Tag: Divine

  • ನಾಗಮಂಡಲ, ಭೂತಾರಾಧನೆಯ ಕುರಿತು ಹೇಳಿಕೆ – ವಿನಯ್ ಗುರೂಜಿ ವಿರುದ್ಧ ಕರಾವಳಿಯಲ್ಲಿ ಆಕ್ರೋಶ

    ನಾಗಮಂಡಲ, ಭೂತಾರಾಧನೆಯ ಕುರಿತು ಹೇಳಿಕೆ – ವಿನಯ್ ಗುರೂಜಿ ವಿರುದ್ಧ ಕರಾವಳಿಯಲ್ಲಿ ಆಕ್ರೋಶ

    ಮಂಗಳೂರು: ಭೂತಾರಾಧನೆ ಮತ್ತು ನಾಗಾರಾಧನೆ ಕರಾವಳಿ ಜನರು ಆರಾಧಿಸುವ ಭಕ್ತಿಯ ಆಚರಣೆ. ಆದರೆ ಚಿಕ್ಕಮಗಳೂರು ಮೂಲದ ಅವಧೂತ ವಿನಯ್ ಗುರೂಜಿ, ನಾಗಾರಾಧನೆ ಮತ್ತು ಭೂತಾರಾಧನೆಯನ್ನು ಅವಹೇಳನಗೈದು ಮಾತನಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

    ಕರಾವಳಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ವಿನಯ್ ಗುರೂಜಿ, ಇನ್ನೊಬ್ಬರಿಗೆ ಅಡ್ಡ ಬೀಳಬೇಕಾದರೆ (ಕಾಲಿಗೆ ಬೀಳಬೇಕಾದರೆ) ಯಾಕೆ ಬೀಳಬೇಕು? ಅವನು ಏನು? ನಾನು ಏನು? ಎಂದು ಯೋಜನೆ ಮಾಡಿ. ಪೂಜೆ ಎಂದರೆ ಏನು? ಏಕೆ ಪೂಜೆ ಮಾಡಬೇಕು? ಅದರಿಂದ ಏನಾಗುತ್ತದೆ ಎಂದು ತಿಳಿದುಕೊಂಡು ಪೂಜೆ ಮಾಡಿ. ನಾಗಮಂಡಲಕ್ಕಾಗಿ ಕೆಲವರು 2- 3 ಕೋಟಿ ರೂ. ಖರ್ಚು ಮಾಡುತ್ತಾರೆ. ನಾಗಮಂಡಲಕ್ಕೆ ಮಾಡುವ ಕೋಟಿ ಕೋಟಿ ಖರ್ಚಿನಲ್ಲಿ ಒಳ್ಳೆಯ ರಸ್ತೆ ಮಾಡಬಹುದು ಎಂದು ಹೇಳಿದ್ದಾರೆ.

    ತುಳುನಾಡಿನ ಭೂತಗಳು ಬ್ರಾಹ್ಮಣರ ಮನೆಯಲ್ಲಿ ಇಡ್ಲಿ ಸಾಂಬಾರ್ ಸ್ವೀಕರಿಸಿದರೆ, ಶೆಟ್ರ ಮನೆಯಲ್ಲಿ ಕೋಳಿ ಸ್ವೀಕಾರ ಮಾಡುತ್ತದೆ. ಇದೇನು ಭೂತಗಳಲ್ಲೂ ವೈರುಧ್ಯ, ತಾರತಮ್ಯ ಇದೆಯೇ? ದೇವರಿರುವುದು ನಮ್ಮಲ್ಲಿ ಶ್ರದ್ಧೆ ತರಿಸಲು ಹೊರತು ಅಂಧ ವಿಶ್ವಾಸಗಳಿಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. ವಿನಯ್ ಗುರೂಜಿಯ ಈ ಮಾತುಗಳ ಬಗ್ಗೆ ಕರಾವಳಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದೆ.

