Tag: dhruva sarja

  • ಯಶ್ ನಂತ್ರ ಧ್ರುವ ಸರ್ಜಾಗೆ ಖಡಕ್ ಸೂಚನೆ ಕೊಟ್ಟ ಅಂಬಿ

    ಯಶ್ ನಂತ್ರ ಧ್ರುವ ಸರ್ಜಾಗೆ ಖಡಕ್ ಸೂಚನೆ ಕೊಟ್ಟ ಅಂಬಿ

    ಬೆಂಗಳೂರು: ರಾಕಿಂಗ್ ಸ್ಟಾರ್ ನಂತರ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ರೆಬಲ್ ಸ್ಟಾರ್ ಅಂಬರೀಶ್ ಖಡಕ್ ಸೂಚನೆ ಕೊಟ್ಟಿದ್ದಾರೆ.

    ರೆಬಲ್‍ಸ್ಟಾರ್ ಅಂಬರೀಷ್ ಸ್ಯಾಂಡಲ್ ವುಡ್ ನ ಸೀನಿಯರ್ ಆಗಿರುವುದರಿಂದ ಯಂಗ್ ಜನರೇಷನ್ ಕಲಾವಿದರಿಗೆ ಸಜೆಸ್ಟ್ ಮಾಡುವ ಹಕ್ಕು ಅವರಿಗಿದೆ. ಹಾಗಂತ ಅಂಬಿ ಎಲ್ಲರಿಗೂ ಹೇಳುತ್ತಾ ಕೂರೋದಿಲ್ಲ. ತನ್ನ ಮಾತನ್ನ ಕೇಳುವ ಕಲಾವಿದರಿಗೆ ಮಾತ್ರ ಸಲಹೆ ಸೂಚನೆಗಳನ್ನ ಕೊಡುತ್ತಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ರೆಬಲ್ ಸ್ಟಾರ್!

    ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡು ಆಮೇಲೆ ನನ್ನ ಭೇಟಿ ಮಾಡುವಂತೆ ತಿಳಿಸಿದ್ದರು. ಇನ್ನೂ ಮಗ ಅಭಿಷೇಕ್ ಗೂ ಕೂಡ ಸಿನಿಮಾ ಮುಹೂರ್ತ ದಿನದಂದು ಎಚ್ಚರಿಕೆ ಕೊಟ್ಟಿದ್ದರು. ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ವಾರ್ನ್ ಮಾಡಿದ್ದಾರೆ.

    ಹೌದು, ಅಂಬರೀಷ್ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಧ್ರುವ ಅಂಬರೀಷ್ ಮನೆಗೆ ಹೋಗಿದ್ದರು. ಈ ವೇಳೆ ಅಂಬಿಗೆ ವಿಶ್ ಮಾಡಿ ಸ್ವಲ್ಪ ಹೊತ್ತು ಅವರ ಜೊತೆ ಸಮಯ ಕಳೆದಿದ್ದಾರೆ. ಇದೇ ವೇಳೆಯಲ್ಲಿ ಧ್ರುವಾಗೆ ಅಂಬರೀಶ್ ಖಡಕ್ ಸೂಚನೆ ಕೊಟ್ಟಿದ್ದಾರೆ. ಧ್ರುವ ಸರ್ಜಾ ಒಂದು ಸಿನಿಮಾಗೆ ಕಮಿಟ್ ಆದ ಮೇಲೆ ಮತ್ತೊಂದು ಸಿನಿಮಾಗೆ ಕೈಹಾಕಲ್ಲ. ಆದ್ದರಿಂದ ಎರಡು ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿಕೊಂಡು ಕೂರಬೇಡಿ, ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡೋದನ್ನ ಕಲಿ ಅಂತ ಅಂಬಿ ತಮ್ಮ ಸ್ಟೈಲ್ ನಲ್ಲೇ ಧ್ರುವಾಗೆ ತಿಳಿ ಹೇಳಿದ್ದಾರೆ.

    ಅಂಬಿ ಮಾತು ಕೇಳಿ ಅರೆಕ್ಷಣ ಶಾಕ್ ಆದ ಧ್ರುವ ಇನ್ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡಲು ನಿರ್ಧಾರ ಮಾಡಿದ್ದಾರಂತೆ. ಸದ್ಯಕ್ಕೆ ಪೊಗರು ಸಿನಿಮಾದಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಅದ್ದೂರಿ, ಬಹದ್ದೂರ್, ಭರ್ಜರಿ ಸಿನಿಮಾದಂತೆ ಪೊಗರು ಕೂಡ ಭರ್ಜರಿಯಾಗಿ ರೆಡಿಯಾಗುತ್ತಿದೆ.

  • ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ಬೆಂಗಳೂರು: ಇಂದು ವಿಶ್ವದೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ‘ಅಮ್ಮ ಐ ಲವ್ ಯು’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

    ಅಮ್ಮ ಐ ಲವ್ ಯು ಚಿತ್ರದ ಟೀಸರ್ ಎರಡು ನಿಮಿಷವಿದ್ದು, ಈ ಟೀಸರ್ ನೋಡಿದ ಪ್ರತಿಯೊಬ್ಬರಿಗೂ ತನ್ನ ತಾಯಿಯ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ ಎಲ್ಲರ ಜೀವನದಲ್ಲಿ ತಾಯಿಯ ಜೊತೆ ನಡೆಯುವ ಸಂಭಾಷಣೆಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ.

    ಅಮ್ಮ ಐ ಲವ್ ಯು ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಗೆ ಧ್ರುವ ಸರ್ಜಾ ತಮ್ಮ ಧ್ವನಿಯನ್ನು ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಬಗ್ಗೆ ಹೇಳಲಾಗಿದ್ದು, ತಾಯಿ ನಮಗಾಗಿ ಏನೇನು ಮಾಡುತ್ತಾರೆಂಬುದು ಟೀಸರ್ ನಲ್ಲಿ ಹೇಳಿದ್ದಾರೆ.

