Tag: district hospital

  • ಟಾಟಾ ವೆಂಚರ್‍ಗೆ ಮಹಿಂದ್ರ ಮ್ಯಾಕ್ಸಿಮೋ ಡಿಕ್ಕಿ: ಇಬ್ಬರ ಸಾವು, 21 ಮಂದಿಗೆ ಗಾಯ

    ಟಾಟಾ ವೆಂಚರ್‍ಗೆ ಮಹಿಂದ್ರ ಮ್ಯಾಕ್ಸಿಮೋ ಡಿಕ್ಕಿ: ಇಬ್ಬರ ಸಾವು, 21 ಮಂದಿಗೆ ಗಾಯ

    ಚಿತ್ರದುರ್ಗ: ನಿಂತಿದ್ದ ಟಾಟಾ ವೆಂಚರ್‍ಗೆ ಮಹಿಂದ್ರಾ ಮ್ಯಾಕ್ಸಿಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪಿದ್ದು, 21 ಜನರು ಗಾಯಗೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಐಮಂಗಲ ಗ್ರಾಮದ ನಿವಾಸಿ ಜುಬೇರ್ ಅಹ್ಮದ್ (40) ಮತ್ತು ಶಿರಸಿ ನಿವಾಸಿ ಟಿಪ್ಪುಸಾಬ್ (45) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಟಾಟಾ ವೆಂಚರ್‍ನಲ್ಲಿ ಒಟ್ಟು 9 ಜನರು ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಶವಸಂಸ್ಕಾರಕ್ಕಾಗಿ ಶಿರಸಿಯಿಂದ ತುಮಕೂರಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ಐಮಂಗಲ ಠಾಣೆಯ ಪೊಲೀಸರು ಆಗಮಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಎಸ್‍ಪಿ ರಂಗರಾಜನ್ ಮತ್ತು ಡಿವೈಎಸ್‍ಪಿ ಎಸ್.ನಾಗರಾಜ್ ಭೇಟಿ ನೀಡಿದ್ದಾರೆ.

    ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಯಾದಗಿರಿ: ಜಿಲ್ಲಾಸ್ಪತ್ರೆಗೆ ದಾಖಲಾಗಬೇಕಾದ್ರೆ ಊರಿಂದ ನೀರು ತರಬೇಕು!

    ಯಾದಗಿರಿ: ಜಿಲ್ಲಾಸ್ಪತ್ರೆಗೆ ದಾಖಲಾಗಬೇಕಾದ್ರೆ ಊರಿಂದ ನೀರು ತರಬೇಕು!

    ಯಾದಗಿರಿ: ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತದೆ. ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಯಾದಗಿರಿಯ ಜಿಲ್ಲಾಸ್ಪತ್ರೆಗೆ ನೀವು ಎಂಟ್ರಿ ಕೊಟ್ಟು ನೀಡಬಹುದು.

    ಹೌದು. ಊರಿನಿಂದ ರೋಗಿಗಳು ನೀರು ತರಬೇಕಾದ ದುಸ್ಥಿತಿ ಯಾದಗಿರಿಯ ಜಿಲ್ಲಾಸ್ಪತ್ರೆಗೆ ಬಂದೊದಗಿದೆ. ನಿತ್ಯವು ನೂರಾರು ಬಡ ರೋಗಿಗಳು ಹಣವಿಲ್ಲದೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದ್ರೆ ಈ ಆಸ್ಪತ್ರೆಯಲ್ಲಿ ದಾಖಲಾಗಬೇಕಾದರೆ ನೀರಿಗಾಗಿ ನಿತ್ಯವು ನೂರಾರು ರೂಪಾಯಿ ಖರ್ಚು ಮಾಡಬೇಕಾಗಿದೆ.

    ಜಿಲ್ಲಾಸ್ಪತ್ರೆಯಲ್ಲಿ ಎರಡು ಕೊಳವೆ ಬಾವಿ ಮೂಲಕ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಎರಡೂ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಿಲ್ಲ. ಬಳಕೆಗೆ ಮಾತ್ರ ಈ ನೀರನ್ನು ಬಳಸಬಹುದಾಗಿದೆ. ಕೊಳವೆ ಬಾವಿ ನೀರನ್ನೇ ಶುದ್ಧೀಕರಿಸಿ ರೋಗಿಗಳಿಗೆ ಸಮರ್ಪಕವಾಗಿ ನೀರು ಪೂರೈಸಬೇಕು. ಆದರೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಆಸ್ಪತ್ರೆ ಕಟ್ಟಡದ ಮೇಲೆ ನೀರು ಶುದ್ಧಿಕರಣ ಘಟಕ ಅಳವಡಿಸಿದ್ದರೂ 15-20 ದಿನಗಳಿಗೊಮ್ಮೆ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಅಗತ್ಯ ಪ್ರಮಾಣದ ಶುದ್ಧ ನೀರು ಸರಬರಾಜು ಆಗುತ್ತಿಲ್ಲ.