    ಹಿಂದಿನಿಂದ ನಡೆಸಿಕೊಂಡು ಬಂದಿರುವ ಆಚರಣೆಗಳಿಗೆ ನನ್ನ ನಮಸ್ಕಾರ. ಆದರೆ ಅದನ್ನು ಇಟ್ಟುಕೊಂಡು ವ್ಯಾಪಾರ ಮಾಡಬಾರದು. ಯಾರ ಕಣ್ಣು ಬೇಕಾದರೂ ಮುಚ್ಚಿಸಬಹುದು. ಆದರೆ ಭಗವಂತನ ಕಣ್ಣು ಮುಚ್ಚಿಸಲು ಸಾಧ್ಯವಿಲ್ಲ. ಸೃಷ್ಟಿ ಇರುವುದು ಎಷ್ಟು ಸತ್ಯವೋ ಅದೇ ರೀತಿ ಸೃಷ್ಟಿಕರ್ತ ಇರುವುದು ಅಷ್ಟೇ ಸತ್ಯ ಎಚ್ಚರವಾಗಿರಿ ಎಂದರು.

    ನಾಗಪಾತ್ರಿಗಳು ಮುಖಕ್ಕೆ ಹಿಂಗಾರ ಲೇಪಿಸಿಕೊಂಡು ಹೊರಳಾಡುತ್ತಾರೆ. ಅದನ್ನು ನೋಡಲು ಒಂದು ಜನರ ಗುಂಪು. ಆ ಹಿಂಗಾರ ಬೆಳೆಯಲು ರೈತ ಆರು ತಿಂಗಳ ಕಾಲ ಬೆವರು ಹರಿಸುತ್ತಾನೆ. ನಾಗಪಾತ್ರಿಗಳಿಗೆ ಇಷ್ಟಿಷ್ಟು ಚಿನ್ನ ಹಾಕಬೇಕೆಂದು ಯಾವ ಸುಬ್ರಹ್ಮಣ್ಯ ಬಂದು ಹೇಳಿದ್ದಾನೆ. ಅರುಣಾಚಲ ಪ್ರದೇಶಕ್ಕೆ ರಮಣ ಮಹರ್ಷಿಯಾಗಿ ಸುಬ್ರಹ್ಮಣ್ಯ ಬಂದಿದ್ದ. ಆದರೆ ಆತ ಲಂಗೋಟಿ ಹಾಕಿಕೊಂಡು ಬಂದಿದ್ದನು. ಅವನ ಹೆಸರು ಹೇಳಿಕೊಂಡು ನಾಟಕವಾಡಿದರೆ ಸರಿಯಿರಲ್ಲ. ಇದು ನನ್ನ ವಾರ್ನಿಂಗ್ ಎಂದು ಹೇಳಿದ್ದಾರೆ.

  • ಉಡುಪಿಯಲ್ಲಿ ಹುಲಿವೇಷಧಾರಿಗಳಿಗೆ ದೈವಾವೇಶ!

    ಉಡುಪಿಯಲ್ಲಿ ಹುಲಿವೇಷಧಾರಿಗಳಿಗೆ ದೈವಾವೇಶ!

    ಉಡುಪಿ: ನಿಮಗೆ ವಿಚಿತ್ರ ಅನ್ನಿಸಿದರು ನಾವೀಗ ಹೇಳುತ್ತಿರುವ ಇರುವ ಸುದ್ದಿ ಸತ್ಯ. ದೇವರು, ದೈವವೆಲ್ಲಾ ಸುಳ್ಳು ಅಂತ ಹೇಳುವ ಮಂದಿ ಕೂಡಾ ಈ ಸುದ್ದಿಯನ್ನು ಓದಬೇಕು.