    ನಮ್ಮ ಬೇಕಾಗಿರುವ ಚಿಕ್ಕಚಿಕ್ಕ ವಸ್ತುಗಳ ಬಗ್ಗೆ ತಾಯಿಯ ಹತ್ತಿರ ಕೇಳುತ್ತೇವೆ. ಆದರೆ ತಂದೆ ಇದ್ದರೆ ತಾಯಿ ಎಲ್ಲಿ ಎಂದು ಕೇಳುತ್ತೇವೆ. ನಮಗೆ ಬೇಕಾಗಿರುವ ತಿಂಡಿಯನ್ನು ಕೇಳಿದರೆ, ಅವಳಿಗೆ ಏನು ಬೇಕೋ ಅದನ್ನು ಬಿಟ್ಟು, ನಮಗೇನು ಬೇಕೋ ಅದನ್ನು, ಯಾವಾಗ ಬೇಕಾದ್ರೂ ಮಾಡಿಕೊಡುತ್ತಾರೆ ಎಂದು ಟೀಸರ್ ನಲ್ಲಿ ತಿಳಿಸಿದ್ದಾರೆ.

    ಸ್ವೀಪರ್, ಕ್ಲೀನರ್, ಕೀಪರ್, ಶೇಫ್, ವೇಟರ್, ಟೀಚರ್, ಸಂಸ್ಥಾಪಕಿ, ಡೆಕೋರೇಟರ್, ಸ್ಟೋರಿ ರೈಟರ್, ಸಿಂಗರ್, ಆ್ಯಕ್ಟರ್, ಸರ್ಪೋಟರ್, ಮೋಟಿವೇಟರ್ ಎಲ್ಲರಿಗೂ ತಮ್ಮ ಅಮ್ಮ ಆಗಿರುತ್ತಾರೆ. ನಮಗೆ ಏನೇ ಆಗಬೇಕಾದರೂ ನಮಗೆ ನಮ್ಮ ಅಮ್ಮಾನೇ ಆಗಬೇಕು. ತಂದೆ ಆಗಲೂ ಕೆಲವು ಕ್ಷಣ ಸಾಕು, ಆದರೆ ತಾಯಿ ಆಗಲು ಜೀವನಪೂರ್ತಿ ಬೇಕು ಎಂದು ಟೀಸರ್ ನಲ್ಲಿ ತೋರಿಸಿದ್ದಾರೆ.

    ಎಂ ಚೈತನ್ಯ ಈ ಸಿನಿಮಾದ ನಿರ್ದೇಶಕರಾಗಿದ್ದು, ಚಿತ್ರತಂಡ ಈ ಟೀಸರ್ ನನ್ನು ಎಲ್ಲ ತಾಯಂದರಿಗೆ ಅರ್ಪಿಸಿದ್ದಾರೆ. ಈ ಚಿತ್ರ ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ. ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

    https://www.youtube.com/watch?v=SuX3BBVjPbk

  • ಅಭಿಮಾನಿಗಳಿಗೆ ಲೈವ್ ಬಂದು Important Message ಹೇಳಿದ ಭರ್ಜರಿ ಗಂಡು

    ಅಭಿಮಾನಿಗಳಿಗೆ ಲೈವ್ ಬಂದು Important Message ಹೇಳಿದ ಭರ್ಜರಿ ಗಂಡು

    ಬೆಂಗಳೂರು: `ಭರ್ಜರಿ’ ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಅವರು ತಮ್ಮ ಮುಂದಿನ `ಪೊಗರು’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    ನಟ ಧ್ರುವ `ಪೊಗರು’ ಸಿನಿಮಾಗಾಗಿ ಹೊಸ ಲುಕ್ ಟ್ರೈ ಮಾಡುತ್ತಿದ್ದಾರೆ. ಆದ್ದರಿಂದ ಅವರ ಹೊಸ ಸ್ಟೈಲಿಶ್ ಲುಕ್ ರಿವೀಲ್ ಆಗಬಾರದು ಎಂದು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಅಂತಾ ಹೇಳಲಾಗುತ್ತಿದೆ. ಆದರೆ ಈಗ ತುಂಬಾ ದಿನಗಳ ನಂತರ ಧ್ರುವ ಸರ್ಜಾ ತಮ್ಮ ಟ್ವಿಟ್ಟರ್ ಮೂಲಕ ವಿಡಿಯೋ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶವನ್ನು ತಿಳಿಸಿದ್ದಾರೆ.

    ಇತ್ತೀಚೆಗೆ ಧ್ರುವ ಸರ್ಜಾ ಹೆಸರಿನಲ್ಲಿ ಯಾರೋ ಇನ್‍ಸ್ಟಾಗ್ರಾಂ ಅಕೌಂಟ್ ಕ್ರಿಯೇಟ್ ಮಾಡಿದ್ದು, ಅವರ ಹೆಸರಿನಲ್ಲೇ ಹೆಣ್ಣುಮಕ್ಕಳಿಗೆ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಅವರೇ ಈಗ ಸ್ವತಃ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋ: “ಮೊದಲಿನಿಂದನೂ ನಾನು ಫೇಸ್ ಬುಕ್ ಮತ್ತು ಇನ್‍ಸ್ಟಾಗ್ರಾಂ ನಲ್ಲಿ ಇಲ್ಲ. ಆದರೆ ಇನ್‍ಸ್ಟಾಗ್ರಾಂ ನಲ್ಲಿ ತುಂಬಾ ಚೀಪಾಗಿ ಮೆಸೇಜ್ ಮಾಡುತ್ತಿದ್ದರಂತೆ. ಹಾಗಾಗಿ ಅದು ನನ್ನ ಅಕೌಂಟ್ ಅಲ್ಲ. ಆದರೆ ಈಗ ಇನ್‍ಸ್ಟಾಗ್ರಾಂ ನಲ್ಲಿ ಯಾರೆಲ್ಲಾ ಆ ಅಕೌಂಟ್ ಫಾಲೋ ಮಾಡುತ್ತಿದ್ದೀರೋ ಅವರೆಲ್ಲರೂ ಅನ್ ಫಾಲೋ ಮಾಡಿ. ಒಂದು ವೇಳೆ ನಿಮಗೆ ನನ್ನ ಹೆಸರಿನ ಅಕೌಂಟ್ ನಿಂದ ಮೆಸೇಜ್ ಬಂದರೆ ಸೈಬರ್ ಕ್ರೈಂ ಅವರಿಗೆ ದೂರು ನೀಡಿ” ಎಂದು ಮನವಿ ಮಾಡಿದ್ದಾರೆ.