    ಆಸ್ಪತ್ರೆ ಕಟ್ಟಡದ ಮೇಲೆ ನೀರು ಶುದ್ಧಿಕರಣ ಘಟಕ ಅಳವಡಿಸಿದ್ರು 15-20 ದಿವಸಕ್ಕೊಮೆ ಬಳಕೆ ಮಾಡುತ್ತಿದ್ದಾರೆ. ಅದರಿಂದ ರೋಗಿಗಳಿಗೆ ಪೂರೈಸಬೇಕಾದಷ್ಟು ನೀರು ಶುದ್ಧಿಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ತಳಭಾಗದಲ್ಲಿ ಚಿಕ್ಕದಾದ ನೀರು ಶುದ್ಧಿಕರಣ ಘಟಕ ಹಾಕಿ ಕೈತೊಳೆದುಕೊಂಡಿದ್ದಾರೆ. ಇದರಿಂದ ಕೂಡ ಒಂದು ಹನಿ ನೀರು ಸರಿಯಾಗಿ ಸಿಗುತ್ತಿಲ್ಲ.

    ಬೇಸಿಗೆ ಆರಂಭವಾಗಿದ್ದು ದಾಹ ಹೆಚ್ಚಾಗುತ್ತಿದೆ. ಸರ್ಕಾರ ಮಾತ್ರ ಆಸ್ಪತ್ರೆಗೆ ಬರುವ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತಿಲ್ಲ. ಹಗಲು ಸಮಯದಲ್ಲಿ ಬಡ ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆ ಮುಂಭಾಗದ ಅಂಗಡಿಗಳಲ್ಲಿ ನೀರನ್ನು ಖರೀದಿ ಮಾಡುತ್ತಾರೆ. ರಾತ್ರಿ ವೇಳೆಯಲ್ಲಿ ದಾಹವಾದ್ರೆ ರೋಗಿಗಳು ನೀರಿಲ್ಲದೇ ನರಕಯಾತನೆ ಅನುಭವಿಸುವಂತಾಗಿದೆ. ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು, ಉಸ್ತುವಾರಿ ಸಚಿವರು ಇತ್ತ ಕಾಳಜಿ ವಹಿಸಿ ಬಡ ರೋಗಿಗಳಿಗೆ ಶುದ್ಧ ನೀರು ಪೂರೈಸುವ ಕೆಲಸ ಮಾಡಬೇಕಾಗಿದೆ.

     

  • ಕೊಪ್ಪಳ: ಮಗುವಿನ ಶವ ಸಾಗಿಸಲು ಅಂಬುಲೆನ್ಸ್ ಇದ್ದರೂ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ ತಾಯಿ

    ಕೊಪ್ಪಳ: ಮಗುವಿನ ಶವ ಸಾಗಿಸಲು ಅಂಬುಲೆನ್ಸ್ ಇದ್ದರೂ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ ತಾಯಿ

    ಕೊಪ್ಪಳ: ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದ ಮಗುವಿನ ಶವವನ್ನು ಸಾಗಿಸಲು ತಾಯಿ ಶ್ರದ್ಧಾಂಜಲಿ ವಾಹನಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ್ದಾರೆ.

    ಜಿಲ್ಲೆಯ ಗಂಗಾವತಿ ನಗರದ ನಿವಾಸಿಯಾಗಿರುವ ಮಮ್ತಾಜ್ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು ಖಾಜಾವಲಿಯನ್ನ ಕೊಪ್ಪಳದ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮಗು ಸಾವನ್ನಪ್ಪಿದೆ ಅಂತ ಹೇಳಿದ್ದಾರೆ. ದಿಕ್ಕು ತೋಚದ ಪೋಷಕರು ಅಲ್ಲೆ ಅಳಲು ಆರಂಭಿಸಿದ್ದಾರೆ.

