Tag: Dialouge

  • ಅಭಿಮಾನಿಗಳಿಗೆ ಡೈಲಾಗ್ ಹೇಳಲು ಯಶ್ ನಿರಾಕರಣೆ

    ಅಭಿಮಾನಿಗಳಿಗೆ ಡೈಲಾಗ್ ಹೇಳಲು ಯಶ್ ನಿರಾಕರಣೆ

    ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿಗಳು ಡೈಲಾಗ್ ಹೇಳಲು ಒತ್ತಾಯಿಸಿದ್ದಾರೆ. ಆದರೆ ನಟ ಯಶ್ ಡೈಲಾಗ್ ಹೇಳಲು ನಿರಾಕರಿಸಿದ್ದಾರೆ.

    ಶ್ರೀರಂಗಪಟ್ಟಣದಲ್ಲಿ ಸುಮಲತಾ ಪರವಾಗಿ ಯಶ್ ಪ್ರಚಾರ ಮಾಡುವಾಗ ಗಂಜಾಮ್‍ನಲ್ಲಿ ಅಭಿಮಾನಿಗಳು ಯಶ್ ಅವರಿಗೆ ಡೈಲಾಗ್ ಹೇಳಲು ಒತ್ತಾಯಿಸಿದ್ದಾರೆ. ಆಗ ಯಶ್ ಈಗಲೇ ಟೂರಿಂಗ್ ಟಾಕೀಸ್ ಅಂತಾವ್ರೇ. ನಾವು ಬಂದು ಆಮೇಲೆ ಬೇಡ ಸುಮ್ಮನಿರಿ. ಒಂದಲ್ಲಾ ನಾನು ಬೇಕಾದರೆ ನೂರು ಡೈಲಾಗ್ ಹೇಳುತ್ತೇನೆ. ಆದರೆ ನಾವು ಈಗ ಕೇಳುತ್ತಿರುವುದು ಡೈಲಾಗ್ ಅಲ್ಲ. ಒಂದು ಬಾರಿ ಸುಮಲತಾ ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ಹೇಳಿದ್ದಾರೆ.

    ನಮ್ಮನ್ನು ನೋಡೋಕ್ಕೆ ಜನ ಬರುತ್ತಾರೆ ಎಂದು ಮಾತನಾಡುತ್ತಾರೆ. ಮಾತನಾಡಿದ ತಕ್ಕಂತೆ ನಡೆಯಬೇಕು. ನಾವು ಕೈಯಲ್ಲಿ ಆದಷ್ಟು ಜನಕ್ಕೆ ಏನೂ ಮಾಡಬೇಕು ಅದನ್ನು ಮಾಡಿದ್ದೇನೆ. ಅದು ಗೊತ್ತಾವರಿಗೆ ಗೊತ್ತಿರುತ್ತೆ. ನೀವು ಸುಮಲತಾ ಅವರ ಪರವಾಗಿ ಮನಸ್ಸು ಮಾಡಿ. ಅವರಿಗೆ ಆಸೆ ಇದೆ. ಅವರು ಕೆಲಸ ಮಾಡುತ್ತಾರೆ. ನಾವು ಯಾವಾಗಲೂ ಅವರ ಹಿಂದೆ ಇರುತ್ತೇವೆ. ಈಗಲೂ ಇದ್ದೇವೆ. ಮುಂದೆಯೂ ಇರುತ್ತೇವೆ ಎಂದು ಯಶ್ ಹೇಳಿದ್ದಾರೆ.

  • ಇನ್ಮೇಲೆ ಅವರಪ್ಪ ನನ್ನ ಮಾವ, ನಾನು ನಿಮ್ಮೆಲ್ಲರಿಗೂ ಭಾವ, ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ- ಯಶ್!

