Tag: Dilip

  • ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್

    ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಮದುವೆ, ಸಂಸಾರ, ತಾಯ್ತನ ಅಂತಾ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಿದ್ದ ನಟಿ ಮತ್ತೆ ಚಿತ್ರರಂಗದತ್ತ (Films) ಮುಖ ಮಾಡಿದ್ದಾರೆ.

    ಮುದ್ದು ಮಗಳು ಆರ್ನಾ ಆರೈಕೆಯಲ್ಲಿ ಬ್ಯುಸಿಯಿದ್ದ ನಟಿ ಪ್ರಣಿತಾ ಸದ್ಯ ಮಲಯಾಳಂ (Malyalam) ಚಿತ್ರರಂಗದತ್ತ ನಟಿ ಆಕ್ಟೀವ್ ಆಗಿದ್ದಾರೆ. ಮಾಲಿವುಡ್ (Mollywood) ಸೂಪರ್ ಸ್ಟಾರ್ ದಿಲೀಪ್‌ಗೆ (Dilip)  ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ `ಪೊರ್ಕಿ’ ಚಿತ್ರದ ನಟಿ ಕೂಡ ಮೇಜರ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದು, ಧರ್ಮದೇಟು ತಿಂದ ಅಭಿಮಾನಿ

    ಮಾಲಿವುಡ್ ನಟ ದಿಲೀಪ್ ಅವರ ಮುಂದಿನ ಚಿತ್ರ ನೈಜ ಘಟನೆಗಳನ್ನು ಆಧರಿಸಿ ನಿರ್ದೇಶನ ಮಾಡಲಾಗುತ್ತಿದೆ. ಸದ್ಯಕ್ಕೆ ಸಿನಿಮಾಗೆ `ಡಿ 148′ ಎಂದು ಹೆಸರಿಡಲಾಗಿದೆ. `ಡಿ 148′ ಸಿನಿಮಾವನ್ನು ರತೀಶ್ ರಘುನಂದನ್ (Ratheesh Raghunandan) ಅವರು ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಣಿತಾ, ನೀತಾ ಪಿಳ್ಳೈ ಸೇರಿದಂತೆ ಇತರ ಪ್ರಮುಖ ಪಾತ್ರಗಳು ಇರಲಿವೆ.

     

    View this post on Instagram

     

    A post shared by Pranita Subhash (@pranitha.insta)

    ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ನಟಿಸಿರುವ ಪ್ರಣಿತಾ, ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಗುವಾದ ಬಳಿಕ ಮತ್ತೆ ಸಿನಿಮಾ ಮಾಡಲು ನಟಿ ರೆಡಿಯಾಗಿದ್ದಾರೆ. ಎಂದೂ ಮಾಡಿರದ ಪಾತ್ರದಲ್ಲಿ ಪ್ರಣಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಣಿತಾ ಅವರ ಪಾತ್ರದ ಶೂಟಿಂಗ್ 2 ವಾರಗಳ ಕಾಲ ಕೇರಳದಲ್ಲಿ ನಡೆಯಲಿದೆ. ಈಗಾಗಲೇ `ಡಿ 148′ ಶೂಟಿಂಗ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

    ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

    ತಿರುವನಂತಪುರಂ: ಕೇರಳದ ನಟ ದಿಲೀಪ್ ತನ್ನ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ ಆಗಿದೆ. ಈ ಪರಿಣಾಮ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ದಿಲೀಪ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮತ್ತು ಉಪ ಅಧೀಕ್ಷಕ ಬೈಜು ಪೌಲೋಸ್ ದಿಲೀಪ್ ವಿರುದ್ಧ ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ಅದಕ್ಕೆ ದಿಲೀಪ್‍ನ ಸೋದರ ಮಾವ ಸೂರಜ್ ಸೇರಿ ಪೌಲೋಸ್ ವಿರುದ್ಧ ಕೊಲೆ ಸಂಚನ್ನು ಫೋನ್ ನಲ್ಲಿ ಚರ್ಚೆ ಮಾಡಿದ್ದಾರೆ. ಈಗ ಆ ಆಡಿಯೋ ಕ್ಲಿಪ್ ಹೊರಬಂದ ಕೆಲವೇ ದಿನಗಳಲ್ಲಿ, ರಾಜ್ಯ ಪೊಲೀಸ್ ಅಪರಾಧ ವಿಭಾಗವು ದಿಲೀಪ್ ವಿರುದ್ಧ ಪ್ರಥಮ ಮಾಹಿತಿ ವರದಿ(ಎಫ್‍ಐಆರ್)ಯನ್ನು ದಾಖಲಿಸಿದೆ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

    ದಿಲೀಪ್ ಫೋನ್ ನಲ್ಲಿ ಮಾತನಾಡುತ್ತಿರುವುದು ಸೋದರ ಮಾವ ಸೂರಜ್ ಧ್ವನಿ ಎಂದು ಗುರುತಿಸಲಾಗಿದೆ. ಈ ಆಡಿಯೋದಲ್ಲಿ ಇವರಿಬ್ಬರು ಬೈಜು ಪೌಲೋಸ್ ಅವರ ಹತ್ಯೆಯ ಸಂಚಿನ ಬಗ್ಗೆ ಮಾತನಾಡುವುದನ್ನು ಕೇಳಬಹುದು. ಈ ಸಂಭಾಷಣೆ ಸೂರಜ್ ಮತ್ತು ದಿಲೀಪ್ ನಡುವೆ ನವೆಂಬರ್ 2017 ರಲ್ಲಿ ನಡೆದಿತ್ತು. ಆದರೆ ಈಗ ರಿಲೀಸ್ ಆಗಿದ್ದು, ದಿಲೀಪ್ ಸೇರಿ 6 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಹೊಸ ತನಿಖಾ ತಂಡವನ್ನು ರಚಿಸಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಶ್ರೀಜಿತ್ ತಂಡದ ಮುಖ್ಯಸ್ಥರಾಗಿರುತ್ತಾರೆ. ಕೆಪಿ ಫಿಲ್ಪ್, ಇನ್ಸ್‍ಪೆಕ್ಟರ್ ಜನರಲ್(ಐಜಿ), ಕ್ರೈಂ ಬ್ರಾಂಚ್ ಕೂಡ ತನಿಖೆಯ ಭಾಗವಾಗಲಿದೆ. ನೆಡುಂಬಸ್ಸೆರಿಯ ಸ್ಟೇಷನ್ ಹೌಸ್ ಆಫೀಸರ್ ಕೂಡ ತನಿಖಾ ತಂಡದ ಭಾಗವಾಗಿರುತ್ತೆ. ಬೈಜು ಪೌಲೋಸ್ ಅವರು ತನಿಖಾಧಿಕಾರಿಯಾಗಿ ಮುಂದುವರಿಯಲಿದ್ದಾರೆ. ಅಪರಾಧ ವಿಭಾಗದ ಅಧಿಕಾರಿಗಳಾದ ಸುದರ್ಶನ್ ಮತ್ತು ಸೋಜನ್ ಕೂಡ ತಂಡದ ಭಾಗವಾಗಲಿದ್ದಾರೆ.

    POLICE JEEP

    ಪ್ರಸ್ತುತ ದಿಲೀಪ್, ಸೂರಜ್, ದಿಲೀಪ್ ಅವರ ಸಹೋದರ ಅನೂಪ್, ಬಾಲಚಂದ್ರಕುಮಾರ್ ‘ವಿಐಪಿ’ ಎಂದು ಸಂಬೋಧಿಸಿದ ವ್ಯಕ್ತಿ ಮತ್ತು ಇತರ ಇಬ್ಬರು ಸೇರಿದಂತೆ ಆರು ಜನರ ವಿರುದ್ಧ ಹೊಸ ಎಫ್‌ಐಆರ್‌ನಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ದಿಲೀಪ್ ಅವರನ್ನು ವಿಚಾರಣೆಗೆ ಒಳಪಡಿಸಲು ಕ್ರೈಂ ಬ್ರಾಂಚ್ ನೋಟಿಸ್ ನೀಡಲಿದ್ದು, ಅವರನ್ನು ಮಂಗಳವಾರ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಗರ್ಭಿಣಿಯರು, ವಿಕಲಚೇತನರು ಮನೆಯಿಂದ್ಲೇ ಸರ್ಕಾರಿ ಕೆಲಸ ಮಾಡ್ಬೋದು: ಜಿತೇಂದ್ರ ಸಿಂಗ್

    ಫೆಬ್ರವರಿ 2017 ರಲ್ಲಿ ಎರ್ನಾಕುಲಂನಲ್ಲಿ ನಟಿ ಶೂಟಿಂಗ್ ಮುಗಿಸಿಕೊಂಡು ಹೋಗುತ್ತಿರಬೇಕಾದರೆ ಆಕೆಯನ್ನು ಅಪಹರಿಸಲಾಗಿದೆ. ನಂತರ ಚಲಿಸುತ್ತಿದ್ದ ವಾಹನದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅದು ಅಲ್ಲದೇ ಈ ದೃಶ್ಯಗಳನ್ನು ರೆಕಾರ್ಡ್ ಸಹ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಸರ್ ಸುನಿಯನ್ನು ಬಂಧಿಸಲಾಯಿತು. ಆದರೆ ಈ ಕೃತ್ಯದ ಹಿಂದೆ ನಟ ದಿಲೀಪ್ ಮಾಸ್ಟರ್ ಮೈಂಡ್ ಇದೆ ಎಂದು ಆರೋಪ ಕೇಳಿಬಂದಿತ್ತು. ಈ ಪರಿಣಾಮ ದಿಲೀಪ್ ಮೂರು ತಿಂಗಳು ಜೈಲು ವಾಸ ಅನುಭವಿಸಿದ್ದರು. ಆದರೂ ಈ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ.

  • ನನಗೆ ಸರಿಯಾದ ಊಟ, ಚಿಕಿತ್ಸೆ ನೀಡಲಿಲ್ಲ- ಯುವಕನ ಆರೋಪಕ್ಕೆ ರಾಜೀವ್ ಗಾಂಧಿ ಆಸ್ಪತ್ರೆ ಸ್ಪಷ್ಟನೆ

    ನನಗೆ ಸರಿಯಾದ ಊಟ, ಚಿಕಿತ್ಸೆ ನೀಡಲಿಲ್ಲ- ಯುವಕನ ಆರೋಪಕ್ಕೆ ರಾಜೀವ್ ಗಾಂಧಿ ಆಸ್ಪತ್ರೆ ಸ್ಪಷ್ಟನೆ

    ಬೆಂಗಳೂರು: ನನಗೆ ಸರಿಯಾದ ಚಿಕಿತ್ಸೆ, ಊಟ ನೀಡಲಿಲ್ಲ ಎಂಬ ಯುವಕನೊಬ್ಬನ ಆರೋಪಕ್ಕೆ ಸಂಬಂಧಿಸಿದಂತೆ ನಗರದ ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಯುವಕ ದಿಲೀಪ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳಾಗಿವೆ. ಆತನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಯುವಕ ಮೇ 23ರ ಮಧ್ಯಾಹ್ನ 2 ಗಂಟೆಗೆ ಖಾಸಗಿ ಆಸ್ಪತ್ರೆಯಿಂದ ನಮ್ಮ ಆಸ್ಪತ್ರೆಗೆ ತೀವ್ರ ಉಸಿರಾಟದ ಸಮಸ್ಯೆ ಮತ್ತು ಜ್ವರ ಎಂದು ಬಂದಿದ್ದಾನೆ. ಆಗ ನಾವು ಆತನ ಪರೀಕ್ಷೆ ಮಾಡಿ ಸ್ವಾಬ್ ಪಡೆದು ಕೋವಿಡ್ ವಾರ್ಡ್ ಗೆ ದಾಖಲಿಸಿಕೊಂಡಿದ್ದೆವು. ಅಲ್ಲದೆ ಅದೇ ದಿನ ಸಂಜೆ 5 ಗಂಟೆ ಸುಮಾರಿಗೆ ಆತನಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಯುವಕ ಜಾರ್ಖಂಡ್ ಮೂಲದವನಾಗಿದ್ದು, ಆತನ ಕಡೆಯವರು ಯಾರೂ ಜೊತೆಯಲ್ಲಿ ಬಂದಿಲ್ಲ. ಆತ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಇಸಿಜಿ, ಎಕ್ಸ್ ರೇ ಎಲ್ಲ ಮಾಡಿದ್ದು ಆತನ ಹೃದಯದಲ್ಲಿ ಹೋಲ್ ಇರೋದು ಕಂಡುಬಂದಿತ್ತು. ಕೊವೀಡ್ 19 ರಿಪೋರ್ಟ್ ಬರುವವವರೆಗೂ ಯುವಕನಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಿದ್ದೇವೆ ಎಂದಿದ್ದಾರೆ.

