Tag: dharmaraj chadchan

  • ಸತ್ತು ವರ್ಷಗಳೇ ಕಳೆದ್ರೂ ಕಡಿಮೆಯಾಗಿಲ್ಲ ಧರ್ಮರಾಜ್ ಚಡಚಣನ ಹವಾ

    ಸತ್ತು ವರ್ಷಗಳೇ ಕಳೆದ್ರೂ ಕಡಿಮೆಯಾಗಿಲ್ಲ ಧರ್ಮರಾಜ್ ಚಡಚಣನ ಹವಾ

    ವಿಜಯಪುರ: ಜಿಲ್ಲೆಯ ಭೀಮಾತೀರದ ಹಂತಕ ಧರ್ಮರಾಜ್ ಚಡಚಡಣ ಸತ್ತು ವರ್ಷಗಳೇ ಕಳೆದರೂ ಆತನ ಹವಾ ಮಾತ್ರ ಕಡಿಮೆ ಆಗಿಲ್ಲ.

    ಹಂತಕ ಧರ್ಮನ ಚಿತ್ರವಿರುವ ಬ್ಯಾನರ್ ಗೆ ಅವರ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ.ಕೆ ಗ್ರಾಮದ ಊರ ದೇವರ ಜಾತ್ರೆಯಲ್ಲಿ ಅಭಿಮಾನಿಗಳು ತಮ್ಮ ಅಭಿಮಾನ ತೋರಿದ್ದಾರೆ. ಗ್ರಾಮದ ದೇವರ ಜಾತ್ರೆ ಹಿನ್ನೆಲೆ ಸ್ವಾಗತ ಬ್ಯಾನರ್ ಹಾಕಿದ್ದ ಹಂತಕ ಧರ್ಮರಾಜ್ ಅಭಿಮಾನಿಗಳು, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.

    ಇದೇ ಲೋಣಿ ಬಿ.ಕೆ ಗ್ರಾಮದಲ್ಲಿ ಎದುರಾಳಿ ಗ್ಯಾಂಗ್‍ನ ಪುತ್ರಪ್ಪ ಸಾಹುಕಾರ್ ಬೈರಗೊಂಡ ಮೇಲೆ ಧರ್ಮರಾಜ್ ಫೈರಿಂಗ್ ಮಾಡಿದ್ದ. ಇದೇ ಗ್ರಾಮದ ಊರ ದೇವರ ಜಾತ್ರೆಯಲ್ಲಿ ಹಂತಕ ಧರ್ಮನ ಬ್ಯಾನರ್ ಗೆ ಹಾಲಿನ ಅಭಿಷೇಕ ಈಗ ನಡೆದಿದೆ. ಭೀಮಾತೀರದಲ್ಲಿ ನಡೆಯೋ ಬಹುತೇಕ ಜಾತ್ರೆಗಳಲ್ಲಿ ಧರ್ಮರಾಜ್‍ನ ಬ್ಯಾನರ್ ಗಳನ್ನು ಅಭಿಮಾನಿಗಳು ಹಾಕುತ್ತಾರೆ.