತ ಕುಟುಂಬಕ್ಕೆ ಆಸ್ಪತ್ರೆಯವರು ಪರಿಹಾರ ನೀಡುವಂತೆ ಆಗ್ರಹ ಮಾಡಿದರು. ಈ ವೇಳೆ ಸ್ಥಳಕ್ಕೆ ಬಂದ ಕೋಲಾರ ನಗರ ಠಾಣಾ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿದರೂ ಅದು ಪ್ರಯೋಜನವಾಗಲಿಲ್ಲ. ನಂತರ ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್ ಹಾಗೂ ಖಾಸಗಿ ಆಸ್ಪತ್ರೆಗಳ ಸಂಘದ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರ ಜೊತೆಗೆ ಮಾತುಕಥೆ ನಡೆಸಲಾಯಿತು. ಮೃತ ವ್ಯಕ್ತಿಗೆ ನೀಡಲಾಗಿದ್ದ ಇಂಜೆಕ್ಷನ್ ಪರಿಶೀಲನೆ ನಡೆಸಿ ಮೃತನ ಮರಣೋತ್ತರ ಪರೀಕ್ಷೆ ನಡೆಸಿ, ವರದಿ ಬಂದ ನಂತರ ಆಸ್ಪತ್ರೆಯ ಸಿಬ್ಬಂದಿ ತಪ್ಪಿದ್ದರೆ ಕ್ರಮ ಕೈಗೊಳ್ಳುವುದಾಗಿ ಡಿಹೆಚ್‍ಓ ತಿಳಿಸಿದ್ರು.

  • ವೈದ್ಯರ ನಿರ್ಲಕ್ಷ್ಯ ಆರೋಪ – ಹುಟ್ಟುತ್ತಲೇ ಹೆಣ್ಣು ಮಗು ಸಾವು

    ವೈದ್ಯರ ನಿರ್ಲಕ್ಷ್ಯ ಆರೋಪ – ಹುಟ್ಟುತ್ತಲೇ ಹೆಣ್ಣು ಮಗು ಸಾವು

    – ರಾತ್ರಿಯೆಲ್ಲ ನೋವಿನಿಂದ ನರಳಿದ ಯುವತಿ

    ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ ಘಟನೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹೆತ್ತೂರು ಗ್ರಾಮದ ಚಾಂದಿನಿ ಅವರು ಹೆರಿಗೆ ನೋವಿನಿಂದ ನಿನ್ನೆ ಬೆಳಗ್ಗೆ 11 ಗಂಟೆಗೆ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ, ತಾಯಿ ಇಲ್ಲದ ಚಾಂದಿನಿಯನ್ನು ಅವರ ಅಣ್ಣನೇ ಕಾಳಜಿ ವಹಿಸಿ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಿದ್ದರು.

    ಹೆರಿಗೆ ನೋವಿನ ಕಾರಣ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯೆಲ್ಲ ಗರ್ಭಿಣಿ ಮಹಿಳೆ ನೋವಿನಿಂದ ನರಳಿದ್ದರು. ಆದರೂ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ. ಇಂದು ಸಂಜೆ 4 ಗಂಟೆ ಸುಮಾರಿಗೆ ಹೆರಿಗೆ ಮಾಡಿ ಮಗು ಸಾವನ್ನಪ್ಪಿದೆ ಅಂತಿದ್ದಾರೆ. ನಮಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಮಗು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

  • ವಿಷದ ಇಂಜೆಕ್ಷನ್ ಮಾಡ್ಕೊಂಡು ಬಾಬಾ ಆಮ್ಟೆ ಮೊಮ್ಮಗಳು ಸೂಸೈಡ್

    ವಿಷದ ಇಂಜೆಕ್ಷನ್ ಮಾಡ್ಕೊಂಡು ಬಾಬಾ ಆಮ್ಟೆ ಮೊಮ್ಮಗಳು ಸೂಸೈಡ್

    ಮುಂಬೈ: ಕುಷ್ಠ ರೋಗಿಗಳಿಗಾಗಿ ಜೀವನವನ್ನೇ ಮುಡಿಪು ಇಟ್ಟಿದ್ದ ಸಾಮಾಜಿಕ ಕಾರ್ಯಕರ್ತ ಡಿ.ಬಾಬಾ ಆಮ್ಟೆ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕುಷ್ಠ ರೋಗಿಗಳ ಆನಂದವನ ಸಂಸ್ಥೆ ನಡೆಸುತ್ತಿದ್ದ ಡಾ.ಶೀತಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಪುರದಲ್ಲಿರುವ ತಮ್ಮ ನಿವಾಸದಲ್ಲಿ ವಿಷದ ಇಂಜೆಕ್ಷನ್ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಹಾರೋಗಿ ಸೇವಾ ಸಮಿತಿಯಲ್ಲಿ ಹಗರಣದ ಆರೋಪಗಳು ಕೇಳಿ ಬಂದಿದ್ದವು.

