Tag: dhanyashree

  • ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಐಪಿಎಲ್ 2020ರ ಡೆಬ್ಯು ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಿಂಚಿದ್ದಾರೆ. ಪಂದ್ಯದ ಬಳಿಕ ಪ್ರಶಸ್ತಿ ಪಡೆಯುತ್ತಿದ್ದಂತೆ ಚಹಲ್ ಭಾವಿ ಪತ್ನಿ ಧನಶ್ರೀ ಟಿವಿ ಎದುರೇ ಸಂತೋಷದಿಂದ ಕುಣಿದು ಡ್ಯಾನ್ಸ್ ಮಾಡಿದ್ದಾರೆ.

    ಸನ್‍ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲೂ ಮಿಂಚಿನ ಬೌಲಿಂಗ್ ದಾಳಿ ಮಾಡಿದ್ದ ಚಹಲ್ ಎರಡು ಎಸೆತಗಳಲ್ಲಿ ಎದುರಾಳಿ ತಂಡದ ಪ್ರಮುಖ 2 ವಿಕೆಟ್‍ಗಳನ್ನು ಉರುಳಿಸಿ ಪಂದ್ಯಕ್ಕೆ ತಿರುವು ನೀಡಿದ್ದರು. ಅವರ ಉತ್ತಮ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಇದನ್ನೂ ಓದಿ: ಸಿಎಸ್‍ಕೆಗೆ ಮೊದಲ ಸೋಲು – ಕ್ರೀಸ್‌‍ನಲ್ಲಿದ್ದೂ ಮೋಡಿ ಮಾಡದ ಧೋನಿ, ಡುʼಪ್ಲೆಸಿಸ್ ಅಬ್ಬರ ವ್ಯರ್ಥ 

    ಮನೆಯಲ್ಲಿಯೇ ಪಂದ್ಯವನ್ನು ಕುಳಿತು ವೀಕ್ಷಣೆ ಮಾಡುತ್ತಿದ್ದ ಚಹಲ್ ಭಾವಿ ಪತ್ನಿ ಧನಶ್ರೀ, ಟಿವಿ ಎದುರೇ ಸಂತೋಷದಿಂದ ಸಂಭ್ರಮಿಸಿದ್ರು. ಈ ಸಂದರ್ಭದ ವಿಡಿಯೋ, ಫೋಟೋಗಳನ್ನು ಧನಶ್ರೀ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಷಣ ನನಗೆ ಬಹಳ ವಿಶೇಷ ಕ್ಷಣವಾಗಿದ್ದು, ನಿಮಗೆ ಯಾವಾಗಲೂ ನನ್ನ ಬೆಂಬಲ, ಪ್ರೀತಿ ಲಭಿಸುತ್ತೆ. ದಿನದ ಕೊನೆಯಲ್ಲಿ ಇದು ಒಂದು ಪಂದ್ಯ, ಕೊನೆ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ಆದರೆ ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ಕಾರಣ ಮೊದಲ ಪಂದ್ಯ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಪ್ರೇಯಸಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಚಹಲ್, ಸೋ ಕ್ಯೂಟ್ ಲವ್. ಥ್ಯಾಂಕ್ಸ್ ಎಂದು ಹೇಳಿದ್ದಾರೆ.

     

    View this post on Instagram

     

    Hook step at it best ???? hidden talent @yuzi_chahal23 ❤️

    A post shared by Dhanashree Verma (@dhanashree9) on

    ಅಂದಹಾಗೇ ಚಹಲ್ ಹಾಗೂ ಧನುಶ್ರೀ ಅವರ ನಿಶ್ಚಿತಾರ್ಥ ಎರಡು ಕುಟುಂಬಗಳ ಸಮ್ಮುಖದಲ್ಲಿ ಆಗಸ್ಟ್ 8 ರಂದು ನಡೆದಿತ್ತು. ಈ ವಿಚಾರವನ್ನು ಸ್ವತಃ ಚಹಲ್ ತಮ್ಮ ಇನ್‍ಸ್ಟಾದಲ್ಲಿ ಘೋಷಿಸಿದ್ದರು. ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದಾರೆ. ಅಲ್ಲದೇ ಡಾಕ್ಟರ್, ಕೊರಿಯೋಗ್ರಾಫರ್, ಯೂಟ್ಯೂಬರ್ ಮತ್ತು ಧನಶ್ರೀ ವರ್ಮಾ ಕಂಪನಿಯ ಸ್ಥಾಪಕಿ ಎಂದು ಇನ್‍ಸ್ಟಾಗ್ರಾಂ ಧನಶ್ರೀ ಬರೆದುಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕ ಭಾವಿ ಪತಿ ಚಹಲ್ ಆಡಿದ ಮೊದಲ ಪಂದ್ಯವನ್ನು ಧನಶ್ರೀ ವಿಕ್ಷೀಸಿದ್ದರು. ಇದನ್ನೂ ಓದಿ: ತೀರ್ಪು ಬದಲಿಸಿದ ಅಂಪೈರ್ ಜೊತೆಗೆ ಧೋನಿ ವಾದ- ಸಾಕ್ಷಿ ಗರಂ

     

    View this post on Instagram

     

    08.08.20 ❤️ Love ????

