Tag: Divyanka Tripathi

  • ಎರಡೂ ಕೈ ಮುರಿದುಕೊಂಡಿದ್ದ ನಟಿ ಮನೆಗೆ ವಾಪಸ್ಸು

    ಎರಡೂ ಕೈ ಮುರಿದುಕೊಂಡಿದ್ದ ನಟಿ ಮನೆಗೆ ವಾಪಸ್ಸು

    ತ್ತೀಚೆಗಷ್ಟೇ ಶೂಟಿಂಗ್ (Shooting) ವೇಳೆಯ ಕನ್ನಡದ ನಟ ಶ್ರೀಮುರುಳಿ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಇದರ ಬೆನ್ನಲ್ಲೆ ಹಿಂದಿ ಕಿರುತೆರೆಯ ಕ್ಷೇತ್ರದಿಂದ ಮತ್ತೊಂದು ಸುದ್ದಿ ಬಂದಿತ್ತು. ಕಿರುತೆರೆಯ ಖ್ಯಾತ ನಟಿ ದಿವ್ಯಾಂಕಾ ತ್ರಿಪಾಠಿಗೆ (Divyanka Tripathi) ಅಪಘಾತವಾಗಿದ್ದು (Accident), ಅವರ ಎರಡೂ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

    ಅತೀ ಎತ್ತರದ ಸ್ಥಳದಿಂದ ಬಿದ್ದ ಕಾರಣದಿಂದಾಗಿ ಎರಡೂ ಕೈಗಳ ಮಣಿಕಟ್ಟುಗಳು ಮುರಿದಿದ್ದವು. ಇದು ಜಿಮ್ ನಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಆಗ  ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ ಎಂದು ಪತಿ ವಿವೇಕ್ ತಿಳಿಸಿದ್ದರು. ಈಗ ಅವರು ಮನೆಗೆ ವಾಪಸ್ಸಾಗಿದ್ದಾರೆ. ವಿಶ್ರಾಂತಿ ತಗೆದುಕೊಳ್ಳಲು ವೈದ್ಯರು ತಿಳಿಸಿದ್ದಾರೆ.

    ನಾನು ಈಗ ವಿಶ್ರಾಂತಿಯಲ್ಲಿ ಇದ್ದೇನೆ. ವೈದ್ಯರು ಚೆನ್ನಾಗಿಯೇ ನೋಡಿಕೊಂಡರು. ಆದಷ್ಟು ಬೇಗ ಸರಿ ಹೋಗಿ ಮತ್ತೆ ಶೂಟಿಂಗ್ ಗೆ ಮರಳುತ್ತೇನೆ ಎಂದು ಅವರು ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬೇಗ ಸರಿ ಹೋಗಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

     

    ಮಧ್ಯ ಪ್ರದೇಶ ಮೂಲದ ದಿವ್ಯಾಂಕ ಕೇವಲ ಕಿರುತೆರೆ ನಟಿ ಮಾತ್ರವಲ್ಲ, ಆಕಾಶವಾಣಿ ಕಲಾವಿದೆ ಕೂಡ ಆಗಿದ್ದಾರೆ. ಅಲ್ಲದೇ ಅನೇಕ ರಿಯಾಲಿಟಿ ಶೋಗಳನ್ನೂ ಅವರು ಭಾಗಿಯಾಗಿದ್ದಾರೆ. ವೆಬ್ ಸಿರೀಸ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

  • ಖ್ಯಾತ ಕಿರುತೆರೆ ನಟಿ ದಿವ್ಯಾಂಕಾಗೆ ಅಪಘಾತ: ಕಾಲಿಗೆ ಶಸ್ತ್ರ ಚಿಕಿತ್ಸೆ

    ಖ್ಯಾತ ಕಿರುತೆರೆ ನಟಿ ದಿವ್ಯಾಂಕಾಗೆ ಅಪಘಾತ: ಕಾಲಿಗೆ ಶಸ್ತ್ರ ಚಿಕಿತ್ಸೆ

    ನಿನ್ನೆಯಷ್ಟೇ ಶೂಟಿಂಗ್ (Shooting) ವೇಳೆಯ ಕನ್ನಡದ ನಟ ಶ್ರೀಮುರುಳಿ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಇದರ ಬೆನ್ನಲ್ಲೆ ಹಿಂದಿ ಕಿರುತೆರೆಯ ಕ್ಷೇತ್ರದಿಂದ ಮತ್ತೊಂದು ಸುದ್ದಿ ಬಂದಿದ್ದು, ಖ್ಯಾತ ನಟಿ ದಿವ್ಯಾಂಕಾ ತ್ರಿಪಾಠಿಗೆ (Divyanka Tripathi) ಅಪಘಾತವಾಗಿದ್ದು (Accident), ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶೂಟಿಂಗ್ ವೇಳೆ ಅತೀ ಎತ್ತರದ ಸ್ಥಳದಿಂದ ಬಿದ್ದ ಕಾರಣದಿಂದಾಗಿ ಕಾಲಿನ ಎರಡೂ ಮಣಿಕಟ್ಟುಗಳು ಮುರಿದಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ ಎಂದು ಪತಿ ವಿವೇಕ್ ತಿಳಿಸಿದ್ದಾರೆ.

