Tag: Director Prem

  • ರಕ್ತದಲ್ಲಿ ಚಿತ್ರ ಬಿಡಿಸಿದ ಅಭಿಮಾನಿ ಮೇಲೆ ಪ್ರೇಮ್ ಗರಂ

    ರಕ್ತದಲ್ಲಿ ಚಿತ್ರ ಬಿಡಿಸಿದ ಅಭಿಮಾನಿ ಮೇಲೆ ಪ್ರೇಮ್ ಗರಂ

    ಭಿಮಾನಿಗಳು ತಮ್ಮ ನೆಚ್ಚಿನ ನಟರ ಮೇಲಿನ ಅಭಿಮಾನದ ಪರಾಕಾಷ್ಟೆಯಲ್ಲಿ ಕೆಲವೊಮ್ಮೆ ವಿಪರೀತಕ್ಕೆ ತಲುಪುತ್ತಾರೆ. ಯಾವುದೇ ತ್ಯಾಗಕ್ಕೆ ಬೇಕಾದ್ರೂ ಸಿದ್ಧರಿರುತ್ತಾರೆ. ಇದೀಗ ನಿರ್ದೇಶಕ ಜೋಗಿ ಪ್ರೇಮ್ (Director Prem) ಅಭಿಮಾನಿಯೊಬ್ಬ ಅತಿಯಾದ ಅಭಿಮಾನ ತೋರಿಸಿದ್ದಾನೆ. ತನ್ನ ರಕ್ತದಲ್ಲಿ ಪ್ರೇಮ್ ಚಿತ್ರ ಬರೆಸಿಕೊಂಡು ತಾನೆಷ್ಟು ದೊಡ್ಡ ಅಭಿಮಾನಿ ಅನ್ನೋದನ್ನ ಸಾಬೀತು ಮಾಡಲು ಹೊರಟಿದ್ದಾನೆ.

    ಇಂದು (ಅ.22) ಪ್ರೇಮ್ ಹುಟ್ಟುಹಬ್ಬ. ಅದಕ್ಕಾಗಿ ಈ ಅಭಿಮಾನಿ ತನ್ನ ರಕ್ತ ತೆಗೆಸಿ ಅದನ್ನೇ ಇಂಕ್ ಆಗಿ ಬಳಸಿ `ಹ್ಯಾಪಿ ಬರ್ತ್‍ಡೇ ಬಾಸ್’ ಎಂದು ಬರೆದು ಚಿತ್ರ ಬಿಡಿಸಿಕೊಂಡಿದ್ದಾನೆ. ಅದನ್ನು ಪ್ರೇಮ್‍ಗೆ ತಲುಪಿಸುವ ಯೋಜನೆ ಇವನದ್ದು. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬುದ್ಧಿಮಾತು ಹೇಳಿರುವ ಪ್ರೇಮ್ “ಮಕ್ಕಳೇ ಇಂಥಹ ತಪ್ಪು ಮಾಡಬೇಡಿ” ಎಂದು ತಮ್ಮದೇ ಗ್ರಾಮೀಣ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. “ಅಂದಾಭಿಮಾನ ತೋರಸಬೇಡಿ. ನಿಮ್ಮ ಪ್ರೀತಿಯನ್ನು ಈ ರೀತಿ ತೋರಿಸುವುದು ತಪ್ಪು” ಎಂದು ಹೇಳುವ ಮೂಲಕ ಬೇಸರ ಹೊರ ಹಾಕಿ, ತಿಳುವಳಿಕೆ ಹೇಳಿದ್ದಾರೆ. ಇದನ್ನೂ ಓದಿ: ಹುಡ್ಗೀರು ಬ್ರೇಕಪ್ ನೋವನ್ನ ಬೇಗ ಮರೆಯುತ್ತಾರೆ – ಮೌನ ಮುರಿದ ʻಶ್ರೀವಲ್ಲಿʼ