    ಮೃತ ಡಾ.ಶೀತಲ್ ಆಮ್ಟೆ ಮಹಾರೋಗಿ ಸೇವಾ ಸಮಿತಿಯ ಸಿಇಓ ಆಗಿದ್ದರು. ಇತ್ತ ಹಲವು ವರ್ಷಗಳಿಂದ ಪತಿ ಮತ್ತು ಕುಟುಂಬದ ಸದಸ್ಯರ ಜೊತೆಗೂಡಿ ಕುಷ್ಠ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಟ್ವಿಟ್ಟರ್ ನಲ್ಲಿ ಪೇಂಟಿಂಗ್ ಚಿತ್ರ ಹಂಚಿಕೊಂಡಿದ್ದ ಶೀತಲ್ ಆಮ್ಟೆ, ಯುದ್ಧ ಮತ್ತು ಶಾಂತಿ ಎಂದು ಬರೆದುಕೊಂಡಿದ್ದರು.

    72 ವರ್ಷಗಳಿಂದ ಚಂದ್ರಪುರ ಜಿಲ್ಲೆಯಲ್ಲಿ ಅನಂದವನ ಸಂಸ್ಥೆ ಮುಖಾಂತರ ಬಾಬಾ ಆಮ್ಟೆ ಕುಟುಂಬ ಕುಷ್ಠ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿದೆ. ಕೆಲ ದಿನಗಳ ಹಿಂದೆ ಆನಂದವನ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಶೀತಲ್ ಆಮ್ಟೆ ಫೇಸ್‍ಬುಕ್ ಲೈವ್ ಬಂದಿದ್ದರು. ಲೈವ್ ನಲ್ಲಿ ಆನಂದವನ ಸಂಸ್ಥೆಗೆ ಸಂಬಂಧಿಸಿದ ಹಲವು ವಿಷಯಗಳನ್ನ ಹಂಚಿಕೊಂಡಿದ್ದರು.

    ಈ ವಿಷಯ ವಿವಾದ ಆಗುತ್ತಲೇ ಫೇಸ್‍ಬುಕ್ ನಿಂದ ವೀಡಿಯೋ ಡಿಲೀಟ್ ಮಾಡಿದ್ದರು. ಆಮ್ಟೆ ಕುಟುಂಬ ಶೀತಲ್ ಅವರಿಂದ ಅಂತರ ಕಾಯ್ದುಕೊಂಡಿತ್ತು. ಕೆಲ ವಿಷಯಗಳಲ್ಲಿ ಶೀತಲ್ ಅವರಿಗೆ ತಪ್ಪು ಗ್ರಹಿಕೆಯಾಗಿದೆ ಎಂದು ಆಮ್ಟೆ ಕುಟುಂಬಸ್ಥರು ಹೇಳಿದ್ದರು.

  • ನಿವಾರ್ ಸೈಕ್ಲೋನ್ ಎಫೆಕ್ಟ್- ಕೊರೊನಾಗೆ ತುತ್ತಾಗಿದ್ದ 26 ವರ್ಷದ ವೈದ್ಯ ಸಾವು

    ನಿವಾರ್ ಸೈಕ್ಲೋನ್ ಎಫೆಕ್ಟ್- ಕೊರೊನಾಗೆ ತುತ್ತಾಗಿದ್ದ 26 ವರ್ಷದ ವೈದ್ಯ ಸಾವು

    – ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ತಾವೂ ಸೋಂಕಿಗೆ ಒಳಗಾದ್ರು

    ಭೋಪಾಲ್: ಕೊರೊನಾ ವೈರಸ್ ಗೆ ತುತ್ತಾಗಿದ್ದ 26 ವರ್ಷದ ವೈದ್ಯರೊಬ್ಬರು ನಿಧನರಾಗಿದ್ದಾರೆ.

    ಮೃತ ದುರ್ದೈವಿ ವೈದ್ಯರನ್ನು ಡಾ. ಶುಭಂ ಉಪಾಧ್ಯಾಯ(26) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಮಧ್ಯಪ್ರದೇಶ ನಿವಾಸಿ. ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಶುಭಂ ಅವರು ಕಳೆದ 1 ತಿಂಗಳಿನಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವೈದ್ಯರ ಶ್ವಾಸಕೋಶದ ಮೇಲೆ ಕೊರೊನಾ ವೈರಸ್ ಭಾರೀ ಪರಿಣಾಮ ಬೀರಿದೆ. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದು, ಚೆನ್ನೈ ಆಸ್ಪತ್ರೆಗೆ ಕರೆತರಬೇಕಾಗಿತ್ತು. ಆದರೆ ನಿವಾರ್ ಚಂಡಮಾರುತದಿಂದಾಗಿ ವಿಮಾನಯಾನ ಅಸಾಧ್ಯವಾಗಿತ್ತು. ಪರಿಣಾಮ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಈ ಸಂಬಂಧ ವೈದ್ಯ ಡಾ. ಅಜಯ್ ಗೋಯೆಂಕ ಮಾತನಾಡಿ, ಶುಭಂ ಅವರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಶೇ.100 ರಷ್ಟು ಅವರ ಶ್ವಾಸಕೋಶ ಹಾನಿಗೊಳಗಾಗಿತ್ತು. ಅವರಿಗೆ ಕಳೆದ ನವೆಂಬರ್ 10 ರಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