    ಅಷ್ಟಮಿ, ಗಣೇಶೋತ್ಸವ ಹೀಗೆ ವಿಶೇಷ ಹಬ್ಬದ ವೇಳೆ ಕರಾವಳಿಯಲ್ಲಿ ಹುಲಿ ವೇಷದ ಕುಣಿತವಿರುತ್ತದೆ. ಯುವಕರ ಗುಂಪುಗಳು ಹುಲಿವೇಷ ಹಾಕಿ ಕುಣಿದು ಸೇವೆ ನೀಡುತ್ತಾರೆ, ಹಣ ಸಂಪಾದನೆ ಮಾಡುತ್ತಾರೆ. ಮೊನ್ನೆ ಆರಂಭವಾದ ಗಣೇಶೋತ್ಸವದ ಸಂಭ್ರಮ ಇನ್ನೂ ಮುಂದುವರಿದಿದ್ದು, ಉಡುಪಿಯ ತೆಂಕ ನಿಡಿಯೂರು ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿ 25 ಯುವಕರು ಹುಲಿವೇಷಕ್ಕೆ ಬಣ್ಣ ಹಚ್ಚಿದ್ದರು. ಈ ತಂಡ ಹಲವು ವರುಷಗಳಿಂದ ಹುಲಿವೇಷ ಧರಿಸಿ ಕುಣಿಯುವುದನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದೆ. ಕುಣಿಯುತ್ತಾ ಕುಣಿಯುತ್ತಾ ಈ ಬಾರಿ ಇಬ್ಬರು ಹುಲಿವೇಷ ಧಾರಿಗಳಿಗೆ ಏಕಾಯೇಕಿ ಆವೇಶ ಬಂದಿದೆ. ಸಂದೀಪ್ ಹಾಗೂ ಹರೀಶ್ ವಿಚಿತ್ರವಾಗಿ ವರ್ತಿಸಿದ್ದಾರೆ. ಎಲ್ಲೆಂದರಲ್ಲಿ ಓಡಲು ಯತ್ನಿಸಿದ್ದಾರೆ. ಹುಲಿ ಬಿಡುವ ಮುಹೂರ್ತ ಪೂಜೆಯ ವೇಳೆ ಯಾವುದೇ ಶಕ್ತಿಯೊಂದು ಮೈಮೇಲೆ ಅವೇಶ ಗೊಂಡಂತೆ ಭಾಸವಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಈ ಕ್ಷಣಗಳು ವೈರಲ್ ಅಗಿದೆ. ಶ್ರದ್ಧೆ ಭಕ್ತಿ ಯಿಂದ ಹುಲಿವೇಷ ಧರಿಸಿದರೆ ಅವೇಶ ಬರುತ್ತೆ ಅನ್ನುವುದು ಜನ ಸಾಮಾನ್ಯರ ನಂಬಿಕೆ. ಹುಲಿವೇಷ ಹಾಕುವುದು ಕೇವಲ ಹೊಟ್ಟೆಪಾಡಿಗೆ ಅಥವಾ ಮನೋರಂಜನೆಗಲ್ಲ ಈ ವೀಷಯದ ಹಿಂದೆ ದೈವಿಕ ಆಚರಣೆ ಇದೆ. ಉಪವಾಸ ಮಾಡಿ, ಹರಕೆ ಹೊತ್ತು ಶೃದ್ಧೆಯಿಂದ ಹುಲಿವೇಷ ಧರಿಸಿದವರಿಗೆ ಆವೇಶ ಬರುತ್ತದೆ ಎಂದು ಹಿಂದಿನವರು ಹೇಳುತ್ತಾರೆ.

    ನಮಗೆ ಕೆಲವು ನಿಮಿಷ ಏನಾಗಿದೆ ಎಂಬೂದೇ ಗೊತ್ತಾಗಲಿಲ್ಲ. ವಿಚಿತ್ರ ಶಕ್ತಿ ಆವರಿಸಿದಂತಾಗಿದೆ. ಕೆಲ ಕಾಲದ ನಂತರ ಸಹಜ ಸ್ಥಿತಿಗೆ ಬಂದಿದ್ದೇವೆ. ಆಮೇಲೆ ಬಹಳ ಸುಸ್ತಾದಂತಾಗಿತ್ತು ಎಂದು ಯುವಕರಿಬ್ಬರು ಪತ್ರಿಕ್ರಿಯಿಸಿದ್ದಾರೆ.

    ತುಳುನಾಡಿನಲ್ಲಿ ವೇಷ ತೊಡುವುದು ಒಂದು ಸಂಪ್ರದಾಯ. ದೇವಿಗೆ ಹರಕೆ ಹೇಳಿ ಹುಲಿವೇಷವನ್ನು ಹಾಕುವವರಿದ್ದಾರೆ. ಮಾಂಸಾಹಾರ ತ್ಯಜಿಸಿ, ಬಹಳ ಶುದ್ಧತೆಯಲ್ಲಿ ಮಾನಸಿಕವಾಗಿ ಸಿದ್ಧವಾಗಿ ಹುಲಿವೇಷ ಹಾಕುವ ಯುವಕರನ್ನೂ ಉಡುಪಿ, ದಕ್ಷಿಣ ಕನ್ನಡದಲ್ಲಿ ಕಾಣುತ್ತೇವೆ. ಹುಲಿ ದೇವಿಯ ವಾಹನವಾಗಿರುವುದರಿಂದ ದೈವೀ ಶಕ್ತಿ ಆವಾಹನೆಯಾಗುತ್ತದೆ. ತೆಂಕ ನಿಡಿಯೂರಿನಲ್ಲಿ ಹುಲಿ ನರ್ತನ ಸೇವೆಗೆ ಮುನ್ನ ಧೂಪಹಾಕುವ ಸಂದರ್ಭ ಯುವಕರಲ್ಲಿ ಆವೇಶವಾಗಿದೆ. ಆಮೇಲೆ ತೀರ್ಥ ಪ್ರಸಾದ ಕೊಟ್ಟ ನಂತರ ಹುಲಿವೇಷಧಾರಿಗಳು ಆವೇಷ ಮುಕ್ತರಾಗಿದ್ದಾರೆ ಎಂದು ಧಾರ್ಮಿಕ ತಜ್ಞ ಶ್ರೀಕಾಂತ್ ಶೆಟ್ಟಿ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಉಡುಪಿ: ಶಿರೂರು ಲಕ್ಷ್ಮಿವರ ತೀರ್ಥ ಸ್ವಾಮೀಜಿಯವರಿಗೆ ವ್ಯವಹಾರದಲ್ಲಿ 26 ಕೋಟಿ ರೂಪಾಯಿ ಮೋಸ ಆಗಿದ್ಯಂತೆ. ಈ ಕುರಿತು ಸ್ವತಃ ಶಿರೂರು ಸ್ವಾಮೀಜಿ ಅವರೇ ದೈವದ ಮುಂದೆ ದೂರು ಕೊಟ್ಟಿದ್ದರು. ಈ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ.

    ಶಿರೂರು ಸ್ವಾಮೀಜಿ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಸ್ವಾಮೀಜಿಗೆ ಇಬ್ಬರು ಉದ್ಯಮಿಗಳಿಂದ ಮೋಸ ಆಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಉದ್ಯಮಿಗಳ ವಿರುದ್ಧ ಕೋಟಿ ಚೆನ್ನಯ್ಯರಿಗೆ ದೂರು ನೀಡಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ ಹಿರಿಯಡ್ಕದಲ್ಲಿ ನಡೆದ ಗರೊಡಿಯಲ್ಲಿ ಶಿರೂರು ಸ್ವಾಮೀಜಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೈವ ನುಡಿ ಕೊಡುವ ವೇಳೆ ಸ್ವಾಮೀಜಿ ತಮ್ಮ ನೋವು ತೋಡಿಕೊಂಡಿದ್ದರು. ಇಬ್ಬರು ಉದ್ಯಮಿಗಳಿಂದ ನನಗೆ ಮೋಸವಾಗಿದೆ. ಒಬ್ಬ 12 ಕೋಟಿ, ಮತ್ತೊಬ್ಬ 14 ಕೋಟಿ ರೂ. ಮೋಸವಾಗಿದೆ. ನನ್ನ ಇತರೆ ನೋವನ್ನೆಲ್ಲ ಪಕ್ಕಕ್ಕೆ ಸರಿಸಿ ಬದುಕುತ್ತಿದ್ದೇನೆ. ಈಗ ಹಣಕಾಸಿನ ವಿಚಾರದಲ್ಲೂ ಮೋಸವಾಗಿದೆ ಅಂತ ಸ್ವಾಮೀಜಿ ದೂರಿದ್ದಾರೆ. ನಿನ್ನ ಕಾರಣಿಕದಿಂದ ಹಣ ತರಿಸಿಕೊಡು ಅಂತ ಕೋಟಿ ಚೆನ್ನಯ್ಯರ ಮುಂದೆ ಸಮಸ್ಯೆ ತೋಡಿಕೊಂಡಿದ್ದರು. ಸ್ವಾಮೀಜಿಗೆ ವ್ಯವಹಾರದಲ್ಲೂ ಕೋಟ್ಯಾಂತರ ರೂಪಾಯಿ ಮೋಸವಾಗಿದೆ ಎಂಬೂದು ಈ ವಿಡಿಯೋ ಮೂಲಕ ಸಾಬೀತಾಗಿದೆ.

    ಕೊಡಮಣಿತ್ತಾಯ ಶಾಪ?:
    ಇದಕ್ಕೂ ಮೊದಲು ಅಂದ್ರೆ 5 ವರ್ಷದ ಹಿಂದೆ ಸ್ವಾಮೀಜಿಯವರು ಉಡುಪಿಯ ಪಡುಬಿದ್ರೆಯ ಬಾಲುಪೂಜಾರಿ ಎಂಬವರ ಕುಟುಂಬದ ಮನೆಯಲ್ಲಿ ನಡೆದ ನೇಮದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ್ದರು ಎನ್ನಲಾಗಿದ್ದು, ಆ ದೈವದ ಶಾಪದಿಂದಲೇ ಸ್ವಾಮೀಜಿ ವಿಧಿವಶರಾಗಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇದೇ ಘಟನೆ ಶ್ರೀಗಳ ಬದುಕಿಗೆ ಕುತ್ತಾಯಿತೇ ಎಂಬ ಪ್ರಶ್ನೆಗಳನ್ನು ಹಾಕಿ ಜನ ವೀಡಿಯೋ ಶೇರ್ ಮಾಡುತ್ತಿದ್ದರು.

    ಶ್ರೀಗಳ ಅನುಚಿತ ವರ್ತನೆ ದೈವಾರಾಧನೆಯ ರಂಗದಲ್ಲೂ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು. ಅದರ ಪರಿಣಾಮ ಇದಾಗಿರಬಹುದೇ ಎಂಬುದು ಈಗ ಚರ್ಚೆಯಾಗುತ್ತಿದೆ. ದರ್ಶನದಲ್ಲಿ ಇರುವಾಗ ಕೊಡಮಣಿತ್ತಾಯ ದೈವದ ಬಳಿ ಮಾತನಾಡುವ ಸ್ವಾಮೀಜಿ, ನೀನು ನನಗೆ ಏನು ಕೊಟ್ಟಿದ್ದೀಯ? ಏನೂ ಕೊಟ್ಟಿಲ್ಲ ಎಂದು ಸನ್ನೆ ಮಾಡಿದ್ದರು. ನಿನ್ನಿಂದ ಏನೂ ಸಹಾಯವಾಗಿಲ್ಲ ಅಂತ ದೈವದ ಮುಂದೆ ಹೇಳಿಕೊಂಡಿದ್ದರು. ಸದ್ಯ ಇದೀಗ ಈ ವೀಡಿಯೋ ಕೂಡ ಬಹು ಚರ್ಚಿತ ವಿಷಯವಾಗಿದೆ.