Tag: Divya hagaragi

  • ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಲ್ಲ: ಕರುಣಾಕರ ಖಾಸಲೆ

    ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಲ್ಲ: ಕರುಣಾಕರ ಖಾಸಲೆ

    ಬೆಂಗಳೂರು: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪಿ ಕಲಬುರಗಿಯ ಶಾಲೆಯೊಂದರ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ಪಕ್ಷದ ನಾಯಕಿಯಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರರು ಮತ್ತು ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಮಾಧ್ಯಮ ಪ್ರಕಟನೆ ಹೊರಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿದ ಅವರು, ದಿವ್ಯಾ ಹಾಗರಗಿ ಅಥವಾ ಯಾರೇ ಅಕ್ರಮದಲ್ಲಿ ಭಾಗವಹಿಸಿದ್ದರೆ ಅದನ್ನು ಪಕ್ಷ ಮತ್ತು ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಅಕ್ರಮ ನಡೆದಿರುವುದು ಸಾಬೀತಾದರೆ ಶಿಕ್ಷೆ ಆಗಲಿದೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಈ ವಿಷಯದ ಕುರಿತು ಸಿಐಡಿ ತನಿಖೆ ನಡೆಸಲು ಸೂಚಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

    ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ದಿವ್ಯಾ ಹಾಗರಗಿ ಮೇಲೆ ಕೇಳಿ ಬಂದಿತ್ತು. ಅವರ ಪತಿ ರಾಜೇಶ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿದ್ದಾರೆ. ಇತ್ತ ದಿವ್ಯಾ ಹಾಗರಗಿ ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್‍ಗೆ 14 ದಿನ ನ್ಯಾಯಾಂಗ ಬಂಧನ

    ಈ ನಡುವೆ ವಿರೋಧ ಪಕ್ಷಗಳು ಬಿಜೆಪಿ ಪಕ್ಷದ ನಾಯಕಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಹೊರಿಸುತ್ತಿದೆ. ಈ ಎಲ್ಲದರ ನಡುವೆ ಬಿಜೆಪಿ ಸರ್ಕಾರ ಡ್ಯಾಮೆಜ್ ಕಂಟ್ರೋಲ್‍ಗೆ ಮುಂದಾಗಿ ಬಿಜೆಪಿಗೂ ದಿವ್ಯಾ ಹಾಗರಗಿ ಸಂಬಂಧವಿಲ್ಲ ಎಂದು ತಿಳಿಸಿದೆ.

  • ಮೋದಿ ಬಗ್ಗೆ ಮಾತನಾಡುವ ಮೊದಲು, ನೀನು ಗಂಡಸು ಅನ್ನೋದನ್ನು ಪರೀಕ್ಷಿಸಿಕೋ: ನಾರಾಯಣರಾವ್‍ಗೆ ಜಿಲ್ಲಾಧ್ಯಕ್ಷೆ ಸವಾಲ್

    ಮೋದಿ ಬಗ್ಗೆ ಮಾತನಾಡುವ ಮೊದಲು, ನೀನು ಗಂಡಸು ಅನ್ನೋದನ್ನು ಪರೀಕ್ಷಿಸಿಕೋ: ನಾರಾಯಣರಾವ್‍ಗೆ ಜಿಲ್ಲಾಧ್ಯಕ್ಷೆ ಸವಾಲ್

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಮೊದಲು ನೀನು ಗಂಡಸೇ ಎನ್ನುವುದನ್ನ ಪರೀಕ್ಷಿಸಿಕೋ ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ದಿವ್ಯಾ ಹಾಗಾರಗಿ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‍ಗೆ ಸವಾಲ್ ಹಾಕಿದ್ದಾರೆ.

    ಮೋದಿ ವಿರುದ್ಧ ಬಿ ನಾರಾಯಣರಾವ್ ವಿವಾದತ್ಮಕ ಹೇಳಿಕೆ ಖಂಡಿಸಿ, ಕಲಬುರಗಿ ನಗರದ ಸರ್ಧಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ದಿವ್ಯಾ ಹಾಗಾರಗಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ನಾರಾಯಣರಾವ್ ಅವರ ಭಾವಚಿತ್ರಕ್ಕೆ ಸಗಣಿ ಎರಚಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ದಿವ್ಯಾ ಅವರು, ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಎಂಥಹ ಸಂಸ್ಕೃತಿಯಿಂದ ಮಾತಾನಾಡಬೇಕು ಅಂತ ಕನಿಷ್ಟ ಜ್ಞಾನವಿಲ್ಲದ, ನಿನ್ನಂಥವನಿಗೆ ಆಯ್ಕೆ ಮಾಡಿದ್ದು ಶರಣರ ನಾಡಿನ ಜನರ ದುರ್ದೈವ. ಮೋದಿಯವರ ಬಗ್ಗೆ ಕೀಳಾಗಿ ಮಾತಾನಾಡುವ ಬದಲು, ನೀನು ಗಂಡಸೇ ಎನ್ನುವುದನ್ನ ಮೊದಲು ಪರೀಕ್ಷಿಸಿಕೋ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಬಸವಕಲ್ಯಾಣದ ಜನರಿಗೆ ಸ್ವಾಭಿಮಾನವಿದ್ದಲ್ಲಿ ಮೊದಲು ನಾರಾಯಣರಾವ್‍ನನ್ನ ಕ್ಷೇತ್ರದಿಂದ ಹೊರಹಾಕಿ ಅಂತ ಕರೆ ನೀಡಿದ್ದಾರೆ.

    ನಾರಾಯಣರಾವ್ ಹೇಳಿದ್ದು ಏನು?
    ಜಿಲ್ಲೆಯಲ್ಲಿ ನಡೆದ ಕೈ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ನಾರಾಯಣ ರಾವ್, ಮಲ್ಲಿಕಾರ್ಜುನ ಖರ್ಗೆ ಅವರ ಹಿಂದೆ ಇಡೀ ದೇಶವಿದೆ. ಆದರೆ ಅದು ಮೋದಿಗೆ ಅರ್ಥವಾಗುತ್ತಿಲ್ಲ. ನಾಮರ್ಧ್ ಕೇ ಸಾಥ್ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತಿ ಹೈ (ಷಂಡರ ಜೊತೆ ಮದ್ವೆಯಾಗುತ್ತದೆ. ಆದರೆ ಮಕ್ಕಳಾಗಲ್ಲ). ಮೋದಿ ಸೇ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತೆ ಹೈ(ಮೋದಿ ಜೊತೆ ಮದ್ವೆಯಾಗಬಹುದು, ಆದರೆ ಮೋದಿಗೆ ಮಕ್ಕಳಾಗಲ್ಲ) ಎಂದು ಹೇಳಿ ಪ್ರಧಾನಿ ಅವರನ್ನು ಷಂಡರಿಗೆ ಹೋಲಿಸಿ ವ್ಯಂಗ್ಯವಾಡಿದ್ದರು.

    ಮಲ್ಲಿಕಾರ್ಜುನ ಖರ್ಗೆಯನ್ನು ಎದುರಿಸೋ ಶಕ್ತಿ ಮೋದಿಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಮುಂದೊಂದು ದಿನ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುತ್ತ ಹಿಂದಿಯ ಶಾಯರಿಯೊಂದನ್ನು ಬಳಸಿ ಮೋದಿ ಅವರಿಗೆ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನಾರಾಯಣ್‍ರಾವ್ ನೀಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.