Tag: District Court

  • ಗಂಡಸ್ರು, ಹೆಂಗಸ್ರು ಅನ್ನಲಿಲ್ಲ, ಹೊಡೆದಾಡಿದ್ದೇ ಹೊಡೆದಾಡಿದ್ದು – ದಾವಣಗೆರೆಯಲ್ಲಿ ಲ್ಯಾಂಡ್‍ಗಾಗಿ ವಾರ್

    ಗಂಡಸ್ರು, ಹೆಂಗಸ್ರು ಅನ್ನಲಿಲ್ಲ, ಹೊಡೆದಾಡಿದ್ದೇ ಹೊಡೆದಾಡಿದ್ದು – ದಾವಣಗೆರೆಯಲ್ಲಿ ಲ್ಯಾಂಡ್‍ಗಾಗಿ ವಾರ್

    ದಾವಣಗೆರೆ : ಗೋಮಾಳ ಜಮೀನಿಗಾಗಿ ಎರಡು ಕುಟುಂಬಗಳ ಮಾರಾಮಾರಿ ನಡೆದಿದ್ದು, ಹೆಂಗಸರು, ಗಂಡಸರು ಎನ್ನದೇ ಹೊಡೆದಾಡಿಕೊಂಡ ಘಟನೆ ದಾವಣಗೆರೆ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ನಡೆದಿದೆ.

    ಸಿದ್ದಪ್ಪ ಹಾಗೂ ದುರ್ಗಮ್ಮ ಎಂಬವರು ಹಲವು ವರ್ಷಗಳಿಂದ ಗೋಮಾಳ ಜಾಗದಲ್ಲಿ ಉಳುಮೆ ಮಾಡುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಅದೇ ಗ್ರಾಮದ ನಾಗರಾಜು ಎಂಬವರು ಅದೇ ಗೋಮಾಳದ ಜಮೀನಿಗಾಗಿ ತಕರಾರು ಮಾಡುತ್ತಿದ್ದರು. ಹಾಗಾಗಿ ಗೋಮಾಳದ ಜಮೀನಿನ ವಿಚಾರ ಕೋರ್ಟ್ ಮೆಟ್ಟಲೇರಿತ್ತು.

    ಕೋರ್ಟ್ ಇದೇ ತಿಂಗಳ 28 ರಂದು ನಾಗರಾಜ್ ಎನ್ನುವರಿಗೆ ಉಳುಮೆ ಮಾಡುವಂತೆ ಅದೇಶ ನೀಡಿತ್ತು. ಆದರೆ ಕೋರ್ಟ್ ಅದೇಶವನ್ನು ಪ್ರಶ್ನಿಸಿ ಸಿದ್ದಪ್ಪನ ಕುಟುಂಬದವರು ಕೋರ್ಟ್ ನಲ್ಲಿ ತಕರಾರು ಹಾಕಿದ್ರು. ಆ ಕಾರಣಕ್ಕೆ ಶುಕ್ರವಾರ ನಾಗರಾಜ್ ಕುಟುಂಬದವರು ಜಮೀನು ಉಳುಮೆ ಮಾಡುವಾಗ ಎರಡೂ ಕುಟುಂಬಗಳ ನಡುವೆ ಜಗಳ ನಡೆದಿದೆ.

    ನಾಗರಾಜ್ ಎಂಬವರಿಗೆ ಸೇರಿದ್ದ ಟ್ರ್ಯಾಕ್ಟರ್ ಕೆಳಗೆ ಮಲಗಿ ಉಳುಮೆ ಮಾಡುವುದಕ್ಕೆ ಸಿದ್ದಪ್ಪ ಎಂಬವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

  • ಮತಗಟ್ಟೆ ಬಳಿ ಕಾಂಗ್ರೆಸ್, ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು-ಮಚ್ಚು ಪ್ರದರ್ಶನ ಪ್ರಕರಣ: ಕೇಸ್ ಖುಲಾಸೆ

    ಮತಗಟ್ಟೆ ಬಳಿ ಕಾಂಗ್ರೆಸ್, ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು-ಮಚ್ಚು ಪ್ರದರ್ಶನ ಪ್ರಕರಣ: ಕೇಸ್ ಖುಲಾಸೆ

    ಕೋಲಾರ: 2013ರ ವಿಧಾನಸಭಾ ಚುನಾವಣೆ ವೇಳೆ ಮತಗಟ್ಟೆ ಬಳಿ ಕೋಲಾರ ನಗರದಲ್ಲಿ ಲಾಂಗು ಮಚ್ಚು ಪ್ರದರ್ಶಿಸಿದ ಪ್ರಕರಣವನ್ನ ಖುಲಾಸೆಗೊಳಿಸಿ 1ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

    2013ರ ಮೇ 5ರಂದು ವಿಧಾನಸಭಾ ಚುನಾವಣೆ ವೇಳೆ ಕೋಲಾರದ ಜೂನಿಯರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು, ಮಚ್ಚು ಪ್ರದರ್ಶನ ನಡೆದಿತ್ತು. ಈ ವೇಳೆ ನಗರಸಭಾ ಸದಸ್ಯ ಪ್ರಸಾದ್ ಬಾಬು ಸೇರಿದಂತೆ ಐದು ಜನರ ವಿರುದ್ಧ ಅಂದಿನ ನಗರಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ರು.

    ಪ್ರಕರಣವನ್ನ ಕೈಗೆತ್ತಿಕೊಂಡ ಕೋಲಾರದ 1ನೇ ಜಿಲ್ಲಾ ಸತ್ರ ಮತ್ತು ಹೆಚ್ಚುವರಿ ನ್ಯಾಯಾಲಯದ ಎದುರು ಸಾಕ್ಷ್ಯಾಧಾರಗಳನ್ನ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೇಸ್ ಖುಲಾಸೆಗೊಳಿಸಿದೆ. ಅಂದು ಯಾವುದೇ ಗಲಾಟೆ ನಡೆದಿಲ್ಲ. ಅದೊಂದು ರಾಜಕೀಯ ಪ್ರೇರಿತ ಗಲಾಟೆ ಎಂದು ಆರೋಪಿತರ ಪರ ಹಿರಿಯ ವಕೀಲ ಮೊಹಮ್ಮದ್ ಹನೀಫ್ ಅವರು ವಾದ ಮಂಡಿಸಿದರು.

    ಪೊಲೀಸರು, ಪ್ರತ್ಯಕ್ಷದರ್ಶಿಗಳು ಸೇರಿದಂತೆ 16 ಸಾಕ್ಷ್ಯಾಧಾರವನ್ನ ಪರಿಗಣಿಸಿದ ನ್ಯಾಯಾಧೀಶ ಎನ್‍ವಿ ವಿಜಯ್ ಅವರು ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಪ್ರಕರಣವನ್ನ ಖುಲಾಸೆಗೊಳಿಸಿದ್ದಾರೆ.

    https://youtu.be/AlaHyfaY038