    ಕನ್ನಡದ ಸ್ಟಾರ್ ನಿರ್ದೇಶಕ ಪ್ರೇಮ್ ಸಿನಿಮಾ ನಟನಾಗಿಯೂ ಗುರುತಿಸಿಕೊಂಡವರು. ಮುಗ್ಧ ಅಭಿಮಾನಿಗಳು ಮಾಡುವ ಈ ರೀತಿ ವರ್ತನೆ ಅವರನ್ನು ಖುಷಿ ಪಡಿಸೋ ಬದಲು ಮನಸ್ಸಿಗೆ ಹಿಂಸೆ ಕೊಡುತ್ತದೆ. ಇದನ್ನೂ ಓದಿ: `ದೀಪದ ಬೆಳಕಲ್ಲಿ ಬದುಕಿನ ಪ್ರತಿರೂಪ’ – ಪ್ರತಿದಿನವೂ ಹಬ್ಬವೇ

  • ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ – `ಕೆಡಿ’ ಚಿತ್ರತಂಡದಿಂದ ಫಾನ್ಸ್‌ಗೆ ಗುಡ್‌ನ್ಯೂಸ್

    ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ – `ಕೆಡಿ’ ಚಿತ್ರತಂಡದಿಂದ ಫಾನ್ಸ್‌ಗೆ ಗುಡ್‌ನ್ಯೂಸ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ಪ್ರೇಮ್ (Orem) ಕಾಂಬಿನೇಷನ್‌ನ `ಕೆಡಿ’ (KD) ಚಿತ್ರತಂಡವು ಫಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ. ದಿಢೀರ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವ ಸುದ್ದಿ ಅನೌನ್ಸ್ ಮಾಡಿರುವ ಟೀಮ್ ಶೀಘ್ರದಲ್ಲೇ ತೆರೆಗೆ ಬರ್ತೀವಿ ಎಂಬ ಲೇಟೆಸ್ಟ್ ಸುದ್ದಿಯನ್ನ ವೀಡಿಯೋ ಮಾಡಿ ಘೋಷಣೆ ಮಾಡಿದೆ.

    ಶೂಟಿಂಗ್ ಅಡ್ಡದಿಂದ ಸಿನಿಮಾ ತಂತ್ರಜ್ಞರ ಜೊತೆಗೂಡಿ ಧ್ರುವ ಸರ್ಜಾ ವೀಡಿಯೋ ಮೂಲಕ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿರೋದನ್ನ ಘೋಷಿಸಿದ್ದಾರೆ. ಈ ವೀಡಿಯೋವನ್ನ ನಿರ್ದೇಶಕ ಪ್ರೇಮ್ ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ಬ್ಯಾಕ್

    ಶನಿವಾರವಷ್ಟೇ ಕೆಡಿ ಚಿತ್ರತಂಡ ಸುದೀಪ್ ಎಂಟ್ರಿಯನ್ನ ರಿವೀಲ್ ಮಾಡಿತ್ತು. ಅಭಿಮಾನಿಗಳಿಗೆ ಇದು ಸಪ್ರೈಸ್‌ ಆಗಿತ್ತು. ಈ ವಿಷಯ ಅರಗಿಸಿಕೊಳ್ಳುವಷ್ಟರಲ್ಲೇ ಶೂಟಿಂಗ್ ಕಂಪ್ಲೀಟ್ ಆಗಿರುವ ಮಾಹಿತಿ ಕೊಟ್ಟಿದೆ ಚಿತ್ರತಂಡ. ಇಷ್ಟೇ ಅಲ್ಲದೆ ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ ಅನ್ನೋದಾಗಿ ಘೋಷಿಸಿದೆ.

    ಅಂದಹಾಗೆ ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಪ್ರಯತ್ನದಲ್ಲಿದೆ ಎಂಬ ಸುದ್ದಿ ಇತ್ತು. ಅದಕ್ಕೀಗ ರೆಕ್ಕೆಪುಕ್ಕ ಬಂದಿದೆ. ಈಗಾಗ್ಲೇ ಡಿಸೆಂಬರ್‌ನಲ್ಲಿ ಮೂವರು ಬಿಗ್ ಸ್ಟಾರ್‌ಗಳ ಸಿನಿಮಾಗಳು ಸರತಿಯಲ್ಲಿ ನಿಂತಾಗಿದೆ. ಇದೀಗ `ಕೆಡಿ’ ಸಿನಿಮಾ ಎಲ್ಲಿ ಜಾಗ ಮಾಡಿಕೊಳ್ಳುತ್ತೆ ಅನ್ನೋದೇ ಲೆಕ್ಕಾಚಾರಕ್ಕೆ ಸಿಗದ ವಿಷಯ.

  • ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು – ಉಗ್ರರ ದಾಳಿ ಖಂಡಿಸಿದ ಪ್ರೇಮ್

    ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು – ಉಗ್ರರ ದಾಳಿ ಖಂಡಿಸಿದ ಪ್ರೇಮ್

    – ಮೋದಿ 100% ಹ್ಯಾಂಡಲ್ ಮಾಡ್ತಾರೆ ಎಂದ ನಿರ್ದೇಶಕ

    ಬೆಂಗಳೂರು: ಪಾಕಿಸ್ತಾನದ ಉಗ್ರರು ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು ಎಂದು ನಿರ್ದೇಶಕ ಪ್ರೇಮ್ (Director Prem) ಪೆಹಲ್ಗಾಮ್ ಉಗ್ರರ ದಾಳಿಯನ್ನು (Pahalgam Terror Attack) ತೀವ್ರವಾಗಿ ಖಂಡಿಸಿದ್ದಾರೆ.

    ಉಗ್ರರ ದಾಳಿಯ ಕುರಿತು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಉಗ್ರರಿಗೆ ಸೆಂಟಿಮೆಂಟ್ ತೊರಿಸಲು ಹೋಗಲೇಬಾರದು. ಏನಿದ್ರೂ ಹೊಡಿ, ಕಡಿ ಅಷ್ಟೇ. ಅಮಾಯಕ ಜೀವಗಳನ್ನ ತೆಗೆದಿದ್ದಾರೆ ಅಂದ್ರೆ ಅವರನ್ನೆಲ್ಲ ಕತ್ತರಿಸಿ, ಪೀಸ್ ಮಾಡಿ ಎಸೆಯಬೇಕು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಗನ್ ಹಿಡಿದು ‘ಕಿಲ್ಲರ್’ ಕಥೆ ಹೇಳೋಕೆ ಸಜ್ಜಾದ ಜ್ಯೋತಿ ರೈ

    ಅವರದ್ದು ಹೇಡಿತನ, ಅವರ ಮೇಲೆ ಎಮೋಷನ್ಸ್ ಬೇಡ. ಕೆಲವರು ಯುದ್ಧ ಬೇಡ ಅಂತಾ ಹೇಳ್ತಾರಲ್ಲ. ಆದರೆ ಸ್ವಾಮಿ ಯುದ್ಧ ಮಾಡ್ಬೇಕು. ನಾವು ಬದುಕಬೇಕು ಅಂದ್ರೆ ಯುದ್ಧ ಮಾಡಲೇಬೇಕು. ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವು ಯುದ್ಧ ಮಾಡಬೇಕು. ಇದು ಉಗ್ರರ ಹೀನಕೃತ್ಯ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?

    ಪ್ರಧಾನಿ ಮೋದಿಯವ್ರು (Narendra Modi) ಇದ್ದಾರೆ. 100% ಅವರು ಇದನ್ನು ಹ್ಯಾಂಡಲ್ ಮಾಡ್ತಾರೆ. ನಮ್ಮವರು ಏನೂ ಕಮ್ಮಿ ಇಲ್ಲ. ಆ ಉಗ್ರರನ್ನು ಸುಮ್ನೆ ಬಿಡಲ್ಲ, ಹೊಡಿತಾರೆ. ಹೊಡಿಲಿ ಅಂತಾನೇ ನಾನು ಕಾಯ್ತಿದ್ದೀನಿ ಎಂದು ಹೇಳಿದರು. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

    ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು, 1 ವಿದೇಶಿ ಪ್ರವಾಸಿಗ ಸೇರಿ 26 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಈ ದಾಳಿಗೆ ದೇಶದಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿದ್ದು, ಎಲ್ಲೆಡೆ ಪ್ರತೀಕಾರದ ಕೂಗು ಕೇಳಿಬರುತ್ತಿದೆ.

  • ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು: ನಿರ್ದೇಶಕ ಪ್ರೇಮ್

    ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು: ನಿರ್ದೇಶಕ ಪ್ರೇಮ್

    ಬೆಂಗಳೂರು: ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು ಎಂದು ನಿರ್ದೇಶಕ ಪ್ರೇಮ್ (Director Prem) ಕಿಡಿಕಾರಿದ್ದಾರೆ.

    ಹಸುವಿನ ಕೆಚ್ಚಲು (Cow’s Udder) ಕೊಯ್ದ ಘಟನೆ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಮಕ್ಕಳು ಹುಟ್ಟಿದಾಗ ತಾಯಿ ಎದೆಹಾಲು ಕುಡಿಸಿ ಎನ್ನುತ್ತೇವೆ. ಗೋವನ್ನು ಮಾತೆ, ತಾಯಿ ಎನ್ನುತ್ತೇವೆ. ಆದರೆ ಅಂಥ ತಾಯಿ ಎದೆ ಕೊಯ್ದಿದ್ದಾನೆ. ಕರ್ನಾಟಕ ಪೊಲೀಸ್ ಸ್ಟ್ರಾಂಗ್ ಇದ್ದಾರೆ. ಅವರನ್ನು ಹಿಡಿದು ತಕ್ಕ ಶಿಕ್ಷೆ ಕೊಡಿಸುತ್ತಾರೆ. ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದು. ಆದರೆ ಅವರು ಕೈಗೆ ಸಿಕ್ಕರೇ ಅಲ್ಲೇ ಹೊಡೆದು ಸಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಚಾಮರಾಜಪೇಟೆಯಲ್ಲಿ (Chamrajpet) ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು (Cottonpet Police) ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಿರುವ ಸೋಕೋ ಟೀಂ ತಡರಾತ್ರಿಯಿಂದಲೇ ವಿಚಾರಣೆ ಆರಂಭಿಸಿದೆ.

    ಪ್ರಕರಣ ಏನು?
    ಬೀದಿಯಲ್ಲಿ ಮಲಗಿದ್ದ 3 ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ವಿನಾಯಕ ನಗರದಲ್ಲಿ ತಡರಾತ್ರಿ ಕರ್ಣ ಎಂಬುವರಿಗೆ ಸೇರಿದ್ದ 3 ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದರು. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು ತನಿಖೆ ಆರಂಭಿಸಿದ್ದರು.

  • ‘ಕೆಡಿ’ ಚಿತ್ರತಂಡದ ಜೊತೆ ಗೋಲ್ಡನ್ ಟೆಂಪಲ್‌ಗೆ ಡೈರೆಕ್ಟರ್ ಪ್ರೇಮ್ ಭೇಟಿ

    ‘ಕೆಡಿ’ ಚಿತ್ರತಂಡದ ಜೊತೆ ಗೋಲ್ಡನ್ ಟೆಂಪಲ್‌ಗೆ ಡೈರೆಕ್ಟರ್ ಪ್ರೇಮ್ ಭೇಟಿ

    ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕ ಪ್ರೇಮ್ (Director Prem) ಇದೀಗ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ‘ಕೆಡಿ’ (Kd Film) ಚಿತ್ರತಂಡದ ಜೊತೆ ಭೇಟಿ ನೀಡಿರುವ ಫೋಟೋಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ.

    ‘ಕೆಡಿ’ ಟೀಮ್ ಜೊತೆ ಪಂಜಾಬ್‌ನ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದಿದ್ದಾರೆ ಜೋಗಿ ಪ್ರೇಮ್. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ದೇವರ ಸನ್ನಿಧಿಗೆ ಹೋಗಿದ್ದಾರೆ. ಇದನ್ನೂ ಓದಿ:ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ಕೆಡಿ ಸಿನಿಮಾದ ರಿಲೀಸ್ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

