Tag: dhramasthala

  • ಮದುವಣಗಿತ್ತಿಯಂತೆ ಶೃಂಗಾರಗೊಂಡ ಶ್ರೀಕ್ಷೇತ್ರದಲ್ಲಿ ಗಮನಸೆಳೆಯುತ್ತಿದೆ `ಕೊಡೆ ಅಲಂಕಾರ’

    ಮದುವಣಗಿತ್ತಿಯಂತೆ ಶೃಂಗಾರಗೊಂಡ ಶ್ರೀಕ್ಷೇತ್ರದಲ್ಲಿ ಗಮನಸೆಳೆಯುತ್ತಿದೆ `ಕೊಡೆ ಅಲಂಕಾರ’

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳ ಮದುವಣಗಿತ್ತಿಯಂತೆ ಸಜ್ಜಾಗಿದೆ.

    ಒಂದೆಡೆ ವಿದ್ಯುತ್ ದೀಪಗಳ ಅಲಂಕಾರ, ಮತ್ತೊಂದೆಡೆ ಬಣ್ಣದ ಕೊಡೆಗಳ ಆಕರ್ಷಕ ಚಿತ್ತಾರ ಕಣ್ಮನ ಸೆಳೆಯುತ್ತಿದೆ. ಇಷ್ಟಕ್ಕೂ ಈ ಅಲಂಕಾರಕ್ಕೆ ಪ್ರೇರಣೆಯಾಗಿದ್ದು ಮಾರಿಷಸ್ ದ್ವೀಪ ರಾಷ್ಟ್ರದ ಒಂದು ಬೀದಿಯಂತೆ.

    ಹಿಂದೊಮ್ಮೆ ಧರ್ಮಸ್ಥಳದ ಧರ್ಮಾದಿಕಾರಿ ವೀರೇಂದ್ರ ಹೆಗ್ಗಡೆಯವರು ಮಾರಿಷಸ್ ದೇಶಕ್ಕೆ ಹೋಗಿದ್ದಾಗ ಅಂಬ್ರೆಲ್ಲಾ ಸ್ಟ್ರೀಟ್ ನೋಡಿ ಮಾರುಹೋಗಿದ್ದರು. ಇದೀಗ ಅದೇ ಮಾದರಿಯಲ್ಲಿ ಧರ್ಮಸ್ಥಳ ದೇವಸ್ಥಾನದ ಎದುರಲ್ಲಿ ಬಣ್ಣದ ಕೊಡೆಗಳಿಂದ ಅಲಂಕರಿಸಲಾಗಿದ್ದು, ಇದೀಗ ಭಾರೀ ಮೆಚ್ಚುಗೆ ಪಡೆದಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕೂಡ ಈ ರೀತಿಯ ಅಲಂಕಾರ ಎಲ್ಲಿಯೂ ನೋಡಿಲ್ಲ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ದೇಗುಲ ದರ್ಶನದ ಬಳಿಕ ಪ್ರಧಾನಿ ಮೋದಿ ಬೆಳಗ್ಗೆ 11.45ರ ವೇಳೆಗೆ ಧರ್ಮಸ್ಥಳದಿಂದ 9 ಕಿಮೀ ದೂರವಿರುವ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಲಿದ್ದಾರೆ.

    ನಂತರ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಇದಕ್ಕಾಗಿ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಜರ್ಮನ್ ತಂತ್ರಜ್ಞಾನದಡಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಬಿಗಿ ಪೊಲೀಸ್ ಪಹರೆ ಇದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್. ಕೆ. ದತ್ತಾ ನಿನ್ನೆ ಭದ್ರತೆ ಪರಿಶೀಲಿಸಿದರು. ಜನಧನ್ ಯೋಜನೆಯಡಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು 12 ಲಕ್ಷಕ್ಕೂ ಹೆಚ್ಚು ಖಾತೆ ತೆರೆದಿದ್ದು ಪ್ರಧಾನಿಯವರ ಗಮನ ಸೆಳೆದಿತ್ತು.

