Tag: Director Shankar

  • ‘ಇಂಡಿಯನ್ 2’ ನಿರ್ದೇಶಕನಿಗೆ ದುಬಾರಿ ವಾಚ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ‘ಇಂಡಿಯನ್ 2’ ನಿರ್ದೇಶಕನಿಗೆ ದುಬಾರಿ ವಾಚ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ಮಿಳು ನಟ ಕಮಲ್ ಹಾಸನ್ (Kamal Haasan) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿಗೆ ಮಹಿಳಾ ಬಸ್ ಡ್ರೈವರ್ ಕಾರ್ ಗಿಫ್ಟ್ ಕೊಡುವ ಮೂಲಕ ಅಭಿಮಾನಿಗಳ ಪ್ರಶಂಸೆಗೆ ನಟ ಪಾತ್ರರಾಗಿದ್ದರು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂಬ ಕಾರಣದಿಂದ ಮಹಿಳಾ ಬಸ್ ಡ್ರೈವರ್ ಕಾರು ಗಿಫ್ಟ್ ಮಾಡಿದ್ರು. ಈಗ ಮತ್ತೆ ಗಿಫ್ಟ್ ವಿಚಾರವಾಗಿ ನಟ ಕಮಲ್ ಹಾಸನ್ ಸುದ್ದಿಯಲ್ಲಿದ್ದಾರೆ. ನಿರ್ದೇಶಕ ಶಂಕರ್‌ಗೆ(Director Shankar) ದುಬಾರಿ ವಾಚ್‌ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ:ಆಸ್ಕರ್ ಜ್ಯೂರಿಯಾಗುವ ಅವಕಾಶ ಪಡೆದ ರಾಮ್‌ಚರಣ್- ಜ್ಯೂ.ಎನ್‌ಟಿಆರ್

    ‘ವಿಕ್ರಮ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ಕಮಲ್ ಹಾಸನ್ ಅವರು ಶಂಕರ್ ನಿರ್ದೇಶನದ ‘ಇಂಡಿಯನ್ 2’ (Indian 2) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಮ್ ಚಿತ್ರದಂತೆಯೇ ಇಂಡಿಯನ್ 2 ಕೂಡ ಸೂಪರ್ ಸಕ್ಸಸ್ ಕಾಣಬೇಕು ಅಂತಾ ಕಮಲ್ ಹಾಸನ್ ಕೆಲಸದಲ್ಲಿ ನಿರತರಾಗಿದ್ದಾರೆ.

    ಶಂಕರ್ ಸಾರಥ್ಯದ ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿವೆ. ಅನೇಕ ಅಡೆತಡೆಗಳ ಬಳಿಕ ಇಂಡಿಯಾ-2 ಮುಕ್ತಾಯ ಹಂತ ತಲುಪಿದೆ. ಸದ್ಯ ಯಶಸ್ವಿಯಾಗಿ ಚಿತ್ರೀಕರಣ ಮುಗಿಯುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟಕ್ಕೂ ಕಮಲ್ ಈ ಉಡುಗೊರೆ ಕೊಡಲು ಕಾರಣ ಇಂಡಿಯನ್ -2 ಸಿನಿಮಾ. ಚಿತ್ರದ ಕೆಲವು ದೃಶ್ಯಗಳನ್ನು ಇಂಪ್ರೆಸ್ ಆದ ಕಮಲ್ ಈ ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಬರೆದುಕೊಂಡಿದ್ದಾರೆ.

