Tag: dinakar toogudeepa

  • ಟಕ್ಕರ್ ಟೀಸರ್ ರಿಲೀಸ್ ಮಾಡಿದ ದಿನಕರ್ ತೂಗುದೀಪ

    ಟಕ್ಕರ್ ಟೀಸರ್ ರಿಲೀಸ್ ಮಾಡಿದ ದಿನಕರ್ ತೂಗುದೀಪ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿ ನಟಿಸಿರೋ ಚೊಚ್ಚಲ ಚಿತ್ರ ಟಕ್ಕರ್. ಎಸ್.ಎಲ್.ಎನ್.ಕ್ರಿಯೇಶನ್ಸ್ ಲಾಂಛನದಲ್ಲಿ ನಾಗೇಶ್ ಕೋಗಿಲು ನಿರ್ಮಾಣದ ಟಕ್ಕರ್ ನ ಮಜಬೂತಾದ ಟೀಸರ್ ಬಿಡುಗಡೆಗೊಂಡಿದೆ. ನಿರ್ದೇಶಕ ದಿನಕರ್ ತೂಗುದೀಪ ಈ ಟೀಸರ್ ಅನ್ನು ಬಿಡುಗಡೆಗೊಳಿಸಿ ತಮ್ಮ ಅಳಿಯನ ಮೊದಲ ಚಿತ್ರಕ್ಕೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಟಕ್ಕರ್ ಸೆಟ್ಟಿಗೆ ಬಂದ್ರು ದಿನಕರ್ ತೂಗುದೀಪ!

    ‘ನೀನು ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ್ ಜೊತೆ’ ಎಂಬ ಮಾಸ್ ಡೈಲಾಗ್ ಮತ್ತು ಅದಕ್ಕೆ ತಕ್ಕುದಾದ ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡಿರೋ ಟಕ್ಕರ್ ಟೀಸರ್ ನಿಜಕ್ಕೂ ಜಬರ್‍ದಸ್ತಾಗಿದೆ. ಈ ಮೂಲಕ ಮನೋಜ್ ಮೊದಲ ಚಿತ್ರದಲ್ಲಿಯೇ ಪಕ್ಕಾ ಆಕ್ಷನ್ ಅವತಾರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿರೋದೂ ಕೂಡಾ ಸ್ಪಷ್ಟವಾಗಿದೆ. ಇದನ್ನೂ ಓದಿ: ಮಾಸ್ ಪ್ರೇಕ್ಷಕರಿಗಾಗಿ ಹೊರ ಬಂತು ‘ಟಕ್ಕರ್’ ಟೀಸರ್

    ಈ ಹಿಂದೆ ರನ್ ಆಂಟನಿ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಘುಶಾಸ್ತ್ರಿ ಟಕ್ಕರ್ ನಿರ್ದೇಶನ ಮಾಡಿದ್ದಾರೆ. ಆರಡಿಯ ಕಟ್ಟುಮಸ್ತಾದ ಮನೋಜ್ ಈ ಚಿತ್ರದ ಮೂಲಕ ಪಕ್ಕಾ ಆಕ್ಷನ್ ಹೀರೋ ಆಗಿ ಅಡಿಯಿರಿಸಲಿರೋ ಸೂಚನೆಗಳನ್ನೂ ಕೂಡಾ ಈ ಟೀಸರ್ ರವಾನಿಸಿದೆ. ಆಕ್ಷನ್ ಶೈಲಿಯ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿ ಪುಟ್ ಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಭಜರಂಗಿ ಲೋಕಿ, ಸುಮಿತ್ರಾ, ಲಕ್ಷ್ಮಣ್ ಶಿವಶಂಕರ್, ಆಶ್ವಿನ್ ಹಾಸನ್, ಶಂಕರ್ ಆಶ್ವಥ್, ಈಟೀವಿ ಶ್ರೀಧರ್ ಸೇರಿಂದತೆ ಇನ್ನು ಹಲವರ ತಾರಾಬಳಗವಿದೆ. ಇದನ್ನೂ ಓದಿ:  EXCLUSIVE: ದರ್ಶನ್ ಸೋದರಳಿಯ ‘ಟಕ್ಕರ್’ ಮನೋಜ್ ಫೈಟ್ ನೋಡಿ!

