Tag: Dharma Vish

  • ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರ ಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಔಟ್ ಆಂಡ್ ಔಟ್ ಮನೋರಂಜನಾತ್ಮಕ ಸಿನಿಮಾ ಅನ್ನೋದು ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಭರಪೂರ ಹಾಸ್ಯವಿದ್ದರೂ ವಲ್ಗಾರಿಟಿಯ ಸೋಂಕಿಲ್ಲದ ಈ ಚಿತ್ರ ಹಾಸ್ಯ ಧಾಟಿಯಾಚೆಗೂ ಗಹನವಾದ ಕಥೆಯೊಂದಿಗೆ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ರೂಪಿಸಿದ್ದಾರೆ. ಇದುವರೆಗೂ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಅದಿತಿ ಪ್ರಭುದೇವ ಈ ಮೂಲಕ ಮೊದಲ ಬಾರಿ ಹಾಸ್ಯಾತ್ಮಕ ಸಿನಿಮಾದ ಭಾಗವಾಗಿದ್ದಾರೆ.

    ಅದಿತಿ ಪ್ರಭುದೇವ ಪಾಲಿಗೆ ಇದೊಂದು ಹೊಸ ಜಾನರಿನ ಸಿನಿಮಾ. ಆರಂಭದಲ್ಲಿ ಇದರ ಕಾಮಿಡಿ ಝಲಕ್ ಮತ್ತು ತಮ್ಮ ಪಾತ್ರದ ವಿಶೇಷತೆಗೆ ಮನಸೋತೇ ಅದಿತಿ ನಟಿಸಲು ಒಪ್ಪಿಕೊಂಡಿದ್ದರಂತೆ. ಪ್ರತಿ ಸಿನಿಮಾಗಳೂ ತನ್ನ ಪಾಲಿಗೆ ಹೊಸ ಕಲಿಕೆಗೆ ಕಾರಣವಾಗಬೇಕೆಂಬ ಹಂಬಲವಿಟ್ಟುಕೊಂಡಿರೋ ಅವರ ಪಾಲಿಗೆ ಬ್ರಹ್ಮಚಾರಿ ಚಿತ್ರದ ಮೂಲಕ ಹೊಸತನದ ಅನುಭವ ದಕ್ಕಿದೆಯಂತೆ. ಯಾವ ಪ್ರೇಕ್ಷಕರೇ ಆಗಿದ್ದರೂ ತಮ್ಮ ಖಾಸಗಿ ಬದುಕಿನ ಜಂಜಾಟಗಳಿಂದ ಮುಕ್ತವಾಗಿ ಎಲ್ಲವನ್ನೂ ಮರೆತು ಮೈ ಮರೆಯಲೋಸ್ಕರವೇ ಸಿನಿಮಾ ಮಂದಿರಗಳತ್ತ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಭರ್ಜರಿ ಮನರಂಜನೆ ನೀಡುವಲ್ಲಿ ಬ್ರಹ್ಮಚಾರಿ ಗೆಲುವು ಕಾಣುತ್ತಾನೆಂಬ ನಂಬಿಕೆ ಅದಿತಿಯದ್ದು.

    ಇದೇ ಸಂದರ್ಭದಲ್ಲಿ ಅವರು ಇಡೀ ಚಿತ್ರದಲ್ಲಿ ಎಲ್ಲಿಯೂ ಮುಜುಗರ ಪಟ್ಟುಕೊಳ್ಳುವಂಥಾ ಸನ್ನಿವೇಶಗಳಿಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ. ಒಟ್ಟಾರೆಯಾಗಿ ಈ ಸಿನಿಮಾ ದೊಡ್ಡ ಗೆಲುವು ದಾಖಲಿಸೋದರೊಂದಿಗೆ ತನ್ನ ಕೆರಿಯರ್‍ನಲ್ಲಿಯೂ ಭಿನ್ನ ಸಿನಿಮಾವಾಗಿ ನೆಲೆಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಯಾವ ವೆರೈಟಿಯ ಪಾತ್ರಗಳನ್ನಾದರೂ ತುಸು ಕಷ್ಟವಾದರೂ ಮಾಡಿ ಬಿಡಬಹುದು. ಆದರೆ ಏಕಾಏಕಿ ಕಾಮಿಡಿ ಟೈಮಿಂಗಿಗೆ ಒಗ್ಗಿಕೊಳ್ಳೋದು ಮಾತ್ರ ಅಕ್ಷರಶಃ ಹರಸಾಹಸ. ಕೊಂಚ ಕಷ್ಟವಾದರೂ ಅದಿತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರಂತೆ. ಇಲ್ಲಿ ಅವರ ಪಾತ್ರ ಕೂಡಾ ಸೊಗಸಾಗಿದೆಯಂತೆ. ಅಂದಹಾಗೆ, ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

  • ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಬೆಂಗಳೂರು: ಕನ್ನಡ ಚಿತ್ರರಂಗವನ್ನು ತನ್ನ ಅಗಾಧ ಪ್ರತಿಭೆಯ ಮೂಲಕವೇ ಆವರಿಸಿಕೊಂಡಿರುವ ಖ್ಯಾತ ಖಳನಟ ರವಿಶಂಕರ್. ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಮೂಲಕ ಖಳನಾಗಿ ಅಬ್ಬರಿಸಲಾರಂಭಿಸಿದ್ದ ರವಿಶಂಕರ್ ಆ ನಂತರ ತಿರುಗಿ ನೋಡಿದ್ದೇ ಇಲ್ಲ. ಈ ಹಾದಿಯಲ್ಲಿ ವೈವಿಧ್ಯಮಯ ಪಾತ್ರಗಳ ರೂವಾರಿಯಾಗಿ ಸಾಗಿ ಬಂದಿರೋ ಅವರು ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರೋ ಸಿಂಗ ಚಿತ್ರದಲ್ಲಿಯೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ಪಾತ್ರ ಈ ಚಿತ್ರದಲ್ಲಿ ಖಂಡಿತಾ ನೀವಂದುಕೊಂಡಂತೆ ಇರೋದಿಲ್ಲ!

    ರವಿಶಂಕರ್ ಅಂದರೆ ಎಂಥವರೂ ಅದುರಿ ಹೋಗುವಂಥಾ ಅಬ್ಬರದ ನಟನಾ ಶಕ್ತಿ ಹೊಂದಿರೋ ಕಲಾವಿದ. ಹೀಗಿರೋದರಿಂದಲೇ ಅವರ ಹೆಸರು ಕೇಳಿದರೇನೇ ವಿಲನ್ ಪಾತ್ರಗಳು ಕಣ್ಮುಂದೆ ತೇಲಿ ಹೋಗುತ್ತವೆ. ಇನ್ನು ಪಕ್ಕಾ ಮಾಸ್ ಶೈಲಿಯ ಸಿಂಗ ಚಿತ್ರದಲ್ಲಿ ರವಿಶಂಕರ್ ನಟಿಸಿದ್ದಾರೆಂದ ಮೇಲೆ ಹೀರೋ ಚಿರುಗೆ ಟಕ್ಕರ್ ಕೊಡೋ ಪಾತ್ರದಲ್ಲಿಯೇ ನಟಿಸಿದ್ದಾರೆ ಅಂತಲೇ ಅರ್ಥ. ಇದಕ್ಕೆ ಪೂರಕವಾದ ದೃಶ್ಯಾವಳಿಗಳೇ ಟ್ರೈಲರ್‍ನಲ್ಲಿಯೂ ಸರಿದು ಹೋಗಿವೆ.

    ಆದರೆ ಈ ಚಿತ್ರದಲ್ಲಿ ರವಿಶಂಕರ್ ಪಾತ್ರ ಅಷ್ಟು ಸಲೀಸಾಗಿ ಊಹಿಸುವಂಥಾದ್ದಲ್ಲ. ಬಹುಶಃ ಇದುವರೆಗೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿಂಗನ ಜೊತೆಗೆ ಅವರು ಪ್ರೇಕ್ಷಕರನ್ನು ತಲುಪಲಿದ್ದಾರೆ. ಕಥೆ ರೆಡಿ ಮಾಡುವ ಕ್ಷಣದಲ್ಲಿಯೇ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ಕೊಡಬೇಕೆಂಬ ಉದ್ದೇಶದಿಂದ ವಿಜಯ್ ಕಿರಣ್ ಈ ಪಾತ್ರವನ್ನು ಸೃಷ್ಟಿಸಿದ್ದರಂತೆ. ಇದು ಹೀಗೆಯೇ ಬರಬೇಕೆಂಬ ಕಲ್ಪನೆಯೊಂದು ನಿರ್ದೇಶಕರಲ್ಲಿತ್ತಲ್ಲಾ? ಅದನ್ನು ಮೀರಿಸುವಂತೆ ರವಿಶಂಕರ್ ಈ ಪಾತ್ರವನ್ನು ಮಿರುಗಿಸಿದ್ದಾರಂತೆ. ಅಷ್ಟಕ್ಕೂ ರವಿಶಂಕರ್ ಆ ಥರದ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಕುತೂಹಲ ನಿಮ್ಮಲ್ಲಿದ್ದರೆ, ಇದೇ ತಿಂಗಳ ಹತ್ತೊಂಬತ್ತರಂದು ಅದಕ್ಕೆ ನಿಖರ ಉತ್ತರ ಸಿಗಲಿದೆ.