    ಶಂಕರ್ ಕೈಗೆ ಸ್ವತಃ ಕಮಲ್ ಹಾಸನ್ ವಾಚ್ ಕಟ್ಟುವ ಫೋಟೋವನ್ನು ಶೇರ್ ಮಾಡಿ ಬಹಿರಂಗಪಡಿಸಿದ್ದಾರೆ. ನಾನು ಇಂದು ಇಂಡಿಯನ್ 2 ಚಿತ್ರದ ಪ್ರಮುಖ ದೃಶ್ಯಗಳನ್ನು ನೋಡಿದೆ. ಶಂಕರ್‌ಗೆ ನನ್ನ ಶುಭಾಶಯಗಳು. ಇದು ನಿಮ್ಮ ದೊಡ್ಡ ಸಿನಿಮಾ ಆಗಬಹುದು ಎಂಬುದು ನನ್ನ ಸಲಹೆ. ಏಕೆಂದರೆ ಇದು ನಿಮ್ಮ ಕಲಾ ಜೀವನದ ಅತ್ಯುನ್ನತ ಹಂತವಾಗಿದೆ. ಹೆಮ್ಮೆಯಿಂದಿರಿ ಎಂದು ಕಮಲ್ ಹಾಸನ್ ಬರೆದುಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಜನಿಕಾಂತ್ ಸೇರಿದಂತೆ ತಮಿಳಿನ ಸೂಪರ್ ಸ್ಟಾರ್ ಗಳಿಗೆಲ್ಲ ಸಿನಿಮಾ ಮಾಡಿರುವ ನಿರ್ದೇಶಕ ಶಂಕರ್ ಇತ್ತೀಚೆಗಷ್ಟೇ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ. 33 ದಿನಗಳ ನಂತರ ಕೆಜಿಎಫ್ 2 ಸಿನಿಮಾ ನೋಡಿರುವ ನಿರ್ದೇಶಕರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ತಮ್ಮ ಮುಕ್ತ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರ ಬರಹ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ‘ಕೊನೆಗೂ ನಾನು ಕೆಜಿಎಫ್ 2 ಸಿನಿಮಾ ನೋಡಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಕಾಡಿತು. ತೀಕ್ಷ್ಣವಾದ ಕಥೆ, ಅದನ್ನು ಹೇಳುವ ಕ್ರಮ, ದೃಶ್ಯಗಳನ್ನು ಕಟ್ಟಿದ ರೀತಿ, ಎಡಿಟಿಂಗ್, ದೃಶ್ಯಗಳನ್ನು ಜೋಡಿಸಿದ ಕಲೆ ಎಲ್ಲವೂ ಇಷ್ಟವಾಯಿತು. ಮಾಸ್ ಡೈಲಾಗ್ ಮತ್ತು ಅದನ್ನು ಸಮರ್ಥವಾಗಿ ಕಟ್ಟಿಕೊಟ್ಟ ರೀತಿಯೂ ಆಧುನಿಕವಾಗಿದೆ. ಯಶ್ ಪವರ್ ಹೌಸ್, ಪ್ರಶಾಂತ್ ನೀಲ್ ಕೂಡ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ’ ಎಂದು ಹಾಡಿಹೊಗಳಿದ್ದಾರೆ ಶಂಕರ್. ಇದನ್ನೂ ಓದಿ : ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ಭಾರತೀಯ ಸಿನಿಮಾ ರಂಗದಲ್ಲಿ ‘ಎಂದಿರನ್’, ‘ಜೆಂಟಲ್ ಮನ್’, ‘ಕಾದಲನ್’, ‘ಅನ್ನಿಯನ್’, ‘ಇಂಡಿಯನ್’  ರೀತಿಯ ಭಾರೀ ಬಜೆಟ್ ಸಿನಿಮಾ ಕೊಟ್ಟಿರುವ ಮತ್ತು ಅವೆಲ್ಲವೂ ಬಾಕ್ಸ್ ಆಫೀಸಿನಲ್ಲಿ ಹಿಟ್ ಆದಂತಹ ಚಿತ್ರಗಳನ್ನು ನೀಡಿರುವ ಶಂಕರ್ ಅವರು ಕೆಜಿಎಫ್ 2 ಸಿನಿಮಾದ ಬಗ್ಗೆ ಆಡಿದ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಚೈತನ್ಯ ತುಂಬಿವೆ. ಅದರಲ್ಲೂ ಯಶ್‍ ಗೆ ಸಾಕಷ್ಟು ಸಂಭ್ರಮ ತಂದಿದೆ. ಅದಕ್ಕೆ ಕಾರಣವೂ ಇದೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    KGF 2 Yash (4)

    ಈ ಹಿಂದೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯಶ್ ಅವರಿಗೆ ನಿರೂಪಕರು, ‘ನೀವು ಶಂಕರ್ ಅವರ ಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತಿರೋ ಅಥವಾ ಮಣಿರತ್ನಂ ಚಿತ್ರದಲ್ಲಿ ನಟಿಸಲು ಆಸಕ್ತಿ ಹೊಂದಿದ್ದೀರೋ’ ಎಂದು ಕೇಳಿದ್ದರು. ಕ್ಷಣವೂ ಯಶ್ ಯೋಚಿಸದೇ ಶಂಕರ್ ಅವರ ಹೆಸರು ಹೇಳಿದ್ದರು. ಇದೀಗ ಯಶ್ ನಟನೆಯ ಚಿತ್ರವನ್ನು ಶಂಕರ್ ಹಾಡಿಹೊಗಳಿದ್ದಾರೆ. ಹಾಗಾಗಿ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರಾ ಎನ್ನುವ ಹೊಸ ಚರ್ಚೆ ಇದೀಗ ಶುರುವಾಗಿದೆ. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    ಈ ಹಿಂದೆಯೂ ಕೆಜಿಎಫ್ ಸಿನಿಮಾದ ನಂತರ ಶಂಕರ್ ಅವರು ಯಶ್ ಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಅದು ಕೊನೆಗೂ ಸುದ್ದಿಯಾಗಿಯೇ ಉಳಿಯಿತು. ಇದೀಗ ಮತ್ತೆ ಅದೇ ಸುದ್ದಿ ಹರಿದಾಡುತ್ತಿದೆ. ಆದರೆ, ಎರಡೂ ಕಡೆಯಿಂದ ಕುರಿತು ಪ್ರತಿಕ್ರಿಯೆ ಬರಬೇಕಷ್ಟೇ.