    ಮೇ 25ಕ್ಕೆ ಕೊರೊನಾ ರಿಪೊರ್ಟ್ ನೆಗೆಟಿವ್ ಎಂದು ಬಂದಿದೆ. ಕೂಡಲೇ ಆತ ಕೆಲಸ ಮಾಡುತ್ತಿದ್ದ ಕಂಪನಿಯ ಮ್ಯಾನೇಜರ್ ಅವರನ್ನು ಕರಸಿ ಆತನಿಗೆ ಇರೋ ಸಮಸ್ಯೆ ಬಗ್ಗೆ ತಿಳಿಸಿ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದೇವೆ. ಸದ್ಯ ಜಯದೇವ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ.

    ಮೇಜರ್ ಹಾರ್ಟ್ ಸರ್ಜರಿ ಮಾಡಬೇಕಾಗಿದೆ. ನಾವು ಆತನಿಗೆ ಉತ್ತಮ ರೀತಿಯಲ್ಲೇ ಚಿಕಿತ್ಸೆ ನೀಡಿದ್ದೇವೆ. ಆದರೂ ಯುವಕ ಸುಳ್ಳು ಆರೋಪ ಮಾಡಿದ್ದಾನೆ ಎಂದು ನಾಗರಾಜ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

    ಯುವಕನ ಆರೋಪವೇನು..?
    ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯ ಕೊರೋನಾ ವಾರ್ಡಿನಲ್ಲಿ ಸರಿಯಾಗಿ ಆಹಾರ ಕೂಡ ನೀಡ್ತಿಲ್ಲ. ಕೊರೊನಾದಿಂದ ಅಲ್ಲ ಹಸಿವಿನಿಂದ ಸಾಯ್ತೀನಿ ಅನಿಸುತ್ತಿದೆ. ಇದರಿಂದ ಆತ್ಮಹತ್ಯೆ ಮಾಡ್ಕೊಳ್ಳೋದು ಉತ್ತಮ ಅಂತ ಅನಿಸ್ತಿದೆ ಎಂದು ಶಂಕಿತ ಸೋಂಕಿತ ಕಣ್ಣೀರಿಟ್ಟಿದ್ದನು. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ‘ನನ್ನ ಹೆಸರು ದಿಲೀಪ್ ಕುಮಾರ್. ನಿನ್ನೆ ನಾನು ಉಸಿರಾಟದ ತೊಂದರೆಯಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಚೆಕಪ್ ಬಂದೆ. ಎಕ್ಸ್‍ರೇ, ರಕ್ತ ಪರೀಕ್ಷೆ, ಇಸಿಜಿ ಮಾಡಿಸಿ ಬಳಿಕ ಚಿಕಿತ್ಸೆ ನೀಡೋದಾಗಿ ಹೇಳಿದ್ರು. ಎಲ್ಲವನ್ನೂ ಮಾಡಿಸಿದೆ. ನಿನ್ನ ಜೊತೆ ಯಾರಾದ್ರೂ ಇದ್ದಾರಾ ಅಂತ ಕೇಳಿದ್ರು. ನಾನು ಬೆಂಗಳೂರಲ್ಲಿ ಒಬ್ಬನೇ ಇದ್ದೀನಿ, ನನಗೆ ಇಲ್ಲಿ ಏನೂ ಗೊತ್ತಿಲ್ಲ ಎಂದೆ. 2ಸಾವಿರ ಡೆಪಾಸಿಟ್ ಮಾಡಲು ಹೇಳಿದ್ರು. ಹಣ ಕಟ್ಟಿದೆ. ಕೊರೊನಾ ಟೆಸ್ಟ್ ಮಾಡಿಸಿ, ವಾರ್ಡ್‍ಗೆ ಶಿಫ್ಟ್ ಮಾಡಿದ್ರು. ಉಸಿರಾಟಕ್ಕೆ ಆಕ್ಸಿಜನ್ ಹಾಕಿದ್ರು. ಬಳಿಕ 12.30ಕ್ಕೆ ಊಟ ಕೊಟ್ಟರು. ಮತ್ತೆ ರಾತ್ರಿ ಊಟ ಸಿಗಲ್ಲ ಅಂದ್ರು. ರಾತ್ರಿ ಊಟ ಕೊಡ್ತಿದ್ದಾರೆ ಅಂತ ಎಲ್ಲರೂ ಹೋದ್ರು. ನಾನೂ ಹೋದೆ. ಪಾತ್ರೆ ಕೊಡಿ ಅಂದ್ರು. ನನ್ನ ಬಳಿ ಇಲ್ಲ ಎಂದೆ. ತಟ್ಟೆ ಇಲ್ಲ ಅಂದ್ರೆ ಊಟ ಕೊಡಲ್ಲ ಅಂದ್ರು. ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ಉತ್ತಮ ಅನಿಸ್ತು. ದಯಮಾಡಿ ಉಸಿರಾಟದ ತೊಂದರೆ ಸರಿಯಾದ ಮೇಲೆ ನನ್ನನ್ನು ಊರಿಗೆ ಕಳುಹಿಸಿ’ ಎಂದು ಕಣ್ಣೀರು ಹಾಕಿದ್ದನು.

  • ನಟಿಯ ನಗ್ನ ಫೋಟೋ, ವಿಡಿಯೋ ಬಯಸಿದ್ದ ನಟ ದಿಲೀಪ್

    ನಟಿಯ ನಗ್ನ ಫೋಟೋ, ವಿಡಿಯೋ ಬಯಸಿದ್ದ ನಟ ದಿಲೀಪ್

    ತಿರುವನಂತಪುರ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂನ ಖ್ಯಾತ ನಟ ದಿಲೀಪ್ ಜೈಲು ಪಾಲಾಗಿದ್ದಾರೆ. ದಿಲೀಪ್ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲಿನ ದೌರ್ಜನ್ಯದ ದೃಶ್ಯ ಹಾಗೂ ನಗ್ನ ಫೋಟೋವನ್ನ ಬಯಸಿದ್ದರು ಎಂದು ವರದಿಯಾಗಿದೆ.

    ನಾಲ್ಕು ವರ್ಷಗಳ ಹಿಂದೆಯೇ ಅಂದರೆ 2013ರಲ್ಲಿ ದಿಲೀಪ್ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕಾಗಿ 1.5 ಕೋಟಿ ರೂಪಾಯಿ ಮೊತ್ತದ ಸುಪಾರಿಗೆ ಒಪ್ಪಂದವಾಗಿತ್ತು. ಅದಕ್ಕಿಂತಲೂ ಭಯಾನಕ ಎಂದರೆ ನಟ ದಿಲೀಪ್ ತನ್ನ ಟಾರ್ಗೆಟ್ ಆಗಿದ್ದ ಆ ನಟಿಯ ಬೆತ್ತಲೆ ಫೋಟೋ ಮತ್ತು ದೌರ್ಜನ್ಯದ ವೀಡಿಯೋ ಬೇಕು ಎಂದು ಪ್ರಮುಖ ಆರೋಪಿ ಪಲ್ಸರ್ ಸುನಿಲ್‍ನಿಗೆ ಹೇಳಿದ್ರು ಎಂದು ಪೊಲೀಸರು ತಿಳಿಸಿದ್ದಾರೆ.

