Tag: Diesel tanker

  • Kalaburagi | ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ – ಸ್ಥಳದಲ್ಲೇ ಸಾವು

    Kalaburagi | ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ – ಸ್ಥಳದಲ್ಲೇ ಸಾವು

    ಕಲಬುರಗಿ: ರಸ್ತೆಯ ಡಿವೈಡರ್ ಬಳಿ ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ವೃದ್ಧೆ ಸಾವನ್ನಪ್ಪಿರುವ ಘಟನೆ ನಗರದ ಬಸವೇಶ್ವರ ಆಸ್ಪತ್ರೆ ಸಮೀಪದ ಖರ್ಗೆ ಪೆಟ್ರೋಲ್ ಬಂಕ್ ಸಿಗ್ನಲ್ ಬಳಿ ಸಂಭವಿಸಿದೆ.

    ಕಲಬುರಗಿಯ (Kalaburagi) ಕುಷ್ಠ ರೋಗಿಗಳ ಕಾಲೋನಿಯ ಮಲ್ಲಮ್ಮ ಸಾಯಬಣ್ಣ (65) ಮೃತಪಟ್ಟ ವೃದ್ಧೆ. ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದಾಗ ಡೀಸೆಲ್ ಟ್ಯಾಂಕರ್‌ವೊಂದು ವೃದ್ಧೆಗೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಅಡಿ ಸಿಲುಕಿ ವೃದ್ಧೆಯ ಎಡಗಾಲಿನ ತೊಡೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ವೃದ್ಧೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಚುನಾವಣೆಗಾಗಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ: ಮಹದೇವಪ್ಪ

    ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇರೋವರೆಗೂ ಸಿಎಂ ಬದಲಾವಣೆ ಚರ್ಚೆ ಇಲ್ಲ: ಮಹದೇವಪ್ಪ

  • ಟ್ಯಾಂಕರ್‌ಗೆ ಲಾರಿ ಡಿಕ್ಕಿ – ಅಪಾಯ ಲೆಕ್ಕಿಸದೆ ಕ್ಯಾನಿಗೆ ಡೀಸೆಲ್ ತುಂಬಿಸಿದ ಜನ

    ಟ್ಯಾಂಕರ್‌ಗೆ ಲಾರಿ ಡಿಕ್ಕಿ – ಅಪಾಯ ಲೆಕ್ಕಿಸದೆ ಕ್ಯಾನಿಗೆ ಡೀಸೆಲ್ ತುಂಬಿಸಿದ ಜನ

    ಕಾರವಾರ: ಡೀಸೆಲ್ ತುಂಬಿದ್ದ ಟ್ಯಾಂಕರಿಗೆ ಲಾರಿಯೊಂದು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಟ್ಯಾಂಕರ್ ನಿಂದ ಸೋರಿಕೆಯಾಗಿ ರಸ್ತೆಯಲ್ಲಿ ಡೀಸೆಲ್ ಹೊಳೆಯೇ ಹರಿದುಬಿಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಬೇಂಗ್ರೆಯ ಭಾರತ್ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಭಟ್ಕಳದ ಕಡೆ ತೆರಳುತಿದ್ದ ಡೀಸೆಲ್ ಟ್ಯಾಂಕರ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಟ್ಯಾಂಕರ್ ಹಿಂಬದಿಗೆ ಬಲವಾಗಿ ಹೊಡೆತಬಿದ್ದು, ಟ್ಯಾಂಕರ್ ಒಡೆದು ಡೀಸೆಲ್ ಸೋರಿಕೆಯಾಗಿದೆ.ಸೋರಿಕೆಯಿಂದಾಗಿ ಇಡೀ ರಸ್ತೆಯಲ್ಲಿ ಡೀಸೆಲ್ ನೀರಿನ ಕೋಡಿಯಂತೆ ಹರಿದು ಹೋಗುತ್ತಿತ್ತು.

    ಈ ವೇಳೆ ಟ್ಯಾಂಕರ್ ನಿಂದ ಹರಿಯುತ್ತಿದ್ದ ಡೀಸೆಲ್‍ನನ್ನು ಸುತ್ತಮುತ್ತಲ ಜನ ಮನೆಯಲ್ಲಿದ್ದ ಪಾತ್ರೆ ಹಾಗೂ ಕ್ಯಾನ್‍ಗಳನ್ನು ತಂದು ಅದನ್ನು ತುಂಬಿಕೊಂಡಿದ್ದಾರೆ. ಅಲ್ಲದೆ ಈ ಮಾರ್ಗದಲ್ಲಿ ಸಾಗುತ್ತಿದ್ದ ಕೆಲ ವಾಹನ ಸವಾರರು ಕೂಡ ಡೀಸೆಲ್‍ಗಾಗಿ ಮುಗಿಬಿದ್ದಿದ್ದರು. ಅಪಾಯ ಸಂಭವಿಸಬಹುದು ಎಂಬುವ ಅರಿವೇ ಇಲ್ಲದೇ ಜನ ಸೋರುತಿದ್ದ ಡೀಸೆಲ್ ಗೆ ಪಾತ್ರೆ ಹಿಡಿದಿದ್ದರು.

     

  • ಡೀಸೆಲ್ ಟ್ಯಾಂಕರ್ ಪಲ್ಟಿ- ಮುಗಿಬಿದ್ದು ಡೀಸೆಲ್ ಹೊತ್ತೊಯ್ದ ಜನ

    ಡೀಸೆಲ್ ಟ್ಯಾಂಕರ್ ಪಲ್ಟಿ- ಮುಗಿಬಿದ್ದು ಡೀಸೆಲ್ ಹೊತ್ತೊಯ್ದ ಜನ

    ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಅದರಿಂದ ಸೋರಿಕೆಯಾಗುತ್ತಿದ್ದ ಡೀಸೆಲ್‍ಗಾಗಿ ಜನರು ಮುಗಿಬಿದ್ದಿದ್ದ ದೃಶ್ಯ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮ ಬಳಿ ಕಂಡುಬಂದಿದೆ.

    ಇಂದು ಬೆಲಗೂರು ಬಳಿಕ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿತ್ತು. ಈ ವೇಳೆ ಟ್ಯಾಂಕರ್ ನಿಂದ ಸೋರಿದ ಡೀಸೆಲ್ ತುಂಬಿಕೊಂಡು ಹೋಗಲು ಜನರು ಮುಗಿಬಿದ್ದಿದ್ದರು. ತಾ ಮುಂದು ನಾ ಮುಂದು ಎಂದು ಡೀಸೆಲ್‍ಗಾಗಿ ಜನ ಮುಗಿಬಿದ್ದಿದ್ದು, ಸಿಕ್ಕ ಸಿಕ್ಕ ಬಾಟಲಿ, ಕೊಡ, ಬಕೆಟ್, ಕ್ಯಾನ್‍ಗಳನ್ನು ತಂದು ಡೀಸೆಲ್ ಹೊತ್ತೊಯ್ದ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕದಳ ಭೇಟಿ ನೀಡಿದ್ದು, ಟ್ಯಾಂಕರ್ ಅನ್ನು ಎತ್ತಿ ನಿಲ್ಲಿಸಿ ಡೀಸೆಲ್ ಸೋರಿಕೆಗೆ ಬ್ರೇಕ್ ಹಾಕಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅಲ್ಲದೆ ಗಾಯಾಳು ಚಾಲಕ ಹಾಗೂ ಸಹಾಯಕನನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.