Tag: DIG roopa

  • ವರ್ಗಾವಣೆಗೆ ಅಧಿಕಾರಿಗಳು ಹೆದರಬಾರದು: ಡಿಐಜಿ ರೂಪಾ

    ವರ್ಗಾವಣೆಗೆ ಅಧಿಕಾರಿಗಳು ಹೆದರಬಾರದು: ಡಿಐಜಿ ರೂಪಾ

    ದಾವಣಗೆರೆ: ಅಧಿಕಾರಿಗಳು ವರ್ಗಾವಣೆಗೆ ಹೆದರಬಾರದು. ವರ್ಗಾವಣೆಗೆ ಏನಾದ್ರು ಹೆದರಿದ್ರೆ ಇನ್ನೊಬ್ಬರ ಅಡಿಯಾಳಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಸಂಚಾರಿ ವಿಭಾಗದ ಡಿಐಜಿ ಡಿ ರೂಪಾ ಹೇಳಿದ್ದಾರೆ.

    ನಗರದ ಕುವೆಂಪು ಕನ್ನಡ ಭವನದಲ್ಲಿ ಅಯೋಜನೆ ಮಾಡಲಾಗಿದ್ದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮೇವೇಶವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ವರ್ಗಾವಣೆಗೆ ಹೆದರದೇ ಇದ್ದರೆ ಯಾರ ಮುಲಾಜಿಲ್ಲದೆ ಕೆಲಸ ಮಾಡಬಹುದು ಅಂತ ಹೇಳಿದ್ರು.

    ನನ್ನನ್ನು ಡಿಐಜಿ ವಿಭಾಗದಿಂದ ಸಂಚಾರಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ರಿಂದ ನನಗೆ ಯಾವುದೇ ಬೇಸರವಿಲ್ಲ. ಅಲ್ಲದೇ ಸರ್ಕಾರಕ್ಕೆ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ವರದಿ ನೀಡಿದ್ದೇನೆ. ಇದರ ಬಗ್ಗೆ ತನಿಖೆ ಕೂಡಾ ನಡೆಯುತ್ತಿದೆ. ಈ ಪ್ರಕರಣದಲ್ಲಿ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ನಾನು ಒಬ್ಬ ಅಧಿಕಾರಿಯಾಗಿ ಮಾಡಬೇಕಾದ ಕೆಲ್ಸಾ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದ್ರು.

  • ಅಪಘಾತಗಳಾದ್ರೆ ಕ್ರಿಮಿನಲ್ ಕೇಸ್‍ಗೆ ಅನುಮತಿ ನೀಡಿ: ಡಿಐಜಿ ರೂಪಾ

    ಅಪಘಾತಗಳಾದ್ರೆ ಕ್ರಿಮಿನಲ್ ಕೇಸ್‍ಗೆ ಅನುಮತಿ ನೀಡಿ: ಡಿಐಜಿ ರೂಪಾ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಮತ್ತು ರಸ್ತೆ ಗುಂಡಿಗಳಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳ ಹೊಣೆಯನ್ನು ರಸ್ತೆ ನಿರ್ಮಾಣ ಮಾಡಿದ ಪ್ರಾಧಿಕಾರವೇ ಹೊರಬೇಕು ಅಂತ ಸಂಚಾರ ಹಾಗೂ ರಸ್ತೆ ಸುರಕ್ಷತಾ ಇಲಾಖೆ ಆಯುಕ್ತೆ ರೂಪಾ ಅಭಿಪ್ರಾಯಿಸಿದ್ದಾರೆ.

    ಈ ಕುರಿತು ಹೊಸ ತಿದ್ದುಪಡಿಗೆ ಕರ್ನಾಟಕ ಪೊಲೀಸರಿಂದ ಎಂ.ವಿ.ಎ ಕಾಯ್ದೆ ತಿದ್ದುಪಡಿಗೆ ರೂಪಾ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲಹಾ ಪಟ್ಟಿ ಸಲ್ಲಿಸಿದ್ದಾರೆ. ರಸ್ತೆ ನಿರ್ಮಾಣ ಮಾಡಿದ ಪ್ರಾಧಿಕಾರವೇ ಅನಾಹುತ ಹೊಣೆ ಹೊರಬೇಕು. ಅಲ್ಲದೇ ಪ್ರಾಧಿಕಾರದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಅನುಮತಿ ನೀಡಿ ಅಂತ ಮನವಿ ಮಾಡಿದ್ದಾರೆ.

    ಪಾಲಿಕೆ, ಬಿಡ್ಲೂಡಿ, ಪಿಪಿಡಬ್ಲೂಡಿ ಎನ್ ಹೆಚ್ ವಿರುದ್ಧ ಕ್ರಮಕ್ಕೆ ಸಲಹೆ ನೀಡಿದ್ದಾರೆ. ಮೋಟರ್ ವೆಹಿಕಲ್ ಆಕ್ಟ್ ಲೋಕ ಸಭೆಯಲ್ಲಿ ಪಾಸ್ ಆಗಿದ್ದು, ರಾಜ್ಯ ಸಭೆಯಲ್ಲಿದೆ. ಪಾರ್ಕಿಂಗ್ ಜಾಗ ಇದೇಯೆ ಎಂಬ ಬಗ್ಗೆ ಎನ್‍ಒಸಿ ಪಡೆದು ವಾಹನ ನೊಂದಣಿ ಮಾಡಬೇಕು. ಜೀಬ್ರಾ ಕ್ರಾಸಿಂಗ್ ಅಲ್ಲದೆ ಬೇರೆ ಕಡೆ ರಸ್ತೆ ದಾಟಿದ್ರೆ ಕೇಸ್ ಹಾಕುವುದು. ವೀಲಿಂಗ್ ಸೇರಿ ಡೆಂಜರಸ್ ಡ್ರೈವಿಂಗ್ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೀಗೆ ಒಟ್ಟು 15 ಸಲಹೆಗಳ ಪಟ್ಟಿಯನ್ನು ರೂಪಾ ಅವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾರೆ.

  • ಜೈಲು ರಹಸ್ಯ ಬೇಧಿಸಿದ ರೂಪಾ ಶೀಘ್ರವೇ ಎತ್ತಂಗಡಿ?

    ಜೈಲು ರಹಸ್ಯ ಬೇಧಿಸಿದ ರೂಪಾ ಶೀಘ್ರವೇ ಎತ್ತಂಗಡಿ?

    -ತೆಲಗಿ ತಲೆ ಮೇಲಿದೆ 254 ಕೋಟಿ ರೂ. ತೆರಿಗೆ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ ಸತ್ಯನಾರಾಯಣರಾವ್ ಮತ್ತು ಡಿಐಜಿ ರೂಪಾ ವರ್ಗಾವಣೆ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ಮಾಧ್ಯಮದ ಮುಂದೆ ಅಧಿಕಾರಿಗಳು ಪದೇ ಪದೇ ಹೇಳಿಕೆ ನೀಡಬಾರದು ಅಂತ ಸಿಎಂ ಹೇಳಿದ್ದರು. ಪ್ರಕರಣದ ತನಿಖೆ ಪ್ರಾರಂಭಗೊಳ್ಳುವ ಮುನ್ನವೇ ಜೈಲಿಗೆ ಇಬ್ಬರು ಪ್ರವೇಶ ಪಡೆದಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಇಬ್ಬರನ್ನೂ ವರ್ಗಾವಣೆ ಮಾಡಿದ ಬಳಿಕ ಆ ಜಾಗಕ್ಕೆ ಐಜಿಪಿ ಸಲೀಂ ನಿಯೋಜನೆ ಮಾಡುವ ಸಾಧ್ಯತೆಗಳಿವೆ. ಸಲೀಂ ಇಲ್ಲ ಚರಣ್ ರೆಡ್ಡಿ ಗೆ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಇಬ್ಬರು ಅಧಿಕಾರಿಗಳು ಜನವರಿಗೆ ಎಡಿಜಿಪಿ ಆಗಿ ಬಡ್ತಿ ಹೊಂದುವುದರಿಂದ ಅವರನ್ನೇ ಮುಂದುವರೆಸಲು ಸಿದ್ಧತೆ ನಡೆಸಲಾಗಿದೆ ಎಂಬುವುದಾಗಿ ತಿಳಿದುಬಂದಿದೆ.