  • ಸಂಹಾರ ಸಿನಿಮಾ ನೋಡಿ ಧ್ರುವ ಸರ್ಜಾ ಫುಲ್ ಖುಷ್

    ಸಂಹಾರ ಸಿನಿಮಾ ನೋಡಿ ಧ್ರುವ ಸರ್ಜಾ ಫುಲ್ ಖುಷ್

    ಬೆಂಗಳೂರು: ಚಿರಂಜೀವಿ ಸರ್ಜಾ, ಗುರುದೇಶ್ ಪಾಂಡೆ ಕಾಂಬಿನೇಷನ್‍ನ ಸಂಹಾರ ಸಿನಿಮಾವನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ನಟ ಧ್ರುವ ಸರ್ಜಾ ವೀಕ್ಷಿಸಿದ್ದಾರೆ.

    ಅಭಿಮಾನಿಗಳ ಜೊತೆ ಕೂತು ಸಂಹಾರ ಸಿನಿಮಾ ನೋಡಿದ ಆ್ಯಕ್ಷನ್ ಪ್ರೀನ್ಸ್ ಸಖತ್ ಖುಷಿಪಟ್ಟರು. ತಮ್ಮ ನೆಚ್ಚಿನ ಹೀರೋ ನೋಡಲು ಮುಗಿಬಿದ್ದ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟರು.

    ಸಂಹಾರ ಸಿನಿಮಾ ನೋಡಿದ ಧ್ರುವ, ತ್ರಿವೇಣಿ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದು ತುಂಬಾ ಖುಷಿಯಾಯಿತು. ಸಂಹಾರ ಚಿತ್ರ ನಿಜವಾಗಿಯೂ ಸಖತ್ ಆಗಿದೆ. ಗುರುದೇಶ್ ಪಾಂಡೆ ಸರ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಚಿಕ್ಕಣ್ಣ ಅವರ ನಟನೆ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಮ್ಮ ಅಣ್ಣನ ಬಗ್ಗೆ ಏನೂ ಹೇಳುವ ಹಾಗಿಲ್ಲ ಎಂದು ಧ್ರುವ ಸರ್ಜಾ ಹೊಗಳಿದರು.

    ಅಷ್ಟೇ ಅಲ್ಲದೇ ಹರಿಪ್ರಿಯಾರ ಅಮೋಘ ನಟನೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಈ ಬಾರಿ ಹರಿಪ್ರಿಯಾ ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತುಂಬಾನೇ ಎಂಟರ್‍ಟೈನ್‍ಮೆಂಟ್ ಜೊತೆ ಕಾಮಿಡಿಯನ್ನು ಹೊಂದಿದೆ. ಸಂಹಾರ ಇಡೀ ಕುಟುಂಬ ನೋಡುವಂತಹ ಸಿನಿಮಾವಾಗಿದ್ದು, ಮತ್ತೊಮ್ಮೆ ನೋಡಬೇಕು ಎಂಬ ಆಸೆ ಆಗುತ್ತದೆ. ದಯವಿಟ್ಟು ಈ ಸಿನಿಮಾ ನೋಡಿ. ಇದೊಂದು ಫ್ಯಾಮಿಲಿ ಜೊತೆ ನೋಡುವಂತಹ ಸಿನಿಮಾ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ವಿಭಿನ್ನ ರೀತಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಿಳಿಸಿದರು.

  • ಕೇವಲ 15 ನಿಮಿಷದ ಪಾತ್ರಕ್ಕಾಗಿ 30 ಕೆ.ಜಿ. ತೂಕ ಇಳಿಸಿದ ಧೃವ ಸರ್ಜಾ

    ಕೇವಲ 15 ನಿಮಿಷದ ಪಾತ್ರಕ್ಕಾಗಿ 30 ಕೆ.ಜಿ. ತೂಕ ಇಳಿಸಿದ ಧೃವ ಸರ್ಜಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ‘ಪೊಗರು’ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಧೃವ ಸರ್ಜಾ ಚಿತ್ರದಲ್ಲಿ ಬರುವ 15 ನಿಮಿಷದ ಪಾತ್ರಕ್ಕಾಗಿ ಬರೋಬ್ಬರಿ 15 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

    ನಂದ ಕಿಶೋರ್ ನಿರ್ದೇಶನದಲ್ಲಿ ‘ಪೊಗರು’ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣವೂ ನಡೆದಿದ್ದು, ಧೃವ ಸರ್ಜಾ ಶೂಟಿಂಗ್ ನಲ್ಲಿ ಬ್ಯೂಸಿ ಆಗಿದ್ದಾರೆ. ಚಿತ್ರದಲ್ಲಿ ನಾಯಕ ನಟನ ಬಾಲ್ಯ ಜೀವನದ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಬಂದರೆ ಸಾಮಾನ್ಯವಾಗಿ ಆ ಪಾತ್ರಕ್ಕಾಗಿ ಬಾಲ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ.

    ಪೊಗರು ಸಿನಿಮಾದಲ್ಲಿ ನಾಯಕನ ಬಾಲ್ಯದ 7ನೇ ಕ್ಲಾಸ್ ವಿದ್ಯಾರ್ಥಿಯ 15 ನಿಮಿಷದ ಫ್ಲ್ಯಾಶ್ ಬ್ಯಾಕ್ ಸೀನ್‍ಗಾಗಿ ಚಿತ್ರತಂಡ ಬಾಲ ಕಲಾವಿದರನ್ನು ಬಳಸಿಕೊಳ್ಳಲು ತೀರ್ಮಾನಿಸಿತ್ತು. ಧೃವ ಸರ್ಜಾ ಮಾತ್ರ ಆ ಪಾತ್ರವನ್ನು ತಾವೇ ನಿರ್ವಹಿಸುವುದಾಗಿ ತಿಳಿಸಿ, 30 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡು ಬಾಲಕನಾಗಿ ಕಾಣಿಸಿಕೊಂಡಿದ್ದಾರೆ. 7ನೇ ಕ್ಲಾಸ್ ವಿದ್ಯಾರ್ಥಿ ಪಾತ್ರದಲ್ಲಿ ಧೃವ ಸರ್ಜಾ ಗುರುತು ಸಿಗದ ರೀತಿಯಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ.