  • ರಿಯಲ್ ಸ್ಟಾರ್ ಉಪೇಂದ್ರರನ್ನು ಹಾಡಿ ಹೊಗಳಿದ ಡೈರೆಕ್ಟರ್ ಶಂಕರ್

    ರಿಯಲ್ ಸ್ಟಾರ್ ಉಪೇಂದ್ರರನ್ನು ಹಾಡಿ ಹೊಗಳಿದ ಡೈರೆಕ್ಟರ್ ಶಂಕರ್

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ರಿಲೀಸ್ ವೇಳೆ ನಿರ್ದೇಶಕ ಎಸ್. ಶಂಕರ್, ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರನ್ನು ಹಾಡಿ ಹೊಗಳಿದ್ದಾರೆ.

    ಟ್ರೇಲರ್ ಬಿಡುಗಡೆ ವೇಳೆ ನಟ ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಿರ್ದೇಶಕ ಶಂಕರ್ ಹಾಗೂ ನಟರಾದ ರಜನಿಕಾಂತ್ ಹಾಗೂ ಅಕ್ಷಯ್ ಅವರಿಗೆ ಶುಭಕೋರಿ ವಿಡಿಯೋ ಸಂದೇಶ ರವಾನಿಸಿದ್ದರು. ಈ ವೇಳೆ ನಟ ಉಪೇಂದ್ರ ಅವರು ಶಂಕರ್ ಸರ್ ಹಾಗೂ ರಜನಿ ಸರ್ ಅವರು ನನಗೆ ಒಂದು ಸಲಹೆ ನೀಡಿ ಕೇಳಿದ್ದರು. ಆ ಬಳಿಕ ಮಾತನಾಡಿದ ನಿರ್ದೇಶಕ ಶಂಕರ್, ಉಪೇಂದ್ರ ಅವರಿಗೆ ನಾನೇನು ಟಿಪ್ಸ್ ಕೊಡಲಿ. ಅವರು ಕೂಡ ಒಬ್ಬ ಒಳ್ಳೇ ನಿರ್ದೇಶಕ. ಅವರ ಪಾತ್ರಗಳು ನನಗೆ ತುಂಬಾ ಇಷ್ಟ. ಅವರ ಸಿನಿಮಾಗಳು ನನಗೆ ಸ್ಫೂರ್ತಿ ನೀಡುತ್ತವೆ. ಉಪೇಂದ್ರ ಅವರ ಎ ಸಿನಿಮಾ ನನಗೆ ದೊಡ್ಡ ಸ್ಫೂರ್ತಿ. ನಾನು ಈ ಚಿತ್ರದ ಬಗ್ಗೆ ಚರ್ಚೆ ಮಾಡುವಾಗ ಅಸಿಸ್ಟೆಂಟ್‍ಗಳಿಗೆ ಹೇಳುತ್ತಿದೆ. `ಎ’ ಸಿನಿಮಾ ರೀತಿ ಸಿನಿಮಾ ಸ್ಪೀಡ್ ಆಗಿರಬೇಕು ಎಂದು ಹಾಡಿ ಹೊಗಳಿದ್ದಾರೆ.

    ಅಂದಹಾಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಸಖತ್ ಸದ್ದು ಮಾಡುತ್ತಿದ್ದು, ಇದೂವರೆಗೂ ರಜಿನಿ ಸಿನಿಮಾದ ಹಿಂದಿ ಭಾಷೆಯ ಟ್ರೇಲರ್ ಅನ್ನು 44 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ಎಸ್‍ಎಲ್‍ಆರ್ 4ಡಿ ಸೌಂಡಿಂಗ್ ಹೊಂದಿರುವ ಏಕೈಕ ಚಿತ್ರವೆಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಎರಡು ನಿಮಿಷ 29 ಸೆಕೆಂಡ್ ಗಳ 2.0 ಟ್ರೈಲರ್ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಎರಡು ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಟ್ಟಿ ಕಮ್ ಬ್ಯಾಕ್-ರಜನಿ, ಅಕ್ಷಯ್ ಫೇಸ್ ಟು ಫೇಸ್ 2.0 ಟೀಸರ್ ಔಟ್

    ಚಿಟ್ಟಿ ಕಮ್ ಬ್ಯಾಕ್-ರಜನಿ, ಅಕ್ಷಯ್ ಫೇಸ್ ಟು ಫೇಸ್ 2.0 ಟೀಸರ್ ಔಟ್

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹಾಗು ನಿರ್ದೇಶಕ ಶಂಕರ್ ಜೋಡಿಯ 2.0 ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ನಟ ಅಕ್ಷಯ್ ಕುಮಾರ್ ಜೊತೆಯಾಗಿರುವ ಚಿತ್ರದ ಟೀಸರನ್ನು ಚಿತ್ರತಂಡ ಹಬ್ಬದ ಉಡುಗೊರೆಯಾಗಿ ನೀಡಿದೆ.