    ಶುಭಂ ಅವರು ಮಧ್ಯಪ್ರದೇಶದ ಸಾಗರ್ ನ ಸರ್ಕಾರಿ ಬುಂದೇಲ್ ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇದೀಗ ಅವರೇ ಕೋವಿಡ್ 19ಗೆ ಬಲಿಯಾಗಿರುವುದು ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ.

    ಶುಭಂ ನಿಧನಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹ್ಹಾಣ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಡಾ. ಶುಭಂ ಅವರು ದೇಶದ ನಿಜವಾದ ಪ್ರಜೆ ಎಂದು ಬಣ್ಣಿಸಿದರು. ಅವರು ಕೋವಿಡ್ 19 ರೋಗಿಗಳಿಗಾಗಿ ಸಮರ್ಪಕ ಸೇವೆ ಸಲ್ಲಿಸಿದ್ದಾರೆ. ಆದರೆ ಈ ಮಧ್ಯೆ ತಾವೇ ಸೋಂಕಿಗೆ ಒಳಗಾದರು. ಅವರ ಕಾರ್ಯದ ಬಗ್ಗೆ ಹೆಮ್ಮೆಯಾಗುತ್ತಿದ್ದು, ಕುಟುಂಬದ ಸದಸ್ಯರೊಂದಿಗೆ ಸರ್ಕಾರ ಸದಾ ಇರುತ್ತೆ ಎಂದು ಭರವಸೆ ನೀಡಿದರು.

  • ಐ ಲವ್ ಯು ಬರೆದು ವಿಷದ ಇಂಜೆಕ್ಷನ್ ಚುಚ್ಚಿಕೊಂಡ ವೈದ್ಯ

    ಐ ಲವ್ ಯು ಬರೆದು ವಿಷದ ಇಂಜೆಕ್ಷನ್ ಚುಚ್ಚಿಕೊಂಡ ವೈದ್ಯ

    – ಮತ್ತೊಬ್ಬನ ಜೊತೆ ಪತ್ನಿಯ ಕಳ್ಳಾಟ

    ಗುರುಗ್ರಾಮ: ಖಾಸಗಿ ಆಸ್ಪತ್ರೆಯ ವೈದ್ಯ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ತಿಜೋರಿ ಮೇಲೆ ಐ ಲವ್ ಯು, ಗುಡ್ ಬೈ ಎಂದು ಬರೆದಿದ್ದಾರೆ.

    ಮನುಜ್ ಸೋಡಿ ಆತ್ಮಹತ್ಯೆಗೆ ಶರಣಾದ ವೈದ್ಯ. ಗುರುಗ್ರಾಮದ ಸೆಕ್ಟರ್ 49ರ ಆರ್ಚಿಡ್ ಅಪಾರ್ಟ್‍ಮೆಂಟ್ ಫ್ಲ್ಯಾಟ್ ನಂಬರ್ 201ರಲ್ಲಿ ಮನುಜ್ ಕುಟುಂಬ ಸಮೇತರಾಗಿ ವಾಸವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿಯ ಐಸಿಯು ಎಕ್ಸಪರ್ಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಗಳ ಬಳಿ ಬಂದಿದ್ದ ಮನುಜ್ ಆಕೆ ಜೊತೆ ಕೆಲ ಸಮಯ ಕಳೆದಿದ್ದರು. ತದನಂತರ ತಮ್ಮ ಕೋಣೆಗೆ ತೆರಳಿ ವಿಷದ ಇಂಜೆಕ್ಷನ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತುಂಬಾ ಸಮಯದಿಂದ ಮನುಜ್ ಹೊರ ಬರದಿದ್ದಾಗ ಮಗಳು ತಂದೆ ಕೋಣೆಗೆ ತೆರಳಿದ್ದಾಳೆ. ಅಪ್ಪರ ಬರೆದ ಸಾಲುಗಳನ್ನ ನೋಡಿ ಗಾಬರಿಯಾಗಿ ಕೂಗಿಕೊಂಡಾಗ ಇತರ ಸದಸ್ಯರು ಬಂದಿದ್ದಾರೆ. ತಂದೆ ತನ್ನ ಜೊತೆ ಯಾವ ಸಮಸ್ಯೆಗಳ ಬಗ್ಗೆ ಮಾತನಾಡಿರಲಿಲ್ಲ ಎಂದು ಮಗಳು ಹೇಳಿದ್ದಾಳೆ.

    ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಮಗ ಮತ್ತು ಸೊಸೆ ನಡುವೆ ಜಗಳ ಆಗುತ್ತಿತ್ತು. ಇಬ್ಬರ ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ. ಸಾಂಸರಿಕ ಕಲಹ ಹಿನ್ನೆಲೆ ಮಗ ಮಾನಸಿಕವಾಗಿ ಕುಗ್ಗಿದ್ದನು. ಸೊಸೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆಯೂ ಆತನಿಗೆ ಅನುಮಾನವಿತ್ತು ಎಂದು ಮನುಜ್ ಪೋಷಕರು ಹೇಳಿದ್ದಾರೆ.

  • ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

    ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

    ಲಕ್ನೋ: ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದ ಘಟನೆ ಉತ್ತರಪ್ರದೇಶದ ಆಲಿಘರ್ ನಲ್ಲಿ ನಡೆದಿದೆ.

    ಆಲಿಘರ್ ಜಿಲ್ಲೆಯ ಚಾರ್ರಾ ನಿವಾಸಿ ಸೀತಾರಾಮ್(45) ಸುಮಾರು ಒಂದೂವರೆ ವರ್ಷಗಳಿಂದ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿತ್ತು. ಆಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ(ಎಎಂಯು), ಜವಾಹರ್‍ಲಾಲ್ ನೆಹರು ವೈದ್ಯಕೀಯ ಕಾಲೇಜಿನ (ಜೆಎನ್‍ಎಂಸಿ) ವೈದ್ಯರು ರೋಗಿಯ ಹೊಟ್ಟೆಯಿಂದ ಗಡ್ಡೆ ಹೊರತೆಗೆದಿದ್ದಾರೆ.

    ಪ್ರೊ. ಸೈಯದ್ ಹಸನ್ ಹ್ಯಾರಿಸ್ (ಶಸ್ತ್ರ ಚಿಕಿತ್ಸಾ ವಿಭಾಗ) ಅವರ ಮೇಲ್ವಿಚಾರಣೆಯಲ್ಲಿ ಡಾ. ಶಹಬಾಜ್ ಹಬೀಬ್ ಫರಿಡಿ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡ ಈ ಗಡ್ಡೆಯನ್ನು ಹೊಟ್ಟೆಯಿಂದ ತೆಗೆಯುವಲ್ಲಿ ಸೈ ಎನಿಸಿಕೊಂಡಿದೆ.

    ಈ ಸಂಬಂಧ ಪ್ರೊ. ಹಸನ್ ಹ್ಯಾರಿಸ್ ಮಾತನಾಡಿ, ಸಿತಾರಾಮ್ ಅವರು 2018ರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಯಾಕೆ ಈ ರೀತಿ ಆಗುತ್ತಿದೆ ಎಂದು ತಿಳಿದರಿರಲಿಲ್ಲ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಗ್ಗೆ ಹೇಳಿದರು. ಅಲ್ಲದೆ ಹೊಟ್ಟೆ ನೋವಿಗೆಂದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು, ಆಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋವು ಹೋಗುತ್ತಿತ್ತು ಎಂದು ತಿಳಿಸಿರುವುದಾಗಿ ಹೇಳಿದರು.

    ಸೀತಾರಾಮ್ ಅವರು ಉತ್ತರಪ್ರದೇಶ ಮತ್ತು ದೆಹಲಿಯ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನು ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದರು ಎಂದು ವೈದ್ಯರು ತಿಳಿಸಿದರು. ಕೊನೆಗೆ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಬಳಿಕ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಸದ್ಯ ಸೀತಾರಾಮ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

  • ಮನೆಗೆ ನುಗ್ಗಿ ಕತ್ತು ಕೊಯ್ದು ದಂತ ವೈದ್ಯೆಯ ಬರ್ಬರ ಹತ್ಯೆ

    ಮನೆಗೆ ನುಗ್ಗಿ ಕತ್ತು ಕೊಯ್ದು ದಂತ ವೈದ್ಯೆಯ ಬರ್ಬರ ಹತ್ಯೆ

    – ಎಂಟು ವರ್ಷದ ಮಗಳ ಮಂದೆಯೇ ಅಮ್ಮನ ಕೊಲೆ
    – ಕೇಬಲ್ ಆಪರೇಟರ್ ಗಳ ಹೆಸರಲ್ಲಿ ಮನೆಗೆ ಎಂಟ್ರಿ
    – ಅಪಾಯದಿಂದ ಪಾರಾದ ವೈದ್ಯೆಯ ಮಕ್ಕಳು