    ಚಿತ್ರದ ಕಥೆ ಟ್ವಿಸ್ಟ್ ನಿಂದ ಒಳಗೊಂಡಿದ್ದು, 15 ನಿಮಿಷಕ್ಕೊಮ್ಮೆ ನೋಡುಗರಿಗೆ ರೋಮಾಂಚನವನ್ನು ನೀಡಲಿದೆ. ಪಾತ್ರಕ್ಕಾಗಿ ಧೃವ ಸರ್ಜಾ ಡೆಡಿಕೇಷನ್ ಮೆಚ್ಚುವಂತಹದ್ದು ಎಂದು ನಿರ್ದೇಶಕ ನಂದ ಕಿಶೋರ್ ಹೇಳಿದ್ದಾರೆ.

    ಈ ಹಿಂದೆ ಕಾಲಿವುಡ್‍ನಲ್ಲಿ ನಟರಾದ ಸೂರ್ಯ ಮತ್ತು ಧನುಷ್ ತೂಕ ಇಳಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ನೆನಪಿರಲಿ ಪ್ರೇಮ್ ಕೂಡ ‘ಚಾರ್ ಮಿನಾರ್’ ಸಿನಿಮಾದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ಮೂಲಕ ಹೈಸ್ಕೂಲ್ ವಿದ್ಯಾರ್ಥಿಯಾಗಿ ನಟಿಸಿದ್ದರು. ಬಾಲಿವುಡ್‍ನಲ್ಲಿ ಸಹ ಈ ರೀತಿಯ ಪ್ರಯೋಗಗಳು ಸಹ ನಡೆದಿವೆ. ಸೂಪರ್ ಹಿಟ್ ‘ದಂಗಲ್ ಸಿನಿಮಾಗಾಗಿ ಆಮೀರ್ ಖಾನ್ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಟಾಲಿವುಡ್‍ನಲ್ಲಿ ಅನುಷ್ಕಾ ಶೆಟ್ಟಿ ತಮ್ಮ ‘ಸೈಜ್ ಜೀರೋ’ ಸಿನಿಮಾಗಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದರು.

  • ಬೆಳ್ಳಂಬೆಳಗ್ಗೆ ನೆರವೇರಿತು ‘ಪೊಗರು’ ಚಿತ್ರದ ಮೂಹೂರ್ತ

    ಬೆಳ್ಳಂಬೆಳಗ್ಗೆ ನೆರವೇರಿತು ‘ಪೊಗರು’ ಚಿತ್ರದ ಮೂಹೂರ್ತ

    ಬೆಂಗಳೂರು: ಭರ್ಜರಿ ಖ್ಯಾತಿಯ ಧ್ರುವ ಸರ್ಜಾ ನಟಿಸಲು ಸಜ್ಜಾಗಿರುವ `ಪೊಗರು’ ಚಿತ್ರದ ಮುಹೂರ್ತ ಇಂದು ಬೆಳ್ಳಂಬೆಳಗ್ಗೆ ನೆರವೇರಿತು.

    ಬಸವೇಶ್ವರ ನಗರದ ಗಣಪತಿ ಸನ್ನಿಧಿಯಲ್ಲಿ ಚಿತ್ರದ ಮೂಹರ್ತ ಸಮಾರಂಭ ನಡೆದಿದ್ದು, ಚಿತ್ರದ ನಾಯಕ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್ ಮತ್ತು ನಿರ್ಮಾಪಕ ಗಂಗಾಧರ್ ಉಪಸ್ಥಿತರಿದ್ದರು. ಧ್ರುವ ಸರ್ಜಾ ಮತ್ತು ನಂದಕಿಶೋರ್ ಸಾರಥ್ಯದ ಚೊಚ್ಚಲ ಸಿನಿಮಾ ಇದಾಗಿದ್ದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

    ಈ ಚಿತ್ರದಲ್ಲಿ ಮೂರು ಶೇಡ್‍ ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿದ್ದು, ಸ್ಕೂಲ್ ಲೈಫ್ ಕ್ಯಾರೆಕ್ಟರ್ ಗಾಗಿ ತಮ್ಮ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನೂ ಈ ಸಿನಿಮಾದ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದು ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆಗಳಿವೆ.

  • ಶಿವಣ್ಣ, ಧ್ರುವ ಸರ್ಜಾ ಒಟ್ಟಾಗಿ  ಮಫ್ತಿ ವೀಕ್ಷಿಸಿ, ಕೇಕ್ ಕಟ್ ಮಾಡಿದ್ರು

    ಶಿವಣ್ಣ, ಧ್ರುವ ಸರ್ಜಾ ಒಟ್ಟಾಗಿ ಮಫ್ತಿ ವೀಕ್ಷಿಸಿ, ಕೇಕ್ ಕಟ್ ಮಾಡಿದ್ರು

    ಬೆಂಗಳೂರು: ಮಫ್ತಿ ಸಿನಿಮಾವನ್ನು ಬೆಂಗಳೂರಿನ ಸಂತೋಷ್ ಥಿಯೇಟರ್ ನಲ್ಲಿ ಶಿವರಾಜ್‍ಕುಮಾರ್ ಮತ್ತು ಧ್ರುವ ಸರ್ಜಾ ಒಟ್ಟಿಗೆ ನೋಡಿದ್ದಾರೆ. ಭರ್ಜರಿ ಸಿನಿಮಾದ 80ನೇ ದಿನದ ಸಂಭ್ರಮಕ್ಕಾಗಿ ಧ್ರುವ ಸರ್ಜಾ ನರ್ತಕಿ ಚಿತ್ರಮಂದಿರಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಶಿವರಾಜ್‍ಕುಮಾರ್ ಜೊತೆ ಸೇರಿ ಧ್ರುವ ಸರ್ಜಾ ಮಫ್ತಿ ಸಿನಿಮಾವನ್ನು ನೋಡಿದ್ದಾರೆ.

    ಅಭಿಮಾನಿಗಳು ತಂದ ಕೇಕ್ ಕಟ್ ಮಾಡಿ ಇಬ್ಬರೂ ನಟರು ಸಂಭ್ರಮಿಸಿದ್ದಾರೆ. ಈ ಎಂಗ್ ಆಂಡ್ ಎರ್ನಜಿಟಿಕ್ ಸ್ಟಾರ್ ಗಳನ್ನ ಒಟ್ಟಿಗೆ ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ.

    ಧ್ರುವ ಸರ್ಜಾ ನಟ ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು ಹಾಗೂ ಧ್ರುವ ಸರ್ಜಾರ ಕೋರಿಕೆಗೆ ಶಿವಣ್ಣ ಓಗೊಟ್ಟು ಕೇಕ್ ಕಟ್ ಮಾಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳ ನಡುವೆ ನೂಕುನುಗ್ಗಲಾಯಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

     

  • ಪೊಗರು ಸಿನ್ಮಾದಲ್ಲಿ ಧ್ರುವ ಪಕ್ಕ ನಿಲ್ತಾರೆ ಕನ್ನಡದ ಹುಡುಗಿ

    ಪೊಗರು ಸಿನ್ಮಾದಲ್ಲಿ ಧ್ರುವ ಪಕ್ಕ ನಿಲ್ತಾರೆ ಕನ್ನಡದ ಹುಡುಗಿ

    ಬೆಂಗಳೂರು: ಏಳು ವರ್ಷಗಳಲ್ಲಿ ನಟ ಧ್ರುವ ಸರ್ಜಾ ಮಾಡಿದ್ದು ಮೂರು ಸಿನಿಮಾ. ಆದರೆ ಐವತ್ತು ಸಿನಿಮಾ ಮಾಡಿದಷ್ಟು ಹೆಸರು ಗಳಿಸಿದ್ದಾರೆ. ಅದ್ದೂರಿ, ಬಹಾದ್ದೂರ್ ಮತ್ತು ಭರ್ಜರಿ ಈ ಮೂರು ಸಿನಿಮಾಗಳು ಗೆದ್ದ ಹೊಡೆತಕ್ಕೆ ಹ್ಯಾಟ್ರಿಕ್ ಪ್ರಿನ್ಸ್ ಆಗಿಬಿಟ್ಟರು.

    ಮೂರು ಸಿನಿಮಾಗಳ ಗೆಲುವು ಧ್ರುವ ಹೆಗಲ ಮೇಲೆ ಇನ್ನಷ್ಟು ದೊಡ್ಡ ಜವಾಬ್ದಾರಿ, ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಎಲ್ಲವನ್ನೂ ಅಳೆದು ತೂಗಿ ಧ್ರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇವರ ಅಭಿನಯದ ನಾಲ್ಕನೇ ಸಿನಿಮಾ `ಪೊಗರು’ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದೆ. ಆದರೆ ಈ ಸಿನಿಮಾದ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಆದರೆ ಧ್ರುವ ಜೊತೆ ಕನ್ನಡ ನಟಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಪರಭಾಷೆ ಹೀರೊಯಿನ್ ಗಳಿಗೆ ಮಣೆ ಹಾಕುವ ಬದಲು ಕನ್ನಡ ಹುಡುಗಿಯರಿಗೇ ಚಾನ್ಸ್ ಕೊಡಲು ಧ್ರುವ ಅಂಡ್ ಟೀಮ್ ನಿರ್ಧರಿಸಿದೆ. ಹೊಸ ನಾಯಕಿಯ ಜಾಗದಲ್ಲಿ ಕನ್ನಡತಿಯರಾದ ಕಿರಿಕ್ ಪಾರ್ಟಿಯ ಲಕ್ಕಿ ಗರ್ಲ್ ರಶ್ಮಿಕಾ ಮಂದಣ್ಣ ಅಥವಾ ಅತಿರಥ ಸಿನಿಮಾದ ನಾಯಕಿ ಲತಾ ಹೆಗಡೆ ನಿಲ್ಲಲಿದ್ದಾರೆ. ಆದರೆ ಈ ಬಗ್ಗೆ ಸಿನಿಮಾ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.

    ಶೃತಿ ಹಾಸನ್ ಔಟ್: ಈ ಹಿಂದೆಯೆ ಪೊಗರು ಸಿನಿಮಾಗಾಗಿ ಬಾಲಿವುಡ್ ನಟಿ, ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಅವರನ್ನು ಅಪ್ರೋಚ್ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಕುರಿತು ನಟಿ ಶೃತಿ ಹಾಸನ್, ನಾನು ಯಾವುದೇ ಕನ್ನಡ ಚಿತ್ರದಲ್ಲಿ ನಟಿಸುತ್ತಿಲ್ಲ. ಕನ್ನಡದ ಯಾವುದೇ ನಿರ್ದೇಶಕ, ನಿರ್ಮಾಪಕರೂ ನನ್ನನ್ನು ಅಪ್ರೋಚ್ ಮಾಡಿಲ್ಲ. ಕನ್ನಡದಲ್ಲಿ ನಟಿಸಲು ಆಫರ್ ಬಂದಿಲ್ಲ, ಒಂದು ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ಕನ್ನಡದಲ್ಲಿ ನಟಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

    ಪೊಗರು ಸಿನಿಮಾ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರಲಿದೆ. ಸಿನಿಮಾ ಅಪ್ಪಟ ಸ್ವಮೇಕ್ ಕಥೆಯನ್ನು ಒಳಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನೂ ಭರ್ಜರಿ ಸಿನಿಮಾ 50 ದಿನಗಳನ್ನೂ ಪೂರೈಸಿ ಮುನ್ನುಗುತ್ತಿದೆ. ಇತ್ತೀಚೆಗೆ ಚಿತ್ರತಂಡದ 50ನೇ ದಿನಗಳ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದೆ.

     

  • ಮತ್ತೊಬ್ಬ ಹುಡುಗನ ಜೊತೆ ರಚಿತಾ ಅಫೇರ್? ಡೇಟಿಂಗ್ ಸುದ್ದಿ ಬಗ್ಗೆ ಗುಳಿಕೆನ್ನೆಯ ಹುಡುಗಿ ಹೇಳಿದ್ದು ಹೀಗೆ

    ಮತ್ತೊಬ್ಬ ಹುಡುಗನ ಜೊತೆ ರಚಿತಾ ಅಫೇರ್? ಡೇಟಿಂಗ್ ಸುದ್ದಿ ಬಗ್ಗೆ ಗುಳಿಕೆನ್ನೆಯ ಹುಡುಗಿ ಹೇಳಿದ್ದು ಹೀಗೆ

    ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಹರಣ್ ರಾಜ್ ಎಂಬ ಹುಡುಗ ರಚಿತಾ ಎಲ್ಲಿರುತ್ತಾರೊ ಅಲ್ಲಿರುತ್ತಾನೆ, ರಚಿತಾ ಎಲ್ಲಿ ಹೋಗುತ್ತಾರೊ ಅಲ್ಲಿ ಹಾಜರಿರುತ್ತಾನೆ ಎನ್ನುವ ಮಾತು ಕೇಳಿ ಬಂದಿತ್ತು. ಎರಡು ದಿನಗಳ ಹಿಂದೆ ನಡೆದ ಭರ್ಜರಿ ಚಿತ್ರದ ಐವತ್ತನೇ ದಿನದ ಸಂಭ್ರಮದಂದೂ ಈತ ರಚಿತಾ ಜೊತೆಗಿದ್ದ. ಹಾಗಂತ ನೋಡಿದವರು ಹೇಳುತ್ತಿದ್ದಾರೆ. ಇವರಿಬ್ಬರ ಓಡಾಟ ನೋಡಿಯೇ ಗಾಸಿಪ್ ಸುದ್ದಿ ಹರಡುವ ಸದಸ್ಯರು `ಇಬ್ಬರ ನಡುವೆ ಕುಚ್ ಕುಚ್ ಹೋ ರಹಾ ಹೈ…’ ಎಂದು ಬ್ಯಾಂಡ್ ಬಾರಿಸಿದ್ದರು. ಇದರ ಬೆನ್ನಿಗೆ ಹರಣ್‍ರಾಜ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದ್ದವು.

    ಯಾರು ಈ ಹರಣ್ ರಾಜ್?
    ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಹರಣ್ ರಾಜ್ ಗೆ ರ‍್ಯಾಂಕ್‌ ಸ್ಟುಡೆಂಟ್ ಕ್ರೆಡಿಟ್ ಇದೆ. ರಾಜಕಾರಣಿಯೊಬ್ಬರ ಕುಟುಂಬಕ್ಕೆ ಹತ್ತಿರದ ಸಂಬಂಧಿಯಾಗಿರುವ ಹರಣ್ ರಾಜ್‍ಗೆ ರಚಿತಾ ಮಾತ್ರ ಅಲ್ಲ, ಇನ್ನು ಕೆಲವು ನಟಿಯರ ಪರಿಚಯವೂ ಇದೆಯಂತೆ. ಮಜಾ ಅಂದರೆ ರಚಿತಾಗಿಂತ ಈತ ಮೂರು ನಾಲ್ಕು ವರ್ಷ ಚಿಕ್ಕವನೂ ಹೌದು. `ಪ್ರೀತಿಗೆ ವಯಸ್ಸು ಗಿಯಸ್ಸು ಲೆಕ್ಕಕ್ಕೆ ಬರಲ್ಲ ಬಿಡ್ರಿ’ ಎಂದು ಗಾಸಿಪ್ ಪಂಡಿತರು ಒಂದೇ ಸಾಲಿನಲ್ಲಿ ಇಬ್ಬರ ನಡುವೆ ಲವಿ ಡವ್ವಿ ನಡೆದಿದೆ ಎಂದು ಷರಾ ಬರೆದುಬಿಟ್ಟರು.

    ರಚಿತಾ ಅವರಿಗೆ ಇಂಥ ಸುದ್ದಿಗಳು ಹೊಸದೇನಲ್ಲ. ಈ ಹಿಂದೆ ಭರ್ಜರಿ ಹುಡುಗ ಧ್ರುವ ಸರ್ಜಾ ಜೊತೆಗೂ ರಚಿತಾರ ನಂಟು ಬೆಸೆದಿದ್ದರು. ಇನ್ನೇನು ಎಂಗೇಂಜ್‍ಮೆಂಟ್ ಎದುರಿಗೆ ನಿಂತಿದೆ, ಮದುವೆ ಬಾಕಿ ಎನ್ನುವ ಮಾತು ಊರ ಬಾಯಿಗೆ ಎಲೆ ಅಡಿಕೆಯಾಗಿತ್ತು. ಈಗ ನೋಡಿದರೆ ಹರಣ್ ರಾಜ್ ಜೊತೆ ಗುಳಿಕೆನ್ನೆಯ ಪ್ರೇಮ ಪಲ್ಲವಿ ಚರಣ ನಡೆಯುತ್ತಿದೆ ಎನ್ನುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ರಚಿತಾ ಏನು ಮಾಡಿದರೂ `ಮಾಂಗಲ್ಯಂ ತಂತು ನಾನೇನಾ’ ಅನ್ನೋದೇ ಫೈನಲ್ ಟಚ್ ಆಗುತ್ತಿದೆ. ಇದಕ್ಕೆಲ್ಲ ಈಗ ರಚಿತಾ ರಾಮ್ ಪ್ರತಿಕ್ರಿಯೆ ನೀಡಿ ಈ ಗಾಸಿಪ್ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