    ಇನ್ಮೇಲೆ ಅವರಪ್ಪ ನನ್ನ ಮಾವ, ನಾನು ನಿಮ್ಮೆಲ್ಲರಿಗೂ ಭಾವ, ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ- ಯಶ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈ ಹಿಂದೆ ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ’ ಎಂದು ಕೆಜಿಎಫ್ ಡೈಲಾಗ್ ಹೊಡೆದಿದ್ದರು.

    ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಡೈಲಾಗ್ ಮತ್ತೆ ಹವಾ ಕ್ರಿಯೆಟ್ ಮಾಡೋಕೆ ರೆಡಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ `ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ’ ಎಂದು ಯಶ್ ಕೆಜಿಎಫ್ ಸಿನಿಮಾದ ಡೈಲಾಗ್ ಸ್ಯಾಂಪಲ್ ಕೊಟ್ಟಿದ್ದರು.

    ಈ ಡೈಲಾಗ್ ಕೇಳಿದ ರಾಕಿಂಗ್ ಅಭಿಮಾನಿಗಳು ಕೆಜಿಎಫ್ ಬರಿ ರೌಡಿಸಂ ಕಥೆಯಲ್ಲ ಇದರಲ್ಲಿ ಲವ್ ಸ್ಟೋರಿ ಕೂಡ ಇದೇ ಎಂದು ಥ್ರಿಲ್ ಆಗಿದ್ದರು. ಇದರ ಜೊತೆ ರಿವೀಲ್ ಆದ ಕೆಜಿಎಫ್ ಸಿನಿಮಾದ ಮೇಕಿಂಗ್ ವಿಡಿಯೋ, ಟೀಸರ್, ಯಶ್ ಕಿಲ್ಲಿಂಗ್ ಲುಕ್ ಚಿತ್ರದ ಬಗ್ಗೆ ಸಖತ್ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗ ಅಭಿಮಾನಿಗಳ ಒತ್ತಾಯಕ್ಕೆ ಯಶ್ ಕೆಜಿಎಫ್ ಸಿನಿಮಾದ ಮತ್ತೊಂದು ಡೈಲಾಗ್ ರಿವೀಲ್ ಮಾಡಿದ್ದಾರೆ.

    ಇತ್ತೀಚೆಗೆ ಯಶ್ ಕರಾವಳಿಯ ಕಡಲ ಕಿನಾರೆಗೆ ಭೇಟಿ ಕೊಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಶ್ ನೋಡಿದ ತಕ್ಷಣ ಅಭಿಮಾನಿಗಳು ಒಂದು ಡೈಲಾಗ್ ಹೇಳು ಅಣ್‍ತಮ್ಮ ಎಂದು ಕೂಗಿದ್ದರು. ಎರಡ್ಮೂರು ಡೈಲಾಗ್ ಕೇಳಿದ್ದರೂ ತೃಪ್ತಿ ಪಡದ ಅಭಿಮಾನಿಗಳು ಕೆಜಿಎಫ್ ಸಿನಿಮಾದ ಡೈಲಾಗ್ ಹೇಳಿ ಎಂದು ಡಿಮ್ಯಾಂಡ್ ಮಾಡಿದ್ದರು.

    ಆಗ ಯಶ್ `ರಕ್ತದ ವಾಸನೇ ಕಂಡ್ರೆ ಒಟ್ಟಿಗೆ ಬರ್ತಾವೆ ಪಿರಾನ ಮೀನುಗಳು. ಆದ್ರೆ ಆ ಮೀನುಗಳಿಗೆ ಗೊತ್ತಿಲ್ಲಾ ಆ ರಕ್ತ ನಮ್ಮನ್ನ ಬೇಟೆ ಆಡೋಕೆ ಬಂದಿರೋ ತಿಮಿಂಗಲದ್ದು ಅಂತ’ ಎಂದು ಕೆಜಿಎಫ್ ಡೈಲಾಗ್ ಹೇಳಿದ್ದಾರೆ. ಇನ್ನೂ ಕೆಜಿಎಫ್‍ನ ಎಕ್ಸ್ ಕ್ಲೂಸಿವ್ ಡೈಲಾಗ್ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.