    ಕೆವಿಎನ್ ನಿರ್ಮಾಣ ಸಂಸ್ಥೆ ಜೊತೆ ಪ್ರೇಮ್ ಕೈಜೋಡಿಸಿದ್ದಾರೆ. ದರ್ಶನ್‌ಗೆ (Darshan) ಹಲವು ವರ್ಷಗಳ ನಂತರ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಜೈ ಶ್ರೀರಾಮ್ ಎಂದು ಗದೆ ಎತ್ತಿ ದರ್ಶನ್ ಹೊಸ ಸಿನಿಮಾದ ಟೀಸರ್ ಕೂಡ ರಿವೀಲ್ ಮಾಡಲಾಗಿತ್ತು. ಸದ್ಯದಲ್ಲೇ ಚಿತ್ರದ ಶೂಟಿಂಗ್ ಅಪ್‌ಡೇಟ್ ಕೂಡ ಸಿಗಲಿದೆ. ಒಟ್ನಲ್ಲಿ ಪ್ರೇಮ್‌ ಬತ್ತಳಿಕೆಯಿಂದ ಬರುವ ಸಿನಿಮಾಗಳ ಬಗ್ಗೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ.

  • ಧ್ರುವ ಸರ್ಜಾಗೆ ನಾಯಕಿಯಾಗೋ ಆ KD ಲೇಡಿ ಯಾರು?

    ಧ್ರುವ ಸರ್ಜಾಗೆ ನಾಯಕಿಯಾಗೋ ಆ KD ಲೇಡಿ ಯಾರು?

    ಜೋಗಿ ಪ್ರೇಮ್ (Jogi Prem) ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೆಡಿ’ (KD) ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇದೆ. ದಿನದಿಂದ ದಿನಕ್ಕೆ ಚಿತ್ರತಂಡದ ತಾರಾಗಣ ಹಿರಿದಾಗುತ್ತಲೇ ಇದೆ. ಹೀಗಿರುವಾಗ ಧ್ರುವ ಸರ್ಜಾಗೆ (Dhruva Sarja) ನಾಯಕಿಯಾಗಿ ಯಾರು ಸಾಥ್ ಕೊಡುತ್ತಾರೆ ಎಂಬುದನ್ನ ರಿವೀಲ್ ಮಾಡುವುದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ನಾಯಕಿ ಮಚ್ಚ್‌ಲಕ್ಷ್ಮಿ ಪರಿಚಯಿಸೋದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ.

    ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್‌, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್‌ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ. ‘ಕೆಡಿ’ ನಾಯಕಿ ಮಚ್ಚ್‌ಲಕ್ಷ್ಮಿ ಬಗ್ಗೆ ಅನೌನ್ಸ್ ಮಾಡ್ತಿವಿ ಎನ್ನುತ್ತಿದ್ದಂತೆ ಯಾರಿರಬಹುದು ಎಂಬ ಗುಸು ಗುಸು ಈಗಾಗಲೇ ಶುರುವಾಗಿದೆ.

     

    View this post on Instagram

     

    A post shared by Prem❣️s (@directorprems)

    KDಗೆ ಪರಭಾಷಾ ನಟಿ ಅಲ್ಲ, ಹೊಸ ಮುಖ ಕೂಡ ಅಲ್ಲ, ರೀಷ್ಮಾ ನಾಣಯ್ಯ (Reeshma Nanaiah) ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲೂ ಅವರು ಭಾಗಿ ಆಗಿದ್ಧಾರೆ. ಏ.28ಕ್ಕೆ ಶುಕ್ರವಾರ 10:05ಕ್ಕೆ ಫಸ್ಟ್ ಲುಕ್ ಸಮೇತ ಮಚ್ಚ್‌ಲಕ್ಷ್ಮಿ ದರ್ಶನ ಮಾಡಿಸಲಿದೆಯಂತೆ ಚಿತ್ರತಂಡ. ಜೋಗಿ ಪ್ರೇಮ್ ನಿರ್ದೇಶನದ ‘ಏಕ್‌ ಲವ್ ಯಾ’ ಚಿತ್ರದಲ್ಲಿ ರೀಷ್ಮಾ ನಟಿಸಿದ್ದರು. ಮಡಿಕೇರಿ ಮೂಲದ ರೀಷ್ಮಾ ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದಾರೆ. ಮೊದಲ ಚಿತ್ರದಲ್ಲೇ ಆಕೆಯ ನಟನೆ ಗಮನ ಸೆಳೆದಿತ್ತು. ಹಾಗಾಗಿ ‘KD’ ಚಿತ್ರಕ್ಕೂ ಆಕೆನೇ ನಾಯಕಿ ಎನ್ನಲಾಗ್ತಿದೆ. ಎಲ್ಲದಕ್ಕೂ ಅಧಿಕೃತ ಅಪ್‌ಡೇಟ್‌ಗೆ ಕಾದುನೋಡಬೇಕಿದೆ. ಇದನ್ನೂ ಓದಿ:38 ಕೋಟಿ ರೂಪಾಯಿ ಕೊಟ್ಟು ಎರಡು ಐಷರಾಮಿ ಮನೆ ಖರೀದಿಸಿದ ಆಲಿಯಾ ಭಟ್

