Tag: Diganth

  • ಬಟ್ಟೆ, ಕಿಸ್ ಸೀನ್ ಬಗ್ಗೆ ಐಂದ್ರಿತಾ ಪ್ರಸ್ತಾಪ- ಕಾಯಕವೇ ಕೈಲಾಸ ಎಂದ ದಿಗಂತ್

    ಬಟ್ಟೆ, ಕಿಸ್ ಸೀನ್ ಬಗ್ಗೆ ಐಂದ್ರಿತಾ ಪ್ರಸ್ತಾಪ- ಕಾಯಕವೇ ಕೈಲಾಸ ಎಂದ ದಿಗಂತ್

    ಬೆಂಗಳೂರು: ಮದುವೆ ನಂತರ ಈ ರೀತಿಯ ಬಟ್ಟೆ ಹಾಕಬೇಡ, ಕಿಸ್ ಸೀನ್ ಮಾಡಬೇಡ ಅಂತಾ ದಿಗಂತ್ ಮನೆಯಲ್ಲಿ ಹೇಳಿಲ್ಲ ಎಂದು ಐಂದ್ರಿತಾ ರೇ ಹೇಳಿದ್ದಾರೆ.

    ಮದುವೆಯಾದ ಬಳಿಕ ಇದೇ ಮೊದಲಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮನಸಾರೆ ಸಿನಿಮಾದ ಜೋಡಿ ಹಕ್ಕಿಗಳು, ನಮ್ಮ ಮನೆಯಲ್ಲಿ ನಟನೆ, ಬಟ್ಟೆ ವಿಚಾರದಲ್ಲಿ ಯಾವತ್ತೂ ಹೀಗೆ ಇರಬೇಕು ಅಂತಾ ಒತ್ತಡ ಹೇರಿಲ್ಲ. ದಿಗಂತ್ ಮನೆಯವರು ಇದಕ್ಕೆ ಹೊರತಾಗಿಲ್ಲ. ಕ್ಯಾರೆಕ್ಟರ್ ಹಾಗೂ ಕಥೆಗೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು ಎಂದು ಐಂದ್ರಿತಾ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ದಿಗಂತ್, ಕಾಯಕವೇ ಕೈಲಾಸ ಎಂದು ನಗೆ ಬೀರಿದರು.

    ನಂದಿಬೆಟ್ಟ ಅಂದ್ರೆ ಇಬ್ಬರಿಗೂ ತುಂಬಾ ಇಷ್ಟ. ಹೀಗಾಗಿ ಮದುವೆಗೆ ನಂದಿ ಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದೇವು. ಮದುವೆ ದಿನ ತುಂಬಾ ಶಾಸ್ತ್ರ ಹಾಗೂ ಸಂಪ್ರದಾಯಗಳನ್ನು ಫಾಲೋ ಮಾಡಿದ್ವಿ. ಫ್ಯಾಶನ್ ಶೋನಲ್ಲಿ ನಮಗೆ ಅನುಭವ ಇರುವುದರಿಂದ ನಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿದ್ವಿ ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ಹೇಳಿಕೊಂಡರು.

    2009ರ ಮನಸಾರೆ ಶೂಟಿಂಗ್ ವೇಳೆ ನಮ್ಮ ಪ್ರೀತಿ ಆರಂಭವಾಯಿತು. 2010ರ ಜನವರಿಯಲ್ಲಿ ರಿಂಗ್ ಕೊಟ್ಟು ದಿಗಂತ್ ಪ್ರಪೋಸ್ ಮಾಡಿದ್ದರು. ಇಬ್ಬರೂ ಸೇರಿ ನಾವು ಹೀಗೆ ಮದುವೆ ಆಗಬೇಕಿತ್ತು ಅಂತ ಕನಸು ಕಂಡಿದ್ದೇವು. ಅದರಂತೆ ಈಗ ನಮ್ಮ ಕನಸು ನನಸಾಗಿದೆ ಎಂದು ಐಂದ್ರಿತಾ ಹೇಳಿದರು.

    ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‍ನಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ಸ್ ಐಂದ್ರಿತಾ – ದಿಗಂತ್ ಡಿಸೆಂಬರ್ 12ರಂದು ಸಪ್ತಪದಿ ತುಳಿದರು. ಮದುವೆಗೆ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ರಿಡ್ಜ್ ಕಾರ್ಟನ್‍ನಲ್ಲಿ ಶನಿವಾರ ಸ್ಯಾಂಡಲ್‍ವುಡ್‍ನ ನಟ, ನಟಿಯರು, ಸ್ನೇಹಿತರು ಹಾಗೂ ಆಪ್ತರಿಗಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ಇದನ್ನು ಓದಿ: ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ದಿಗಂತ್ ಹಾಗೂ ಐಂದ್ರಿತಾ ರೇ ಮದುವೆ ಬೆಂಗಾಳಿ ಸಂಪ್ರದಾಯದಲ್ಲಿ ನಡೆಯಿತು. ಇವರಿಬ್ಬರ ಮದುವೆ ಸಮಾರಂಭಕ್ಕೆ ನಟಿ ರಾಗಿಣಿ ದ್ವಿವೇದಿ, ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನಿತರ ಕಲಾವಿದರು, ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದರು. ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತಿಚೇಗೆ ಸುದ್ದಿಗೋಷ್ಠಿ ನಡೆಸಿದ್ದ ಐಂದ್ರಿತಾ , “ನನ್ನ ಬೆಸ್ಟ್ ಫ್ರೆಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟ ದಿಗಂತ್- ಐಂದ್ರಿತಾ ರೇ

    ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟ ದಿಗಂತ್- ಐಂದ್ರಿತಾ ರೇ

    ಚಿಕ್ಕಬಳ್ಳಾಪುರ: ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ದೂದ್‍ಪೇಡ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಅವರ ಮದುವೆ ಫೋಟೋ ರಿವೀಲ್ ಆಗಿದೆ.

    ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‍ನಲ್ಲಿ ಬುಧವಾರ ಸಂಜೆ 6.30ಕ್ಕೆ ದಿಗಂತ್ ಹಾಗೂ ಐಂದ್ರಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಾಳಿ ಸಂಪ್ರದಾಯದಲ್ಲಿ ದಿಗಂತ್ ಹಾಗೂ ಐಂದ್ರಿತಾ ಮಿಂಚಿದ್ದಾರೆ.

    ದಿಗಂತ್ ಹಾಗೂ ಐಂದ್ರಿತಾ ರೇ ಮದುವೆ ಬೆಂಗಾಳಿ ಸಂಪ್ರದಾಯದಲ್ಲಿ ನಡೆದಿದೆ. ಇವರಿಬ್ಬರ ಮದುವೆ ಸಮಾರಂಭಕ್ಕೆ ನಟಿ ರಾಗಿಣಿ ದ್ವಿವೇದಿ, ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನಿತರ ಕಲಾವಿದರು, ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದರು.

    ದಿಗಂತ್ ಹಾಗೂ ಐಂದ್ರಿತಾ ರೇ ಮನಸಾರೆ ಇಷ್ಟಪಟ್ಟು ಬರೋಬ್ಬರಿ 8 ವರ್ಷವಾಗಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಂದಿಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್‍ನಲ್ಲಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿತ್ತು. ಐಂದ್ರಿತಾ ಅವರ ಮನೆಯಂಗಳದಲ್ಲೇ ಬೆಳೆದಿರುವ ಅರಿಶಿನದಿಂದ ಮದ್ವೆ ಶಾಸ್ತ್ರ ಮಾಡಿಸಿಕೊಂಡು ಸಂಭ್ರಮಿಸಿದ್ದಾರೆ.

    ಡಿ. 15ರಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್ ಹಲವು ನಟ- ನಟಿಯರು ಭಾಗಿಯಾಗಿ ನವಜೋಡಿಯನ್ನು ಶುಭ ಕೋರಲಿದ್ದಾರೆ. ಶೇರ್ ಚಾಟ್ ಸಂಸ್ಥೆ ಐಂದ್ರಿತಾ, ದಿಗಂತ್ ಜೋಡಿಯ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂದಿ ಬೆಟ್ಟದ ತಪ್ಪಲಲ್ಲಿ ಇಂದು ಮನಸಾರೆ ಜೋಡಿ ಸರಳ ವಿವಾಹ

    ನಂದಿ ಬೆಟ್ಟದ ತಪ್ಪಲಲ್ಲಿ ಇಂದು ಮನಸಾರೆ ಜೋಡಿ ಸರಳ ವಿವಾಹ

    ಚಿಕ್ಕಬಳ್ಳಾಪುರ/ಬೆಂಗಳೂರು: ಸ್ಯಾಂಡಲ್‍ವುಡ್‍ನ ಮತ್ತೊಂದು ತಾರಾ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದೆ. ನಂದಿಬೆಟ್ಟದ ತಪ್ಪಲಿನಲ್ಲಿ ಸರಳವಾಗಿ ಮದುವೆ ಮಹೋತ್ಸವ ನಡೆಯಲಿದೆ.

    ಸ್ಯಾಂಡಲ್‍ವುಡ್‍ನ ಹಾಟ್ ಪೇರ್ ಗಳ ಸಾಲಿನಲ್ಲಿ ಮೊದಲಿಗೆ ಕೇಳಿ ಬರುವ ಹೆಸರು ದೂದ್‍ಪೇಡಾ ನಟ ದಿಗಂತ್ ಹಾಗೂ ಬೆಂಗಾಲಿ ಚೆಲುವೆ ಐಂದ್ರಿತಾ ರೈ. `ಮನಸಾರೆ’ ಅವರು ಇಷ್ಟಪಟ್ಟು ಲವ್ ಮಾಡಲು ಬರೋಬ್ಬರಿ 8 ವರ್ಷವಾಗಿದೆ. ಐಂದ್ರಿತಾ-ದಿಗಂತ್ ನಡುವಿನ ಪ್ರೀತಿ-ಬೆಸುಗೆ ಪಾರಿಜಾತದ ಮೂಲಕ ಮತ್ತಷ್ಟು ಗಟ್ಟಿಯಾಗಿದೆ.

    ಧೃವ ಎಂಗೇಜ್ ಆದ ಬೆನ್ನಲ್ಲೇ ಐಂದ್ರಿತಾ, ದಿಗಂತ್ ಜೋಡಿ ಸಪ್ತಪದಿ ತುಳಿಯೋಕೆ ಸಕಲ ಸಿದ್ಧತೆ ನಡೆದಿದೆ. ನಂದಿಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್‍ನಲ್ಲಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿದೆ. ಐಂದ್ರಿತಾ ಅವರ ಮನೆಯಂಗಳದಲ್ಲೇ ಬೆಳೆದಿರುವ ಅರಿಶಿನದಿಂದ ಮದ್ವೆ ಶಾಸ್ತ್ರ ಮಾಡಿಸಿಕೊಂಡು ಸಂಭ್ರಮಿಸಿದ್ದಾರೆ.