    ‘ನಮ್ಮ ಕುಟುಂಬದಿಂದ ಮತ್ತೊಂದು ಪ್ರತಿಭೆ ಹೊರಬರುತ್ತಿದೆ. ಸಾಕಷ್ಟು ವರ್ಷಗಳಿಂದ ನಮ್ಮೆಲ್ಲರ ಜೊತೆ ಸಿನಿಮಾಗಳಿಗೆ ಕೆಲಸ ಮಾಡಿರುವ ನಮ್ಮ ಮನೋಜ್ ಟಕ್ಕರ್ ಸಿನಿಮಾದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿರುವುದರಿಂದ ನಮ್ಮ ತೂಗುದೀಪ ಕುಟುಂಬದ ಎಲ್ಲರೂ ಖುಷಿಯಾಗಿದ್ದಾರೆ. ಮನೋಜ್ ಇನ್ನೂ ತುಂಬಾ ಸಿನಿಮಾಗಳಲ್ಲಿ ನಟಿಸಲಿ, ಚಿತ್ರರಂಗದಲ್ಲಿ ದೊಡ್ಡ ಎತ್ತರಕ್ಕೆ ಬೆಳೆಯಲಿ’ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ. ಈ ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ಖ್ಯಾತ ಸಂಭಾಷಣೆಕಾರರೂ, ಚಕ್ರವರ್ತಿ ಸಿನಿಮಾದ ನಿರ್ದೇಶಕರೂ ಆದ ಚಿಂತನ್ ಅವರು ಹಾಜರಿದ್ದರು. ಇದನ್ನೂ ಓದಿ: ‘ಟಕ್ಕರ್’ಗಾಗಿ ಬಂತು ಫ್ಯಾಂಟಮ್!

  • ಅಣ್ಣ ದರ್ಶನ್ ರನ್ನು ನೋಡಲು ಬರಲಿಲ್ಲ ತಮ್ಮ ದಿನಕರ್!

    ಅಣ್ಣ ದರ್ಶನ್ ರನ್ನು ನೋಡಲು ಬರಲಿಲ್ಲ ತಮ್ಮ ದಿನಕರ್!

    ಮೈಸೂರು: ಅಪಘಾತದಲ್ಲಿ ಕೈ ಮುರಿದುಕೊಂಡು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲು ತಮ್ಮ ನಿರ್ದೇಶಕ ದಿನಕರ್ ತೂಗುದೀಪ ಅವರು ಬಂದಿಲ್ಲ.

    ದಿನಕರ್ ಅವರು ಕೂಡ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ದರ್ಶನ್ ಆರೋಗ್ಯ ವಿಚಾರಿಸಲು ಬಂದಿಲ್ಲ. ಅತ್ತ ಅಣ್ಣ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇತ್ತ ದಿನಕರ್ ಮನೆಯಲ್ಲಿ ಜ್ವರದಿಂದ ಬಳಲುತ್ತಿದ್ದಾರೆ. ದಿನಕರ್ ಅವರಿಗೆ ಕಳೆದ ಒಂದು ವಾರದಿಂದ ಬಿಡದೆ ವೈರಲ್ ಫೀವರ್ ಕಾಡುತ್ತಿದೆ. ಆದ್ರೆ ದಿನಕರ್ ಅವರು ಪ್ರತಿನಿತ್ಯ ದರ್ಶನ್ ಜೊತೆಯಲ್ಲಿ ದೂರವಾಣಿ ಸಂಪರ್ಕದಲ್ಲಿದ್ದಾರೆ. ಇದೇ ಕಾರಣದಿಂದ ಅವರು ಆಸ್ಪತ್ರೆಯ ಬಳಿ ಕಾಣಿಸಿಕೊಳ್ಳುತ್ತಿಲ್ಲ ಅಂತ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇಂದೂ ಡಿಸ್ಚಾರ್ಜ್ ಡೌಟ್:
    ನಟ ದರ್ಶನ್ ಕಾರ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಾಲ್ಕನೇ ದಿನವೂ ಚಿಕಿತ್ಸೆ ಮುಂದುವರಿದಿದೆ. ಹೀಗಾಗಿ ಇಂದೂ ಡಿಸ್ಚಾರ್ಜ್ ಆಗೋದು ಡೌಟು ಅಂತ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

    ಬುಧವಾರ ಸಂಜೆ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಗಾಯಗಳ ಊತ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು. ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ಡಿಸ್ಚಾರ್ಜ್ ಸಾಧ್ಯತೆಗಳಿವೆ. ಸದ್ಯ ದರ್ಶನ್ ಅವರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದೂ ಚಿತ್ರರಂಗದ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv