Tag: dhruva sarja

  • ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ

    ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ

    ಬೆಂಗಳೂರು: ಟ್ವಿಟ್ಟರ್ ಚಾಲೆಂಜ್‍ನಲ್ಲಿ ಧ್ರುವ ಸರ್ಜಾ, ಚಿರುನನ್ನು ನೆನೆದು ನನ್ನ ಗುರು ನನ್ನ ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ.

    ಯುವರತ್ನ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಚಿತ್ರದ ಪ್ರೋಮೋಷನ್ ಶುರುವಾಗಿದೆ. ಚಿತ್ರತಂಡ ಟ್ವಿಟ್ಟರ್‍ನಲ್ಲಿ ಒಂದು ಚಾಲೆಂಜ್ ಕಂಟೆಸ್ಟ್ ಆರಂಭಿಸಿದ್ದಾರೆ. ನಿಮ್ಮ ಜೀವನದಲ್ಲಿ ನಿಮ್ಮನ್ನು ಸರಿ ದಾರಿಗೆ ನಡೆಸಿದ ಗುರುವಿನ ಫೋಟೋ ಹಾಕುವ ಮೂಲಕವಾಗಿ ಪರಿಚಯಿಸಬೇಕು ಎಂದು ಹೇಳಿದ್ದರು. ತಮ್ಮ ನೆಚ್ಚಿನ ಗುರುವನ್ನು ಧ್ರುವ ಸರ್ಜಾ ಪರಿಚಯಿಸಿ ಧನ್ಯವಾದ ತಿಳಿಸಿದ್ದಾರೆ.

    ಧ್ರುವ ಸರ್ಜಾ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯನಾದೆ, ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದೆ, ನನ್ನ ಅಣ್ಣ ನನ್ನ ಗುರು ಎಂದು ಬರೆದುಕೊಂಡಿದ್ದಾರೆ.

    ಚಿರುವನ್ನು ಕಳೆದುಕೊಂಡ ಧ್ರುವ ಸರ್ಜಾ ತಮ್ಮ ಅಣ್ಣನನ್ನ ನೆನೆದು ಕಣ್ಣಿರು ಹಾಕುತ್ತಾ ಬೇಸರವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕೆಆರ್‍ಜಿ ಸ್ಟೂಡಿಯೋ ಸಂಸ್ಥೆ ಮಾಲೀಕನಾದ ಕಾರ್ತಿಕ್ ಗೌಡ ಅವರು ಹಾಕಿರುವ ಚಾಲೆಂಜ್ ಸ್ವೀಕರಿಸಿದ ಧ್ರುವ ಸರ್ಜಾ ಅಣ್ಣನನ್ನು ತನ್ನ ಗುರು ಎಂದು ಹೇಳಿದ್ದಾರೆ.

    ಯುವರತ್ನ ಸಿನಿಮಾ ತಂಡ ಹಾಕಿರುವ ಚಾಲೆಂಜ್‍ಅನ್ನು ಹಲವು ನಟ ನಟಿಯರು, ನಿರ್ದೇಶಕರು ತಮ್ಮ ನೆಚ್ಚಿನ ಗುರುವನ್ನು ಪರಿಚಯಿಸುವ ಮೂಲಕವಾಗಿ ಜೀವನದಲ್ಲಿ ಹೊಸ ದಾರಿ ತೋರಿಸಿಕೊಟ್ಟ ಗುರುವಿಗೆ ಧನ್ಯವಾದವನ್ನು ಈ ಮೂಲಕವಾಗಿ ಹೇಳುತ್ತಿದ್ದಾರೆ.

  • ಮನವಿಯನ್ನು ಪುರಸ್ಕರಿಸಿ, ಆಶೀರ್ವದಿಸಿ – ಮೌನ ಮುರಿದ ಧ್ರುವ ಸರ್ಜಾ

    ಮನವಿಯನ್ನು ಪುರಸ್ಕರಿಸಿ, ಆಶೀರ್ವದಿಸಿ – ಮೌನ ಮುರಿದ ಧ್ರುವ ಸರ್ಜಾ

    ಬೆಂಗಳೂರು: ಪೊಗರು ವಿವಾದದ ಬಗ್ಗೆ ನಟ ಧ್ರುವ ಸರ್ಜಾ ಮೌನ ಮುರಿದಿದ್ದು, ಟ್ವೀಟ್ ಮಾಡುವ ಮೂಲಕ ಆರೋಪಗಳಿಗೆ ಉತ್ತರ ನೀಡಿದ್ದಾರೆ.

    ನಮ್ಮ ಇಡೀ ಕುಟುಂಬ ಹನುಮ ಭಕ್ತರು. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತ, ಗೌರವಿಸುತ್ತ ಬದುಕುತ್ತಿದೆ. ತಾತನವರ ಕಾಲದಿಂದಲೂ ಹಿಂದುತ್ವದ ಪ್ರತಿಪಾದಕರಾಗಿಯೇ ಬದುಕುತ್ತಿದ್ದೇವೆ. ಕಲೆಯೇ ಧರ್ಮ, ನಾವು ಎಲ್ಲ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ ಎಂದು ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.

    ನೋವಾಗಿದ್ದಕ್ಕಾಗಿಯೇ ಬೇಷರತ್ ಕ್ಷಮೆ ಕೇಳುತ್ತಿದ್ದೇನೆ. ನಿಮಗೆ ಬೇಸರವಾಗಿರುವ ದೃಶ್ಯಗಳನ್ನು ಕತ್ತರಿಸಿದ್ದೇವೆ. ಮತ್ತೆ ಸೆನ್ಸಾರ್ ಆದಮೇಲೆ ನಿಮ್ಮೆದುರು ಮಾತನಾಡೋಣ ಎಂದು ನಾನೇ ನಿರ್ಧರಿಸಿದ್ದೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞರ ತಂಡ ಸಿದ್ಧವಾಗಿದೆ. ನನ್ನ ಮನವಿಯನ್ನು ಪುರಸ್ಕರಿಸಿ ಎಂದಿನಂತೆ ನಿಮ್ಮ ಆಶೀರ್ವಾದವಿರಲಿ, ಜೈ ಹನುಮಾನ್ ಎಂದು ಧ್ರುವ ಸರ್ಜಾ ಬೇಷರತ್ ಕ್ಷಮೆಯಾಚಿಸಿದ್ದಾರೆ.

    ಚಿತ್ರದಲ್ಲಿನ ವಿವಾದಿತ ದೃಶ್ಯಗಳನ್ನು ಖಂಡಿಸಿ ಬ್ರಾಹ್ಮಣ ಸಮುದಾಯದವರು ಹೋರಾಟ ನಡೆಸಿದ್ದರು. 12 ರಿಂದ 14 ದೃಶ್ಯಗಳನ್ನು ತೆಗೆಯಲು ಮಂಡಳಿ ಅಧ್ಯಕ್ಷರು ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ ಬ್ರಾಹ್ಮಣನನ್ನು ಒದೆಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗಿತ್ತು. ಆ ದೃಶ್ಯಗಳಿಗೆ ಕತ್ತರಿ ಹಾಕಲು ಪೊಗರು ಟೀಮ್ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ ಕ್ಷಮೆಯನ್ನು ಸಹ ಯಾಚಿಸಿದ್ದಾರೆ.

    ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪೊಗರು ಸಿನಿಮಾದ ವಿರುದ್ಧ ದೂರು ನೀಡಿ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಆಗ್ರಹಿಸಲಾಗಿತ್ತು.

    ಪೊಗರು ಸಿನಿಮಾದ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಲಾಗಿತ್ತು. ಮೈಸೂರು, ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪಾರ್ಹ ದೃಶ್ಯ ತೆಗೆಯಲು ಒತ್ತಾಯ ಮಾಡಲಾಗಿತ್ತು.

  • ಅವಹೇಳನ ಮಾಡುವ ಕೃತ್ಯ ಇಲ್ಲಿಗೆ ಕೊನೆಯಾಗಲಿ- ಪೊಗರು ವಿರುದ್ಧ ಪೇಜಾವರ ಶ್ರೀ ಗುಟುರು

    ಅವಹೇಳನ ಮಾಡುವ ಕೃತ್ಯ ಇಲ್ಲಿಗೆ ಕೊನೆಯಾಗಲಿ- ಪೊಗರು ವಿರುದ್ಧ ಪೇಜಾವರ ಶ್ರೀ ಗುಟುರು

    ಉಡುಪಿ: ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ ಆಗಿರುವುದನ್ನು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳಿರುವುದು ಗಮನಕ್ಕೆ ಬಂತು. ಆಕ್ಷೇಪ ಇರುವ ದೃಶ್ಯಗಳಿಗೆ ಕತ್ತರಿ ಹಾಕುವ ಮಾಹಿತಿಯೂ ಸಿಕ್ಕಿದೆ. ಸಮಾಜದಲ್ಲಿ ನೆಮ್ಮದಿಯಿಂದ ಬಾಳಬೇಕಾದರೆ ಇಂತಹ ಕೃತ್ಯಗಳಿಗೆ ಕೈಹಾಕಬಾರದು. ಒಂದು ಸಮಾಜವನ್ನು ಕೆಣಕಿ, ಹಳಿದು ಯಾರೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಅವಹೇಳನ ಮಾಡುವ ಕೃತ್ಯ ಇಲ್ಲಿಗೆ ಕೊನೆಯಾಗಲಿ ಎಂದರು.

    ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೆಲಸ ಯಾರೂ ಮಾಡಬೇಡಿ. ಎಲ್ಲರೂ ಒಂದು ಸಮಾಜದಲ್ಲಿ ಬದುಕುತ್ತಿರುವಾಗ ಇಂತಹ ಕೃತ್ಯಗಳು ನಡೆಯಬಾರದು. ಹೊಂದಾಣಿಕೆಯಿಂದ ಬದುಕಬೇಕು ಎಂದರು. ಈ ಮೂಲಕ ಪೊಗರು ಚಿತ್ರ ತಂಡಕ್ಕೆ ಪೇಜಾವರಶ್ರೀ ಎಚ್ಚರಿಕೆ ನೀಡಿದರು.

  • ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ಪೊಗರು ಟೀಮ್ – ನಂದಕಿಶೋರ್ ಕ್ಷಮೆಯಾಚನೆ

    ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ಪೊಗರು ಟೀಮ್ – ನಂದಕಿಶೋರ್ ಕ್ಷಮೆಯಾಚನೆ

    ಬೆಂಗಳೂರು: ಬ್ರಾಹ್ಮಣರಿಗೆ ಸಂಬಂಧಿಸಿದ ವಿವಾದಿತ ದೃಶ್ಯಗಳನ್ನು ಕತ್ತರಿಸಲು ಪೊಗರು ಟೀಮ್ ನಿರ್ಧರಿಸಿದ್ದು, ಸಿನಿಮಾ ನಿರ್ದೇಶಕ ನಂದಕಿಶೋರ್ ಸಹ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.

    ಬ್ರಾಹ್ಮಣ ಸಮುದಾಯದವರ ಪ್ರತಿಭಟನೆ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಹಾಗೂ ನಿರ್ಮಾಪಕ ಬಿ.ಕೆ.ಗಂಗಾಧರ್ ಮಾತನಾಡಿದ್ದಾರೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅವರೊಂದಿಗೆ ಸಿನಿಮಾ ತಂಡದವರು ಅರವಿಂದ ಭವನದಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

    ಚಿತ್ರದಲ್ಲಿನ 12 ರಿಂದ 14 ದೃಶ್ಯಗಳನ್ನು ತೆಗೆಯಲು ಮಂಡಳಿ ಅಧ್ಯಕ್ಷರು ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ ಬ್ರಾಹ್ಮಣನನ್ನು ಒದೆಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಆ ದೃಶ್ಯಗಳಿಗೆ ಕತ್ತರಿ ಹಾಕಲು ಪೊಗರು ಟೀಮ್ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ ಕ್ಷಮೆಯನ್ನು ಸಹ ಯಾಚಿಸಿದ್ದಾರೆ.

    ಪೊಗರು ಚಿತ್ರತಂಡ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಬ್ರಾಹ್ಮಣರಿಗೆ ಅಪಮಾನದ ದೃಶ್ಯಗಳನ್ನು ತೆಗೆಯಲೇಬೇಕು ಎಂದು ಬ್ರಾಹ್ಮಣ ಸಮುದಾಯವರು ಆಗ್ರಹಿಸಿದ್ದರು. ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದ್ದರು. ಈ ವೇಳೆ ನಿರ್ದೇಶಕ ನಂದಕಿಶೋರ್ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಅವಮಾನ ಮಾಡಿದ ದೃಶ್ಯಗಳನ್ನು ನಾಳೆ ಒಳಗಡೆ ತೆಗೆಯಬೇಕು ಎಂದು ಗಡುವು ನೀಡಿದ್ದರು.

    ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪೊಗರು ಸಿನಿಮಾದ ವಿರುದ್ಧ ದೂರು ನೀಡಿ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಆಗ್ರಹಿಸಲಾಗಿತ್ತು.

    ಪೊಗರು ಸಿನಿಮಾದ ವಿರುದ್ಧ ಇಂದು ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿದೆ. ಮೈಸೂರು, ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿದ್ದು, ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪಾರ್ಹ ದೃಶ್ಯ ತೆಗೆಯಲು ಒತ್ತಾಯ ಮಾಡಲಾಗಿತ್ತು.

    ಪೊಗರು ನಿರ್ಮಾಪಕ ಬಿ.ಕೆ ಗಂಗಾಧರ್ ಪರ ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿ, ಪೊಗರು ಸಿನಿಮಾ ಸೆನ್ಸಾರ್ ಆಗಿದೆ. ಈ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಬೇಕು. ಒಮ್ಮೆ ಸೆನ್ಸಾರ್ ಆದಮೇಲೆ ಅದನ್ನು ಮತ್ತೆ ಸೆನ್ಸಾರ್ ಮಂಡಳಿ ಮೂಲಕವೇ ಬಗೆಹರಿಸಬೇಕು. ನಾವು ಈಗಾಗಲೇ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದ್ದೇವೆ. ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯಲು 48 ಗಂಟೆಗಳ ಕಾಲ ಅವಕಾಶ ಬೇಕು ಎಂದು ಹೇಳಿದ್ದರು.

  • ಪೊಗರು ಮೊದಲ ದಿನದ ಕಲೆಕ್ಷನ್ ಕಂಡು ಧ್ರುವ ಅಚ್ಚರಿ

    ಪೊಗರು ಮೊದಲ ದಿನದ ಕಲೆಕ್ಷನ್ ಕಂಡು ಧ್ರುವ ಅಚ್ಚರಿ

    ಬೆಂಗಳೂರು: ನಿನ್ನೆಯಷ್ಟೇ ತೆರೆ ಕಂಡಿರುವ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ತನ್ನ ಓಟವನ್ನು ಮುಂದುವರಿಸಿದ್ದು, ಇದರ ಮಧ್ಯೆಯೇ ಅಚ್ಚರಿಯ ಮಾಹಿತಿಯೊಂದನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ.

    ಪೊಗರು ಸಿನಿಮಾದ ಮೊದಲ ದಿನದ ಕಲೆಕ್ಷನ್ ಕುರಿತು ಮಾಹಿತಿಯನ್ನು ಧ್ರುವ ಹಂಚಿಕೊಂಡಿದ್ದು, ಅವರೂ ಸಹ ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮನಲ್ಲಿ ಹಂಚಿಕೊಂಡಿರುವ ಅವರು, ಪೊಗರು ಮೊದಲ ದಿನದ ಕಲೆಕ್ಷನ್ 10.05 ಕೋಟಿ ರೂ. ಇದು ಬೃಹತ್ ಮೊತ್ತವಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಪೊಗರು ಚಿತ್ರದ ಮೊದಲ ದಿನದ ಕಲೆಕ್ಷನ್ 10.05 ಕೋಟಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಪೊಗರು ಸಿನಿಮಾ ನಿನ್ನೆಯಷ್ಟೇ ಭರ್ಜರಿಯಾಗಿ ರಿಲೀಸ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳು ಸಂಭ್ರಮದಿಂದ ಚಿತ್ರವನ್ನು ನೋಡಿದ್ದಾರೆ. ಈಗಲೂ ಭಾರೀ ಸದ್ದು ಮಾಡುತ್ತಿದ್ದು, ಫುಲ್ ಹವಾ ಕ್ರಿಯೇಟ್ ಮಾಡಿದೆ. ಬರೋಬ್ಬರಿ 1 ಸಾವಿರ ಚಿತ್ರ ಮಂದಿರಗಳಲ್ಲಿ ಪೊಗರು ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ ಇದೀಗ ಕಲೆಕ್ಷನ್ ಹೆಚ್ಚಿರುವ ಕುರಿತು ಸಹ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಅಭಿಮಾನಿಗಳು ಇನ್ನೂ ಸಂಭ್ರಮದಲ್ಲಿ ಮುಳುಗಿದ್ದಾರೆ.

    ಕನ್ನಡ, ತೆಲುಗು, ತಮಿಳು ಒಟ್ಟು ಮೂರು ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ ಬೆಳಗ್ಗೆ 5 ಗಂಟೆಯಿಂದಲೇ ಫಸ್ಟ್ ಶೋ ಪ್ರದರ್ಶನ ಕಂಡಿದ್ದು, ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಂಡಿದೆ. ಈ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಭಾರೀ ನಿರೀಕ್ಷೆ ಮೂಡಿಸಿದ್ದ ಪೊಗರು ಸಿನಿಮಾ ಇದೀಗ ಗಳಿಯಲ್ಲಿ ಹುಬ್ಬೇರಿಸುವಂತೆ ಮಾಡಿದೆ.

    ಬರೋಬ್ಬರಿ 3 ವರ್ಷಗಳ ಬಳಿಕ ಧ್ರುವ ಸರ್ಜಾ ಸಿಲ್ವರ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು, ನೆಚ್ಚಿನ ನಟನನ್ನು ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಆಕ್ಷನ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಪೊಗರು ಸಿನಿಮಾ ಸ್ಯಾಂಡಲ್‍ವುಡ್‍ನಲ್ಲಿ ಧೂಳೆಬ್ಬಿಸುತ್ತಿದೆ.

    ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್, ತಾರಾ ಅನುರಾಧ, ರವಿಶಂಕರ್, ಪವಿತ್ರ ಲೋಕೇಶ್, ಡಾಲಿ ಧನಂಜಯ, ಚಿಕ್ಕಣ್ಣ, ದಿವಂಗತ ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ನಟಿಸಿದ್ದಾರೆ.

  • ಭಾರತ, ಜನ, ದೇವರು, ಧಾರ್ಮಿಕತೆ ಬಗ್ಗೆ ನಂಬಿಕೆ ಇದೆ – ಪೊಗರು ಡಾನ್ ದೇಶಾಭಿಮಾನ

    ಭಾರತ, ಜನ, ದೇವರು, ಧಾರ್ಮಿಕತೆ ಬಗ್ಗೆ ನಂಬಿಕೆ ಇದೆ – ಪೊಗರು ಡಾನ್ ದೇಶಾಭಿಮಾನ

    – ಭುಜದ ಮೇಲೆ ಶಿವನ ಟ್ಯಾಟೂ
    – ನಂದಕಿಶೋರ್ ಅದ್ಭುತವಾಗಿ ನಿರ್ದೇಶಿಸಿದ್ದಾರೆ.

    ಬೆಂಗಳೂರು: ನಾನು ಭಾರತ, ಇಲ್ಲಿನ ಜನರನ್ನು ಪ್ರೀತಿಸುತ್ತೇನೆ ಹಾಗೂ ಇಲ್ಲಿನ ದೇವರು, ಧಾರ್ಮಿಕ ನಂಬಿಕೆಗಳ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಪೊಗರು ಸಿನಿಮಾದ ಖಳ ನಟ ದಕ್ಷಿಣ ಆಫ್ರಿಕದ ಬಾಡಿ ಬಿಲ್ಡರ್ ಜಾನ್ ಲೋಕಸ್ ಹೇಳಿದ್ದಾರೆ.

    ಪೊಗರು ಸಿನಿಮಾದ ಅನುಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡ ಅವರು, ನಾನು ಭಾರತಕ್ಕೆ 6 ವರ್ಷಗಳಿಂದ ಬರುತ್ತಿದ್ದೇನೆ. ಈ ಹಿಂದೆ ನಾಲ್ಕು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದೇನೆ. ಸಮಯ ಸಿಕ್ಕಾಗಲೆಲ್ಲಾ ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿದರು.

    ದಾವಣಗೆರೆಯಲ್ಲಿನ ಸಿನಿಮಾ ಶೂಟಿಂಗ್ ವೇಳೆ ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬೀಳುತ್ತಿದ್ದರು. ಇದು ನನಗೆ ಬಹಳ ಅದ್ಬುತ ಅನುಭವ ಎನಿಸಿತು. ಜೊತೆಗೆ ಪೊಗರು ಸಿನಿಮಾದ ಪೋಸ್ಟರ್‍ನನ್ನು ನಾನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದ ನನ್ನ ಸ್ನೇಹಿತರು, ಜನರ ಮಧ್ಯೆ ನಾನೊಬ್ಬ ರಾಕ್ ಸ್ಟಾರ್‍ನಂತೆ ಕಾಣಿಸುತ್ತಿರುವುದಾಗಿ ಹೇಳುತ್ತಿದ್ದಾರೆ ಎಂದರು.

    ತಮ್ಮ ಕೈ ಮೇಲಿರುವ ಶಿವನ ಟ್ಯಾಟೂ ಕುರಿತಂತೆ ಮಾತನಾಡಿ, ನಾನು ಭಾರತವನ್ನು, ಭಾರತದ ಜನರನ್ನು ಪ್ರೀತಿಸುತ್ತೇನೆ. ಇಲ್ಲಿನ ದೇವರು, ಧಾರ್ಮಿಕ ನಂಬಿಕೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನನಗೆ ಆರು ವರ್ಷದಿಂದ ಈ ದೇಶದೊಂದಿಗೆ ಬಾಂಧವ್ಯವಿರುವುದರಿಂದ ನನ್ನ ಭುಜದ ಮೇಲೆ ಶಿವನ ಟ್ಯಾಟೂವನ್ನು ಹಾಕಿಸಿಕೊಂಡಿದ್ದೇನೆ ಎಂದು ನುಡಿದರು.

    ಇನ್ನೂ ಇದೇ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಹೊಂದಿದ್ದೇನೆ, ಇಲ್ಲಿನ ಜನರು ಸಿನಿಮಾಕ್ಕೆ, ಕಲಾವಿದರಿಗೆ, ರಾಜಕಾರಣಿಗಳಿಗೆ ಬಹಳ ಬೆಂಬಲ ನೀಡುವುದನ್ನು ನೋಡಿದ್ದೇನೆ. ಹಾಗೆಯೇ ಪೊಗರು ಸಿನಿಮಾದ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿ ನಮಗೆ ಬೆಂಬಲ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

    ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಅದ್ಭುತ ಪ್ರತಿಭೆ ಹೊಂದಿದ್ದು, ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದು ಖುಷಿತಂದಿದೆ. ಸಿನಿಮಾದಲ್ಲಿ ಅಭಿನಯಿಸಿರುವವರೆಲ್ಲರೂ ವೃತ್ತಿಪರರೇ ಆಗಿದ್ದು, ಇದೊಂದು ಪ್ರೊಫೆಶನಲ್ ಸಿನಿಮಾ ಆಗಿದೆ. ಅಲ್ಲದೆ ಸಿನಿಮಾದಲ್ಲಿ ಹಲವಾರು ಬಾಡಿ ಬಿಲ್ಡರ್ಸ್‍ಗಳು ಅಭಿನಯಿಸಿದ್ದು, ನಿರ್ದೇಶಕ ನಂದ ಕಿಶೋರ್ ಊಹಿಸಲಾಗದಷ್ಟು ಅದ್ಭುತವಾಗಿ ನಿರ್ದೇಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ರಿಮೇಕ್ ನಿರ್ದೇಶಕ ಎನ್ನುವವರಿಗೆ ಪೊಗರು ಸಿನಿಮಾ ತಕ್ಕ ಉತ್ತರ: ನಂದಕಿಶೋರ್

    ರಿಮೇಕ್ ನಿರ್ದೇಶಕ ಎನ್ನುವವರಿಗೆ ಪೊಗರು ಸಿನಿಮಾ ತಕ್ಕ ಉತ್ತರ: ನಂದಕಿಶೋರ್

    – ನಾಲ್ಕೂವರೆ ವರ್ಷದ ಪ್ರಾಮಾಣಿಕ ಪ್ರಯತ್ನವಿದು
    – ಆಡಿಕೊಳ್ಳುವವರಿಗೆ ಕೆಲಸದ ಮೂಲಕ ಉತ್ತರ

    ಬೆಂಗಳೂರು: ನನ್ನ ಮೊದಲ ಸಿನಿಮಾ ವಿಕ್ಟರಿ ಸ್ವಮೇಕ್, ಆದರೂ ಕೆಲವರು ರಿಮೇಕ್ ನಿರ್ದೇಶಕ ಎಂದು ಆಡಿಕೊಳ್ಳುತ್ತಿದ್ದಾರೆ. ಒಂದು ಸಿನಿಮಾ ಮಾಡಿದವರಿಗೆ ನೀಡುವ ಗೌರವವನ್ನೂ ನೀಡುತ್ತಿಲ್ಲ. ಹೀಗೆ ಆಡಿಕೊಳ್ಳುವವರಿಗೆ ಪೊಗರು ಸಿನಿಮಾ ತಕ್ಕ ಉತ್ತರ ಎಂದು ಪೊಗರು ನಿರ್ದೇಶಕ ನಂದಕಿಶೋರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ವರೆಗೆ ನಾನು 7 ಸಿನಿಮಾಗಳನ್ನು ಮಾಡಿದ್ದೇನೆ, ಇದರಲ್ಲಿ 5 ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದೇನೆ. ಅಧ್ಯಕ್ಷ, ರನ್ನ ಹೀಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದೇನೆ. ಆದರೂ ರೀಮೇಕ್ ಡೈಕ್ಟರ್, ಏನೂ ಬರಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ. ನನ್ನ ಮೊದಲ ಸಿನಿಮಾನೇ ವಿಕ್ಟರಿ ಸ್ವಮೇಕ್ ಚಿತ್ರ. ಆದರೂ ಇಂದು ಒಂದು ಸಿನಿಮಾ ಮಾಡಿದವರಿಗೆ ನೀಡುವ ಗೌರವವನ್ನೂ ನಮಗೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪೊಗರು ಸಿನಿಮಾದ ಪ್ರತಿ ಶಾಟ್, ಪ್ರತಿ ಸೀನ್‍ನ್ನು ಸಹ ಸ್ವಂತಿಕೆ ಇಟ್ಟುಕೊಂಡು ಮಾಡಿದ್ದೇನೆ. ಈಗಲಾದರೂ ಆ ಗೌರವ ನನಗೆ ಸಿಗಬೇಕೆಂದು ಅಪೇಕ್ಷಿಸುತ್ತೇನೆ. ನಾಲ್ಕೂವರೆ ವರ್ಷದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಸಿನಿಮಾ ಮಾಡಿದ್ದೇವೆ. ನಿರ್ಮಾಪಕರು, ನಟ ಧ್ರುವ ಸರ್ಜಾ ಹಾಗೂ ನಾನು ತುಂಬಾ ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ. ಈಗ ಜನಗಳನ್ನು ನೋಡಿ ಸಿನಿಮಾ ಚೆನ್ನಾಗಿದೆ ಅಂದರೆ ತಪ್ಪಾಗುತ್ತದೆ. ಸಿನಿಮಾ ಹೇಗಿದೆ ಎಂದು ಸಂಜೆ ವೇಳೆಗೆ ಪ್ರೇಕ್ಷಕರೇ ಹೇಳುತ್ತಾರೆ. ಬೇರೆ ರಾಜ್ಯಗಳಲ್ಲಿ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

    ಸಿನಿಮಾ ನೋಡಲು ಪ್ರೇಕ್ಷಕರ ಬಳಿ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಇಷ್ಟೊಂದು ಜನ ಸೇರಿದ್ದಾರೆ. ಕಲಾಭಿಮಾನಿಗಳು ಕಲಾವಿದರನ್ನು ಯಾವತ್ತೂ ಕೈಬಿಡಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. ಸಿನಿಮಾ ಏನೇ ಸಕ್ಸಸ್ ಕಂಡರು ಅವರು ಹಾಕಿರುವ ಭಿಕ್ಷೆ ಅಷ್ಟೇ. ತುಂಬಾ ಪಾಸಿಟಿವ್ ಆಗಿ ಓಪನಿಂಗ್ ಬರುತ್ತಿದೆ. ಸಂಜೆ ವೇಳೆಗೆ ಎಲ್ಲ ಚಿತ್ರಣ ಸಿಗಲಿದೆ ಎಂದು ನಂದ ಕಿಶೋರ್ ಹೇಳಿದರು.

    ಪ್ರೇಕ್ಷಕರಿಗೆ ನಿರಾಸೆಯಂತೂ ಆಗಲ್ಲ, ಮನರಂಜನೆ ನೀಡೇ ನೀಡುತ್ತೆ ಎಂಬ ನಂಬಿಕೆ ಇದೆ. ಬ್ಯಾಕ್ ಟು ಬ್ಯಾಕ್ 5 ಹಿಟ್ ಸಿನಿಮಾ ಕೊಟ್ಟಿದ್ರೂ, ರಿಮೇಕ್ ಮಾಡ್ತಾನೆ ಅನ್ನೋ ಹೆಸರು ಕೊಡ್ತಾ ಇದ್ರು ಈ ಸಿನಿಮಾದಿಂದ ಅ ಹೆಸರು ಹೋಗಿ ಪಕ್ಕ ಸ್ವಮೇಕ್ ಅನ್ನೋದು ಗೊತ್ತಾಗುತ್ತೆ. ಆಡಿಕೊಳ್ಳುವವರಿಗೆ ಕೆಲಸದ ಮೂಲಕ ಉತ್ತರ ನೀಡಿದ್ದೇನೆ. ಎರಡೂ ತರದ ಸಿನಿಮಾ ಮಾಡಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದೇನೆ ಎಂದು ತಿಳಿಸಿದರು.

  • ಅಪ್ಪನ ಸಿನಿಮಾ ಟ್ರೈಲರ್ ಬಿಡುಗಡೆಮಾಡಿದ ಜೂ.ಚಿರು- ವೀಡಿಯೋ ನೋಡಿ

    ಅಪ್ಪನ ಸಿನಿಮಾ ಟ್ರೈಲರ್ ಬಿಡುಗಡೆಮಾಡಿದ ಜೂ.ಚಿರು- ವೀಡಿಯೋ ನೋಡಿ

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾರ್ತಾಂಡದ  ಟ್ರೈಲರ್‌ನನ್ನು ಚಿರು ಮುದ್ದು ಮಗ ಜೂನಿಯರ್ ಚಿರು ಲಾಂಚ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪುಟ್ಟದಾದ ಮುದ್ದು ಕೈಬೆರಳುಗಳಿಂದ ಅಪ್ಪನ ಸಿನಿಮಾದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್‌ನ ವೀಡಿಯೋ ಪ್ಲೇ ಮಾಡುತ್ತಿರುವ ವೀಡಿಯೋವನ್ನು ಮೇಘನಾರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಗರು ಸಿನಿಮಾ ಬಿಡುಗಡೆಯಾಗಿರುವ ದಿನವೇ ಚಿರು ಅಭಿನಯದ ರಾಜಮಾರ್ತಾಂಡ ಟ್ರೈಲರ್ ಮುದ್ದಾದ ಮಗನಿಂದ ಬಿಡುಗಡೆಯಾಗಿರುವುದು ವಿಶೇಷವಾಗಿದೆ.

     

    View this post on Instagram

     

    A post shared by Meghana Raj Sarja (@megsraj)

    ರಾಜಾಮಾರ್ತಾಂಡ ಸಿನಿಮಾ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿದೆ. ಚಿರು ಒಂದು ಪಾತ್ರವನ್ನು ಎಷ್ಟೊಂದು ಇಷ್ಟಪಟ್ಟು ಮಾಡುತ್ತಿದ್ದರು ಎನ್ನುವುದು ತಿಳಿದಿದೆ. ಈ ಸಿನಿಮಾವವನ್ನು ತಂಬಾ ಇಷ್ಟಪಟ್ಟು ಮಾಡಿದ್ದರು. ಈ ಸಿನಿಮಾ ಅವರ ಸಿನಿಮಾ ಜರ್ನಿಯಲ್ಲಿ ಅತ್ಯಂತ ವಿಶೇಷವಾಗಿದೆ. ಇಲ್ಲಿವರೆಗೂ ಮಾಡಿರುವ ಪಾತ್ರಗಳಿಗಿಂತ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪನಿಗೋಸ್ಕರ ಅಪ್ಪನಿಗಾಗಿ ಮತ್ತು ಸಿನಿಮಾತಂಡಕ್ಕಾಗಿ ಜೂನಿಯರ್ ಚಿರು ಟ್ರೈಲರ್ ಲಾಂಚ್ ಮಾಡುತ್ತಿದ್ದಾನೆ. ಈ ಸಿನಿಮಾ ತಂಡ ಕುಟುಂಬಕ್ಕೆ ಹತ್ತಿರವಾಗಿದೆ. ಚಿರು ನಟನೆ ಮಾಡಿದ್ದಾರೆ, ಧ್ರುವ ಸರ್ಜಾ ಧ್ವನಿಯನ್ನು ನೀಡಿದ್ದಾರೆ. ಮಗ ಟ್ರೈಲರ್ ಲಾಂಚ್ ಮಾಡಿದ್ದಾರೆ. ಸಿನಿಮಾಕ್ಕೆ ಶುಭಾಶಯಗಳು ಎಂದು ಹೇಳಿ ಮುದ್ದು ಮಗು ಟ್ರೈಲರ್ ರೀಲಿಸ್ ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಫೆಬ್ರವರಿ 19ಕ್ಕೆ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತದೆ. ಎಲ್ಲಾ ಅವನ ತಂದೆಗಾಗಿ. ಅಪ್ಪನ ಏಂಜಲ್, ರಾಜಮಾತಾರ್ಂಡ ಟ್ರೈಲರ್ ಅನ್ನು ನನ್ನ ಮಗ ನಾಳೆ ಬಿಡುಗಡೆ ಮಾಡಲಿದ್ದಾನೆ ಎಂದು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು ಅದರಂತೆ ಇದೀಗ ಟ್ರೈಲರ್ ಬಿಡುಗಡೆಯಾಗಿದೆ.

     

    View this post on Instagram

     

    A post shared by Meghana Raj Sarja (@megsraj)

    ಚಿರು ನಮ್ಮಿಂದ ದೂರವಾಗಿದ್ದರೂ ಅವರ ಸಿನಿಮಾ ಮೇಲಿನ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸದ್ಯ ರಿಲೀಸ್‍ಗೆ ರೆಡಿಯಾಗಿರುವ ರಾಜಮಾತಾರ್ಂಡ ಸಿನಿಮಾದ ಮೇಲೂ ನಿರೀಕ್ಷೆ ಹೆಚ್ಚಾಗಿದೆ.

    ರಾಜಮಾರ್ತಾಂಡ ಸಿನಿಮಾ ಚಿರು ಅಭಿನಯದ ಕೊನೆಯ ಸಿನಿಮವಾಗಿದೆ. ಚಿರು ಸಿನಿಮಾ ಧ್ರುವ ಸಾರ್ಜಾ ಕಂಠದಾನವನ್ನು ಮಾಡಿದ್ದಾರೆ. ಇಂದು ಟ್ರೈಲರ್ ಬಿಡುಗಡೆಮಾಡಿರುವ ಸಂಭ್ರಮದ ಕ್ಷಣಗಳನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಈ ವೀಡಿಯೋಗೆ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ. ಮುದ್ದಾದ ಕೈ ಬೆರಳುಗಳಿಂದ ರೀಲಿಸ್ ಆಗಿರುವ ಟ್ರೈಲರ್ ಹೇಗಿರಲಿದೆ ಎನ್ನುವ ಕೂತುಹೂಲ ಅಭಿಮಾನಿಗಳಲ್ಲಿದೆ.

  • ರಾಜ್ಯಾದ್ಯಂತ ಪೊಗರು ಅಬ್ಬರ – 1 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆ

    ರಾಜ್ಯಾದ್ಯಂತ ಪೊಗರು ಅಬ್ಬರ – 1 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆ

    – ಕನ್ನಡ, ತೆಲುಗು, ತಮಿಳಲ್ಲಿ ಪ್ರದರ್ಶನ
    – ಬೆಳಗ್ಗೆ 5 ಗಂಟೆಯಿಂದಲೇ ಶೋ

    ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಇಂದು ರಿಲೀಸ್‌ ಆಗಿದೆ. ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗಿನಲ್ಲಿ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪೊಗರು ಸಿನಿಮಾ ಬೆಂಗಳೂರಿನಲ್ಲಿ ಬೆಳ್ಳಗ್ಗೆಯೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬರೋಬ್ಬರಿ ಮೂರು ವರ್ಷಗಳ ನಂತರ ಸಿಲ್ವರ್ ಸ್ಕ್ರೀನ್ ಮೇಲೆ ಧ್ರುವ ಕಾಣಿಸಿಕೊಳ್ಳುತ್ತಿದ್ದಾರೆ.

    ಒಟ್ಟು 1 ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ತೆರೆ ಕಾಣಲಿರುವ ಪೊಗರು ಈಗಾಗಲೇ ಬೆಂಗಳೂರಿನ 33 ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:45ಕ್ಕೆ ಶೋ ಆರಂಭವಾಗಿದೆ. ಸಿದ್ದೇಶ್ವರ, ಶ್ರೀನಿವಾಸ, ಲಕ್ಷ್ಮಿ, ಪ್ರಸನ್ನ ಥಿಯೇಟರ್ ನಲ್ಲಿ ಮುಂಜಾನೆ ಶೋ ಆರಂಭವಾಗಿದೆ. ಮೊದಲ ಶೋಗೆ ಥಿಯೇಟರ್‌ಗೆ ಬಂದ ಅಭಿಮಾನಿಗಳು ಧ್ರುವ ಸರ್ಜಾ ಕಟೌಟ್‍ಗೆ ಹೂ, ಹಾಲಿನ ಅಭಿಷೇಕ ಮಾಡಿದ್ದಾರೆ.

    ಆ್ಯಕ್ಷನ್ ಜೊತೆಗೆ ಫ್ಯಾಮಿಲಿ‌ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಪೊಗರು ಸಿನಿಮಾ 300 ಚಿತ್ರಮಂದಿರಗಳಲ್ಲಿ ಬೆಳಗ್ಗೆ ಶೋ ಆರಂಭವಾಗಲಿದೆ.

     

    ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್, ತಾರಾ ಅನುರಾಧ, ರವಿಶಂಕರ್, ಪವಿತ್ರ ಲೋಕೇಶ್, ಡಾಲಿ ಧನಂಜಯ, ಚಿಕ್ಕಣ್ಣ, ದಿವಂಗತ ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

  • ಪ್ರೇಮಿಗಳ ದಿನದಂದು ‘ಪೊಗರು’ ಆಡಿಯೋ ಅಬ್ಬರ – ದಾವಣಗೆರೆಯಲ್ಲಿ ನಡೆಯಲಿದೆ ಅದ್ಧೂರಿ ಕಾರ್ಯಕ್ರಮ

    ಪ್ರೇಮಿಗಳ ದಿನದಂದು ‘ಪೊಗರು’ ಆಡಿಯೋ ಅಬ್ಬರ – ದಾವಣಗೆರೆಯಲ್ಲಿ ನಡೆಯಲಿದೆ ಅದ್ಧೂರಿ ಕಾರ್ಯಕ್ರಮ

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಪೊಗರು’ ಚಿತ್ರ ಬಿಡುಗಡೆಗೆ ಕೌಂಟ್‍ಡೌನ್ ಶುರುವಾಗಿದೆ. ಇದೀಗ ಅಭಿಮಾನಿಗಳಿಗೆ ಆಕ್ಷನ್ ಪ್ರಿನ್ಸ್ ಮತ್ತೊಂದು ಉಡುಗೊರೆ ನೀಡಲು ನಿರ್ಧರಿಸಿದ್ದು, ಆಡಿಯೋ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ಬಿಡುಗಡೆ ಬಗ್ಗೆ ಧ್ರುವ ಸರ್ಜಾ ಮಾಹಿತಿ ಹಂಚಿಕೊಂಡಿದ್ದಾರೆ.

    ಪ್ರೇಮಿಗಳ ದಿನದಿಂದು ‘ಪೊಗರು’ ಆಡಿಯೋ ಗ್ರ್ಯಾಂಡ್ ಆಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು, ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಗ್ರೌಂಡ್‍ನಲ್ಲಿ ಅದ್ದೂರಿಯಾಗಿ ಪೊಗರು ಆಡಿಯೋ ಬಿಡುಗಡೆಯಾಗಲಿದೆ. ಆಡಿಯೋ ರಿಲೀಸ್ ಸಾಕಷ್ಟು ಸರ್ಪ್ರೈಜ್ ನಿಂದ ಕೂಡಿರಲಿದೆ ಎಂದು ಆಕ್ಷನ್ ಪ್ರಿನ್ಸ್ ತಿಳಿಸಿದ್ದು, ಆಡಿಯೋ ರಿಲೀಸ್ ಸುದ್ದಿ ಕೇಳುತ್ತಿದ್ದಂತೆ ಧ್ರುವ ಅಭಿಮಾನಿ ಬಳಗದ ಸಂಭ್ರಮ ದುಪ್ಪಟ್ಟಾಗಿದೆ.

    ನಂದಕಿಶೋರ್ ನಿರ್ದೇಶನದಲ್ಲಿ ‘ಪೊಗರು’ ಚಿತ್ರ ಮೂಡಿಬಂದಿದ್ದು, ತೆಲುಗು, ತಮಿಳಿನಲ್ಲೂ ಈ ಬಾರಿ ಆಕ್ಷನ್ ಪ್ರಿನ್ಸ್ ಮೋಡಿ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ, ಧ್ರುವ ಸರ್ಜಾ ಜೋಡಿಯಾಗಿ ನಟಿಸಿದ್ದು, ಆಕ್ಷನ್ ಜೊತೆ ತಾಯಿ ಸೆಂಟಿಮೆಂಟ್ ಕೂಡ ಪೊಗರು ಸಿನಿಮಾದಲ್ಲಿದೆ. ಬಿ.ಕೆ ಗಂಗಾಧರ್ ನಿರ್ಮಾಣದಲ್ಲಿ ಬಿಗ್ ಬಜೆಟ್‍ನಲ್ಲಿ ಚಿತ್ರ ನಿರ್ಮಾಣವಾಗಿದೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಪೊಗರು ಸಿನಿಮಾವನ್ನು ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಮಾಡುತ್ತಿದ್ದು, ಫೆಬ್ರವರಿ 19ರಿಂದ ಪೊಗರು ಅಬ್ಬರ ಚಿತ್ರಮಂದಿರಗಳಲ್ಲಿ ಶುರುವಾಗಲಿದೆ.

    ಕೊರೊನಾ ಲಾಕ್‍ಡೌನ್ ನಂತರ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ ಕಾಸ್ಟ್ ಸಿನಿಮಾ ಇದಾಗಿದೆ. ಚಿತ್ರದ ಡೈಲಾಗ್ ಟ್ರೈಲರ್ ಹಾಗೂ ಕರಾಬು ಸಾಂಗ್ ಸೂಪರ್ ಹಿಟ್ ಆಗಿದ್ದು, ತೆರೆ ಮೇಲೆ ಆಕ್ಷನ್ ಪ್ರಿನ್ಸ್ ನಟೋರಿಯಸ್ ಆಕ್ಷನ್ ಸೀನ್‍ಗಳ ಅಬ್ಬರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ‘ಪೊಗರು’ ಚಿತ್ರತಂಡ ಬ್ಯುಸಿಯಾಗಿದ್ದು, ಚೆನೈನಲ್ಲಿ ಈಗಾಗಲೇ ಪ್ರಚಾರ ಕಾರ್ಯ ಮುಗಿಸಿರುವ ಚಿತ್ರತಂಡ ತೆಲುಗಿನಲ್ಲಿ ಚಿತ್ರದ ಪ್ರಚಾರ ಆರಂಭಿಸಲಿದೆ.

    ಶ್ರೇಯಸ್ ಮೀಡಿಯಾ ‘ಪೊಗರು’ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಗ್ರ್ಯಾಂಡ್ ಆಗಿ ನಡೆಸಿಕೊಡಲಿದ್ದು, ದಾವಣಗೆರೆಯಲ್ಲಿ ಆಕ್ಷನ್ ಪ್ರಿನ್ಸ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.