  • ಮೋದಿ ಸ್ವಾಗತಕ್ಕೆ ಸಜ್ಜಾದ ಶ್ರೀ ಕ್ಷೇತ್ರ – ಎಲ್ಲೆಲ್ಲೂ ಸ್ಪೆಷಲ್ ಕಮಾಂಡೋಗಳ ಭರಾಟೆ

    ಮೋದಿ ಸ್ವಾಗತಕ್ಕೆ ಸಜ್ಜಾದ ಶ್ರೀ ಕ್ಷೇತ್ರ – ಎಲ್ಲೆಲ್ಲೂ ಸ್ಪೆಷಲ್ ಕಮಾಂಡೋಗಳ ಭರಾಟೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಅಭೂತಪೂರ್ವ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

    ಎಲ್ಲೆಲ್ಲೂ ಪೊಲಿಸ್ ಸರ್ಪಗಾವಲಿದೆ. ಎನ್‍ಎಸ್‍ಜಿ, ಎಸ್‍ಪಿಜಿ.. ಹೀಗೆ ಸ್ಪೆಷಲ್ ಕಮಾಂಡೋಗಳ ಭರಾಟೆ ಇದೆ. ಜೊತೆಗೆ ನಕ್ಸಲ್ ನಿಗ್ರಹ ದಳವೂ ಬೀಡುಬಿಟ್ಟಿದೆ. ಇನ್ನು ಇಂದು ಮಧ್ಯಾಹ್ನ 2 ಗಂಟೆವರೆಗೆ ಸಾಮಾನ್ಯ ಭಕ್ತರಿಗೆ ಮಂಜುನಾಥನ ದರ್ಶನ ಭಾಗ್ಯ ನಿರ್ಬಂಧಿಸಲಾಗಿದೆ.

    ಬೆಳಗ್ಗೆ 9ರಿಂದ ಧರ್ಮಸ್ಥಳ-ಉಜಿರೆ-ಕೊಕ್ಕಡ ನಡುವೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದ್ರೆ ಚಾರ್ಮಾಡಿ, ಮಂಗಳೂರು ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇನ್ನು ಉಜಿರೆಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಬೆಳಗ್ಗೆ 9.30ರೊಳಗೆ ಆಗಮಿಸುವಂತೆ ಸಾರ್ವಜನಿಕರಿಗೆ ದೇವಳದ ಆಡಳಿತ ಮಂಡಳಿ ತಿಳಿಸಿದೆ.

    ಶನಿವಾರ ಎಸ್‍ಪಿಜಿ ಕಮ್ಯಾಂಡೋಗಳು ಕಾನ್‍ವೇ ಪರಿಶೀಲಿಸಿದರು. ಹೆಲಿಪ್ಯಾಡ್‍ನಿಂದ ದೇವಳದವರೆಗೆ ರಿಹಾರ್ಸಲ್ ನಡೆಸಿದರು. ಮೋದಿ ಬಳಸಲಿರುವ ಲ್ಯಾಂಡ್ ಕ್ರ್ಯೂಸರ್, ಪೈಲಟ್ ಜೀಪ್ ಸೇರಿದಂತೆ 16 ವಾಹನಗಳಲ್ಲಿ ರಿಹರ್ಸಲ್ ನಡೀತು. ಬಳಿಕ ಧಮಸ್ಥಳ- ಉಜಿರೆ ಹಾದಿಯಲ್ಲೂ ಎಸ್‍ಪಿಜಿ ಪರಿಶೀಲನೆ ನಡೀತು. ಪ್ರಧಾನಿಯ ವಾಹನ ಧರ್ಮಸ್ಥಳದಿಂದ ತೆರಳಿ ಅರ್ಧ ಗಂಟೆಯ ನಂತರ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಪೆÇಲೀಸರು ಅವಕಾಶ ಮಾಡಿಕೊಡಲಿದ್ದಾರೆ.

    ಹಾಗಿದ್ರೆ ಮೋದಿಯವರ ಇಂದಿನ ದಿನಚರಿ ಧರ್ಮಸ್ಥಳದಲ್ಲಿ ಹೇಗಿರುತ್ತೆ ಅಂತ ನೋಡೋದಾದ್ರೆ..

    * ಬೆಳಗ್ಗೆ 10.45 ಗಂಟೆಗೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ
    * ಬೆಳಗ್ಗೆ 11.00 ಗಂಟೆಗೆ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ
    * ಮಂಜುನಾಥನ ಸನ್ನಿಧಿಯಲ್ಲಿ ಮೋದಿ ಪೂಜೆ
    * ಸುಮಾರು 10 ನಿಮಿಷ ಮೋದಿ ಧ್ಯಾನ ಸಾಧ್ಯತೆ
    * ಅಣ್ಣಪ್ಪ ಸ್ವಾಮಿ ದರ್ಶನ, ಅನ್ನಪೂರ್ಣ ಹಾಲ್‍ಗೆ ಭೇಟಿ ನೀಡಲಿರುವ ಮೋದಿ
    * 12.15ಕ್ಕೆ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮೋದಿ ಭಾಷಣ

    https://www.youtube.com/watch?v=F-C0cUhjm6c