Tag: dhruva sharma

  • ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

    ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

    ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆಯಂತೆ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

    ಬಿಗ್‍ಬಾಸ್ ಕರ್ನಾಟಕದಲ್ಲೇ ಅತಿ ದೊಡ್ಡ ಶೋ ಎಂದು ಹೇಳಲಾಗಿದೆ. 5 ವರ್ಷಗಳಿಂದ ಸತತವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಐದು ಆವೃತ್ತಿಯಲ್ಲೂ ನಟ ಸುದೀಪ್ ನಿರೂಪಕರಾಗಿ ಜನರ ಮನಸನ್ನು ಗೆದ್ದಿದ್ದಾರೆ. ಸ್ಪರ್ಧಿಗಳು 3 ತಿಂಗಳು ಕಾಲ ಹೊರಗಿನ ಜಗತ್ತಿನ ಜೊತೆ ಯಾವುದೇ ಸಂಪರ್ಕವಿಲ್ಲದೆ ಒಂದೇ ಮನೆಯಲ್ಲಿ ತಮ್ಮ ಸಹ-ಸ್ಪರ್ಧಿಗಳ ಜೊತೆ ಕಾಲ ಕಳೆಯುತ್ತಾರೆ. ಅಷ್ಟೇ ಅಲ್ಲದೇ ಕೊಟ್ಟಿರುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

    ಈ ಐದು ಸೀಸನ್ ನಲ್ಲಿ ಸುದೀಪ್ ನಿರೂಪಕರಾಗಿದ್ದು, ಅವರು ಹೇಗೆ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಅವರು ನಡೆದು ಬಂದ ಹಾದಿ ಹೇಗಿತ್ತು ಎಂಬುದು ಬಿಗ್‍ಬಾಸ್ ಒಂದು ವಿಡಿಯೋ ಮೂಲಕ ಅದನ್ನು ಸುದೀಪ್ ಗೆ ತೋರಿಸಿದ್ದರು. ಮೊದಲ ಸೀಸನ್ ನಿಂದ ಐದನೇ ಸೀಸನ್‍ವರೆಗೂ ನಡೆದ ಎಲ್ಲ ಪಂಚಾಯ್ತಿ, ಬಿಗ್‍ಬಾಸ್ ವೇದಿಕೆಯಲ್ಲಿ ಅತಿಥಿಯಾಗಿ ಬಂದವರ ಜೊತೆ ಕಾಲ ಕಳೆದಿದ್ದು, ಎಲ್ಲವನ್ನೂ ಆ ವಿಡಿಯೋದಲ್ಲಿ ತೋರಿಸಲಾಗಿತ್ತು.

    ಭಾವುಕರಾದ್ರು ಕಿಚ್ಚ: ಈ ವೇಳೆ ಸಿಸಿಎಲ್‍ನಲ್ಲಿ ಕಿಚ್ಚ ಸಾರಥ್ಯದಲ್ಲಿ ಆಡುವ ಕರ್ನಾಟಕ ಬುಲ್ಡೋಜರ್ ತಂಡ ಬಿಗ್‍ಬಾಸ್ ಸೀಸನ್ 1ರಲ್ಲಿ ಆಗಮಿಸಿತ್ತು. ಸುದೀಪ್ ನಡೆಸಿಕೊಡುವ ಕಾರ್ಯಕ್ರಮ ಹಾಗೂ ಸ್ಪರ್ಧಿಗಳ ಬಗ್ಗೆ ತಂಡದ ಎಲ್ಲ ಸದಸ್ಯರು ಮಾತನಾಡಿದ್ದರು. ಆಗ ದಿವಗಂತ ದೃವ ಶರ್ಮಾ ತಮ್ಮದೇ ಶೈಲಿಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದರು. ಆ ಕ್ಷಣವನ್ನು ಸ್ಪೆಶಲ್ ವಿಟಿಯಲ್ಲಿ ಸೆರೆ ಹಿಡಿದು ಅದನ್ನು ಬಿಗ್‍ಬಾಸ್ ಸೀಸನ್ 5 ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ತೋರಿಸಿದ್ದರು.