    1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ. ಧ್ರುವ ನಟನೆಯ ‘ಮಾರ್ಟಿನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗ್ತಿದೆ. ಅದರ ಬೆನ್ನಲ್ಲೇ ತೆರೆಮೇಲೆ KD ಸಿನಿಮಾದ  ಕರಾಮತ್ತು ಶುರುವಾಗಲಿದೆ.

  • KD Film: ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ನಾಯಕಿ

    KD Film: ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ನಾಯಕಿ

    ಧ್ರುವ ಸರ್ಜಾ- ಡೈರೆಕ್ಟರ್ ಪ್ರೇಮ್ ಕಾಂಬಿನೇಷನ್ `ಕೆಡಿ’ (KD Film) ಸಿನಿಮಾ ಶುರುವಾದ ದಿನದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕುತ್ತಲೇಯಿದೆ. ಇತ್ತೀಚಿಗೆ ಶಿಲ್ಪಾ ಶೆಟ್ಟಿ (Shilpa Shetty) ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ `ಕೆಡಿ’ ಟೀಮ್ ಸೌಂಡ್ ಮಾಡಿತ್ತು. ಇದೀಗ `ಕೆಡಿ’ಗೆ ನಾಯಕಿ ಯಾರು ಎಂದು ರಿವೀಲ್ ಆಗಿದೆ.

    `ಕೆಡಿ’ (KD) ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಧ್ರುವ ಸರ್ಜಾ (Dhruva Sarja) ನಾಯಕಿಯಾಗಿ `ಏಕ್ ಲವ್ ಯಾ’ ನಾಯಕಿ ರೀಷ್ಮಾ ಫೈನಲ್ ಆಗಿದ್ದಾರೆ. ಈ ಮೊದಲು ಶ್ರೀಲೀಲಾ ನಾಯಕಿ ಎಂದು ಸುದ್ದಿಯಾಗಿತ್ತು. ಆದರೆ ಈಗ ಕೊಡಗಿನ ಕುವರಿ ರೀಷ್ಮಾ ನಾಯಕಿ ಎಂದು ಹೇಳಲಾಗುತ್ತಿದೆ.

    ಕನ್ನಡದ ನಟಿನೇ ಧ್ರುವಗೆ ನಾಯಕಿಯಾಗಬೇಕು ಎಂದು ಚಿತ್ರತಂಡ ಮೊದಲೇ ಯೋಚಿಸಿತ್ತು. ಅದರಂತೆಯೇ ಕನ್ನಡದ ನಟಿ ರೀಷ್ಮಾನೇ ಈ ಪಾತ್ರಕ್ಕೆ ಸೂಕ್ತ ಎಂದೆನಿಸಿ ಆಯ್ಕೆ ಮಾಡಲಾಗಿದೆ. ʻಕೆಡಿʼ ಸಿನಿಮಾದಲ್ಲಿ ರೆಟ್ರೋ ಕಥೆಯಿದ್ದು, ರೆಟ್ರೋ ಲುಕ್‌ನಲ್ಲಿ ರೀಷ್ಮಾ ನಾಣಯ್ಯ (Reeshma Naniah) ಮಿಂಚಿದ್ದಾರೆ. ಧ್ರುವ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿರುವ ಚಿತ್ರದಲ್ಲಿ ರೀಷ್ಮಾ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಶ್ರೀನಿಧಿ ಬ್ಯೂಟಿಗೆ ರಕ್ಷಿತ್ ಫಿದಾ, ಶೆಟ್ರೆ ಏನ್ ವಿಷ್ಯ ಎಂದು ಕಾಲೆಳೆದ ಫ್ಯಾನ್ಸ್

    ರೀಷ್ಮಾ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ `ಬಾನ ದಾರಿಯಲಿ’, ಉಪೇಂದ್ರ ಜೊತೆ UI ಚಿತ್ರದಲ್ಲಿ ನಟಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಪ್ಯಾನ್ ಇಂಡಿಯಾ `ಕೆಡಿ’ ಚಿತ್ರಕ್ಕೆ ರೀಷ್ಮಾ ಸಾಥ್ ನೀಡಿದ್ದಾರೆ.

  • KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

    KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

    ಬಾಲಿವುಡ್ (Bollywood) ಬ್ಯೂಟಿ ಕನ್ನಡತಿ ಶಿಲ್ಪಾ ಶೆಟ್ಟಿ (Shilpa Shetty) ಸತ್ಯವತಿಯಾಗಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. `ಕೆಡಿ’ (KD Film) ಧ್ರುವ ಜೊತೆ ಶಿಲ್ಪಾ ಶೆಟ್ಟಿ ಭಿನ್ನ ಪಾತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ರಾಯಲ್‌ ಲುಕ್‌ನಲ್ಲಿ ಮಿಂಚಿದ್ದಾರೆ.

    ಡೈರೆಕ್ಟರ್ ಪ್ರೇಮ್ (Prem) ತಮ್ಮ ಪ್ರತಿ ಸಿನಿಮಾದಲ್ಲಿಯೂ ಹೊಸ ಕಾನ್ಸೆಪ್ಟ್ ಮೂಲಕ ಬರುತ್ತಾರೆ. ಈಗ ಧ್ರುವಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸೌಂಡ್ ಮಾಡ್ತಿದ್ದಾರೆ. ಈಗಾಗಲೇ `ಕೆಜಿಎಫ್ 2′ ಅಧೀರ ಸಂಜಯ್ ದತ್ (Sanjay Dutt)ಎಂಟ್ರಿ ಕೊಟ್ಟ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಕೂಡ ಸದ್ದಿಲ್ಲದೇ ತಮ್ಮ ಭಾಗದ ಚಿತ್ರೀಕರಣ ಮಾಡಿ ಮುಗಿಸಿ ಕೊಟ್ಟಿದ್ದರು. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ

    ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಪವರ್‌ಫುಲ್ ಸತ್ಯವತಿ ಪಾತ್ರದ (Sathyavathi) ಲುಕ್‌ನ ಚಿತ್ರತಂಡ ರಿವೀಲ್ ಮಾಡಿದ್ದಾರೆ. ಸತ್ಯವತಿಯಾಗಿ ಕರಾವಳಿ ನಟಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಲುಕ್ ರಿವೀಲ್ ಆಗ್ತಿದ್ದಂತೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ `ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, `ಒಂದಾಗೋಣ ಬಾ’ ಸಿನಿಮಾಗಳಲ್ಲಿ ನಟಿ ಅಭಿನಯಿಸಿದ್ದಾರೆ.

  • KD Film: ಯುಗಾದಿ ಹಬ್ಬದಂದು `ಸತ್ಯವತಿ’ ಅನಾವರಣ

    KD Film: ಯುಗಾದಿ ಹಬ್ಬದಂದು `ಸತ್ಯವತಿ’ ಅನಾವರಣ

    ಡೈರೆಕ್ಟರ್ ಪ್ರೇಮ್ (Director Prem) ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ `ಕೆಡಿ’ (KD) ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದೆ. ಇದೀಗ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದ ಪವರ್‌ಫುಲ್ ಪಾತ್ರಧಾರಿಯ ಫಸ್ಟ್ ಲುಕ್ ರಿವೀಲ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