    A post shared by Dhanashree Verma (@dhanashree9) on

    ಉಳಿದಂತೆ ನಾಳೆ ಆರ್‌ಸಿಬಿ ತಂಡ ಕಿಂಗ್ಸ್ ಇಲೆವೆನ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಮಯಾಂಕ್ ಸ್ಫೋಟಕ ಆಟದ ನಡುವೆಯೂ ಕಿಂಗ್ಸ್ ಇಲೆವೆನ್ ತಂಡ ಗೆಲುವಿನೊಂದಿಗೆ ಕಮ್‍ಬ್ಯಾಕ್ ಮಾಡಲು ಸಿದ್ಧವಾಗುತ್ತಿದೆ. ಇತ್ತ ಟೂರ್ನಿಯನ್ನು ಆರ್‌ಸಿಬಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.

  • ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಬಂಧನ

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಬಂಧನ

    ಚಿಕ್ಕಮಗಳೂರು: ಮೂಡಿಗೆರೆ ಧನ್ಯಶ್ರೀ ಪ್ರಕರಣದ ಪ್ರಮುಖ ಆರೋಪಿ ಸಂತೋಷ್‍ನನ್ನು ಚಿಕ್ಕಮಗಳೂರು ಪೊಲೀಸರು ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ.

    ಧನ್ಯಶ್ರೀ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದ ಸಂತೋಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಕಜೇಕಾರ್ ಗ್ರಾಮದವನೆಂದು ತಿಳಿದು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಊರನ್ನು ಬಿಟ್ಟು ತಲೆಮರೆಸಿಕೊಂಡಿದ್ದ ಸಂತೋಷ್ ನನ್ನು ಮೂಡಿಗೆರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ. ಧನ್ಯಶ್ರೀ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದ ಸಂತೋಷ್, ಅದನ್ನು ಸ್ಕ್ರೀನ್ ಶಾಟ್ ತೆಗೆದು ಹಿಂದೂಪರ ಸಂಘಟನೆಗಳ ಗ್ರೂಪ್ ಗೆ ಹಾಕಿದ್ದನು. ಅಲ್ಲದೇ ಕರೆ ಮಾಡಿ ಧನ್ಯಶ್ರೀ ಹಾಗೂ ತಾಯಿ ಸರಸ್ವತಿಗೆ ಧಮ್ಕಿ ಹಾಕಿದ್ದನು.

    ಏನಿದು ಪ್ರಕರಣ: ಕಳೆದ ಕೆಲ ದಿನಗಳ ಹಿಂದೆ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು. ಈ ಪ್ರಕರಣದಲ್ಲಿ ಯುವತಿ ಆತ್ಮಹತ್ಯಗೆ ಮಾಡಿಕೊಳ್ಳುವ ನೈತಿಕ ಪೊಲೀಸ್‍ಗಿರಿ ಕಾರಣ ಎಂದು ತಿಳಿದು ಬಂದಿತ್ತು.

    ಧನ್ಯಶ್ರೀ ಆತ್ಮಹತ್ಯೆ ನಂತರ ಪ್ರಕರಣದಲ್ಲಿ ಹಲವು ಬೆಳವಣಿಗೆಗಳು ಕಾಣಿಸಿಕೊಂಡಿದ್ದವು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಅವರು, ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿರೋ ಸಂಘಟನಾಕಾರರು ಹಾಗೂ ವ್ಯಕ್ತಿಗಳ ಬಗ್ಗೆ ಹಾವಿನ ಜೊತೆ ಸರಸವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಮೃತ ಧನ್ಯಶ್ರೀಗೆ ಸಂತೋಷ್ ಸೇರಿದಂತೆ ಐವರು ಸಂಘಟನೆ ಕಾರ್ಯಕರ್ತರು ಧಮ್ಕಿ ಹಾಕಿದ್ದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾವಿಗೂ ಮುನ್ನ 36 ಗಂಟೆ ಏನನ್ನೂ ತಿನ್ನದೆ ಖಾಲಿ ಹೊಟ್ಟೆ ಇದ್ದದ್ದು ಮರಣೋತ್ತರ ಪರೀಕ್ಷೆಯಿಂದ ಧೃಡಪಟ್ಟಿದೆ ಎಂದು ಹೇಳಿದ್ದರು. ಓದಿ: ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