    ಆ ವಿಡಿಯೋದಲ್ಲಿ ದೃವ ಶರ್ಮಾ ಅವರನ್ನು ನೋಡಿ ಕಿಚ್ಚ ಸುದೀಪ್ ಒಂದು ಕ್ಷಣ ಭಾವುಕರಾದರು. ಅಷ್ಟೇ ಅಲ್ಲದೇ ದೃವ ಅವರ ಗೆಳೆಯರಾದ ಜಯರಾಂ ಕಾರ್ತಿಕ್ (ಜೆಕೆ) ಕೂಡ ಕಣ್ಣೀರಿಟ್ಟರು. ಸುಮಾರು ವರ್ಷಗಳಿಂದ ದೃವ ಅವರು ಸಿಸಿಎಲ್‍ನಲ್ಲಿ ಆಟುತ್ತಿದ್ದರು. ದೃವ ಕ್ರಿಕೆಟ್ ಆಟಗಾರನಲ್ಲದೇ ಸಿನಿಮಾದಲ್ಲೂ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ ತಂಡ ಬೆಂಗಳೂರು-560023 ಚಿತ್ರವೊಂದರಲ್ಲಿ ನಟಿಸಿದ್ದರು. ಅದರಲ್ಲಿಯೂ ದೃವ ಶರ್ಮಾ ನಟಿಸಿದ್ದರು.

    ದೃವ ಶರ್ಮಾ ಕಿಚ್ಚು ಎಂಬ ಚಿತ್ರದಲ್ಲಿ ಕೊನೆಯಾದಾಗಿ ಬಣ್ಣ ಹಚ್ಚಿದ್ದರು. ಆ ಚಿತ್ರಕ್ಕೆ ಕಿಚ್ಚ ಸುದೀಪ್ ಹಿನ್ನಲೆ ಧ್ವನಿಯನ್ನು ನೀಡಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ದೃವ ವಿಧಿವಶರಾಗಿದ್ದರು.

    ಸದ್ಯ ಬಿಗ್‍ಬಾಸ್ ಸೀಸನ್ 5 ಫಿನಾಲೆ ಮುಗಿದಿದ್ದು, ಕನ್ನಡ ನಾಡಿನಲ್ಲಿ ‘ಮೂರೇ ಮೂರು ಪೆಗ್ಗು’ ಹಾಡಿನ ಮೂಲಕ ಫೀನಿಕ್ಸ್‍ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದ್ದ ಚಂದನ್ ಶೆಟ್ಟಿಗೆ ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ.

  • ನಟ, ಸಿಸಿಎಲ್ ಆಟಗಾರ ಧ್ರುವ ಸಾವಿಗೆ ಟ್ವಿಸ್ಟ್- ಆತ್ಮಹತ್ಯೆ ಎಂದು ಪೊಲೀಸರಿಗೆ ತಂದೆಯಿಂದ ದೂರು

    ನಟ, ಸಿಸಿಎಲ್ ಆಟಗಾರ ಧ್ರುವ ಸಾವಿಗೆ ಟ್ವಿಸ್ಟ್- ಆತ್ಮಹತ್ಯೆ ಎಂದು ಪೊಲೀಸರಿಗೆ ತಂದೆಯಿಂದ ದೂರು

    ಬೆಂಗಳೂರು: ನಟ, ಸಿಸಿಎಲ್ ಆಟಗಾರ ಧೃವ ಶರ್ಮಾ ಸಾವು ಆತ್ಮಹತ್ಯೆ ಎಂದು ತಿಳಿದುಬಂದಿದೆ.

    ಸಾಲಬಾಧೆಯಿಂದ ಧ್ರುವ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಂದೆ ಸುರೇಶ್ ಶರ್ಮಾರಿಂದಲೇ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಅವರು ಶನಿವಾರ ರಾತ್ರಿ 9 ಗಂಟೆಗೆ ವಿಷ ಕುಡಿದು ಬಂದು ಮನೆಯಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಮೂರ್ಛೆ ರೋಗ ಅಂತಾ ದಾಖಲಿಸಲಾಗಿತ್ತು. ಆದ್ರೆ ಮಧ್ಯರಾತ್ರಿ 01:30ಕ್ಕೆ ಧ್ರುವ ಕೊನೆಯುಸಿರೆಳೆದಿದ್ದಾರೆ.

    ಬೆಳಿಗ್ಗೆ ಮೂರು ಗಂಟೆಗೆ ನಟ ಸುದೀಪ್, ಪ್ರದೀಪ್, ನಂದ ಕಿಶೊರ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಧ್ರುವ ಅವರು ಪತ್ನಿ, 5 ವರ್ಷದ ಮಗಳು ಹಾಗೂ 2 ವರ್ಷದ ಮಗನನ್ನ ಅಗಲಿದ್ದಾರೆ.

    ಮರಣೋತ್ತರ ಪರೀಕ್ಷೆ ನಂತರ ಪಾರ್ಥೀವ ಶರೀರ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಬಳಿ ಇರೋ ಪ್ರಿಸ್ಟೀಜ್ ವಿಲ್ಲಾಗೆ ರವಾನೆ ಆಗಲಿದೆ. ಇಂದು ಬೆಳಗ್ಗೆ 7:30ಕ್ಕೆ ಮರಣೋತ್ತರ ಪರೀಕ್ಷೆಗಾಗಿ ಧ್ರುವ ಶರ್ಮಾ ಪಾರ್ಥಿವ ಶರೀರ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆಯಾಗಲಿದೆ.

    ಧ್ರುವ ಅವರಿಗೆ ವಿದ್ಯಾರಣ್ಯಪುರದಲ್ಲಿ ನಾಯಿಗೆ ಆಹಾರ ತಯಾರು ಮಾಡೋ ಫ್ಯಾಕ್ಟರಿ ಇದ್ದು, ಅದು ನಷ್ಟದಲ್ಲಿ ನಡೆಯುತ್ತಾ ಇತ್ತು ಎನ್ನಲಾಗಿದೆ.

    ಧ್ರುವ ಒಪ್ಪಿಕೊಂಡ ಸಿನಿಮಾವೊಂದರ ಶೂಟಿಂಗ್ ಕಂಪ್ಲೀಟ್ ಮಾಡಿದ್ದರು. ಸಿನಿಮಾದಲ್ಲಿ ಧ್ರುವ ಮೂಗನ ಪಾತ್ರದಲ್ಲಿ ಅಭಿನಯಿಸಿದ್ದು, ಮುಂದಿನ ತಿಂಗಳು ಆಡಿಯೋ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು.

    ಧ್ರುವ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇವರು ಸಿಸಿಎಲ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್‍ನಲ್ಲಿ ಉಪ ನಾಯಕರಾಗಿದ್ದರು. ಸ್ನೇಹಾಂಜಲಿ, ನೀನಂದ್ರೆ ನನಗಿಷ್ಟ, ತಿಪ್ಪಾಜಿ ಸರ್ಕಲ್ ಸಿನಿಮಾದಲ್ಲಿ ನಟಿಸಿದ್ದರು.

    ಉದ್ಯಮಿ, ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಾಕ್-ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಆ ಎಲ್ಲ ನಿಂದನೆಗಳನ್ನು ಮೆಟ್ಟಿ ನಿಂತಿದ್ದರು.

     ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರ ಪಾಠ ಕೇಳ್ತಿಲ್ಲ ಅನ್ನೋ ಕಾರಣ ಕೊಟ್ಟು ಕಾಲೇಜಿನಿಂದಲೇ ಹೊರಹಾಕಿದ್ದರು. ಸ್ಯಾಂಡಲ್‍ವುಡ್‍ನ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ ಕೂಡ ಧ್ರುವ ಅವರ ಪ್ರತಿಭೆಗೆ ಮಾರು ಹೋಗಿದ್ದರು. ಕೇವಲ ನಟ ಮಾತ್ರವಲ್ಲದೇ ಧ್ರುವ ಒಳ್ಳೆಯ ಸ್ಟಂಟ್ ಕೂಡಾ ಮಾಡುತ್ತಿದ್ದರು.
  • ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ

    ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ

    ಬೆಂಗಳೂರು: ನಟ ಮತ್ತು ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ ಖ್ಯಾತ ಆಟಗಾರ ವಿಕಲಚೇತನ ಪ್ರತಿಭೆ ಧ್ರುವ ಶರ್ಮಾ ವಿಧಿವಶರಾಗಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಧ್ರುವ ಶರ್ಮಾ ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು. ಇವರು ಸಿಸಿಎಲ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್‍ನಲ್ಲಿ ಉಪ ನಾಯಕರಾಗಿದ್ದರು. ಸ್ನೇಹಾಂಜಲಿ, ನೀನಂದ್ರೆ ನನಗಿಷ್ಟ, ತಿಪ್ಪಾಜಿ ಸರ್ಕಲ್ ಸಿನಿಮಾದಲ್ಲಿ ನಟಿಸಿದ್ದರು.

    ಉದ್ಯಮಿ, ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಾಕ್-ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಆ ಎಲ್ಲ ನಿಂದನೆಗಳನ್ನು ಮೆಟ್ಟಿ ನಿಂತಿದ್ದರು.

    ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರ ಪಾಠ ಕೇಳ್ತಿಲ್ಲ ಅನ್ನೋ ಕಾರಣ ಕೊಟ್ಟು ಕಾಲೇಜಿನಿಂದಲೇ ಹೊರಹಾಕಿದ್ದರು. ಸ್ಯಾಂಡಲ್‍ವುಡ್‍ನ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ ಕೂಡ ಧ್ರುವ ಅವರ ಪ್ರತಿಭೆಗೆ ಮಾರು ಹೋಗಿದ್ದರು. ಕೇವಲ ನಟ ಮಾತ್ರವಲ್ಲದೇ ಧ್ರುವ ಒಳ್ಳೆಯ ಸ್ಟಂಟ್ ಕೂಡಾ ಮಾಡುತ್ತಿದ್ದರು.