    2010ರಲ್ಲಿ ಶಂಕರ್ ನಿರ್ದೇಶನದಲ್ಲೇ ಮೂಡಿಬಂದಿದ್ದ ಎಂದಿರನ್ ಚಿತ್ರದ ಮುಂದಿನ ಭಾಗವಾಗಿ 2.0 ಮೂಡಿಬಂದಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಚಿತ್ರದ ಖಳನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಟೀಸರಿನಲ್ಲೇ ಅದರ ಝಲಕ್ ಕಾಣಸಿಗುತ್ತದೆ. ರಜನಿಕಾಂತ್ ಮತ್ತೊಮ್ಮೆ ತಮ್ಮ ಸ್ಟೈಲ್‍ನಲ್ಲಿ ಮಿಂಚಿದ್ದಾರೆ.

    ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 2.0 ಚಿತ್ರಕ್ಕೆ ಬರೋಬ್ಬರಿ 543 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಚಿತ್ರ ತಂಡದ ಮೂಲಗಳು ಹೇಳಿಕೊಂಡಿದೆ. ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, 3ಡಿ ರೂಪದಲ್ಲಿ ಸಿನಿಮಾ ಸಿದ್ಧಗೊಂಡಿದೆ.

    ಇನ್ನು ಚಿತ್ರದ ಟೀಸರ್ ಬಿಡುಗಡೆ ಕುರಿತು ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ಗಣಪತಿ ಚತುರ್ಥಿಯ ವಿಶೇಷವಾಗಿ ದೇವರು ಹಾಗೂ ದುಷ್ಟ ಶಕ್ತಿಯ ಬಿಗ್ ಫೈಟ್ ನಿಮ್ಮ ಮುಂದಿದೆ ಎಂದು ತಿಳಿಸಿದ್ದಾರೆ. ಒಂದು ನಿಮಿಷವಿರುವ ಟೀಸರಿನಲ್ಲಿ ಆಧುನಿಕ ತಂತ್ರಜ್ಞಾನದ ಸಿಜಿಐ ವರ್ಕ್ ಎಲ್ಲರ ಗಮನ ಸೆಳೆದಿದ್ದು, ಪಕ್ಷಿಗಳ ಹಾರಾಟದಿಂದ ಆರಂಭವಾಗುವ ಮೂಲಕ ಜನರ ಬಳಿ ಇರುವ ಮೊಬೈಲ್ ಫೋನ್ ಹಾರಿಹೋಗುವ ಸನ್ನಿವೇಶ ಒಮ್ಮೆಲೆ ಅಚ್ಚರಿ ಮೂಡಿಸುತ್ತದೆ. ಈ ವೇಳೆ ದೃಷ್ಟ ಶಕ್ತಿಯನ್ನು ಎದುರಿಸಲು ಮತ್ತೆ ಚಿಟ್ಟಿ ಹೆಸರಿನ ರೋಬೋಗೆ ಪುನರ್ ಶಕ್ತಿ ನೀಡಲಾಗುತ್ತದೆ. ಇಲ್ಲಿಗೆ ಅಕ್ಷಯ್ ಕುಮಾರ್ ಹಾಗೂ ರಜನಿ ರೂಪದ ಚಿಟ್ಟಿ ರೋಬೋ ನಡುವಿನ ಹೋರಾಟ ಆರಂಭವಾಗುತ್ತದೆ.

    ಚಿತ್ರ ನವೆಂಬರ್ 29ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್‍ರೊಂದಿಗೆ ಅದಿಲ್ ಹುಸೇನ್, ಸುಧಾಂಶು ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಆ್ಯಮಿ ಜಾಕ್ಸನ್ ನಟಿಸಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

    ಈಗಾಗಲೇ ಅಂತರ್ಜಾಲದಲ್ಲಿ ನಂ.1 ಟ್ರೆಂಡಿಂಗ್‍ನಲ್ಲಿರುವ 2.0 ಸಿನಿಮಾ ಹಿಂದಿ ಟೀಸರ್ 26 ಲಕ್ಷ ವ್ಯೂ, ತಮಿಳು ಟೀಸರ್ 41 ಲಕ್ಷ ವ್ಯೂ, ತೆಲುಗು ಟೀಸರ್ 27 ಲಕ್ಷ ವ್ಯೂ ಕಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv