Tag: dmytro kuleba

  • ರಷ್ಯಾದ ತೈಲದಲ್ಲಿ ಉಕ್ರೇನ್ ಪ್ರಜೆಗಳ ರಕ್ತದ ವಾಸನೆ ಬೆರೆತಿದೆ: ಉಕ್ರೇನ್ ವಿದೇಶಾಂಗ ಸಚಿವ

    ರಷ್ಯಾದ ತೈಲದಲ್ಲಿ ಉಕ್ರೇನ್ ಪ್ರಜೆಗಳ ರಕ್ತದ ವಾಸನೆ ಬೆರೆತಿದೆ: ಉಕ್ರೇನ್ ವಿದೇಶಾಂಗ ಸಚಿವ

    ಕೀವ್: ರಷ್ಯಾದ ತೈಲವು ಇಂದು ಉಕ್ರೇನ್ ಪ್ರಜೆಗಳ ರಕ್ತದ ವಾಸನೆಯೊಂದಿಗೆ ಬೆರೆತಿದೆ. ಇದನ್ನು ಖರೀದಿಸುವುದರಿಂದ ಯುದ್ಧದ ಪರಿಹಾರವಾಗಿ ರಷ್ಯಾಕ್ಕೆ ಹಣ ನೀಡಿದಂತಾಗುತ್ತದೆ ಎಂದು ಉಕ್ರೇನ್‍ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಕಿಡಿಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಷ್ಯಾದ ವ್ಯಾಪಾರದಿಂದ ಗಳಿಸಿದ ಪ್ರತಿ ಡಾಲರ್ ಅಥವಾ ಯುರೋ, ಉಕ್ರೇನಿನ ಪುರುಷ ಮತ್ತು ಮಹಿಳೆಯರ ರಕ್ತದಲ್ಲಿ ನೆನೆಸಲ್ಪಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸ್ವಿಫ್ಟ್‌ನಿಂದ ರಷ್ಯಾದ ಬ್ಯಾಂಕುಗಳನ್ನು ನಿಷೇಧಿಸುವುದು, ರಷ್ಯಾದ ಹಡಗುಗಳಿಗೆ ಯೂರೋಪಿಯನ್ ಬಂದರುಗಳನ್ನು ಮುಚ್ಚಿರುವುದು, ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ನಾವು ಒತ್ತಾಯಿಸಿದ್ದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ

    ಭವಿಷ್ಯದಲ್ಲಿ ನಾವು ರಷ್ಯಾದ ಮಾರುಕಟ್ಟೆಯಿಂದ ಬಹುರಾಷ್ಟ್ರೀಯ ಕಂಪನಿಗಳ ಸಾಮೂಹಿಕ ನಿರ್ಗಮನವನ್ನು ನೋಡುತ್ತೇವೆ. ಈಗಾಗಲೇ 113 ಕಂಪನಿಗಳು ರಷ್ಯಾದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿವೆ. ಅವರ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ ಎಂದು ಹೇಳಿದ್ದಾರೆ.

    ಉಕ್ರೇನ್‍ನಲ್ಲಿ ರಷ್ಯಾ ದಾಳಿ ತೀವ್ರವಾಗಿರುವುದನ್ನು ಖಂಡಿಸಿದ ಅವರು, ರಷ್ಯನ್ನರು ಮನೆಗೆ ಹೋಗಿ. ನೀವು ವಿದೇಶಿ ನೆಲದಲ್ಲಿ ಇದ್ದೀರಿ, ಇಲ್ಲಿ ಯಾರೂ ನಿಮಗೆ ಅಗತ್ಯವಿಲ್ಲ ಮತ್ತು ಯಾರೂ ನಿಮ್ಮನ್ನು ಹೂವುಗಳಿಂದ ಸ್ವಾಗತಿಸುವುದಿಲ್ಲ. ಪುಟಿನ್, ಉಕ್ರೇನ್ ಅನ್ನು ಬಿಟ್ಟುಬಿಡಿ. ರಷ್ಯಾ ಈ ಯುದ್ಧವನ್ನು ಗೆಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ಆಫರ್ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ: ರಾಹುಲ್ ಗಾಂಧಿ