    ರಚಿತಾ ಹೇಳಿದ್ದು ಹೀಗೆ:
    ನಾನು ಆ ಇಶ್ಯೂ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಹುಡುಗ ನನ್ನ ಒಳ್ಳೆ ಸ್ನೇಹಿತ, ನನಗಿಂತ 4 ವರ್ಷ ಚಿಕ್ಕವನು. ನನ್ನ ತಂದೆ-ತಾಯಿ ಕೂಡ ತುಂಬಾ ಬೋಲ್ಡ್ ಆಗಿ ಇಂಥ ವಿಷ್ಯ ರಿಸೀವ್ ಮಾಡ್ತಾರೆ. ಆದ್ರೆ ಆ ಹುಡುಗನ ತಂದೆ-ತಾಯಿ ಯಾವ ರೀತಿ ರಿಯಾಕ್ಟ್ ಮಾಡ್ತಾರೆ? ಕಾಮನ್ ಮ್ಯಾನ್ ಇಂಥ ವಿಚಾರಗಳನ್ನು ಯೋಚನೆ ಮಾಡೋ ರೀತೀನೆ ಬೇರೆ. ಆ ಹುಡುಗ ಸಿವಿಲ್ ಇಂಜಿನಿಯರಿಂಗ್ ಸ್ಟೂಡೆಂಟ್. ಮತ್ತೆ ಆ ಹುಡುಗನಿಗೆ ಬಹಳಷ್ಟು ಹೀರೋಯಿನ್‍ಗಳ ಪರಿಚಯ ಇದೆ ಅಂತೆಲ್ಲ ಸುದ್ದಿಯಾಗಿದೆ. ಅದೆಲ್ಲ ಶುದ್ದ ಸುಳ್ಳು. ಅವ್ನಿಗೆ ನಾನು ಬಿಟ್ರೆ ಬೇರೆ ಯಾವ ಹೀರೊಯಿನ್‍ಗಳ ಪರಿಚಯ ಇಲ್ಲ. ಆ ಹುಡುಗ ನನ್ನ ಫ್ರೆಂಡ್ ರಿಲೇಟಿವ್ ಎಂದು ಹೇಳಿದ್ದಾರೆ.

    ಅವ್ರ ಮನೆಯಲ್ಲಿ ಫಂಕ್ಷನ್, ಪಾರ್ಟಿ ಆದ್ರೆ ನಾವೆಲ್ಲಾ ಒಟ್ಟಿಗೆ ಸೇರ್ತಿವಿ. ಎಲ್ಲಾ ಕಡೆ ಹರಿದಾಡ್ತಿರೋ ಫೋಟೊ 1 ವರ್ಷದ ಹಳೇದು. ಆ ಫೋಟೋ ಇಟ್ಕೊಂಡು ಈ ರೀತಿ ಗಾಸಿಪ್ ಹರಡಿಸ್ತಿದ್ದಾರೆ. ನನಗೆ ಹಲವರು ಸ್ನೇಹಿತರಿದ್ದಾರೆ. ಅವ್ರೆಲ್ಲಾ ಫೋಟೊ ತೆಗೆಸಿಕೊಂಡು ಪೋಸ್ಟ್ ಮಾಡಿದ್ರೆ ನನಗೆ ಅವ್ರ ಜೊತೆ ಅಫೇರ್ ಇದೆ ಅಂತ ಆಗುತ್ತಾ? ನನಗಿಂತ 4 ವರ್ಷ ಚಿಕ್ಕ ಹುಡುಗನ ಜೊತೆ ಸುತ್ತಾಡೊಕೆ ನನಗೆ ತಲೆ ಇಲ್ವಾ? ರಚಿತಾ – ಧ್ರುವಾ ಸರ್ಜಾ ಮದುವೆ ಆಗ್ತಾರೆ ಅಂತ ಗಾಸಿಪ್ ಹಬ್ಬಿಸಿದ್ರು. ಇನ್ನು ಎಷ್ಟು ಜನ ನನ್ನ ಕೋ-ಸ್ಟಾರ್‍ಗಳ ಜೊತೆ ನನಗೆ ಮದುವೆ ಮಾಡಿಸ್ತಾರೊ ಗೊತ್ತಿಲ್ಲ. ಆದ್ರೆ ಆ ಹುಡುಗನ ಪರಿಸ್ಥಿತಿ ಯೋಚಿಸಿದ್ರೆ ಭಯ ಆಗುತ್ತೆ. ನನ್ನ ಮದುವೆ ಬಗ್ಗೆ ಇನ್ನೂ ಸೀರಿಯಸ್ ಆಗಿ ಯೋಚನೆ ಮಾಡಿಲ್ಲ. ಎಲ್ಲರಂತೆ ನಾನೂ ಮದುವೆ ಆಗ್ತೀನಿ. ಹುಡುಗ ಫೈನಲ್ ಆದ್ಮೇಲೆ ಎಲ್ಲರಿಗೂ ಹೇಳ್ತಿನಿ. ಆಂಜನೇಯನ ಆಣೆಗೂ ನಾನು ಯಾವುದೇ ಹುಡುಗನ ಜೊತೆ ಡೇಟ್ ಮಾಡ್ತಿಲ್ಲ ಎಂದು ರಚಿತಾ ರಾಮ್ ಹೇಳುವ ಮೂಲಕ ಗಾಸಿಪ್ ಸುದ್ದಿಗೆ ಫುಲ್‍ಸ್ಟಾಪ್ ಹಾಕಿದರು.