    ಎರಡೂ ಕುಟುಂಬಗಳ ಸದಸ್ಯರು ಮತ್ತು ಸ್ಟಾರ್ ಪೇರ್ ನ ಆಪ್ತರಷ್ಟೇ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿ ದಾಂಪತ್ಯ ಗೀತೆ ಹಾಡುವುದಕ್ಕೆ ರೆಡಿಯಾಗಿರುವ ದಿಗಂತ್ ಐಂದ್ರಿತಾಗೆ ಶುಭಹಾರೈಸಿದರು. ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಮಧುಮಗಳು ಐಂದ್ರಿತಾ ಮಿಂಚಿದರೆ, ನೀಲಿ ಶಾಲು, ಬಿಳಿಪಂಚೆಯಲ್ಲಿ ದಿಗಂತ್ ಕಂಗೊಳಿಸಿದರು.

    ಇಂದು ಸಂಜೆ ನಂದಿಬೆಟ್ಟದ ತಪ್ಪಲಿನಲ್ಲಿ ಐಂದ್ರಿತಾ, ದಿಗಂತ್ ಜೋಡಿ ಸಪ್ತಪದಿ ತುಳಿಯಲಿದೆ. ಕುಟುಂಬದವರು ಮತ್ತು ಚಿತ್ರರಂಗದ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಕೊಟ್ಟಿದ್ದಾರೆ. ಶೇರ್‍ಚಾಟ್ ಸಂಸ್ಥೆ ಐಂದ್ರಿತಾ, ದಿಗಂತ್ ಜೋಡಿಯ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರಿಶಿಣ ಶಾಸ್ತ್ರದಲ್ಲಿ ಸ್ಯಾಂಡಲ್‍ವುಡ್ ಜೋಡಿ – ವಿಡಿಯೋ ನೋಡಿ

    ಅರಿಶಿಣ ಶಾಸ್ತ್ರದಲ್ಲಿ ಸ್ಯಾಂಡಲ್‍ವುಡ್ ಜೋಡಿ – ವಿಡಿಯೋ ನೋಡಿ

    ಚಿಕ್ಕಬಳ್ಳಾಪುರ: ಸ್ಯಾಂಡಲ್‍ವುಡ್‍ನ ತಾರಾಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಮದುವೆ ಬುಧವಾರ ನಡೆಯಲಿದ್ದು, ಇಂದು ನವಜೋಡಿಗೆ ಅರಿಶಿಣ ಶಾಸ್ತ್ರ ನಡೆದಿದೆ.

    ದಿಗಂತ್ ಹಾಗೂ ಐಂದ್ರಿತಾ ರೇ ಅವರ ಮದುವೆ, ಕಂಕಣಬಲ, ಸಪ್ತಪದಿ ಕಾರ್ಯ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಿನ ಡಿಸ್ಕವರಿ ವಿಲೇಜ್‍ನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಇಂದು ನವ ವಧು-ವರರಿಗೆ ಅರಿಶಿಣ ಶಾಸ್ತ್ರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅದರಂತೆಯೇ ಇಬ್ಬರಿಗೆ ಕುಟುಂಬದವರು ಅರಿಶಿಣ ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ.

    ಅರಿಶಿಣ ಶಾಸ್ತ್ರದಲ್ಲಿ ವಧು ಐಂದ್ರಿತಾ ರೇ ಅವರು ಬಿಳಿ ಮತ್ತು ಗುಲಾಬಿ ಬಣ್ಣದ ಡಿಸೈನ್ ನಿಂದ ಕೂಡಿರುವ ಹಳದಿ ಬಣ್ಣದ ಸೀರೆ ಮತ್ತು ಕೆಂಪು ಬಣ್ಣದ ಬ್ಲೌಸ್ ಧರಿಸಿದ್ದರು. ಇನ್ನು ವರ ದಿಗಂತ್ ಬಿಳಿ ಬಣ್ಣದ ಪಂಚೆ ಮತ್ತು ನೀಲಿ ಬಣ್ಣದ ಒಂದು ಶಾಲು ಹಾಕಿದ್ದರು. ನಟಿ ಐಂದ್ರಿತಾ ಅವರು ಮೈಯೆಲ್ಲಾ ಅರಿಶಿಣ ಹಾಕಿಸಿಕೊಂಡು ಒಂದು ಸೋಫಾ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    ಈ ವೇಳೆ ದಿಗಂತ್-ಐಂದ್ರಿತಾ ಇಬ್ಬರು ಮಾತನಾಡಿ, ನಾನಿಬ್ಬರು ಇನ್ನು ಕೆಲವೇ ಕ್ಷಣಗಳಲ್ಲಿ ಮದುವೆಯಾಗುತ್ತಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಸಂಗೀತ ಕಾರ್ಯಕ್ರಮವೂ ಇಂದೇ ನಡೆಯಲಿದ್ದು, ತಮ್ಮ ಸಿನಿಮಾದ ಹಾಡುಗಳಿಗೆ ದಿಗಂತ್ – ಐಂದ್ರಿತಾ ಹೆಜ್ಜೆ ಹಾಕಲಿದ್ದಾರೆ. ಐಂದ್ರಿತಾ-ದಿಗಂತ್ ಕುಟುಂಬಸ್ಥರು ಇಂದಿನಿಂದ 13ರವರೆಗೂ ಇಡೀ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡಿಕೊಂಡಿದ್ದಾರೆ. ತಾರಾ ಜೋಡಿಯ ವಿವಾಹಕ್ಕೆ ಕೇವಲ ಕುಟುಂಬಸ್ಥರು-ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಅಂತ ಮಾಹಿತಿ ಲಭಿಸಿದೆ.

    Photo Courtesy: Sharechat

    https://www.youtube.com/watch?v=Qy__FzJqA7I

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ವೆ ಕಾರ್ಡ್ ಜೊತೆ ಕೊಟ್ಟ ಡಬ್ಬದಲ್ಲಿತ್ತು ಸ್ಪೆಷಲ್ ಐಟಂ-ನೋಡಿದವ್ರು ಫುಲ್ ಖುಷ್

    ಮದ್ವೆ ಕಾರ್ಡ್ ಜೊತೆ ಕೊಟ್ಟ ಡಬ್ಬದಲ್ಲಿತ್ತು ಸ್ಪೆಷಲ್ ಐಟಂ-ನೋಡಿದವ್ರು ಫುಲ್ ಖುಷ್

    ಬೆಂಗಳೂರು: ಚಂದನವನದಲ್ಲಿ ಮದುವೆ ಸಂಭ್ರಮದ ತಂಗಾಳಿ ಬೀಸುತ್ತಿದೆ. ಇದೇ ತಿಂಗಳು 12ರಂದು ದಿಗಂತ್ ಮತ್ತು ಐಂದ್ರಿತಾ ರೇ ಹಸೆಮಣೆ ಏರಲಿದ್ದಾರೆ. ಮಂಗಳವಾರ ದಿಗಂತ್ ಮತ್ತು ಐಂದ್ರಿತಾರ ಮದುವೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಧ ವಿಧದ ಮದುವೆ ಪತ್ರಿಕೆಯ ಜೊತೆ ಕೆಲ ಡಬ್ಬಗಳು ಸಹ ಫೋಟೋದಲ್ಲಿದ್ದವು. ಅರೇ ಇದೇನಪ್ಪಾ ಪತ್ರದ ಜೊತೆ ಡಬ್ಬ ಅಂತಾ ನೆಟ್ಟಿಗರು ಗೊಂದಲಕ್ಕೆ ಒಳಗಾಗಿದ್ದರು.

    ಎರಡ್ಮೂರು ಮದುವೆ ಕರೆಯೋಲೆ ಮುದ್ರಿಸಿದ ಜೋಡಿ ಸ್ಥಳದ ಬಗ್ಗೆಯೂ ನಿಖರ ಮಾಹಿತಿ ನೀಡಿರಲಿಲ್ಲ. ಈಗ ಈ ಎರಡು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಮದುವೆ ಗುರು ಹಿರಿಯರು ನಿಶ್ಚಯಿಸಿದ ದಿನಾಂಕದಂದು ನಂದಿಗಿರಿಧಾಮದ ನಿಸರ್ಗ ಮಡಿಲಿನಲ್ಲಿ ನಡೆಯಲಿದೆ. ಪತ್ರದ ಜೊತೆ ಅತಿಥಿಗಳಿಗೆ ಕೆಲವು ಡಬ್ಬಗಳನ್ನು ನೀಡಿದ್ದು, ಒಂದರಲ್ಲಿ ತೀರ್ಥಹಳ್ಳಿ ಮಿಡಿ ಉಪ್ಪಿನಕಾಯಿ ಮತ್ತೊಂದರಲ್ಲಿ ಬಂಗಾಳದ ಸ್ಪೆಷಲ್ ರಸಗುಲ್ಲಾ ನೀಡಿದ್ದಾರೆ. ಇವುಗಳ ಜೊತೆಗೆ ದಾಸವಾಳದ ಬೀಜಗಳನ್ನು ನೀಡಿದ್ದಾರೆ.

    ಕರೆಯೋಲೆ ಪಡೆದ ನಟಿ ಮಾಳವಿಕಾ ಅವಿನಾಶ್ ಟ್ವೀಟ್ ಮಾಡಿದ್ದು, ಇದೂವರೆಗೂ ನೋಡದ ಅಮಂತ್ರಣ ಪತ್ರಿಕೆಯನ್ನು ನೋಡಿದ್ದೇನೆ. ಮರದ ಕೆಲಸವುಳ್ಳ ಸುಂದರ ಟ್ರೇನಲ್ಲಿ ಈ ಎಲ್ಲ ವಸ್ತುಗಳ ಜೊತೆ ಪತ್ರಿಕೆ ನೀಡಿರುವುದು ತುಂಬಾ ಸಂತೋಷ ತಂದಿದೆ ಎಂದು ಬರೆದುಕೊಂಡಿದ್ದಾರೆ.

    ಈಗಾಗಲೆ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಿನ ಡಿಸ್ಕವರಿ ವಿಲೇಜ್ ರೆಸಾರ್ಟ್ ಅನ್ನು ಡಿಸೆಂಬರ್ 10ರಿಂದ 13ರವರೆಗೂ ಸಂಪೂರ್ಣವಾಗಿ ಬುಕ್ ಮಾಡಿಕೊಂಡಿದ್ದಾರೆ. ತಾರಾ ಜೋಡಿಯ ವಿವಾಹಕ್ಕೆ ಕೇವಲ ಕುಟುಂಬಸ್ಥರು-ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಮದುವೆ ಬಳಿಕ ಅಂದ್ರೆ ಡಿಸೆಂಬರ್ 14ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುಭಾಷ್ ಭವನದಲ್ಲಿ ಚಿತ್ರರಂಗದ ಗಣ್ಯರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಾರೆ. ಈ ವಿಶೇಷ ಔತಣಕೂಟಕ್ಕೆ ಆಗಮಿಸುವ ಅತಿಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವದರ ಜೊತೆಗೆ ಯಾವುದೇ ಗಿಫ್ಟ್ ತರಕೂಡದು ಎಂಬ ಷರತ್ತು ವಿಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಸರ್ಗದ ಮಡಿಲಲ್ಲಿ ದಿಗಂತ್-ಐಂದ್ರಿತಾ ಕಲ್ಯಾಣ

    ನಿಸರ್ಗದ ಮಡಿಲಲ್ಲಿ ದಿಗಂತ್-ಐಂದ್ರಿತಾ ಕಲ್ಯಾಣ

    ಚಿಕ್ಕಬಳ್ಳಾಪುರ: ಚಂದನವನದ ತಾರಾಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಜೋಡಿ ಮದುವೆ ಆಗಲಿದೆ.

    ದೂದ್ ಪೇಡಾ ದಿಗಂತ್ ಮತ್ತು ಬೆಂಗಾಲಿ ಬೆಡಗಿ ಐಂದ್ರಿತಾ ರೇ ಡಿಸೆಂಬರ್ 12 ಮತ್ತು 13ರಂದು ಎರಡು ಸಂಪ್ರದಾಯದಂತೆ ಹಸೆಮಣೆ ಏರಲಿದ್ದಾರೆ. ಕಂಕಣಬಲ-ಸಪ್ತಪದಿ ಕಾರ್ಯ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಿನ ಡಿಸ್ಕವರಿ ವಿಲೇಜ್‍ನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ.

    ಐಂದ್ರಿತಾ-ದಿಗಂತ್ ಕುಟುಂಬಸ್ಥರು ಡಿಸೆಂಬರ್ 10ರಿಂದ 13ರವರೆಗೂ ಇಡೀ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡಿಕೊಂಡಿದ್ದಾರೆ. ತಾರಾ ಜೋಡಿಯ ವಿವಾಹಕ್ಕೆ ಕೇವಲ ಕುಟುಂಬಸ್ಥರು-ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಅಂತ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಗೆ ಬರೋ ಅತಿಥಿಗಳಿಗೆ ಷರತ್ತು ವಿಧಿಸಿದ ದಿಗಂತ್-ಐಂದ್ರಿತಾ!

    ಮದ್ವೆಗೆ ಬರೋ ಅತಿಥಿಗಳಿಗೆ ಷರತ್ತು ವಿಧಿಸಿದ ದಿಗಂತ್-ಐಂದ್ರಿತಾ!

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಜೋಡಿ ದಿಗಂತ್ ಹಾಗು ಐಂದ್ರಿತಾ ಹಸೆ ಮಣೆ ಏರೋಕೆ ರೆಡಿಯಾಗಿದ್ದಾರೆ. ಡಿಸೆಂಬರ್ 12 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುಭಾಷ್ ಭವನದಲ್ಲಿ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಜೋಡಿ ಸಿದ್ಧವಾಗಿದೆ. ಮದುವೆಗೆ ಬಂಧು ಹಾಗು ಮಿತ್ರರನ್ನು ಆಹ್ವಾನಿಸಲು ಎರಡು ರೀತಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ.

    ಮದುವೆಗೆ ಆಗಮಿಸುವ ಅತಿಥಿಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕೆಂದು ಕ್ಯೂಟ್ ಜೋಡಿ ಮನವಿ ಮಾಡಿಕೊಂಡಿದೆ. ಮದುವೆ ಮುನ್ನ ಅಂದ್ರೆ ಇದೇ ತಿಂಗಳು 16ರಂದು ತಮ್ಮ ಆತ್ಮೀಯ ಗೆಳೆಯರಿಗಾಗಿ ವಿಶೇಷ ಪಾರ್ಟಿಯನ್ನು ದಿಗಂತ್-ಐಂದ್ರಿತಾ ಆಯೋಜನೆ ಮಾಡಿದ್ದಾರೆ.

    ದಿಗಂತ್ ಬಾವಿ ಪತ್ನಿ ಐಂದ್ರಿತಾರಿಗೆ ಗೋವಾದ ಶೂಟಿಂಗ್ ಸ್ಪಾಟ್ ನಲ್ಲಿಯೇ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ದಿಗಂತ್ ಶ್ರೀಲಂಕಾದಲ್ಲಿ ಬ್ಯಾಚೂಲರ್ ಪಾರ್ಟಿ ಮುಗಿಸಿದ್ದು, ಐಂದ್ರಿತಾ ‘ಗರುಡ’ ಚಿತ್ರದ ಚಿತ್ರೀಕರಣದಿಂದ ರಜೆ ತೆಗೆದುಕೊಂಡು ಬಂಧುಗಳಿಗೆ ಮದುವೆ ಕಾರ್ಡ್ ವಿತರಣೆಯಲ್ಲಿ ಬ್ಯುಸಿಯಾಗಿದ್ದರಂತೆ. ಕರ್ನಾಟಕ ಮತ್ತು ಬಂಗಾಳಿ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇದನ್ನೂ ಓದಿ: ಡಿಪ್‍ವೀರ್ ಮದ್ವೆಗೆ ಬರೋವರಿಗೆ ಷರತ್ತುಗಳು ಅನ್ವಯ!

    ಇಬ್ಬರ ನಡುವೆ ಲವ್ ಆಗಿದು ಹೇಗೆ?
    2009ರಲ್ಲಿ `ಮನಾಸಾರೆ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು, ಅಲ್ಲಿ ನಮ್ಮಿಬ್ಬರ ಪರಿಚಯವಾಯಿತು. ಬಳಿಕ ಜನವರಿ 2010ರಲ್ಲಿ ನಾವಿಬ್ಬರು ಪ್ರೀತಿ ಮಾಡಲು ಶುರು ಮಾಡಿದೆವು. ಅಂದಿನಿಂದ ಇಂದಿನವರೆಗೂ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಇಬ್ಬರು ಒಂದೇ ಆಸಕ್ತಿ-ಆಲೋಚನೆಗಳನ್ನು ಹೊಂದಿದ್ದೇವೆ. ನಮ್ಮಿಬ್ಬರ ಪ್ರೀತಿಯ ಪ್ರಯಾಣ ತುಂಬಾ ಚೆನ್ನಾಗಿತ್ತು ಎಂದು ಪ್ರೀತಿ ಮೂಡಿದ ಬಗ್ಗೆ ಐಂದ್ರಿತಾ ಹೇಳಿಕೊಂಡಿದ್ದರು.