    ಇನ್ನು ಡಿಜಿ ಸತ್ಯನಾರಾಯಣ ರಾವ್ ಅವರು ಡಿಐಜಿ ರೂಪಾ ಬಗ್ಗೆ 16 ಪುಟಗಳ ವರದಿಯನ್ನು ಗೃಹಿಲಾಖೆಗೆ ಸಲ್ಲಿಸಿದ್ದಾರೆ. ಈ ವರದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಡಿಐಜಿ ರೂಪಾ ಅವರು ಡಿಜಿ ಆದೇಶ ಮೀರಿ 3 ಬಾರಿ ನೋಟಿಸ್ ಪಡೆದಿದ್ದರು. ನನ್ನ ಮೇಲೆ ದ್ವೇಷ ಸಾಧಿಸಲು ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

    ವರದಿಯಲ್ಲೇನಿದೆ?: ಬೆಂಗಳೂರು, ತುಮಕೂರು ಜೈಲಿನ ಜೊತೆ ಹೆಚ್ಚುವರಿ ಜವಬ್ದಾರಿಗೆ ರೂಪಾ ಡಿಮ್ಯಾಂಡ್ ಇಟ್ಟಿದ್ದರು. ಅಲ್ಲದೇ ಬಳ್ಳಾರಿ, ಬೆಳಗಾವಿ, ಧಾರವಾಡ, ಕಲಬುರಗಿ ಜೈಲುಗಳ ಹೊಣೆಗಾಗಿ ರೂಪಾ ಪಟ್ಟು ಹಿಡಿದಿದ್ದರು. ಆದ್ರೆ ಗೃಹ ಇಲಾಖೆ ಅನುಮತಿ ಬೇಕು ಎಂದು ರೂಪಾಗೆ ನಾನು ಬುದ್ಧಿವಾದ ಹೇಳಿದ್ದೆ. ನನಗೆ ತಿಳಿಯದೇ ಗೃಹ ಇಲಾಖೆ ಜೊತೆ ರೂಪಾ ಹೆಚ್ಚಿನ ಅಧಿಕಾರಕ್ಕಾಗಿ ಚರ್ಚೆ ನಡೆಸಿದ್ದರು. ಆಗ ಡಿಜಿಪಿ ಅನುಮತಿ ಪಡೆಯಲು ಗೃಹ ಇಲಾಖೆ ರೂಪಾಗೆ ಸೂಚನೆ ನೀಡಿತ್ತು. ಬಳಿಕ ಡಿಜಿಯಾದ ನನ್ನ ಜೊತೆ ರೂಪಾ ಅವರು ವಾಗ್ವಾದ ನಡೆಸಿ ಹೋಗಿದ್ದರು. ತುಮಕೂರು ಜೈಲಲ್ಲಿ ರೂಪಾಂತರ ಕಾರ್ಯಕ್ರಮದ ವೇಳೆ ಕೆಲವೇ ಕೆಲವು ವರದಿಗಾರರನ್ನ ಕರೆಸಲು ನಾನು ಸೂಚಿಸಿದ್ದೆ. ಆದ್ರೆ ಸುಪ್ರೀಂಕೋರ್ಟ್ ಆದೇಶ ಮೀರಿ ಹೆಚ್ಚು ಪತ್ರಕರ್ತರನ್ನ ಕರೆಸಿ ಪ್ರಚಾರ ಪಡೆದಿದ್ದಕ್ಕೆ ಬುದ್ಧಿ ಹೇಳಿದ್ದೆ. ನೊಟೀಸ್ ನೀಡಿ ರೂಪಾಗೆ ಉತ್ತರಿಸಲು ಕೇಳಿದಾಗ ನನ್ನ ಮೇಲೆ ಜೋರು ಮಾಡಿದ್ರು. ಆಮೇಲೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ತಮ್ಮಿಷ್ಟ ಬಂದಂತೆ ಜೈಲಿನ ಬಗ್ಗೆ ತಮ್ಮ ಬಗ್ಗೆ ಮಾತನಾಡಿದ್ರು. ಆ ಫೋಟೋಗಳನ್ನ ಫೇಸ್‍ಬುಕ್‍ನಲ್ಲಿ ಹಾಕಿಕೊಂಡು ನಿಯಮ ಮೀರಿದ್ದಕ್ಕೆ ಮೆಮೋ ನೀಡಿದ್ದೆ. ಜುಲೈ 10 ರಂದು ಮುಖ್ಯಮಂತ್ರಿಗಳು ಸಭೆ ಕರೆದ ದಿನವೇ ಪರಪ್ಪನ ಅಗ್ರಹಾರ ಭೇಟಿಗೆ ತೆರಳಿದ್ರು. ಹಿರಿಯ ಅಧಿಕಾರಿಯಾಗಿ ನಾನು ಸಭೆಗೆ ಯಾಕೆ ಬಂದಿಲ್ಲ ಎಂದು ಉತ್ತರ ಕೇಳಿ 3ನೇ ಬಾರಿ ನೋಟಿಸ್ ನೀಡಿದ್ದೆ. ಆದ್ರೂ ನಿಯಮ ಮೀರಿ ಜೈಲಿನೊಳಗೆ ಹೋಗಿದ್ದಾರೆ. ಜೈಲಧಿಕಾರಿಗಳಿಗೂ ತಿಳಿಸದೇ ವರದಿ ಸಿದ್ಧಪಡಿಸಿದ್ದಾರೆ. ಶಶಿಕಲಾ ಅವರಿಗೆ ಸೌಕರ್ಯ ನೀಡಿದ್ದೀವಿ, ತೆಲಗಿಗೆ ಸೇವಕರನ್ನ ನೀಡಲಾಗಿದೆ ಎಂದು ಸುಳ್ಳು ವರದಿ ಮಾಧ್ಯಮಗಳಿಗೆ ನೀಡಿದ್ದಾರೆ. ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸವಲತ್ತು ನೀಡಿಲ್ಲ. ಆದ್ರೆ ಕೋರ್ಟ್ ಆದೇಶದಂತೆ ತೆಲಗಿಗೆ ಕೆಲವು ಸವಲತ್ತು ನೀಡಿದ್ದೇವೆ ಅಷ್ಟೇ ಅಂತ ವರದಿಯಲ್ಲಿ ಹೇಳಿದ್ದಾರೆ.

    ತೆಲಗಿ ಮೇಲೆ ತೆರಿಗೆ: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣ ರೂವಾರಿ ಕರೀಂ ಲಾಲ್ ತೆಲಗಿಗೆ ಕೇಂದ್ರ ಕಾರಾಗೃಹದಲ್ಲಿ ರಾಜಮರ್ಯಾದೆ ಸುದ್ದಿ ಬಿತ್ತರಗೊಳ್ಳುತಿದ್ದಂತೆ ಈತನ ಕರಾಳ ಕೃತ್ಯದ ಬಗ್ಗೆ ಇನ್ನೊಂದು ಸ್ಫೋಟಕ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕರೀಂ ಲಾಲ್ ತೆಲಗಿ ಸರ್ಕಾರಕ್ಕೆ ಕಟ್ಟಬೇಕಾಗಿರೋದು ಬರೊಬ್ಬರಿ 254 ಕೋಟಿ ರೂಪಾಯಿ. ತೆಲಗಿ ಸರ್ಕಾರಕ್ಕೆ ಕಟ್ಟಬೇಕಾದ ಹಣದ ದಾಖಲಾತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

  • ಡಿಜಿ, ಐಜಿ ಜಟಾಪಟಿಗೆ ಕೈದಿಗಳು ಬಲಿ: ರಾತ್ರೋ ರಾತ್ರಿ 18 ಕೈದಿಗಳು ಬಳ್ಳಾರಿಗೆ ಶಿಫ್ಟ್

    ಡಿಜಿ, ಐಜಿ ಜಟಾಪಟಿಗೆ ಕೈದಿಗಳು ಬಲಿ: ರಾತ್ರೋ ರಾತ್ರಿ 18 ಕೈದಿಗಳು ಬಳ್ಳಾರಿಗೆ ಶಿಫ್ಟ್

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ರಾಜಾಥಿತ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶನಿವಾರ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿಗಳಿಗೆ ಜೈಲಾಧಿಕಾರಿಗಳು ಬೆದರಿಕೆ ಹಾಕಿದ ಪ್ರಕರಣದ ಬೆನ್ನಲ್ಲೇ ರಾತ್ರೋರಾತ್ರಿ 18 ಕೈದಿಗಳನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

    ಜೈಲ್ ಸೂಪರಿಡೆಂಟ್ ಕೃಷ್ಣಕುಮಾರ್ ವಿರುದ್ಧ ಮಾತನಾಡಿದ ಬೆನ್ನಲ್ಲೇ ಕೈದಿಗಳನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ನಿನ್ನೆ ಡಿಐಜಿ ರೂಪಾ ಭೇಟಿ ನೀಡಿದಾಗ ಜೈಲಿನ ಒಳಗೆ ಗಲಾಟೆ ನಡೆದಿತ್ತು. ಡಿಐಜಿ ರೂಪಾಗೆ ಸ್ಥಳಾಂತರಗೊಂಡ ಕೈದಿಗಳೆಲ್ಲಾ ದೂರು ನೀಡಿದ್ರು. ಹೀಗಾಗಿ ರೂಪ ಪರವಾಗಿ ನಿಂತ 18 ಕೈದಿಗಳನ್ನ ಸ್ಥಳಾಂತರ ಮಾಡಿದ್ದಾರೆ ಅಂತ ಗೊತ್ತಾಗಿದೆ.

    ಸಿಎಂ ಎಚ್ಚರಿಕೆ: ಅಶಿಸ್ತು ಪ್ರದರ್ಶಿಸುವ ಯಾವುದೇ ಅಧಿಕಾರಿಯನ್ನ ಸಹಿಸುವುದಿಲ್ಲ. ಡಿಐಜಿ ರೂಪಾ ಕೊಟ್ಟ ವರದಿಯಲ್ಲಿ ಯಾರಾದ್ರೂ ತಪ್ಪಿತಸ್ಥರು ಎಂದು ಇದ್ರೆ ಅವರ ಮೇಲೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ನಿಯಮ ಮೀರುವಂತಹ ಅಧಿಕಾರಿಗಳು, ಅಶಿಸ್ತಿನ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಸಿದ್ದಾರೆ.

  • ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ

    ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ

    ಮೈಸೂರು: ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಆದ್ರೆ ಪದೇ ಪದೇ ಮಾಧ್ಯಮದ ಮುಂದೆ ಹೋಗಬಾರದು. ಈ ಸಂಬಂಧ ಡಿಐಜಿ ರೂಪ ಅವರಿಗೆ ನೋಟಿಸ್ ನೀಡಲಾಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಅವರಲ್ಲೇನಾದ್ರೂ ವರದಿ, ದಾಖಲೆಗಳಿದ್ದರೆ ತಂದು ತೋರಿಸಲಿ. ಅದರ ಬದಲು ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ. ಜೈಲಿನಲ್ಲಿ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಅವರು ವರದಿ ನೀಡಿದ್ರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ನಿಯಮದಲ್ಲಿ ಇರುವ ಕಾನೂನು ಪಾಲನೆ ಮಾಡಬೇಕು ಅಂತ ಹೇಳಿದ್ದಾರೆ.

    ಕೆಂಪಯ್ಯರನ್ನ ಮಂಗಳೂರು ಗಲಭೆ ನಿಯಂತ್ರಣದ ಉಸ್ತುವಾರಿಯನ್ನಾಗಿ ನೇಮಕ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಆರೋಪ ನಿರಾಧಾರವಾಗಿದೆ. ಮಂಗಳೂರಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳನ್ನು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಣ ಮಾಡಿ ಎಂದು ಹೇಳಿದ್ದೆ. ಆದ್ರೆ ಕೆಂಪಯ್ಯರಿಗೆ ಸರ್ಕಾರದಿಂದ ಯಾವುದೇ ಉಸ್ತುವಾರಿ ಇಲ್ಲ. ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಬಿಜೆಪಿಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‍ನದ್ದು ಬೆಂಕಿ ಆರಿಸುವ ಕೆಲಸವಾಗಿದೆ ಅಂತ ಸಿಎಂ ತಿಳಿಸಿದ್ದಾರೆ.

    ಬಿಜೆಪಿಯವರಿಗೆ ಯಾವುದೇ ಸಮಸ್ಯೆ ಇತ್ಯರ್ಥವಾಗುವುದು ಮುಖ್ಯವಲ್ಲ. ಅವರಿಗೆ ಗಲಭೆಗಳ ಜೀವಂತವಾಗಿಟ್ಟುಕೊಳ್ಳೊದೆ ಹಿಡನ್ ಅಜೆಂಡವಾಗಿದೆ. ರಾಮಮಂದಿರ ಕಟ್ಟುತ್ತೇವೆ ಅಂತ ಹೇಳಿದ್ರು ಈವರೆಗೂ ಕಟ್ಟಿಲ್ಲ. ಅದೇ ರೀತಿ ಜನರ ಭಾವನಾತ್ಮಕ ವಿಚಾರಗಳನ್ನ ವಿಷಯವಾಗಿಟ್ಟುಕೊಂಡು ರಾಜಕೀಯ ಮಾಡೋದು ಬಿಜೆಪಿ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಮಂಗಳೂರಿನಲ್ಲಿ ಬೆಂಕಿ ಹಚ್ಚಿದ್ದೆ ಬಿಜೆಪಿಯವರು. ನಿರ್ಮಲಾ ಸೀತಾರಾಮನ್ ಅವರು ಯುಪಿ, ಹರಿಯಾಣ, ಮಧ್ಯಪ್ರದೇಶದ ಬಗ್ಗೆ ಮಾತಾನಾಡಲಿ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿಯೇ ಇದೆ. ಶಾಂತಿಗೆ ಭಂಗ ತರುವ ಯಾವುದೇ ಸಂಘಟನೆ ಇದ್ದರೂ ಕ್ರಮ ಗ್ಯಾರೆಂಟಿ. ಮುಂದಿನ ದಿನದಲ್ಲಿ ಪಿಎಫ್‍ಐ, ಎಎಸ್‍ಡಿಪಿಐ, ಕೆಎಸ್‍ಡಿ ಸೇರಿದಂತೆ ಆರ್‍ಎಸ್‍ಎಸ್, ವಿಹೆಚ್‍ಪಿ, ಭಜರಂಗದಳದ ಮೇಲೆ ನಿಗಾ ಇಡಲಾಗುವುದು. ಒಟ್ಟಿನಲ್ಲಿ ರಾಜ್ಯದ ಗೃಹ ಇಲಾಖೆಗೆ ಈ ಸಂಘಟನೆಗಳ ಚಟುವಟಿಕೆ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ ಅಂತ ಸಿಎಂ ವಿವರಿಸಿದ್ದಾರೆ.

    ನನಗೆ ರಾಜಕೀಯ ಮರುಜೀವ ನೀಡಿದ್ದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ. ನನ್ನನ್ನ 5 ಬಾರಿ ಶಾಸಕನ್ನನ್ನಾಗಿ ಮಾಡಿ ಕ್ಷೇತ್ರ ಇದು. ಮುಂದಿನ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರ ಕೂಡ ನನ್ನ ಕ್ಷೇತ್ರ ಇದ್ದಂತೆ. ನನ್ನ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿರೋದು ಸಂತಸ ತಂದಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆ ತೆರೆಯಲಿ. ಸರ್ಕಾರದಿಂದ ಬೇಕಾದ ಎಲ್ಲ ಸಹಾಯ ಮಾಡುತ್ತೇನೆ ಅಂತಾ ಸಿದ್ದರಾಮಯ್ಯ ಹೇಳಿದರು.

    https://www.youtube.com/watch?v=VUvHqCfFg0E