    ಕಡು ಬಡತನವಿರು ಮಮ್ತಾಜ್ ಮಗುವಿನ ಶವ ಸಾಗಿಸಲು ಹಣವಿಲ್ಲದೆ ಆಸ್ಪತ್ರೆಯ ವಾಹನ ಕೇಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವಾಹನ ಇಲ್ಲದೇ ಮೂರು ಗಂಟೆಗೂ ಹೆಚ್ಚು ಶವವಿಟ್ಟುಕೊಂಡು ರೋಧಿಸುತ್ತಾ ಕುಳಿತಿದ್ದಾರೆ. ಮಮ್ತಾಜ್ ರೋಧಿಸುತ್ತಿದ್ದರೂ ಅವರ ಸಹಾಯಕ್ಕೆ ಆಸ್ಪತ್ರೆಯ ಯಾವ ಸಿಬ್ಬಂದಿಯೂ ಬರಲಿಲ್ಲ.

    ಈ ವಿಚಾರ ತಿಳಿದ ಪಬ್ಲಿಕ್ ಟಿವಿ ಮಗುವಿನ ಮೃತ ದೇಹವನ್ನು ಸಾಗಿಸಲು ವೈದ್ಯರನ್ನು ಸಂಪರ್ಕಿಸಿತ್ತು. ನಮ್ಮಲ್ಲಿ ಶವ ಸಾಗಿಸಲು ವಾಹನವಿದೆ. ಆದರೆ ಚಾಲಕ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಎಸ್.ಬಿ.ದಾನರೆಡ್ಡಿ ಹೇಳಿದ್ದಾರೆ. ಕೊನೆಗೆ ಪಬ್ಲಿಕ್ ಟಿವಿಯೇ ಶವವನ್ನು ಸಾಗಿಸಲು ಮುಂದಾದಾಗ ಸರ್ಜನ್ ದಾನರೆಡ್ಡಿ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ತರಿಸಿ ಶವ ಸಾಗಿಸಿ ಕೊಟ್ಟಿದ್ದಾರೆ.

     

  • ವಿಜಯಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ರು ಈ ಸರ್ಜನ್!

    ವಿಜಯಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ರು ಈ ಸರ್ಜನ್!

    ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂತಂದ್ರೆ ಮೂಗು ಮುರಿಯೋರೇ ಜಾಸ್ತಿ ಅನ್ನೋ ಮಾತನ್ನು ನಾವು ಹಲವು ಬಾರಿ ಕೇಳಿದ್ದೀವಿ. ಆದ್ರೆ, ವಿಜಯಪುರ ಜಿಲ್ಲಾಸ್ಪತ್ರೆಯ ಸರ್ಜನ್ ಅನಂತ ದೇಸಾಯಿ ಅವ್ರು ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿ, ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ದಾರೆ.

    ಹೌದು. ವಿಜಯಪುರದ ಜಿಲ್ಲಾ ಆಸ್ಪತ್ರೆಗೆ ಕಳೆದ ಎರಡು ವರ್ಷಗಳ ಹಿಂದೆ ರೋಗಿಗಳು ಬರೋದಕ್ಕೆ ಹಿಂಜರಿತಿದ್ರು. ಆದ್ರೆ ಇದೀಗ ಈ ಜಿಲ್ಲಾಸ್ಪತ್ರೆ ರಾಜ್ಯದಲ್ಲೇ ಪ್ರಥಮ ಸ್ವಚ್ಛತಾ ಆಸ್ಪತ್ರೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

    2015 ಅಕ್ಟೋಬರ್‍ನಲ್ಲಿ ಆಸ್ಪತ್ರೆಗೆ ಬಂದ ಅನಂತ ದೇಸಾಯಿ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದ್ದರೂ ಎಲ್ಲರನ್ನು ಒಗ್ಗೂಡಿಸಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಇಡೀ ಆಸ್ಪತ್ರೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಹೀಗಾಗಿ ಆಸ್ಪತ್ರೆಯ ಸ್ವಚ್ಛತೆಗೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯದ ನಂ.1 ಸ್ವಚ್ಛ ಆಸ್ಪತ್ರೆ ಅಂತಾ 2015-16 ಹಾಗೂ 2016-17 ಸಾಲಿನಲ್ಲಿ ಸತತವಾಗಿ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿದೆ. ಮಾತ್ರವಲ್ಲದೇ ಈಗ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಸಿಬ್ಬಂದಿ ಬಗ್ಗೆ ಜನ ಹೊಗಳ್ತಿದ್ದಾರೆ.

    ಸರ್ಕಾರದ ಎಲ್ಲ ಸೌಲಭ್ಯಗಳನ್ನು ರೋಗಿಗಳಿಗೆ ತಲುಪುವಂತೆ ಮಾಡಲಾಗ್ತಿದೆ. ಅಲ್ಲದೆ, ಸರ್ಜನ್ ದೇಸಾಯಿ ಅವರ ಕಾರ್ಯ ಇತರಿಗೂ ಮಾದರಿಯಾಗಲಿ ಅಂತಾ ಬಾಣಂತಿ ಶಿವಲೀಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=LxqLz5CF02s

  • ಚಿಕಿತ್ಸೆ ಕೊಡಿ ಎಂದಿದ್ದಕ್ಕೆ ಗಾಯಾಳುವಿಗೆ ಹೊಡೆಯುತ್ತೇನೆ ಎಂದ ತುಮಕೂರಿನ ಸರ್ಕಾರಿ ವೈದ್ಯ

    ತುಮಕೂರು: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ನೀಡಿ ಪರಿಪರಿಯಾಗಿ ಮನವಿ ಮಾಡಿ ಕಣ್ಣೀರು ಹಾಕಿದ್ದಕ್ಕೆ ವೈದ್ಯ ದೌರ್ಜನ್ಯ ಎಸಗಿದ ಘಟನೆ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ಕಲ್ಲಹಳ್ಳಿ ಗ್ರಾಮದ ನಿವಾಸಿಗಳಾದ ಕರಿಸಿದ್ದಯ್ಯ ಹಾಗೂ ಹೇಮರಾಜ್ ಎನ್ನುವರು ಊರ್ಡಿಗೆರೆ ಬಳಿ ಬೈಕ್ ಗಳ ಡಿಕ್ಕಿಯಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ತುಮಕೂರಿನ ಜಿಲ್ಲಾಸ್ಪತ್ರೆಗೆ ಭಾನುವಾರ ರಾತ್ರಿ ಕರೆತಂದಿದ್ದಾರೆ.ಆದರೆ ವೈದ್ಯ ಡಾ.ವಾಸೀಮ್ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಹೋಗುವಂತೆ ಹೇಳಿದ್ದಾರೆ.

    ಮನೆಗೆ ಹೋಗದ ಸ್ಥಿತಿಯಲ್ಲಿ ಗಾಯಾಳು ಕರಿಸಿದ್ದಯ್ಯ ತನ್ನನ್ನು ಆಸ್ಪತ್ರೆಯಲ್ಲೇ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸುವಂತೆ ಗೋಗರೆದು ಅಂಗಲಾಚಿ ಬೇಡಿದ್ದಾರೆ. ಆದರೂ ಸಹ ಜಿಲ್ಲಾಸ್ಪತ್ರೆಯ ವೈದ್ಯ ವಾಸೀಮ್ ದಾಖಲಿಸಿಕೊಳ್ಳದೆ ಕರಿಸಿದ್ದಯ್ಯ ಅವರನ್ನು ನಿಂದಿಸಿದ್ದಾರೆ. ಜೊತೆಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.

    ವೈದ್ಯರಿಗೆ ಹಿಡಿಶಾಪ ಹಾಕಿದ ಗಾಯಾಳುಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯ ಮೊರೆಹೋಗಿದ್ದಾರೆ. ಗಾಯಗೊಂಡ ರೋಗಿಯ ಮೇಲೆಯೇ ಬಾಯಿಗೆ ಬಂದಂತೆ ಬೈದು ಹೊಡೆಯುತ್ತೇನೆ ಎಂದು ರೌಡಿಗಳ ರೀತಿ ವಾಸೀಮ್ ವರ್ತನೆ ಮಾಡಿದ್ದಾರೆ.

    ಇದೇ ಆಸ್ಪತ್ರೆಯಲ್ಲಿ ಕಳೆದ ವಾರ ಚಿಕಿತ್ಸೆಗೆಂದು ಬಂದಿದ್ದ ಗರ್ಭಿಣಿ ಮತ್ತು ಆಕೆಯ ಪತಿಗೆ ವೈದ್ಯರು ಚಿಕಿತ್ಸೆ ನೀಡದೆ ನಿಂದಿಸಿದ ಘಟನೆ ನಡೆದಿತ್ತು. ಗರ್ಭಿಣಿ ಮಸ್ತಾಕ್ ಚಿಕಿತ್ಸೆಗೆ ಬಂದಾಗ ಅಂಬುಲೆನ್ಸ್ ಚಾಲಕ ರಘು ಮತ್ತು ವೈದ್ಯರು ಬಾಯಿಗೆ ಬಂದಂತೆ ಬೈದಿದ್ದರು ಎನ್ನಲಾಗಿದೆ.