    ಲಕ್ನೋ: ಮನೆಗೆ ನುಗ್ಗಿದ ಕಿರಾತಕ ದಂತ ವೈದ್ಯೆಯ ಕತ್ತು ಸೀಳಿ ಕೊಲೆಗೈದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದ ಕಾವೇರಿ ಕುಂಜ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಆರೋಪಿಯ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಡಾ. ನಿಶಾ ಸಿಂಘಾಲ್ ಕೊಲೆಯಾದ ದಂತ ವೈದ್ಯೆ. ಮಹಿಳೆಯ ಎಂಟು ವರ್ಷದ ಪುತ್ರಿ ಅನಿಶಾ ಮತ್ತು ನಾಲ್ಕು ವರ್ಷದ ಪುತ್ರ ಅದ್ವಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಶಾ ಅವರ ಕೊಲೆಯಾದ ಮಕ್ಕಳು ಮತ್ತೊಂದು ಕೋಣೆಯಲ್ಲಿ ಆಟವಾಡುತ್ತಿದ್ದರು. ಆರೋಪಿ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದು, ಆದ್ರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ನಿಶಾ ಪತಿ ಸಹ ವೈದ್ಯರಾಗಿದ್ದು ದಾಳಿ ವೇಳೆ ಆಸ್ಪತ್ರೆಯಲ್ಲಿದ್ದರು. ಆರೋಪಿ ದರೋಡೆಯ ಸಂಚು ರೂಪಿಸಿ ಕೇಬಲ್ ಟೆಕ್ನಿಷಿಯನ್ ಅಂತ ಹೇಳಿಕೊಂಡು ಮನೆಗೆ ಬಂದಿದ್ದಾನೆ. ಮನೆಯಲ್ಲಿದ್ದ ನಿಶಾ ಅವರ ಕತ್ತು ಸೀಳಿ ಕೊಲೆಗೈದು ಮಕ್ಕಳ ಮೇಲೆ ಹಲ್ಲೆ ನಡೆಸಿ ಸುಮಾರು ಒಂದು ಗಂಟೆಯ ಬಳಿಕ ಮನೆಯಿಂದ ಹೊರ ಹೋಗಿದ್ದಾನೆ.

    ಮನೆಗೆ ಬಂದಿದ್ದ ಆ ಅಂಕಲ್ ರಕ್ತಮಯವಾದ ಚಾಕು ಹಿಡಿದು ನನ್ನ ಬಳಿ ಬಂದಿದ್ದನು. ತಮ್ಮ ಅದ್ವಯ್ ಜೋರಾಗಿ ಅಳಲು ಆರಂಭಿಸಿದನು. ಸುಮ್ಮನಿರಿ, ಇಲ್ಲವಾದ್ರೆ ಅಮ್ಮನ ರೀತಿ ನಿಮ್ಮನ್ನು ಕೊಲ್ಲುತ್ತೇನೆ ಎಂದು ಕತ್ತಿನ ಭಾಗದಲ್ಲಿ ಚಾಕು ಇಟ್ಟಿದ್ದನು. ತಮ್ಮ ಜೋರಾಗಿ ಅತ್ತಿದ್ದರಿಂದ ಚಾಕು ಜೋರಾಗಿ ಒತ್ತಿದ. ಹಾಗಾಗಿ ಕತ್ತಿನ ಭಾಗದಲ್ಲಿ ರಕ್ತ ಬಂತು ಎಂದು ವೈದ್ಯ ಪುತ್ರಿ ಅನಿಶಾ ಪೊಲೀಸರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾಳೆ.