    ಅದ್ಧೂರಿಯಾಗಿ ಮದುವೆ ಆಗಲ್ಲ:
    ದಿಗಂತ್ ಅದ್ಧೂರಿ ಮದುವೆಯನ್ನು ಇಷ್ಟ ಪಡುವುದಿಲ್ಲ. ಆದರೆ ಮದುವೆಗೆ ಖರ್ಚು ಮಾಡುವ ಹಣವನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡಲು ಇಷ್ಟಪಡುತ್ತಾರೆ. ನಾನು ಯಾವಾಗಲೂ ಸುಂದರ ಮದುವೆಯ ಬಗ್ಗೆ ಕನಸು ಕಂಡಿದ್ದೇನೆ. ಅದೇ ರೀತಿ ದಿಗಂತ್ ಕುಟುಂಬವು ಕೂಡ ಬಂಗಾಲಿ ಶೈಲಿಯಲ್ಲಿ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಮದುವೆ ದಿನ ದಿಗಂತ್ ನನ್ನು ಬಿಳಿ ಟೋಪಿಯಲ್ಲಿ ನೋಡಲು ನಾನು ಕಾಯುತ್ತಿದ್ದೇನೆ. ಡಿಸೆಂಬರ್ 11 ರಂದು ಅರಿಶಿಣ ಶಾಸ್ತ್ರದ ಸಮಾರಂಭವನ್ನು ಏರ್ಪಡಿಸಿದ್ದೇವೆ. ಡಿಸೆಂಬರ್ 12 ರಂದು ಮದುವೆ ನಡೆಯಲಿದೆ ಮತ್ತು ಸಿನಿಮಾರಂಗದ ಸ್ನೇಹಿತರಿಗೆ ಪಾರ್ಟಿ ಆಯೋಜನೆ ಮಾಡಿದ್ದೇವೆ ಎಂದು ಐಂದ್ರಿತಾ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಯಾದ ಬಗ್ಗೆ ಐಂದ್ರಿತಾ ಮನದ ಮಾತು – ಎಷ್ಟು ದಿನ, ಯಾವ ರೀತಿ ಮದ್ವೆ?

    ಪ್ರೀತಿಯಾದ ಬಗ್ಗೆ ಐಂದ್ರಿತಾ ಮನದ ಮಾತು – ಎಷ್ಟು ದಿನ, ಯಾವ ರೀತಿ ಮದ್ವೆ?

    -ದೂದ್ ಪೇಡಾ ಮೇಲೆ ಬೆಂಗಾಲಿ ಚೆಲುವೆಗೆ ಲವ್ ಆಗಿದ್ದು ಹೇಗೆ?

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದ್ರೆ ಇದೀಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಧಿಕೃತವಾಗಿ ತಮ್ಮ ಮದುವೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ.

    ಐಂದ್ರಿತಾ ರೇ ಮತ್ತು ದಿಗಂತ್ ಮುಂದಿನ ತಿಂಗಳು ಡಿಸೆಂಬರ್ 12 ರಂದು ರಿಂಗ್ ಬದಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ವತಃ ಐಂದ್ರಿಯಾ ಅವರೇ, “ನನ್ನ ಬೆಸ್ಟ್ ಫ್ರೇಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

    ಮದ್ವೆ ನಿಶ್ಚಯ:
    ಈಗ ಗೋವಾದಲ್ಲಿ ‘ಗರುಡ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅನೇಕ ವರ್ಷಗಳಿಂದ ನಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂದು ಗಾಸಿಪ್ ಹರಿದಾಡುತ್ತಿತ್ತು. ಆದರೆ ನಾವು ಈ ಬಗ್ಗೆ ಎಲ್ಲೂ ಬಹಿರಂಗಪಡಿಸಿರಲಿಲ್ಲ. ಯಾಕೆಂದರೆ ನಾವು ಮದುವೆಯಾಗಲು ನಿಶ್ಚಯಿಸಿದ ಮೇಲೆ ಹೇಳಬೇಕು ಎಂದು ನಿರ್ಧರಿಸಿದ್ದೇವು. ಹಾಗಾಗಿ ನಾವಿಬ್ಬರು ಎಲ್ಲೂ ನಮ್ಮ ಪ್ರೀತಿಯ ಬಗ್ಗೆ ಮಾತನಾಡುತ್ತಿರಲಿಲ್ಲ. ಈಗ ಮದುವೆ ನಿಶ್ಚಯವಾಗಿದೆ, ಹಾಗಾಗಿ ಎಲ್ಲರಿಗೂ ಕೂಗಿ ಹೇಳಬೇಕು ಅನ್ನಿಸುತ್ತದೆ. ಆದರೆ ಕೊನೆಗೂ ನಾನು ನನ್ನ ಒಳ್ಳೆಯ ಗೆಳೆಯನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ ಎಂದು ಐಂದ್ರಿತಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಪ್ರೀತಿ ಹೇಗಾಯ್ತು?:
    2009ರಲ್ಲಿ ‘ಮನಾಸಾರೆ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು, ಅಲ್ಲಿ ನಮ್ಮಿಬ್ಬರ ಪರಿಚಯವಾಯಿತು. ಬಳಿಕ ಜನವರಿ 2010ರಲ್ಲಿ ನಾವಿಬ್ಬರು ಪ್ರೀತಿ ಮಾಡಲು ಶುರು ಮಾಡಿದೆವು. ಅಂದಿನಿಂದ ಇಂದಿನವರೆಗೂ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಇಬ್ಬರು ಒಂದೇ ಆಸಕ್ತಿ-ಆಲೋಚನೆಗಳನ್ನು ಹೊಂದಿದ್ದೇವೆ. ನಮ್ಮಿಬ್ಬರ ಪ್ರೀತಿಯ ಪ್ರಯಾಣ ತುಂಬಾ ಚೆನ್ನಾಗಿತ್ತು ಎಂದು ಪ್ರೀತಿ ಮೂಡಿದ ಬಗ್ಗೆ ಐಂದ್ರಿತಾ ಹೇಳಿಕೊಂಡಿದ್ದಾರೆ.

    ದಿಗಂತ್ ಅಂತಹ ಹುಡುಗ ನನಗೆ ಪಾರ್ಟ್‍ನರ್ ಆಗಿ ಸಿಗುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ನಮ್ಮಿಬ್ಬರ ಆಲೋಚನೆ ಅಭಿರುಚಿ ಎಲ್ಲವೂ ಒಂದೇ ರೀತಿ ಇದೆ. ಅದರಲ್ಲೂ ವಿವಾಹದ ಬಗ್ಗೆ ಒಂದೇ ಅಭಿಪ್ರಾಯವನ್ನು ಇಟ್ಟುಕೊಂಡಿದ್ದೇವೆ. ಇಬ್ಬರಿಗೂ ಅದ್ಧೂರಿಯಾಗಿ, ಹಣ ಖರ್ಚು ಮಾಡಿ ಮದುವೆಯಾಗಬೇಕು ಎಂದು ಇಷ್ಟವಿಲ್ಲ ಎಂದು ಐಂದ್ರಿಯಾ ಹೇಳಿದ್ದಾರೆ.

    ಅದ್ಧೂರಿ ಮದುವೆ ಇಷ್ಟವಿಲ್ಲ:
    ದಿಗಂತ್ ಕೂಡ ಅದ್ಧೂರಿ ಮದುವೆಯನ್ನು ಇಷ್ಟ ಪಡುವುದಿಲ್ಲ. ಆದರೆ ಮದುವೆಗೆ ಖರ್ಚು ಮಾಡುವ ಹಣವನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡಲು ಇಷ್ಟಪಡುತ್ತಾರೆ. ನಾನು ಯಾವಾಗಲೂ ಸುಂದರ ಮದುವೆಯ ಬಗ್ಗೆ ಕನಸು ಕಂಡಿದ್ದೇನೆ. ಅದೇ ರೀತಿ ದಿಗಂತ್ ಕುಟುಂಬವು ಕೂಡ ಬೆಂಗಾಲಿ ಶೈಲಿಯಲ್ಲಿ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಮದುವೆ ದಿನ ದಿಗಂತ್ ನನ್ನು ಬಿಳಿ ಟೋಪಿಯಲ್ಲಿ ನೋಡಲು ನಾನು ಕಾಯುತ್ತಿದ್ದೇನೆ. ಡಿಸೆಂಬರ್ 11 ರಂದು ಅರಿಶಿಣ ಶಾಸ್ತ್ರದ ಸಮಾರಂಭವನ್ನು ಏರ್ಪಡಿಸಿದ್ದೇವೆ. ಡಿಸೆಂಬರ್ 12 ರಂದು ಮದುವೆ ನಡೆಯಲಿದೆ ಮತ್ತು ಸಿನಿಮಾರಂಗದ ಸ್ನೇಹಿತರಿಗೆ ಪಾರ್ಟಿ ಆಯೋಜನೆ ಮಾಡಿದ್ದೇವೆ ಎಂದು ಐಂದ್ರಿತಾ ಹೇಳಿದ್ದಾರೆ.

    ಮಂಡಿಯೂರಿ ಪ್ರಪೋಸ್ ಮಾಡಿದ್ರು:
    ನಮ್ಮ ಸಂತೋಷಕ್ಕಾಗಿ ಮದುವೆಗೆ ಒಂದು ವಾರದ ಮುಂಚಿತವಾಗಿ ಅನಾಥಾಶ್ರಮಗಳು ಮತ್ತು ಪ್ರಾಣಿ ಆಶ್ರಯಗಳನ್ನು ಭೇಟಿ ಮಾಡುತ್ತೇವೆ. ಮೂರು ತಿಂಗಳ ಹಿಂದೆ ದಿಗಂತ್ ಅವರ ಮನೆಯಲ್ಲಿರುವ ಟೆರೇಸ್ ನಲ್ಲಿ ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲಿ ನಮ್ಮ ಕುಟುಂಬದವರು ಕೂಡ ಇದ್ದರು. ಈ ವೇಳೆ ದಿಗಂತ್ ತಮ್ಮ ಮೊಣಕಾಲೂರಿ ಕುಳಿತು ಎಲ್ಲರ ಮುಂದೆ ಪ್ರಪ್ರೋಸ್ ಮಾಡಿದ್ದರು. ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಆದರೆ ಆ ಕ್ಷಣ ತುಂಬಾ ಸುಂದರ ಮತ್ತು ಭಾವನಾತ್ಮಕವಾಗಿತ್ತು ಎಂದು ತನ್ನ ಮದುವೆಯ ಬಗ್ಗೆ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೊನೆಗೂ ಐಂದ್ರಿತಾ ರೇ ಮದ್ವೆ ಫಿಕ್ಸ್

    ಕೊನೆಗೂ ಐಂದ್ರಿತಾ ರೇ ಮದ್ವೆ ಫಿಕ್ಸ್

    ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್ ನಲ್ಲಿ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ನಟಿ ಐದ್ರಿಂತಾ ರೇ ಅವರು ಕೂಡ ಮದುವೆಯಾಗಲು ಸಿದ್ಧರಾಗುತ್ತಿದ್ದಾರೆ.