    ತಮ್ಮ ಮೊದಲ ಪತ್ನಿ ಮಂಜು ವಾರಿಯರ್ ಜೊತೆಗಿನ ಸಂಬಂಧ ಮುರಿದು ಬೀಳೋದಕ್ಕೆ ನಟಿಯೇ ಕಾರಣ ಅನ್ನೋ ಸಿಟ್ಟು ನಟ ದಿಲೀಪ್‍ಗೆ ಇತ್ತು. ಅದಕ್ಕಾಗಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆದ್ರೆ ಇದನ್ನೆಲ್ಲಾ ತಳ್ಳಿ ಹಾಕಿರುವ ದಿಲೀಪ್ ಪರ ವಕೀಲರಾದ ಕೆ. ರಾಮ್‍ಕುಮಾರ್, ದಿಲೀಪ್ ಸುಮಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಇದಂತೂ ನಿಜಕ್ಕೂ ಅದ್ಭುತ ಕಲ್ಪನೆಯುಳ್ಳ ಸ್ಕ್ರಿಪ್ಟ್ ನಂತಿದೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ದಿಲೀಪ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಾಯಿದೆ ಎಂದಿದ್ದಾರೆ.

    ಇದನ್ನೂ ಓದಿ: ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ಮಲೆಯಾಳಂ ನಟ ದಿಲೀಪ್ ಬಂಧನವಾಗಿದ್ದು ಯಾಕೆ?

    ದಿಲೀಪ್ ಮತ್ತು ಪಲ್ಸರ್ ಸುನಿ ತುಂಬಾ ಆತ್ಮೀಯತೆ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದ್ರೆ ದಿಲೀಪ್ ಮಾತ್ರ ಪಲ್ಸರ್ ಸುನಿ ಯಾರೆಂಬುದೇ ಗೊತ್ತಿಲ್ಲ ಎಂದಿದ್ದಾರೆ. ಕಳೆದ ವರ್ಷ ನವೆಂಬರ್‍ನಲ್ಲಿ ನಡೆದ ದಿಲೀಪ್ ಅವರ ತ್ರಿಸ್ಸೂರ್ ಚಿತ್ರದ ಚಿತ್ರೀಕರಣದ ಸೆಟ್‍ನಲ್ಲಿ ಪಲ್ಸರ್ ಸುನಿ ಇದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಚಿತ್ರೀಕರಣದ ವೇಳೆ ಪಲ್ಸರ್ ಸುನಿ ಇದ್ದ ಫೋಟೋವನ್ನ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಆದ್ರೆ ನಟ ದಿಲೀಪ್ ಪರ ವಕೀಲರು ಈ ವಾದಕ್ಕೆ ಸವಾಲೆಸೆದಿದ್ದು, ದಿಲೀಪ್ ಅವರು ಒಬ್ಬ ಸೂಪರ್ ಸ್ಟಾರ್. ಚಿತ್ರೀಕರಣದ ವೇಳೆ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಬರ್ತಿರ್ತಾರೆ. ಅವರಿಗೆ ಎಲ್ಲರೂ ಗೊತ್ತಿರಲ್ಲ ಎಂದು ವಾದಿಸಿದ್ದಾರೆ.

    ದಿಲೀಪ್ ಅವರ ಜಾಮೀನು ಅರ್ಜಿಯನ್ನು ಎರಡು ದಿನಗಳ ಬಳಿಕ ವಿಚಾರಣೆ ಮಾಡುವುದಾಗಿ ಕೋರ್ಟ್ ಹೇಳಿದೆ. ಪೊಲೀಸರು 3 ದಿನಗಳವರೆಗೆ ದಿಲೀಪ್ ಅವರನ್ನ ವಶಕ್ಕೆ ನೀಡಬೇಕೆಂದು ಕೇಳಿದ್ದರು. ಆದ್ರೆ ಕೋರ್ಟ್ ವಿಚಾರಣೆಗಾಗಿ 2 ದಿನಗಳ ನ್ಯಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ಇತರರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.