  • ಕೊರೊನಾ ವಾರ್ಡಿನಲ್ಲಿ ವೈದ್ಯರಾಗಿ ಕೆಲಸ – ಬಂದ ಸಂಬಳದಲ್ಲಿ ಉಚಿತ ಮಾಸ್ಕ್ ವಿತರಣೆ

    ಕೊರೊನಾ ವಾರ್ಡಿನಲ್ಲಿ ವೈದ್ಯರಾಗಿ ಕೆಲಸ – ಬಂದ ಸಂಬಳದಲ್ಲಿ ಉಚಿತ ಮಾಸ್ಕ್ ವಿತರಣೆ

    – 5 ಸಾವಿರ ಮಾಸ್ಕ್ ಹಂಚಿ ಮಾನವೀಯತೆ ಮೆರೆದ ಯುವ ಡಾಕ್ಟರ್

    ಧಾರವಾಡ: ಜಿಲ್ಲೆಯಲ್ಲಿ ಒಬ್ಬರು ಯುವ ವೈದ್ಯರಿದ್ದಾರೆ. ಇವರು ಕೊರೊನಾ ಸಂದರ್ಭದಲ್ಲಿ ಒಂದು ದಿನವೂ ರಜೆಯನ್ನೇ ಪಡೆದಿಲ್ಲ. ಅಷ್ಟೇ ಅಲ್ಲ ಈ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ಸರ್ಕಾರ ನೀಡಿದ್ದ ಸಂಬಳವನ್ನೆಲ್ಲಾ ನೇರವಾಗಿ ಕೋವಿಡ್ ಕೆಲಸಕ್ಕೇ ನೀಡಿ ಜನರ ಪ್ರಶಂಸೆಗೆ ಪಾತ್ರನಾಗಿದ್ದಾರೆ.

    ಹೌದು ಧಾರವಾಡದ ಕಮಲಾಪೂರ ನಿವಾಸಿಯಾದ 23 ವರ್ಷದ ಡಾ. ಮಯೂರೇಶ್ ಲೋಹಾರ್, ಕಳೆದ ಜುಲೈ ತಿಂಗಳಲ್ಲಿ ಬಿಎಎಂಎಸ್ ಮುಗಿಸಿ ನೇರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ಕೆಲಸಕ್ಕೆ ಹಾಜರಾಗಿದ್ದರು. ಅಷ್ಟೊತ್ತಿಗಾಗಲೇ ದೇಶದಲ್ಲಿ ಕೊರೊನಾ ಹಾವಳಿ ಮಿತಿ ಮೀರಿ ಹೋಗಿತ್ತು. ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹುತೇಕ ಸರ್ಕಾರಿ ಸೇವೆಯಲ್ಲಿರೋ ಜನರು ಕೆಲಸ ಮಾಡಲು ಹಿಂದೇಟು ಹಾಕೋ ಸಮಯದಲ್ಲಿಯೇ, ಇವರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.

    ಕೆಲಸಕ್ಕೆ ಬಂದ ಕೂಡಲೇ ಇವರನ್ನು ಕೋವಿಡ್ ವಾರ್ಡಿಗೆ ಕೆಲಸಕ್ಕೆ ನಿಯೋಜಿಸಲಾಯಿತು. 60 ಹಾಸಿಗೆಗಳ ಆಸ್ಪತ್ರೆಯಲ್ಲಿ ಸತತವಾಗಿ ಮೂರು ತಿಂಗಳ ಕಾಲ ಕೋವಿಡ್ ವಾರ್ಡ್ ನಲ್ಲಿಯೇ ಕೆಲಸ ಮಾಡಿದ ಡಾ. ಮಯೂರೇಶ, ತಮಗೆ ಬಂದ ಸಂಬಂಳದಿಂದ ಇದೀಗ ಎನ್-95 ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಡಾ. ಮಯೂರೇಶ್ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿಯೂ ಕೆಲಸ ಮಾಡಿ, ಅಲ್ಲಿ ಬಂದ ಸಂಬಳ ಹಾಗೂ ಸರ್ಕಾರಿ ಸಂಬಳವನ್ನು ಒಟ್ಟಾರೆ ಸೇರಿಸಿ, ಒಂದೂವರೆ ಲಕ್ಷ ರೂಪಾಯಿಯ ಮಾಸ್ಕ್ ಖರೀದಿಸಿ ಉಚಿತವಾಗಿ ಹಂಚಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ತಮ್ಮ ಸಂಬಳದಲ್ಲಿಯೇ ಸಮಾಜಕ್ಕೆ ಸಹಾಯ ಮಾಡುತ್ತಿರೋ ಇವರ ಸೇವೆಗೆ ಗೆಳೆಯರು ಸಾಥ್ ನೀಡಿದ್ದಾರೆ. ಒಟ್ಟು 5,000 ಎನ್ 95 ಹಾಗೂ 5,000 ಥ್ರೀ ಲೇಯರ್ ಮಾಸ್ಕ್‍ಗಳನ್ನು ಇದುವರೆಗೂ ಹಂಚಿರುವ ಈ ವೈದ್ಯ, ಶಾಲೆಗಳು ಆರಂಭವಾಗೋ ಸಾಧ್ಯತೆ ಇರುವುದರಿಂದ ಬಿಇಓ ಕಚೇರಿಗೆ 1,000, ಪೊಲೀಸ್ ಇಲಾಖೆಗೆ 500, ಎರಡು ಅನಾಥಾಶ್ರಮಗಳು ಸೇರಿದಂತೆ ಧಾರವಾಡದ ವಿವಿಧ ಪ್ರದೇಶಗಳಲ್ಲಿ ಮಾಸ್ಕ್ ಗಳನ್ನು ಉಚಿತವಾಗಿ ನೀಡಿದ್ದಾರೆ.

  • ಸಾವಿನಲ್ಲಿಯೂ ಸಾರ್ಥಕತೆ- ಎಂಟು ಜನರ ಬಾಳಿಗೆ ಬೆಳಕಾದ ಯುವಕ

    ಸಾವಿನಲ್ಲಿಯೂ ಸಾರ್ಥಕತೆ- ಎಂಟು ಜನರ ಬಾಳಿಗೆ ಬೆಳಕಾದ ಯುವಕ

    ಬೆಂಗಳೂರು: ಯುವಕನೋರ್ವ ಸಾವಿನಲ್ಲೂ ಎಂಟು ಜನರಿಗೆ ಬಾಳಿಗೆ ಬೆಳಕಾಗಿ ಇಹಲೋಕ ತ್ಯಜಿಸಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ತಾನಿನ್ನು ಬದುಕುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಅಂಗಾಂಗಗಳನ್ನ ದಾನ ಮೂಡುವ ಮೂಲಕ ಎಂಟು ಜನರ ಬಾಳಿಗೆ ದೀಪಾವಳಿಯ ಬೆಳಕು ನೀಡಿದ್ದಾರೆ.

    26 ವರ್ಷದ ಶಿವರಾಜು ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ. ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಮಂಡಿಬೆಲೆ ಗ್ರಾಮದ ನಿವಾಸಿಯಾಗಿದ್ದ ಶಿವರಾಜು ಅಪಘಾತದಲ್ಲಿ ಗಾಯಗೊಂಡಿದ್ದರು. ಅಪಘಾತದ ಶಿವರಾಜು ತಲೆಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು.

    ಗಾಯಾಳು ಶಿವರಾಜು ಅವರನ್ನ ಕೋಡಿಗೆಹಳ್ಳಿಯ ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಟು ದಿನ ಚಿಕಿತ್ಸೆಗೆ ಶಿವರಾಜು ಸ್ಪಂದನೆ ನೀಡಿರಲಿಲ್ಲ. ಶಿವರಾಜು ಬದುಕೋದು ಅಸಾಧ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು.

     

    ಶಿವರಾಜು ತಂದೆ ಮುನಿರಾಜು ಮತ್ತು ತಾಯಿ ಮುನಿಲಕ್ಷ್ಮಿ ಅವರ ಅನುಮತಿ ಮೇರೆಗೆ ವೈದ್ಯರು ಅಂಗಾಂಗಳನ್ನು ಪಡೆದುಕೊಂಡಿದ್ದಾರೆ. ಶಿವರಾಜು ಅವರ ಅಂಗಾಂಗದಿಂದ ಎಂಟು ಜನರಿಗೆ ಸಹಾಯವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

    ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

    ಬಾಗಲಕೋಟೆ: ಕನ್ನಡ ರಾಜ್ಯೋತ್ಸವದ 65ನೇ ವರ್ಷದ ಸಂಭ್ರಮದಲ್ಲಿ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ. ಈ ಬಾರಿಯ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್ ಅವರಿಗೆ ಲಭಿಸಿದೆ. ಸೊನ್ನದ್ ಅವರ ಸಮಾಜ ಸೇವೆಯನ್ನ ಗುರುತಿಸಿದ್ದ ಪಬ್ಲಿಕ್ ಟಿವಿ 2014ರಲ್ಲಿಯೇ ಅಶೋಕ್ ಸೊನ್ನದ್ ಅವರನ್ನ ಪಬ್ಲಿಕ್ ಹೀರೋ ವೇದಿಯಲ್ಲಿ ಹೊರ ಜಗತ್ತಿಗೆ ಪರಿಚಯಿಸಿತ್ತು.

    ಡಾ ಅಶೋಕ್ ಸೊನ್ನದ್ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರು ಗ್ರಾಮದವರು. ತಮ್ಮ 75ನೇ ಇಳಿ ವಯ್ಯಸ್ಸಿನಲ್ಲೂ ಬಾಗಲಕೋಟೆ ನಗರದಲ್ಲೊಂದು ತಾಯಿ ಪಾರ್ವತಿಬಾಯಿ ಅವರ ಹೆಸರಲ್ಲಿ ಆಸ್ಪತ್ರೆ ತೆರೆದು ಉಚಿತ ಚಿಕಿತ್ಸೆ ನೀಡುತ್ತಾ ಬಡ ಜನರಿಗೆ ಸಂಜೀವಿನಿಯಾಗಿದ್ದಾರೆ. ಅಮೆರಿಕಾದಲ್ಲಿ ಕೆಲಸ ಮಾಡಿ ದೇಶಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ತವರಿಗೆ ಹಿಂದುರಗಿ ಚಿಕಿತ್ಸೆ ನೀಡುತ್ತಿದ್ದಾರೆ.