    ಸ್ಯಾಂಡಲ್‍ವುಡ್ ನಲ್ಲಿ ನಟಿ ಐದ್ರಿಂತಾ ರೇ ಮತ್ತು ನಟ ದಿಗಂತ್ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಬಹಿರಂಗವಾಗಿ ಜೋಡಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈ ಹಿಂದೆ ಕೂಡ ಐಂದ್ರಿತಾ ರೇ ಅವರು ಬೇರೆಯವರ ಜೊತೆ ಮದುವೆಯಾಗುತ್ತಿದ್ದಾರೆ ಎಂದ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ದಿಗಂತ್ ಮತ್ತು ಐಂದ್ರಿತಾ ಕೂಡ ಪ್ರತಿಕ್ರಿಯಿಸಿರಲಿಲ್ಲ. ಈಗ ನಟಿ ಐಂದ್ರಿತಾ ಅವರು ಮಾಧ್ಯಮ ಸಂದರ್ಶನವೊಂದಲ್ಲಿ ತಮ್ಮ ಮದುವೆಯ ಬಗ್ಗೆ ಹೇಳಿಕೊಂಡಿದ್ದಾರೆ.

    ಐಂದ್ರಿತಾ ರೇ ಮತ್ತು ದಿಗಂತ್ ಮುಂದಿನ ತಿಂಗಳು ಡಿಸೆಂಬರ್ 12 ರಂದು ರಿಂಗ್ ಬದಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ವತಃ ಐಂದ್ರಿಯಾ ಅವರೇ, “ನನ್ನ ಬೆಸ್ಟ್ ಫ್ರೆಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

    ಸದ್ಯ ನಟ ದಿಗಂತ್ ತಮ್ಮ ಸ್ನೇಹಿತರ ಜೊತೆ ಶ್ರೀಲಂಕಾಕ್ಕೆ ಬ್ಯಾಚುಲರ್ ಟ್ರಿಪ್ ನಲ್ಲಿ ಇದ್ದಾರೆ. ಆದ್ದರಿಂದ ಈ ಬಗ್ಗೆ ದಿಗಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಾಲಿವುಡ್ಡಲ್ಲಿ ಶ್ರೀರಾಮಚಂದ್ರ ಆಗಲಿದ್ದಾರೆ ದಿಗಂತ್!

    ಬಾಲಿವುಡ್ಡಲ್ಲಿ ಶ್ರೀರಾಮಚಂದ್ರ ಆಗಲಿದ್ದಾರೆ ದಿಗಂತ್!

    ದಿಗಂತ್ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಮೂಲಕವೇ ದಿಗಂತ್ ಬದುಕಲ್ಲಿ ಹೊಸ ಅಲೆಯೊಂದು ಶುರುವಾಗೋ ಲಕ್ಷಣಗಳೂ ಕಾಣಿಸಲಾರಂಭಿಸಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ದಿಗಂತ್ ಬಾಲಿವುಡ್ ಚಿತ್ರವೊಂದರಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ!

    ಬಾಲಿವುಡ್‍ನ ಖ್ಯಾತ ನಿರ್ದೇಶಕ ಕುನಾಲ್ ಕೊಹ್ಲಿ ಪೌರಾಣಿಕ ಕಥಾ ಹಂದರದ ರಾಮ್ ಯುಗ್ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿನ ಶ್ರೀರಾಮಚಂದ್ರನ ಪಾತ್ರಕ್ಕೆ ದೂದ್ ಪೇಡಾ ದಿಗಂತ್ ನಾಯಕನಾಗಿ ಆಯ್ಕೆಯಾಗಿದ್ದಾರೆ.

    ಕುನಾಲ್ ಕೊಹ್ಲಿ ನಿರ್ದೇಶನದ ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರೂ ಒಂದೊಂದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಆದರೆ ರಾಮನ ಪಾತ್ರಕ್ಕೆ ದಿಗಂತ್ ನಿಕ್ಕಿಯಾಗಿದ್ದಾರೆ.

    ಬಹು ಕಾಲದಿಂದಲೂ ಕುನಾಲ್ ಮತ್ತು ದಿಗಂತ್ ಪರಿಚಿತರು. ಆದ್ದರಿಂದಲೇ ದಿಗಂತ್ ವ್ಯಕ್ತಿತ್ವಕ್ಕೆ ಮನ ಸೋತು ಅವರನ್ನೇ ಶ್ರೀರಾಮಚಂದ್ರನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿರೋದಾಗಿ ಕುನಾಲ್ ಹೇಳಿದ್ದಾರೆ. ಇನ್ನು ದೂರದರ್ಶನದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ರಾಮಾಯಣ ಕಥೆ ಅಂದ್ರೆ ದಿಗಂತ್ ಅವರಿಗೆ ಇಷ್ಟವಾಗುತ್ತಿತ್ತಂತೆ. ಬಾಲ್ಯದಲ್ಲಿಯೇ ಅವರನ್ನು ರಾಮನ ಪಾತ್ರ ಪ್ರಭಾವಿಸಿತ್ತಂತೆ. ಇದೀಗ ತಾನೇ ರಾಮನಾಗಿ ನಟಿಸೋ ಅವಕಾಶ ಸಿಕ್ಕಿದ್ದರಿಂದ ದಿಗಂತ್ ಖುಷಿಗೊಂಡಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv