Tag: District in charge

  • ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ರೆ ಮಾಡೋಣ: ವಿ ಸೋಮಣ್ಣ

    ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ರೆ ಮಾಡೋಣ: ವಿ ಸೋಮಣ್ಣ

    ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ಟರೆ ಮಾಡೋಣ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ನಿಂತ ನೀರಲ್ಲ, ಹರಿಯುವ ನೀರು ಎಲ್ಲ ಮೂಲೆಗೂ ತಲುಪಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಬೆಂಗಳೂರು ಉಸ್ತುವಾರಿಗೆ ಅಶೋಕ್ ಹಾಗೂ ಸೋಮಣ್ಣ ನಡುವೆ ಫೈಟ್ ನಡೆದಿರುವಾಗಲೇ ಸೋಮಣ್ಣ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ತಾಲಿಬಾನ್ ಭಾರತದತ್ತ ಬಂದರೆ ಏರ್ ಸ್ಟ್ರೈಕ್: ಯೋಗಿ ಆದಿತ್ಯನಾಥ್

    ನಾನು ಸೀನಿಯರ್ ಇದ್ದೇನೆ ಆರೇಳು ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೇನೆ, ಆರೇಳು ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ, ಯಾರನ್ನು ಹೋಗಿ ಕೇಳುವುದಿಲ್ಲ, ಮನವಿ ಮಾಡುವುದಿಲ್ಲ ಮುಖ್ಯ ಮಂತ್ರಿಗಳು ಚಾಮರಾಜನಗರ ಜವಾಬ್ದಾರಿ ಕೊಟ್ಟರೆ ಮಾಡೋಣ ವಿವಾದ ಮಾಡಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.

    basavaraj bommai

    ಚಾಮರಾಜನಗರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಅರ್ಹ ವಸತಿ ರಹಿತ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದ್ದು, 3 ತಿಂಗಳ ಒಳಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಇದೇ ವೇಳೆ ಉಪ ಚುನಾವಣೆ ನಡೆದಿರುವ ಸಿಂದಗಿ, ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಅತ್ಯಧಿಕ ಬಹುಮತಗಳಿಂದ ಬಿಜೆಪಿ ಗೆಲುವು ಸಾಧಿಸುತ್ತದೆ. ಸಿಂದಗಿಯಲ್ಲಿ ನಾನು, ಕಾರಜೋಳ, ಸಿಸಿ ಪಾಟೀಲ್ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಎಲ್ಲರು ಸೇರಿ ವ್ಯವಸ್ಥಿತವಾಗಿ ಕೆಲಸ ಮಾಡಿದ್ದೇವೆ, ಪ್ರಧಾನಿ ಮೋದಿ ಅವರ ಜನಪರ ಕಾರ್ಯಕ್ರಮಗಳು, ರಾಜ್ಯ ಸರ್ಕಾರದ ಉತ್ತಮ ಕೆಲಸ, ಕೋವಿಡ್ ನಿರ್ವಹಣೆ ಹೀಗೆ ಎಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ನುಡಿದಿದ್ದಾರೆ.

  • ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟ

    ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟ

    ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

    ಜಲಸಂಪನ್ಮೂಲ ಖಾತೆಯನ್ನು ಹಠಕ್ಕೆ ಬಿದ್ದು ಪಡೆದುಕೊಂಡಿದ್ದ ಸಚಿವ ರಮೇಶ ಜಾರಕಿಹೊಳಿಗೆ ನಿರೀಕ್ಷೆಯಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹೊಣೆ ನೀಡಲಾಗಿದೆ. ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ನೀಡುವುದಾಗಿ ಹೇಳಿ ಕೊನೇಯ ಘಳಿಗೆಯಲ್ಲಿ ಕೈ ತಪ್ಪಿದ ಪರಿಣಾಮ ಹುಬ್ಬಳ್ಳಿ-ಧಾರವಾಡ ಜತೆಗೆ ಬೆಳಗಾವಿ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ವಹಿಸಿದ್ದರು. ಆದರೆ ಜಗದೀಶ್ ಶೆಟ್ಟರ್ ಹಳೆ ಜಿ.ಪಂ. ಕಚೇರಿಯಲ್ಲಿ ತಮ್ಮ ಕಚೇರಿ ತೆರೆದಿದ್ದರೂ ಒಂದೂ ಬಾರಿ ಭೇಟಿಯಾಗಲಿಲ್ಲ. ಈ ಮೂಲಕ ಬೆಳಗಾವಿ ಜನರ ಅಸಮಾಧಾನಕ್ಕೆ ಕಾರಣವಾಗಿದ್ದರು.

    ಕೊನೆಗೂ ಸಿಎಂ ಯಡಿಯೂರಪ್ಪ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಿದ್ದು, ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ರಾಜ್ಯಸಭಾ ಟಿಕೆಟ್‍ಗಾಗಿ ಪೈಪೋಟಿ ನಡೆತ್ತಿರುವ ಹಿನ್ನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಹಾಸನದ ಉಸ್ತುವಾರಿಯನ್ನು ಸಚಿವ ಗೋಪಾಲಯ್ಯಗೆ ವಹಿಸಿದ್ದಾರೆ.

  • ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಬೆಂಗಳೂರು: ಖಾತೆ ಹಂಚಿಕೆ ಮುಗಿದ ಬೆನ್ನಲ್ಲೇ ಈಗ ಜಿಲ್ಲಾ ಉಸ್ತುವಾರಿ ಜಂಜಾಟ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ಈಗ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಟೆನ್ಷನ್. ನೂತನ ಸಚಿವರ ಚಿತ್ತವೂ ಈಗ ಜಿಲ್ಲಾ ಉಸ್ತುವಾರಿ ಹುದ್ದೆಗಳ ಮೇಲೆ ಬಿದ್ದಿದೆ. ತಮ್ಮ ಜಿಲ್ಲೆಗೇ ಉಸ್ತುವಾರಿ ಸಚಿವರಾಗಲು ಮಿತ್ರಮಂಡಳಿ ಕಸರತ್ತು ಆರಂಭಿಸಿದ್ದಾರೆ.

    ಆದರೆ ಸಿಎಂ ಪ್ಲಾನೇ ಬೇರೆ ಇದೆ. ಜಿಲ್ಲಾ ಉಸ್ತುವಾರಿಗಳ ಮೂಲಕ ಮುಂದಿನ ಚುನಾವಣೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಒಕ್ಕಲಿಗರು ಹೆಚ್ಚಿರುವ ಜೆಡಿಎಸ್ ಭದ್ರಕೋಟೆ ಕ್ಷೇತ್ರಗಳ ಮೇಲೆಯೇ ಸಿಎಂಗೆ ಕಣ್ಣು ಬಿದ್ದಿದೆ. ಒಕ್ಕಲಿಗರ ಮತದಾರರು ಇರುವ ಜೆಡಿಎಸ್ ಕೋಟೆಗಳಿಗೆ ಒಕ್ಕಲಿಗ ಸಚಿವರನ್ನೇ ಹಾಕಲು ಸಿಎಂ ಮುಂದಾಲೋಚನೆ ಮಾಡಿದ್ದಾರೆ. ಮುಂದಿನ ಚುನಾವಣೆವರೆಗೆ ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿಎಂ ತಂತ್ರ ಕುತೂಹಲ ಹುಟ್ಟಿಸಿದೆ.

    ಜೆಡಿಎಸ್ ಭದ್ರ ಕೋಟೆಗಳಾದ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಹಾಗಾಗಿ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರನ್ನೇ ಉಸ್ತುವಾರಿ ಸಚಿವ ಮಾಡಲು ಸಿಎಂ ಮುಂದಾಗಿದ್ದಾರೆ. ಸದ್ಯಕ್ಕೆ ಸಿಎಂ ಅವರ ಈ ಜಾತಿ ಲೆಕ್ಕಾಚಾರದ ಪ್ಲಾನ್ ಬೆಳಗಾವಿ ಹೊರತುಪಡಿಸಿ ಉಳಿದ ಜಿಲ್ಲೆಗೆ ಅನ್ವಯಿಸಲಿದೆ. ಬೆಳಗಾವಿ ಉಸ್ತುವಾರಿ ಆಗಲು ಸಾಕಷ್ಟು ಪೈಪೋಟಿ ಇದ್ದು, ಅದನ್ನು ಬೇರೆ ರೀತಿಯಲ್ಲಿ ಡೀಲ್ ಮಾಡಲು ಸಿಎಂ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರು

    ಹಾಸನ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್ ಅಥವಾ ಎಸ್.ಟಿ.ಸೋಮಶೇಖರ್
    ರಾಮನಗರ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್
    ಮಂಡ್ಯ- ನಾರಾಯಣ ಗೌಡ
    ರಾಯಚೂರು- ಎಸ್.ಟಿ.ಸೋಮಶೇಖರ್
    ಬಳ್ಳಾರಿ- ಆನಂದ್ ಸಿಂಗ್
    ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
    ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್
    ಮಡಿಕೇರಿ- ಕೆ.ಗೋಪಾಲಯ್ಯ
    ದಾವಣಗೆರೆ- ಬಿ.ಸಿ.ಪಾಟೀಲ್
    ಯಾದಗಿರಿ- ಶ್ರೀಮಂತ ಪಾಟೀಲ್
    ಕೊಪ್ಪಳ- ಬೈರತಿ ಬಸವರಾಜು

  • ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಬೆಂಗಳೂರು: ಸಂಪುಟ ವಿಸ್ತರಣೆ ಆಯ್ತು. 10 ಶಾಸಕರು ಮಿನಿಸ್ಟರ್ ಆದ್ರೂ ಅವರಿಗೆ ಈಗ ಎರಡು ಚಿಂತೆ. ಒಂದು ಖಾತೆ ಚಿಂತೆಯಾದರೆ, ಇನ್ನೊಂದು ಜಿಲ್ಲಾ ಉಸ್ತುವಾರಿ ಚಿಂತೆ. ನೂತನ ಸಚಿವರಲ್ಲಿ ಮೂರ್ನಾಲ್ಕು ಮಂದಿ ಉಸ್ತುವಾರಿಗೆ ಟವೆಲ್ ಹಾಕಿದ್ದಾರೆ. ಸಾಹುಕಾರ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ನನಗೆ ಬೇಕು ಅಂತಾ ಬೇಡಿಕೆ ಇಟ್ಟಿರೋದರ ಜೊತೆಗೆ ಬೆಳಗಾವಿ ಜಿಲ್ಲೆ ಉಸ್ತುವಾರಿ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

    ಈ ನಡುವೆ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ಕೊಡದೇ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಟ್ಟುಕೊಂಡಿದ್ದಾರೆ. ಅಶೋಕ್, ಅಶ್ವಥ್ ನಾರಾಯಣ್ ಅವರ ಗುದ್ದಾಟ ಜೋರಾಗಬಹುದೆಂದು ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿಯೇ ಇದೆ. ಅಷ್ಟೇ ಅಲ್ಲ ಬೆಂಗಳೂರು ಅಭಿವೃದ್ಧಿ ಖಾತೆಯೂ ಸಿಎಂ ಯಡಿಯೂರಪ್ಪ ಬಳಿ ಇದೆ. ಹಾಗಾಗಿ ನೂತನ ಸಚಿವರಿಗೆ ಬೆಂಗಳೂರು ಉಸ್ತುವಾರಿ ಸಿಗುವುದು ಅನುಮಾನ ಅನ್ನೋ ಮಾತುಗಳು ಕೇಳಿಬಂದಿವೆ.

    ಈ ನಡುವೆ ಹಾಸನ ಉಸ್ತುವಾರಿ ಎಸ್.ಟಿ.ಸೋಮಶೇಖರ್‍ಗೋ? ಡಿಸಿಎಂ ಅಶ್ವಥ್ ನಾರಾಯಣ್‍ಗೋ? ಅನ್ನೋ ಚರ್ಚೆ ಶುರುವಾಗಿದ್ದು, ಒಕ್ಕಲಿಗ ಸಚಿವರನ್ನೇ ಹಾಸನ ಜಿಲ್ಲೆ ಉಸ್ತುವಾರಿಯನ್ನಾಗಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ರಾಮನಗರ, ಹಾಸನ ಎರಡು ಪಕ್ಷ ಸಂಘಟನೆಯಿಂದ ಬಿಜೆಪಿಗೆ ಮಹತ್ವದ್ದು, ಎರಡು ಕಡೆ ಒಕ್ಕಲಿಗರನ್ನೇ ಉಸ್ತುವಾರಿಯನ್ನಾಗಿ ನೇಮಿಸಲು ಪಕ್ಷ ತಂತ್ರ ಹೂಡಿದೆ ಎನ್ನಲಾಗಿದೆ. ಇನ್ನೊಂದೆಡೆ ಬಳ್ಳಾರಿಗೆ ಆನಂದ್ ಸಿಂಗ್‍ಗೆ ಉಸ್ತುವಾರಿ ಕೊಟ್ಟರೆ ರೆಡ್ಡಿ, ಶ್ರೀರಾಮುಲು ಟೀಂ ಕೆಂಡಾಮಂಡಲವಾಗುತ್ತಾರಾ ಅನ್ನೋ ಚರ್ಚೆಯೂ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುತೂಹಲ ಮೂಡಿಸಿದೆ.