    ಇಲ್ಲಿಗೆ ರಚಿತಾ ರಾಮ್ ನಕಲಿ ಪ್ರೇಮ ಪುರಾಣ ಈ ರೀತಿ ಮುಕ್ತಾಯವಾಗಿದೆ. ಸಿನಿಮಾ ರಂಗದಲ್ಲಿ ಇದು ಕಾಮನ್. ಒಂದು ಜೋಡಿ ಕಂಟಿನ್ಯೂ ಆಗಿ ಎರಡು ಮೂರು ಸಿನಿಮಾಗಳಲ್ಲಿ ನಟಿಯಾದ ತಕ್ಷಣ ಅವರ ನಡುವೆ ಲಿಂಕ್ ಹಚ್ಚುತ್ತಾರೆ, ಸಿನಿಮಾಕ್ಕೆ ಸಂಬಂಧಪಡದ ವ್ಯಕ್ತಿ ಜೊತೆಗಿದ್ದರೂ ಗಂಟು ಹಾಕುತ್ತಾರೆ. ಇದಕ್ಕೆಲ್ಲ ರಚಿತಾ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಹಾಗಂತ ಅವರೇ ಹೇಳುತ್ತಾರೆ. ಆದರೆ ನೀವು ತಲೆ ಕೆಡಿಸಿಕೊಂಡರೂ ಬಿಟ್ಟರೂ, ನಾವು ಮಾತ್ರ ಆಗಾಗ ಇಂಥ ಹುಳವನ್ನು ಎಲ್ಲರ ತಲೆಗೆ ಬಿಡುತ್ತಿರುತ್ತೇವೆ ಎನ್ನುತ್ತಿದೆ ಬಣ್ಣದ ಲೋಕದ ಬೆರಕಿ ದೇಹಗಳು. ಎಲುಬಿಲ್ಲದ ನಾಲಿಗೆಗೆ ನೀತಿ ಕಲಿಸಲು ಸಾಧ್ಯವೆ?

     

  • ಭರ್ಜರಿಯಾಗಿ ಹೊಳೀತಿದೆ ಸಿಂಪಲ್ ಧ್ರುವ ನಕ್ಷತ್ರ- ಹೆಚ್ಚಾಯಿತು ಧ್ರುವ ಸರ್ಜಾ ಸಂಭಾವನೆ

    ಭರ್ಜರಿಯಾಗಿ ಹೊಳೀತಿದೆ ಸಿಂಪಲ್ ಧ್ರುವ ನಕ್ಷತ್ರ- ಹೆಚ್ಚಾಯಿತು ಧ್ರುವ ಸರ್ಜಾ ಸಂಭಾವನೆ

    ಬೆಂಗಳೂರು: ನಟ ಧ್ರುವ ಸರ್ಜಾ ಬಗ್ಗೆ ಗಾಂಧಿನಗರದಲ್ಲೊಂದು ಸುದ್ದಿ ಹಬ್ಬಿತ್ತು. ಧ್ರುವ ತಮ್ಮ ಮುಂದಿನ ಸಿನಿಮಾಕ್ಕೆ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಈ ಸುದ್ದಿಗೆ ನಟ ಧ್ರುವ ಉತ್ತರಿಸಿದ್ದು, ಹೌದು ನಾನು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ.

    ಅಂದಹಾಗೆ ಕಳೆದ ಕೆಲ ತಿಂಗಳಿಂದ ಧ್ರುವ ಸರ್ಜಾ ಸಂಭಾವನೆ ಬಗ್ಗೆ ಭಾರೀ ಚರ್ಚೆಯಾಗುತ್ತಿತ್ತು. ಪೊಗರು ಚಿತ್ರಕ್ಕಾಗಿ ನಿರ್ಮಾಪಕ ಗಂಗಾಧರ್ ಅವರಿಗೆ, ಪೊಗರು ನಂತರದ ಚಿತ್ರಕ್ಕಾಗಿ ಉದಯ್ ಕೆ ಮೆಹ್ತಾರಿಗೆ ಹಾಗು ಜಗ್ಗುದಾದ ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಡೇಟ್ಸ್ ಕೊಟ್ಟಿರುವ ಧ್ರುವ ಬರೋಬ್ಬರಿ 6 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಸುದ್ದಿ ಇತ್ತು. ಆ ವಿಷಯ ಗಾಸಿಪ್ ಅಲ್ಲ, ನಿಜ ಅನ್ನೋದು ಇದೀಗ ಪ್ರೂವ್ ಆಗಿದೆ.

    ಇದನ್ನೂ ಓದಿ: 50 ನೇ ದಿನ ಪೂರೈಸಿ ಸಾಗುತ್ತಿರುವ `ಭರ್ಜರಿ`ಯ ಕಲೆಕ್ಷನ್ ಎಷ್ಟು ಗೊತ್ತಾ?

    ಧ್ರುವ ಕ್ಟಾಂಟಿಟಿಗಿಂತ ಕ್ವಾಲಿಟಿ ಚಿತ್ರಕ್ಕೆ ಒತ್ತು ಕೊಡೊತ್ತಾರೆ. ಹೀಗಾಗಿಯೇ ಇದುವರೆಗೂ ಇಂಡಸ್ಟ್ರಿಯಲ್ಲಿ ಸ್ಟ್ಯಾಂಡ್ ಆಗೋದಕ್ಕಾಗಿ ಯೋಚನೆ ಮಾಡಿ ಸಿನಿಮಾ ಮಾಡಿದ್ದಾರೆ. ಆದರೆ ಈಗ ಇವರ ರೇಂಜ್ ಸಿಕ್ಕಾಪಟ್ಟೆ ಬದಲಾಗಿದೆ. ಟಾಪ್ ಸ್ಟಾರ್ ನಟರ ಲಿಸ್ಟ್ ಗೆ ಧ್ರುವ ಸೇರ್ಪಡೆಯಾಗಿದ್ದಾರೆ. ಇದುವರೆಗಿನ ಸ್ಯಾಂಡಲ್‍ವುಡ್ ಇತಿಹಾಸದಲ್ಲಿಯಲ್ಲಿ ನಾಲ್ಕನೇ ಸಿನಿಮಾಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ಪಡೆದಿರೋ ನಟ ಇನ್ನೊಬ್ಬರಿಲ್ಲ. ಆ ದಾಖಲೆಗೆ ಧ್ರುವ ಎಂಟ್ರಿಯಾಗಿದ್ದಾರೆ.

    ಚೇತನ್ ಕುಮಾರ್ ಅವರ ನಿರ್ದೇಶನ ಮಾಡಿದ್ದು, ನಟಿ ರಚಿತಾ ರಾಮ್, ಹರಿಪ್ರಿಯ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

     

    https://www.youtube.com/watch?v=6LgGIqjKHSg

    https://www.youtube.com/watch?v=NGmvPSFlobs