    ಧನ್ಯಶ್ರೀ ಮನೆಗೆ ಐವರು ಸಂಘಟನಾಕಾರರು ಎರಡು ಬಾರಿ ಹೋಗಿ ಬಂದಿರೋ ದಾಖಲೆ ಇದೆ. ಅವರ ಮನೆಗೆ ಹೋಗಿ ಹೆತ್ತವರ ಎದುರೇ ಸೊಂಟದ ಕೆಳಗಿನ ಭಾಷೆಯಲ್ಲಿ ಬಾಯಿಗೆ ಬಂದಂತೆ ಬಯ್ದಿರೋದು ಗೊತ್ತಾಗಿದೆ. ಎರಡು, ಮೂರು, ನಾಲ್ಕನೇ ತಾರೀಖು ಬೋಲ್ಡ್ ಆಗಿದ್ದ ಧನ್ಯಶ್ರೀ ಐದನೇ ತಾರೀಖು, ಐವರು ಎರಡು ಬಾರಿ ಮನೆಗೆ ಬಂದುಹೋದ ಮೇಲೆ ಆಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೆ ದೊಡ್ಡ ವ್ಯಕ್ತಿಗಳೇ ಬರಲಿ, ಎಷ್ಟೆ ಒತ್ತಡ ಬಂದರು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

    https://www.youtube.com/watch?v=RFSQfZFZs4Y

    https://youtu.be/H8lL8K6TcM8

  • ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಧಮ್ಕಿ ಹಾಕಿದ್ದು ಬೆಳ್ತಂಗಡಿ ಬಜರಂಗದಳದವರು ಅಂತ ತಾಯಿ ಕಣ್ಣೀರು

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಧಮ್ಕಿ ಹಾಕಿದ್ದು ಬೆಳ್ತಂಗಡಿ ಬಜರಂಗದಳದವರು ಅಂತ ತಾಯಿ ಕಣ್ಣೀರು

    ಚಿಕ್ಕಮಗಳೂರು: ಜಿಲ್ಲೆಯ ಧನ್ಯಶ್ರೀ ಸಾವಿಗೆ ಕಾರಣ ನೈತಿಕ ಪೊಲೀಸ್‍ಗಿರಿ ಎಂಬುದು ಬಹಿರಂಗವಾಗಿದೆ. ಹಿಂದೂ ಪರ ಸಂಘಟನೆಗಳ ಹೆಸರಿನಲ್ಲಿ ಕರೆ ಬಂದಿದ್ದು ನಿಜ ಎಂದು ಧನ್ಯಶ್ರೀ ತಾಯಿ ಸರಸ್ವತಿ ಒಪ್ಪಿಕೊಂಡಿದ್ದಾರೆ.

    15 ನಿಮಿಷಗಳ ಆಡಿಯೋದಲ್ಲಿ ಮನಬಿಚ್ಚಿ ಮಾತನಾಡಿರುವ ಧನ್ಯಶ್ರೀ ತಾಯಿ ಸರಸ್ವತಿ, ಹಿಂದೂ ಪರ ಸಂಘಟನೆಗಳು ಬೆದರಿಕೆ ಹಾಕಿದ್ದು ನಿಜ. ಆದ್ರೆ ಧಮ್ಕಿ ಹಾಕಿದ್ದು ಮೂಡಿಗೆರೆ ಬಜರಂಗದಳದವರಲ್ಲ. ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿಯ ಬಜರಂಗದಳದವರು ಅಂತಾ ಹೇಳಿದ್ದಾರೆ. ಅಲ್ಲದೆ ನನ್ನ ಮಗಳು ಡೆತ್‍ನೋಟ್‍ನಲ್ಲಿ ಎಲ್ಲವನ್ನೂ ಬರೆದಿದ್ದಾಳೆ. ಬಜರಂಗದಳದ ಹೆಸರಿನಲ್ಲಿ ನನ್ನ ಗಂಡನಿಗೆ ಕರೆ ಮಾಡಿ ಧಮ್ಕಿ ಹಾಕಲಾಗಿತ್ತು ಅಂತ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

    ಆಡಿಯೋದಲ್ಲೇನಿದೆ?: ಬಜರಂಗದಳದವರು ಅಂತ ಹೇಳಿಕೊಂಡು ನನ್ನ ಮನೆಯವರ ಮೊಬೈಲ್ ಗೊಂದು ಕರೆ ಬಂತು. ಅದನ್ನು ನಾನು ಪಿಕ್ ಮಾಡಿ ಮಾತನಾಡಿದೆ. ನಿನ್ನೆಯಿಂದ ಕರೆ ಮಾಡುತ್ತಿರಲ್ವ ನೀವು ಯಾರು ಅಂದೆ. ಅದಕ್ಕೆ ಆತ ನಾನು ಬೆಳ್ತಂಗಡಿಯಿಂದ. ನೀವು ಧನ್ಯ ಶ್ರೀ ತಾಯಿಯಲ್ವ ಎಂದು ಕೇಳಿದ್ರು. ಆವಾಗ ಹೌದು ನಾನು ತಾಯಿನೇ ಏನಾಗ್ಬೇಕಿತ್ತು? ನೀವು ಯಾರು ಅಂದೆ. ಆದ್ರೆ ಆ ವ್ಯಕ್ತಿ ಹೆಸರು ಹೇಳಲಿಲ್ಲ. ಆದ್ರೆ ಆತ ನಾನು ಬಜರಂಗದಳದವನು. ನಿಮ್ಮ ಮಗಳನ್ನು ಏನು ಮುಸ್ಲಿಮ್ಸ್ ಗೆ ಸಹಾಯ ಮಾಡಕೆ ಬಿಡ್ತೀರಾ ಅಂತ ಕೇಳಿದ. ಅದಕ್ಕೆ ನಾನು ಯಾಕೆ. ನನ್ನ ಮಗಳು ಆ ಥರದವಳಲ್ಲ. ನನ್ನ ಮಗಳು ಏನು? ಹೇಗೆ? ಅಂತ ನನಗೆ ಚೆನ್ನಾಗಿ ತಿಳಿದಿದೆ ಅಂದೆ. ಆವಾಗ ಆತ ನೋಡಿ ದಯವಿಟ್ಟು ನಿಮ್ಮ ಕಾಲು ಹಿಡಿಯುತ್ತೀನಿ. ಮುಸ್ಲಿಮ್ಸ್ ಗೆ ಸಪೋರ್ಟ್ ಮಾಡ್ಬೇಡಿ ಅಂದ. ಇದನ್ನೂ ಓದಿ: ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅರೆಸ್ಟ್

    ಬಳಿಕ ಮಗಳು ಕಾಲೇಜಿನಿಂದ ಬಂದ ಬಳಿಕ ನಾನು ಆಕೆಯಲ್ಲಿ ನೀನು ವಾಟ್ಸಪ್ ನಲ್ಲಿ ಫೋಟೋ ಹಾಕಿದ್ದಿಯಾ ಅಂತ ಕೇಳಿದೆ. ಅದಕ್ಕವಳು ನಿನಗೆ ತೋರಿಸಿದೆ ಅಲ್ವ ಅಮ್ಮಾ ವಾಟ್ಸಪ್ ಡಿಪಿಗೆ ಕಣ್ಣಿನ ಫೋಟೋ ಹಾಕಿದ್ದೆ ಅಂದ್ಳು. ಇದಾದ ಬಳಿಕ ಮತ್ತೆ ಮತ್ತೆ ಅದೇ ನಂಬರಿನಿಂದ ಕರೆ ಬರುತ್ತಾ ಇತ್ತು. ಅಲ್ಲದೇ ಆತ ಹೆದರಿಸುತ್ತಾ ಇದ್ದನಂತೆ. ನಮ್ಮ ಮನೆಯವರಿಗೆ ಬೈದನಂತೆ. ಮುಸ್ಲಿಮ್ ಹುಡುಗರಿಗೆ ಯಾಕ್ ಮದುವೆ ಮಾಡಿಕೊಡ್ತೀರಿ. ನಿಮಗೆ ಹಿಂದೂ ಹುಡುಗರು ಸಿಕ್ಕಿಲ್ವ ಅಂತೆಲ್ಲಾ ಹೇಳಿದ್ದಾನಂತೆ. ಬಜರಂಗದಳದವರು ವಿಚಾರಿಸ್ತೀನಿ ಅಂತ ಹೇಳಿದ್ದಾರಂತೆ. ನಿನ್ನ ಮೆಸೇಜ್ ಎಲ್ಲಾ ಕಡೆ ಹರಡಿದೆ ಅಂತ ಹೇಳಿದವರು ನಮ್ಮ ಮನೆಗೆ ಬಂದು ಸರಿಮಾಡಬಹುದಿತ್ತು. ಈ ಘಟನೆ ನಡೆದ ಮಾರನೇ ದಿನವೇ ಮಗಳ ಜೀವವೇ ಹೋಯ್ತಲ್ಲ ಅಂತ ತಾಯಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರಥಮ ಬಿಕಾಂ ಪದವಿ ಓದುತ್ತಿದ್ದ 20 ವರ್ಷದ ಧನ್ಯ ಶ್ರೀ ನೇಣು ಬಿಗುದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

    https://www.youtube.com/watch?v=bPDNxnjLe6E

    https://www.youtube.com/watch?v=bFv6ywT51-Y