    ಜಿಲ್ಲಾಉಸ್ತುವಾರಿಗಳ ಸಂಭವನೀಯ ಲಿಸ್ಟ್..!
    > ರಮೇಶ್ ಜಾರಕಿಹೊಳಿ – ಬೆಳಗಾವಿ
    > ಬಿ.ಸಿ.ಪಾಟೀಲ್ – ದಾವಣಗೆರೆ
    > ಎಸ್.ಟಿ.ಸೋಮಶೇಖರ್ – ಹಾಸನ
    > ಸುಧಾಕರ್ – ಚಿಕ್ಕಬಳ್ಳಾಪುರ
    > ನಾರಾಯಣಗೌಡ – ಮಂಡ್ಯ
    > ಆನಂದ್ ಸಿಂಗ್ – ಬಳ್ಳಾರಿ
    > ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
    > ಬೈರತಿ ಬಸವರಾಜು – ಬೆಂಗಳೂರು ಗ್ರಾಮಾಂತರ
    > ಗೋಪಾಲಯ್ಯ – ಕೊಡಗು
    > ಶ್ರೀಮಂತಗೌಡ ಪಾಟೀಲ್ – ಯಾದಗಿರಿ

  • ಶಿವಕುಮಾರ್ ಅಣ್ಣನವರೇ ಬಳ್ಳಾರಿಯನ್ನು ಅಭಿವೃದ್ಧಿ ಮಾಡಿ – ಶ್ರೀರಾಮುಲು ಟಾಂಗ್

    ಶಿವಕುಮಾರ್ ಅಣ್ಣನವರೇ ಬಳ್ಳಾರಿಯನ್ನು ಅಭಿವೃದ್ಧಿ ಮಾಡಿ – ಶ್ರೀರಾಮುಲು ಟಾಂಗ್

    ಬಳ್ಳಾರಿ: ಶನಿವಾರ ಡಿಕೆಶಿಯನ್ನ ಶಕುನಿಗೆ ಹೋಲಿಸಿದ್ದ ಶ್ರೀರಾಮುಲು ಇಂದು ಮೂರು ಸರಣಿ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

    ಶಿವಕುಮಾರ್ ಅವರ ದಾಟಿಯಲ್ಲೇ ಶಿವಕುಮಾರ್ ಅಣ್ಣಾ ಎನ್ನುವ ಮೂಲಕ ಕಾಲೆಳೆದ ರಾಮುಲು, “ಶಿವಕುಮಾರ್ ಅಣ್ಣನವರೇ, ನಾನು ಬಳ್ಳಾರಿಯ ಮಣ್ಣಿನ ಮಗ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವ ನಿಮ್ಮನ್ನು ಜನ ಶಿವಕುಮಾರ್ ಎಲ್ಲಿದ್ದೀಯಪ್ಪ ಎನ್ನುತ್ತಿದ್ದಾರೆ. ಬಳ್ಳಾರಿಯ ಜನ ವಲಸೆ ಬಂದವರಿಗೆ ತಮ್ಮ ಸ್ವಾಭಿಮಾನದಿಂದ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಿಸಿದ್ದಾರೆ” ಎಂದು ಟಾಂಗ್ ಕೊಟ್ಟಿದ್ದಾರೆ.

    ಎರಡನೇ ಟ್ವೀಟ್‍ನಲ್ಲಿ “ರಾಜ್ಯ ಕಾಂಗ್ರೆಸ್ ಅನ್ನು ಕುಮಾರಸ್ವಾಮಿಯವರ ಮೇಲಿನ ನಿಮ್ಮ ಕುರುಡು ಪ್ರೇಮಕ್ಕಾಗಿ ಒಂದಂಕಿಗೆ ಇಳಿಸಿದ ಕೀರ್ತಿ ನಿಮಗೆ ಸಲ್ಲಬೇಕು. ಬಳ್ಳಾರಿಯ ಜನರ ಪ್ರೀತಿಯ ಬಗ್ಗೆ ಮಾತನಾಡುವ ನೀವು, ಬಳ್ಳಾರಿಯ ಮಂತ್ರಿಗಳಿಗೆ ಯಾರಿಗಾದರೂ ಬಳ್ಳಾರಿಯ ಉಸ್ತುವಾರಿ ಸಚಿವರನ್ನಾಗಿ ಮಾಡಿ” ಎಂದು ಹೇಳಿದ್ದಾರೆ.

    “ಶುಭಮಹೂರ್ತ, ಶುಭ ಘಳಿಗೆಯಲ್ಲಾದರೂ ಇನ್ನು ಮುಂದೆ ಕೇವಲ ಚುನಾವಣಾ ಸಚಿವರಾಗದೇ ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿ ಎಂದು ನಿಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತೇನೆ ಅಣ್ಣಾ” ಎಂದು ಕಾಲೆಳೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]