     

    ಮಧ್ಯ ಪ್ರದೇಶ ಮೂಲದ ದಿವ್ಯಾಂಕ ಕೇವಲ ಕಿರುತೆರೆ ನಟಿ ಮಾತ್ರವಲ್ಲ, ಆಕಾಶವಾಣಿ ಕಲಾವಿದೆ ಕೂಡ ಆಗಿದ್ದಾರೆ. ಅಲ್ಲದೇ ಅನೇಕ ರಿಯಾಲಿಟಿ ಶೋಗಳನ್ನೂ ಅವರು ಭಾಗಿಯಾಗಿದ್ದಾರೆ. ವೆಬ್ ಸಿರೀಸ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

  • ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು

    ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು

    ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಠಿ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ ತಾವು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

    ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ದಿವ್ಯಾಂಕಾ ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿ ಜೀವನ ಆರಂಭಿಸಿದಾಗ ಕೆಲವು ನಿರ್ದೇಶಕರು ತಮ್ಮ ಜೊತೆ ಸಮಯ ಕಳೆಯುವಂತೆ ಕೇಳಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಇಂತಹವರು ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಅದನ್ನು ಮಾಡುತ್ತಾರೆ ಎಂದು ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ನಿಮಗೆ ಸಮಸ್ಯೆಗಳು ಆರಂಭವಾಗುತ್ತದೆ. ನನ್ನ ಬಳಿ ಹಣವೇ ಇಲ್ಲದ ಕಾಲವೊಂದಿತ್ತು. ಆದರೂ ನನ್ನ ಬಿಲ್‍ಗಳು, ಇಎಂಐಗಳನ್ನು ಇತ್ಯಾದಿಗಳನ್ನು ಪಾವತಿಸಬೇಕಾಗಿತ್ತು. ನನಗೆ ಸಾಕಷ್ಟು ಒತ್ತಡವಿತ್ತು. ಆಗ ನನಗೊಂದು ಬಿಗ್ ಆಫರ್ ಬಂತು. ನೀವು ಈ ನಿರ್ದೇಶಕರ ಜೊತೆ ಇದ್ದರೆ, ನಿಮಗೆ ದೊಡ್ಡ ಬ್ರೇಕ್ ಸಿಗುತ್ತದೆ ಎಂದರು. ಆದರೆ ನಾನು ಯಾಕೆ ಇರಬೇಕು? ಎಂದು ಪ್ರಶ್ನಿಸಿಕೊಂಡೆ. ಇದರಿಂದ ನನ್ನ ಜೀವನ ಆಗುತ್ತದೆ ಎಂಬುವುದು ಸುಳ್ಳು, ಹಾಗೆ ನಾನು ಮಾಡಿದರೆ ನನ್ನ ಜೀವನವನ್ನು ಮಾರಾಟ ಮಾಡಿಕೊಂಡಂತೆ. ನಾನು ಯಾವಾಗಲೂ ತನ್ನ ಪ್ರತಿಭೆಯನ್ನು ನಂಬುತ್ತೇನೆ ಮತ್ತು ನನ್ನ ಸಾಮರ್ಥ್ಯದ ಆಧಾರದ ಮೇಲೆ ಹೊಸ ಪ್ರಾಜೆಕ್ಟ್‌ಗಳನ್ನು ಮಾಡುತ್ತೇನೆ ಹೊರತು ನಿರ್ದೇಶಕನೊಂದಿಗೆ ಅಲ್ಲ ಎಂದು ಅರಿತುಕೊಂಡಿರುವುದಾಗಿ ತಿಳಿಸಿದ್ದಾರೆ.

    ಮೀಟೂ ಚಳುವಳಿಯಿಂದ ಇಂತಹ ಆಫರ್ ನೀಡುವ ಜನರು ಮತ್ತು ಉದ್ಯಮದಲ್ಲಿರುವ ಪ್ರತಿಯೊಬ್ಬರಿಗೂ ಈ ಕುರಿತಂತೆ ಮನವರಿಕೆಯಾಯಿತು. ನೀವು ಈ ರೀತಿ ಇಂಡಸ್ಟ್ರಿಯಲ್ಲಿ ಮಾಡುವುದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಏನು ಆಗುವುದಿಲ್ಲ. ಬದಲಾಗಿ ನೀವು ಅದನ್ನು ಮಾಡಿದರೆ, ಮುಂದೆ ಹೀಗೆ ಮಾಡದಿದ್ದರೆ ನಿಮ್ಮ ವೃತ್ತಿ ಜೀವನ ಹಾಳು ಮಾಡುತ್ತೇವೆ ಎಂಬ ಮಟ್ಟಕ್ಕೆ ಹೋಗುತ್ತಾರೆ ಎಂದಿದ್ದಾರೆ.

    ಇದೆಲ್ಲಾ ನೋಡುತ್ತಿದ್ದರೆ ಆರಂಭದಲ್ಲಿ ನನಗೆ ಕಾಮಿಡಿಯಾಗಿ ಕಾಣಿಸುತ್ತಿತ್ತು. ನನಗೆ ನನ್ನ ಪ್ರತಿಭೆ ಆಧಾರದ ಮೇಲೆ ಮೊದಲ ಬಾರಿಗೆ ಕೆಲಸ ಸಿಕ್ಕಿತು. ಸದ್ಯ ಹಾಗೆಯೇ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video