    ಸಕ್ಕರೆ ರೋಗ, ಊಂಡ್ ಮ್ಯಾನೇಜ್ಮೆಂಟ್ ಹೀಗೆ ಕ್ಲಿಷ್ಟ ರೋಗಗಳಿಗೆ ಸರಳ ಚಿಕಿತ್ಸೆ ನೀಡಿ ರೋಗಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ. ದಿನಕ್ಕೆ ಹತ್ತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರತಿ ರೋಗಿಯ ಬಳಿ ಆತ್ಮೀಯವಾಗಿ ಮಾತನಾಡುತ್ತಾ, ಎಲ್ಲ ಸಮಸ್ಯೆಗಳನ್ನು ನಿಧಾನವಾಗಿ ಆಲಿಸಿ ಗುಣಮಟ್ಟದ ಚಿಕಿತ್ಸೆಯನ್ನ ಅಶೋಕ್ ಸೊನ್ನದ್ ನೀಡುತ್ತಾರೆ. ಯಾರೇ ಇವರ ಬಳಿ ಚಿಕಿತ್ಸೆಗೆ ಬಂದರೀ ಸರದಿ ಸಾಲಿನಲ್ಲಿಯೇ ಬರಬೇಕು. ಬಡವ ಶ್ರೀಮಂತ ಎಂಬ ಭೇದ-ಭಾವವಿಲ್ಲದೇ ಸರಳ ಚಿಕಿತ್ಸೆ ನೀಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ನಾನು ಎಲ್ಲ ವೈದ್ಯರಂತೆ ಹಣ ಮಾಡುವ ಉದ್ದೇಶದಿಂದ ಆಸ್ಪತ್ರೆಯನ್ನು ತೆರೆದಿಲ್ಲ. ಅಮೆರಿಕದಲ್ಲಿ ಅಧ್ಯಯನ ಮಾಡಿ ಗುಣಮಟ್ಟವನ್ನು ಕಾಪಾಡದಿದ್ದರೆ ಹೇಗೆ? ಅದಕ್ಕಾಗಿ ಪ್ರತಿ ರೋಗಿಯನ್ನು ಕೂಲಂಕುಶವಾಗಿ ತಪಾಸಣೆ ಮಾಡುತ್ತೇನೆ. ಕೆಲವೊಮ್ಮೆ ರೋಗಿಯ ಕುಟುಂಬದ ಹಿನ್ನೆಲೆ ಕೇಳಿ ತಪಾಸಣೆ ಮಾಡುವಾಗ ಒಂದು ಗಂಟೆ ಆಗುತ್ತದೆ. ಹೀಗಾಗಿ ಸರದಿಯಲ್ಲಿ ನಿಂತ ಮೊದಲ ಹತ್ತು ಮಂದಿಗೆ ಮಾತ್ರ ಚಿಕಿತ್ಸೆ ನೀಡುತ್ತೇನೆ ಎಂದು ಸೊನ್ನದ್ ಹೇಳುತ್ತಾರೆ.

    ನಾನು ಹುಟ್ಟಿ ಬೆಳೆದ ದೇಶ ಭಾರತ. ನಾನು ಇಲ್ಲಿಯೇ ಶಿಕ್ಷಣ ಪಡೆದು ವೈದ್ಯಕೀಯ ಪದವಿ ಪಡೆದು ಅಮೆರಿಕದಲ್ಲಿ ಹೆಚ್ಚಿನ ಅಧ್ಯಯನ ಮಾಡಿದ್ದೇನೆ. ನಾನು ಕಲಿತ ವಿದ್ಯೆಯಿಂದ ದೇಶ ಜನರಿಗೆ ನೀಡಬೇಡವೇ? ಅದಕ್ಕಾಗಿ ಬಡ ಜನರಿಗಾಗಿ ಆಸ್ಪತ್ರೆಯನ್ನು ತೆರೆದಿದ್ದೇನೆ ಎಂಬುವುದು ಅಶೋಕ್ ಅವರ ಮಾತು.

    ಗಿನ್ನೀಸ್ ದಾಖಲೆ ಕುಟುಂಬ: ಡಾ. ಅಶೋಕ್ ಅವರ ಮನೆಯಲ್ಲಿ ಏಳು ಮಂದಿ ಪಿಹೆಚ್‍ಡಿ ಪಡೆದು ಗಿನ್ನಿಸ್ ದಾಖಲೆ ಮಾಡಿದ್ದಾರೆ ಬಹುತೇಕರು ಅಮೆರಿಕದಲ್ಲೇ ನೆಲೆಸಿದ್ದರೆ, ಇವರು ಮಾತ್ರ ತವರಿಗೆ ಬಂದು ಜನರ ಸೇವೆ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