    ಪ್ರೇಮ್ ನಿರ್ದೇಶನದ `ಕೆಡಿ’ ಸಿನಿಮಾದಲ್ಲಿ ಸತ್ಯವತಿ ಎಂಬ ಪವರ್‌ಫುಲ್ ಪಾತ್ರವಿದೆ. ಆ ಪಾತ್ರದ ಲುಕ್‌ನ ಯುಗಾದಿ ಹಬ್ಬ ವೇಳೆ ರಿವೀಲ್ ಮಾಡಲಿದ್ದಾರೆ. ಮಾರ್ಚ್ 22ರಂದು‌ ಬೆಳಿಗ್ಗೆ 11:31ಕ್ಕೆ ಅನೌನ್ಸ್ ಮಾಡುವ ಬಗ್ಗೆ ಪ್ರೇಮ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. ಸತ್ಯವತಿ ಯಾರು ಎಂದು ತಲೆಕೆಡಿಸಿಕೊಂಡವರಿಗೆ ಇಲ್ಲಿದೆ ಮಾಹಿತಿ.

     

    View this post on Instagram

     

    A post shared by Prem❣️s (@directorprems)

    ಕನ್ನಡದ `ಕೆಡಿ’ ಸಿನಿಮಾಗೆ ಸಾಥ್ ನೀಡಲು ಸತ್ಯವತಿಯಾಗಿ ಕರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಭಾಗದ ಮೊದಲ ಚಿತ್ರೀಕರಣ ಮುಗಿಸಿ ಮುಂಬೈಗೆ ಹಾರಿದ್ದರು. ಇದೀಗ ಶಿಲ್ಪಾ ಶೆಟ್ಟಿ ಪಾತ್ರದ ಫಸ್ಟ್ ಲುಕ್ ಅನ್ನ ಚಿತ್ರತಂಡ ಅನಾವರಣ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ಪ್ರೀತ್ಸೋದ್ ತಪ್ಪಾ, ಆಟೋ ಶಂಕರ್, ಸೇರಿದಂತೆ ಕನ್ನಡದ ಚಿತ್ರಗಳಲ್ಲಿ ನಟಿಸಿದ್ದಾರೆ. 17 ವರ್ಷಗಳ ನಂತರ ಸತ್ಯವತಿಯಾಗಿ ಶಿಲ್ಪಾ ಶೆಟ್ಟಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಚಿತ್ರದಲ್ಲಿನ ನಟಿಯ ಲುಕ್‌ ಹೇಗಿದೆ? ಧ್ರುವ ಸರ್ಜಾ- ಶಿಲ್ಪಾ ಶೆಟ್ಟಿ ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂಬುದರ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿದೆ.

  • ಧ್ರುವ ಸರ್ಜಾ `ಕೆಡಿ’ ಚಿತ್ರಕ್ಕೆ ರವಿಚಂದ್ರನ್ ಎಂಟ್ರಿ

    ಧ್ರುವ ಸರ್ಜಾ `ಕೆಡಿ’ ಚಿತ್ರಕ್ಕೆ ರವಿಚಂದ್ರನ್ ಎಂಟ್ರಿ

    ಸ್ಯಾಂಡಲ್‌ವುಡ್‌ನ (Sandalwood) ಕ್ರಿಯೆಟಿವ್ ಡೈರೆಕ್ಟರ್ ಪ್ರೇಮ್ ನಿರ್ದೇಶನದಲ್ಲಿ `ಕೆಡಿ’ (Kd Film) ಸಿನಿಮಾ ಮೂಡಿ ಬರುತ್ತಿದೆ. ಧ್ರುವ ಸರ್ಜಾ (Druva Sarja) ಸಿನಿಮಾಗೆ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಎಂಟ್ರಿ ಕೊಡ್ತಿದ್ದಾರೆ. ಇದೀಗ ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್ ರಿವೀಲ್ ಆಗಿದೆ.

    ಕೆವಿಎನ್‌ ನಿರ್ಮಾಣದ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ `ಕೆಡಿ’ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಈಗ ರವಿಚಂದ್ರನ್ `ಕೆಡಿ’ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದನ್ನೂ ಓದಿ:ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

     

    View this post on Instagram

     

    A post shared by Prem❣️s (@directorprems)

    ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದಾರೆ. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದಾರೆ.

     

    View this post on Instagram

     

    A post shared by Prem❣️s (@directorprems)

    ಧ್ರುವ ಸರ್ಜಾ ಸಿನಿಮಾದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ.

    Live Tv
    [brid partner=56869869 player=32851 video=960834 autoplay=true]