    ನಾವು ಮೇಲುಗೈ ಸಾಧಿಸಲು ರಷ್ಯಾದ ಮೇಲೆ ಒತ್ತಡವನ್ನು ಹೆಚ್ಚಿಸಬೇಕಾಗಿದೆ. ಉಕ್ರೇನ್ ಭದ್ರತೆಗೆ ಮಾತ್ರವಲ್ಲದೆ ನಮಗೆ ತಿಳಿದಿರುವಂತೆ ಯೂರೋಪಿಯನ್ ಆದೇಶವನ್ನೂ ಸಹ ಮೇಲುಗೈ ಸಾಧಿಸಬೇಕು ಎಂದು ಉಕ್ರೇನ್ ಪ್ರಜೆಗಳಿಗೆ ಧೈರ್ಯ ತುಂಬಿದ್ದಾರೆ.

  • ಮಹಿಳೆಯರ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ: ಉಕ್ರೇನ್‌ ಸಚಿವ ಆರೋಪ

    ಮಹಿಳೆಯರ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ: ಉಕ್ರೇನ್‌ ಸಚಿವ ಆರೋಪ

    ಲಂಡನ್‌: ರಷ್ಯಾ ಸೈನಿಕರು ಯುದ್ಧದ ನಡುವೆಯೇ ಉಕ್ರೇನಿಯನ್ನರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಗಂಭೀರ ಆರೋಪ ಮಾಡಿದ್ದಾರೆ.

    ನಗರಗಳ ಮೇಲೆ ಬಾಂಬ್‌ಗಳು ಬಿದ್ದಾಗ, ಆಕ್ರಮಿತ ನಗರಗಳಲ್ಲಿ ಸೈನಿಕರು ಮಹಿಳೆಯರನ್ನು ಅತ್ಯಾಚಾರ ಮಾಡಿದಾಗ, ದುರದೃಷ್ಟವಶಾತ್ ರಷ್ಯಾದ ಸೈನಿಕರು ಉಕ್ರೇನಿಯನ್ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳು ನಮ್ಮಲ್ಲಿವೆ. ಆದರೆ ಅಂತಾರಾಷ್ಟ್ರೀಯ ಕಾನೂನಿನ ದಕ್ಷತೆಯ ಬಗ್ಗೆ ಮಾತನಾಡುವುದು ಕಷ್ಟ ಎಂದು ಲಂಡನ್‌ನಲ್ಲಿ ಕುಲೆಬಾ ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ಬೇಡ: ಲೈವ್‌ನಲ್ಲೇ ರಷ್ಯಾ ಟಿವಿ ಚಾನೆಲ್‌ ಸಿಬ್ಬಂದಿ ಸಾಮೂಹಿಕ ರಾಜೀನಾಮೆ

    ಈ ಯುದ್ಧವನ್ನು ಸಾಧ್ಯವಾಗಿಸಿದ ಎಲ್ಲರನ್ನೂ ನ್ಯಾಯಾಂಗದ ವ್ಯಾಪ್ತಿಗೆ ತರಲು ನನಗೆ ಲಭ್ಯವಿರುವ ಏಕೈಕ ಸಾಧನ ನಾಗರಿಕರು ಎಂದು ಕುಲೆಬಾ ಮಾತನಾಡಿದ್ದಾರೆ.

    ಉಕ್ರೇನ್‌ ವಿರುದ್ಧ ರಷ್ಯಾ ಕಳೆದ ವಾರದಿಂದ ನಿರಂತರವಾಗಿ ಯುದ್ಧವನ್ನು ನಡೆಸುತ್ತಿದೆ. ಈಗಾಗಲೇ ಹಲವು ನಗರಗಳನ್ನು ರಷ್ಯಾ ಸೇನಾ ಪಡೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು, ಸೈನಿಕರು ಮರಣವನ್ನಪ್ಪಿದ್ದಾರೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಈವರೆಗೆ ನಡೆದಿರುವ ಮಾತುಕತೆಗಳು ಸಫಲವಾಗಿಲ್ಲ. ಇದನ್ನೂ ಓದಿ: ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